ಸುದ್ದಿ

ಮೃತ ಅಪ್ಪನಿಗೆ ಮಸೇಜ್ ಮಾಡುತ್ತಿದ್ದಳು, 4 ವರ್ಷದ ನಂತರ ಬಂತು ರಿಪ್ಲೈ..! ತಂದೆ ಮಗಳ ಕರುಣಾಜನಕ ಕಥೆ….

55

ಅಪ್ಪಾ ಅಂದ್ರೆ ಆಕಾಶ, ಅದ್ರಲ್ಲೂ ಹೆಣ್ಣು ಮಕ್ಕಳಿಗೆ ತಂದೆ ಅಂದ್ರೆ ಅವರ ಬಾಳಲ್ಲಿನ ಮೊದಲ ಸೂಪರ್​ ಹೀರೋ, ಮೊದಲ ಮೇಷ್ಟ್ರು. ಅಂತಹ ಅಪ್ಪ ದಿಢೀರ​​​ನೇ ಅಗಲಿ ಹೋದಾಗ ಆಗುವ ವೇದನೆ ಯಾರ ಬದುಕಿಗೂ ಬೇಡ. ಹೀಗೆ ಬಾಳ ಹಾದಿಯಲ್ಲಿ ಮಗಳನ್ನು ತೊರೆದು ಹೋದ ಅಪ್ಪನನ್ನು ಸತತ ನಾಲ್ಕು ವರ್ಷ ಮಗಳು ನೆನೆದ ಭಾವುಕತೆಯೇ ತುಂಬಿ ತುಳುಕಿರುವ ಕಥೆಯಿದು. ಅಮೆರಿಕಾದ ಅರ್ಕನ್ಸಾಸ್​ನ 23 ವರ್ಷದ ಚಾಸ್ತಿತ್ಯ ಪೀಟರ್ಸನ್​ ಅನ್ನೋ ಯುವತಿ ನಾಲ್ಕು ವರ್ಷದ ಹಿಂದೆ ಅಂದ್ರೆ 2015ರಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದಳು.

ಅಂದಿನಿಂದಲೂ ಇಂದಿನವರೆಗೆ ಸತತವಾಗಿ ತನ್ನ ತಂದೆಯ ಹಳೆಯ ಮೊಬೈಲ್​ ನಂಬರ್​ಗೆ ಮೆಸೇಜ್ ಮಾಡುತ್ತಲೇ ಇದ್ದಳು. ತನ್ನ ದೈನಂದಿನ ಬದುಕಿನ ಬಗ್ಗೆ, ತಾನು ಪದವಿ ಗಳಿಸಿದ ಬಗ್ಗೆ, ಹಾಗೆಯೇ ಕ್ಯಾನ್ಸರ್​ ಗೆದ್ದು ಬದುಕು ನೂಕುತ್ತಿರುವ ಬಗ್ಗೆ ಮೆಸೇಜ್​ನಲ್ಲಿ ಹೇಳುತ್ತಾ ಅತ್ಯಂತ ಭಾವುಕ ಪತ್ರವೆನ್ನುವಂತೆ ತನ್ನ ತಂದೆಯೊಂದಿಗೆ ಏಕಮುಖಿ ಸಂವಹನ ನಡೆಸುತ್ತಿದ್ದಳು. ಆಕೆಯ ತಂದೆ ತೀರಿ ಹೋಗಿ ನಾಲ್ಕು ವರ್ಷ ಸಂದಿದ್ದವು. ಈ ಬಗ್ಗೆ ತೀವ್ರ ಭಾವುಕಳಾಗಿ ಒಂದು ಸಂದೇಶವನ್ನು ಕಳುಹಿಸಿದ್ದಳು.

