ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತಿದ್ದಾಗ ಬೋದಿಸತ್ವ ಒಂದು ಸಿಂಹದ ಹೊಟ್ಟೆಯಲ್ಲಿ ಹುಟ್ಟಿ ಕಾಡಿನಲ್ಲಿದ್ದ. ಆ ಕಾಡಿನ ಅಂಚಿನ ಸಮುದ್ರತೀರದಲ್ಲಿ ಒಂದು ಬೇಲದ ಮತ್ತು ತಾಳೆಯ ಮರಗಳ ತೋಪಿತ್ತು. ಒಂದು ತಾಳೆಯ ಮರ ಮತ್ತು ಬೇಲದಮರದ ಅಕ್ಕಪಕ್ಕದಲ್ಲಿ ಕಡೆ ಮೊಲವೊಂದು ವಾಸಮಾಡುತ್ತಿತ್ತು.
ಒಂದು ದಿನ ಆ ಮೊಲ ತಾಳೆಯ ಮರದ ನೆರಳಿನಲ್ಲಿ ಮಲಗಿತ್ತು. ಒಂದು ಕ್ಷಣ ಅದಕ್ಕೆ ಅಕಸ್ಮಾತ್ ಈ ಭೂಮಿಯೇ ತಲೆಕೆಳಗಾದರೇನುಗತಿ? ಎಂಬ ಯೋಚನೆ ಬಂತು. ಅದೇ ಸಮಯದಲ್ಲಿ ಒಂದು ಬೇಲದ ಹಣ್ಣು ತೊಟ್ಟು ಕಳಚಿ ತಾಳೆಯ ಗರಿಯ ಮೇಲೆ ಬಿದ್ದು ಶಬ್ದವಾಯಿತು. ಅದನ್ನು ಕೇಳಿ ಮೊಲ ಭೂಮಿ ತಲೆಕೆಳಗಾಗುತ್ತಿದೆ ಎಂದೇ ಬಾವಿಸಿ ಬೀತಿಯಿಂದ ಓಡತೊಡಗಿತು.
ವಿಪರೀತ ಭಯದಿಂದ ಓಡುತ್ತಿರುವ ಅದನ್ನು ದಾರಿಯಲ್ಲಿ ಇನ್ನೊಂದು ಮೊಲ ಕಂಡು, ‘’ಏಕೆ ಹೀಗೆ ಓಡುತ್ತಿರುವೆ? ಏನಾಯಿತು?’’ ಎಂದು ಕೇಳಿತು.
‘’ಅಯ್ಯೋ, ಅದನ್ನು ಏನೆಂದು ಹೇಳಲಿ? ಭೂಮಿ ತಲೆಕೆಳಗಾಗುತ್ತಿದೆ‘’ ಎಂದು ಅದು ಓಡುತ್ತಲೇ ಇತ್ತು. ಆ ಇನ್ನೊಂದು ಮೊಲವು ಭಯಬೀತಿಯಿಂದ ಅದರ ಹಿಂದೆ ಓಡತೊಡಗಿತು. ಅವೆರಡನ್ನೂ ನೋಡಿ ಇನ್ನೊಂದು ಮತ್ತೊಂದು, ಹೀಗೆ ಸಾವಿರ ಮೊಲಗಳ ಹಿಂಡೇ ಓಡತೊಡಗಿತು.
ಅಷ್ಟೇ ಅಲ್ಲದೆ ಅಷ್ಟು ಮೊಲಗಳ ಗಾಬರಿಯಿಂದ ಹಾಗೆ ಓಡುತ್ತಿರುವುದನ್ನು ಕಂಡು ಭೂಮಿ ತಲೆಕೆಳಗಾಗುವ ಆಪತ್ತು ಬಂದಿದೆಯೆಂದು ತಿಳಿದು ಭಯದಿಂದ ಒಂದು ಹಂದಿ, ಹಸು, ಎಮ್ಮೆ ಮತ್ತು ಹುಲಿ, ಸಿಂಹ, ಆನೆ ಇತ್ಯಾದಿ ಪ್ರಾಣಿಗಳೂ ಓಡತೊಡಗಿದವು ಹಲವು ಪ್ರಾಣಿಗಳ ಸಾಲುಗಳ ಸೇರಿ ಒಂದು ಯೋಜನದಷ್ಟು ಉದ್ದವಾಯಿತು.
ದಾರಿಯಲ್ಲಿ ಸಿಂಹವಾಗಿದ್ದ ಬೋದಿಸುತ್ತ ಈ ಮೆರವಣಿಗೆಯನ್ನು ಕಂಡು ‘’ಎಲ್ಲ ಏಕೆ ಹೀಗೆ ಓಡುತ್ತಿರುವಿರಿ?’’ ಎಂದು ಕೇಳಿದ. ಅವೆಲ್ಲ ‘ಭೂಮಿ ತಲೆಕೆಳಗಾಗುವುದು ಎಂದಾದರೂ ಸಾದ್ಯವೇ? ಇವು ಬೇರೆ ಏನನ್ನೋ ಕಂಡು ತಪ್ಪು ತಿಳಿದು ಹೀಗೆ ಓಡುತ್ತಿರಬೇಕು. ಹೀಗೆ ಬಿಟ್ಟರೆ ಎಲ್ಲ ಪ್ರಾಣಿಗಳು ಅನ್ಯಾಯವಾಗಿ ನಾಶವಾಗಿಬಿಡುತ್ತವೆ. ಅದನ್ನು ತಪ್ಪಿಸಬೇಕು’ ಎಂದು ಬೋದಿಸತ್ವ ಯೋಚಿಸಿದ.
ಕೂಡಲೇ ಸಿಂಹ ವೇಗವಾಗಿ ಓಡಿ ಬಂದು ಎಲ್ಲ ಪ್ರಾಣಿಗಳು ಅಡ್ಡವಾಗಿ ನಿಂತು ಮೂರೂ ಸಲ ಸಿಂಹನಾದ ಮಾಡಿತು. ಹೆದರಿದ ಪ್ರಾಣಿಗಳೆಲ್ಲ ನಿಂತವು. ‘’ಏಕೆ ಓಡುತ್ತಿರುವೆ?’’ಎಂದು ಅವನು ಕೇಳಿದ.
‘’ಭೂಮಿ ತಲೆಕೆಳಗಾಗುತ್ತಿದೆ.’’
‘’ಅದನ್ನು ನೋಡಿದವರಾರು?’’
‘’ಆನೆ’’
ಆನೆ ತನಗೆ ಗೊತ್ತಿಲ್ಲ, ಸಿಂಹಕ್ಕೆ ಗೊತ್ತು ಎಂದು ಹೇಳಿತು. ಸಿಂಹ ಹುಲಿಯನ್ನು ತೋರಿಸಿತು. ಹುಲಿ ಇನ್ನೊಂದು ಪ್ರಾಣಿಯನ್ನು ತೋರಿಸಿತು. ಹುಲಿ ಇನ್ನೊಂದು ಪ್ರಾಣಿಯನ್ನು ತೋರಿಸಿತು. ಕಡೆಗೆ ಮೊಲಗಳ ಸರದಿ ಬಂತು. ಮೊಲಗಳು ತಮ್ಮ ಮುಂದೆ ಓಡಾಡುತಿದ್ದ ಮೊಲವನ್ನು ತೋರಿಸಿದೆವು.
‘’ಭೂಮಿ ತಲೆಕೆಳಗಾಗಿರುವದನ್ನು ನೋಡಿದೆಯಾ?’’ ಎಂದು ಸಿಂಹ ಮೊಲವನ್ನು ಕೇಳಿತು.
‘’ಹೌದು, ನಾನು ನೋಡಿದೆ’’ ಎಂದಿತು ಮೊಲ.
‘’ಎಲ್ಲಿ?’’
‘’ಸಮುದ್ರದಲ್ಲಿ ಹತ್ತಿರ ಬೇಲ ಮತ್ತು ತಾಳೆಯ ಮರಗಳ ತೋಪಿನಲ್ಲಿ. ಅಲ್ಲಿ ನಾನು ಬೇಲದ ಮರದ ಬುಡದಲ್ಲಿ ಮಲಗಿದ್ದೆ. ಒಂದು ವೇಳೆ ಭೂಮಿ ತಲೆಕೆಳಗಾದರೆ ಎಲ್ಲಿ ಹೋಗಲಿ? ಎಂದು ನಾನು ಯೋಚಿಸಿದ್ದೆ. ಆಗ ಭೂಮಿ ತಲೆಕೆಳಗಾಗುವ ಸದ್ದು ಕೇಳಿ ಬಂತು. ನಾನು ಓಡಿ ಬಂದೆ.’’
ನಿಜ ಸಂಗತಿಯನ್ನು ತಿಳಿಯಬೇಕೆಂದು ಸಿಂಹ ಇತರ ಪ್ರಾಣಿಗಳನ್ನು ಕುರಿತು ‘’ಈ ಮೊಲ ಹೇಳಿದ ಮಾತು ನಿಜವೇ ಎಂಬುದನ್ನು ನಾನು ತಿಳಿದು ಬರುವವರೆಗೆ ನೀವೆಲ್ಲ ಇಲ್ಲಿಯೇ ಇರಿ‘’ ಎಂದು ಹೇಳಿ ಮೊಲವನ್ನು ಕರೆದು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ಹೊರಟಿತು.
ಅವೆರೆಡೂ ಬಹುಬೇಗ ಆ ತೋಪಿನ ಬಳಿಗೆ ಬಂದವು. ಮೊಲವನ್ನು ಇಳಿಸಿ ‘’ಆ ಸ್ಥಳವನ್ನು ತೋರಿಸಿ’’ ಎಂದು ಸಿಂಹ ಹೇಳಿತು. ಅದು ಹೆದುರುತ್ತಲೇ ಹೋಗಿ, ‘’ಇದೇ ಶಬ್ದವಾದ ಸ್ಥಳ’’ ಎಂದು ತೋರಿಸಿತು.
ಸಿಂಹ ಆ ಸ್ಥಳಕ್ಕೆ ಹೋಗಿ ಪರಿಶೀಲಿಸಿತು. ಅಲ್ಲೇ ತಾಳೆಗರಿಯ ಮೇಲೆ ಬಿದ್ದಿದ್ದ ಬೇಲದ ಹಣ್ಣನ್ನು ನೋಡಿ, ಇದು ಭೂಮಿ ತಲೆಕೆಳಗಾಗುತ್ತಿರುವ ಶಬ್ದವಲ್ಲ. ಬೇಲದ ಹಣ್ಣು ತಾಳೆಯ ಗರಿಯ ಮೇಲೆ ಬಿದ್ದ ಶಬ್ದವನ್ನು ಕೇಳಿ ತಪ್ಪು ತಿಳಿದುಕೊಂಡಿದೆಯೆಂದು ಅರ್ಥಮಾಡಿಕೊಂಡಿತು.
ಅನಂತರ ಮತ್ತೆ ಮೊಲವನ್ನು ಬೆನ್ನ ಮೇಲೆ ಕೂಡಿಸಿಕೊಂಡು ಸಿಂಹ ಆ ಪ್ರಾಣಿಗಳಿದ್ದ ಸ್ಥಳಕ್ಕೆ ಬಂದು, ನಿಜ ಸಂಗತಿಯನ್ನ್ಜು ತಿಳಿಸಿ ಪ್ರಾಣಿಗಳಿಗೆ ಧೈರ್ಯ ಹೇಳಿತು. ತಮ್ಮ ಪ್ರಾಣವುಳಿಸಿದ ಸಿಂಹವನ್ನು ಎಲ್ಲ ಪ್ರಾಣಿಗಳೂ ಕೊಂಡಾಡಿದವು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 33 ವರ್ಷ ಸೇವೆ ಸಲ್ಲಿಸಿದವರ ಅಥವಾ 60 ವರ್ಷ ತುಂಬಿದವರನ್ನು ಸೇವೆಯಿಂದ ನಿವೃತ್ತಿಗೊಳಿಸುವ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತ ಗೊಂದಲಗಳಿಗೆ ತೆರೆ ಬಿದ್ದಿದೆ. ನಿವೃತ್ತಿ ವಯಸ್ಸನ್ನು ಕಡಿಮೆ ಮಾಡುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹ ಮತ್ತು ವದಂತಿಗಳು ಹರಡಿದ ಬಗ್ಗೆ ಕೇಂದ್ರ ಸರ್ಕಾರ…
ನಗರದಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎನ್ನುವ ಮಾಹಿತಿ ನೀಡುವ ಗೂಗಲ್ ಕಂಪನಿಗೆ ವ್ಯಕ್ತಿಯೊಬ್ಬ ಚಮಕ್ ಕೊಟ್ಟ ಘಟನೆ ಜರ್ಮನಿಯಲ್ಲಿ ನಡೆದಿದೆ. ಗೂಗಲ್ ಮ್ಯಾಪ್ ಸಂಚಾರದ ಸಂದರ್ಭದಲ್ಲಿ ಜಿಪಿಎಸ್ ಸಾಧನಗಳು ಎಷ್ಟು ಆನ್ ಆಗಿದೆ ಎನ್ನುವುದನ್ನು ತಿಳಿದುಕೊಂಡು ಜನರಿಗೆ ಪ್ರದೇಶದಲ್ಲಿ ಎಷ್ಟು ಸಂಚಾರ ದಟ್ಟಣೆಯಿದೆ ಎನ್ನುವ ವಿವರ ಇರುವ ಸಂದೇಶವನ್ನು ನೀಡುತ್ತಿರುತ್ತದೆ. ಈ ವಿಚಾರವನ್ನು ತಿಳಿದ ವ್ಯಕ್ತಿಯೊಬ್ಬ ಗೂಗಲ್ ಕಂಪನಿ ಮುಂದೆ ಕೃತಕವಾಗಿ ಟ್ರಾಫಿಕ್ ಜಾಮ್ ಸೃಷ್ಟಿಸಿ ಸುದ್ದಿ ಮಾಡಿದ್ದಾನೆ. ಜರ್ಮನಿಯ ಕಲಾವಿದ ಸೈಮನ್ ವೆಕರ್ಟ್ ಬರ್ಲಿನ್…
ಬೆಂಗಳೂರು(05-01-2023): ವಸತಿ ಯೋಜನೆಗಳ ಫಲಾನುಭವಿಗಳಿಗೆ ಗ್ರಾಮೀಣ ಭಾಗದಲ್ಲಿ ನೀಡುತ್ತಿದ್ದ ಸಹಾಯಧನ ಮೊತ್ತವನ್ನು 1.20 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ ಹಾಗೂ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ನೀಡುತ್ತಿದ್ದ 2.70 ಲಕ್ಷ ರೂ.ನಿಂದ 4 ಲಕ್ಷ ರೂ.ಗೆ ಹೆಚ್ಚಳ ಮಾಡುವ ಮಹತ್ವದ ತರ್ಮಾನಕ್ಕೆ ಸರ್ಕಾರ ಮುಂದಾಗಿದೆ. ಬಡತನರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೂರು ಕಲ್ಪಿಸುವ ಬಸವ, ಅಂಬೇಡ್ಕರ್ ಸೇರಿ ರಾಜ್ಯದಲ್ಲಿ ಜಾರಿಯಲ್ಲಿರುವ ವಸತಿ ಯೋಜನೆಗಳಿಗೆ ನೀಡುವ ಸಹಾಯಧನದ ಮೊತ್ತ ಹೆಚ್ಚಳವಾಗಲಿದೆ. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡುವ ಹಾಗೂ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 11 ಜನವರಿ, 2019 ಹಣಕಾಸಿನಲ್ಲಿಸುಧಾರಣೆ ದೀರ್ಘಕಾಲದಿಂದ ಬಾಕಿಯಿರುವ ನಿಮ್ಮ ಬಾಕಿಗಳು ಮತ್ತು ಬಿಲ್ಲುಗಳನ್ನು ಪಾವತಿಸುವುದನ್ನು ಅನುಕೂಲಕರವಾಗಿಸುತ್ತದೆ….
ದೇಶದ 7 ರಾಜ್ಯಗಳಲ್ಲಿ ಈಗ ಜಲಕಂಟಕ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಒಡಿಶಾ, ರಾಜಸ್ಥಾನ, ಗುಜರಾತ್ನಲ್ಲಿ ಪ್ರವಾಹ ತಲೆದೋರಿದೆ. ಪ್ರವಾಹ ಹಾಗೂ ಭೂ ಕುಸಿತಕ್ಕೆ ಊರಿಗೆ ಊರುಗಳೇ ನಾಶವಾಗಿವೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತ ಶಿಬಿರ ಸೇರಿರುವ ಸಂತ್ರಸ್ತರ ಗೋಳು ಹೇಳತೀರದು. ಕೇರಳದಲ್ಲಿ ಭಾರೀ ಭೂಕುಸಿತ : ಈ ಬಾರಿಯೂ ಭಾರೀ ಮಳೆ ಮತ್ತು ಭೂಕುಸಿತಕ್ಕೆ ತುತ್ತಾಗಿರುವ ಕೇರಳದಲ್ಲಿ ಇಲ್ಲಿವರೆಗೆ 30 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇಂದು ಒಂದೇ ದಿನ…
ಹುಂಗೇನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿದೆ.ಇದರ ಮೂಲ ಹೆಸರು ಹೊಂಗೇನಹಳ್ಳಿ.ಮಾಲೂರು ಕೋಲಾರ ಮುಖ್ಯರಸ್ತೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿದೆ. ಗ್ರಾಮದ ಸುತ್ತಲೂ ಮೂರು ಕೆರೆಗಳಿಗೆ ಗ್ರಾಮದ ಗ್ರಾಮಸ್ಥರಿಗೆ (ರೈತರಿಗೆ) ಈ ಕೆರೆಗಳ ಅಚ್ಚುಕಟ್ಟೆನಲ್ಲಿ ಜಮೀನು ಇದೆ.ಹಸಿರಿನಿಂದ ತುಂಬಿದ ಗ್ರಾಮ.ಹುಂಗೇನಹಳ್ಳಿಯ ರೈತರು ಪ್ರಗತಿಪರ ರೈತರಾಗಿದ್ದರು.ಮೊದಲಿನಿಂದಲೂ ತಾಲ್ಲೂಕಿನ ಮಾದರಿ ಗ್ರಾಮವಾಗಿದೆ.ಹುಂಗೇನಹಳ್ಳಿಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿತವಾದ ಆಂಜನೇಯ ಸ್ವಾಮಿ ದೇವಸ್ಥಾನ ಕೋಟೆ ಹೊರಗಡೆ ಇದೆ.ಕೋಟೆ ಒಳಗಡೆ ಊರಬಾಗಿಲಿನಲ್ಲಿ ಮಾರಿಕಾಂಬಾ ದೇವಸ್ಥಾನ ಇದೆ. ನಮಗೆ ತಿಳಿದ ಪ್ರಕಾರ ನಮ್ಮ ಹಿರಿಯರು ಮದ್ರಾಸ್…
![]()