ವಿಸ್ಮಯ ಜಗತ್ತು

ಇಂತಹ ಮೈ ಜುಮ್ಮೆನಿಸುವ ಶವ ಸಂಸ್ಕಾರ ನೀವು ಎಲ್ಲಿಯೂ ನೋಡಿಲ್ಲ, ಕೇಳಿಲ್ಲ!ಗುಂಡಿಗೆ ಇರೋರು ಮಾತ್ರ ಓದಿ…

688

ಮರಣಾ ನಂತರದ ದೇಹದ ವಿಸರ್ಜನ ಕ್ರಿಯೆಗೆ ಅಂತ್ಯೇಷ್ಟಿ ಅಥವಾ ಅಂತಿಮ ಸಂಸ್ಕಾರ ಎಂದು ಕರೆಯಲಾಗುತ್ತದೆ.ನಮ್ಮ ಭಾರತ ದೇಶದಲ್ಲಿ ಅಂತ್ಯಸಂಸ್ಕಾರವು ಧರ್ಮದಿಂದ ಧರ್ಮಕ್ಕೆ ವಿಭಿನ್ನವಾಗಿರುತ್ತದೆ.

ಆದರೆ ನಮ್ಮ ಪಕ್ಕದ ದೇಶವಾದ ಟಿಬೇಟಿನಲ್ಲಿ ವಿಚಿತ್ರ ರೀತಿಯ ಶವ ಸಂಸ್ಕಾರ ಮಾಡುತ್ತಾರೆ. ಸಾಮಾನ್ಯರು ಸತ್ತಾಗ ಹಳೆಯ ಟೈರು ಮತ್ತಿತರ ಉರಿಯುವ ವಸ್ತುಗಳನ್ನು ಉಪಯೋಗಿಸಿ ಶವದಹನ ಮಾಡುವ ಪದ್ಧತಿ ಇದು. ಎರಡನೆಯದು ಹೊಂಡ ತೆಗೆದು ಹೂಳುತ್ತಾರೆ.ಮೂರನೆಯದು ಸತ್ತ ಮೂರೂ ದಿನಗಳ ನಂತರ ಹೆಣವನ್ನು ಬಟ್ಟೆಯಲ್ಲಿ ಸುತ್ತಿ ನೀರಿನಲ್ಲಿ ಹಾಕುತ್ತಾರೆ.

ನಾಲ್ಕನೆಯ ಶವ ಸಂಸ್ಕಾರ ಮಾಡುವ ರೀತಿ ಕೇಳಿದ್ರೆ ನಿಮ್ಮ ಮೈ ಮನ ಜುಮ್ ಎನ್ನಿಸದೇ ಇರಲ್ಲ. ಈ ಭಯಂಕರ ಪದ್ಧತಿ ಏನು ಗೊತ್ತಾ?

ಈ ಪದ್ದತಿಯ ಪ್ರಕಾರ ಸತ್ತ ಹೆಣದ ದೇಹವನ್ನು ರಣಹದ್ದುಗಳಿಗೆ ಆಹಾರವಾಗಿ ಹಾಕುತ್ತಾರೆ. ಮನುಷ್ಯನಿಗೆ ದೇವರು ನೀಡಿದ ದೇಹ ಸತ್ತ ಮೇಲೂ ಪ್ರಾಣಿ ಪಕ್ಷಿಗಳ ಆಹಾರವಾದರೆ ಜನ್ಮ ಸಾರ್ಥಕವಾಗುತ್ತದೆಂದು ಇವರ ನಂಬಿಕೆ.

ಹೀಗೇಕೆ ಮಾಡುತ್ತಾರೆ ಗೊತ್ತಾ..? ಶಾಕ್ಯನೆಂಬ ಬೌದ್ಧ ಮುನಿ ಈ ವಿಧಾನವನ್ನು ಆರಂಭಿಸಿದನಂತೆ. ಆತ ತನ್ನ ದೇಹದ ಮಾಂಸವನ್ನು ಪಾರಿವಾಳಗಳಿಗೆ ಆಹಾರವಾಗಿ ನೀಡಿದನೆಂಬ ಕಥೆಯೇ ಇದಕ್ಕೆ ಪ್ರೇರಣೆಯಾಗಿದೆ.

ಈ ಶವ ಸಂಸ್ಕಾರದಲ್ಲೂ ಇದೆ ಹಲವು ನಿಯಮಗಳು!

