ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ.”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ,ಅಂದರೆ ರುದ್ರನ ಕಣ್ಣು.”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷವೆಂಬುದು ಒಂದು ಮರ.ಆ ಮರದ ಬೀಜವೇ ರುದ್ರಾಕ್ಷಿ.ಶಿವ ಪುರಾಣ,ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.ಅನೇಕ ವರ್ಷಗಳ ಸತತ ಧ್ಯಾನದ ನಂತರ ಸದಾಶಿವ ತನ್ನ ಕಣ್ಣುಗಳನ್ನು ತೆರೆದ.ಆಗ ಕಣ್ಣುಗಳಿಂದ ಅಶ್ರು ಸುರಿಯಿತು.ಆ ಕಣ್ಣಿರಿನಿಂದಲೇ ಜನ್ಯವಾದದ್ದು ರುದ್ರಾಕ್ಷವೃಕ್ಷ ಎಂಬ ಪೌರಾಣಿಕ ಕಥೆಯಿದೆ.
ರುದ್ರಾಕ್ಷಿಯನ್ನು ಧರಿಸುವುದರಿಂದ ತನು-ಮನಗಳಲ್ಲಿ ಪವಿತ್ರತೆಯ ಸಂಚಾರವಾಗುತ್ತದೆ.ಪಾಪಗಳ ಸಮೂಹವನ್ನೇ ರುದ್ರಾಕ್ಷಿ ನಾಶಪಡಿಸುತ್ತದೆ.ಬಿಳಿ,ಕೆಂಪು,ಹಳದಿ ಹಾಗೂ ಕಪ್ಪುಬಣ್ಣಗಳಲ್ಲಿ ರುದ್ರಾಕ್ಷಿ ಸಿಗುತ್ತದೆ.ಋಷಿಗಳ ನಿರ್ದೇಶನದಂತೇ ಮನುಷ್ಯರು ತಮ್ಮ ದೇಹದ ಬಣ್ಣಗಳ ಪ್ರಕಾರ ರುದ್ರಾಕ್ಷಿಯನ್ನು ಧರಿಸಬೇಕು.ಸುಖ ಹಾಗೂ ಮೋಕ್ಷವನ್ನು ಬಯಸುವ ಜನರು ರುದ್ರಾಕ್ಷದ ಮಾಲೆಯನ್ನು ಧರಿಸಬೇಕು.ವಿಶೇಷವಾಗಿ ಶೈವ ಮತಾವಲಂಬಿಗಳು ತಪ್ಪದೇ ರುದ್ರಾಕ್ಷಮಾಲೆಯನ್ನು ಧರಿಸಬೇಲೇಬೇಕೆಂಬ ನಿಯಮವಿದೆ.
ಹಲವು ಮುಖ ಹಾಗೂ ಆಕಾರಗಳಲ್ಲಿ ರುದ್ರಾಕ್ಷಿ ಲಭ್ಯವಿದೆ.ಏಕಮುಖಿ ರುದ್ರಾಕ್ಷಿಯಲ್ಲಿ ಬಹಳ ಶಕ್ತಿಯಿರುತ್ತದೆಂದು ಹೇಳಲಾಗುತ್ತದೆ.ರುದ್ರಾಕ್ಷಿ ಚಿಕ್ಕದಿದ್ದಂತೆ ಅದರ ಶಕ್ತಿ ಉತ್ತರೋತ್ತರವಾಗಿ ವೃದ್ಧಿಯಾಗುತ್ತಿರುತ್ತದೆ.ದೊಡ್ಡ ರುದ್ರಾಕ್ಷಿಗಿಂತ ಚಿಕ್ಕ ರುದ್ರಾಕ್ಷಿಗೆ ಅಧಿಕಶಕ್ತಿಯಿರುತ್ತದೆ.ಆದರೂ ಎಲ್ಲ ರುದ್ರಾಕ್ಷಿಗಳಲ್ಲೂ ಶಿವಶಕ್ತಿ ಜಾಗೃತವಾಗಿರುತ್ತದೆ,ಸರ್ವಪಾಪಗಳನ್ನು ವಿನಾಶಮಾಡುವ ವಿಶೇಷ ಶಕ್ತಿಯಿರುತ್ತದೆ.ಸುಂದರವಾಗಿರುವ,ಅಖಂಡವಾಗಿರುವ ರುದ್ರಾಕ್ಷಿಯನ್ನು ಧರಿಸಬೇಕು.ತುಂಡಾಗಿರುವ,ಕೀಟದಿಂದ ಕಡಿಯಲ್ಪಟ್ಟಿರುವ,ಗಾಯಗಳಿಂದ ಕೂಡಿರುವ ರುದ್ರಾಕ್ಷಿಯನ್ನು ಧರಿಸಬಾರದು.
