News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
inspirational

ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

50

ಮಯೂನ್ ಎನ್
ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು ಆಧುನಿಕ ವೈದ್ಯರು ಆರೋಪಣೆ ಮಾಡುತ್ತಿದ್ದಾರೆ.
ನಿವು ಸರಿಯಾಗಿ ಉಸಿರಾಡುತಿದ್ತ್ದೀರ? ಇದನ್ನು ತಿಳಿದುಕೊಳ್ಳಲು ಒಂದು ಸರಳ ವಿಧಾನ ಇದೆ. ನೀವು ಈಗ ಎಲ್ಲೇ ಇರಿ. ಏನೇ ಮಾಡುತ್ತಿರಿ. ಒಮ್ಮೆ ಆಳವಾಗಿ ಉಸಿರನ್ನು ಎಳೆದುಕೊಳ್ಳಿ. ನಿಮ್ಮ ಎದೆ ಹೊಟ್ಟೆಗಿಂತಾ ಹೆಚ್ಚು ಉಬ್ಬಿದ್ದರೆ. ನೀವು ತಪ್ಪುತಪ್ಪಾಗಿ ಉಸಿರಾಡುತಿದ್ದೀರಾ ಎಂದು ತಿಳಿಯಿರಿ. ಬದಲಿಗೆ ಹೊಟ್ಟೆಯೇ ಎದೆಗಿಂತಾ ಹೆಚ್ಚು ಉಬ್ಬಿದ್ದರೆ ನೀವು ಸರಿಯಾಗಿ ಉಸಿರಾಡುತಿದ್ದೀರಿ ಎಂದು ತಿಳಿಯಿರಿ.


