inspirational

ರೋಗ ನಿರೋಧಕ ಶಕ್ತಿ ಹೆಚ್ಚಳ ಹೇಗೆ? ಚರಕ ಸಂಹಿತೆಯ ಉತ್ತರ..

115
Charaka

ಚರಕ ಸಂಹಿತೆ ಇಂದಿಗೂ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಗ್ರಂಥ ಎಂದು ಎಲ್ಲ ವೈದ್ಯರು ಒಕ್ಕೊರಲಿನಿಂದ ಒಪ್ಪುತ್ತಾರೆ , ಹೊಸ ಆರೋಗ್ಯ ಸಮಸ್ಯೆಗಳು , ಜಟಿಲ ಕಾಯಿಲೆಗಳು ಉತ್ಪತ್ತಿ ಆದಾಗ ವೈಜ್ಞಾನಿಕ ಪ್ರಪಂಚ ಆಸೆ ಭರವಸೆಗಳಿಂದ  ನೋಡುವುದು ಈ 2ನೇ ಶತಮಾನದ ಗ್ರಂಥದೆಡೆಗೆ , ಚರಕ ಸಂಹಿತೆಯಲ್ಲಿ ಅಗ್ನಿವೇಶ ಎಂಬ ವಿದ್ಯಾರ್ಥಿಯು ಗುರುವಾದ ಅತ್ರೇಯರಲ್ಲಿ ನಮ್ಮ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳಿದ್ದಾನೆ -ಹಿತಕರವಾದ ಅಥವಾ ಅಹಿತಕರವಾದ ಆಹಾರ ಸೇವಿಸುವ ಎರಡು ತರಹದ ಜನರಲ್ಲಿ ಕೂಡ ಕೆಲವರು ಆರೋಗ್ಯದಿಂದ ಇರುತ್ತಾರೆ ,ಕೆಲವರು ರೋಗಿಗಳಾಗುತ್ತಾರೆ ಅಂತಹ ಸಂಧರ್ಭದಲ್ಲಿ ಹಿತ ಅಥವಾ ಅಹಿತ ಆಹಾರದಿಂದಲೇ ಆರೋಗ್ಯ , ಅನಾರೋಗ್ಯಗಳಾಯಿತು ಎಂದು ಹೇಗೆ ನಾವು ನಿಶ್ಚಯಿಸಿಕೊಳ್ಳಬಹುದು ಎಂಬುದೇ ಆ ಪ್ರಶ್ನೆ.

ಇದಕ್ಕೆ ಉತ್ತರಿಸುತ್ತಾ ಅತ್ರೇಯರು ಹೇಳುತ್ತಾರೆ ಕೇವಲ ಹಿತಾಹಾರ ಸೇವನೆಯಿಂದ ಎಲ್ಲ  ರೋಗಗಳ ಆತಂಕ ನಿವಾರಣೆ ಅಸಾಧ್ಯ. ಏಕೆಂದರೆ ಅಹಿತ ಆಹಾರಕ್ಕೂ ಮಿಗಿಲಾಗಿ ರೋಗದ ಉತ್ಪತ್ತಿಗೆ ಇನ್ನು ಅನೇಕ  ಕಾರಣಗಳಿರುತ್ತವೆ.  ಉದಾಹರಣೆಗೆ-ಕಾಲ ವಿಪರ್ಯಾಯ ಎಂದರೆ ಋತು ಕಾಲಕ್ಕೆ ಅನುಸಾರ  ಗುಣಗಳಾದ ಚಳಿ ಸೆಖೆ ಮಳೆಗಳು ತೀವ್ರವಾಗಿ ಏರು ಪೆರು ಆಗುವುದು ,ಇದು  ರೋಗಕಾರಕ ಕ್ರಿಮಿಗಳನ್ನು ಬಲಪಡಿಸುವುದು ನಮ್ಮ ಶರೀರ ಬಲವನ್ನು ಕಡಿಮೆ ಮಾಡುವುದು.

ಪ್ರಜ್ಞಾಪರಾಧ – ಆರೋಗ್ಯಕ್ಕೆ ಹಾನಿಕರ ಎಂದು ತಿಳಿದು ತಿಳಿದು ಮಾಡುವಂತಹವು ಅನೇಕ ಗುಟ್ಕಾ ,ತಂಬಾಕು ಸೇವನೆಯಿಂದ ಹಿಡಿದು ಐಸ್ ಕ್ರೀಮ್ , ಅತಿ ಮಾಸಲೆಗಳನ್ನು ತಿಂದು ಅಸಿಡಿಟಿ ಮಾಡಿಕೊಳ್ಳುವುದು, ಹಸಿವಿಲ್ಲದಿದ್ದರು ಕೂಡ ಅತಿಯಾಗಿ ತಿನ್ನುವುದು, ಶುಚಿಯಾಗಿ ಕೈ ಕಾಲು ತೊಳೆಯದೆ ಇರುವುದು ,ಸ್ವಚ್ಛ ಬಟ್ಟೆ ಧರಿಸದಿರುವುದು ,  ಎಲ್ಲವು ಪ್ರಜ್ಞಾಪರಾಧಗಳೇ ,ನಮ್ಮ ಜ್ಞಾನೇಂದ್ರಿಯಗಳಿಗೆ ಒಗ್ಗದ ಶಬ್ದ ,ಸ್ಪರ್ಶ ,ರೂಪ , ರುಚಿ , ಹಾಗು ವಾಸನೆಗಳನ್ನು ಅನುಭವಿಸುವುದು ಇತ್ಯಾದಿ. 

ಪ್ರತಿ ವ್ಯಕ್ತಿಯ ಶರೀರದ ರಕ್ತ ಮಾಂಸಾದಿ ಧಾತುಗಳು  ,ವಾಸಿಸುವ ಸ್ಥಳ,ಶರೀರ ಬಲ ,ಕಾಲ- ವಾತಾವರಣ  , ಸ್ಥೂಲ ಜೀರ್ಣ ಶಕ್ತಿ  ಹಾಗು ಸೂಕ್ಷ್ಮವಾದ ಪ್ರತಿ ಕೋಶಗಳ ಮೈಟೊಕಾಂಡ್ರಿಯ ದಲ್ಲಿ ಆಗುವ ಜೀರ್ಣ ಕ್ರಿಯೆ ,ವಯಸ್ಸು , ಅಹಿತದ ಪ್ರಮಾಣ ಇತ್ಯಾದಿ ಅನೇಕ ಕಾರಣಗಳ ವಿವಿಧ ರೀತಿಯ ಸಂಯೋಗದಿಂದ ವ್ಯಾಧಿ ಉತ್ಪತ್ತಿ ಆಗುತ್ತದೆ ಅದಕ್ಕಾಗಿಯೇ ಅದೇ ರೋಗವು ಕೆಲವರಲ್ಲಿ ಶೀಘ್ರವಾಗಿ ಉತ್ಪತ್ತಿ ಆಗಬಹುದು ಕೆಲವರಲ್ಲಿ ನಿಧಾನವಾಗಿ , ಹಾಗು ಸಣ್ಣದಾಗಿಯೂ ಬರಬಹುದು ಅಥವಾ ಉಗ್ರ ರೂಪ ತಾಳಿ ಸಾವಿಗೂಕಾರಣ ಆಗಬಹುದು. ಇದೇ ಕಾರಣಕ್ಕಾಗಿ ಯಾವುದೇ ಕೊರೊನದಂತಹ ಸಾಂಕ್ರಾಮಿಕ ಕಾಯಿಲೆಗಳು ಕೂಡ ಒಂದೇ ಮನೆಯ, ಒಂದೇ ಕಚೇರಿಯ ಎಲ್ಲರಿಗು ಒಂದೇ ತರಹದಲ್ಲಿ ಭಾದಿಸುತ್ತಿಲ್ಲ.