ರುದ್ರಾಕ್ಷಿ ಮಾಲೆಯನ್ನು ಧರಿಸುವುದರ ಹಿಂದೆ ಇವೆ ಹಲವು ವೈಜ್ಞಾನಿಕ ಕಾರಣಗಳು :-
ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ಕತ್ತಿನ ಭಾಗದಲ್ಲಿರುವ ನರಗಳು ದೃಢವಾಗಿರುತ್ತವೆ,ಇದು ಗಳಗಂಡ,ಕತ್ತುನೋವು ಮುಂತಾದ ರೋಗಗಳನ್ನು ತಡೆಯುತ್ತದೆ.ರುದ್ರಾಕ್ಷಿಗೆ ವಿಶೇಷವಾದ ಔಷಧೀಯ ಗುಣಗಳಿವೆ.ಸ್ನಾನವನ್ನು ಮಾಡುವಾಗ ರುದ್ರಾಕ್ಷಿಮಾಲೆಯ ನೀರು ಶರೀರದ ಮೇಲೆ ಬೀಳುವುದರಿಂದ ಅನೇಕ ಚರ್ಮರೋಗಗಳ ನಿಯಂತ್ರಣವಾಗುತ್ತದೆ. ಪ್ರಕೃತಿಯು ಮನುಷ್ಯನಿಗೆ ಕೊಟ್ಟ ಶ್ರೇಷ್ಟ ಉಡುಗೊರೆ ರುದ್ರಾಕ್ಷ. ಇಲ್ಲಿ ಓದಿ:-ಈ 5 ವಸ್ತುಗಳಿಂದ ಶಿವ ಲಿಂಗವನ್ನು ಪೂಜಿಸುವಂತಿಲ್ಲ!!!
ನಮ್ಮ ಅನೇಕ ಧರ್ಮಗ್ರಂಥಗಳಲ್ಲಿ ರುದ್ರಾಕ್ಷದ ಶ್ರೇಷ್ಟತೆಯನ್ನು ಪ್ರಶಂಸಿಸಲಾಗಿದೆ.ರುದ್ರಾಕ್ಷಿಮಾಲೆಯನ್ನು ಹಾಕಿಕೊಂಡು ದೇವಪೂಜೆ ಮಾಡಿದರೆ ಹರಿದ್ವಾರ,ಕಾಶೀ,ಗಂಗೆ ಮುಂತಾದ ಪುಣ್ಯತೀರ್ಥಗಳಲ್ಲಿ ಪೂಜೆ ಮಾಡಿದ ಫಲ ಸಿಗುತ್ತದೆ.ರುದ್ರಾಕ್ಷಿ ಮಾಲೆಯನ್ನು ಧರಿಸಿ ಮಂತ್ರೋಚ್ಚಾರಣೆ,ಜಪ ಮಾಡಿದರೆ ಫಲಪ್ರಾಪ್ತಿ ದ್ವಿಗುಣವಾಗುತ್ತದೆ.ರುದ್ರಾಕ್ಷಿಮಾಲೆಯನ್ನು ಧರಿಸಿದವರ ಶರೀರದಲ್ಲಿ ಸಕಾರಾತ್ಮಕ ಶಕ್ತಿ ಜಾಗೃತವಾಗುತ್ತದೆ.ಮನಸ್ಸಿನ ನಿಯಂತ್ರಣ ರುದ್ರಾಕ್ಷಿಮಾಲೆಯಿಂದ ಸಾಧ್ಯ.ರುದ್ರಾಕ್ಷಿಮಾಲೆಯಲ್ಲಿ ನೂರಾಎಂಟು ಅಥವಾ ಐವತ್ತನಾಲ್ಕು ರುದ್ರಾಕ್ಷಿಗಳಿದ್ದರೆ ಪರಿಣಾಮಕಾರಿ.
