ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ.

ನಿಮ್ಮ ನೆಚ್ಚಿನ ಪಾದರಕ್ಷೆ ಯನ್ನು ತೊಡಲು ಹಿಂದೇಟು ಹಾಕುತ್ತಿದ್ದೀರಾ? ಒಡೆದ ಹಿಮ್ಮಡಿಗಳೇ ಇದಕ್ಕೆ ಕಾರಣವೇ? ಇದು ಕಾಣಿಸಬಾರದೆಂದು ಎಷ್ಟೇ ಪ್ರಯತ್ನ ಪಟ್ಟರೂ ಯಾವುದೋ ಸಂದ ರ್ಭದಲ್ಲಿ ಕಾಣಿಸಿಕೊಂಡು ಮುಜುಗರ ಅನುಭವಿಸಿದ್ದೀರಾ?
ಹಿಮ್ಮಡಿಗಳ ಬಿರುಕಿನ ಕಾರಣ ಎದುರಾಗುವ ನೋವಿನಿಂದ ಕೆಲವು ಪಾದ ರಕ್ಷೆಗಳನ್ನು ತೊಡಲೂ ಸಾಧ್ಯವಾಗುತ್ತಿಲ್ಲವೇ? ಬಿರುಕು ಮುಚ್ಚಿಕೊಳ್ಳಲು ಕಾಲುಚೀಲ ಧರಿಸುತ್ತಿದ್ದೀರಾ? ಈ ಬಿರುಕು ಗಳನ್ನು ತುಂಬುವ ವಿಧಾನಗಳೆಲ್ಲವೂ ಕೈ ಕೊಟ್ಟಿವೆಯೇ? ನಮ್ಮ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ.

ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಪಾದಗಳು ಇಡಿಯ ಶರೀರದ ಭಾರವನ್ನು ಹೊರಬೇಕಾದುದರಿಂದ ಇಲ್ಲಿಯ ಚರ್ಮ ಅತ್ಯಂತ ದಪ್ಪನಾಗಿರುತ್ತದೆ.
ಅದರಲ್ಲಿಯೂ ಅಂಚುಗಳಲ್ಲಿ ಹೆಚ್ಚು ದಪ್ಪನಾಗಿರುತ್ತದೆ. ಈ ದಪ್ಪನಾದ ಪಡೆ ಜೀವಕೋಶಗಳು ಸತ್ತರೂ ಸುಲಭವಾಗಿ ನಿವಾರಣೆಯಾಗದೇ ಅಂಟಿಕೊಂಡೇ ಇರುತ್ತವೆ.
ಕ್ರಮೇಣ ಇವು ಒಣಗಿ ಸೆಳೆತ ಹೆಚ್ಚಾಗುವ ಕಾರಣ ಚಿಕ್ಕ ಬಿರುಕು ಉಂಟಾಗುತ್ತದೆ. ಒಣಗುವ ಪ್ರಮಾಣ ಹೆಚ್ಚಾದಂತೆ ಬಿರುಕು ಆಳವಾಗುತ್ತಾ ಹೋಗುತ್ತದೆ. ಆದ್ದರಿಂದ ಈ ಭಾಗವನ್ನು ಆಗಾಗ ಉಜ್ಜಿಕೊಂಡು ಈ ಸತ್ತ ಜೀವಕೋಶಗಳನ್ನು ನಿವಾರಿಸುತ್ತಾ ಇರಬೇಕು. ಒಣಚರ್ಮ, ದೇಹದ ಭಾರ ವನ್ನು ಸಮರ್ಪಕವಾಗಿ ಹರಡದ ವಿನ್ಯಾಸದ ಪಾದ ರಕ್ಷೆಗಳು, ಶಿಲೀಂಧ್ರದ ಸೋಂಕು, ಸ್ಥೂಲ ಕಾಯ, ಸ್ವಚ್ಛತೆಯಲ್ಲಿ ಕೊರತೆ ಮೊದಲಾದ ಕಾರಣ ಗಳಿಂದ ಈ ಬಿರುಕುಗಳು ಇನ್ನಷ್ಟು ಆಳಕ್ಕೆ ಇಳಿದು ಜವಾದ ಚರ್ಮವನ್ನು ಹರಿದು ರಕ್ತಬರಿಸಬಹುದು.
