ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ.
ನಿಮ್ಮ ನೆಚ್ಚಿನ ಪಾದರಕ್ಷೆ ಯನ್ನು ತೊಡಲು ಹಿಂದೇಟು ಹಾಕುತ್ತಿದ್ದೀರಾ? ಒಡೆದ ಹಿಮ್ಮಡಿಗಳೇ ಇದಕ್ಕೆ ಕಾರಣವೇ? ಇದು ಕಾಣಿಸಬಾರದೆಂದು ಎಷ್ಟೇ ಪ್ರಯತ್ನ ಪಟ್ಟರೂ ಯಾವುದೋ ಸಂದ ರ್ಭದಲ್ಲಿ ಕಾಣಿಸಿಕೊಂಡು ಮುಜುಗರ ಅನುಭವಿಸಿದ್ದೀರಾ?
ಹಿಮ್ಮಡಿಗಳ ಬಿರುಕಿನ ಕಾರಣ ಎದುರಾಗುವ ನೋವಿನಿಂದ ಕೆಲವು ಪಾದ ರಕ್ಷೆಗಳನ್ನು ತೊಡಲೂ ಸಾಧ್ಯವಾಗುತ್ತಿಲ್ಲವೇ? ಬಿರುಕು ಮುಚ್ಚಿಕೊಳ್ಳಲು ಕಾಲುಚೀಲ ಧರಿಸುತ್ತಿದ್ದೀರಾ? ಈ ಬಿರುಕು ಗಳನ್ನು ತುಂಬುವ ವಿಧಾನಗಳೆಲ್ಲವೂ ಕೈ ಕೊಟ್ಟಿವೆಯೇ? ನಮ್ಮ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ.
ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಪಾದಗಳು ಇಡಿಯ ಶರೀರದ ಭಾರವನ್ನು ಹೊರಬೇಕಾದುದರಿಂದ ಇಲ್ಲಿಯ ಚರ್ಮ ಅತ್ಯಂತ ದಪ್ಪನಾಗಿರುತ್ತದೆ.
ಅದರಲ್ಲಿಯೂ ಅಂಚುಗಳಲ್ಲಿ ಹೆಚ್ಚು ದಪ್ಪನಾಗಿರುತ್ತದೆ. ಈ ದಪ್ಪನಾದ ಪಡೆ ಜೀವಕೋಶಗಳು ಸತ್ತರೂ ಸುಲಭವಾಗಿ ನಿವಾರಣೆಯಾಗದೇ ಅಂಟಿಕೊಂಡೇ ಇರುತ್ತವೆ.
ಕ್ರಮೇಣ ಇವು ಒಣಗಿ ಸೆಳೆತ ಹೆಚ್ಚಾಗುವ ಕಾರಣ ಚಿಕ್ಕ ಬಿರುಕು ಉಂಟಾಗುತ್ತದೆ. ಒಣಗುವ ಪ್ರಮಾಣ ಹೆಚ್ಚಾದಂತೆ ಬಿರುಕು ಆಳವಾಗುತ್ತಾ ಹೋಗುತ್ತದೆ. ಆದ್ದರಿಂದ ಈ ಭಾಗವನ್ನು ಆಗಾಗ ಉಜ್ಜಿಕೊಂಡು ಈ ಸತ್ತ ಜೀವಕೋಶಗಳನ್ನು ನಿವಾರಿಸುತ್ತಾ ಇರಬೇಕು. ಒಣಚರ್ಮ, ದೇಹದ ಭಾರ ವನ್ನು ಸಮರ್ಪಕವಾಗಿ ಹರಡದ ವಿನ್ಯಾಸದ ಪಾದ ರಕ್ಷೆಗಳು, ಶಿಲೀಂಧ್ರದ ಸೋಂಕು, ಸ್ಥೂಲ ಕಾಯ, ಸ್ವಚ್ಛತೆಯಲ್ಲಿ ಕೊರತೆ ಮೊದಲಾದ ಕಾರಣ ಗಳಿಂದ ಈ ಬಿರುಕುಗಳು ಇನ್ನಷ್ಟು ಆಳಕ್ಕೆ ಇಳಿದು ಜವಾದ ಚರ್ಮವನ್ನು ಹರಿದು ರಕ್ತಬರಿಸಬಹುದು.
ಸಾಮಾನ್ಯವಾಗಿ ಬಿರುಕುಗಳು ಕಾಣಿಸಿಕೊಂಡ ಬಳಿಕವೂ ಇದರಲ್ಲಿ ತಕ್ಷಣಕ್ಕೆ ಯಾವುದೇ ನೋವು ಇರದ ಕಾರಣ ನಾವೆಲ್ಲರೂ ಇದನ್ನು ಅಲಕ್ಷಿಸಿಬಿಡುತ್ತೇವೆ.