ಮುಂದುವರಿದು ಅತ್ರೇಯರು ಸಾಂಧರ್ಭಿಕವಾಗಿ  ಹೇಳುತ್ತಾರೆ “ನಾನಾವೃತ  ಮುಖೋ ಜೃಂಭ ,ಕ್ಷವತು, ಹಾಸ್ಯಾಂ ವಾ ಪ್ರವರ್ತಯೇತ್” ಅಂದರೆ ಬಾಯಿ ಹಾಗು ಮೂಗನ್ನು ಮುಚ್ಚದೆ ಆಕಳಿಸುವುದು ,ಸೀನುವುದು ,ನಗೆಯಾಡುವುದು ಮಾಡಬಾರದು ,ಮೂಗಿನ ಹೊಳ್ಳೆಗಳಿಗೆ ಬೆರಳು ಹಾಕುವುದು ,ಉಗುರು ಕಚ್ಚುವುದು ,ಕಂಡ ಕಂಡಲ್ಲಿ ಉಗುಳುವುದು ,ಮಲಮೂತ್ರಗಳ ವಿಸರ್ಜನೆಯನ್ನು ಕೂಡ ಆರೋಗ್ಯದ ದೃಷ್ಟಿಯಿಂದ ಮಾಡದಂತೆ ಎಚ್ಚರಿಸಿದ್ದಾರೆ ,.

ವ್ಯಾಧಿಕ್ಷಮತ್ವ-  ಆಯುರ್ವೇದದಲ್ಲಿ ವ್ಯಾಧಿಕ್ಷಮತ್ವ  ಎಂಬುದು ಬಹುಚರ್ಚಿತ ವಿಷಯವಾಗಿದ್ದು ಅದನ್ನೇ ಶರೀರ ಬಲ ಅಥವಾ ಈ ದಿನಗಳಲ್ಲಿ ಇಮ್ಯೂನಿಟಿ ಎಂದು ಕರೆಯುತ್ತಾರೆ ,ವ್ಯಾಧಿ ಕ್ಷಮತ್ವ ಎಂದರೆ ವ್ಯಾಧಿ ಬಲವನ್ನು ವಿರೋಧಿಸುವ ಶರೀರ ಹಾಗು ಮನಸ್ಸಿನ ಶಕ್ತಿಯಾಗಿದ್ದು ವ್ಯಾಧಿ ಬರದಂತೆ ತಡೆಯುವುದರೊಂದಿಗೆ ,ಬಂದರೋಗದಿಂದ  ಬೇಗನೆ  ಗುಣಮುಖವಾಗಲು ಪ್ರಧಾನ ಕಾರಣವಾಗಿರುವ ಪ್ರತಿರೋಧಕ ಶಕ್ತಿಯೇ ಆಗಿರುತ್ತದೆ ಅದರ ಕೊರತೆಯಿಂದಾಗಿ ಅನೇಕ ವಯಸ್ಕರು , ಹೃದ್ರೋಗಿಗಳು ಕೊರೋನ ಕ್ಕೆ ಬಲಿಯಾಗುವುದು ಗೋಚರಿಸುತ್ತಿದೆ ,

Charaka

ಶರೀರ ಬಲ ಚರಕ ಸಂಹಿತೆ ಪ್ರಕಾರ ಮೂರು ತರಹದ್ದಾಗಿರುತ್ತದೆ ,

1) ಸಹಜ ಬಲ- ಇದು ಜನ್ಮದಿಂದ ಪ್ರಾಪ್ತಿ ಆಗುವಂತದ್ದು ,ಅಪ್ಪ ಅಮ್ಮನಿಂದ ಉತ್ಪತ್ತಿ ಆದ ವೀರ್ಯ ಅಂಡಾಣು, ಗರ್ಭಿಣಿಯ ಆಹಾರ ಹಾಗು ಅವರ   ಮನಸ್ಸಿಗೆ ಅನುಗುಣವಾಗಿರುತ್ತದೆ , ಸಧೃಡ  ದೇಹ ಇದ್ದು ದುರ್ಬಲ ಮನಸ್ಸಿರಬಹುದು ಅಥವಾ ಬಲಹೀನ ಶರೀರದಲ್ಲಿ ಅಪ್ಪ ಅಮ್ಮನಿಗೆ ಅನುಗುಣವಾಗಿ ಸತ್ವಯುತ ಮನಸ್ಸಿರಬಹುದು.

2) ಎರಡನೆಯದು ಕಾಲಜ ಬಲ- ಎಂದರೆ ಋತುವಿಗೆ ಹಾಗು ವಯಸ್ಸಿಗೆ  ಅನುಸಾರವಾಗಿ ಉದಾಹರಣೆಗೆ ಹೇಮಂತ ಶಿಶಿರ ಋತುಗಳಲ್ಲಿ ಸಹಜವಾಗಿ ಶರೀರ ಬಲ ಹೆಚ್ಚಿದ್ದು ಕಾಯಿಲೆಗಳು ಕಮ್ಮಿ ಇರುವುದು ಕಂಡು ಬರುತ್ತದೆ ಅಂತೆಯೇ  ಬಾಲ್ಯ , ಯೌವನ ಹಾಗು ವೃದ್ಧಾಪ್ಯ ಕಾಲಾನುಸಾರ ಶರೀರ ಬಲ.

3) ಮೂರನೆಯದಾಗಿ ಯುಕ್ತಿ ಕೃತ ಬಲ- ಅಂದರೆ ನಮ್ಮ ಬುದ್ಧಿವಂತಿಕೆಯಿಂದ ಶರೀರ ಬಲವನ್ನು ಪಡೆದುಕೊಳ್ಳುವುದು ಇದರಲ್ಲಿ ವ್ಯಾಯಾಮ, ಹಾಲು , ತುಪ್ಪ, ಹಣ್ಣುಗಳ ಸೇವನೆ , ಒಳ್ಳೆಯ ದಿನಚರಿ ಪಾಲನೆ ,ಲೇಹ್ಯ ರಾಸಾಯನದಂತಹ ಔಷಧಿಗಳು ಇಂದಿನ ಯುಗದ ವ್ಯಾಕ್ಸೀನ್ ಕೂಡ  ಒಳಗೊಂಡಂತೆ ಇದೆ.  

ವ್ಯಾಧಿಕ್ಷಮತ್ವ ಎಂಬುದು ಆಯುರ್ವೇದದ ಸಿದ್ಧಾಂತ  ಪ್ರಕಾರ  ಪೋಲಿಯೋ, ದಡಾರ  ಅಥವಾ ಇತರೆ ಯಾವುದೇ ವ್ಯಾಕ್ಸೀನ್ ನಂತೆ  ಯಾವುದೇ ಒಂದು ನಿರ್ದಿಷ್ಟ ಕ್ರಿಮಿಯ ರೋಗದ  ವಿರುದ್ಧವಾಗಿ ಇರುವುದಿಲ್ಲ, ಇದು ಎರಡು ವಿಷಯಗಳ ಆಧಾರಿತವಾಗಿ ಇದೆ.

ಮೊದಲನೆಯದಾಗಿ ಕಾಯಿಲೆ ತರುವ ಕ್ರಿಮಿಗೆ ಅನುಕೂಲಕರವಾಗುವಂತೆ ನಮ್ಮ ದೇಹ ಇದ್ದಾಗ ಕಾಯಿಲೆ ಆಗುತ್ತದೆ  ಹಾಗು ಎರಡನೆಯದಾಗಿ  ಎಲ್ಲ ವ್ಯಕ್ತಿಗಳು  ಕೂಡ ಒಂದೇ ಮಟ್ಟಕ್ಕೆ ಕಾಯಿಲೆಗೆ ಒಳಪಡುವುದಿಲ್ಲ. ,ತಾತ್ಪರ್ಯ ಏನೆಂದರೆ ಹೇಗೆ ಅನುಕೂಲವಾದಂತ ಭೂಮಿ ಸಿಗದಿದ್ದರೆ ಬಿತ್ತಿದ ಬೀಜ ತಾನೇ ನಾಶವಾಗುವುದೋ  ,ಇಂಧನ ಇಲ್ಲದ ಅಥವಾ ಗಾಳಿ ಇಲ್ಲದೆ ಬೆಂಕಿ ಹೇಗೆ ಆರುವುದೋ ಅಂತೆಯೇ ವ್ಯಾಧಿಕ್ಷಮತ್ವದಿಂದಾಗಿ ವ್ಯಾಧಿಗೆ  ಅನುಕೂಲ ಪರಿಸ್ಥಿತಿ ನಮ್ಮ ದೇಹದಲ್ಲಿ ಇಲ್ಲದಿದ್ದಾಗ ಸಹಜವಾಗಿ ಸಾಂಕ್ರಾಮಿಕ ಹಾಗು ಇತರೆ ಕಾಯಿಲೆಗಳ ವಿರುದ್ಧ ದೇಹ ಗೆಲ್ಲುತ್ತದೆ , ಕ್ರಿಮಿ ಯಾವುದು ಎಂಬುದು ಮುಖ್ಯ ಅಲ್ಲ ನಮ್ಮ ಶರೀರ ಹೇಗಿದೆ ಎಂಬುದೇ ಅತಿ ಮುಖ್ಯ.

ವ್ಯಾಧಿಕ್ಷಮತ್ವ ಎಂಬುದು ಸೂಪರ್ ಮಾರ್ಕೆಟ್ ಗಳಲ್ಲಿ ಮಾರಾಟಕ್ಕಿರುವ ವಸ್ತುವಲ್ಲ ,ಆರೋಗ್ಯವನ್ನು ಕಾಪಾಡಲು ಬೇಕಾದ ಆಹಾರ ,ವಿಹಾರ, ನಿದ್ರೆ , ಒತ್ತಡ ರಹಿತ ಜೀವನ ಹಾಗು ದಿನಚರಿಗಳಲ್ಲಿ ಅಡಗಿದೆ ,ಅಂತೆಯೇ ಮನೆ ಮದ್ದಿಗೆ ಹೇಳುವ  ಅರಶಿನ ಇತ್ಯಾದಿ ಮಸಾಲೆಗಳು ಮಾತ್ರ ಆಯುರ್ವೇದ ಅಲ್ಲ ಅವು ಆಯುರ್ವೇದದ ಔಷಧಿ  ಸಮುದ್ರದಿಂದ ಒಂದು ಹನಿ ತೆಗೆದಂತೆ ಮಾತ್ರ .

  • Mayoon N / Biotechnologist / Director of DRM Career Build Center , kolar

About the author / 

DRM

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ಭಗವಾನ್ ಶ್ರೀ ಕೃಷ್ಣನ ಈ 8 ಉಪದೇಶಗಳನ್ನು ಅನುಸರಿಸಿದ್ರೆ, ಜೀವನ ತುಂಬಾ ಸರಳ..!

    ಮಹಾಭಾರತದ ಒಂದು ಯುದ್ದದ ಸನ್ನಿವೇಶದಲ್ಲಿ ಅರ್ಜುನನು, ನಾನು ಯುದ್ಧ ಮಾಡೋದಿಲ್ಲ ಎಂದಾಗ ಭಗವಾನ್ ಶ್ರೀ ಕೃಷ್ಣನು, ಅರ್ಜುನನಿಗೆ ಭಗವದ್ಗೀತೆಯನ್ನು ಭೋದಿಸುತ್ತಾನೆ.

  • ಜ್ಯೋತಿಷ್ಯ

    ಯುವತಿ ಬೆತ್ತಲೆಯಾಗಿ ಸ್ಕೂಟಿ ಚಲಾಯಿಸಿದ ವೀಡಿಯೋ ವೈರಲ್…..

