ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಿನನಿತ್ಯ ವ್ಯಾಯಾಮ, ಡಯಟ್, ಕಟ್ಟುನಿಟ್ಟಾದ ಆಹಾರ ಮಾಡಿದರೂ ಸಹ ಬೊಜ್ಜು ಕರಗುವುದಿಲ್ಲ. ಹಲವು ಪ್ರಯತ್ನ ಮಾಡಿದರು ಕೆಲವರಿಗೆ ಬೊಜ್ಜು ಕರಗಿಸಲು ಹಾಗುವುದಿಲ್ಲ. ಆದರೆ ಕೆಲವು ಹಣ್ಣುಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಬಹುದು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿದೆ. ಹೌದು ನಿಮಗೆ ಇಷ್ಟವಾದ ರುಚಿಕರವಾದ ಕೆಲವು ಹಣ್ಣುಗಳಿಂದ ಬೊಜ್ಜನ್ನು ಕರಗಿಸಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಈ ಹಣ್ಣುಗಳಲ್ಲಿ ನಮ್ಮ ದೇಹಕ್ಕೆ ಬೇಕಾದ ಆರೋಗ್ಯಕರ ಫೈಬರ್ ಮತ್ತು ಪೋಷಕಾಂಶಗಳಿರುತ್ತವೆ. ಈಗ ನಾವು ದಿನನಿತ್ಯ ಸೇವನೆ ಮಾಡುವ ಕೊಬ್ಬು ಕರಗಿಸುವ ಹಣ್ಣುಗಳ ಮಾಹಿತಿಯನ್ನ ತಿಳಿಯೋಣ.
ಬಾಳೆಹಣ್ಣು : ಬಾಳೆಹಣ್ಣು ಹಸಿವನ್ನು ಕಡಿಮೆ ಮಾಡಿ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಅಲ್ಲದೆ ಬಾಳೆಹಣ್ಣಿನಲ್ಲಿ ಫೈಬರ್ ಮತ್ತು ಪೊಟ್ಯಾಶಿಯಮ್ ನಂತಹ ಖನಿಜಗಳು ಸಮೃದ್ಧವಾಗಿವೆ. ಆರೋಗ್ಯಕರವಾಗಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

ಪೇರಲೆಹಣ್ಣು : ತೂಕವನ್ನು ಕಡಿಮೆ ಮಾಡಿಕೊಳ್ಳಲು ರುಚಿಕರವಾದ ಈ ಹಣ್ಣು ಪೇರಲೆ ಕೂಡ ಸಹಾಯ ಮಾಡುತ್ತದೆ. ಇತರ ಹಣ್ಣುಗಳಿಗೆ ಹೋಲಿಸಿದರೆ ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಆದ್ದರಿಂದ ಮಧುಮೇಹಿಗಳು ಸಹ ಇದನ್ನು ಸೇವಿಸಬಹುದು. ಈ ಪೇರಲೆ ಹಣ್ಣು ತೂಕವನ್ನು ನಷ್ಟ ಹಾಗೂ ಆರೋಗ್ಯಕರ ತಿಂಡಿ ಎನ್ನಲಾಗುತ್ತದೆ.

ಕಿತ್ತಳೆಹಣ್ಣು : ಆರೋಗ್ಯಕರವಾಗಿ ತೂಕವನ್ನು ನಷ್ಟಮಾಡಿಕೊಳ್ಳಲು ಬಯಸುವವರಿಗೆ ಕಿತ್ತಳೆ ಹಣ್ಣು ಸಹಾಯಕಾರಿ. ಇದರಲ್ಲಿ ಫೈಬರ್ ಸಮೃದ್ಧವಾಗಿ ಪೆಕ್ಟಿನ್, ಲಿಗ್ನಿನ್ ಮತ್ತು ಸೆಲ್ಯುಲೋಸ್ ಎಂಬ ಪದಾರ್ಥಗಳಿರುತ್ತವೆ. ಕಿತ್ತಳೆ ಹಣ್ಣು ತಿನ್ನುವುದರಿಂದ ಮಲಬದ್ಧತೆಯನ್ನು ನಿವಾರಣೆ ಮಾಡಿ ಹೊಟ್ಟೆ ಹುಬ್ಬುವುದನ್ನು ಕಡಿಮೆಮಾಡುತ್ತದೆ.

ಸ್ಟ್ರಾಬೆರಿ : ವಿಟಮಿನ್ ಸಿ, ಫೈಬರ್ , ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಮ್ ನಂತಹ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಚಯಾಪಚಯ ಕ್ರಿಯೆಗೆ, ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ.

ಪ್ಲಮ್ : ಸಿಹಿ ರುಚಿಗೆ ಹೆಸರುವಾಸಿಯಾದ ಪ್ಲಮ್ ಪೌಷ್ಠಿಕಾಂಶದಿಂದ ತುಂಬಿರುತ್ತದೆ. ಇದರಲ್ಲಿ ಹೆಚ್ಚಿನ ಮಟ್ಟದ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಸೇರಿವೆ. ದೇಹವನ್ನು ಹೈಡ್ರೇಟ್ ಮಾಡಲು, ತೂಕ ಇಳಿಸಲು ಬಯಸುವವರು ಈ ಹಣ್ಣನ್ನು ಸೇವಿಸಬಹುದು.

ಅನಾನಸ್ : ತೂಕ ಇಳಿಸುವ ಹಣ್ಣುಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ ಅನಾನಸ್. ಇದು ಫೈಬರ್ ನಿಂದ ಕೂಡಿದ್ದು, ಉತ್ತಮ ಜೀರ್ಣಕ್ರಿಯೆಗೆ, ಸುಲಭವಾಗಿ ವಿಷ ಹೊರಹಾಕಲು ಸಹಾಯ ಮಾಡುತ್ತದೆ. ನಿಮ್ಮ ಹಸಿವನ್ನೂ ನೀಗಿಸುತ್ತದೆ.

ಕಲ್ಲಂಗಡಿ : ಕಲ್ಲಂಗಡಿ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಇದ್ದು, 90% ನಷ್ಟು ನೀರಿನ ಅಂಶವನ್ನು ಹೊಂದಿರುತ್ತದೆ. ಇದರಲ್ಲಿ ಅಮೈನೊ ಆಸಿಡ್ ಅರ್ಜಿನೈನ್ ಎಂಬ ಏಜೆಂಟ್ ಇದ್ದು, ಪರಿಣಾಮಕಾರಿಯಾಗಿ ಕೊಬ್ಬು ಸುಡಲು ಸಹಾಯ ಮಾಡುತ್ತದೆ.