ಸಾಮಾನ್ಯವಾಗಿ ಬಿರುಕುಗಳು ಕಾಣಿಸಿಕೊಂಡ ಬಳಿಕವೂ ಇದರಲ್ಲಿ ತಕ್ಷಣಕ್ಕೆ ಯಾವುದೇ ನೋವು ಇರದ ಕಾರಣ ನಾವೆಲ್ಲರೂ ಇದನ್ನು ಅಲಕ್ಷಿಸಿಬಿಡುತ್ತೇವೆ.

ಅಯ್ಯೋ ನಾಳೆ ಸ್ನಾನ ಮಾಡಿಕೊಂಡಾಗ ಉಜ್ಜಿಕೊಂಡರಾಯಿತು ಎಂಬ ಅಸಡ್ಡೆಯಿಂದಲೇ ಹೆಚ್ಚಿನವರಿಗೆ ಈ ತೊಂದರೆ ಉಲ್ಬಣಾವಸ್ಥೆಗೆ ಅಂದರೆ ಸೋರಿಯಾಸಿಸ್ (psoriasis) ಎಂಬ ಸ್ಥಿತಿಗೆ ತಲುಪಲೂ ಕಾರಣವಾಗಬಹುದು.
ಆದ್ದರಿಂದ ಈ ಬಿರುಕುಗಳನ್ನು ಮುಚ್ಚುವತ್ತ ಎಷ್ಟು ಬೇಗನೇ ಮನಸ್ಸು ಮಾಡುತ್ತೀರೋ ಅಷ್ಟೇ ಉತ್ತಮ.

* ಓಟ್ಸ್ ಅಥವಾ ಓಟ್ ಮೀಲ್ – ಎರಡು ದೊಡ್ಡ ಚಮಚ
* ಲಿಂಬೆ ರಸ – ಒಂದು ದೊಡ್ಡ ಚಮಚ
* ಉಪ್ಪು- ಎರಡು ಚಿಕ್ಕ ಚಮಚ
ಈ ಮೂರೂ ಪರಿಕರಗಳು ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸುವಲ್ಲಿ ಸಮರ್ಥವಾಗಿವೆ. ಲಿಂಬೆರಸ ಚರ್ಮದ ಜೀವಕೋಶಗಳನ್ನು ತೇವಗೊಳಿಸಿ ಪ್ರತಿ ಜೀವ ಕೋಶವನ್ನು ಬೇರೆ ಬೇರೆ ಯಾಗಿಸಲು ನೆರವಾಗುತ್ತದೆ ಹಾಗೂ ಬಿರುಕುಗಳಲ್ಲಿ ಆಶ್ರಯ ಪಡೆದಿದ್ದ ಕ್ರಿಮಿ, ಧೂಳು, ಕೀಟಾಣುಗಳನ್ನು ನಿವಾರಿಸಲು ನೆರವಾಗುತ್ತದೆ.
ಉಪ್ಪು ಮತ್ತು ಓಟ್ಸ್ ಸಡಿಲವಾದ ಈ ಜೀವಕೋಶ ಗಳನ್ನು ತಮ್ಮೊಂದಿಗೆ ಅಂಟಿಸಿ ಕೊಂಡು ಹೊರ ಹೋಗಲು ನೆರವಾಗುತ್ತವೆ. ಇದರಿಂದ ಬಿರುಕಿನ ಅಕ್ಕಪಕ್ಕದಲ್ಲಿದ್ದ ದಪ್ಪನೆಯ ಚರ್ಮದ ಭಾಗ ನಿಧಾನವಾಗಿ ನಿವಾರಣೆಯಾಗುತ್ತದೆ ಹಾಗೂ ಬಿರುಕಿನ ಆಳ ದಲ್ಲಿ ಹೊಸ ಚರ್ಮ ಬೆಳೆಯಲು ಸಾಧ್ಯವಾಗುತ್ತದೆ. ಕೆಲವೇ ದಿನಗಳಲ್ಲಿ ಈ ಬಿರುಕುಗಳು ಕಾಣದಂತೆ ಮಾಯವಾಗುತ್ತವೆ.