    ಯುವತಿಯೊಬ್ಬಳು ಬೆತ್ತಲೆಯಾಗಿ ಸ್ಕೂಟಿ ಚಲಾಯಿಸಿಕೊಂಡು ಹೋದ ವೀಡಿಯೋವೊಂದು ನಗರದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುವತಿಯು ಸ್ಕೂಟಿಯ ಹಿಂಬದಿಯಲ್ಲಿ ಬೆತ್ತಲಾಗಿ ಕುಳಿತಿದ್ದಳು. ಮಾರ್ಗ ಮಧ್ಯೆ ಸ್ಕೂಟಿ ನಿಲ್ಲಿಸಿ ಮುಂದೆ ಕುಳಿತಿದ್ದ ಯುವಕನನ್ನು ಕೆಳಗಿಳಿಸಿ ತಾನೇ ಚಲಾಯಿಸಿಕೊಂಡು ಹೋಗಿದ್ದಾಳೆ. ಈ ದೃಶ್ಯವನ್ನು ಕಟ್ಟಡವೊಂದರ ಮೇಲಿಂದ ಮೊಬೈಲ‌್ನಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವತಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬರುತ್ತಿದೆ.  ಆದರೆ, ಈ ಘಟನೆ ಎಲ್ಲಿ ನಡೆದಿದ್ದು ಎನ್ನುವುದು ಸ್ಪಷ್ಟವಾಗಿಲ್ಲ. ಇದು…

  • ಜೀವನಶೈಲಿ

    ಉಗರು ಕಚ್ಚೋ ಅಭ್ಯಾಸದಿಂದ ಆಗೋ ಪರಿಣಾಮಗಳ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಒಬ್ಬೊಬ್ಬರಿಗೆ ಒಂದೊಂದು ರೀತಿಯ ದುಶ್ಚಟವಿರುವುದು ಸಾಮಾನ್ಯ. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದನ್ನು ಬಿಡಬೇಕೆಂದರೂ ಸಾಧ್ಯವಾಗುವುದಿಲ್ಲ. ಸಣ್ಣವರಿದ್ದಾಗ, ಅಷ್ಟೇ ಏಕೆ ದೊಡ್ಡವರೂ ಕೂಡ ಆಗಾಗ ಉಗುರು ಕಚ್ಚುವುದನ್ನು ನೋಡಿರುತ್ತೇವೆ. ಒತ್ತಡದಲ್ಲಿ ಅಥವಾ ಕೆಲವೊಮ್ಮೆ ಅದನ್ನೇ ರೂಢಿ ಮಾಡಿಕೊಂಡವರು ಉಗುರು ಕಚ್ಚುತ್ತಾರೆ. ಹೀಗೆ ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿರುತ್ತಾರೆ ಎಂದು ವರದಿಯೊಂದು ಹೇಳಿದೆ. ಉಗುರು ಕಚ್ಚುವುದು, ತಲೆ ಕೆರೆದುಕೊಳ್ಳುವುದು, ಬೆರಳ ತುದಿಯ ಚರ್ಮ ಕಡಿಯುವುದು ಮೊದಲಾದ ಸ್ವಭಾವ ಹೊಂದಿದ್ದ ಹಾಗೂ ಹೊಂದಿರದವರನ್ನು ಅಧ್ಯಯನಕ್ಕೆ…

  • ಸುದ್ದಿ

    ಶ್ರೀರಾಮನ ಬಂಟ ಹನುಮನನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ ಭಕ್ತಿ ಮೆರೆದ ಅಯೋಧ್ಯೆಯ ಮುಸ್ಲಿಂ ಕುಟುಂಬ.