ರುದ್ರಾಕ್ಷಿಮಾಲೆಯನ್ನು ಧರಿಸಿ ಭಗವಾನ್ ಶಿವನ ಪೂಜೆ,ಜಪಗಳನ್ನಾಚರಿಸಿದರೆ ಶುಭವಾಗುತ್ತದೆ.ಬೇರೆ ಬೇರೆ ಮುಖಗಳಿರುವ ರುದ್ರಾಕ್ಷಿಮಾಲೆಯನ್ನು ಧರಿಸುವುದರಿಂದ ವಿಭಿನ್ನ ಇಚ್ಚೆಗಳು ನೆರವೇರುತ್ತವೆ.ರುದ್ರಾಕ್ಷಿಯನ್ನು ಧರಿಸಿದವರಿಗೆ ಶಿವಲೋಕ ಸಿಗುತ್ತದೆಂದು ಪದ್ಮಪುರಾಣ,ಶಿವಪುರಾಣಗಳಲ್ಲಿ ತಿಳಿಸಲಾಗಿದೆ.
ರುದ್ರಾಕ್ಷವನ್ನು ಧರಿಸುವ ಬಗೆ :-
ಭದ್ರಾಕ್ಷವೆಂಬುದು ರುದ್ರಾಕ್ಷದ ಇನ್ನೊಂದು ಜಾತಿ..ರುದ್ರಾಕ್ಷದ ಮಧ್ಯದಲ್ಲಿ ಭದ್ರಾಕ್ಷವನ್ನು ಧರಿಸಿದರೆ ಒಳಿತಾಗುತ್ತದೆ. ರುದ್ರಾಕ್ಷವನ್ನು ಧರಿಸುವ ಮುನ್ನ ಅದು ಅಸಲಿಯೋ,ನಕಲಿಯೋ ಎಂದು ಪರೀಕ್ಷಿಸಬೇಕು.ನೇಪಾಳ ಭಾಗದಲ್ಲಿ ಸಿಗುವ ರುದ್ರಾಕ್ಷ ಸಾಮಾನ್ಯವಾಗಿ ಅಸಲಿಯಾಗಿರುತ್ತದೆ.ಅಲ್ಲಿನ ಪಶುಪತಿನಾಥ ದೇವಾಲಯದಲ್ಲಿ ಹಲವು ವಿಧದ ಅಸಲಿ ರುದ್ರಾಕ್ಷಿ ಮಾಲೆಗಳು ಸಿಗುತ್ತವೆ.ತುಂಡಾಗಿರುವ,ಕೀಟಗಳು ತಿಂದಿರುವ ರುದ್ರಾಕ್ಷವನ್ನು ಧರಿಸಬಾರದು.ಜಪಾದಿ ಕರ್ಮಗಳಲ್ಲಿ ಚಿಕ್ಕರುದ್ರಾಕ್ಷಿಯಿರುವ ಮಾಲೆಗಳನ್ನು ಬಳಸಬೇಕು.
ಈ ನಂಬರಿನ ರುದ್ರಾಕ್ಷಿಗಳಿರುವ ಮಾಲೆಯನ್ನು ಧರಿಸಿದರೆ ಸಿಗುವ ಫಲಗಳು :-
26 ರುದ್ರಾಕ್ಶಿಗಳಿರುವ ಮಾಲೆ ಶಿರದಲ್ಲಿ,
50 ರುದ್ರಾಕ್ಷಿಗಳಿರುವ ಮಾಲೆ ಎದೆಯಲ್ಲಿ,
16 ರುದ್ರಾಕ್ಷಿಗಳಿರುವ ಮಾಲೆ ಭುಜದಲ್ಲಿ,
12 ರುದ್ರಾಕ್ಷಿಗಳಿರುವ ಮಾಲೆಯನ್ನು ಮಣಿಕಟ್ಟಿನಲ್ಲಿ ಧರಿಸಬೇಕೆಂದು ಪುರಾಣಗಳು ತಿಳಿಸುತ್ತವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೂತನ ಸಿಎಂ ಯಡಿಯೂರಪ್ಪ ಮೊದಲ ಪತ್ರಿಕಾಗೋಷ್ಠಿ| ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಹೆಚ್ಚಳ| ಕೇಂದ್ರದ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದ 4 ಸಾವಿರ ರೂ. ಸೇರ್ಪಡೆ| ರೈತ ಸಮುದಾಯಕ್ಕೆ ವಾರ್ಷಿಕ 10 ಸಾವಿರ ರೂ. ಸಹಾಯಧನ| ನೇಕಾರರ 