ಟೊಮೆಟೊ : ಕೊಬ್ಬನ್ನು ಕಡಿಮೆ ಮಾಡುವ ಹಣ್ಣುಗಳಲ್ಲಿ ಟೊಮೆಟೊ ಕೂಡ ಒಂದು. ಟೊಮೆಟೊದಲ್ಲಿ ಪ್ರಮುಖ ಅಮೈನೋ ಆಮ್ಲಗಳು, ಫೈಬರ್ ಮತ್ತು ಇತರ ಪೋಷಕಾಂಶಗಳಿದ್ದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಉತ್ತಮ ಪ್ರಮಾಣದ ಸಿಟ್ರಿಕ್ ಆಮ್ಲವನ್ನು ಸಹ ಹೊಂದಿದ್ದು, ಪರಿಣಾಮಕಾರಿಯಾಗಿ ಕೊಬ್ಬನ್ನು ಸುಡುತ್ತದೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಗ್ 6ನೇ ಆವೃತ್ತಿ ಯಶಸ್ವಿಯಾಗಿ ಮುಗಿದಿದ್ದು ಮಾಡರ್ನ್ ರೈತ ಶಶಿಕುಮಾರ್ ವಿನ್ನರ್, ಗಾಯಕ ನವೀನ್ ಸಜ್ಜು ರನ್ನರಪ್ ಆಗಿ ಹೊರಬಂದಿದ್ದಾರೆ.ಬಿಗ್ ಬಾಸ್ ಸೀಸನ್ ಆರರ ಸ್ಪರ್ಧಿ, ಟಾಪ್ ೫ ಫೈನಲಿಸ್ಟ್ ಗಳಲ್ಲಿ ಒಬ್ಬರಾದ ರ್ಯಾಪಿಡ್ ರಶ್ಮಿ ಅವರು ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯ ಕಥೆಯನ್ನು ಬಿಚ್ಚಿಟ್ಟಿದ್ದಾರೆ.. ಇನ್ನು ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಇದ್ದ ರ್ಯಾಪಿಡ್ ರಶ್ಮಿ ಟಾಪ್ 5 ಕಂಟೆಸ್ಟಂಟಾಗಿ ಎಲಿಮಿನೇಟ್ ಆಗಿ ಹೊರಬಂದಿದ್ದು ಇದೇ ಮೊದಲ…
ಕೇವಲ ತನ್ನ ಬಣ್ಣದ ಕಾರಣ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ತರಕಾರಿ ಎಂದರೆ ಬೀಟ್ರೂಟ್. ಹೆಚ್ಚಿನವರು ಕೆಂಪು ಬಣ್ಣವನ್ನು ತಮ್ಮ ಊಟದಲ್ಲಿ ಇಷ್ಟಪಡದಿರುವುದೇ ಇದಕ್ಕೆ ಕಾರಣ. ವಾಸ್ತವವಾಗಿ ಜೀವ ಉಳಿಸುವ ಔಷಧಿ ಕಹಿಯಿರುವಂತೆ ಬಣ್ಣದಲ್ಲಿ ಆಕರ್ಷಕವಲ್ಲದಿದ್ದರೂ ಪೋಷಕಾಂಶಗಳ ಆಗರವಾಗಿರುವ ಬೀಟ್ರೂಟ್ ಅನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು
ಆನ್ಲೈನ್ ಮಾರುಕಟ್ಟೆ ಇಂದಿನ ದಿನದಲ್ಲಿ ಮೊಬೈಲ್ ಫೋನ್ಗಳ ಮಾರಾಟವನ್ನು ಹೆಚ್ಚು ಮಾಡುತ್ತಿದೆ. ವಿವಿಧ ಆಫರ್ಗಳು, ಹೊಸ ಫೋನ್ ಲಾಂಚ್ ಗಳು ಸೇರಿದಂತೆ ಎಕ್ಸ್ಕ್ಲೂಸಿವ್ ಸೇಲ್ಗಳು ಸೇರಿದಂತೆ ಅನೇಕ ಆಫರ್ ಗಳು ಲಭ್ಯವಿದೆ.
ಅಭಿಮಾನಿಗಳೇ ಹಾಗೆ ತಮ್ಮ ನೆಚ್ಚನ ನಟನಿಗಾಗಿ ಏನಾದ್ರೂ ಮಾಡಲು ತಯಾರಿರುತ್ತಾರೆ.ತಮ್ಮ ನೆಚ್ಚಿನ ನಟನ ಚಿತ್ರಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಒಂದು ವೇಳೆ ತಮ್ಮ ನೆಚ್ಚಿನ ನಟನನ್ನು ಒಂದು ಬಾರಿ ಭೇಟಿ ಮಾಡಿಬಿಟ್ಟರೆ ಅವರ ಜೀವನ ಸಾರ್ಥಕ ಆದಂತೆ ಅನ್ನುವಷ್ಟು ಮಟ್ಟಿಗೆ ಇಷ್ಟಪಡುವವರಿದ್ದಾರೆ. ಆದರೆ ಆಂಧ್ರದ ವಿಜಯವಾಡದ ತಮ್ಮ ನೆಚ್ಚಿನ ನಟನ ಅಭಿಮಾನಿಯೊಬ್ಬ ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿರುವ ಇದಕ್ಕೆ ಹುಚ್ಚು ಅಭಿಮಾನ ಅನ್ನಬೇಕೋ, ಅತಿರೇಕದ ಅಭಿಮಾನ ಅನ್ನಬೇಕೋ ಗೊತ್ತಿಲ್ಲ.ತಾವು ಪ್ರೀತಿಸೋ ಆರಾಧಿಸುವ ಸ್ಟಾರ್…
ಹೆಚ್ಚಿನ ಜನರು ಫೋನ್ ಹ್ಯಾಂಗ್ಗಳ ಸಮಸ್ಯೆಯಿಂದ ಅಥವಾ ನಿಧಾನವಾಗಿರುವುದರಿಂದ ತೊಂದರೆಗೀಡಾಗುತ್ತಾರೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀವು ಸಹ ಈ ರೀತಿಯ ತೊಂದರೆಯಿಂದ ಬಳಲುತ್ತಿದ್ದರೆ, ಈ ಸಮಸ್ಯೆಯಿಂದ ನಿಮಗೆ ಮುಕ್ತಿ ನೀಡಲು ಐದು ಕ್ರಮಗಳನ್ನು ಅನುಸರಿಸಿ. ಈ ಕ್ರಮಗಳೊಂದಿಗೆ ನಿಮ್ಮ ಫೋನ್ ಸ್ಥಗಿತಗೊಳ್ಳುವುದನ್ನು ಅಥವಾ ನಿಧಾನಗೊಳಿಸುವುದನ್ನು ಸಹ ನೀವು ನಿಲ್ಲಿಸಬಹುದು. ಕೆಲವೊಮ್ಮೆ ಫೋನ್ನ ಮೆಮೊರಿ ತುಂಬಿರುತ್ತದೆ. ಆದ್ದರಿಂದ ಫೋನ್ ನಿಧಾನವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಫೋನ್ನ ಆಂತರಿಕ ಸ್ಥಳದ ಹೊರತಾಗಿ, ಫೋನ್ ನಿಧಾನವಾಗಲು ಫೋನ್ನ RAM ಸಹ ಕಾರಣವಾಗಿದೆ. ನಿಮ್ಮ ಫೋನ್…
ಒಂದೆಡೆ ಹಲವಾರು ರೋಗಗಳಿಗೆ ಹೊಸ ಹೊಸ ಮದ್ದುಗಳನ್ನು ಕಂಡುಹಿಡಿಯಲಾಗುತ್ತಿದ್ದರೆ ಮತ್ತೊಂದೆಡೆ ನೆಲದಲ್ಲಿ ಎದುರಾಗಲಿರುವ ಜಾಗದ ಕೊರತೆಯನ್ನು ನೀಗಿಸಲು ಬಾನಂಚಿನಲ್ಲಿ ಬೇರೆ ನೆಲೆಗಳನ್ನು ಹುಡುಕುವಂತ ಕೆಲಸಗಳು ನಡೆಯುತ್ತಿವೆ.