ನಿಧಾನವಾಗಿ ಮತ್ತು ಆಳವಾಗಿ ಹೊಟ್ಟೆ ಉಬ್ಬಿ ಇಳಿಯುವಂತೆ ನಡೆಸುವ ಶ್ವಾಸೋಚ್ಛಾ ಸದಿಂದ ಅದ್ಭುತ ಲಾಭಗಳಿವೆ ಎಂದು ನಮ್ಮ ಪೂರ್ವಜರು ಹೇಳಿದ್ದಾರೆ. ಇದರ ಸತ್ಯಾಸತ್ಯತೆಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಿದ ಇಂದಿನ ವೈದ್ಯರೂ ಸಹ ದೀರ್ಘ ಶ್ವಾಸೋಚ್ಛಾ ಸವನ್ನು ಅನುಮೋಸಿದ್ದಾರೆ. ದೊಡ್ಡ ದೊಡ್ಡ ದೇಶದಲ್ಲಿನ ದೊಡ್ಡ ದೊಡ್ಡ ಆಸ್ಪತ್ರೆಂiಲ್ಲಿನ ವೈದ್ಯರು ಈಗ ತಮ್ಮ ಎಲ್ಲ ರೋಗಿಗಳಿಗೆ ದೀರ್ಘ ಶ್ವಾಸೋಚ್ಛಾ ಸದ ಮೂಲ ಪಾಠಗಳನ್ನು ಬೋಧಿಸಲು ಪ್ರಾರಂಭಿಸಿದ್ದಾರೆ. ನೆಗಡಿಯಿಂದ ಹಿಡಿದು ಕ್ಯಾನ್ಸರ್ ವರೆಗಿನ ಎಲ್ಲ ರೋಗಗಳ ಉಪಶಮನದಲ್ಲಿ ದೀರ್ಘಶ್ವಾಸೋಚ್ಛಾ ಸದಿಂದ ಪ್ರಯೋಜನಗಳಿವೆ ಇಂದು ವೈದ್ಯರು ಕಂಡುಕೊಂಡಿದ್ದಾರೆ. ಹೀಗಾಗಿ ಕೆಲ ವೈದ್ಯರಂತೂ ತಮ್ಮ ಪರಿಣಿತ ಚಿಕಿತ್ಸೆಯನ್ನು ಬದಿಗೊತ್ತಿ ರೋಗಿಗಳಿಗೆ ದೀರ್ಘಶ್ವಾಸೋಚ್ಛಾ ಸದ ಮಹತ್ತ್ವವನ್ನು ಒತ್ತಿ ಒತ್ತಿ ಹೇಳಲಾರಂಭಸಿದ್ದಾರೆ.
ನಿಜಕ್ಕೂ ನಾವೀಗ ಅವಸರ ಅವಸರವಾಗಿ ತಪ್ಪುತಪ್ಪಾಗಿ ಉಸಿರಾಡುತ್ತಿದ್ದೇವೆ . ನಮ್ಮಲ್ಲಿನ ಮಾನಸಿಕ ಒತ್ತಡ, ಆಂತಕ, ಉದ್ವೇಗ ಹಾಗೂ ಉಸಿರಾಟದ ಬಗ್ಗೆ ಗಮನಹರಿಸದಿರುವುದೇ ಇದಕ್ಕೆ ಕಾರಣವಾಗಿದೆ. ಉಸಿರಾಟ ಅನೈಶ್ಚಿಕವಾಗಿ ನಡೆಯುವ ಕ್ರಿಯೆಯಾದರೂ ಚಿತ್ತೈಕಾಗ್ರತೆ ಇಂದ ನಮ್ಮ ಉಸಿರಾಟವನ್ನು ಉತ್ಕರ್ಷಗೊಳಿಸಿಕೊಳ್ಳಬಹುದು.
ನಿಧಾನವಾಗಿ ಹೊಟ್ಟೆಹೆಚ್ಚು ಉಬ್ಬುವಂತೆ ಉಸಿರನ್ನು ಎಳೆದುಕೊಂಡಾಗ ವಾಯು ಶ್ವಾಸಕೋಶದ ತಳದಲ್ಲಿ ಹೆಚ್ಚಾಗಿ ಜಮಾಯಿಸುತ್ತದೆ. ಆಗ ದೇಹಕ್ಕೆ ಹೆಚ್ಚು ಆಮ್ಲಜನಕ ಸೇರಲು ಹಾಗೂ ದೇಹದಿಂದ ಇಂಗಾಲ ಮುಂತಾದ ಕಲ್ಮಷ ಸಂಪೂರ್ಣವಾಗಿ ಹೊರಹೋಗಲು ಹೆಚ್ಚು ಅವಕಾಶ ದೊರೆಯ್ತುತದೆ. ಉತ್ತಮ ವಾಯುವಿನಿಮಯದಿಂದ ದೇಹದ ಆರೋಗ್ಯ ಉತ್ತಮಗೊಳ್ಳುತ್ತದೆ. ಉಸಿರಾಟದ ಗತಿ ನಿಮಿಷಕ್ಕೆ ಏಳು ಅಥವಾ ಎಂಟಕ್ಕೆ ಇಳಿಯುತ್ತದೆ. ಈ ಎಲ್ಲ ವಿದ್ಯಮಾನಗಳಿಂದ ಆರೋಗ್ಯದೊಂದಿಗೆ ಆಯುಷ್ಯವೂ ಹೆಚ್ಚುತ್ತದೆ. ಈಗಾಗಲೇ ರುಜುವಾತು ಆಗಿರುವಂತೆ ದೀರ್ಘಶ್ವಾಸೋಚ್ಛಾ ಸದಿಂದ ರಕ್ತದೊತ್ತಡ ತಗ್ಗುತ್ತದೆ. ಹೃದಯ ಬಡಿತ ಕಡಿಮೆಯಾಗುತ್ತದೆ. ದೇಹದ ಮಾಂಸಖಂಡಗಳು ಸಡಿಲಗೊಂಡು ವಿಶ್ರಾಂತಿ ಪಡೆಯುತ್ತವೆ. ಮಾನಸಿಕ ಉದ್ವೇಗ ತಗ್ಗತ್ತದೆ. ಮನಸ್ಸು ಪ್ರಶಾಂತವಾಗುತ್ತದೆ. ಮಾನವನು ಪ್ರತಿ ನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾ ಸರಾಸರಿ ಅರವತ್ತು ವರ್ಷಮಾತ್ರ ಬದುಕುತಿದ್ದಾನೆ. ಅದೇ ಆಮೆಯನ್ನು ನೋಡಿ ಅದು ನಿಮಿಷಕ್ಕೆ ಕೇವಲ ಮೂರ್‍ನಾಲ್ಕು ಬಾರಿ ಉಸಿರಾಡುತ್ತಾ ಬಹುದೀರ್ಘಕಾಲ ಬದುಕುತ್ತದೆ. ಚಿಕ್ಕ ಮಗುವನ್ನು ನೋಡಿ, ಅದು ಮಲಗಿದ್ದಾಗ ದೀರ್ಘವಾಗಿ ಉಸಿರಾಡುತ್ತಾ ಹೊಟ್ಟೆಯನ್ನು ಬಲೂನಿನಂತೆ ಉಬ್ಬಿಸುತ್ತದೆ. ಹೀಗಾಗಿ ನಾವೆಲ್ಲಾ ಮಕ್ಕಳಂತೆ ಉಸಿರಾಡಬೇಕು ಎನ್ನುತ್ತಾರೆ ತಜ್ಞ ವೈದ್ಯರು ಉಸಿರಾಟಂದ ಉತ್ತಮ ಪ್ರಯೋಜನಗಳನ್ನು ಪಡೆಯಲು ನಾವು ದೀರ್ಘವಾಗಿ ಹೊಟ್ಟೆ ಉಬ್ಬುವಂತೆ ಉಸಿರಾಡುವ ಕಲೆಯನ್ನು ಕರಗತಮಾಡಿಕೊಳ್ಳಬೇಕು. ಆರಂಭದಲ್ಲಿ ನಾವು ಪ್ರತಿದಿನ ಹತ್ತಿಪ್ಪತ್ತು ನಿಮಿಷ ನಮ್ಮ ಗಮನವನ್ನು ಉಸಿರಾಟದ ಮೇಲೆ ಹರಿಸಿ, ಚಿತ್ತೈಕಾಗ್ರತೆ ಇಂದ ಉಸಿರಾಟದಲ್ಲಿ ಸಾಕಷ್ಟು ಸುಧಾರಣಿಗಳನ್ನು ತಂದುಕೊಳ್ಳಬಹುದು. ಬೆನ್ನಮೇಲೆ ಮಲಗಿ ಹೊಟ್ಟೆ ಮೇಲೆ ಪುಸ್ತಕ ಇರಿಸಿ ಈ ಅಭ್ಯಾಸ ಮಾಡಬಹುದು. ಇಲ್ಲವೆ, ಕುಳಿತುಕೊಂಡು ಒಂದು ಕೈಯನ್ನು ಹೊಟ್ಟೆ ಮೇಲೆ, ಮತ್ತೊಂದು ಕೈಯನ್ನು ಎದೆ ಮೇಲೇ ಇರಿಸಿ ಅಭ್ಯಸಿಸಬಹುದು. ಪ್ರಾರಂಭದಲ್ಲಿ ನಮಗೆ ಕಾಣುವಂತೆ ಒಂದು ಗಡಿಯಾರವನ್ನು ಇರಿಸಿಕೊಳ್ಳುವುದು ಒಳ್ಳೆಯದು.

