News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಸುದ್ದಿ

ಚಳಿಗಾಲದಲ್ಲಿ ಚರ್ಮದ ಕಾಳಜಿಯನ್ನು ಎಂದಿಗೂ ನಿರ್ಲಕ್ಷಿಸಬಾರದು,ಯಾಕೆ ಗೊತ್ತಾ,?

52

ಶೀತಾಘಾತ ಎಂದರೆ ಹೊರಗಿನ ಶೀತಲ ಗಾಳಿಯ ಪ್ರಭಾವ ಹೆಚ್ಚು ಹೊತ್ತು ನಮ್ಮ  ಚರ್ಮದ ಮೇಲೆ ಬಿದ್ದಾಗ ಎದುರಾಗುವ ಪರಿಣಾಮಗಳಾಗಿವೆ. ಸಾಮಾನ್ಯವಾಗಿ ಬಿಸಿಲಿನ ಹೊಡೆತಕ್ಕೆ ಚರ್ಮ ಸುಡುತ್ತದೆ ಎಂದೇ ನಾವು ಭಾವಿಸಿದ್ದೇವೆ. ಆದರೆ ಶೀತದಿಂದಲೂ ಚರ್ಮದ ಮೇಲೆ ಆಘಾತ ಎದುರಾಗುತ್ತದೆ. ಎರಡೂ ಬಗೆಯ ಆಘಾತಗಳೂ ತ್ವಚೆಗೆ ಹಾನಿಕಾರಕವಾಗಿವೆ. ಎಷ್ಟೋ ಸಲ ಗಾಳಿ ತಣ್ಣಗಿದ್ದು, ಮೋಡ ಕವಿದಿದ್ದರೂ ಶೀತಾಘಾತ ಎದುರಾಗಬಹುದು. ಬನ್ನಿ, ಈ ಸ್ಥಿತಿ ಎದುರಾದರೆ ಯಾವ ಪರಿಹಾರ ಪಡೆಯಬಹುದು ಹಾಗೂ ಇದರಿಂದ ತಪ್ಪಿಸಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನೋಡೋಣ:

ಶೀತಾಘಾತದ ಲಕ್ಷಣಗಳು ಇವು ಸಾಮಾನ್ಯವಾಗಿ ಬಿಸಿಲಿನ ಆಘಾತಕ್ಕೆ ಒಳಗಾದ ತ್ವಚೆಯ ಪರಿಣಾಮದಂತೆಯೇ ಇರುತ್ತದೆ. ವಿಶೇಷವಾಗಿ ಮುಖದ ತ್ವಚೆ ಕೆಂಪಗಾಗಿ ಮುಟ್ಟಲೂ ಆಗದಷ್ಟು ಸೂಕ್ಷ್ಮ ಸಂವೇದಿಯಾಗುತ್ತದೆ. ಅಲ್ಲದೇ ಚರ್ಮ ಉರಿಯುತ್ತಿರುವಂತೆ ಭಾಸವಾಗಬಹುದು. ಕೆಂಪಗಾಗಿರುವುದು ಇಳಿಯುತ್ತಿದ್ದಂತೆಯೇ ಹೊರಚರ್ಮ ಒಣಗಿ ಪಕಳೆಯೇಳಲು ತೊಡಗಬಹುದು. ಈ ಲಕ್ಷಣಗಳು ಬಿಸಿಲಿನ ಆಘಾತದ ಲಕ್ಷಣಗಳನ್ನೇ ಹೋಲುತ್ತಿದ್ದರೂ ಅದಕ್ಕೂ ಹೆಚ್ಚು ಒಣಗುತ್ತದೆ ಮತ್ತು ಬಿಗಿಯಾಗಿರುತ್ತದೆ.

