ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ.”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ,ಅಂದರೆ ರುದ್ರನ ಕಣ್ಣು.”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷವೆಂಬುದು ಒಂದು ಮರ.ಆ ಮರದ ಬೀಜವೇ ರುದ್ರಾಕ್ಷಿ.ಶಿವ ಪುರಾಣ,ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.ಅನೇಕ ವರ್ಷಗಳ ಸತತ ಧ್ಯಾನದ ನಂತರ ಸದಾಶಿವ ತನ್ನ ಕಣ್ಣುಗಳನ್ನು ತೆರೆದ.ಆಗ ಕಣ್ಣುಗಳಿಂದ ಅಶ್ರು ಸುರಿಯಿತು.ಆ ಕಣ್ಣಿರಿನಿಂದಲೇ ಜನ್ಯವಾದದ್ದು ರುದ್ರಾಕ್ಷವೃಕ್ಷ ಎಂಬ ಪೌರಾಣಿಕ ಕಥೆಯಿದೆ.
ರುದ್ರಾಕ್ಷಿಯನ್ನು ಧರಿಸುವುದರಿಂದ ತನು-ಮನಗಳಲ್ಲಿ ಪವಿತ್ರತೆಯ ಸಂಚಾರವಾಗುತ್ತದೆ.ಪಾಪಗಳ ಸಮೂಹವನ್ನೇ ರುದ್ರಾಕ್ಷಿ ನಾಶಪಡಿಸುತ್ತದೆ.ಬಿಳಿ,ಕೆಂಪು,ಹಳದಿ ಹಾಗೂ ಕಪ್ಪುಬಣ್ಣಗಳಲ್ಲಿ ರುದ್ರಾಕ್ಷಿ ಸಿಗುತ್ತದೆ.ಋಷಿಗಳ ನಿರ್ದೇಶನದಂತೇ ಮನುಷ್ಯರು ತಮ್ಮ ದೇಹದ ಬಣ್ಣಗಳ ಪ್ರಕಾರ ರುದ್ರಾಕ್ಷಿಯನ್ನು ಧರಿಸಬೇಕು.ಸುಖ ಹಾಗೂ ಮೋಕ್ಷವನ್ನು ಬಯಸುವ ಜನರು ರುದ್ರಾಕ್ಷದ ಮಾಲೆಯನ್ನು ಧರಿಸಬೇಕು.ವಿಶೇಷವಾಗಿ ಶೈವ ಮತಾವಲಂಬಿಗಳು ತಪ್ಪದೇ ರುದ್ರಾಕ್ಷಮಾಲೆಯನ್ನು ಧರಿಸಬೇಲೇಬೇಕೆಂಬ ನಿಯಮವಿದೆ.
ಹಲವು ಮುಖ ಹಾಗೂ ಆಕಾರಗಳಲ್ಲಿ ರುದ್ರಾಕ್ಷಿ ಲಭ್ಯವಿದೆ.ಏಕಮುಖಿ ರುದ್ರಾಕ್ಷಿಯಲ್ಲಿ ಬಹಳ ಶಕ್ತಿಯಿರುತ್ತದೆಂದು ಹೇಳಲಾಗುತ್ತದೆ.ರುದ್ರಾಕ್ಷಿ ಚಿಕ್ಕದಿದ್ದಂತೆ ಅದರ ಶಕ್ತಿ ಉತ್ತರೋತ್ತರವಾಗಿ ವೃದ್ಧಿಯಾಗುತ್ತಿರುತ್ತದೆ.ದೊಡ್ಡ ರುದ್ರಾಕ್ಷಿಗಿಂತ ಚಿಕ್ಕ ರುದ್ರಾಕ್ಷಿಗೆ ಅಧಿಕಶಕ್ತಿಯಿರುತ್ತದೆ.ಆದರೂ ಎಲ್ಲ ರುದ್ರಾಕ್ಷಿಗಳಲ್ಲೂ ಶಿವಶಕ್ತಿ ಜಾಗೃತವಾಗಿರುತ್ತದೆ,ಸರ್ವಪಾಪಗಳನ್ನು ವಿನಾಶಮಾಡುವ ವಿಶೇಷ ಶಕ್ತಿಯಿರುತ್ತದೆ.ಸುಂದರವಾಗಿರುವ,ಅಖಂಡವಾಗಿರುವ ರುದ್ರಾಕ್ಷಿಯನ್ನು ಧರಿಸಬೇಕು.ತುಂಡಾಗಿರುವ,ಕೀಟದಿಂದ ಕಡಿಯಲ್ಪಟ್ಟಿರುವ,ಗಾಯಗಳಿಂದ ಕೂಡಿರುವ ರುದ್ರಾಕ್ಷಿಯನ್ನು ಧರಿಸಬಾರದು.
