ಉಪಯುಕ್ತ ಮಾಹಿತಿ

1 ಕಿಲೋ ಮೀಟರ್ ರೈಲು ಹಳಿಯನ್ನ ಜೋಡಿಸಲು ಬೇಕಾಗುವ ಹಣ ಎಷ್ಟು. ನೋಡಿ ರೈಲು ಹಳಿಯ ಸೀಕ್ರೆಟ್.

64

ನಮ್ಮ ದೇಶದಲ್ಲಿ ತುಂಬಾ ಜನರು ರೈಲು ಪ್ರಯಾಣವನ್ನ ಮಾಡೇ ಇರುತ್ತಾರೆ, ರೈಲು ಪ್ರಯಾಣ ಕೆಲವರಿಗೆ ಕಡಿಮೆ ಖರ್ಚಿನದ್ದು ಆಗಿದ್ದರೆ ಇನ್ನು ಕೆಲವರಿಗೆ ಅದೂ ಅವಿಸ್ಮರಣೀಯ ಅನುಭವವನ್ನ ಕೊಡುತ್ತದೆ. ಇನ್ನು ಕೆಲವರು ರೈಲಿನಲ್ಲಿ ಪ್ರಯಾಣ ಮಾಡದೇ ಇದ್ದರೂ ಕೂಡ ರೈಲನ್ನಾದರೂ ನೋಡಿರುತ್ತಾರೆ. ಇನ್ನು ಜನರಿಗೆ ರೈಲುಗಳ ಬಗ್ಗೆ ಮತ್ತು ರೈಲು ಚಾಲಕರ ಬಗ್ಗೆ ಮಾಹಿತಿ ಎಲ್ಲರಿಗೂ ತಿಳಿದಿರುತ್ತದೆ ಆದರೆ ರೈಲು ಹಳಿಗಳ ಬಗ್ಗೆ ಮತ್ತು ಅದನ್ನ ಮಾಡಲು ತಗುಲುವ ಖರ್ಚಿನ ಮತ್ತು ಒಂದು ಕಿಲೋ ಮೀಟರ್ ರೈಲು ಹಳಿಯನ್ನ ಜೋಡಿಸುವುದಕ್ಕೆ ಎಷ್ಟು ಹಣ ಬೇಕಾಗುತ್ತದೆ ಎಂದು ತುಂಬಾ ಜನರಿಗೆ ತಿಳಿದಿರುವುದಿಲ್ಲ. ಹಾಗಾದರೆ ಒಂದು ಕಿಲೋ ಮೀಟರ್ ರೈಲು ಹಳಿಯನ್ನ ಜೋಡಣೆ ಮಾಡುವುದಕ್ಕೆ ಎಷ್ಟು ಹಣ ಬೇಕಾಗುತ್ತದೆ ಅನ್ನುವುದರ ಬಗ್ಗೆ ತಿಳಿಯೋಣ.

ಹೌದು ಈ ರೈಲುಗಳು ಅಂದರೇನೇ ಹಾಗೆ ಅದರ ಬಗ್ಗೆ ತಿಳಿದುಕೊಳ್ಳಬೇಕು ಅನ್ನುವ ಕೂತೂಹಲ ಎಲ್ಲರಿಗೂ ಇರುತ್ತದೆ, ಕಡಿಮೆ ಖರ್ಚಿನಲ್ಲಿ ಕೋಟ್ಯಾಂತರ ಭಾರತೀಯರಿಗೆ ಸೇವೆಯನ್ನ ಕೊಡುತ್ತಿರುವ ಈ ರೈಲುಗಳು ಸಂಚಾರವನ್ನ ಮಾಡಬೇಕು ಅಂದರೆ ಹಳಿಗಳು ತುಂಬಾ ಮುಖ್ಯ. ಇನ್ನು ಪ್ರಯಾಣಕ್ಕೆ ಹಳಿಗಳು ತುಂಬಾ ಮುಖ್ಯವಾದ ಕಾರಣದಿಂದ ಸರ್ವಕಾಲಕ್ಕೆ ಅನುಗುಣವಾಗುವ ಅತ್ಯಂತ ಸುರಕ್ಷಿತ ಹಾಗು ದಕ್ಷವಾದ ರೈಲು ಹಳಿಗಳನ್ನ ನಿರ್ಮಾಣ ಮಾಡುತ್ತದೆ ನಮ್ಮ ಭಾರತ ಸರ್ಕಾರದ ರೈಲ್ವೆ ಇಲಾಖೆ. ಇನ್ನು ನಮ್ಮ ಭಾರತದಲ್ಲಿ ಒಂದು ಕಿಲೋ ಮೀಟರ್ ರೈಲು ಹಳಿಯನ್ನ ನಿರ್ಮಾಣ ಮಾಡಬೇಕು ಅಂದರೆ ಕೋಟ್ಯಾಂತರ ರೂಪಾಯಿ ಹಣ ಬೇಕಾಗುತ್ತದೆ.