ಪ್ರ್ರಶಾಂತವಾದ, ಏಕಾಂತ ಸ್ಥಳವನ್ನು ಆಯ್ದುಕೊಳ್ಳಿ. ನಿಮ್ಮ ಕಣ್ಣಿಗೆ ಕಾಣುವಂತೆ ಸೆಕೆಂಡು ಮುಳ್ಳು ಇರುವ ಗಡಿಯಾರವನ್ನು ಇಟ್ಟುಕೊಳ್ಳಿ. ನಿಮ್ಮ ಉಡುಪು ಸಡಿಲವಾಗಿರಲಿ.
ಬೆನ್ನಮೇಲೆ ಮಲಗಿಕೊಳ್ಳಿ. ಹುಟ್ಟೆಮೇಲೆ ಹಗುರಾದ ಪುಸ್ತಕ ಇರಿಸಿ. ಚಿತ್ತೈಕಾಗ್ರತೆ ಇಂದ ನಿಧಾನವಾಗಿ ಆಳವಾದ ಉಸಿರನ್ನು ಎಳೆದುಕೊಳ್ಳಿ. ಹೊಟ್ಟೆ ಎದೆ ಉಸಿರಿನಿಂದ ತುಂಬಿದ ಅನಂತರ ಒಂದೆರಡು ಕ್ಷಣ ಉಸಿರನ್ನು ಹಾಗೇ ಹಿಡಿದುಕೊಳ್ಳಿ. ಅನಂತರ ನಿಧಾನ ನಿಧಾನವಾಗಿ ಉಸಿರನ್ನು ಹೊರಬಿಡಿ. ಉಸಿರಾಟದುದ್ದಕ್ಕೂ ಹೊಟ್ಟೆಯ ಮೇಲಿನ ಪಸ್ತಕ ಏರಿಳಿಯುವುದನ್ನು ಗಮನಿಸಿ.