ರುದ್ರಾಕ್ಷಿ ಮಾಲೆಯನ್ನು ಧರಿಸುವುದರ ಹಿಂದೆ ಇವೆ ಹಲವು ವೈಜ್ಞಾನಿಕ ಕಾರಣಗಳು :-
ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ಕತ್ತಿನ ಭಾಗದಲ್ಲಿರುವ ನರಗಳು ದೃಢವಾಗಿರುತ್ತವೆ,ಇದು ಗಳಗಂಡ,ಕತ್ತುನೋವು ಮುಂತಾದ ರೋಗಗಳನ್ನು ತಡೆಯುತ್ತದೆ.ರುದ್ರಾಕ್ಷಿಗೆ ವಿಶೇಷವಾದ ಔಷಧೀಯ ಗುಣಗಳಿವೆ.ಸ್ನಾನವನ್ನು ಮಾಡುವಾಗ ರುದ್ರಾಕ್ಷಿಮಾಲೆಯ ನೀರು ಶರೀರದ ಮೇಲೆ ಬೀಳುವುದರಿಂದ ಅನೇಕ ಚರ್ಮರೋಗಗಳ ನಿಯಂತ್ರಣವಾಗುತ್ತದೆ. ಪ್ರಕೃತಿಯು ಮನುಷ್ಯನಿಗೆ ಕೊಟ್ಟ ಶ್ರೇಷ್ಟ ಉಡುಗೊರೆ ರುದ್ರಾಕ್ಷ. ಇಲ್ಲಿ ಓದಿ:-ಈ 5 ವಸ್ತುಗಳಿಂದ ಶಿವ ಲಿಂಗವನ್ನು ಪೂಜಿಸುವಂತಿಲ್ಲ!!!
ನಮ್ಮ ಅನೇಕ ಧರ್ಮಗ್ರಂಥಗಳಲ್ಲಿ ರುದ್ರಾಕ್ಷದ ಶ್ರೇಷ್ಟತೆಯನ್ನು ಪ್ರಶಂಸಿಸಲಾಗಿದೆ.ರುದ್ರಾಕ್ಷಿಮಾಲೆಯನ್ನು ಹಾಕಿಕೊಂಡು ದೇವಪೂಜೆ ಮಾಡಿದರೆ ಹರಿದ್ವಾರ,ಕಾಶೀ,ಗಂಗೆ ಮುಂತಾದ ಪುಣ್ಯತೀರ್ಥಗಳಲ್ಲಿ ಪೂಜೆ ಮಾಡಿದ ಫಲ ಸಿಗುತ್ತದೆ.ರುದ್ರಾಕ್ಷಿ ಮಾಲೆಯನ್ನು ಧರಿಸಿ ಮಂತ್ರೋಚ್ಚಾರಣೆ,ಜಪ ಮಾಡಿದರೆ ಫಲಪ್ರಾಪ್ತಿ ದ್ವಿಗುಣವಾಗುತ್ತದೆ.ರುದ್ರಾಕ್ಷಿಮಾಲೆಯನ್ನು ಧರಿಸಿದವರ ಶರೀರದಲ್ಲಿ ಸಕಾರಾತ್ಮಕ ಶಕ್ತಿ ಜಾಗೃತವಾಗುತ್ತದೆ.ಮನಸ್ಸಿನ ನಿಯಂತ್ರಣ ರುದ್ರಾಕ್ಷಿಮಾಲೆಯಿಂದ ಸಾಧ್ಯ.ರುದ್ರಾಕ್ಷಿಮಾಲೆಯಲ್ಲಿ ನೂರಾಎಂಟು ಅಥವಾ ಐವತ್ತನಾಲ್ಕು ರುದ್ರಾಕ್ಷಿಗಳಿದ್ದರೆ ಪರಿಣಾಮಕಾರಿ.
ರುದ್ರಾಕ್ಷಿಮಾಲೆಯನ್ನು ಧರಿಸಿ ಭಗವಾನ್ ಶಿವನ ಪೂಜೆ,ಜಪಗಳನ್ನಾಚರಿಸಿದರೆ ಶುಭವಾಗುತ್ತದೆ.ಬೇರೆ ಬೇರೆ ಮುಖಗಳಿರುವ ರುದ್ರಾಕ್ಷಿಮಾಲೆಯನ್ನು ಧರಿಸುವುದರಿಂದ ವಿಭಿನ್ನ ಇಚ್ಚೆಗಳು ನೆರವೇರುತ್ತವೆ.ರುದ್ರಾಕ್ಷಿಯನ್ನು ಧರಿಸಿದವರಿಗೆ ಶಿವಲೋಕ ಸಿಗುತ್ತದೆಂದು ಪದ್ಮಪುರಾಣ,ಶಿವಪುರಾಣಗಳಲ್ಲಿ ತಿಳಿಸಲಾಗಿದೆ.
ರುದ್ರಾಕ್ಷವನ್ನು ಧರಿಸುವ ಬಗೆ :-
ಭದ್ರಾಕ್ಷವೆಂಬುದು ರುದ್ರಾಕ್ಷದ ಇನ್ನೊಂದು ಜಾತಿ..ರುದ್ರಾಕ್ಷದ ಮಧ್ಯದಲ್ಲಿ ಭದ್ರಾಕ್ಷವನ್ನು ಧರಿಸಿದರೆ ಒಳಿತಾಗುತ್ತದೆ. ರುದ್ರಾಕ್ಷವನ್ನು ಧರಿಸುವ ಮುನ್ನ ಅದು ಅಸಲಿಯೋ,ನಕಲಿಯೋ ಎಂದು ಪರೀಕ್ಷಿಸಬೇಕು.ನೇಪಾಳ ಭಾಗದಲ್ಲಿ ಸಿಗುವ ರುದ್ರಾಕ್ಷ ಸಾಮಾನ್ಯವಾಗಿ ಅಸಲಿಯಾಗಿರುತ್ತದೆ.ಅಲ್ಲಿನ ಪಶುಪತಿನಾಥ ದೇವಾಲಯದಲ್ಲಿ ಹಲವು ವಿಧದ ಅಸಲಿ ರುದ್ರಾಕ್ಷಿ ಮಾಲೆಗಳು ಸಿಗುತ್ತವೆ.ತುಂಡಾಗಿರುವ,ಕೀಟಗಳು ತಿಂದಿರುವ ರುದ್ರಾಕ್ಷವನ್ನು ಧರಿಸಬಾರದು.ಜಪಾದಿ ಕರ್ಮಗಳಲ್ಲಿ ಚಿಕ್ಕರುದ್ರಾಕ್ಷಿಯಿರುವ ಮಾಲೆಗಳನ್ನು ಬಳಸಬೇಕು.
