ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀಲ್ಸನ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಅನ್ವಯ 3೦,೦೦೦ ನಗರದ ಗ್ರಾಹಕರು ಅಂದರೆ ಶೇ.67 ರಷ್ಟು ಭಾರತೀಯರು ಉಪಾಹಾರಕ್ಕೆ ಬದಲಾಗಿ ಈ ತಿಂಡಿಗಳನ್ನು ಸೇವಿಸುತ್ತಿದ್ದರು. ಶೇ.56ರಷ್ಟು ಮಂದಿ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲು ಈ ತಿಂಡಿಗಳನ್ನು ಸೇವಿಸುತ್ತಿದ್ದಾರೆ ಇದಕ್ಕೆ ತಜ್ಞರು ಏನು ಹೇಳುತ್ತಾರೆ ನೋಡಿ.
ಇಂಡಿಯನ್ ಡಯಾಟೆಟಿಕ್ ಅಸೋಸಿ ಯೇ?ನ್, ಬೆಂಗಳೂರು ಚಾಪ್ಟರ್ ಇಂದು ಜನಪ್ರಿಯವಾದ ಅಷ್ಟೇನು ಆರೋಗ್ಯಕರವಲ್ಲದ ತಿನಿಸಿ ಗಿಂತ ಆರೋಗ್ಯಕರ ