ಆರೋಗ್ಯ

ಸಕ್ಕರೆ(ಶುಗರ್) ಕಾಯಿಲೆಗೆ ಉತ್ತಮ ಔಷದಿಯಾಗಿರುವ ಮೆಂತೆ …! ಬಗ್ಗೆ ತಿಳಿಯಲು ಈ ಲೇಖನ ಓದಿ..

1565

ಮನೆಗಳಲ್ಲಿ ಇಲ್ಲದಿರಲು ಸಾಧ್ಯವೇ ಇಲ್ಲ. ಬಹುತೇಕ ಅಡಿಗೆಗಳಲ್ಲಿ ಮೆಂತೆಕಾಳು ತೀರಾ ಅಗತ್ಯ.  ರುಚಿಯಲ್ಲಿ ಕಹಿ ಒಗರಿನ ಅನುಭವ ನೀಡುವುದು. ಅದರಲ್ಲಿ ಅನೇಕಾನೇಕ ಆರೋಗ್ಯಕರ ಗುಣಗಳಿವೆ. ಮಧುಮೇಹಿಗಳು (ಸಕ್ಕರೆ ಕಾಹಿಲೆ) ಉಳ್ಳವರು ಪ್ರತಿನಿತ್ಯ ಯಾವುದಾದರೂ ರೂಪದಲ್ಲಿ ಕನಿಷ್ಠ ಒಂದು ಚಮಚ ಮೆಂತ್ಯೆ ಸೇವನೆ ಮಾಡಿದಲ್ಲಿ ಇನ್ಸುಲಿನ್ನನ್ನು ತಯಾರು ಮಾಡುವ ಆಮೈನೋ ಆಸಿಡ್ ಇನ್ಸುಲಿನ್ಉತ್ಪಾದಿಸಿ ಸಕ್ಕರೆ ಕಾಹಿಲೆಯನ್ನು ನಿಯಂತ್ರಣದಲ್ಲಿಡುತ್ತದೆ.

ಅದರಲ್ಲಿ ಅನೇಕಾನೇಕ ಆರೋಗ್ಯಕರ ಗುಣಗಳಿವೆ. ಮೆಂತೆಯನ್ನು ಪ್ರತಿನಿತ್ಯ ಅಡುಗೆ ಅಥವಾ ಹುರಿದು ಪುಡಿ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚದಷ್ಟುಪುಡಿಯನ್ನು ನೀರಿನಲ್ಲಿ ಕದಡಿ ಇಲ್ಲವೇ ನೇರವಾಗಿ ಪಂಚಕಜ್ಜಾಯದಂತೆ ತಿಂದು ನೀರು ಕುಡಿದಲ್ಲಿ ವಾತದೋಷವನ್ನು ನಿವಾರಿಸಬಹುದು. ಆದ್ದರಿಂದ ಆದಷ್ಟು ಇದನ್ನು ಚಳಿ ಮಳೆಗಾಲದಲ್ಲಿ ಬಳಸುವುದು ಸೂಕ್ತ.

ಜೀರ್ಣಕಾರಿಯಾಗಿಯೂ ಬಳಸಬಹುದು: ಅಜಿರ್ಣದಿಂದ ಬಳಲುವವರಿಗೆ ಮೆಂತೆ ಪುಡಿ ತೀರಾ ಸಹಕಾರಿ. ಮೆಂತ್ಯೆಕಾಳುಗಳಲ್ಲಿ ಕ್ಯಾಲ್ಸಿಯಂ ಅತ್ಯಧಿಕವಾಗಿರುತ್ತದೆ.ಹೆರಿಗೆಯಾದ ಹೆಂಗಸರಿಗೆ ಮೆಂತ್ಯೆಕಾಳು ಗಳನ್ನು ನೆನೆಸಿ ಎಳೆತೆಂಗಿನಕಾಯಿಯೊಂದಿಗೆ ನುಣ್ಣಗೆ ಅರೆದು ತೆಳು ಗಂಜಿಯಂತೆ ಮಾಡಿ ಕುಡಿಸಿದಲ್ಲಿ ಹಾಲು ಹೆಚ್ಚಾಗುವುದು.

ಮಹಿಳೆಗೆ ಮುಟ್ಟಿನ ಸಮಯದಲ್ಲಿ ಮೆಂತೆ ಮತ್ತು ಜೀರಿಗೆಯನ್ನು ಒಂದೊಂದು ಚಮಚದಷ್ಟು ಹುರಿದು ಕಷಾಯ ಮಾಡಿ ಕುಡಿದಲ್ಲಿ ಹೊಟ್ಟೆ ನೋವಿನ ಪ್ರಮಾಣ ಹಾಗೂ ಅತ್ಯಧಿಕ ರಕ್ತಸ್ರಾವದ ಪ್ರಮಾಣ ಕಡಿಮೆಯಾಗುವುದು. ಹೆರಿಗೆ ನಂತರ ಮಹಿಳೆಯರಲ್ಲಿ ಸಾಮಾನ್ಯವಾಗಿ ಗರ್ಭಾಶಯದ ಪ್ರಮಾಣ ದೊಡ್ಡದಾಗುತ್ತದೆ.ಆಗ ಪ್ರತಿನಿತ್ಯ ಮೆಂತೆ ಸೇವನೆ ಗರ್ಭಾಶಯವನ್ನು ಮೊದಲಿನ ಸಹಜ ಸ್ಥಿತಿಗೆ ತರುವುದರಲ್ಲಿ ಸಹಕಾರಿ.

ಮೆಂತೆ ಕಾಳುಗಳಲ್ಲಿ ಹೆಚ್ಚಿನ ನಾರಿನಂಶ ಮತ್ತು  ಆಂಟಿ ಆಕ್ಸಿಡೆಂಟುಗಳು ಇರುವುದರಿಂದ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಇದು ಹೊರಚೆಲ್ಲಬಹುದಾಗಿದೆ. ಆಹಾರದಲ್ಲಿ ಮೆಂತೆ ಉಪಯೋಗಿಸುವುದರಿಂದ ಹೊಟ್ಟೆಯಲ್ಲಿ ಸೇರಿದ ಆಮ್ಲವು ಅನ್ನನಾಳದಲ್ಲಿ ಹೋಗಿ ಸೇರದಂತೆ ಜಾಗ್ರತೆ ವಹಿಸುತ್ತದೆ. ಆಮಶಂಕೆಯೆಂಬ ಭೇದಿಯಿಂದ ಬಳಲುವವರುಈ ಪುಡಿಯನ್ನು ತಯಾರಿಸಿಟ್ಟುಕೊಂಡು ಒಂದು ಕಪ್ ಮೊಸರಿನಲ್ಲಿ ಒಂದು ಚಮಚದಷ್ಟು ಮೆಂತೆ ಪುಡಿಯನ್ನು ಮಿಶ್ರಣ ಮಾಡಿ ಕುಡಿದಲ್ಲಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಹಾಗೂ ಆಮಶಂಕೆಯಿಂದಾಗುವ ಹೊಟ್ಟೆ ಉರಿ ಕಡಿಮೆ ಮಾಡುತ್ತದೆ.

ಮೆಂತೆಯಿಂದ ಕಾಫಿಯನ್ನು ಸಹ ಮಾಡಬಹುದು. ಅಗತ್ಯ ಸಾಮಗ್ರಿಗಳು: ಮೆಂತೆ ಕಾಳು, ಒಣಶುಂಠಿ ಇವೆರಡನ್ನೂ ಮಿಶ್ರಣ ಮಾಡಿ ಕಬ್ಬಿಣದ ಬಾಣಲೆಯಲ್ಲಿ ಹುರಿದು ಪುಡಿ ಮಾಡಿ ಒಂದು ಖಾಲೀ ಬಾಟಲಿಯಲ್ಲಿ ಮಿಶ್ರಣವನ್ನು ತುಂಬಿಡಿ. ಒಂದು ಕಪ್ ಹಾಲಿಗೆ ಅರ್ಧ ಚಮಚದಷ್ಟು  ಪುಡಿಯನ್ನು ಹಾಕಿ ಕುದಿಸಿರಿ. ಸಿಹಿ ಬೇಕೆನಿಸಿದರೆ ರುಚಿಗೆ ತಕಷ್ಟು ಬೆಲ್ಲ ಅಥವಾ ಕಲ್ಲುಸಕ್ಕರೆ ಉತ್ತಮ. ತಾಜಾತನದ ಘಮ ಬೇಕೆನಿಸಿದರೆ ಒಂದು ಚೂರು ತುರಿದ ಹಸಿಶುಂಠಿಯನ್ನು ಹಾಲು ಕುದಿಯುವಾಗ ಬಳಸಬಹುದು. ಹೀಗೆಮೆಂತೆಯ ಲಾಭಗಳು ಅಪಾರ.  ನೀವೂ ಮಾಡಿ ನೋಡಿ: ಮೆಂತ್ಯೆ ಯಿಂದ  ಇನ್ನು ಹಲವಾರು ಖ್ಯಾದ್ಯಗಳನ್ನು ತಯಾರಿಸಿ ಸೇವಿಸಬಹುದು.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಈ ರಾಶಿಗಳಿಗಿದೆ ವಿಪೀತ ಧನಲಾಭ..!ಇದ್ರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(24 ನವೆಂಬರ್, 2018) ನಿಮ್ಮ ಸ್ನೇಹಿತರ ಸಹಾಯದಿಂದಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ. ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ನಿಮ್ಮ…

  • ಸುದ್ದಿ

    ಎಸ್‌ಬಿಐ ಗ್ರಾಹಕರು ಗಮನಿಸಬೇಕಾದ ವಿಷಯ ; ಅಕ್ಟೋಬರ್ 1 ರಿಂದ ಬದಲಾಗಲಿದೆ ಈ 6 ನಿಯಮ,.!ತಪ್ಪದೇ ತಿಳಿದುಕೊಳ್ಳಿ,.!