    ಹಿಂದೂ, ಮುಸ್ಲಿಂ ಎಂಬ ಭೇದವಿಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತಿದೆ. ಇದಕ್ಕೆ ಅಯೋಧ್ಯೆಯ ಮುಸ್ಲಿಂ ಕುಟುಂಬವೊಂದು ಸಾಕ್ಷಿಯಾಗಿದೆ. ತಮ್ಮ ಮಗ, ಮಗಳ ಮದುವೆ ಆಮಂತ್ರಣ ಪ್ರತಿಕೆಯಲ್ಲಿ ರಾಮನ ಭಂಟ ಹನುಮನ ಚಿತ್ರವನ್ನು ಮುದ್ರಿಸಿ ಕುಟುಂಬ ಭಕ್ತಿ ಮೆರೆದಿದೆ. ಹೌದು. ಉತ್ತರ ಪ್ರದೇಶ ಚಾರೇರ ಗ್ರಾಮದ ಮುಸ್ಲಿಂ ಕುಟುಂಬ ಶ್ರೀರಾಮನ ಬಂಟ ಹನುಮನ ಚಿತ್ರವುಳ್ಳ ಕ್ಯಾಲೆಂಡರ್ ಒಂದನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದೆ. ಅಷ್ಟೇ ಅಲ್ಲದೆ ಈ ಪತ್ರಿಕೆಯಲ್ಲಿ ಬ್ರಹ್ಮ, ವಿಷ್ಣು, ಶಿವ ಹಾಗೂ ನಾರದರ ಚಿತ್ರವನ್ನೂ ಕೂಡ ಕುಟುಂಬ…

  • ಉಪಯುಕ್ತ ಮಾಹಿತಿ

    ಮೊಟ್ಟೆ ಚಿಪ್ಪು ಬಿಸಾಡಬೇಡಿ!ಮತ್ತೆ ತಿನ್ನೋಕೆ ಆಗುತ್ತಾ ಅಂತೀರಾ!ಈ ಲೇಖನ ಓದಿ ಶೇರ್ ಮಾಡಿ…

    ಮೊಟ್ಟೆ ಪೌಸ್ಟಿಕವಾದ ಆಹಾರ.ನಾವು ಸಾಮಾನ್ಯವಾಗಿ ಮೊಟ್ಟೆ ಬೇಯಿಸಿದಾಗ ಅಥವಾ ಆಮ್ಲೆಟ್ ಮಾಡಲು ಹೋದಾಗ ಮೊಟ್ಟೆ ಹೊಡೆದು ಮೊಟ್ಟೆ ಚಿಪ್ಪನ್ನು ಬಿಸಾಡುತ್ತೇವೆ.

  • ಆರೋಗ್ಯ

    ನಿಂಬೆ ಸಿಪ್ಪೆಯನ್ನ ಬಿಸಾಡ್ತೀದೀರಾ ಇನ್ನು ಮುಂದೆ ಬಿಸಾಡಬೇಡಿ ಇದರಿಂದ ಸಾಕಷ್ಟು ಉಪಯೋಗಗಳಿವೆ.

    ಲಿಂಬೆಯನ್ನು ಅಡುಗೆಯ ರುಚಿಗೆ ಮತ್ತು ಔಷಧಿಗೆ ಬಳಸುತ್ತಾರೆ, ನಮ್ಮ ಆರೋಗ್ಯಕ್ಕೂ ಸಹ ಲಿಂಬೆ ಉತ್ತಮ ಆರೈಕೆ. ಸಾಮಾನ್ಯವಾಗಿ ನಿಂಬೆಹಣ್ಣಿನ ರಸವನ್ನು ಹಿಂಡಿ ಎಲ್ಲರೂ ಸಿಪ್ಪೆಯನ್ನು ಬಿಸಾಡುತ್ತಾರೆ ಆದರೆ ನಮಗೆ ತಿಳಿದಿಲ್ಲ ಲಿಂಬೆ ರಸಕ್ಕಿಂತ ಹತ್ತು ಪಟ್ಟು ಸಿಪ್ಪೆಯಲ್ಲಿ ಹತ್ತಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದು. ಲಿಂಬೆಯ ಸಿಪ್ಪೆಯಲ್ಲಿ ಮಿಟಮಿನ್ಸ್ , ಖನಿಜ, ಕರಗದೇ ಇರುವಂತಹ ನಾರುಗಳು ಹಾಗೂ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಹಾಗೂ ಮಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಇವು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇರಿಸುತ್ತದೆ. ಹಾಗಾಗಿ…