100 ಕೋಟಿ ರೂ. ಸಾಲಮನ್ನಾ ಘೋಷಿಸಿದ ಸಿಎಂ ಯಡಿಯೂರಪ್ಪ| 2019ರ ಮಾರ್ಚ್ 30ಕ್ಕೆ ಅನ್ವಯವಾಗುವಂತೆ ನೇಕಾರರ 100 ಕೋಟಿ ರೂ. ಸಾಲಮನ್ನಾ| ಬೆಂಗಳೂರು(ಜು.26): ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಬಿಎಸ್ ಯಡಿಯೂರಪ್ಪ ರಾಜ್ಯದ ರೈತ…
ನಮ್ಮ ದೇಶದಲ್ಲಿ ಮಕ್ಕಳು 21 ವರ್ಷದವರಾದರೆ ಅವರು ಇನ್ನು ಬಹುತೇಕ ಕಾಲೇಜಿನಲ್ಲಿರುತ್ತಾರೆ. ಪ್ರಮುಖವಾಗಿ ತಮ್ಮ ಓದನ್ನು ಮುಗಿಸಿಕೊಳ್ಳುವ ಒತ್ತಡವಿರುತ್ತದೆ. ಪ್ರವಾಸವೊಂದು ಐಷಾರಾಮಿ ಬದುಕಾಗಿರುತ್ತದಷ್ಟೇ. ಆದರೆ ಅಮೆರಿಕದ ಲೆಕ್ಸಿ ಅಲ್ಫೋರ್ಡ್ ಎನ್ನುವ ಯುವತಿ 21 ವರ್ಷ ದಾಟುವಷ್ಟರಲ್ಲಿ 196 ದೇಶಗಳಲ್ಲಿ ಹೋಗಿ ಜಗತ್ತಿನ ಎಲ್ಲ ದೇಶಗಳಲ್ಲಿ ಪ್ರಯಾಣಿಸಿದ, ಅತ್ಯಂತ ಕಿರಿಯ ವ್ಯಕ್ತಿ ಎಂದು ಗಿನ್ನಿಸ್ ಬುಕ್ ಆಫ್ ರೇಕಾರ್ಡ್ಸ್ನಲ್ಲಿ ಸೇರಿದ್ದಾರೆ. ಮೇ 31ರಂದು ಉತ್ತರ ಕೊರಿಯಾ ಪ್ರವೇಶಿಸಿದ ನಂತರ ಅವರು ಈ ದಾಖಲೆಗೆ ಭಾಜನರಾಗಿದ್ದಾರೆ. ಈ ಹಿಂದೆ ಈ…
ತೆಲಂಗಾಣ: ಅದೃಷ್ಟ ಯಾವತ್ತೂ ಬೇಕಾದರೂ ಖುಲಾಯಿಸಬಹುದು ಎಂಬ ಮಾತಿದೆ. ಉದ್ಯೋಗ ಹುಡುಕಿಕೊಂಡು ಹೈದರಾಬಾದ್ನ ವ್ಯಕ್ತಿಯೊಬ್ಬ ದುಬೈ ವಿಮಾನ ಹತ್ತಿದ್ದರು. ಆದರೆ ಉದ್ಯೋಗ “ಅದೃಷ್ಟವಶಾತ್’ ಕೈ ಕೊಟ್ಟಿತ್ತು. ಹಾಗಂತ ಅವನು ಬರೀ ಕೈಯಲ್ಲಿ ಬಂದಿಲ್ಲ. ಬರುವಾಗ ಅದೂ ಹೆಂಡತಿ ಕೈಯಿಂದ ಸಾಲ ಪಡೆದು, ಅದೃಷ್ಟ ಚೀಟಿ “ರಾಫೆಲ್’ ಅನ್ನು ಖರೀದಿಸಿದ್ದರು. ಆದರೆ ಅವರ ಅದೃಷ್ಟ ‘ರಾಫೆಲ್ ಚೀಟಿಯಲ್ಲೇ ಭದ್ರವಾಗಿತ್ತು. ಹೌದು ತೆಲಂಗಾಣದ ನಿಜಾಮಬಾದ್ನ ಜಾಕ್ರನ್ಪಳ್ಳಿಗ್ರಾಮಕ್ಕೆ ಸೇರಿದ ವಿಲಾಸ್ ರಿಕ್ಕಳ ಎಂಬವರು ಈ ಅದೃಷ್ಟದ ನಾಯಕ. ಮೂಲತಃ ಕೃಷಿ ಕುಟುಂಬ. ಕೆಲವು…
