ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಸಮಾಜದಲ್ಲಿ ಹೈಷಾರಾಮಿ ಜೀವನ ನಡೆಸುವ ಜನರಿಗಿಂತ ಒಪ್ಪತ್ತಿನ ಊಟಕ್ಕಾಗಿ ದಿನಗೂಲಿ ಮಾಡುವ ಮಂದಿ ಜಾಸ್ತಿ. ಅಲ್ಲದೇ ಪೋಷಕರ ಜೊತೆ ತಮ್ಮ ಮಕ್ಕಳು ಕೂಡ ಕೆಲಸ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಆಂಧ್ರಪ್ರದೇಶದ ರೈಲಿನಲ್ಲಿ ಒಬ್ಬ ಹುಡುಗ ಬಹಳ ಆಯಾಸದಿಂದ ಕುಳಿತ್ತಿದ್ದ. ಇದನ್ನು ಕಂಡ ಸಾಫ್ಟವೇರ್ ಉದ್ಯಮಿ ಏನ್ ತಮ್ಮ ಬಹಳ ಆಯಾಸದಿಂದ ಕುಳಿತ್ತಿದ್ದೀಯಾ? ಸಮೋಸ ಎಲ್ಲಾ ಮಾರಿಬಿಟ್ಟೆಯಾ? ಎಂದು ಕೇಳಿದ.

ಇದಕ್ಕೆ ಉತ್ತರಿಸಿದ ಸಮೋಸ ಮಾರುವ ಹುಡುಗ, ಹೌದು ಸಾರ್ ಎಲ್ಲಾ ಮಾರಿಬಿಟ್ಟೆ, ಇನ್ನೇನ್ ಮಾಡುವುದು ಹೊಟ್ಟೆ ಪಾಡಿಗಾಗಿ ಏನಾದರು ಮಾಡಲೇಬೇಕಲ್ವಾ ಸರ್ ಎಂದ.. ಈ ಮಾತನ್ನು ಕೇಳಿ ಬೇಸರಗೊಂಡ ಸಾಫ್ಟವೇರ್ ಉದ್ಯಮಿ, ಒಂದು ಸಮೋಸ ಮಾರಿದರೆ ನಿನಗೆ ಎಷ್ಟು ಸಿಗುತ್ತದೆ? ದಿನಕ್ಕೆ ಎಷ್ಟು ಸಮೋಸ ಮಾರ್ತ್ಯಪ್ಪ? ಎಂದು ಕೇಳಿದ. ಇದಕ್ಕೆ ಸಮೋಸ ಮಾರುವವನು, ಸಾರ್ ಒಂದು ಸಮೋಸ ಮಾರಿದರೆ 75 ಪೈಸೆ ಸಿಗುತ್ತದೆ. ಸೀಸನ್ ಸಮಯದಲ್ಲಿ ದಿನಕ್ಕೆ ಮೂರರಿಂದ ಮೂರು ವರೆ ಸಾವಿರ ಮಾರುತ್ತೇನೆ, ಸೀಸನ್ ಇಲ್ಲದಿದ್ದಾಗ ದಿನಕ್ಕೆ ಎರಡು ಸಾವಿರ ಸೇಲ್ ಮಾಡುತ್ತೇನೆ ಎಂದು ಹೇಳಿದ !

ಮನಸಲ್ಲೇ ಯೋಚಿಸದ ಆ ಉಧ್ಯಮಿ ದಿನಕ್ಕೆ ಎರಡು ಸಾವಿರ ಸಮೋಸ ಮಾರಿದರೆ, ಒಂದು ಸಾವಿರದ ಐನೂರು ರೂ ಆದಾಯ, ಅದೇ ತಿಂಗಳಿಗೆ 45 ಸಾವಿರ ! ನನ್ನ ಸಂಬಳ ತಿಂಗಳಿಗೆ ಕೇವಲ 25 ಸಾವಿರ, ನನ್ನ ಕೆಲಸದ ಒತ್ತಡದಲ್ಲಿ ನನ್ನ ನಗುವನ್ನೇ ಮರೆತು ಹೋಗಿದ್ದೇನೆ, ಆದರೆ ಈ ಹುಡುಗ ಹಾಗಲ್ಲ, ಎಂದುಕೊಂಡು ಮತ್ತೇ ಸಮೋಸ ಹುಡುಗನಿಗೆ, ನೀವೆ ಸಮೋಸವನ್ನು ತಯಾರು ಮಾಡುತ್ತೀರ ಎಂದು ಪ್ರಶ್ನಿಸಿದ? ಇದಕ್ಕೆ ಸಮೋಸ ಮಾರುವವನು, ಇಲ್ಲಾ ಸಾರ್ ನಮ್ಮ ಯಜಮಾನ ಬೇರೆಯವರ ಬಳಿ ಕೊಂಡುಕೊಂಡು ನಮಗೆ ಕೊಡುತ್ತಾನೆ ಎಂದು ಹೇಳಿದ. ಈ ಕೆಲಸ ಬಿಟ್ಟು ಬೇರೆ ಏನು ಮಾಡುತ್ತೀಯಾ? ಎಂದು ಉಧ್ಯಮಿ ಕೇಳಿದ.. ಕಳೆದ ವರ್ಷ ನನ್ನ ಅಕ್ಕನಿಗೆ ಮದುವೆ ಮಾಡಿದೆ, ನಂತರ ನಮ್ಮ ಊರಿನಲ್ಲಿ ಒಂದು ಜಮೀನು ಕೂಡ ಖರೀದಿ ಮಾಡಿದ್ದೇನೆ. ಅದರ ಬೆಲೆ ಈಗ ಸುಮಾರು 15 ಲಕ್ಷವಿದೆ. ಈ ಮಾತನ್ನು ಕೇಳಿ ಆಶ್ಚರ್ಯಚಕಿತನಾದ ಇಂಜಿನಿಯರ್ ನೀನು ಎಲ್ಲಿಯ ತನಕ ವ್ಯಾಸಾಂಗ ಮಾಡಿದ್ದೀಯಾ ಎಂದು ಕೇಳಿದ.

ಇದಕ್ಕೆ ಉತ್ತರಿಸಿದ ಹುಡುಗ, ಸರ್ ನಾನು ಮೂರನೇ ತರಗತಿವರೆಗೂ ಓದಿದ್ದೇನೆ, ಇದಾದ ಮೇಲೆ ಓದಲು ಸಾಧ್ಯವಾಗಲಿಲ್ಲ ಎಂದು ಹೇಳಿದ, ಇದಕ್ಕೆ ಉಧ್ಯಮಿ ಯಾಕೆ ಮುಂದೆ ಓದಬೇಕು ಅನಿಸಲಿಲ್ಲವಾ? ಸಾರ್ ನನ್ನ ವ್ಯಾಪಾರವನ್ನು ನನ್ನ ಮಕ್ಕಳಿಗೆ ಕೊಡಬಹುದು, ಆದರೆ ನಿಮ್ಮ ಉದ್ಯೋಗ ನಿಮ್ಮ ಮಕ್ಕಳಿಗೆ ಕೊಡಲು ಸಾಧ್ಯವಾಗುವುದಿಲ್ಲ ಅಲ್ಲವಾ? ಇದೇ ನನಗೆ ಜನ್ಮ ಕೊಟ್ಟ ತಂದೆ ಕಲಿಸಿದ ನೀತಿ, ಹಣವನ್ನು ಹೇಗೆ ಸಂಪಾದನೆ ಮಾಡಬೇಕು ಎಂಬುದು ನನಗೆ ಗೊತ್ತಾಗಿದೆ, ಹಾಗಾಗಿ ಓದು ನನಗೆ ಅವಶ್ಯಕತೆ ಇಲ್ಲ. ಸರ್ ನನ್ನ ಸ್ಟೇಷನ್ ಬಂತು ನಾನು ಹೊರಡುತ್ತೇನೆ ಎಂದು ಹೇಳಿ ಹೊರಟು ಬಿಟ್ಟ ಸಮೋಸ ಮಾಡುವ ಹುಡುಗ..

ನೋಡಿದ್ರಲ್ಲ ವಿದ್ಯೆ ಎಂಬುದು ಬರೀ ಜ್ಞಾನಾರ್ಜನೆಗೆ ಮತ್ತು ಒಳ್ಳೆಯ ನಾಗರೀಕನಾಗಿ ಬದುಕಲು, ದಯವಿಟ್ಟು ಓದನ್ನು ವ್ಯವಹಾರಕ್ಕೆ ಉಪಯೋಗಿಸಬೇಡಿ. ವಿದ್ಯೆ ಇಲ್ಲದವರನ್ನು ಕೀಳು ಮಟ್ಟದಲ್ಲಿ ನೋಡಬೇಡಿ, ಓದಿದವನಿಗೆ ಒಂದೇ ಕೆಲಸ, ಓದಾದೇ ಇಲ್ಲದವನಿಗೆ ಮಾಡಿದ್ದೆಲ್ಲಾ ಕೆಲಸಾನೇ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎರಡು ಕುಟುಂಬಗಳನ್ನು ಒಂದು ಮಾಡುವ ಸಮಾರಂಭವೇ ಮದುವೆ…ಇಲ್ಲಿಯವರೆಗೂ ಇದ್ದ ಒಂಟಿ ಪ್ರಯಾಣ ಇನ್ನು ಮುಂದೆ ಜೋಡಿಯಾಗಿ ಸಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಗೊಂದು ವಿಶಿಷ್ಟತೆಯಿದೆ. ಐದು ದಿನಗಳ ಕಾಲ ನಯನ ಮನೋಹರವಾಗಿ ಸಾಗುವ ಮದುವೆಯಲ್ಲಿ ಬಂಧು ಮಿತ್ರರು,ಬಾಜಾ ಭಜಂತ್ರಿಗಳು..ಎಲ್ಲವೂ ಓಕೆ.