ಅಯ್ಯೋ ನಾಳೆ ಸ್ನಾನ ಮಾಡಿಕೊಂಡಾಗ ಉಜ್ಜಿಕೊಂಡರಾಯಿತು ಎಂಬ ಅಸಡ್ಡೆಯಿಂದಲೇ ಹೆಚ್ಚಿನವರಿಗೆ ಈ ತೊಂದರೆ ಉಲ್ಬಣಾವಸ್ಥೆಗೆ ಅಂದರೆ ಸೋರಿಯಾಸಿಸ್ (psoriasis) ಎಂಬ ಸ್ಥಿತಿಗೆ ತಲುಪಲೂ ಕಾರಣವಾಗಬಹುದು.
ಆದ್ದರಿಂದ ಈ ಬಿರುಕುಗಳನ್ನು ಮುಚ್ಚುವತ್ತ ಎಷ್ಟು ಬೇಗನೇ ಮನಸ್ಸು ಮಾಡುತ್ತೀರೋ ಅಷ್ಟೇ ಉತ್ತಮ.
* ಓಟ್ಸ್ ಅಥವಾ ಓಟ್ ಮೀಲ್ – ಎರಡು ದೊಡ್ಡ ಚಮಚ
* ಲಿಂಬೆ ರಸ – ಒಂದು ದೊಡ್ಡ ಚಮಚ
* ಉಪ್ಪು- ಎರಡು ಚಿಕ್ಕ ಚಮಚ
ಈ ಮೂರೂ ಪರಿಕರಗಳು ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸುವಲ್ಲಿ ಸಮರ್ಥವಾಗಿವೆ. ಲಿಂಬೆರಸ ಚರ್ಮದ ಜೀವಕೋಶಗಳನ್ನು ತೇವಗೊಳಿಸಿ ಪ್ರತಿ ಜೀವ ಕೋಶವನ್ನು ಬೇರೆ ಬೇರೆ ಯಾಗಿಸಲು ನೆರವಾಗುತ್ತದೆ ಹಾಗೂ ಬಿರುಕುಗಳಲ್ಲಿ ಆಶ್ರಯ ಪಡೆದಿದ್ದ ಕ್ರಿಮಿ, ಧೂಳು, ಕೀಟಾಣುಗಳನ್ನು ನಿವಾರಿಸಲು ನೆರವಾಗುತ್ತದೆ.
ಉಪ್ಪು ಮತ್ತು ಓಟ್ಸ್ ಸಡಿಲವಾದ ಈ ಜೀವಕೋಶ ಗಳನ್ನು ತಮ್ಮೊಂದಿಗೆ ಅಂಟಿಸಿ ಕೊಂಡು ಹೊರ ಹೋಗಲು ನೆರವಾಗುತ್ತವೆ. ಇದರಿಂದ ಬಿರುಕಿನ ಅಕ್ಕಪಕ್ಕದಲ್ಲಿದ್ದ ದಪ್ಪನೆಯ ಚರ್ಮದ ಭಾಗ ನಿಧಾನವಾಗಿ ನಿವಾರಣೆಯಾಗುತ್ತದೆ ಹಾಗೂ ಬಿರುಕಿನ ಆಳ ದಲ್ಲಿ ಹೊಸ ಚರ್ಮ ಬೆಳೆಯಲು ಸಾಧ್ಯವಾಗುತ್ತದೆ. ಕೆಲವೇ ದಿನಗಳಲ್ಲಿ ಈ ಬಿರುಕುಗಳು ಕಾಣದಂತೆ ಮಾಯವಾಗುತ್ತವೆ.
* ಒಂದು ಚಿಕ್ಕ ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಕೊಂಚವೇ ಬಿಸಿ ನೀರಿನಲ್ಲಿ ಕೊಂಚ ಉಪ್ಪು ಹಾಕಿ (ನಿಮ್ಮ ಪಾದಗಳು ಸಹಿಸುವಷ್ಟು) ಹಾಕಿ ಕೊಂಚ ಕಾಲ ಈ ನೀರಿನಲ್ಲಿ ಎರಡೂ ಪಾದಗಳನ್ನು ಮುಳುಗಿಸಿಡಿ.
* ಬಳಿಕ ಪಾದಗಳನ್ನು ನೀರಿನಿಂದ ಹೊರ ತೆಗೆದು ಟವೆಲ್ನಿಂದ ಒರೆಸಿಕೊಳ್ಳಿ.