ಇಂತಹ ಸಂಸ್ಕಾರವನ್ನು ಗರ್ಭಿಣಿಯರು, ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನವರು, ವ್ಯಾಧಿ ಮತ್ತು ಅಪಘಾತದಿಂದ ಸತ್ತವರ ದೇಹಗಳಿಗೆ ಮಾಡುವುದಿಲ್ಲ. ಇಂತಹ ಶವ ಸಂಸ್ಕಾರಕ್ಕೆ ಯಾವುದೇ ಬಲವಂತವಿರುವುದಿಲ್ಲ. ಸಾಯುವುದಕ್ಕೂ ಮೊದಲು ಆ ವ್ಯಕ್ತಿ ಯಾವ ರೀತಿ ಶವ ಸಂಸ್ಕಾರ ಬೇಕು ಎಂದು ಹೇಳಿರುತ್ತಾನೋ ಅದೇ ರೀತಿ ಶವ ಸಂಸ್ಕಾರ ಮಾಡಲಾಗುತ್ತದೆ.

ಇಲ್ಲಿನ ಪದ್ಧತಿ ಪ್ರಕಾರ ಯಾವುದೇ ವ್ಯಕ್ತಿ ಸತ್ತಾಗ ಮೃತ ದೇಹವನ್ನು ಮೂರೂ ದಿನಗಳವರೆಗೆ ಹಾಗೆಯೇ ಇಡುತ್ತಾರೆ. ಕಾರಣ ಆತ್ಮವು ಮತ್ತೆ ಅವನ ದೇಹ ಪ್ರವೇಶಿಸಿ ಅವನು ಬದುಕಬಹುದೆಂಬ ನಂಬಿಕೆ ಅವರಲ್ಲಿದೆ. ನಂತರ ನಾಲ್ಕನೆಯ ದಿನ ಶವ ಸಂಸ್ಕಾರದ ವಿಧಿ ವಿಧಾನಗಳು ನೆರವೇರಿದ ಬಳಿಕ, ಶವದ ಮಂಡಿಗಳನ್ನು ಮತ್ತು ಕೈಗಳನ್ನು ಹಿಂಭಾಗಕ್ಕೆ ಜೋಡಿಸಿ ಕಟ್ಟಿ ಬಿಳಿ ಬಣ್ಣದ ಬಟ್ಟೆಯಲ್ಲಿ ಬಿಗಿದು ಹೆಗಲಿನಲ್ಲಿ ಹೊತ್ತು, ಮೃತನ ಮಕ್ಕಳು ಅಥವಾ ಬಂಧುಗಳು ಬೆಟ್ಟದಲ್ಲಿರುವ ಕಲ್ಲುಬಂಡೆಯ ಮೇಲೆ ಅದನ್ನು ಕೆಳಗಿಳಿಸಿದ ಬಳಿಕ ಹಿಂತಿರುಗಿ ನೋಡದೆ ಮರಳುತ್ತಾರೆ.

ನಂತರ ಲಾಮಾ ಗುರುಗಳು ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತ ಕೈಯಲ್ಲಿರುವ ಕಂಚಿನ ಗಂಟೆಯನ್ನು ಬಡಿಯಲಾರಂಭಿಸುತ್ತಾರೆ. ರಣಹದ್ದುಎಷ್ಟೇ ದೂರದಲ್ಲಿದ್ದರೂ ಈ ಗಂಟೆಯ ನಾದ ಕೇಳಿದ ಕೂಡಲೇ ಅಲ್ಲಿಗೆ ಧಾವಿಸಿ, ಶವದ ಸುತ್ತಲೂ ಹಾರಾಡಿ ಮೃತ ದೇಹವನ್ನು ತಿನ್ನುತ್ತವೆ.ಇವರ ಪ್ರಕಾರ ರಣ ಹದ್ದುಗಳು ತಿಂದ ವ್ಯಕ್ತಿಯ ಆತ್ಮ ನೇರವಾಗಿ ಸ್ವರ್ಗಕ್ಕೆ ಹೋಗುತ್ತದಂತೆ.ಅವರಿಗೆ ಮರು ಜನ್ಮವಿರುದಿಲ್ಲವಂತೆ.