* ಒಂದು ಚಿಕ್ಕ ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಕೊಂಚವೇ ಬಿಸಿ ನೀರಿನಲ್ಲಿ ಕೊಂಚ ಉಪ್ಪು ಹಾಕಿ (ನಿಮ್ಮ ಪಾದಗಳು ಸಹಿಸುವಷ್ಟು) ಹಾಕಿ ಕೊಂಚ ಕಾಲ ಈ ನೀರಿನಲ್ಲಿ ಎರಡೂ ಪಾದಗಳನ್ನು ಮುಳುಗಿಸಿಡಿ.
* ಬಳಿಕ ಪಾದಗಳನ್ನು ನೀರಿನಿಂದ ಹೊರ ತೆಗೆದು ಟವೆಲ್ನಿಂದ ಒರೆಸಿಕೊಳ್ಳಿ.
* ಕಾಲುಗಳ ಕೆಳಗೆ ದಿಂಬೊಂದನ್ನು ಇಟ್ಟು ಪಾದಗಳಿಗೆ ಈ ಲೇಪನವನ್ನು ದಪ್ಪನಾಗಿ ಹಚ್ಚಿ. ಬಿರುಕುಗಳಿರುವಲ್ಲಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿ.
* ಈ ಲೇಪನವನ್ನು ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ.
* ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದು ಕೊಳ್ಳಿ.
* ನಂತರವೂ ಪಾದಗಳನ್ನು ಸುಮಾರು ಹತ್ತು ನಿಮಿಷಗಳು ಬಿಸಿ ನೀರಿನಲ್ಲಿ ಮುಳುಗಿಸಿಡಿ.
* ಬಳಿಕ ಸ್ಕ್ರಬರ್ ಉಪಯೋಗಿಸಿ ಅಂಚಿನ ಭಾಗಗಳನ್ನು ಕೆರೆದು ತೆಗೆಯಿಸಿ. ಸ್ಕ್ರಬರ್ ಇಲ್ಲದಿದ್ದರೆ ಒರಟಾದ ಕಲ್ಲಿಗೆ ಉಜ್ಜಿಕೊಳ್ಳಲೂಬಹುದು.
* ಒಂದು ವಾರದ ಕಾಲ ಸತತವಾಗಿ ಈ ವಿಧಾನ ಅನುಸರಿಸಿದರೆ ಬಿರುಕುಗಳು ಇಲ್ಲವಾಗುತ್ತವೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಗತ್ತಿನಲ್ಲಿ ಎಂತಹ ವಿಚಿತ್ರ ಜನಗಳಿರುತ್ತಾರೆ ಎಂದ್ರೆ ಯಾವಾಗ ಏನ್ ಮಾಡ್ತಾರೆ ಅಂತ ಸ್ವತಃ ಅವರಿಗೆ ಗೊತ್ತಿರುವುದಿಲ್ಲ. ಯಾಕೆಂದ್ರೆ ನಮ್ಮ ದೇಶದಲ್ಲಿ ಈಗಾಗಲೇ ಕ್ಯಾಶ್ ಲೆಸ್ ವ್ಯವಹಾರ ನಡೆಯುತ್ತಿದೆ. ಆದರೆ ಚೀನಾದಲ್ಲಿ ಮಹಿಳೆಯೊಬ್ಬರು ಕಾರೊಂದೊನ್ನು ಖರೀದಿಸಲು ಚೀಲದ ತುಂಬಾ ಹಣ ತುಂಬಿಕೊಂಡು ಹೋಗಿದ್ದಾರೆ.