‘ಹಲೋ ಡ್ಯಾಡ್, ಇದು ನಾನು, ನಾಳೆ ಮತ್ತೊಂದು ಭೀಕರ ದಿನದ ನೆನಪನ್ನು ನೆನಪಿಸಿಕೊಳ್ಳುವ ದಿನ, ನೀನು ನಮ್ಮನ್ನು ಅಗಲಿ ನಾಳೆಗೆ ನಾಲ್ಕು ವರ್ಷವಾಯ್ತು, ಈ ನಾಲ್ಕು ವರ್ಷ ಅನ್ನೋ ಪುಟ್ಟ ಸಮಯದಲ್ಲಿ ಬದುಕಿನಲ್ಲಿ ದೊಡ್ಡ ದೊಡ್ಡ ಘಟನೆಗಳು ನಡೆದಿವೆ. ಈಗಾಗಲೇ ನಾನು ಹಲವು ಬಾರಿ ಹೇಳಿದಂತೆ ಗ್ರಾಜುಯೇಷನ್ ಮುಗಿಸಿದ್ದೇನೆ, ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬಂದಿದ್ದೇನೆ. ಪ್ರೀತಿಯಲ್ಲಿ ಬಿದ್ದು ಹೃದಯವನ್ನು ಘಾಸಿ ಮಾಡಿಕೊಂಡಿದ್ದೇನೆ. ಆದ್ರೆ ಎಲ್ಲದಕ್ಕೂ ಎದೆಗೊಟ್ಟು ನಿಂತು ಗಟ್ಟಿ ಮಹಿಳೆಯಾಗಿ ಪರಿವರ್ತಿತಗೊಂಡಿದ್ದೇನೆ. ಕ್ಷಮಿಸು ನಿನಗೆ ನನ್ನ ಅತ್ಯವಶ್ಯಕತೆಯಿದ್ದಾಗ ನಾನು ನಿನ್ನ ಜೊತೆ ಇರಲಿಲ್ಲ. ಒಂದು ದಿನ ನಾವು ಜೊತೆಗೆ ಇರಲಿದ್ದೇವೆ ನನ್ನ ಸರದಿ ಬರೋವರೆಗೂ ಈ ಬದುಕಿನ ಆಟವನ್ನು ನೋಡಬೇಕಿದೆ ’

ಒಂದು ದೀರ್ಘವಾದ ಪತ್ರವನ್ನ ಚಾಸ್ತಿತ್ಯ ಬರೆದು ಒಂದು ನಿಟ್ಟುಸಿರು ಬಿಟ್ಟು, ಸಣ್ಣದಾಗಿ ಬಿಕ್ಕಳಿಸಿದ್ದಳೇನೋ..ಕೆಲವೇ ಗಂಟೆಗಳಲ್ಲಿ ಅದೇ ನಂಬರ್​ನಿಂದ ಒಂದು ರಿಪ್ಲೈ ಬಂದದ್ದು ಚಾಸ್ತಿತ್ಯಳನ್ನ ಅಚ್ಚರಿಗೆ ನೂಕಿತ್ತು. ಈ ಕಡೆ ತಂದೆಯನ್ನು ಕಳೆದುಕೊಂಡ ಹತಭಾಗ್ಯಳಾದ ಚಾಸ್ತಿತ್ಯ​ ಮೆಸೇಜ್ ಮಾಡಿದ್ದರೇ. ಆ ಕಡೆಯಿಂದ ಮಗಳನ್ನು ಕಳೆದುಕೊಂಡ ತಂದೆಯ ಹೃದಯವೊಂದು ಚಾಸ್ತಿತ್ಯ​ಳ ದೀರ್ಘ ಸಂದೇಶಕ್ಕೆ ಅಷ್ಟೇ ಭಾವುಕವಾಗಿ ಪ್ರತಿಕ್ರಿಯೆ ನೀಡಿದ್ರು.

‘ಹಲೋ ಸ್ವೀಟ್ ಹಾರ್ಟ್​, ನಾನುನಿನ್ನ ತಂದೆಯಲ್ಲ, ಆದ್ರೆ ಕಳೆದ ನಾಲ್ಕುವರ್ಷಗಳಿಂದ ನಿನ್ನಿಂದ ನಾನು ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ.ನನ್ನ ಹೆಸರು ಬ್ರಾಡ್​, ಆಗಸ್ಟ್​2014ರಲ್ಲಿ ಕಾರ್​ ಅಪಘಾತದಲ್ಲಿ ನಾನುನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಹತಾಶಗೊಂಡಿದ್ದನನ್ನನ್ನು ನಿನ್ನ ಸಂದೇಶಗಳು ಜೀವಂತವಾಗಿಟ್ಟಿವೆ.ಈ ನಾಲ್ಕು ವರ್ಷಗಳಲ್ಲಿನಿನ್ನೆಲ್ಲ ಏಳುಬೀಳುಗಳನ್ನು ನಾನು ನೋಡಿದ್ದೇನೆ. ಅನೇಕಬಾರಿ ನಿನಗೆ ಪ್ರತಿಕ್ರಿಯೆ ನೀಡಬೇಕುಅಂದುಕೊಂಡಿದ್ದೆ. ಆದ್ರೆ ನಿನ್ನ ಹೃದಯಚೂರಾದೀತು ಅಂತ ಆ ಧೈರ್ಯಮಾಡಲಿಲ್ಲ. ನೀನು ಅಸಾಮಾನ್ಯ ಯುವತಿಮಗು.