ವಾಹನ ಕಲಿಕಾ ಪರವಾನಗಿ (ಎಲ್ಎಲ್ಆರ್) ಹೊಂದಿದ್ದು, ಅಂತಹ ಸಂದರ್ಭದಲ್ಲಿ ಅಪಘಾತವಾದರೆ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹತ್ತು ವರ್ಷಗಳ ಹಿಂದಿನ ಪ್ರಕರಣವೊಂದರ ತೀರ್ಪು ಈಗ ಹೊರಬಿದ್ದಿದ್ದು, ಎಲ್ಎಲ್ಆರ್ ಇದ್ದ ವೇಳೆ ಅಂತವರು ವಾಹನ ಚಾಲನೆ ಮಾಡುವಾಗ ಡಿಎಲ್ ಹೊಂದಿದ ಪರಿಣಿತರು ಇರಬೇಕೆಂಬ ನಿಯಮವಿದೆ. ಆದರೆ ಇದು ದ್ವಿಚಕ್ರವಾಹನಕ್ಕೋ ಅಥವಾ ನಾಲ್ಕು ಚಕ್ರ ವಾಹನಕ್ಕೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ನಿಯಮ ನಾಲ್ಕು ಚಕ್ರ ವಾಹನಗಳಿಗೆ…
ಮಂಡ್ಯ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಹಂತಕ್ಕೆ ಬಂದಿದ್ದು, ಕೊನೆ ಕ್ಷಣದಲ್ಲಿ ಮಾತಿನ ಸಮರ ಜೋರಾಗಿದೆ. ಇಷ್ಟು ದಿನ ಜೋಡೆತ್ತುಗಳೆಂದು ದರ್ಶನ್ ಮೇಲೆ ಮುಗಿಬಿದ್ದಿದ್ದ ಸಿಎಂ ಕುಮಾರಸ್ವಾಮಿ, ಡಿ ಬಾಸ್ ಅಂತೆ ಎಂದೆಲ್ಲಾ ಟೀಕಿಸಿದ್ದರು. ಇಂದು ನಟ ಯಶ್ ವಿರುದ್ಧ ಕೆಂಡಕಾರಿದ್ದಾರೆ. ನಾನು ಕಲಾವಿದರೆಂದು ಗೌರವ ಕೊಟ್ಟಿದ್ದೆ. ಅವನ್ಯಾವನೋ ನನ್ನ ಪಕ್ಷವನ್ನೇ ಟೀಕಿಸುತ್ತಾನೆ ಎಂದಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಸಿಎಂ, ನನ್ನ ಪಕ್ಷವನ್ನು ಕಳ್ಳರ ಪಕ್ಷ ಅಂತಾನೆ. ಹಳ್ಳಿ ಕಡೆ ಬಂದು ನಮ್ಮ…
ಭಾನುವಾರ ರಜೆ ದಿನ. ಪ್ರತಿನಿತ್ಯ ಕೆಲಸ, ಶಾಲೆ ಎಂದು ಬ್ಯುಸಿಯಾಗಿರೋ ಕುಟುಂಬಸ್ಥರು ಮನೆಯಲ್ಲಿ ರೆಸ್ಟ್ ಮಾಡುತ್ತಾ ಇರುತ್ತಾರೆ. ಮಕ್ಕಳು ಸಹ ಇಂದು ಮನೆಯಲ್ಲಿಯೇ ಇರುತ್ತಾರೆ. ಎಲ್ಲರೂ ಒಟ್ಟಿಗೆ ಕುಳಿತು ರುಚಿ ರುಚಿಯಾದ ಮಸಲಾ ಚಾಟ್ಸ್ ತಿನ್ನೋ ಬಯಕೆ ಎಲ್ಲರಲ್ಲಿ ಮನೆ ಮಾಡಿರುತ್ತದೆ. ಹೊರಗಡೆ ತಂದ ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಮನೆಯಲ್ಲಿ ಏನು ಮಾಡಬೇಕೆಂದು ಚಿಂತೆಯಲ್ಲಿದ್ದೀರಾ. ಒಮ್ಮೆ ಸ್ಪೈಸಿ ಸೋಯಾ ಮಂಚೂರಿ ಮಾಡಿ ತಿನ್ನಿ. ಸ್ಪೈಸಿ ಸೋಯಾ ಮಂಚೂರಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವಸಾಮಾಗ್ರಿಗಳು* ಸೋಯಾ –…