ಆರಾಮವಾಗಿ ಕುಳಿತುಕೊಳ್ಳಿ. ಬಲಗೈಯನ್ನು ಹೊಟ್ಟೆಯ ಮೇಲಿಡಿ. ಎಡಗೈಯನ್ನು ಎದೆಯ ಮೇಲಿಡಿ. ಮೇಲಿನಂತೆ ನಿಧಾನವಾ ಆಳವಾಗಿ ಉಸಿರಾಡಿ. ಎಡಗೈ ನಿಶ್ಚಲವಾಗಿ, ಬಲಗೈ ಏರಿಳಿಯುತ್ತಿರುವುದನ್ನು ಗಮನಿಸಿ.
ಗಡಿಯಾರದಲ್ಲಿ ನಿಮ್ಮ ಶ್ವಾಸೋಚ್ಛಾ ಸದ ಗತಿಯನ್ನು ಲೆಕ್ಕ ಹಾಕಿ. ನಿಮ್ಮ ಉಸಿರಾಟ ನಿಮಿಷಕ್ಕೆ ಏಳು ಅಥವಾ ಎಂಟು ಬಾರಿ ಇರಬೇಕು.
ದೀರ್ಘಶ್ವಾಸೋಚ್ಛಾ ಸದ ಪ್ರಯೋಜನಗಳು:
ದೇಹಕ್ಕೆ ಅಧಿಕ ಆಮ್ಲಜನಕ ದೊರೆಯುತ್ತದೆ.
ದೇಹದ ಕಲ್ಮಶ (ಇಂಗಾಲ) ಸಂಪೂರ್ಣವಾಗಿ ವಿಸರ್ಜನೆಯಾಗುತ್ತದೆ.
ಹೃದಯದ ಮಿಡಿತ ಕಡಿಮೆಯಾಗುತ್ತದೆ. ಹೃದಯ ಗಟ್ಟಿಯಾಗುತ್ತದೆ.
ರಕ್ತದೊತ್ತಡ (ಬಿ. ಪಿ.) ಕಡಿಮೆಯಗುತ್ತದೆ.
ಮಾಂಸಖಂಡಗಳಿಗೆ ಸಡಿಲಗೊಂಡು ವಿರಮಿಸುವ ಅವಕಾಶ ಸಿಗುತ್ತದೆ.
ಮಾನಸಿಕ ಉದ್ವೇಗ, ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.
ಮನಸ್ಸು ಉಲ್ಲಾಸಗೊಳ್ಳುತ್ತದೆ, ಪ್ರಶಾಂತಗೊಳ್ಳುತ್ತದೆ.
ಆರೋಗ್ಯ ಉತ್ತಮವಾಗುತ್ತದೆ. ಆಯಷ್ಸು ಹೆಚ್ಚುತ್ತದೆ.

ವಿಳಾಸ: MAYOON N

DIRECTOR OF DRM CAREER BUILD CENTER

MANNAGER @ JEEVA SANJEEVANA NATURAL LIFE, KOLAR – 563101, ಕರ್ನಾಟಕ, ಭಾರತ.