ನನ್ನ ಮಗಳು ಕೂಡನಿನ್ನಂತೆಯೇ ಇರಬೇಕು ಅಂತ ಬಯಸಿದ್ದೆ.ನಿನ್ನ ಪ್ರತಿದಿನದ ಸಮಾಚಾರಗಳಿಗೆ ಧನ್ಯವಾದ. ನನ್ನ ಮಗಳನ್ನು ಕಿತ್ತುಕೊಂಡದೇವರದ್ದು ತಪ್ಪಲ್ಲ ಅನ್ನೋ ಮನವರಿಕೆಮಾಡಿಕೊಟ್ಟಿದ್ದೀಯಾ. ದೇವರು ನಿನ್ನ ರೂಪದಲ್ಲಿನನಗೆ ನನ್ನ ಪುಟ್ಟ ದೇವತೆಯನ್ನುವಾಪಸ್ ನೀಡಿದ್ದಾನೆ. ಎಲ್ಲವೂ ಸರಿಯಾಗಲಿದೆ. ನಿನ್ನಬಗ್ಗೆ ಹೆಮ್ಮೆಯಿದೆ ನನಗೆ, ನಾಳೆಯೂ ನಿನ್ನಸಂದೇಶಗಳಿಗಾಗಿ ಕಾಯುವೇ ಅಂತ ಮೆಸೇಜ್ಮಾಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ತಾಮ್ರ ಬಳಸುವುದರಿಂದ ಆಗುವ ಉಪಯೋಗಗಳೇನು ಗೊತ್ತಾ? ತಾಮ್ರದಲ್ಲಿದೆ ರೋಗಮುಕ್ತ ಗುಣಗಳು..!

    ಇದು ಪ್ಲಾಸ್ಟಿಕ್ ಯುಗ ಮನುಷ್ಯ ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದಾರೆ. ತಾನು ಬಳಸುವ ದಿನನಿತ್ಯದ ಹಲವು ವಸ್ತುಗಳು ಅಷ್ಟಲ್ಲದೆ ತಿನ್ನಲು, ಕುಡಿಯಲು ಬಳಸುವ ವಸ್ತು ಸಹ ಪ್ಲಾಸ್ಟಿಕ್ ನಿಂದಲೇ ಕೂಡಿರುತ್ತದೆ. ಆದರೆ ಈ ಪ್ಲಾಸ್ಟಿಕ್ ಮನುಷ್ಯನ ಜೀವಕ್ಕೆ ಮುಂದೊಂದು ದಿನ ಕುತ್ತು ತರುತ್ತದೆ ಎಂದು ತಿಳಿದು ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಮನುಷ್ಯನ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳಬೇಕಾದ ಸಣ್ಣದೊಂದು ಈ ಸಲಹೆಯನ್ನು ಅನುಸರಿಸಿ. ಏನಾದು ಅಂತೀರಾ? ಹೌದು ನಾವು ದಿನನಿತ್ಯ ಬಳಸುವ ಕೆಲವು ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ,…

  • ಸುದ್ದಿ

    ಮೊಬೈಲ್ ನಂಬರ್ ಬದಲಿಸುವ ಮುನ್ನ ಹೆಚ್ಚರ!..ಈ ಸುದ್ದಿ ತಿಳಿದರೆ ನಡುಕ ಹುಟ್ಟಿಸುತ್ತಿದೆ!

    ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವ ಮುನ್ನ ಈ ಲೇಖನವನ್ನು ಓದಲೇಬೇಕು. ಏಕೆಂದರೆ, ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್ ಅನ್ನು ಬದಲಾಯಿಸಿದ ವ್ಯಕ್ತಿಯೋರ್ವರು ತಮ್ಮದೇ ತಪ್ಪಿನಿಂದ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದ ದುಬೈ ನಿವಾಸಿ ಅಶ್ರಫ್ ಎಂಬುವವರು ತನ್ನ ಬ್ಯಾಂಕ್ ಖಾತೆ ಮತ್ತು ಪೇಟಿಎಂ ವ್ಯಾಲೆಟ್​ಗೆ ಲಿಂಕ್ ಮಾಡಿದ್ದ ಮೊಬೈಲ್ ನಂಬರನ್ನು ಇತ್ತೀಚೆಗೆ ಸ್ಥಗಿತ ಮಾಡಿ ಹಣ ಕಳೆದುಕೊಂಡಿದ್ದಾರೆ. ಹೌದು, ಅಶ್ರಫ್ ಅವರು…