ಕೆಲವೇ ನಿಮಿಷಗಳಲ್ಲಿ ಸಣ್ಣ ಸಣ್ಣ ಮೂಳೆಯ ಚೂರುಗಳು, ಕೂದಲು, ಚರ್ಮದ ಚಿಕ್ಕತುಂಡುಗಳ ಹೊರತು ಉಳಿದುದೆಲ್ಲವನ್ನೂ ಹದ್ದುಗಳು ತಿಂದು ಮುಗಿಸುತ್ತವೆ. ಬಳಿಕ ಅಸ್ಥಿಪಂಜರವನ್ನು ಸುತ್ತಿಗೆಯಿಂದ ಗುದ್ದಿ ಹುಡಿ ಮಾಡಿ ಹುರಿದ ಬಾರ್ಲಿಯ ಹಿಟ್ಟು, ಯಾಕ್ ಬೆಣ್ಣೆ, ಹಾಲು ಈ ಯಾವುದಾದರೊಂದನ್ನು ಬೆರೆಸಿ ಹದ್ದುಗಳಿಗೆಸೆದಾಗ ಅದನ್ನೂ ಖಾಲಿ ಮಾಡುತ್ತವೆ.

ಮಾಂಸ ಭಕ್ಷಣೆಯಿಂದ ಪವಿತ್ರ ಹದ್ದುಗಳಿಗೆ ಯಾವ ವ್ಯಾಧಿಯೂ ಬರದಿರಲಿ ಎಂದು ಇಂಥ ಮಿಶ್ರಣ ಮಾಡುವರಂತೆ. ಹದ್ದುಗಳು ಶವ ಭಕ್ಷಿಸದಿದ್ದರೆ ಅಪಶಕುನವೆಂದು ನಂಬುತ್ತಾರೆ. ಈ ಹದ್ದುಗಳು ಮಾನವ ಶವದ ಹೊರತು ಬೇರೆ ಯಾವ ಆಹಾರವನ್ನೂ ತಿನ್ನುವುದಿಲ್ಲವಂತೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ, ಸುದ್ದಿ

    ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಟಿಸಿದ ಖ್ಯಾತ ನಟಿ ರಾಧಾ ಹಾಗೂ ಪುತ್ರಿ. ಆಕೆ ಯಾರು ಗೊತ್ತಾ..?

    ಸೌಭಾಗ್ಯಲಕ್ಷ್ಮಿ, ಉಷಾ, ಸಾವಿರ ಸುಳ್ಳು, ದಿಗ್ವಿಜಯ ಸಿನಿಮಾಗಳಲ್ಲಿ ನಟಿಸಿರುವ ಸುಂದರ ಮೊಗದ ನಟಿ ರಾಧಾ ಕನ್ನಡ ಚಿತ್ರಪ್ರೇಮಿಗಳಿಗೆ ಚೆನ್ನಾಗಿ ಪರಿಚಯ. ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಲ್ಲಾದರೂ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಅಭಿನಯಿಸಿದ ಸೌಭಾಗ್ಯಲಕ್ಷ್ಮಿ ಸಿನಿಮಾ.ರಾಧಾ ಮೊದಲ ಹೆಸರು ಉದಯಚಂದ್ರಿಕ. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದವರು. ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸದಿದ್ದರೂ ತಮಿಳು, ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಸರು ಮಾಡಿದವರು ರಾಧಾ. 1991 ರಲ್ಲಿ ರಾಧಾ ಉದ್ಯಮಿ ರಾಜಶೇಖರನ್ ನಾಯರ್ ಅವರನ್ನು ವಿವಾಹವಾದರು.ಈ ದಂಪತಿಗೆ…

  • ಸಿನಿಮಾ

    ಶಾಕಿಂಗ್ ಸುದ್ದಿ.!ನಟನನ್ನು ನೋಡಲಾಗದೇ ಆತ್ಮಹತ್ಯೆ ಯತ್ನಿಸಿದ್ದ ಅಭಿಮಾನಿ ಸಾವು..!

    ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಭಾಶಯ ಹೇಳಲು ಬಂದಿದ್ದ ಅಭಿಮಾನಿಯೊಬ್ಬ ಯಶ್ ಭೇಟಿ ಸಾಧ್ಯವಾಗದ ಹಿನ್ನಲೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರವಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ರವಿ ಮಧ್ಯರಾತ್ರಿಯೇ ಸಾವನ್ನಪ್ಪಿದ್ದಾನೆ. ರವಿ ನೆಲಮಂಗಲ ತಾಲೂಕಿನ ಶಾಂತಿನಗರ ನಿವಾಸಿಯಾಗಿದ್ದು, ಮಂಗಳವಾರ ತನ್ನ ನೆಚ್ಚಿನ ನಟ ಯಶ್ ಅವರ ಹುಟ್ಟುಹಬ್ಬವಿದ್ದ ಕಾರಣ ಅವರನ್ನು ಭೇಟಿ ಮಾಡಲು ಬೆಂಗಳೂರಿನ…

  • ಜ್ಯೋತಿಷ್ಯ

    ನಿಮ್ಮ ಹಸ್ತದಲ್ಲಿ V ಗುರುತು ಇದ್ದರೆ, ನೀವೆಷ್ಟು ಅದೃಷ್ಟವಂತರು ಗೊತ್ತಾ..?

    ನಮ್ಮ ದೇಹದ ಪ್ರತಿಯೊಂದು ಅಂಗವೂ ನಮ್ಮ ಸ್ವಭಾವ, ಆರೋಗ್ಯ, ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ ರೇಖೆಗಳು ಕರ್ಮಕ್ಕೆ ತಕ್ಕಂತೆ ಬದಲಾಗುತ್ತದೆ. ಇದು ನಮ್ಮ ಭೂತ, ಭವಿಷ್ಯ ಹಾಗೂ ವರ್ತಮಾನವನ್ನು ಹೇಳುತ್ತದೆ. ಎಲ್ಲರ ಹಸ್ತ ರೇಖೆ ಒಂದೇ ರೀತಿ ಇರುವುದಿಲ್ಲ. ಹಸ್ತದಲ್ಲಿ ಇರುವ ರೇಖೆಗಳು ಅಕ್ಷರಗಳನ್ನು ಹೋಲುತ್ತದೆ. ಈ ಅಕ್ಷರಗಳು ವ್ಯಕ್ತಿಯ ಸ್ವಭಾವವನ್ನು ಹೇಳುತ್ತವೆ. ನಿಮ್ಮ ಹಸ್ತದಲ್ಲಿ ವಿ ಅಕ್ಷರವಿದ್ರೆ ಅದ್ರ ಅರ್ಧವೇನು ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಹಸ್ತದಲ್ಲಿ ‘ವಿ’ ಅಕ್ಷರವಿದ್ರೆ ನಿಮ್ಮ ಜೀವನದಲ್ಲಿ ಪ್ರಗತಿ ಸಾಧಿಸುತ್ತೀರಿ ಎಂದರ್ಥ….

  • ಸರ್ಕಾರದ ಯೋಜನೆಗಳು

    ಈ ವರ್ಷದ ಕೊನೆಯೊಳಗೆ 5 ಸಾವಿರ ಸೈಟ್ ಹಂಚಿಕೆ ..!ತಿಳಿಯಲು ಈ ಲೇಖನ ಓದಿ..

    ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಹಂತದ ಐದು ಸಾವಿರ ಸೈಟ್‌ಗಳ ಹಂಚಿಕೆಗೆ ಫಲಾನುಭವಿಗಳ ಅಂತಿಮ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ, ಮತ್ತೆ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ಮುಂದಾಗಿದೆ.

  • ಜೀವನಶೈಲಿ

    ಬೆಳಗಿನ ತಿಂಡಿ ಬಿಟ್ಟುಬಿಡಿ, ತೂಕ ಇಳಿಸಿಕೊಳ್ಳಿ ! ತಿಳಿಯಲು ಈ ಲೇಖನ ಓದಿ…

    ನಿಮ್ಮ ದೇಹ ತೂಕವನ್ನು ಬೇಗನೆ ಇಳಿಸಬೇಕೆಂದಿದ್ದರೆ ಬೆಳಗಿನ ಉಪಹಾರವನ್ನು ಬಿಟ್ಟುಬಿಡಿ. ಮಧ್ಯಾಹ್ನ ಊಟದ ವರೆಗೆ ಏನೂ ತಿನ್ನದೆ ಉಪವಾಸ ವಿದ್ದರೆ ಪ್ರತಿನಿತ್ಯ ಸುಮಾರು 350 ರಷ್ಟು ಕಡಿಮೆ ಕ್ಯಾಲೊರಿ ಆಹಾರ ಸೇವಿಸಬಹುದು ಮತ್ತು ಇದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.