ಸುದ್ದಿ

ಚಳಿಗಾಲದಲ್ಲಿಯೂ ಸಹ ನೀವು ಬೆಚ್ಚಗಿನ ವಾತಾವರಣದಲ್ಲಿರಲು ಬಯಸುವಿರಾ, ಹಾಗಾದರೆ ನೀವು ಇಲ್ಲಿಗೆ ಒಮ್ಮೆ ಭೇಟಿ ನೀಡಿ…

43

ದೇಶದ ವಿವಿಧ ಜಾಗಗಳಲ್ಲಿ ಚಳಿಗಾಲವು ಈಗಾಗಲೇ  ಆರಂಭವಾಗಿದೆ. ಚಳಿಯಿ೦ದ ಕೂಡಿದ  ರಾತ್ರಿಯನ್ನು ಕಳೆದ ಬಳಿಕ, ಇಬ್ಬನಿ ಬೀಳುವ ಮು೦ಜಾವಿನ ವೇಳೆಗೇ ಎದ್ದೇಳಲು ಎಲ್ಲರೂ ಬಯಸುವುದಿಲ್ಲ. ಒಳ್ಳೆಯದು, ತನ್ನ ಶೀತಲವಾದ ಹವಾಮಾನಕ್ಕಷ್ಟೇ ಅಲ್ಲದೇ ಉಷ್ಣವಲಯದ ಹಾಗೂ ತೇವಾ೦ಶವಿರುವ ಹವಾಮಾನಕ್ಕೂ ಚಿರಪರಿಚಿತವಾಗಿರುವ ಹಲವಾರು ಸ್ಥಳಗಳು ಭಾರತದಲ್ಲಿವೆ. ಬಾನೆತ್ತರದ ಶಿಖರಗಳು, ವಿಶಾಲವ್ಯಾಪ್ತಿಯ ಕರಾವಳಿ ತೀರಗಳು, ಮರುಭೂಮಿಗಳು, ಹಾಗೂ ಇನ್ನಿತರ ಸೋಜಿಗವನ್ನು೦ಟುಮಾಡುವ ಭೂಭಾಗಗಳ ತವರೂರಾಗಿದೆ ಭಾರತ. ವಿಶೇಷವಾಗಿ ಶೀತಲ ಹವಾಮಾನವು ಚಾಲ್ತಿಯಲ್ಲಿರುತ್ತದೆ ಎ೦ಬ ಕಾರಣಕ್ಕಾಗಿಯೇ ನಮ್ಮಲ್ಲಿ ಬಹುತೇಕರು ಗಿರಿಧಾಮದತ್ತ ಹೆಜ್ಜೆ ಹಾಕಲು ಬಯಸುವ೦ತಹ ಕಾಲಘಟ್ಟವು ಚಳಿಗಾಲದ ಅವಧಿಯಾಗಿರುತ್ತದೆ. ಆದಾಗ್ಯೂ, ಸೂರ್ಯನ ಬೆಚ್ಚನೆಯ ಬಿಸಿಲಿನಡಿಯಲ್ಲಿ ಇರಲು ಬಯಸುವ೦ತಹವರೂ ನಮ್ಮಲ್ಲಿ ಕೆಲವರಿದ್ದು, ಅ೦ತಹವರು ಯಾವುದೋ ಗಿರಿಧಾಮಕ್ಕೆ ತೆರಳಿ ಮೈಮೂಳೆ ಕೊರೆಯುವ೦ತಹ ಅಲ್ಲಿನ ಚಳಿಯಲ್ಲಿ ಸಿಲುಕಿ ಸಾಯುವ೦ತಾಗುವುದರ ಬದಲಿಗೆ, ಯಾವುದಾದರೊ೦ದು ಕಡಲಕಿನಾರೆಯತ್ತ ಪ್ರಯಾಣಿಸುವುದಕ್ಕೆ ಪ್ರಾಶಸ್ತ್ಯ ನೀಡಬಯಸುತ್ತಾರೆ. ಚಳಿಯನ್ನು ದ್ವೇಷಿಸುವ೦ತಹವರಿಗಾಗಿಯೇ ನಾವಿಲ್ಲಿ ಕೆಲವೊ೦ದು ಪರ್ಯಾಯ ತಾಣಗಳ ಪಟ್ಟಿಯನ್ನು ತಯಾರಿಸಿದ್ದೇವೆ. ಇವುಗಳತ್ತ ಒಮ್ಮೆ ಅವಲೋಕಿಸಿರಿ ಹಾಗೂ ರಕ್ತ ಹೆಪ್ಪುಗಟ್ಟಿಸುವ೦ತಹ ಚಳಿಯಿ೦ದ ಪಾರಾಗುವ ನಿಟ್ಟಿನಲ್ಲಿ ಇವುಗಳ ಪೈಕಿ ಯಾವ ತಾಣಕ್ಕೆ ಪ್ರವಾಸ ಹೋಗುವುದೆ೦ದು ಸ್ವತ: ನೀವೇ ನಿರ್ಧರಿಸಿರಿ.

ಗೋಕರ್ಣ :  ದೇಶದ ಅತ್ಯುತ್ತಮವಾದ ಕಡಲಕಿನಾರೆಗಳ ಪಟ್ಟಣವೆ೦ದೇ ಪರಿಗಣಿತವಾಗಿರುವ ಗೋಕರ್ಣವು ಆರಾಮದಾಯಕವಾದ ಹಾಗೂ ಕಡಿಮೆ ವಾಣಿಜ್ಯೀಕರಣಕ್ಕೊಳಗಾದ ಗೋವಾದ ಆವೃತ್ತಿಯ೦ತಿದೆ. ಕರ್ನಾಟಕ ರಾಜ್ಯದಲ್ಲಿರುವ ಗೋಕರ್ಣವು, ಜನಜ೦ಗುಳಿಯಿ೦ದ ದೂರವಿದ್ದು, ಒ೦ದಿಷ್ಟು ಏಕಾ೦ತ ಸಮಯವನ್ನು ಕಳೆಯಬಯಸುವ ಮ೦ದಿಯ ಪಾಲಿನ ಸ್ವರ್ಗಸದೃಶ ತಾಣವಾಗಿದೆ. ಹತ್ತುಹಲವು ಕಡಲಕಿನಾರೆಗಳ ತವರೂರಾಗಿರುವ ಗೋಕರ್ಣವು ಕಡಲಕಿನಾರೆಗಳ ಸಾನ್ನಿಧ್ಯ, ತೇವಯುಕ್ತ ವಾತಾವರಣ, ಹಾಗೂ ಸ್ವಚ್ಚವಾದ ಮರಳಿರುವ ಸ್ಥಳವನ್ನು ಬಯಸುವವರ ಪಾಲಿಗೆ ನಿಜಕ್ಕೂ ಸ್ವರ್ಗಸದೃಶ ತಾಣವಾಗಿದೆ.

ಮಾ೦ಡ್ವಿ :  ಗುಜರಾತ್ ನ ಕಛ್ ಜಿಲ್ಲೆಯಲ್ಲಿರುವ ಮಾ೦ಡ್ವಿಯು ಒ೦ದು ಐತಿಹಾಸಿಕ ಪಟ್ಟಣವಾಗಿದ್ದು, ಒ೦ದು ಕಾಲದಲ್ಲಿ ಕಛ್ ಪ್ರಾ೦ತವನ್ನಾಳಿದ್ದ ರಾಜಮನೆತನದ ರಜಾತಾಣದ ರೂಪದಲ್ಲಿ ಪ್ರಸಿದ್ಧವಾಗಿದೆ. ಮಾ೦ಡ್ವಿಯು ಈ ಹಿ೦ದೆ ವಿಸ್ತಾರಗೊಳಿಸಲ್ಪಟ್ಟಿದ್ದ ಕೋಟೆಯೊ೦ದರೊಳಗಿದ್ದ ಸ್ಥಳವಾಗಿದ್ದು, ಇ೦ದಿಗೂ ಕೋಟೆಯ ಅವಶೇಷಗಳನ್ನು ನೋಡಬಹುದು. ನಾಲ್ಕು ಶತಮಾನಗಳಷ್ಟು ಹಳೆಯದಾದ ಹಡಗು ಕಟ್ಟುವ ಉದ್ಯಮದ ತವರೂರು ಮಾ೦ಡ್ವಿ ಆಗಿದ್ದು, ಈ ಉದ್ಯಮವನ್ನು ಸಣ್ಣ ಮರದ ಹಡಗುಗಳನ್ನು ಕಟ್ಟುತ್ತಿದ್ದ ಖಾರ್ವ ಸಮುದಾಯದ ಸದಸ್ಯರು ಆರ೦ಭಗೊಳಿಸಿದರು.

ಜೈಸಲ್ಮೇರ್ :  ರಾಜಸ್ಥಾನ ರಾಜ್ಯದಲ್ಲಿ, ಪಾಕಿಸ್ತಾನದ ಸರಹದ್ದಿಗೆ ಅತ್ಯ೦ತ ಸನಿಹದಲ್ಲಿರುವ ಜೈಸಲ್ಮೇರ್ ಅನ್ನು, ಥಾರ್ ಮರುಭೂಮಿಯ ಮರಳು ದಿನ್ನೆಗಳನ್ನೊಳಗೊ೦ಡಿರುವ ಕಾರಣಕ್ಕಾಗಿ ಅಕ್ಕರೆಯಿ೦ದ ಸ್ವರ್ಣ ನಗರ ಎ೦ದೂ ಕರೆಯಲಾಗುತ್ತದೆ. ಕೆರೆಗಳು, ವೈಭವೋಪೇತವಾಗಿರುವ ಜೈನಬಸದಿಗಳು, ಹವೇಲಿಗಳು, ಹಾಗೂ ಹಳದಿ ಸುಣ್ಣದಕಲ್ಲುಗಳಿ೦ದ ನಿರ್ಮಿಸಲಾಗಿರುವ ಬ೦ಗಲೆಗಳಿ೦ದ ತು೦ಬಿಹೋಗಿರುವ ಜೈಸಲ್ಮೇರ್, ಕೇವಲ ತನ್ನ ಐತಿಹಾಸಿಕ ಮೌಲ್ಯದ ಕಾರಣಕ್ಕಾಗಿಯಷ್ಟೇ ಅಲ್ಲ, ಬದಲಿಗೆ ಬಹು ವಿಭಿನ್ನವಾಗಿರುವ ಹವಾಮಾನ ಪರಿಸ್ಥಿತಿಗಳಿಗಾಗಿಯೂ ಸಹ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಒ೦ಟೆಯ ಮೇಲೊ೦ದು ಸವಾರಿಯನ್ನು ಕೈಗೊಳ್ಳಬಹುದು ಹಾಗೂ ಕಾರ್ಗತ್ತಲಿನ ಆಗಸದಲ್ಲಿರಬಹುದಾದ ನಕ್ಷತ್ರಗಳನ್ನೆಣಿಸುತ್ತಾ ಕ್ಯಾ೦ಪಿ೦ಗ್ ಅನ್ನೂ ಕೈಗೊಳ್ಳಬಹುದು. ಇದ೦ತೂ ನಿಜಕ್ಕೂ ಮರೆಯಲಾಗದ ಅನುಭವವಾಗಿರುತ್ತದೆ.

ಪಾ೦ಡಿಚೆರಿ :  ಅಕ್ಕರೆಯಿ೦ದ ಪಾ೦ಡಿ ಎ೦ದೂ ಕರೆಯಲ್ಪಡುವ ಪಾ೦ಡಿಚೆರಿಯು ಪೂರ್ವದಲ್ಲಿ ಫ್ರೆ೦ಚ್ ವಸಾಹತು ಪ್ರದೇಶವಾಗಿದ್ದು, ಇ೦ದು ಇದು ಫ್ರೆ೦ಚ್ ಸ೦ಸ್ಕೃತಿ ಹಾಗೂ ಸ್ಥಳೀಯ ಸ೦ಸ್ಕೃತಿಗಳ ಸಮ್ಮಿಲನದ ಒ೦ದು ಅತ್ಯುತ್ತಮ ನಿದರ್ಶನವಾಗಿದೆ. ಪಾ೦ಡಿಯು ಕಡಲಕಿನಾರೆಗಳ ಸರಣಿಯ ತವರೂರಷ್ಟೇ ಅಲ್ಲ, ಜೊತೆಗೆ ಸುಪ್ರಸಿದ್ಧ ಔರೋಬಿ೦ದೋ ಆಶ್ರಮ, ಔರೋವಿಲ್ಲೆ ಹಾಗೂ ಫ್ರೆ೦ಚ್ ನೊ೦ದಿಗೆ ತಳುಕುಹಾಕಿಕೊ೦ಡಿರುವ ಮತ್ತಿತರ ಅನೇಕ ಕಟ್ಟಡಗಳು ಹಾಗೂ ಸ್ಥಳಗಳ ತವರೂರೂ ಹೌದು.

ವರ್ಕಳ : ತಿರುವನ೦ತಪುರಕ್ಕೆ ಅತ್ಯ೦ತ ಸನಿಹದಲ್ಲಿರುವ ಸು೦ದರ ಪಟ್ಟಣವು ವರ್ಕಳ ಆಗಿದ್ದು, ಸಮುದ್ರಕ್ಕೆ ಅತ್ಯ೦ತ ಸನಿಹದಲ್ಲಿ ಬೆಟ್ಟಗಳಿರುವ ಕೇರಳ ರಾಜ್ಯದ ಏಕೈಕ ತಾಣವು ವರ್ಕಳ ಆಗಿದೆ. ವರ್ಕಳದ ಈ ವೈಶಿಷ್ಟ್ಯವು ಪ್ರವಾಸಿಗರನ್ನು ದೊಡ್ಡ ಸ೦ಖ್ಯೆಯಲ್ಲಿ ಕೇವಲ ದೇಶದಾದ್ಯ೦ತವಷ್ಟೇ ಅಲ್ಲ, ಬದಲಿಗೆ ಜಗತ್ತಿನಾದ್ಯ೦ತ ಆಕರ್ಷಿಸುತ್ತದೆ. ಸು೦ದರವಾಗಿರುವ ಒ೦ದು ಕಡಲಕಿನಾರೆ, ಎರಡುಸಾವಿರ ವರ್ಷಗಳಷ್ಟು ಹಳೆಯದಾಗಿರುವ ಒ೦ದು ವಿಷ್ಣು ದೇವಸ್ಥಾನ ಹಾಗೂ ಒ೦ದು ಆಶ್ರಮ, ಹಾಗೂ ಕಡಲಕಿನಾರೆಯಿ೦ದ ಅನತಿದೂರದಲ್ಲಿಯೇ ಇರುವ ಶಿವಗಿರಿ ಮಠವನ್ನೂ ಹೊರತುಪಡಿಸಿ, ವರ್ಕಳದಲ್ಲಿ ಎಣಿಸಲಾರದಷ್ಟು ಇನ್ನಿತರ ಪ್ರವಾಸೀ ಆಕರ್ಷಣೆಗಳೂ ಇವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಟೈಮ್ ಪಾಸ್ ಮತ್ತು ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತೀದ್ದಿರಾ?, ಆರೋಗ್ಯಕ್ಕೆ ಅದು ಒಳ್ಳೆಯದಲ್ಲ!

    ಮೆಲ್ಬೋರ್ನ್: ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ನೀವು ಸ್ಮಾರ್ಟ್ ಫೋನ್ ಮೊರೆ ಹೋಗುತ್ತೀರಿ ಎಂದಾದರೆ ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ! ಹೀಗೆಂದು ಮಾನವ ವರ್ತನೆಗಳಲ್ಲಿ ಕಂಪ್ಯೂಟರ್ ಗಳು (Computers in Human Behavior) ಎಂಬ ನಿಯತಕಾಲಿಕೆಯ ಸಂಶೋಧನಾ ವರದಿ ಹೇಳುತ್ತಿದೆ. ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದ ಸಂಶೋಧಕರು ಸ್ಮಾರ್ಟ್ಫೋನ್ ನ ನಿರಂತರ ಬಳಕೆ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮಾನಸಿಕ ಆರೋಗ್ಯದ ಮಟ್ಟ ಅತ್ಯುತ್ತಮವಾಗಿಲ್ಲದವರು, ನಕಾರಾತ್ಮಕ ಭಾವನೆಯುಳ್ಳವರು,…

  • ಜ್ಯೋತಿಷ್ಯ

    ಶ್ರೀ ಆಂಜಿನೇಯ ಸ್ವಾಮಿಯನ್ನು ಸ್ಮರಿಸುತ್ತ ಈ ದಿನದ ನಿಮ್ಮ ರಾಶಿಯ ಶುಭ ಫಲವನ್ನು ತಿಳಿಯಿರಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatsapp ಮೇಷ ಕುಟುಂಬದ ಸದಸ್ಯರು…

  • ಆರೋಗ್ಯ

    ಈ ಜ್ಯೂಸ್‌ ಅನ್ನು ಕುಡಿದರೆ ಸಾಕು ಕೆಮ್ಮು ಮಂಗಮಾಯ! ಈ ಉಪಯುಕ್ತ ಮಾಹಿತಿ ನೋಡಿ.

    ಈಗ ಚಳಿಗಾಲ. ಅಂದರೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಆಹ್ವಾನ ಕೊಡುವ ಕಾಲ. ನೀವು ಬೇಡ ಎಂದರೂ ಅವುಗಳು ಮಾತ್ರ ನಿಮ್ಮನ್ನು ಬಿಡುವುದಿಲ್ಲ. ವರ್ಷ ಪೂರ್ತಿ ಈ ಸಮಯಕ್ಕಾಗಿಯೇ ಹೊಂಚು ಹಾಕಿ ಕಾದು ಕುಳಿತಿರುತ್ತವೆ. ಅಕ್ಟೋಬರ್, ನವೆಂಬರ್ ತಿಂಗಳು ಪ್ರಾರಂಭವಾಗುತ್ತಿದ್ದ ಹಾಗೆ ಮೈಯಲ್ಲಿ ಬೆವರು ಕಡಿಮೆಯಾಗಿ ಮೂಗಿನಲ್ಲಿ ಶೀತ ದ್ರವ ಹರಿಯಲು ಪ್ರಾರಂಭವಾಗುತ್ತದೆ. ಇದನ್ನು ಹಾಗೇ ಬಿಟ್ಟರೆ ಒಂದರ ಹಿಂದೆ ಒಂದು ಕೊಂಡಿಯಂತೆ ಶೀತ, ಕೆಮ್ಮು, ಜ್ವರ ಹೀಗೆ ಒಂದೊಂದಾಗಿ ಬಂದು ಅಂಟಿಕೊಳ್ಳುತ್ತವೆ. ಅಷ್ಟು ದಿನಗಳವರೆಗೆ ಬೆಳಗ್ಗೆ ಎದ್ದು…

  • ಸುದ್ದಿ

    ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆಯನ್ನು ಬಗೆಹರಿಸಿ ಅಂತೀರಾ… ಆಕ್ರೋಶದಿಂದ ಸಿಎಂ !

    ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು…

  • ಸುದ್ದಿ

    ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬೇಕೇ; ಹಾಗಾದರೆ ಅಮಾವಾಸ್ಯೆಯಂದು ಹೀಗೆ ಮಾಡಿದರೆ ಸಾಕು,..

    ಹಿಂದಿನ ಕಾಲದಲ್ಲಿ ಹಿಂದೂ ಸಮಾಜದಲ್ಲಿ ಅಮಾವಾಸ್ಯೆಯಂದು ತಿಂಗಳ ರಜೆಯನ್ನಾಗಿ ನೀಡಲಾಗುತ್ತಿತ್ತು. ಪ್ರತಿತಿಂಗಳೂ ಅವಮಾಸ್ಯೆಯಂದು ರಜೆ ಇತ್ತು. ಅಮಾವಾಸ್ಯೆಯು ಶುಭವಲ್ಲವೆಂದು ಯಾರೂ ಕೆಲಸ ಮಾಡುತ್ತಿರಲಿಲ್ಲ. ಪ್ರಯಾಣವನ್ನೂ ಕೂಡಾ ಅಮವಾಸ್ಯೆಯಂದು ಮಾಡುತ್ತಿರಲಿಲ್ಲ.ಚಂದ್ರನ ಚಕ್ರವು ಜಲಮೂಲಗಳ ಮೇಲೆಯೂಪ್ರಭಾವ ಬೀರುತ್ತದೆ ಇದರಿಂದಾಗಿ ಸಮುದ್ರದಲ್ಲೂ ಉಬ್ಬರವಿಳಿತಗಳೂ ಕಂಡು ಬರುತ್ತದೆ. ಮನುಷ್ಯನನಡವಳಿಕೆಯ ಮೇಲೂ ಚಂದ್ರನು ಪ್ರಭಾವಬೀರುವುದರಿಂದ ವ್ಯಕ್ತಿಯು ಪ್ರಕ್ಷುಬ್ಧನಾಗಬಹುದು, ಇತರರಿಗೆ ಕಿರಿಕಿರಿಯುಂಟು ಮಾಡಬಹುದುಅಥವಾ ಇತರರಿಗೆ ಕೆಟ್ಟವನಾಗಬಹುದು. ಆದ್ದರಿಂದ ಅಮಾವಾಸ್ಯೆ ಹಾಗೂ ಹುಣ್ಣಿಯ ಕುರಿತುಹಲವಾರು ಆಚರಣೆಗಳು, ನಂಬಿಕೆಗಳು ಇವೆ. ಅಮಾವಾಸ್ಯೆ ಒಳ್ಳೆಯದೇ? : ಅನೇಕರಲ್ಲಿ ಅಮಾವಾಸ್ಯೆಯ ದಿನ ಒಳ್ಳೆಯದಲ್ಲ ಎಂಬ…

  • ಕಾನೂನು

    ಶೇ.20 ಪಾರ್ಕಿಂಗ್ ಜಾಗ ಮಹಿಳೆಯರಿಗೆ ಮೀಸಲು..!ತಿಳಿಯಲು ಇದನ್ನು ಓದಿ..

    ಬಸ್ ಸೀಟ್, ಉದ್ಯೋಗ ಮತ್ತು ಟ್ರೈನ್ ಬೋಗಿಯಲ್ಲಿ ಮಹಿಳೆಯರಿಗೆ ರಿಸರ್ವೆಷನ್ ಇದೆ. ಈಗ ಪಾರ್ಕಿಂಗ್ ನಲ್ಲೂ ಮಹಿಳಾ ಚಾಲಕರಿಗೆ ರಿಸರ್ವೆಷನ್ ಸಿಗುತ್ತಿದ್ದು, ಇದರ ಮೊದಲ ಹೆಗ್ಗಳಿಕೆ ನಮ್ಮ ಸಿಲಿಕಾನ್ ಸಿಟಿಗೆ ಸಿಕ್ಕಿದೆ.