  • ಸೌಂದರ್ಯ

    ಮೆಂತೆ ಕಾಳು ಬಳಸಿ ನಿಮ್ಮ ‘ಸೌಂದರ್ಯವನ್ನು’ ಹೆಚ್ಚಿಸಿಕೊಳ್ಳಿ

    ಎಲ್ಲರಿಗೂ ತಿಳಿದಿರುವ ಹಾಗೆ ಮೆಂತೆ ಕಾಳು ವಿವಿಧ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನ ಆಹಾರದಲ್ಲಿ ಉಪಯೋಗಿಸಿದಷ್ಟು ದೇಹಕ್ಕೆ ಒಳ್ಳೆಯದು. ಈ ಮೆಂತೆ ಕಾಳು ಔಷಧೀಯ ಗುಣಗಳ ಜೊತೆಗೆ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಯಾವುದೋ ಕೆಮಿಕಲ್ ಇರುವ ಕ್ರೀಮ್ ಹಚ್ಚುವ ಬದಲು, ನಿಮ್ಮ ಮನೆಯಲ್ಲೇ ಇರುವ ಮೆಂತೆ ಕಾಳುಗಳಿಂದ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. 50 ಗ್ರಾಂ ಮೆಂತೆ ಕಾಳನ್ನು ರಾತ್ರಿ ನೆನಸಿಡಿ. ಬೆಳಗ್ಗೆ ಎದ್ದು ಅದರಲ್ಲಿನ ನೀರನ್ನ ತೆಗೆಯಿರಿ. ಆದ್ರೆ ಆ ನೀರನ್ನು ಚೆಲ್ಲಬಾರದು. ಈ ಮೆಂತೆ…

  • inspirational, ಇತಿಹಾಸ, ಕರ್ನಾಟಕ, ಜೀವನಶೈಲಿ

    ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ.

    ಕರ್ನಾಟಕ ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ. ಇಷ್ಟೊಂದು ಉಪಜಾತಿಗಳು ಹೊಂದಿರುವುದು ಯಾವರೀತಿ ಒಳ್ಳೆಯದು ಎಂಬುದನ್ನು ಓದುಗರಿಂದ ತಳಿಬಯಸುತೇವೆ.

  • ಸುದ್ದಿ

    ಶಿವೈಕ್ಯರಾದ ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ….

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸೋಮವಾರ ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿರುವ ಶ್ರೀಗಳನ್ನೂ ಕಾಡುತ್ತಿದ್ದ ಅನಾರೋಗ್ಯ ಇಂದು ಅವರನ್ನು ಭಕ್ತ ಸಾಗರದಿಂದ ಬಹದೂರಕ್ಕೆ ಒಯ್ದಿದೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ…

  • ಸುದ್ದಿ

    ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು?..ಮಾನವನ ಆಯಸ್ಸು ಎಷ್ಟು ಗೊತ್ತಾ….?

    ಮನುಷ್ಯ ಎಷ್ಟು ವರ್ಷ ಬದುಕಿರಬಲ್ಲ…? ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು….? ಮನುಷ್ಯನ ವಯಸ್ಸಿಗೆ ಮಿತಿ ಇದ್ಯಾ….? ಇಂತಹ ಹತ್ತಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಆಗಾಗ ಗಿರಕಿ ಹೊಡೆಯುತ್ತಲೇ ಇರುತ್ತವೆ. ಅಮೆರಿಕದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. 5 ತಂಡಗಳಾಗಿ ಪ್ರತ್ಯೇಕ ಸಂಶೋಧನೆ ನಡೆಸಿದ್ದು, ಮನುಷ್ಯನ ಆಯಸ್ಸು ಗರಿಷ್ಠ 114.9 ವರ್ಷ ಅಥವಾ ಅದನ್ನು ಮೀರಲೂಬಹುದು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಆದ್ರೆ ಈ ಸಂಶೋಧನೆಯಲ್ಲಿ ನಿಖರತೆ ಇಲ್ಲ ಅನ್ನೋದು ಇನ್ನು ಕೆಲವರ ವಾದ. ಮನುಷ್ಯ 120…