    ನಿಮ್ಮ ಖಾತೆಯು ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಇದ್ದರೆ, ನೀವು ಈ ಸುದ್ದಿಯನ್ನು ಓದಬೇಕು. ವಾಸ್ತವವಾಗಿ, ಅಕ್ಟೋಬರ್ 1 ರಿಂದ ಎಸ್‌ಬಿಐ ಕೆಲವು ಸೇವಾ ಶುಲ್ಕದಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಈ ಬದಲಾವಣೆಗಳು ದೇಶಾದ್ಯಂತ ಎಸ್‌ಬಿಐನ ಎಲ್ಲಾ 32 ಕೋಟಿ ಖಾತೆದಾರರ ಮೇಲೆ ಪರಿಣಾಮ ಬೀರುತ್ತವೆ. ಈ ಬದಲಾವಣೆಗಳ ಅಡಿಯಲ್ಲಿ, ಬ್ಯಾಂಕ್ ಮಾಸಿಕ ಸರಾಸರಿ ಸಮತೋಲನವನ್ನು (MAB) ನಿರ್ವಹಿಸದಿದ್ದರೆ ದಂಡವನ್ನು 80 ಪ್ರತಿಶತದಷ್ಟು ಕಡಿಮೆಗೊಳಿಸಲಾಗುತ್ತದೆ. ಇದಲ್ಲದೆ, ಬ್ಯಾಂಕ್‌ನಿಂದ ಅಕ್ಟೋಬರ್ 1 ರಿಂದ…

  • Uncategorized

    ತುಂಬಾ ನಕ್ಕರೆ ಹೀಗೂ ಆಗುತ್ತೆ..! ಈ ಲೇಖನಿ ಓದಿ ಶಾಕ್ ಆಗ್ತೀರಾ…

    ಯಾರನ್ನೇ ಆಗಲಿ ಅಳಿಸುವುದು ತುಂಬಾ ಸುಲಭ, ಆದರೆ ನಗಿಸುವುದು ಕಷ್ಟ.ಜಾಸ್ತಿ ನಕ್ಕರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಆಯಸ್ಸು ಜಾಸ್ತಿಯಾಗುತ್ತೆ ಅಂತ ಹೇಳುತ್ತಾರೆ.ಅದು ನಿಜಾ ಕೂಡ.ಆದರೆ ಅದೇ ನಗುವಿನಿಂದ ಸಾವಾಗಬಹುದೆಂದು ಎಂದರೆ ನೀವು ನಂಬುತ್ತೀರಾ! ನಂಬಲ್ಲ ಆಲ್ವಾ ಹಾಗಾದ್ರೆ ಮುಂದೆ ಓದಿ…

  • ವಿಸ್ಮಯ ಜಗತ್ತು

    ನಂಬಿದ್ರೆ ನಂಬಿ,ಈ ಹಳ್ಳಿಯಲ್ಲಿ ರಾವಣನಿಗೆ ಪೂಜೆ ಮಾಡ್ತಾರೆ!ಶಾಕ್ ಆಗ್ಬೇಡಿ…ಈ ಲೇಖನ ಓದಿ ಶೇರ್ ಮಾಡಿ..

    ರಾಮಾಯಣ ಗೊತ್ತಿದ್ದ ಮೇಲೆ ರಾವಣ ಗೊತ್ತಿರುತ್ತಾನೆ.ರಾವಣ ರಾಕ್ಷಸನಾದರೂ ಮಹಾನ್ ಶಿವ ಭಕ್ತ, ಮತ್ತು ಮಹಾನ್ ವಿಧ್ವಾಂಸ ಕೂಡ.ಏನೇ ಆದ್ರೂ ರಾವಣ ರಾಕ್ಷಸನಾಗಿದ್ದರಿಂದ ರಾವಣನನ್ನು ಎಲ್ಲೂ ಪೂಜಿಸವುದಿಲ್ಲ.ಆದ್ರೆ ನೀವೂ ನಂಬಿದ್ರೆ ನಂಬಿ, ಇಲ್ಲಂದ್ರೆ ಬಿಡಿ ಈ ಹಳ್ಳಿಯಲ್ಲಿ ರಾವಣನನ್ನು ಸಹ ಪೂಜಿಸುತ್ತಾರೆ. ಆ ಹಳ್ಳಿ ಯಾವುದು ಗೊತ್ತಾ? ಮುಂದೆ ಓದಿ..

  • ಜೀವನಶೈಲಿ

    ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳ ನಿರ್ಮೂಲನೆ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಮನೆಯಲ್ಲಿನ  ಎಲ್ಲಾ ಮೂಲೆಗಳಲ್ಲಿ ಉಪ್ಪು ಅಥವಾ ಉಪ್ಪು ತುಂಡುಗಳನ್ನು ಹಾಕಿ. 48 ಗಂಟೆಗಳ ನಂತರ ತೆಗೆದುಹಾಕಿ. ಉಪ್ಪು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಚೆನ್ನಾಗಿ ಕೆಲಸ ಮಾಡುತ್ತದೆ. ಈ ಉಪ್ಪಿನಲ್ಲಿ ಕೆಲವು ಸಾಸೇಜ್ ಸೇರಿಸಿ. ಮನೆಯಲ್ಲಿನ  ಎಲ್ಲಾ ಕೋಣೆಗಳನ್ನು  ಸ್ವಚ್ಛಗೊಳಿಸಿ  ಮತ್ತು ನಿಮ್ಮ ಮನೆಯನ್ನು ಸದಾ ಸ್ವಚ್ಛವಾಗಿರಿಸಿಕೊಳ್ಳಿ. ನಿಮ್ಮ ಬೆಡ್ ಶೀಟ್ಗಳು, ಕಂಬಳಿಗಳು, ರತ್ನಗಂಬಳಿಗಳನ್ನು ಸ್ವಚ್ಛಗೊಳಿಸಿ . ಕನಿಷ್ಠ ಎರಡು ವಾರಗಳಿಗೆ ಒಮ್ಮೆ ಸ್ವಚ್ಛಗೊಳಿಸಿ. ಹಳೆಯ ಪುಸ್ತಕಗಳು ಮತ್ತು ಬಟ್ಟೆಗಳನ್ನು ಜಾಸ್ತಿ ಮನೆಯಲ್ಲಿ ಇಡಬೇಡಿ. ದಯವಿಟ್ಟು ಯಾರಿಗಾದರೂ…

  • ಸುದ್ದಿ

    ‘ಪಿತೃ ಪಕ್ಷ’ಕ್ಕೂ ಮಹಾಭಾರತದ ಕರ್ಣನಿಗೂ ಏನು ಸಂಬಂಧ ಗೊತ್ತ….!

    ಗತಿಸಿದ ಹಿರಿಯರಿಗೆ ನಮನ ಸಲ್ಲಿಸಲು ಕುಟುಂಬ ಸದಸ್ಯರು ಈ ಮಾಸಾಂತ್ಯದವರೆಗೆ ಪಿತೃ ಪಕ್ಷವನ್ನು ಆಚರಿಸುತ್ತಾರೆ. ಸಾವನ್ನಪ್ಪಿದ ಕುಟುಂಬದ ಹಿರಿಯರಿಗೆ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ಅವರಿಗಿಷ್ಟವಾದ ಆಹಾರ ಪದಾರ್ಥಗಳನ್ನಿಟ್ಟು ಪೂಜಿಸಲಾಗುತ್ತದೆ. ಆದರೆ ಅನಾದಿ ಕಾಲದಿಂದಲೂ ಪಿತೃಪಕ್ಷದ ಪರಂಪರೆ ನಡೆದುಕೊಂಡು ಬಂದಿದೆ. ಮಹಾಭಾರತದಲ್ಲಿ ತನ್ನ ಕರ್ಣಕುಂಡಲವನ್ನು ಕೊಟ್ಟು ಮರಣವನ್ನಪ್ಪಿದ ಕರ್ಣ, ಸ್ವರ್ಗ ಲೋಕಕ್ಕೆ ಹೋದ ವೇಳೆ ಆಹಾರವಾಗಿ ವಜ್ರ, ವೈಢೂರ್ಯಗಳನ್ನು ನೀಡಲಾಗುತ್ತದೆ. ಆಗ ಕರ್ಣ ಈ ಕುರಿತು ಪ್ರಶ್ನಿಸಿದಾಗ, ಹಿರಿಯರಿಗೆ ಶ್ರಾದ್ದ ಮಾಡದ ಹಿನ್ನಲೆಯಲ್ಲಿ ಕರ್ಣ ಮಾಡಿದ ದಾನಕ್ಕೆ ಅನುಸಾರವಾಗಿ ಇದನ್ನು ನೀಡಲಾಗುತ್ತದೆ ಎನ್ನಲಾಗುತ್ತದೆ….