ಶೀತಾಘಾತಕ್ಕೆ ಪರಿಹಾರಗಳು ಶೀತಾಘಾತಕ್ಕೆ ಚಿಕಿತ್ಸೆಯು ನಿಮ್ಮ ಚರ್ಮದ ತೇವಾಂಶವನ್ನು ಪುನಃ ತುಂಬಿಸುವುದರ ಜೊತೆಗೆ ಈಗಾಗಲೇ ಇರುವ ಯಾವುದೇ ನೋವನ್ನೂ ಇಲ್ಲವಾಗಿಸುತ್ತದೆ.                           * ಐಬುಪ್ರೊಫೇನ್ ನಂತಹ ಅತಿಯಾದ ನೋವು ನಿವಾರಕವು ಸೌಮ್ಯ ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. * ಉಗುರುಬೆಚ್ಚನೆಯ ನೀರು ಸಹ ಸುಡುವಿಕೆಯನ್ನು ಕಡಿಮೆ ಮಾಡುತ್ತದೆ. ನೀವು ಶೀತಾಘಾತದಿಂದ ಚೇತರಿಸಿಕೊಳ್ಳುತ್ತಿರುವಾಗ ಬಿಸಿನೀರನ್ನು ಬಳಸದಿರಿ. ಇದು ಚರ್ಮದಿಂದ ಇನ್ನಷ್ಟು ತೇವಾಂಶವನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಚೇತರಿಕೆಯ ಸಮಯವನ್ನು ಇನ್ನಷ್ಟು ವಿಸ್ತರಿಸುತ್ತದೆ. * ನಿಮ್ಮ ಚರ್ಮದ ತೇವಾಂಶವನ್ನು ಮರುತುಂಬಿಸುವುದು ನೋವು ನಿವಾರಣೆ ಮಾಡುವುದು ಮತ್ತು ಒಟ್ಟಾರೆ ಚೇತರಿಕೆ ಎರಡರಲ್ಲೂ ಮುಖ್ಯವಾಗಿದೆ. ಈಗಲೂ ನೀವು ನಿಮ್ಮ ಮುಖ ಮತ್ತು ದೇಹವನ್ನು ಸ್ವಚ್ಛಗೊಳಿಸಬಹುದು, ಆದರೆ ಕೆನೆಯಾಧಾರಿತ ಕ್ಲೆನ್ಸರ್ ಮೂಲಕ ಸ್ವಚ್ಛಗೊಳಿಸುತ್ತಿದ್ದರೆ ಮಾತ್ರ. ಜೆಲ್ ಮತ್ತು ನೀರು ಆಧಾರಿತ ಕ್ಲೆನ್ಸರ್ ಬಳಕೆಯಿಂದ ಶೀತಾಘಾತಕ್ಕೆ ಒಳಗಾದ ತ್ವಚೆ ಇನ್ನಷ್ಟು ಒಣಗಬಹುದು. * ನಿಮ್ಮ ಚರ್ಮವು ಚೇತರಿಸಿಕೊಳ್ಳುವಾಗ ಅಗತ್ಯಕ್ಕೆ ತಕ್ಕಂತೆ ದಿನವಿಡೀ ತೇವಕಾರಕ ಅಥವಾ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ. ನೀವು ದಪ್ಪ ಲೋಷನ್ ಬಳಸುತ್ತಿದ್ದರೆ, ನೀವು ಇದನ್ನು ದಿನಕ್ಕೆ ನಾಲ್ಕು ಬಾರಿ ಬಳಸಬಹುದು. ನಿಮ್ಮ ಚರ್ಮವು ಸಂಪೂರ್ಣವಾಗಿ ಗುಣವಾಗುವವರೆಗೆ ಯಾವುದೇ ಹೊರಚರ್ಮ ನಿವಾರಕ (ಎಕ್ಸ್‌ಫೋಲಿಯಂಟ್), ಟೋನರ್ ಗಳು ಮತ್ತು ಸಂಕೋಚಕಗಳ ಬಳಕೆಯನ್ನು ತಪ್ಪಿಸಿ. * ಚೇತರಿಕೆಯ ಸಮಯದಲ್ಲಿ ಆದಷ್ಟೂ ಹೊರಾಂಗಣದಲ್ಲಿ ನಿಮ್ಮ ಸಮಯವನ್ನು ಮಿತಿಗೊಳಿಸಲು ಯತ್ನಿಸಿ. ನಿಮ್ಮ ಚರ್ಮವು ಇನ್ನಷ್ಟು ಒಣಗದಂತೆ ತಡೆಯಲು ನೀವು ಆರ್ದ್ರಕವನ್ನು ಬಳಸಿ. * ಅಂತಿಮವಾಗಿ, ನೀವು ಸಾಕಷ್ಟು ನೀರು ಕುಡಿಯುತ್ತೀರಾ ಎಂದು ಖಚಿತಪಡಿಸಿಕೊಳ್ಳಿ. ನಿಮಗೆ ಅತಿಯಾದ ಬಾಯಾರಿಕೆಯಿಲ್ಲದಿದ್ದರೂ, ಶೀತಾಘಾತ ನಿಮ್ಮ ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ. ದೇಹದ ಒಳಗಿನಿಂದ ತೇವಾಂಶವನ್ನು ಮರುತುಂಬಿಸಲು ನೀರು ಕುಡಿಯುವುದು ಒಂದು ಉತ್ತಮ ಮಾರ್ಗವಾಗಿದೆ.

ಶೀತಾಘಾತಕ್ಕೆ ಒಳಗಾದ ತುಟಿಗಳು ಬಾಯಿಯನ್ನು ತೆರೆಯುವಾಗ ಅತಿ ಹೆಚ್ಚು ವಿಸ್ತಾರಗೊಳ್ಳಬೇಕಾದ ಅವಶ್ಯಕತೆ ಇರುವ ಕಾರಣ ತುಟಿಯ ಹೊರಚರ್ಮ ಅತಿ ಹೆಚ್ಚು ವಿಸ್ತಾರ ಹೊಂದಿದ್ದು ಸಾಮಾನ್ಯ ಸ್ಥಿತಿಯಲ್ಲಿ ನೆರಿಗೆಯಾಗಿರುತ್ತದೆ ಹಾಗೂ ಅತಿ ತೆಳುವೂ ಆಗಿರುತ್ತದೆ. ಅಲ್ಲದೇ ತುಟಿಗಳನ್ನು ಮುಚ್ಚಿಕೊಳ್ಳುವುದು ಹೆಚ್ಚೂ ಕಡಿಮೆ ಅಸಾಧ್ಯವಾದುದರಿಂದ ಶೀತಾಘಾತದ ಪ್ರಭಾವಕ್ಕೆ ಅತಿ ಸುಲಭವಾಗಿ ಒಳಗಾಗುತ್ತದೆ. ಒಂದು ವೇಳೆ ತುಟಿಗಳಿಗೆ ಹೆಚ್ಚು ಆಘಾತ ಎದುರಾಗಿದ್ದರೆ ಹೀಗೆ ಮಾಡಿ: * ಅತಿ ಹೆಚ್ಚು ನೀರು ಕುಡಿಯಿರಿ * ಬಿಸಿ ಆಹಾರ/ ಪಾನೀಯಗಳನ್ನು ಸೇವಿಸದಿರಿ * ಖಾರದ ಆಹಾರಗಳನ್ನೂ ಸೇವಿಸದಿರಿ. * ಒಂದು ವೇಳೆ ತುಟಿಗಳ ಚರ್ಮ ಪಕಳೆಯೇಳುತ್ತಿದ್ದರೆ, ಇದನ್ನು ಸರ್ವಥಾ ಕೀಳಲು ಯತ್ನಿಸದಿರಿ. ಇವು ತಾವಾಗಿಯೇ ಉದುರಲಿ ತುಟಿಗೆ ಹಚ್ಚುವ ತೇವಕಾರಕವನ್ನು * ಸದಾ ಬಳಿಯೇ ಇರಿಸಿ ಆಗಾಗ ಹಚ್ಚಿಕೊಳ್ಳುತ್ತಾ ಇರಿ. ಹೆಚ್ಚಿನ ರಕ್ಷಣೆಗಾಗಿ ಎಮೋಲ್ಲಿಯೆಂಟ್ ಕ್ರೀಮ್ ಅಥವಾ ವ್ಯಾಸೆಲಿನ್ ಹಚ್ಚಿಕೊಳ್ಳಿ. * ನಿಮ್ಮ ಲಿಪ್ ಬಾಮ್ 15 ಎಸ್‌ಪಿಎಫ್ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಶೀತಾಘಾತದಿಂದ ತಡೆಯಲು ಅತ್ಯುತ್ತಮ ಮಾರ್ಗವೆಂದರೆ ಹೊರಗೆ ಹೋಗದೇ ಇರುವುದು, ಆದರೆ ಇದು ಸಾಧ್ಯವಲ್ಲದ ವಿಷಯ. ಹಾಗಾಗಿ, ಶೀತಲ ಮಾರುತದ ಸಮಯದಲ್ಲಿ ಹೊರಹೋಗಬೇಕಾದಾಗ ಈ ಕ್ರಮಗಳನ್ನು ಅನುಸರಿಸಿ: * ನಿಮ್ಮ ಮುಖವನ್ನು ಸ್ಕಾರ್ಫ್ ನಿಂದ ಮುಚ್ಚಿಕೊಳ್ಳಿ * ತಂಪು ಕನ್ನಡಕ ಧರಿಸಿ * ಟೋಪಿ ಮತ್ತು ಕೈಗವಸುಗಳನ್ನು ಬಳಸಿ * ಉದ್ದನೆಯ ತೋಳಿರುವ ಅಂಗಿ ಮತ್ತು ಪ್ಯಾಂಟ್ ಧರಿಸಿ * ಎರಡು ಅಥವಾ ಹೆಚ್ಚಿನ ಉಡುಪುಗಳನ್ನು ತೊಟ್ಟು ಬೆಚ್ಚಗಿರಿ * ಶೀತಾಘಾತ ಉಂಟಾಗುವ ಸ್ಥಿತಿಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ನೀವು ಯಾವಾಗಲೂ ಸನ್‌ಸ್ಕ್ರೀನ್ ಧರಿಸಬೇಕು. ಕನಿಷ್ಠ 30 ಎಸ್‌ಪಿಎಫ್ ಹೊಂದಿರುವ ವಿಶಾಲ-ಸ್ಪೆಕ್ಟ್ರಮ್ ಇರುವ ಉತ್ಪನ್ನವನ್ನೇ ಆಯ್ದುಕೊಳ್ಳಿ. ಶೀತಾಘಾತದ ಹಿಂದಿನ ವಿದ್ಯಮಾನಗಳು ಸುಮಾರು ಒಂದು ಶತಮಾನದಿಂದ ಚರ್ಮದ ತಜ್ಞರ ನಡುವೆ ಚರ್ಚೆಗೆ ಕಾರಣವಾಗಿವೆ, ಆದರೆ ಒಂದು ವಿಷಯ ಖಚಿತವಾಗಿದೆ: ಶೀತ ಮತ್ತು ಶುಷ್ಕ ದಿನದಂದು ಸಹ ಹೊರಗಡೆ ಇರುವುದು ನಿಮ್ಮ ಚರ್ಮವನ್ನು ಸುಡಲು ಕಾರಣವಾಗಬಹುದು. ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯ ಮತ್ತು ಇತರ ಅಂಶಗಳಿಂದ ರಕ್ಷಿಸುವುದು ಮುಖ್ಯ. ಕೆಲವು ದಿನಗಳ ನಂತರ ಶೀತಾಘಾತ ಅಥವಾ ಬಿಸಿಲಿನ ಲಕ್ಷಣಗಳು ಮುಂದುವರಿದರೆ ಅಥವಾ ಅವು ಉಲ್ಬಣಗೊಂಡರೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಭರ್ಜರಿ ಶಾಪಿಂಗ್ ಸ್ಟಾರ್ಟ್ ಮಾಡಿದ ಯಶ್ ಮತ್ತು ರಾಧಿಕಾ ಪಂಡಿತ್ ಇದಕ್ಕೆ ಕಾರಣ? ಇಲ್ಲಿದೆ ನೋಡಿ,.!

    ರಾಧಿಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು . ಅಕ್ಟೋಬರ್ ಮೊದಲ ವಾರದಲ್ಲಿ ಅವರ ಮನೆಗೆ ತುಂಟ ಕೃಷ್ಣನೋ ಅಥವಾ ಮಹಾಲಕ್ಷ್ಮೀಯೋ ಬರುತ್ತಾರೆ. ಇತ್ತೀಚೆಗಷ್ಟೇ ಯಶ್ ಮಗಳ ಜೊತೆಗಿನ ವಿಡಿಯೋ ಶೇರ್ ಮಾಡಿದ್ದರು. ಆ ವಿಡಿಯೋದಲ್ಲಿ ಆಯ್ರಾ ಕ್ಯಾಮೆರಾ ನೋಡಿ, ತಂದೆ ಯಶ್ ಹೇಳಿಕೊಟ್ಟಂತೆ ಟಾಟಾ ಮಾಡುತ್ತಿದ್ದಳು. ಇವಳ ಚೂಟಿತನ ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದರು.  ಸ್ಯಾಂಡಲ್‌ವುಡ್‌ನ ಬೆಸ್ಟ್ಬ್ಯೂಟಿಫುಲ್ ದಂಪತಿ ಯಶ್ ಹಾಗೂರಾಧಿಕಾ ಪಂಡಿತ್. ಮದುವೆಯ ನಂತರದಲ್ಲಿರಾಧಿಕಾ ಸದ್ಯ ಸಿನಿಮಾಗಳಿಂದ ದೂರವಿದ್ದಾರೆ.ಯಶ್ ‘ಕೆಜಿಎಫ್ 2’ ಸಿನೆಮಾದಲ್ಲಿ ಬಿಜಿಯಿದ್ದಾರೆ. ಇವರಿಬ್ಬರಿಗೂ ಮುದ್ದಾದ ಆಯ್ರಾ ಎಂಬಮಗಳಿರೋದು ಗೊತ್ತೇ ಇದೆ. ಆಗಾಗದಂಪತಿ…

  • ಕರ್ನಾಟಕದ ಸಾಧಕರು

    ನಾನು ಹಳ್ಳಿಯವಳೇ.ಆದರೆ ನೀವು ಮಾತ್ರ ಕ್ಲಾಸ್ ಮಹಿಳೆಯರಲ್ಲ…ಸುಧಾಮೂರ್ತಿ ಹೀಗೆ ಹೇಳಿದ್ದು ಯಾರಿಗೆ & ಏಕೆ ಗೊತ್ತಾ.?ಈ ಲೇಖನ ಓದಿ ಶೇರ್ ಮಾಡಿ…

    ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಬಗ್ಗೆ ಗೊತ್ತಲ್ಲವೇ. ಇನ್ಫೋಸಿಸ್ ಕೋ ಫೌಂಡರ್ ನಾರಾಯಣ ಮೂರ್ತಿ ಅವರ ಧರ್ಮಪತ್ನಿ. ಇವರು ಗೇಟ್ಸ್ ಫೌಂಡೇಷನ್ ಕಾರ್ಯಕ್ರಮಗಳಲ್ಲೂ ಪಾಲುದಾರರಾಗಿದ್ದಾರೆ. ಆದರೆ ಸುಧಾಮೂರ್ತಿ ಒಂದು ಪುಸ್ತಕ ಬರೆದಿದ್ದಾರೆ. ತನ್ನ ಜೀವನದಲ್ಲಿ ನಡೆದ ಹಲವು ಸಂಗತಿಗಳನ್ನು ಅದರಲ್ಲಿ ಪ್ರಸ್ತಾಪಿಸಿದ್ದಾರೆ. “ಥ್ರಿ ತೌಸಂಡ್ ಸ್ಟಿಚೆಸ್: ಆರ್ಡಿನರಿ ಪೀಪಲ್, ಎಕ್ಸ್‌ಟ್ರಾ ಆರ್ಡಿನರಿ ಲೈಫ್” ಎಂಬ ಪುಸ್ತಕವನ್ನು ಬರೆದ ಅವರು ತನ್ನ ವಿಷಯಗಳನ್ನು ಅದರಲ್ಲಿ ತಿಳಿಸಿದ್ದಾರೆ.

  • ಸುದ್ದಿ

    ಪ್ರಧಾನಿ ನರೇಂದ್ರ ಮೋದಿಗೋಸ್ಕರ ಸಮೋಸ, ಮಾವಿನ ಚಟ್ನಿ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ.

    ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ದಿನೇ ದಿನೇ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಈಗ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪ್ರಧಾನಿ ನರೇಂದ್ರ ಮೋದಿಗಾಗಿ ಸಮೋಸ ಮತ್ತು ಮಾವಿನ ಕಾಯಿ ಚಟ್ನಿಯನ್ನು ತಯಾರಿಸಿದ್ದಾರೆ. ಜೂನ್‌ 4ರಂದು ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ಮಾರಿಸನ್‌ ಉತ್ಸುಕರಾಗಿದ್ದಾರೆ. ಜೂನ್‌ 4ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಉತ್ಸುಕರಾಗಿರಾಗುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌, ಪ್ರಧಾನಿ ಮೋದಿಗಾಗಿ ಸಮೋಸ ಮತ್ತು ಮಾವಿನ ಕಾಯಿ ಚಟ್ನಿಯನ್ನು ತಯಾರಿಸಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ….

  • ಉಪಯುಕ್ತ ಮಾಹಿತಿ, ದೇವರು

    ಹಾಲಿನಿಂದ ಬೆಳಕಾಗುವ ಪರಿ. ಇದೇನಿದು ಹಾಲಿನಿಂದ ಬೆಳಕೇ? ಒಮ್ಮೆ ನೋಡಿ.!

    ಹಾಲಿನಿಂದ ಬೆಳಕಾಗುವ ಪರಿ. ಇದೇನಿದು ಹಾಲಿನಿಂದ ಬೆಳಕೇ? ಸಂಸ್ಕೃತದಲ್ಲಿ ಒಂದು ಕಥೆ ಇದೆ. ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ. ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ. ಆಗ ಹಾಲು ಹೇಳಿತಂತೆ. ದೇವರೇ ನಾನು ಹಾಲು ಆಕಳು ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ. ಆದರೆ ಈ ಪಾಪಿ ಮಾನವ ನನಗೆ ಹುಳಿ ಇಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ. ನನಗೆ ಹಾಲಾಗೇ ಇರುವಂತೆ ವರ ಕೊಡು ಎಂದು ಬೇಡಿಕೊಂಡಿತಂತೆ. ಆಗ ದೇವರು ನಕ್ಕು ಎಲೈ ಹಾಲೇ…

  • ಉಪಯುಕ್ತ ಮಾಹಿತಿ

    ನಿಮ್ಮ ಮೊಣಕಾಲು, ಸಂಧಿವಾತ ಮತ್ತು ಮಂಡಿನೋವಿಗೆ ಇಲ್ಲಿದೆ ಶಾಶ್ವತ ಪರಿಹಾರ…

    ಈ ಸಂಧಿವಾತದಲ್ಲಿ ಅತಿ ಹೆಚ್ಚಾಗಿ ನೋವು, ಮೂಳೆಗಳಲ್ಲಿ ಬಿಗಿತ ಹಾಗೂ ಊತ ಕಂಡು ಬರುತ್ತದೆ. ಈ ಖಾಯಿಲೆಯು ತಂಡಿಯ ವಾತಾವರಣ ಹಾಗೂ ಬೆಳಗಿನ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಂಶಪಾರಂಪರಿಕ ರೋಗವಾಗಿದೆ. ಕೀಲುಗಳ ಮಧ್ಯದ ಸೈನೋವಿಯಲ್ ದ್ರವವು ಕಡಿಮೆಯಾದಾಗ ಎರಡು ಮೂಳೆಗಳ ಮಧ್ಯೆತಿಕ್ಕಾಟ ನಡೆಯುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಆಸ್ಟಿಯೋ ಆರ್ಥರೈಟೀಸ್ ಹೆಚ್ಚಾಗಿ ತೂಕ ಹೊರುವ ಮೂಳೆಗಳಲ್ಲಿ ಅಂದರೆ ಮಂಡಿಯ ಮೂಳೆ ಹಾಗೂ ಸೊಂಟದ ಮೂಳೆಗಳಲ್ಲಿ ಕಂಡು ಬರುತ್ತದೆ. ರುಮಾಟೈಡ್ ಆರ್ಥರೈಟೀಸ್ಸಾ ಮಾನ್ಯವಾಗಿ ಚಿಕ್ಕ ವಯಸ್ಸಿನ…

  • ಸುದ್ದಿ

    ರಾತ್ರಿಹೊತ್ತು ಪಾಳಿ ಸೆಕ್ಯೂರಿಟಿಯಾಗಿ ದುಡಿಯುತ್ತಿದ್ದ ವಿದ್ಯಾರ್ಥಿ ಈಗ ಇನ್ಫೋಸಿಸ್ ಎಂಜಿನಿಯರ್‌,.!

    ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಇನ್ಫೋಸಿಸ್ ಇಂಜಿನಿಯರ್ ಆಗಿ ಸಾಧನೆ ಮಾಡಿದ್ದಾನೆ. ಈ ಸಾಧನೆ ಮಾಡಿ ಮೆಚ್ಚುಗೆಗೆ ಪಾತ್ರನಾದ ಯುವಕ ಅಂಕಿತ್‌. ಈತ ದೆಹಲಿಯವನಾಗಿದ್ದು, ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಹಗಲು ನಿಟ್ಟೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ, ರಾತ್ರಿ ಪಾಳಿಯ ದುಡಿಮೆ ಎನ್ನುವ ಕಾರಣಕ್ಕೆ ಆತ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ…