ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ ಕಪ್ಪು ಪರದೆ ಕಂಡರೆ ..? ಫೇಸ್ ಬುಕ್, ಟ್ವಿಟ್ಟರ್, ಅಮೆಜಾನ್ ಮತ್ತು ಮೈಕ್ರೋ ಸಾಫ್ಟ್ ಯಾವುದೂ ಇಲ್ಲದ ಜಗತ್ತನ್ನ ಊಹಿಸಿಕೊಳ್ಳಿ…. ಇದು ನಿಜ ಜೀವನದಲ್ಲಿ ಆಗಿಬಿಟ್ಟರೆ? ಜಗತ್ತು ಎಂತಹ ಪ್ಯಾನಿಕ್ ಗೆ ಒಳಗಾಗಬಹದು?

ಗಮನಿಸಿ ನೋಡಿ ಇಂದು ಜಗತ್ತನ್ನ ಆಳುತ್ತಿರುವುದು ಟೆಕ್ನಾಲಜಿ ಕಂಪನಿಗಳು. ಮೊದಲೇ ಹೇಳಿದಂತೆ 2007 ರ ವರೆಗೆ ಜಗತ್ತನ್ನ ಆಳುತ್ತಿದ್ದದ್ದು ಬ್ಯಾಂಕಿಂಗ್ ವ್ಯವಸ್ಥೆ . ಇದೀಗ ಇದು ಟೆಕ್ನಾಲಜಿ ಕಂಪನಿಗಳ ಕೈ ಸೇರಿದೆ . ಜಗತ್ತು ಹೆಚ್ಚೆಚ್ಚು ನಗದನ್ನ ತೊರೆದು ಡಿಜಿಟಲ್ ಹಣವನ್ನ ಅಪ್ಪುವುದಕ್ಕೆ ಶುರು ಮಾಡಿದೆ. ಹಾಗಾಗಿ ಟೆಕ್ನಾಲಜಿ ಕಂಪನಿಗಳು ಹಣಕಾಸು ವಹಿವಾಟಿನ ಮೇಲೆ ತಮ್ಮ ಪ್ರಭಾವವನ್ನ ಹೆಚ್ಚು ಮಾಡಿಕೊಂಡಿವೆ. ಇಂದು ಜಗತ್ತನ್ನ ಆಳುತ್ತಿರುವ ಪ್ರಮುಖ ಟೆಕ್ನಾಲಜಿ ಕಂಪೆನಿಗಳಲ್ಲಿ ಐದು ಅತ್ಯಂತ ಪ್ರಮುಖವಾದವು. ಅವೆಂದರೆ 1.ಗೂಗಲ್ 2.ಆಪಲ್ 3.ಮೈಕ್ರೋಸಾಫ್ಟ್ 4. ಅಮೆಜಾನ್ 5.ಫೇಸ್ಬುಕ್.ಇಷ್ಟಕ್ಕೂ ನಮಗೇಕೆ ಬ್ಯಾಂಕ್ಗಳ ಮೇಲೆ ಅಷ್ಟೊಂದು ವ್ಯಾಮೋಹ ? ಬ್ಯಾಂಕ್ ಏನು ಬದಲಿಸಲಾಗದ ಶಾಶ್ವತ ವ್ಯವಸ್ಥೆಯೇನು ಅಲ್ಲ . ಬ್ಯಾಂಕ್ ಅಂದರೇನು ? ಬೇರೊಬ್ಬರ ಹಣವನ್ನ ಪಡೆದು ಇನ್ನೊಬ್ಬರಿಗೆ ಸಾಲ ಕೊಡುವ ದಲ್ಲಾಳಿ ಸಂಸ್ಥೆಯಷ್ಟೇ . ತಾನು ಹಣ ಪಡೆದವರಿಗೆ ಒಂದಷ್ಟು ಕೊಟ್ಟು ತಾನು ಕೊಟ್ಟವರಿಂದ ಒಂದಷ್ಟು ವಸೂಲಿ ಮಾಡಿ ಮಧ್ಯದಲ್ಲಿ ಒಂದಷ್ಟು ಹಣವನ್ನ ಲಾಭವನ್ನಾಗಿ ಮಾಡಿಕೊಳ್ಳುವ ಒಂದು ದಲ್ಲಾಳಿ ಮನಸ್ಥಿತಿಯ ಸಂಸ್ಥೆ ಇಷ್ಟು ಬಿಟ್ಟು ಬೇರೇನೂ ಅಲ್ಲ . ಇದೆ ಕಾರಣಕ್ಕೆ ಬ್ಯಾಂಕ್ಗಳು ನೇಪಥ್ಯಕ್ಕೆ ಸೇರುತ್ತದೆ ಅಂದದ್ದು . ಗಮನಿಸಿ ನೋಡಿ ಈ ಕೆಲಸವನ್ನ ಬ್ಯಾಂಕಿನ ಸಹಾಯವಿಲ್ಲದೆ ಟೆಕ್ನಾಲಜಿ ಕಂಪನಿಗಳು ಮಾಡಬಲ್ಲವು .

ಆದರೆ ಇಂದಿನ ಕಾಲಘಟ್ಟದಲ್ಲಿ ಬ್ಯಾಂಕ್ ಇದೆ ಕಾರ್ಯವನ್ನ ಟೆಕ್ನಾಲಜಿ ಸಂಸ್ಥೆಗಳ ಸಹಾಯವಿಲ್ಲದೆ ಮಾಡಲಾರವು . ಅಂದರೆ ಸರಳವಾಗಿ ಬ್ಯಾಂಕಿಗೆ ಟೆಕ್ನಾಲಜಿ ಕಂಪನಿ ಬೇಕು ಟೆಕ್ನಾಲಜಿ ಕಂಪನಿಗೆ ಬ್ಯಾಂಕಿನ ಅವಶ್ಯಕತೆ ಇಲ್ಲ . ಇಂತಹ ಸಂದರ್ಭದಲ್ಲಿ ಬ್ಯಾಂಕ್ಗಳು ಹೇಗೆ ತಾನೇ ಉಳಿದಾವು ? ಬ್ಯಾಂಕ್ ಎನ್ನುವುದು ಇಂದಲ್ಲ ನಾಳೆ ತೆರೆಮರೆಗೆ ಸರಿಯಲಿರುವ ಹಳೆಯ ಪಾತ್ರಧಾರಿ ಅಷ್ಟೇ . ಹಾಗಾದರೆ ಟೆಕ್ನಾಲಜಿ ಕಂಪನಿಗಳು ಮುಳುಗುವುದಿಲ್ಲವೇ ? ಎನ್ನುವ ಪ್ರಶ್ನೆ ಕೂಡ ಸಹಜವಾಗಿ ಓದುಗರಲ್ಲಿ ಹುಟ್ಟುತ್ತದೆ . ಇದಕ್ಕೆ ಉತ್ತರ ಬಹಳ ಸರಳ . ಗಮನಿಸಿ ನೋಡಿ 2007 ಕ್ಕೂ ಮುಂಚೆ ಬ್ಯಾಂಕಿನ ಬಗ್ಗೆ ಮೇಲಿನ ಸಾಲಿನಲ್ಲಿ ಹೇಳಿದ ಹಾಗೆ ಹೇಳಿದ್ದರೆ ಜನ ಹಾಗೆ ಹೇಳಿದವನ ಮಾತನ್ನ ಸಂಶಯದಿಂದ ನೋಡುತ್ತಿದ್ದರು . ಏಕೆಂದರೆ ಅಂದಿನ ಕಾಲಘಟ್ಟದಲ್ಲಿ ಅದೇ ವ್ಯವಸ್ಥೆಯಾಗಿತ್ತು . ಅರ್ಥ ಇಷ್ಟೇ ಟೆಕ್ನಾಲಜಿ ಕಂಪನಿಗಳು ಸದ್ಯದ ನಮ್ಮ ಜಗತ್ತಿನ ಹೊಸ ವ್ಯವಸ್ಥೆ . ಅವು ತಮ್ಮ ಆಟದ ಅತ್ಯುನ್ನತ ಸ್ಥಿತಿಯನ್ನ ತಲುಪುವ ಹಂತದಲ್ಲಿದೆ . ಪರಿಸ್ಥಿತಿ ಹೀಗಿರುವಾಗ ಅವುಗಳ ಕುಸಿತದ ಬಗ್ಗೆ ಈಗಲೇ ಮಾತಾಡುವುದಕ್ಕೆ ಇದು ಸರಿಯಾದ ಸಮಯವಲ್ಲ .

ಅಲ್ಲದೆ ಟೆಕ್ನಾಲಜಿ ಕಂಪನಿಗಳು ತಮ್ಮ ಲಾಭದ ಬಹು ದೊಡ್ಡ ಮೊತ್ತವನ್ನ ರಿಸೆರ್ಚ್ ಅಂಡ್ ಡೆವಲಪ್ಮೆಂಟ್ ಗಾಗಿ ವಿನಿಯೋಗಿಸುತ್ತವೆ . ಮುಂದಿನ ಹತ್ತು ವರ್ಷದಲ್ಲಿ ಜಗತ್ತಿನಲ್ಲಿ ಆಗಬಹದುದಾದ ಬದಲಾವಣೆಗಳ ಊಹೆ ಮಾಡಿಕೊಂಡು ಅದಕ್ಕೆ ಬೇಕಾದ ಸಿದ್ಧತೆಗಳನ್ನ ನೆಡೆಸುತ್ತದೆ . ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಮುದೊಂದು ದಿನ ಹೀಗಾಗಬಹದು ಎನ್ನುವ ಪರಿಕಲ್ಪನೆ ಕೂಡ ಇಟ್ಟುಕೊಂಡಿರಲಿಲ್ಲ . ಹೀಗಾಗಿ ಅವು ಸೋತು ಟೆಕ್ನಾಲಜಿ ಕಂಪನಿಗಳಿಗೆ ಅಧಿಕಾರದ ಚುಕ್ಕಾಣಿ ಬಿಟ್ಟು ಕೊಡಲಿವೆ .
ಕೊನೆ ಮಾತು : ಮೈಕ್ರೋಸಾಫ್ಟ್ ಸಂಸ್ಥೆಯ ಸ್ಥಾಪಕ ಬಿಲ್ ಗೇಟ್ಸ್ ಹೇಳುತ್ತಾರೆ ‘ ನಾವು ಮುಂದಿನ ಎರಡು ವರ್ಷದಲ್ಲಿ ಸಾಧಿಸಬಹುದಾದ ವಿಷಯಗಳನ್ನ ಅತಿಯಾಗಿ ವರ್ಣಿಸಿ ಹೇಳುತ್ತೇವೆ . ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಸಾಧಿಸಬಹದುದಾದ ವಿಷಯಗಳ ಬಗ್ಗೆ ನಮಗೆ ನಿಖರತೆಯಿಲ್ಲ ಹೀಗಾಗಿ ಅವುಗಳನ್ನ ನಾವು ಕಡೆಗಾಣಿಸುತ್ತೇವೆ ‘ . ಟೆಕ್ನಾಲಜಿ ಕಂಪನಿಗಳು ನಮ್ಮನ್ನಾಳುವ ಸಂಸ್ಥೆಗಳು ಇದರಲ್ಲಿ ಸಂಶಯ ಬೇಡ . .
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಯಾವುದೇ ದೇವರ ಪೂಜೆಯನ್ನುಮಾಡಿ, ಆದ್ರೆ ಪೂಜೆಯನ್ನುಮಾಡಿ ಮಾಡುವಾಗ ಪ್ರಮುಖವಾಗಿ ನೆನಪಿಟ್ಟುಕೊಳ್ಳಲೇಬೇಕಾದ ಅಂಶಗಳು ನಂಬಿಕೆ ಹಾಗೂ ಶ್ರದ್ಧೆ.ಇವೆರಡು ಅಂಶಗಳು ಮನಸ್ಸಿನಲ್ಲಿಲ್ಲದಿದ್ದರೆ ಮಾಡುವ ಪೂಜಾವಿಧಾನಗಳು ವ್ಯರ್ಥವೆನಿಸುತ್ತವೆ…
ನಮ್ಮ ದೇಹದ ಎಲ್ಲಾ ಭಾಗಗಳ ಚರ್ಮ ಬಿಳಿಯಾಗಿದ್ದರೂ ಮೊಣಕಾಲು ಮತ್ತು ಮೊಣಕೈಯ ಭಾಗಗಳು ಕಪ್ಪಾಗಿರುತ್ತವೆ ಹಾಗೂ ಒರಟಾಗಿರುತ್ತವೆ. ನೋಡಲು ಅಷ್ಟೇನು ಅಂದವಾಗಿರುವುದಿಲ್ಲ. ಡೆಡ್ಸ್ಕಿನ್ನ ಕಾರಣದಿಂದಾಗಿ ಆ ಭಾಗದ ಚರ್ಮ ಕಪ್ಪಾಗುತ್ತದೆ. ಪ್ರತಿದಿನ ನಾವು ಬಳಕೆ ಮಾಡುವ ಸೋಪ್ನಿಂದ ಈ ಚರ್ಮದ ಬಣ್ಣವನ್ನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದರ ಬದಲಾಗಿ ಇನ್ನೂ ಕೆಲವೊಂದು ಟಿಪ್ಸ್ಗಳನ್ನು ಬಳಕೆ ಮಾಡಿಕೊಂಡು ನೀವು ಚರ್ಮದ ಬಣ್ಣವನ್ನ ಬದಲಾವಣೆ ಮಾಡಬಹುದು. ಆದರೆ ನೀವು ಕೆಳಗಿನ ಈ ಕ್ರಮವನ್ನು ಒಂದು ಬಾರಿ ಬಳಸಿ ನೋಡಬಹುದು… ಟೂಥ್ಪೇಸ್ಟ್…
ಸಮಾಜ ಅಂದಮೇಲೆ ಅವರಲ್ಲಿ ಜನರ ನಡುವೆ ಎಂಥ ಸಂಬಂಧ ಇರಬೇಕು, ಎಂತೆಂಥ ನೀತಿಗಳಿರಬೇಕು ಅನ್ನೋ ವಿಷಯದ ಬಗ್ಗೆ ಎಲ್ಲಾ ಅವರು ತುಂಬಾ ಬರೆದಿಟ್ಟು ಹೋಗಿದ್ದಾರೆ.
ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.ಕಳೆದ 48 ಗಂಟೆಗಳಲ್ಲಿ ಮುಂಗರ್ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್…
ಮಸಾಲೆಗಳ ರಾಣಿಯಂದೇ ಖ್ಯಾತಿ ಪಡೆದಿರುವ ಕಾಳು ಕರಿ ಮೆಣಸು. ಅಡುಗೆ ಮನೆಯಲ್ಲಿ ಇದರದ್ದೇ ಕಾರು ಬಾರು, ಸಾಮಾನ್ಯವಾಗಿ ಇದನ್ನ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ, ಇದು ಅಡುಗೆಯ ರುಚಿಯನ್ನ ಹೆಚ್ಚಿಸುತ್ತದೆ. ಇದು ಬಹಳ ಕಾರವಾಗಿದ್ದು ಇದರ ಸೇವನೆ ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ. ಕಾಳು ಮೆಣಸು ನಮ್ಮ ದೇಹದ ಅನೇಕ ರೋಗಗಳನ್ನ ಕಡಿಮೆ ಮಾಡುತ್ತದೆ. * ಶೀತ-ನೆಗಡಿ:- 2 ಗ್ರಾಂ ಕಾಳು ಮೆಣಸಿನ ಪುಡಿಯನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ಶೀತ-ನೆಗಡಿ ಕಡಿಮೆಯಾಗುತ್ತದೆ. ಕಾಳು ಮೆಣಸಿನ ಪುಡಿಯ ವಾಸನೆಯನ್ನು ತೆಗೆದುಕೊಳ್ಳುವುದ್ರಿಂದ ಸೀನು,…
ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ಗೆ ಅಂದಾಜು ಎರಡು ತಿಂಗಳು ಮಾತ್ರವೇ ಬಾಕಿ ಇದೆ. ಈ ಸಂಬಂಧ ಭಾರತೀಯ ಚುನಾವಣೆ ಆಯೋಗವು ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೇಳಾಪಟ್ಟಿ ಕುರಿತಂತೆ ಸಾಕಷ್ಟು ವದಂತಿಗಳು, ತಪ್ಪು ವೇಳಾಪಟ್ಟಿ ಮಾಹಿತಿ ಹಬ್ಬುತ್ತಿವೆ. ನೆಟ್ಟಿಗರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ವೇಳಾಪಟ್ಟಿ ಫೋಟೊ ಹಂಚುವಾಗ ಸತ್ಯಾಸತ್ಯತೆ ಪರಿಶೀಲಿಸಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಪರಿಶೀಲನೆಗೆ ಒಂದುಷ್ಟು ಮಾಹಿತಿ, ಸತ್ಯತೆ ಇಲ್ಲಿ…