About the author / 

DRM

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ, ಭವಿಷ್ಯ

    ದಿನ ಭವಿಷ್ಯ ಗುರುವಾರ..ಹೇಗಿದೆ ನೋಡಿ ಈ ದಿನದ ನಿಮ್ಮ ನಕ್ಷತ್ರ ಭವಿಷ್ಯ…ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಗುರುವಾರ, 12/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ ಸಂವತ್ಸರ (ಉತ್ತರ):ವಿರೋಧಿಕೃತ್ ತಿಂಗಳು (ಅಮಾವಾಸ್ಯಾಂತ್ಯ):ಚೈತ್ರ ತಿಂಗಳು (ಹುಣ್ಣಿಮಾಂತ್ಯ):ವೈಶಾಖ ಪಕ್ಷ : ಕೃಷ್ಣ ಪಕ್ಷ…

  • ಸ್ಪೂರ್ತಿ

    ತನ್ನ ಸಾಧನೆಯಿಂದಾಗಿ ಇಡೀ ದೇಶದ ಗಮನ ಸೆಳೆದ ಕೇವಲ ಎರಡೇ ವರ್ಷದ ಮೈಸೂರಿನ ಪುಟ್ಟ ಪೋರಿ..!

    ಬುದ್ದಿಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಇನ್ನೂ ಕೇವಲ ಎರಡು ವರ್ಷದ ಮಗುವೆ ಸಾಕ್ಷಿ. ಈ ಮಗುವಿನ ಬುದ್ದಿವಂತಿಕೆ ಅವಳ ವಯಸ್ಸಿಗೆ ಮೀರಿದ್ದು.ಕರ್ನಾಟಕದ ಸಾಂಸ್ಕೃತಿಕ ನಗರ ಎಂದೇ ಕರೆಯುವ ಮೈಸೂರಿನ ಪುಟ್ಟಪೋರಿ ಈಡೀ ದೇಹವೇ ಮೆಚ್ಚವಂತ ಸಾಧನೆ ಮಾಡಿದ್ದಾಳೆ. ತನ್ನ ವಯಸ್ಸಿಗೆ ಮೀರಿದ ಸಾಧನೆ ಮಾಡಿರುವ ಮೈಸೂರಿನ ಹಳ್ಳದಕೇರಿ ನಿವಾಸಿಯಾಗಿರುವ ಗಣೇಶ್ ಹಾಗೂ ನಯನ ದಂಪತಿಯ ಸುಪುತ್ರಿ ದ್ಯುತಿ ಎರಡೇ ವರ್ಷಕ್ಕೆ ಇಡೀ ಜಗತ್ತನ್ನು ಗೆದ್ದು ಬಿಗಿದ್ದಾಳೆ. ತನ್ನ ಬುದ್ಧಿ ಸಾಮಾರ್ಥ್ಯದಿಂದಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿ…

  • ಸುದ್ದಿ

    ಬಿಎಂಟಿಸಿ, ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಒಂದು ಬ್ರೇಕಿಂಗ್ ನ್ಯೂಸ್…!

    ಬೆಂಗಳೂರು: ಬಿಎಂಟಿಸಿ ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್ ಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ. 2018 ರ ಮಾರ್ಚ್ 23 ರಂದು 100 ಕಿರಿಯ ಸಹಾಯಕರ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ 6 ತಿಂಗಳ ಕಂಪ್ಯೂಟರ್ ತರಬೇತಿ ಪಡೆದಿರಬೇಕು. ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು ಎಂದು ತಿಳಿಸಲಾಗಿತ್ತು. 26 ಸಾವಿರಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಜೂನ್ 10 ರಂದು ಪರೀಕ್ಷೆ ಬರೆದಿದ್ದರು. ಮೂಲ ದಾಖಲಾತಿಗಳ ಪರಿಶೀಲನೆಗೆ 1:5 ಅನುಪಾತದಲ್ಲಿ…

  • ಸಿನಿಮಾ

    ಐಟಿ ದಾಳಿ ವೇಳೆ ಪುನೀತ್ ರಾಜಕುಮಾರ್ ಮನೆ ಮುಂದೆ ಸಚಿವ ಡಿಕೆ.ಶಿವಕುಮಾರ್ ಬಂದಿದ್ದೇಕೆ ಗೊತ್ತಾ..?

    ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಐಟಿ ದಾಳಿಗೆ ಸ್ಯಾಂಡಲ್ವುಡ್ ಗುರಿಯಾಗಿದೆ. ಹೌದು ಕನ್ನಡದ ಸ್ಟಾರ್ ನಟರು, ಹಾಗೂ ನಿರ್ಮಾಪಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು 24 ಗಂಟೆಗಳಿಂದ ಅಧಿಕಾರಿಗಳು ಆಸ್ತಿ ಪಾಸ್ತಿ ಕುರಿತಂತೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಿನ್ನೆ ಬೆಳಗ್ಗೆ ಬೆಂಗಳೂರಿನ ಸುಮಾರು 25 ಕಡೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಂಗದೂರು, ದಿ ವಿಲನ್ ನಿರ್ಮಾಪಕ ಸಿ.ಆರ್ ಮನೋಹರ್ ಹಾಗೂ ರಾಕ್ ಲೈನ್ ವೆಂಕಟೇಶ್, ಮತ್ತು…

  • ವ್ಯಕ್ತಿ ವಿಶೇಷಣ

    ‘ಗೂಗಲ್’ ಕಂಪನಿಯ ಸಿಇಒ ಭಾರತೀಯರಾದ ‘ಸುಂದರ್ ಪಿಚೈ ‘..!ಬಗ್ಗೆ ತಿಳಿಯಲು ಈ ಲೇಖನ ಓದಿ …

    ಸುಂದರ್‌ ಪಿಚೈ ಅವರು ಮೊದಲು ಕಂಪನಿಯ ಇಂಟರ್‌ ನೆಟ್‌ ವ್ಯವಹಾರವನ್ನು ಉನ್ನತಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಾಡಕ್ಟ್‌ ಮತ್ತು ಇಂಜಿನಿಯರಿಂಗ್‌ ವಿಭಾಗದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.

  • ವಿಸ್ಮಯ ಜಗತ್ತು

    ಇಂತಹ ಮೈ ಜುಮ್ಮೆನಿಸುವ ಶವ ಸಂಸ್ಕಾರ ನೀವು ಎಲ್ಲಿಯೂ ನೋಡಿಲ್ಲ, ಕೇಳಿಲ್ಲ!ಗುಂಡಿಗೆ ಇರೋರು ಮಾತ್ರ ಓದಿ…

    ಮರಣಾ ನಂತರದ ದೇಹದ ವಿಸರ್ಜನ ಕ್ರಿಯೆಗೆ ಅಂತ್ಯೇಷ್ಟಿ ಅಥವಾ ಅಂತಿಮ ಸಂಸ್ಕಾರ ಎಂದು ಕರೆಯಲಾಗುತ್ತದೆ.ನಮ್ಮ ಭಾರತ ದೇಶದಲ್ಲಿ ಅಂತ್ಯಸಂಸ್ಕಾರವು ಧರ್ಮದಿಂದ ಧರ್ಮಕ್ಕೆ ವಿಭಿನ್ನವಾಗಿರುತ್ತದೆ. ಆದರೆ ನಮ್ಮ ಪಕ್ಕದ ದೇಶವಾದ ಟಿಬೇಟಿನಲ್ಲಿ ವಿಚಿತ್ರ ರೀತಿಯ ಶವ ಸಂಸ್ಕಾರ ಮಾಡುತ್ತಾರೆ. ಸಾಮಾನ್ಯರು ಸತ್ತಾಗ ಹಳೆಯ ಟೈರು ಮತ್ತಿತರ ಉರಿಯುವ ವಸ್ತುಗಳನ್ನು ಉಪಯೋಗಿಸಿ ಶವದಹನ ಮಾಡುವ ಪದ್ಧತಿ ಇದು. ಎರಡನೆಯದು ಹೊಂಡ ತೆಗೆದು ಹೂಳುತ್ತಾರೆ.ಮೂರನೆಯದು ಸತ್ತ ಮೂರೂ ದಿನಗಳ ನಂತರ ಹೆಣವನ್ನು ಬಟ್ಟೆಯಲ್ಲಿ ಸುತ್ತಿ ನೀರಿನಲ್ಲಿ ಹಾಕುತ್ತಾರೆ. ನಾಲ್ಕನೆಯ ಶವ ಸಂಸ್ಕಾರ ಮಾಡುವ…