ಇನ್ನು ಡಬಲ್ ಟ್ರ್ಯಾಕ್ ಹೊಂದಿರುವ ಒಂದು ಕಿಲೋ ಮೀಟರ್ ರೈಲು ಹಳಿಯನ್ನ ಹಾಕಲು ತಗುಲುವ ವೆಚ್ಚ ಸುಮಾರು 2 ರಿಂದ 3 ಕೋಟಿ ಹಣ ಬೇಕಾಗುತ್ತದೆ ಎಂದು ಹೇಳುತ್ತದೆ ಭಾರತೀಯ ಸಿವಿಲ್ ಇಂಜಿನಿಯರಿಂಗ್ ಹಾಗು ಇತರೆ ರೈಲ್ವೆ ಇಲಾಖೆಯ ಕಂಪನಿಗಳು. ಇನ್ನು ಇದರಲ್ಲಿ ರೈಲ್ವೆ ಹಳಿಗಳು, ಮೆಕಾನಿಕಲ್ ಕೆಲಸಗಳು ಮತ್ತು ಕಾರ್ಮಿಕರ ವೆಚ್ಚ ಎಲ್ಲವೂ ಕೂಡ ಸೇರಿರುತ್ತದೆ. ಇನ್ನು ಕೆಲವು ಕಡೆ ಸೇತುವೆ ಮತ್ತು ಅಂಡರ್ ಪಾಸ್ ಗಳನ್ನ ನಿರ್ಮಾಣ ಮಾಡಬೇಕಾಗಿರುವುದರಿಂದ ಸರಾಸರಿಯಾಗಿ ಇಷ್ಟು ಹಣ ಬೇಕು ಎಂದು ಹೇಳಲಾಗಿದೆ.

ಇನ್ನು ಸಮತಟ್ಟಾದ ಪ್ರದೇಶಗಳಿಗೆ ಖರ್ಚು ಕಡಿಮೆ ಬರಬಹುದು ಮತ್ತು ಗುಡ್ಡಗಾಡು ಪ್ರದೇಶ, ಅಂಡರ್ ಪಾಸ್ ಮತ್ತು ಸೇತುವೆಯನ್ನ ಮಾಡುವ ವೇಳೆಯಲ್ಲಿ ಖರ್ಚುಗಳು ಸ್ವಲ್ಪ ಜಾಸ್ತಿ ಬರಬಹುದು ಬರಬಹುದು. ಇನ್ನು ಒಟ್ಟಾರೆಯಾಗಿ 2 ರಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಕಿಲೋ ಮೀಟರ್ ಡಬಲ್ ಟ್ರ್ಯಾಕ್ ರೈಲು ಹಳಿಗಳು ನಿರ್ಮಾಣ ಆಗುತ್ತದೆ. ನಮ್ಮ ಭಾರತೀಯರಿಗೆ ಅತೀ ಕಡಿಮೆ ವೆಚ್ಚದಲ್ಲಿ ರೈಲು ಪ್ರಯಾಣದ ಸೇವೆಯನ್ನ ಒದಗಿಸುತ್ತಿರುವ ಸಾರಿಗೆ ಅಂದರೆ ನಮ್ಮ ಭಾರತೀಯ ರೈಲ್ವೆ ಮಾತ್ರ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ, ದೇಶ-ವಿದೇಶ