ಈ ನಂಬರಿನ ರುದ್ರಾಕ್ಷಿಗಳಿರುವ ಮಾಲೆಯನ್ನು ಧರಿಸಿದರೆ ಸಿಗುವ ಫಲಗಳು :-
26 ರುದ್ರಾಕ್ಶಿಗಳಿರುವ ಮಾಲೆ ಶಿರದಲ್ಲಿ,
50 ರುದ್ರಾಕ್ಷಿಗಳಿರುವ ಮಾಲೆ ಎದೆಯಲ್ಲಿ,
16 ರುದ್ರಾಕ್ಷಿಗಳಿರುವ ಮಾಲೆ ಭುಜದಲ್ಲಿ,
12 ರುದ್ರಾಕ್ಷಿಗಳಿರುವ ಮಾಲೆಯನ್ನು ಮಣಿಕಟ್ಟಿನಲ್ಲಿ ಧರಿಸಬೇಕೆಂದು ಪುರಾಣಗಳು ತಿಳಿಸುತ್ತವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಿಕ್ಕಮಗಳೂರಿನ ಖ್ಯಾತ ಉದ್ಯಮಿಯಾದ ಸಿದ್ದಾರ್ಥ್ ರವರು ನಿಗೂಢವಾಗಿ ಕಣ್ಮರೆಯಾಗಿರುವುದು ಅವರ ಹುಟ್ಟೂರು ಚಿಕ್ಕಮಗಳೂರಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಿದ್ಧಾರ್ಥ್ ಅವರ ಸಂಸ್ಥೆಯಲ್ಲಿ ಮೊದಲಿನಿಂದಲೂ ವಿದ್ಯುತ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿರುವ ರುದ್ರೇಶ್ ಕಡೂರು ಕೆಲವೊಂದು ವಿಚಾರಗಳನ್ನು ನಮ್ಮ ಜೊತೆಗೆ ಹಂಚಿಕೊಂಡು ಕಣ್ಣೀರನ್ನು ಹಾಕಿದ್ದಾರೆ. ಸಿದ್ಧಾರ್ಥ್ ಅವರ ತಂದೆ ನೀಡಿದ ಮಾಹಿತಿ ಪ್ರಕಾರ, 1983ರಲ್ಲಿ ಸಿದ್ಧಾರ್ಥ್ 2 ಲಕ್ಷ ರೂ. ಪಡೆದು ಮುಂಬೈಗೆ ಹೋಗಿದ್ದರು. ಅಲ್ಲಿ ಉದ್ಯಮ ಆರಂಭಿಸಿ ನಷ್ಟ ಅನುಭವಿಸಿ ಮನೆಗೆ ವಾಪಸ್ ಬಂದಿದ್ದರು. ಕೆಲ ದಿನಗಳ…
ಈಗಿನ ಕಾಲದಲ್ಲಿ ಮಕ್ಕಳಿಗೆ ತಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿಗಳನ್ನು ಸಾಕುವುದೇ ದೊಡ್ಡ ಕಷ್ಟವೆನಿಸಿದೆ.ಹಾಗಾಗಿ ತಮ್ಮ ವೃದ್ಧ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಲ್ಲಿ ಸೇರಿಸುವುವರೇ ಹೆಚ್ಚು. ಆದರೆ ಇನ್ನು ಮುಂದೆ ಹಾಗೆ ಮಾಡುವ ಆಗಿಲ್ಲ.
ಈ ಪ್ರಪಂಚದಲ್ಲಿ ಹಲವು ರೀತಿಯ ಹಣ್ಣುಗಳು ಸಿಗುತ್ತದೆ ಮತ್ತು ಅದರಲ್ಲಿ ಕೆಲವು ಹಣ್ಣುಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದರೆ ಇನ್ನು ಕೆಲವು ಹಣ್ಣುಗಳು ಕೇವಲ ರುಚಿಯನ್ನ ಮಾತ್ರ ನೀಡುತ್ತದೆ. ಇನ್ನು ಸೀತಾಫಲ ಹಣ್ಣನ್ನು ಯಾರು ತಾನೇ ಇಷ್ಟಪಡಲ್ಲ ಹೇಳಿ, ಪ್ರತಿಯೊಬ್ಬರು ಕೂಡ ಒಮ್ಮೆಯಾದರೂ ಈ ಹಣ್ಣಿನ ರುಚಿ ನೋಡಿರುತ್ತೀರಿ, ಇನ್ನು ಈ ಹಣ್ಣಿನ ಜ್ಯೂಸ್ ಕೂಡ ಕುಡಿದಿರಬಹುದು ಆದರೆ ಈ ಹಣ್ಣಿನಲ್ಲಿರುವ ಕೆಲವು ಅದ್ಬುತ ರಹಸ್ಯಗಳ ಬಗ್ಗೆ ಮಾತ್ರ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಹೌದು ಸೀತಾಫಲ ಸಾಮಾನ್ಯವಾದ…
ಪೂಜಾ 2018ರಲ್ಲಿ ಕ್ಷಯ ರೋಗ (ಟಿಬಿ) ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಅವರು 6 ತಿಂಗಳವರೆಗೂ ಮುಂಬೈನ ಶಿವಾಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಷಯರೋಗದಿಂದ ಬಳಲಿ ಮಾರ್ಚ್ನಲ್ಲಿ ಆಸ್ಪತ್ರೆಗೆ ದಾಖಲಾದಾಗ ಕೇವಲ 23 ಕೆ.ಜಿಯಷ್ಟಿತ್ತು ಅವರ ತೂಕ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರ ಆರೋಗ್ಯ ಸುಧಾರಿಸಿದ್ದು ತೂಕದಲ್ಲೂ 20 ಕೆ.ಜಿಯಷ್ಟು ಹೆಚ್ಚಾಗಿದ್ದಾರೆ. ಪೂಜಾ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗಿತ್ತು. ಇತ್ತೀಚೆಗೆ ಪೂಜಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಚಿತ್ರರಂಗಕ್ಕೆ ಹಿಂದಿರುಗುವುದಾಗಿ ಹೇಳಿದ್ದಾರೆ….
ಸೌಂದರ್ಯ ಮತ್ತು ಸುಂದರವಾಗಿ ಕಾಣಲು ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ ಹಾಗೆಯೇ ವಾಷಿಂಗ್ಟನ್ ಅಮೆರಿಕದ ಸೂಪರ್ ಮಾಡೆಲ್ ಆದ ಬೆಲ್ಲಾ ಹದೀದ್ರನ್ನು ವಿಶ್ವದ ಅತೀ ಸುಂದರ ಮಹಿಳೆ ಎಂದು ಘೋಷಣೆ ಮಾಡಲಾಗಿದೆ.ಯಾಕೆಂದರೆ ವೈಜ್ಞಾನಿಕವಾಗಿ ಪರೀಕ್ಷಿಸಿ ಆಕೆಗೆ ಈ ಬಿರುದು ನೀಡಲಾಗಿದೆ ಎಂದು ತಿಳಿಸಲಾಗಿದೆ. ಸೌಂದರ್ಯ ಅಳೆಯುವ ಗ್ರೀಕ್ ಪದ್ಧತಿಯಾದ ‘ಗೋಲ್ಡನ್ ರೇಶ್ಯೋ ಆಫ್ ಬ್ಯೂಟಿ ಫಿ ಮಾನದಂಡದ ಪ್ರಕಾರ ಈ ಸೌಂದರ್ಯ ಪರೀಕ್ಷೆ ನಡೆಸಲಾಗಿದ್ದು, ಬೆಲ್ಲಾ ಹದೀದ್ ಮುಖ ಶೇ.94.35 ರಷ್ಟುಹೋಲಿಕೆಯಾಗಿದೆ. ಹಾಗಾಗಿ ಆಕೆಯನ್ನು ಜಗತ್ತಿನ…
ಸ್ನೇಹಿತರೆ ಇಂಗ್ಲೆಂಡ್ ದೇಶದಕ್ಕೆ ಸೇರಿದ ಈತನ ಹೆಸರು ಸ್ಟಿವನ್, ಜೀವನದಲ್ಲಿ ತುಂಬಾ ಕಷ್ಟವನ್ನ ಅನುಭವಿಸಿದ ಈತನಿಗೆ 60 ವರ್ಷ ವಯಸ್ಸು, ತನ್ನ 60 ವರ್ಷ ಜೀವನದಲ್ಲಿ ಯಾವತ್ತೂ ಸುಖಕರ ಜೀವನವನ್ನ ಈತ ಅನುಭವಿಸಿರಲಿಲ್ಲ. ಈತ ದಿನದ ಖರ್ಚಿಗಾಗಿ ತುಂಬಾ ಕಷ್ಟಪಡುತ್ತಿದ್ದ ಮತ್ತು ಲಾರಿ ಡ್ರೈವರ್ ಆಗಿ ಕೆಲಸವನ್ನ ಕೂಡ ಮಾಡುತ್ತಿದ್ದ, ಕೆಲವು ಸಮಯದ ನಂತರ ಈತನಿಗೆ ವಯಸ್ಸಾಗಿದೆ ಅನ್ನುವ ಕಾರಣಕ್ಕೆ ಈತನನ್ನ ಡ್ರೈವರ್ ಕೆಲಸದಿಂದ ತಗೆದು ಹಾಕಲಾಯಿತು. ಡ್ರೈವರ್ ಕೆಲಸವನ್ನ ಬಿಟ್ಟ ನಂತರ ಓಕ್ ಮರದ ತೋಟದಲ್ಲಿ…