ಹೊಳೆ ನರಸೀಪುರ ಪಟ್ಟಣದ ಪ್ರೈಂ ಕ್ಲಬ್ ಮತ್ತು ಗೆಳೆಯರ ಬಳಗ ಈ ಶ್ಲಾಘನೀಯ ಕೆಲಸವನ್ನು ಮಾಡಿದೆ. ತಮ್ಮ ತಮ್ಮ ವಾಟ್ಸಪ್ ಗ್ರೂಪ್ನ ಸ್ನೇಹಿತರೆಲ್ಲ ಒಂದಾಗಿ ನೆರೆ ಪೀಡಿತ ಪ್ರದೇಶಗಳಾದ ಹಾವೇರಿಯ ಕೂಡಲ ಗ್ರಾಮ ಮತ್ತು ಬೆಳಗಾವಿಯ ರಾಮದುರ್ಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್ಗಳನ್ನು ವಿತರಿಸಿದ್ದಾರೆ. ಎರಡು ಜಿಲ್ಲೆಗಳ ಒಟ್ಟು ಮೂರು ಸರ್ಕಾರಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಿದ್ದಾರೆ. ಸ್ನೇಹಿತರೆಲ್ಲ ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ನಂತರ ಹೋಲ್…
ಸೀತಾಫಲ… ಈ ಕಾಲದಲ್ಲಿ ನಮಗೆ ಲಭಿಸುವ ಹಣ್ಣುಗಳಲ್ಲಿ ಇದೂ ಒಂದು. ಇದರಲ್ಲಿ ವಿಟಮಿನ್ ಎ, ಮೆಗ್ನಿಷಿಯಮ್, ಪೊಟ್ಯಾಷಿಯಂ, ಫೈಬರ್, ವಿಟಮಿನ್ ಬಿ6, ಕ್ಯಾಲ್ಸಿಯಂ,ವಿಟಮಿನ್ ಸಿ, ಐರನ್ನಂತಹ ಅತ್ಯಂತ ಮುಖ್ಯವಾದ ಪೋಷಕಗಳು ಅದೆಷ್ಟೋ ಇವೆ.
ನಮ್ಮ ದೇಶದಲ್ಲಿ ತುಂಬಾ ಜನರು ರೈಲು ಪ್ರಯಾಣವನ್ನ ಮಾಡೇ ಇರುತ್ತಾರೆ, ರೈಲು ಪ್ರಯಾಣ ಕೆಲವರಿಗೆ ಕಡಿಮೆ ಖರ್ಚಿನದ್ದು ಆಗಿದ್ದರೆ ಇನ್ನು ಕೆಲವರಿಗೆ ಅದೂ ಅವಿಸ್ಮರಣೀಯ ಅನುಭವವನ್ನ ಕೊಡುತ್ತದೆ. ಇನ್ನು ಕೆಲವರು ರೈಲಿನಲ್ಲಿ ಪ್ರಯಾಣ ಮಾಡದೇ ಇದ್ದರೂ ಕೂಡ ರೈಲನ್ನಾದರೂ ನೋಡಿರುತ್ತಾರೆ. ಇನ್ನು ಜನರಿಗೆ ರೈಲುಗಳ ಬಗ್ಗೆ ಮತ್ತು ರೈಲು ಚಾಲಕರ ಬಗ್ಗೆ ಮಾಹಿತಿ ಎಲ್ಲರಿಗೂ ತಿಳಿದಿರುತ್ತದೆ ಆದರೆ ರೈಲು ಹಳಿಗಳ ಬಗ್ಗೆ ಮತ್ತು ಅದನ್ನ ಮಾಡಲು ತಗುಲುವ ಖರ್ಚಿನ ಮತ್ತು ಒಂದು ಕಿಲೋ ಮೀಟರ್ ರೈಲು ಹಳಿಯನ್ನ…
ಅಂಟರ್ 19 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತದ ಯುವ ಪಡೆ ಪಾಕಿಸ್ತಾನದ ವಿರುದ್ಧ 88 ಎಸೆತಗಳು ಬಾಕಿ ಇರುವಂತೆ 10 ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಭಾರತದ ಆರಂಭಿಕ ಬ್ಯಾಟ್ಸ್ಮನ್ 18 ವರ್ಷದ ಯಶಸ್ವಿ ಜೈಸ್ವಾಲ್ 105 ರನ್ (113 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ (99 ಎಸೆತ, 6 ಬೌಂಡರಿ) ಗಳಿಸಿ ತಂಡಕ್ಕೆ ಗೆಲುವು…
ಹಾವು, ಚೇಳು ಕಚ್ಚಿದರೆ ಏನು ಮಾಡಬೇಕು ಎಂಬುದೇ ನಮಗೆ ಗೊತ್ತಾಗಲ್ಲ. ಯಾಕೆಂದರೆ ಅಂತಹ ಸಂದರ್ಭಗಳಲ್ಲಿ ಯಾರೇ ಆದರೂ ಗಾಬರಿ ಬೀಳುವುದು ಸಾಮಾನ್ಯ.ಆದರೆ ನೀವು ಗಾಬರಿ ಬೀಳುವ ಆಗಿಲ್ಲ.ಆದರೆ ಇದಕ್ಕೆ ಮನೆಯಲ್ಲೇ ಪರಿಹಾರ ಇದೆ.