    ಪ್ರಧಾನಿ ನರೆಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಬಗ್ಗೆ ನಿಮಗೆ ಗೊತ್ತಾ..? ತಿಳಿಯಲು ಈ ಲೇಕನ ಓದಿ…

    ಪ್ರಧಾನಿ ನರೆಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಗೆ ಗುರುವಾರ ಶಂಕುಸ್ಥಾಪನೆ ನಡೆಯಲಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಮೋದಿ ಅವರು ಅಹಮದಾಬಾದ್‍ನಲ್ಲಿ ಅಡಿಗಲ್ಲು ಹಾಕುವ ಮೂಲಕ ಯೋಜನೆಗೆ ಚಾಲನೆ ಸಿಗಲಿದೆ.ಇದರ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

  • Animals

    ಆನೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳು

    ಪ್ರಾಣಿಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ  ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು 2 ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ: , ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ  ಆನೆ. ಇವುಗಳಲ್ಲಿ ಮೊದಲೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಸಹ ಕರೆಯುವುದು ವಾಡಿಕೆ. ಏಷ್ಯಾದ ಆನೆಯನ್ನು ಭಾರತದ ಆನೆ ಎಂದು ಸಹ ಕರೆಯಲಾಗುತ್ತದೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ (ದೈತ್ಯ ಆನೆ) ಬಲು…

  • ಸುದ್ದಿ

    ಚಳ್ಳಕೆರೆಯ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಪ್ರಯತ್ನ…..!

    ಒಂದೇ ಕುಟುಂಬದ ಐವರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗದ ಚಳ್ಳಕೆರೆಯ ನೆಹರು ಸರ್ಕಲ್ ಬಳಿ ನಡೆದಿದೆ. ಮೂವರು ಅಪ್ರಾಪ್ತ ಮಕ್ಕಳು ಸೇರಿದಂತೆ ಶಿಲ್ಪಾ ಹಾಗೂ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಐವರು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಗ್ರಾಮದ ನಿವಾಸಿಗಳಾಗಿದ್ದು, ಖಾಲಿ ನಿವೇಶನದ ಹಕ್ಕು ಪತ್ರ ಮಾಡಿಕೊಡದೆ ಆರು ತಿಂಗಳಿಂದ ಸತಾಯಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗ್ರಾಮ ಪಂಚಾಯ್ತಿ ಪಿಡಿಓ ಪ್ರತಿಭಾ ಹಾಗೂ ಬಿಲ್ ಕಲೆಕ್ಟರ್ ಮಂಜುನಾಥ್ ನಿರ್ಲಕ್ಷ್ಯಕ್ಕೆ ಮನನೊಂದು ಕುಟುಂಬ ಈ ನಿರ್ಧಾರ…

  • ಉಪಯುಕ್ತ ಮಾಹಿತಿ

    ಗೊರಕೆ ಸಮಸ್ಯೆಯಿಂದ ನೀವೂ ಬಳಲುತ್ತಿದ್ದರೆ,ಈ ಕ್ರಮಗಳನ್ನು ಪಾಲಿಸಿ…ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

    ಪಕ್ಕದಲ್ಲಿರುವವರ ನಿದ್ದೆ ಹಾಳು ಮಾಡುವ ಸುಲಭ ಉಪಾಯ ಗೊರಕೆ. ನಿದ್ದೆಯಲ್ಲಿ ಗೊರಕೆ ಸಾಮಾನ್ಯ. ಆದ್ರೆ ಪಕ್ಕದಲ್ಲಿ ಮಲಗಿರುವವರಿಗೆ ಈ ಗೊರಕೆ ಕಿರಿಕಿರಿಯನ್ನುಂಟು ಮಾಡುತ್ತೆ.ನಿಮ್ಮ ಈ ಗೊರಕೆಗೆ ಕಾರಣಗಳೇನು ಗೊತ್ತೇ? ತೂಕ ನಷ್ಟ ಮತ್ತು ವ್ಯಾಯಾಮ :- ಅತಿಯಾದ ತೂಕ ಅಥವಾ ದೊಡ್ಡ ಕುತ್ತಿಗೆ ಸುತ್ತಳತೆ ಹೊಂದುವ ಕೊಬ್ಬುನ್ನು ಕರಗಿಸುವುದು, ಹಾಗೂ ಪ್ರತಿನಿತ್ಯ ವ್ಯಾಯಾಮ ಪ್ರಾರಂಭಿಸುವುದು, ಇವೆಲ್ಲವೂ ಗಮನಾರ್ಹವಾಗಿ ಅನೇಕ ವ್ಯಕ್ತಿಗಳಲ್ಲಿ ಗೊರಕೆ ಕಡಿಮೆ ಮಾಡಲು ಸಹಕಾರಿಯಾಗುತ್ತವೆ.   ಮಲಗುವ ಸ್ಥಿತಿ ಬದಲಿಸಿ :- ಒಂದು ಬದಿಯಲ್ಲಿ ನಿದ್ರಿಸುವುದನ್ನು…

  • ಆರೋಗ್ಯ, ಉಪಯುಕ್ತ ಮಾಹಿತಿ

    ಕೊತ್ತಂಬರಿ ಸೊಪ್ಪಿನಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

    ಕೊತ್ತಂಬರಿ ಸೊಪ್ಪು….ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆ ಮನೆಯಲ್ಲೂ ಇದ್ದೇ ಇರುತ್ತೆ. ಅಗ್ಗವಾಗಿ ಸಿಗುವ ಈ ಸೊಪ್ಪು ನೀಡುವ ರುಚಿ ಮಾತ್ರ ಅಮೋಘ. ಹಚ್ಚ ಹಸಿರಾಗಿರುವ ಕೊತ್ತಂಬರಿ ಸೊಪ್ಪಿನ ಔಷಧೀಯ ಗುಣಗಳ ಬಗ್ಗೆ ಕೇಳಿದರೆ ನೀವು ಬೆರಗಾಗೋದು ಖಂಡಿತ. ಕೊತ್ತಂಬರಿ ಸೊಪ್ಪು ಚರ್ಮದ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನೂ ಹೊಂದಿದೆ. ಜೊತೆಗೆ ಚರ್ಮದ ಮೇಲಿನ ಶೀಲೀಂದ್ರ ಸೋಂಕುಗಳನ್ನೂ ಸಹ ಕೊತ್ತಂಬರಿ ಸೊಪ್ಪು ನಿವಾರಿಸುತ್ತದೆ. ಮೌತ್ ಅಲ್ಸರ್ ಅಥವಾ ಬಾಯಿಯಲ್ಲಾಗುವ ಉಷ್ಣದ ಗುಳ್ಳೆಗಳನ್ನೂ ಕೊತ್ತಂಬರಿ ಸೊಪ್ಪು…

  • ಗ್ಯಾಜೆಟ್

    ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನಿನ ಫ್ಯೂಚರ್ಸ್ ಹಾಗೋ ಡಿಸ್ಕೌಂಟ್ ವಿವರವನ್ನು ಕನ್ನಡದಲ್ಲಿ ತಿಳಿಯಿರಿ..!

    ಆನ್‌ಲೈನಿನಲ್ಲಿ ಮಾರಕಟ್ಟಗೆ ಬಂದ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನು ಈ ಹಿಂದಿನ ನೋಟ್ 3 ಮಾರಾಟದ ದಾಖಲೆಯನ್ನು ಅನಾಯಸವಾಗಿ ಆಳಿಸಿ ಹಾಕಿತ್ತು. ಮೂರು ವಿಧದಲ್ಲಿ ಈ ಪೋನು ಲಭ್ಯವಿದ್ದು, 4 GB RAM ಮತ್ತು 64 GB ROM ಮಾದರಿಗಳಲ್ಲಿ ಮಾರಾಟವಾಗುತ್ತಿದೆ….