* ಕಾಲುಗಳ ಕೆಳಗೆ ದಿಂಬೊಂದನ್ನು ಇಟ್ಟು ಪಾದಗಳಿಗೆ ಈ ಲೇಪನವನ್ನು ದಪ್ಪನಾಗಿ ಹಚ್ಚಿ. ಬಿರುಕುಗಳಿರುವಲ್ಲಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿ.
* ಈ ಲೇಪನವನ್ನು ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ.
* ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದು ಕೊಳ್ಳಿ.
* ನಂತರವೂ ಪಾದಗಳನ್ನು ಸುಮಾರು ಹತ್ತು ನಿಮಿಷಗಳು ಬಿಸಿ ನೀರಿನಲ್ಲಿ ಮುಳುಗಿಸಿಡಿ.
* ಬಳಿಕ ಸ್ಕ್ರಬರ್ ಉಪಯೋಗಿಸಿ ಅಂಚಿನ ಭಾಗಗಳನ್ನು ಕೆರೆದು ತೆಗೆಯಿಸಿ. ಸ್ಕ್ರಬರ್ ಇಲ್ಲದಿದ್ದರೆ ಒರಟಾದ ಕಲ್ಲಿಗೆ ಉಜ್ಜಿಕೊಳ್ಳಲೂಬಹುದು.
* ಒಂದು ವಾರದ ಕಾಲ ಸತತವಾಗಿ ಈ ವಿಧಾನ ಅನುಸರಿಸಿದರೆ ಬಿರುಕುಗಳು ಇಲ್ಲವಾಗುತ್ತವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಾವು ಬುದ್ದಿವಂತರು ವಿಚಾರವಾದಿಗಳು ಅಂತ ಹೇಳಿಕೊಳ್ಳುವ ಕೆಲವರು ಹಿಂದೂ ದೇವತೆಗಳನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡುಬಿಟ್ಟಿದ್ದಾರೆ. ಅವರಲ್ಲಿ ಒಬ್ಬರು ಪ್ರೊಫೆಸರ್ ಭಗವಾನ್. ಯಾವಾಗಲೂ ಹಿಂದೂ ದೇವತೆಗಳ ಬಗ್ಗೆ ಒಂದಲ್ಲಾ ಒಂದು ಹೇಳಿಕೆ ವಿವಾದಾತ್ಮಕ ಕೊಟ್ಟು ಸುದ್ದಿಯಾಗುವ ಇವರು ಈಗ ಮತ್ತೊಂದು ವಿವಾದದ ಸುದ್ದಿಯಲ್ಲಿದ್ದಾರೆ. ವಿಚಾರವಾದಿ ಆಗಿರುವ ಪ್ರೊಫೆಸರ್ ಭಗವಾನ್ ಮತ್ತೊಂದು ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸಿ, ಭಕ್ತರ ಭಾವನೆಗಳನ್ನು ಕೆರಳಿಸುವ ಮೂಲಕ ಇದೀಗ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರೊಫೆಸರ್ ಭಗವಾನ್ರವರು…
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮುಚ್ಚಲಾಗುತ್ತದೆ ಎಂದು ಹೇಳಲಾಗಿದ್ದು, ಈ ಕುರಿತಾಗಿ ಸಂಸ್ಥೆಯ ಕರ್ನಾಟಕ ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುಶೀಲ್ ಕುಮಾರ್ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ. ಬಿಎಸ್ಎನ್ಎಲ್ ಸಂಸ್ಥೆ ಮುಚ್ಚುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಬಿಎಸ್ಎನ್ಎಲ್ ಸಂಸ್ಥೆಯನ್ನು ಮುಚ್ಚಲಾಗುತ್ತದೆ ಎಂಬ ವದಂತಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದು, ಬಿಎಸ್ಎನ್ಎಲ್ ಸಂಸ್ಥೆ ಮುಚ್ಚುವ ವದಂತಿ ನಿಜವಲ್ಲ. ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಕೆಲವರು ಬಿಎಸ್ಎನ್ಎಲ್ ಮುಚ್ಚುವ ಕುರಿತು ವದಂತಿ ಹರಡುತ್ತಿದ್ದಾರೆ. ಸಂಸ್ಥೆಯ ಸೇವೆ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ತಮ್ಮ ಕನಸು ಈಡೇರಿಸಿಕೊಳ್ಳಲು ಇಡೀ ಜೀವನವನ್ನೇ ವ್ಯಯಿಸಬೇಕಾಗುತ್ತದೆ. ಮತ್ತು ಕೆಲವರಿಗೆ ತಮ್ಮ ಟ್ಯಾಲೆಂಟ್ನಲ್ಲಿತಮ್ಮೆಲ್ಲ ಕನಸ್ಸು ಬಹುಬೇಗನೆ ಈಡೇರಿ ಬಿಡುತ್ತದೆ. ಯಾವುದೇ ವ್ಯಕ್ತಿಯಲ್ಲಿ ಟ್ಯಾಲೆಂಟ್ ಇದ್ದರೆ ಅಂತಹವರನ್ನು ಯಾರಿಂದಲೂ ತಡೆಹಿಡಿಯಲು ಸಾಧ್ಯವಿಲ್ಲ. ಆರುವರ್ಷದ ಈ ಮಗು ಕೂಡಾ ಇದ್ದಾನೆ. ವಯಸ್ಸಿನಲ್ಲಿ ಕೇವಲ ಆರುವರ್ಷ ಮಾತ್ರ ಆತನಿಗೆ ಆಗಿದೆ. ಅಷ್ಟರಲ್ಲಿಯೇ ಅವನು ಬಹಳಷ್ಟು ಸಂಪಾದಿಸಿದ್ದಾನೆ. ವೀಡಿಯೊ ಮಾಡಿ ಸ್ಟಾರ್ ಆದ:- ಈ ಮಗುವಿನ ಹೆಸರು ನಿಹಾಲ್ ರಾಜ್. ಕೊಚ್ಚಿಯಲ್ಲಿ ಅವನ ಮನೆಯಿದೆ. ನಿಹಾಲ್ …
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ 3ನೇ ವಾರದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದತೆ ನಡೆಸಿದ್ದು, ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆಗೆ ಅಗತ್ಯವಿರುವ ಸಿದ್ದತೆಗಳು ಬಹುತೇಕ ಪೂರ್ಣ ಗೊಳಿಸಿರುವ ಆಯೋಗ ಏಪ್ರಿಲ್ ತಿಂಗಳ 2ನೇ ವಾರದಲ್ಲಿ ದಿನಾಂಕವನ್ನು ಘೋಷಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಕಾರಿಗಳು ಪೂರ್ಣಗೊಳಿಸಿರುವುದು, ಇವಿಎಂ ಯಂತ್ರ ಉಪಯೋಗಿಸುವ ಕುರಿತಂತೆ ತರಬೇತಿ, ಭದ್ರತೆ ಸೇರಿದಂತೆ ಚುನಾವಣೆಗೆ ಬೇಕಿರುವ ಪ್ರಕ್ರಿಯೆಗಳು…
ಮಾಜಿ ವಿದೇಶಾಂಗ ಸಚಿವ, ಮಾಜಿ ರಾಜ್ಯಪಾಲ, ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಕರ್ನಾಟಕದ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ ಅವರು ಸೋಮವಾರ ದಿಢೀರ್ ನಾಪತ್ತೆಯಾಗಿದ್ದು, ಕುಟುಂಬ ಹಾಗೂ ಆಪ್ತ ವಲಯದಲ್ಲಿ ಆತಂಕ ಮನೆ ಮಾಡಿದೆ.ಕೆಫೆ ಕಾಫಿ ಡೇ ಸೇರಿದಂತೆ ಹಲವು ಉದ್ಯಮಗಳನ್ನು ಮುನ್ನಡೆಸುತ್ತಿದ್ದ ಸಿದ್ಧಾರ್ಥ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಅವರು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಇದ್ದು, ಅವರಿಗಾಗಿ ಸ್ಥಳೀಯ ಪೊಲೀಸರು ಭಾರೀ ಹುಡುಕಾಟ ನಡೆಸಿದ್ದಾರೆ. ಆಗಿದ್ದೇನು?: ಸಿದ್ಧಾರ್ಥ ಅವರು ಸೋಮವಾರ ವ್ಯವಹಾರ ನಿಮಿತ್ತ ತಮ್ಮ ಇನ್ನೋವಾ ವಾಹನದಲ್ಲಿ ಬೆಂಗಳೂರಿನಿಂದ…
ರಕ್ತಸಂಬಂಧಿಗಳೊಳಗಿನ ವಿವಾಹದ ಕುರಿತು ಅಧ್ಯಯನ ನಡೆಸಿರುವ ಅಂತಾರಾಷ್ಟ್ರೀಯ ತಂಡ ಒಂದು, ಇಂತಹ ದಂಪತಿಗಳಿಗೆ ಜನಿಸುವ ಮಕ್ಕಳಲ್ಲಿ ನ್ಯೂನ್ಯತೆಯ ಅಪಾಯವು