ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಿತ್ರ ರಂಗದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಅವರಿದ್ದ ಜಾಗಕ್ಕೆ ಇವರು ಕಾಲಿಡುವುದೂ ಇಲ್ಲ. ವೃತ್ತಿ ಮತ್ಸರದಿಂದ ಬದುಕುವವರೇ ಜಾಸ್ತಿ ಅಂತ ನಾವೆಲ್ಲರೂ ಮಾತನಾಡುತ್ತೇವೆ ಮತ್ತು ಅವರು ಸಹ ಹಾಗೆಯೇ ಇರುತ್ತಾರೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ಚಿತ್ರರಂಗ ವಲಯದಿಂದ ಸಹ ಮಾತುಗಳು ಕೇಳಿಬರುತ್ತವೆ. ಆದರೆ, 80ರ ದಶಕದ ತಾರೆಯರು ಈ ಮಾತನ್ನು ಸುಳ್ಳು ಮಾಡಿದ್ದಾರೆ. ಇದಕ್ಕೆ ಸಾಕ್ಷಿ ‘ಮೆಗಾ ಸ್ಟಾರ್’ ಚಿರಂಜೀವಿ, ಅವರ ಮನೆಯಲ್ಲಿ ನಡೆದ ಪಾರ್ಟಿಯೇ ಸಾಕ್ಷಿ. ಪ್ರತಿವರ್ಷ 80ರ ದಶಕದ ದಕ್ಷಿಣ ಭಾರತದ ಕಲಾವಿದರನ್ನು ಮನೆಗೆ ಆಹ್ವಾನಿಸಿ, ಪಾರ್ಟಿ ಮಾಡುವ ಕಾರ್ಯಕ್ರವನ್ನು ನಡೆಸಿಕೊಂಡು ಬಂದಿದ್ದಾರೆ ಚಿರು. ಅಂತೆಯೇ ಅವರ ಮನೆಯಲ್ಲಿ ಅನೇಕ ತಾರೆಯರು ಆಗಮಿಸಿ, ಹಳೆಯ ಕ್ಷಣಗಳನ್ನು ನೆನೆದಿದ್ದಾರೆ. ಯಂಗ್ ಜನರೇಷನ್ಗಿಂತ ನಾವೇನು ಕಮ್ಮಿ ಇಲ್ಲ ಎನ್ನುವಂತೆ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸಂಸದೆ ಸುಮಲತಾ ಅಂಬರೀಷ್,ರಮೇಶ್ ಅರವಿಂದ್ ಸೇರಿದಂತೆ ಅನೇಕರು ಅಲ್ಲಿ ಹಾಜರಿದ್ದರು.
ತಮ್ಮ ಸಮಕಾಲೀನ ಕಲಾವಿದರನ್ನೆಲ್ಲ ಮನೆಗೆ ಕರೆಸಿಕೊಂಡು ಚಿರಂಜೀವಿ ಅವರ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಲೈಕ್ಸ್ ಸಿಕ್ಕಿವೆ.3 ದಶಕಗಳಿಂದಲೂ ಇತರೆ ಕಲಾವಿದರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರ ನಡೆಗೆ ಎಲ್ಲೆಡೆ ಮೆಚ್ಚುಗೆ ಸಿಕ್ಕಿದೆ. ಅಪ್ಪನಿಗೆ ಸಹಾಯಕವಾಗಿ ನಟ ರಾಮ್ ಚರಣ್ ಕೂಡ ಇದ್ದರು. ನಟಿ ಖುಷ್ಬೂ ತಮಿಳು, ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ, ಚಿರು ಜತೆ ನಟಿಸಿದ್ದು2006ರಲ್ಲಿ ತೆರೆಕಂಡ ‘ಸ್ಟಾಲಿನ್’ ಸಿನಿಮಾದಲ್ಲಿ ಮಾತ್ರ. ಅದು ಪೋಷಕ ಪಾತ್ರದಲ್ಲಿ! ಜೊತೆಗೆ ಸಿನಿಮಾಗಳನ್ನು ಮಾಡದಿದ್ದರೂ,
ನಟಿ, ಸಂಸದೆ ಸುಮಲತಾ ಅಂಬರೀಷ್,ಕನ್ನಡದ ಜೊತೆಗೆ ತೆಲುಗಿನಲ್ಲೂ ಸಖತ್ ಫೇಮಸ್ ಆಗಿದ್ದವರು. 80ರ ದಶಕದಲ್ಲಿ ಚಿರಂಜೀವಿ ಜತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಜಪಗತಿ ಬಾಬು, ವಿಕ್ಟರಿ ವೆಂಕಟೇಶ್, ರಾಧಿಕಾ ಶರತ್ಕುಮಾರ್ ಜತೆ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಚಿರು-ಖುಷ್ಬೂ ನಡುವಿನ ಒಡನಾಟ ಮಾತ್ರ ಹಾಗೆಯೇ ಇದೆ. ಅದಕ್ಕೆ ಸಾಕ್ಷಿ ಈ ಕ್ಯೂಟ್ ಸೆಲ್ಫಿ.ಕೇರಳದಲ್ಲಿ ಮೋಹನ್ಲಾಲ್ ಸೂಪರ್ ಸ್ಟಾರ್. ಟಾಲಿವುಡ್ನಲ್ಲಿ ಚಿರಂಜೀವಿ ಮೆಗಾ ಸ್ಟಾರ್. ಈ ಇಬ್ಬರು ಕಲಾವಿದರು ಒಂದೇ ಫ್ರೇಮ್ನಲ್ಲಿ ಸೆರೆ ಸಿಕ್ಕಿದ್ದಾರೆ. ಅದಕ್ಕೆ ಕಾರಣವಾಗಿದ್ದು ಚಿರು ಮನೆಯ ಪಾರ್ಟಿ.
ಮಲಯಾಳಂ ‘ಸೂಪರ್ ಸ್ಟಾರ್’ ಮೋಹನ್ಲಾಲ್ ಜತೆ ನಟಿ ರಾಧಿಕಾ ಶರತ್ಕುಮಾರ್ ಗೆಳೆತನ ಇಂದು ನಿನ್ನೆಯದಲ್ಲ. 1985ರಲ್ಲೇ ಈ ಇಬ್ಬರು ಕಲಾವಿದರು ಒಟ್ಟಿಗೆ ‘ಕೂಡುಮ್ ಥೇಡಿ’ ಚಿತ್ರದಲ್ಲಿ ನಟಿಸಿದ್ದರು. ವಿಶೇಷವೆಂದರೆ, ಕಳೆದ ಸೆಪ್ಟಂಬರ್ನಲ್ಲಿ ತೆರೆಕಂಡ ‘ಇಟ್ಟಿಮಾನಿ; ಮೇಡ್ ಇನ್ ಚೀನಾ’ ಚಿತ್ರದಲ್ಲೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಚಿರು ಮನೆಯ ಪಾರ್ಟಿಯಲ್ಲಿ ಕ್ಯಾಮರಾಕ್ಕೆ ಜೊತೆಯಾಗಿ ಕಾಣಿಸಿಕೊಂಡ ಕ್ಷಣ.ಚಿರು ಮನೆಯಲ್ಲಿ 80ರ ದಶಕ ರಿ-ಯೂನಿಯನ್ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನಸೆಳೆದ ನಟಿ ಖುಷ್ಬೂ. ಈ ವೇಳೆ ನಟಿ ರಾಧಿಕಾ ಶರತ್ಕುಮಾರ್ ಮತ್ತು ನಾಧಿಯಾ ಅವರ ಜತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಸಿದರು.
ಚಿರು ಕುಟುಂಬದೊಂದಿಗೆ ರಾಧಿಕಾ ಶರತ್ ಕುಮಾರ್ ಫ್ಯಾಮಿಲಿ ಮೊದಲಿನಿಂದಲೂ ಉತ್ತಮ ಒಡನಾಡ ಹೊಂದಿದೆ. ರೀ-ಯೂನಿಯನ್ ಕಾರ್ಯಕ್ರಮದಲ್ಲಿ ಭೇಟಿಯಾದಾಗ ಚಿರು ಪುತ್ರ ರಾಮ್ ಚರಣ್ ಜತೆ ಕಾಣಿಸಿಕೊಂಡರು.ಬರೀ ದಕ್ಷಿಣದ ಕಲಾವಿದರು ಮಾತ್ರವಲ್ಲ, ಬಾಲಿವುಡ್ನ ಜಾಕಿಶ್ರಾಫ್ ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ನಟಿ ರಾಧಿಕಾ ಶರತ್ಕುಮಾರ್, ಚಿರಂಜೀವಿ ಮತ್ತು ರಾಮ್ ಚರಣ್ ಅವರೊಂದಿಗೆ ಜಾಕಿ ಅವರ ಸಖತ್ ಪೋಸ್.ತಮ್ಮ ಕಾಲದ ನಾಯಕಿಯರ ಜತೆ ಗ್ರೂಪ್ ಫೋಟೋಗೆ ಸಖತ್ ಪೋಸ್ ನೀಡಿದ್ದಾರೆ ಚಿರು. ಖುಷ್ಬೂ, ಸುಹಾಸಿನಿ ಮಣಿರತ್ನಂ, ರಾಧಿಕಾ ಶರತ್ಕುಮಾರ್ ಮುಂತಾದವರು ಅವರೊಂದಿಗೆ ಸಾಥ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಭಾರತದ ಅನೇಕ ನಾಯಕಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಅವರೊಂದಿಗೆ ಮೂವಿ ಮಾಡಿಲ್ಲ. ಯಾಕೆ? ಇತ್ತೀಚೆಗೆ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆಗ ಅವರನ್ನು ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂದು ಪ್ರಶ್ನಿಸಲಾಗಿತ್ತು. ಆಗ ಸಲ್ಮಾನ್, ಹೌದು, ನನಗೂ ನಿಜಕ್ಕೂ ಅಚ್ಚರಿ ಆಗುತ್ತಿದೆ.. ನಾನು ದೀಪಿಕಾ ಜೊತೆ ಯಾವಾಗ ಸಿನಿಮಾ ಮಾಡುತ್ತೇನೆ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ ದೀಪಿಕಾ ಜೊತೆ ನಟಿಸಲು ಇದುವರೆಗೂ ನನಗೆ…