ಔಷಧಿಗಳನ್ನು ಹತ್ತಿರದ ಮೆಡಿಕಲ್ ಸ್ಟೋರ್ ಗಳಲ್ಲಿ ಚೀಟಿ ತೋರಿಸಿ ಔಷಧಿಗಳನ್ನು ಪಡೆದುಕೊಳ್ಳುತ್ತೇವೆ. ಇದುಯ್ ಒಂದು ಸಾಮಾನ್ಯದ ಸಂಗತಿ ಆದರೆ ಬಹುಷಃ ನಿಮಗೆ ಗೊತ್ತಿರುವುದಿಲ್ಲ ಈ ದೇಶದಲ್ಲಿ ಅದೆಷ್ಟೋ ಮಂದಿ ಅವಿದ್ಯಾವಂತರೋ ಅಥವಾ ತಿಳುವಳಿಕೆ ಇಲ್ಲದ ಜನರು ಒಮ್ಮೊಮ್ಮೆ ಜ್ವರ ಹಾಗು ತಲೆನೋವು ಇತ್ಯಾದಿ ಕಾರಣಕ್ಕಾಗಿ ಯಾವುದೇ ವೈದ್ಯರ ಬಳಿ ತೋರಿಸದೆ ಮೆಡಿಕಲ್ ಗಳಿಂದ ಮಾತ್ರೆಗಳನ್ನು ತಗೆದುಕೊಳ್ಳುತ್ತಾರೆ. ಈ ರೀತಿ ಮಾಡುವುದು ಎಷ್ಟೊಂದು ದೊಡ್ಡ ತಪ್ಪು ಎನ್ನುವುದು ಅವರಿಗೆ ತಿಳಿದಿರುವುದಿಲ್ಲ, ಹೌದು ಕೆಲವೊಮ್ಮೆ ನಾವು ತಗೆದುಕೊಳ್ಳುವ ಮಾತ್ರೆಗಳು ನಮ್ಮ…
ಪಾರ್ಲಿಮೆಂಟ್ನಲ್ಲಿ 2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಅವರು ಕೇಂದ್ರ ಬಜೆಟ್(Union Budget) ಮಂಡಿಸುತ್ತಿದ್ದಾರೆ. ಇದು ಅವರ ಐದನೇ ಮತ್ತು ಈ ಸರ್ಕಾರದ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನವೇ, ಈ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮೂಲಕ ಸರ್ಕಾರವು ಜನರ ನಿರೀಕ್ಷೆ ತಲುಪಲು ಹೊಸ ಯೋಜನೆಗಳನ್ನು ಆರಂಭಿಸುತ್ತಿದೆ. ಇದರ ಜೊತೆಗೆ ಮಧ್ಯಮ ವರ್ಗಕ್ಕೆ ಬಂಪರ್ ನ್ಯೂಸ್…
ದಿನಭವಿಷ್ಯ (26 ಡಿಸೆಂಬರ್, 2018) ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(26 ಡಿಸೆಂಬರ್, 2018) ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ…
ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಇಡೀ ದೇಶದ ಗಮನ ಸೆಳೆಯುತ್ತಿದೆ. ಉಭಯ ಪಕ್ಷಗಳ ಅಭ್ಯರ್ಥಿಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಈ ಮೊದಲು ಸುಮಲತಾ ಅಂಬರೀಶ್, ಜೆಡಿಎಸ್ ನಾಯಕರು ಫೋಟೋ ಹಾಗೂ ವಿಡಿಯೋ ಮಾರ್ಫ್ ಮಾಡುವ ಮೂಲಕ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೀಳುಮಟ್ಟದ ಪ್ರಚಾರ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ಮೈತ್ರಿ ಪಕ್ಷದ ಅಭ್ಯರ್ಥಿ ಹಾಗೂ…
ಬೆಳಗಿನ ತಿಂಡಿಯನ್ನು ತಿನ್ನಲೂ ಹೆಚ್ಚಿನವರಿಗೆ ಪುರಸೊತ್ತು ಇರುವುದಿಲ್ಲ. ಹೆಚ್ಚಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಬ್ರೇಕ್ಫಾಸ್ಟ್ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