ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸುಮಾರು ಜನ ಶನಿವಾರ ಬಂದರೆ, ಎಲ್ಲರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಮಾಡಿಬರುತ್ತಾರೆ. ಈಗ ಎಲ್ಲಾ ಕಡೆ ಈ ರಾಮಭಂಟನ ದೇವಾಲಯಗಳು ಇವೆ. ಹಿಂದೆಯೂ ಸಹ ಊರ ಹೊರಗೆ ಒಂದು ಆಂಜನೇಯನ ದೇವಸ್ಥಾನವನ್ನು ನಮ್ಮ ಹಿರಿಯರು ನಿರ್ಮಿಸಿಟ್ಟಿರುತ್ತಿದ್ದರು.

ಶನಿ ಒಂದೆರಡು ಅಪರೂಪವಾದ ವರವನ್ನು ಆಂಜನೇಯನಿಗೆ ಪ್ರಸಾದಿಸಿದ್ದ. ಆ ಕುತೂಹಲಕಾರಿ ಘಟನೆಗಳನ್ನು ಇಂದು ನಾವು ತಿಳಿದುಕೊಳ್ಳೊಣ…
ತ್ರೇತಾಯುಗದಲ್ಲಿ ರಾವಣನು ಬ್ರಹ್ಮ ಮತ್ತು ಶಿವನ ವರ ಪ್ರಸಾದದಿಂದ ಎಲ್ಲಾ ಲೋಕಗಳನ್ನು ಗೆದ್ದಿದ್ದನು. ಅಲ್ಲದೆ ಆತ ನವಗ್ರಹಗಳನ್ನು ಜಯಿಸಿ, ತನ್ನ ಸಿಂಹಾಸವನ್ನೇರುವ ಮೆಟ್ಟಿಲುಗಳಾಗಿ ಅವರನ್ನು ನೇಮಿಸಿಕೊಂಡನು. ಹೀಗೆ ಇದ್ದಾಗ ರಾವಣನ ಪತ್ನಿ ಮಂಡೋದರೆ ರಾವಣನ ಮಗನಾದ ಮೇಘನಾದನಿಗೆ ಜನ್ಮ ನೀಡುವ ಕಾಲ ಬಂದಿತು. ಆಗ ಮಹಾ ಜ್ಯೋತಿಷ್ಯಜ್ಞನಾದ ರಾವಣನು ಎಲ್ಲಾ ಗ್ರಹಗಳನ್ನು ಆತನ ಜನ್ಮಕುಂಡಲಿಯ 11ನೇ ಮನೆಯಲ್ಲಿ ಹೋಗಿ ನೆಲೆಸುವಂತೆ ಆದೇಶ ನೀಡಿದನು. ಇದರಿಂದ ತನ್ನ ಮಗ ಅಮರನಾಗುತ್ತಾನೆ ಎಂಬ ಆಸೆ ರಾವಣನದಾಗಿತ್ತು.

ಆದರೆ ಇದು ದೇವತೆಗಳಲ್ಲಿ ಭಯವನ್ನುಂಟು ಮಾಡಿತು. ಆಗ ಇದನ್ನು ಅರಿತು, ಮಗು ಜನಿಸುವಾಗ ಶನಿ ಉಚ್ಛ ಸ್ಥಾನದಲ್ಲಿ ಕೂರುವ ಬದಲು ಮೇಘನಾದನ ಕುಂಡಲಿಯಲ್ಲಿ ನೀಚ ಸ್ಥಾನನಾಗಿ ಕುಳಿತು, 12ನೆಯ ಮನೆಯವರೆಗು ಕಾಲು ಚಾಚಿ ಬಿಟ್ಟನು.
ಇದು ರಾವಣನಿಗೆ ತಿಳಿಯಲು ಹೆಚ್ಚು ಸಮಯವಾಗಲಿಲ್ಲ, ಏಕೆಂದರೆ ಶನಿಯ ಈ ನಡೆ ತನ್ನ ಮಗನ ಸಾವಿಗೆ ಕಾರಣನಾಗುತ್ತೆ ಎಂದು ಆತ ಗ್ರಹಿಸಿದನು. ಈ ಕಾರಣವಾಗಿ ಶನಿಯನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿಹಾಕಿದನು. ಇದರಿಂದ ಶನಿಯ ಮುಖವನ್ನು ಯಾರೂ ನೋಡುವುದಿಲ್ಲ ಎಂಬುದು ಆತನ ಅನಿಸಿಕೆಯಾಗಿತ್ತು. ಆದರೆ ಸೀತೆಯನ್ನು ಹುಡುಕುಲು ಬಂದ ಆಂಜನೇಯನು ಆ ಕತ್ತಲ ಕೋಣೆಯಲ್ಲಿ ಇಣುಕಿ ನೋಡಿ ಶನಿಯ ಕಣ್ಣಿಗೆ ಬಿದ್ದು ಬಿಟ್ಟನು.
ಆದರೆ ಶನಿಯ ಕಣ್ಣಿಗೆ ಬಿದ್ದನಲ್ಲ ಎಂಬ ಅಳುಕು ಹನುಮಂತನಿಗೂ ಸಹ ಕಾಡಿತು. ನವಗ್ರಹಗಳಲ್ಲಿ ಶನಿಯನ್ನು ಹೊರತುಪಡಿಸಿ, ಎಲ್ಲರನ್ನು ಹನುಮಂತ ಬಿಡುಗಡೆಗೊಳಿಸಿದ. ಇದನ್ನು ಶನಿ ಕೇಳಿದಾಗ, ನಿನ್ನನ್ನು ಬಿಡಿಸಿದರೆ ನೀನು ನನ್ನ ತಲೆಯ ಮೇಲೆ ಕೂರುವೆ ಎಂದು ಹನುಮಂತ ಹೇಳಿದ.

ಇದರಿಂದ ಶನಿಯು ಆತನಿಗೆ ಅಭಯವನ್ನು ನೀಡಿದ. ನಾನು ನಿನಗೆ ಸಹಾಯ ಮಾಡುವೆ ಎಂದು, ಆದರೂ ನೀನು ನನ್ನ ದೃಷ್ಟಿಗೆ ಬಿದ್ದಿದ್ದರಿಂದ, ನೀನು ಮನೆ, ಹೆಂಡತಿ ಮತ್ತು ಮಕ್ಕಳಿಂದ ದೂರವಾಗುವೆ ಎಂದು ಶನಿ ಹೇಳಿದನು. ಹಾಗಾದರೆ ಬಾ ನಾನು ನಿನ್ನನ್ನು ಬಿಡಿಸುವೆ ನನಗೆ ಮನೆ,ಮಠ, ಹೆಂಡತಿ ಮತ್ತು ಮಕ್ಕಳು ಯಾರೂ ಇಲ್ಲ. ನನಗೆ ರಾಮನ ಅಡಿದಾವರೆ ಮತ್ತು ಆತನ ನಾಮ ಬಿಟ್ಟರೆ ಬೇರೆ ಸಂಪತ್ತಿಲ್ಲ ಎಂದು ಶನಿಯನ್ನು ಬಂಧ ಮುಕ್ತಗೊಳಿಸಿದನು.
ಹೀಗೆ ಶನಿ ಕೃತಜ್ಞತಾಪೂರ್ವಕವಾಗಿ ಹನುಮಂತನನ್ನು ಯಾರೂ ಪೂಜಿಸುವರೋ, ಅವರ ಮೇಲೆ ತನ್ನ ಪ್ರಭಾವವನ್ನು ಕಡಿಮೆ ಮಾಡುತ್ತೇನೆ ಎಂದು ಮಾತುಕೊಟ್ಟನು. ಒಂದು ನಂಬಿಕೆಯ ಪ್ರಕಾರ ಆಂಜನೇಯ ಲಂಕಾದಹನವನ್ನು ಸರಿಯಾಗಿ ಮಾಡಲಾಗಲಿಲ್ಲವಂತೆ, ಆಗ ಹನುಮಂತನ ಸಹಾಯಕ್ಕೆ ಬಂದ ಶನಿ ಲಂಕೆಯನ್ನು ನೋಡಿದ್ದರಿಂದ ಸ್ವರ್ಣಲಂಕ, ಭಸ್ಮವಾಗಿ ಕಪ್ಪು ಲಂಕಾವಾಯಿತಂತೆ.

ಮತ್ತೊಂದು ರೋಚಕ ಕತೆ ಶನಿ ಮತ್ತು ಆಂಜನೇಯನ ನಡುವೆ ನಡೆಯಿತು. ರಾಮಾಯಣ ಯುದ್ಧ ಮುಗಿದು, ಹನುಮಂತನು ಒಮ್ಮೆ ಗುಹೆಯಲ್ಲಿ ರಾಮಧ್ಯಾನ ಮಾಡುತ್ತ ಕುಳಿತಿದ್ದನು. ಆಗ ಶನಿ ಇದೇ ಸಮಯವೆಂದು ಆಂಜನೇಯನ ಹೆಗಲೇರಿದನು. ಇದರಿಂದ ರಾಮ ಧ್ಯಾನಕ್ಕೆ ಭಂಗ ಬಂದಿತು ಎಂದು ಆಂಜನೇಯನಿಗೆ ಸಿಟ್ಟು ಬಂದಿತು.

ಆದರು ಅದನ್ನು ನಿಗ್ರಹಿಸಿಕೊಂಡು, ಆಂಜನೇಯ ಹೀಗೆ ಹೇಳಿದ: ಹೇ ಶನಿದೇವ, ನಿಮ್ಮ ತಂದೆಯಾದ ಸೂರ್ಯ ದೇವನು ನನಗೆ ಅನೇಕ ವರ ನೀಡಿದ್ದಾನೆ. ಆತ ನನ್ನ ಗುರು, ಗುರುವಿನ ಮಗನನ್ನು ಶಿಕ್ಷಿಸುವ ಕೆಲಸ ನನಗೆ ನೀಡಬೇಡ. ಇಳಿದು ಹೋಗಿಬಿಡು ಎಂದು ಹೇಳಿದನು. ಅದಕ್ಕೆ ಶನಿಯು ಆಂಜನೇಯ, ಇದು ನನ್ನ ಸರದಿ, ಅದರ ಪ್ರಕಾರ ನಾನು ನಿನ್ನ ಹೆಗಲೇರಬೇಕು, ಇದು ವಿಧಿ ನಿಯಮ ಎಂದನು. ಮಾತಿಗೆ ಮಾತು ಬೆಳೆಯಿತು, ಶನಿ ಸೋಲಲಿಲ್ಲ.

ಆಗ ಆಂಜನೇಯನು ಉಗ್ರ ಸ್ವರೂಪವನ್ನು ತಾಳಿ ತನ್ನ ದೇಹವನ್ನು ಬೆಳೆಸಿದನು. ಇದರಿಂದ ಹೆಗಲ ಮೇಲಿದ್ದ ಶನಿ ಗುಹೆಯ ಛಾವಣಿ ಮತ್ತು ಆಂಜನೇಯನ ದೇಹದ ನಡುವೆ ಸಿಲುಕಿ ಅಪ್ಪಚ್ಚಿಯಾಗಿ ಹೋದನು. ಆ ನೋವನ್ನು ತಾಳಲಾರದೆ ಶನಿ ಸೋತು ಆಂಜನೇಯನನ್ನು ಅಂಗಲಾಚಿದನು. ಆಗ ಆಂಜನೇಯನು ರಾಮ ನಾಮ ಜಪ ಮಾಡುವವರ ತಂಟೆಗೆ ಹೋಗುವುದಿಲ್ಲ ಎಂದು ಮಾತು ನೀಡಿದರೆ ಮಾತ್ರ ನಿನ್ನನ್ನು ಬಿಡುತ್ತೇನೆ ಎಂದನು. ಇದಕ್ಕೆ ಶನಿಯು ಸಹ ಅಸ್ತು ಎಂದನು.
ಎಷ್ಟಾದರು ಆಂಜನೇಯನನ್ನು ಸ್ಮರಿಸಿದರೆ ರಾಮನನ್ನು ಸ್ಮರಿಸಿದಂತೆ ಅಲ್ಲವೇ, ಹೀಗೆ ಹನುಮಂತನನ್ನು ನಾವು ಶನಿವಾರದಂದು ಪೂಜಿಸಲು ಆರಂಭಿದೆವು. ಇನ್ನೂ ಒಂದು ವಿಚಾರ ಏನಪ್ಪಾ ಎಂದರೆ ಆಂಜನೇಯ ಸಹ ಹುಟ್ಟಿದ್ದು, ಶನಿವಾರವಂತೆ!
ಕೃಪೆ : ಶ್ರೀದರ್ ಭಟ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಸದಾ ಕಾಲವು ನಿಮ್ಮನ್ನು ಜನರು ಮಾತನಾಡಿಸಬೇಕು. ಪ್ರತಿಯೊಂದು ಕ್ರಿಯೆಗೂ ಶಹಾಬಾಸ್ಗಿರಿ ಕೊಡಬೇಕೆಂಬ ಮನೋಭೂಮಿಕೆಯಿಂದ ಹೊರಬನ್ನಿ. ಏಕೆಂದರೆ ಎಲ್ಲರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿಸಲು ಶಕ್ಯವಿಲ್ಲ. ನಿಮ್ಮಲ್ಲಿನ ತಪ್ಪನ್ನು ತಿದ್ದುವವರನ್ನುನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…
ಸಮಯ ಮತ್ತು ಸಂದರ್ಭದ ಅರಿವಿಲ್ಲದೆ ನಾವು ಮಾಡುವ ಕೆಲವು ಕೆಲಸಗಳು ಕೆಲವೊಮ್ಮೆ ನಗೆಪಾಟಲಿಗೆ ದಾರಿಮಾಡಿ ಕೊಡುತ್ತದೆ. ಇಂತಹದ್ದೇ ಒಂದು ಕೆಲಸವನ್ನ ಇಂಜಿನಿಯರಿಂಗ್ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮಾಡಿದ್ದಾನೆ ಮತ್ತು ಈತ ಮಾಡಿದ ಕೆಲಸಕ್ಕೆ ಒಂದು ಕ್ಷಣ ಎಲ್ಲರೂ ಬೆರಗಾಗಿದ್ದಾರೆ. ಇನ್ನು ಇದೂ ದೊಡ್ಡ ಸುದ್ದಿ ಅಲ್ಲದೆ ಇರಬಹುದು ಆದರೆ ಇದು ವಿಭಿನ್ನ ಅನ್ನುವ ಕಾರಣಕ್ಕೆ ನಾವು ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ…
ಚೆನ್ನೈ ನ 7 ವರ್ಷದ ಬಾಲಕನ ಬಾಯಲ್ಲಿ ಸುಮಾರು 526 ಹಲ್ಲುಗಳು ಬೆಳೆದಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.ನಗರದ ಸವಿತಾ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ 7 ವರ್ಷದ ಬಾಲಕನ ಬಾಯಿಯಲ್ಲಿದ್ದ 526 ಹಲ್ಲುಗಳನ್ನು ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದಿದ್ದಾರೆ.‘ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ್’ ಎಂಬ ಅಪರೂಪದ ಖಾಯಿಲೆಯಿಂದ ಬಾಲಕ ಬಳಲುತ್ತಿದ್ದ. ಸುಮಾರು 526 ಹಲ್ಲುಗಳು ಬೆಳೆದಿದ್ದರಿಂದ ಕೆಳಗಿನ ಬಲ ದವಡೆ ತುಂಬಾ ಊದಿಕೊಂಡಿತ್ತು. ಸರ್ಜರಿ ಮೂಲಕ ಆ ಎಲ್ಲ ಹಲ್ಲುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಬಾಲಕ…
ಪುದೀನಾ ಎಲೆಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿ ಕೆಟ್ಟ ಉಸಿರನ್ನು ತಡೆಯುವುದು. ಪುದೀನಾವನ್ನು ಏಶ್ಯಾ, ಯುರೋಪ್ ಮತ್ತು ಮಧ್ಯಪೂರ್ವ ದೇಶಗಳಲ್ಲಿ ಬೆಳೆಸಲಾಗುತ್ತದೆ. ಇದನ್ನು ತಾಜಾ, ಒಣಗಿಸಿ ಹಾಗೂ ಸಾರಭೂತ ತೈಲವಾಗಿ ಬಳಸಿಕೊಳ್ಳಲಾಗುವುದು. ಯಾವುದೇ ರೂಪದಲ್ಲಿ ಬಳಸಿದರೂ ಪುದೀನಾವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಹೈದರಾಬಾದ್: ಧೂಮಪಾನ ನಿಷೇಧ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಟಾಲಿವುಡ್ ನಟ ರಾಮ್ ಪೋಥಿನೇನಿ ಅವರಿಗೆ ಸೋಮವಾರ ಹೈದರಾಬಾದ್ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ. ಈ ಘಟನೆ ನಗರದ ಐತಿಹಾಸಿಕ ಚಾರ್ಮಿನಾರ್ ಬಳಿ ನಡೆದಿದೆ. ನಟ ರಾಮ್ ತಮ್ಮ ಮುಂಬರುವ ‘ಐಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದಲ್ಲಿ ಅವರ ಪಾತ್ರದ ಭಾಗವಾಗಿ ನಟ ಸಿಗರೇಟ್ ಸೇದಿದ್ದರು. ನಟ ರಾಮ್ ಸಿಗರೇಟ್ ನಿಷೇಧಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ…
ಈ ಅಧುನಿಕ ಕಾಲದಲ್ಲಿ ರಾಜಕಾರಣಿಗಳಿಗೆ ತಮ್ಮ ಮಕ್ಕಳನ್ನು ಕೂಡ ರಾಜಕಾರಣಿಗಳನ್ನಾಗಿ ಮಾಡಬೇಕು ಎಂಬ ಆಸೆ ಸಹಜ. ಆದ್ರೆ ರಾಜಸ್ಥಾನದ ಶಾಸಕರೊಬ್ಬರು ತಮ್ಮ ಮಗನಿಗೆ ಸರ್ಕಾರಿ ಕೆಲಸ ಸಿಕ್ಕಿದೆಯಲ್ಲಾ ಸಾಕು ಎoದು ತೃಪ್ತಿಪಟ್ಟಿದ್ದಾರೆ. ಅಷ್ಟಕ್ಕೂ ಶಾಸಕರ ಮಗನಿಗೆ ಸಿಕ್ಕಿರೋ ಉದ್ಯೋಗ ಯಾವುದು ಗೊತ್ತಾ? ರಾಜಸ್ಥಾನದ ವಿಧಾನಸಭೆಯಲ್ಲಿ ಜವಾನ ಆತ.