ಒಂದೆಕರೆ ಕ್ಷಣದಲ್ಲೇ ಪರಿಹಾರ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಮಹತ್ವಾಕಾಂಕ್ಷೆಗಳನ್ನು ಸಿದ್ಧಪಡಿಸಿಕೊಳ್ಳಲು ಸಕಾರಾತ್ಮಕ ಶಕ್ತಿ ನಿಮ್ಮನ್ನು ಹುರಿದುಂಬಿಸಲಿದೆ. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ನೀವು ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ದೃಢ ನಿರ್ಧಾರ ನಿಮಗೆ ಮುಂದೆ ಒಳಿತನ್ನು ಮಾಡುವುದು. .ನಿಮ್ಮ ಸಮಸ್ಯೆ.ಏನೇ .ಇರಲಿ…
ಅನಾಥಶ್ರಮಗಳಲ್ಲಿ ಆಗುತ್ತಿರುವ ಅನಾಚಾರವನ್ನು ಬಯಲಿಗೆಳೆದ ಹಾಗೂ ಭಾರಿ ಹೋರಾಟದ ಬಳಿಕ ಡೌನ್ ಸಿಂಡ್ರೋಮ್ ಇರುವ ಬಾಲಕನನ್ನು ದತ್ತು ಪಡೆದ ಯುವಕನ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು, ಹ್ಯೂಮನ್ಸ್ ಆಫ್ ಮುಂಬೈ 26 ವರ್ಷದ ಆದಿತ್ಯ ತಿವಾರಿ ಅವರ ಬಗ್ಗೆ ಪೋಸ್ಟ್ ಮಾಡಿದೆ. 2016ರಲ್ಲಿ ತಿವಾರಿ 26ನೇ ವಯಸ್ಸಿಗೆ ಮಗುವನ್ನು ದತ್ತು ಪಡೆಯುವ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದಲ್ಲಿ ದತ್ತು ಪಡೆದ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿದರು. ಅಷ್ಟಕ್ಕೂ ಆದಿತ್ಯ ದತ್ತು ಪಡೆದ ಬಾಲಕ…
ಬಿಸಿಲು,ಬಿಸಿಲು, ಎಲ್ಲಿ ನೋಡಿದರೂ ಬಿಸಿಲ ಬೇಗೆ, ಧಗೆ. ಇಷ್ಟು ದಿನ ಕಣ್ಣಿಗೆ, ಮನಸಿಗೆ ತಂಪಾಗಿದ್ದ ಬೆಂಗಳೂರು, ಈಗ ಬಿರು ಬಸಿಲಿನ ನಾಡಾಗಿದೆ. ಜನರಿಗೆ ಕುಳಿತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದ ಹಾಗೆ ಮಾಡಿದೆ ಈ ಬಿಸಿಲು. ಬೇಸಿಗೆಯು ಶುಭಾರಂಭವಾಗಿ 4 ದಿನ ಆಗಿಲ್ಲ ಆಗಲೇ ಜನರ ಮೈನೀರಿಳಿಸುತ್ತಿದೆ ಈ ಬೇಸಿಗೆ. ತಂಪು ತಂಪಾದ ತಂಪು ಪಾನೀಯಗಳ ಬಳಕೆ ಹೆಚ್ಚಾಗಿದೆ. ಹಾಗೆ ಕಲ್ಲಂಗಡಿ, ಕಿತ್ತಳೆ ಮತ್ತು ಎಳೆನೀರಿನ ಉಪಯೋಗ ಆಗಲೇ ಶುರುವಾಗಿದೆ. ನೀರಿನ ಕಷ್ಟ ಎದುರಾಗಿದೆ. ಪ್ರಾಣಿಗಳು ಪಕ್ಷಿಗಳಿಗೂ ಈ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಾಹುಬಲಿ -2’ ಬಂದಿದ್ದೇ ಬಂದಿದ್ದು ಟಾಲಿವುಡ್ ಸ್ಟಾರ್ ಪ್ರಭಾಸ್ ಮನೆ ಮಾತಾಗಿದ್ದಾರೆ. ಈ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸುದ್ದಿಯಾದ ವಿಷಯಗಳಲ್ಲಿ ಪ್ರಭಾಸ್ ಮದುವೆ ಸುದ್ದಿ ಕೂಡ ಪ್ರಮುಖವಾಗಿದೆ. ಟಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಬ್ಯಾಚುಲರ್ ಹೀರೋ ಅಂದ್ರೆ ಪ್ರಭಾಸ್. ಕೆಲವು ದಿನಗಳಿಂದ ಈ ನಟನ ಮದುವೆಯ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿದೆ. ಆದರೆ ಈಗ ಟಾಲಿವುಡ್ ಅಂಗಳದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ನಿಹಾರಿಕಾ ಅವರೊಂದಿಗೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳತೊಡಗಿದೆ….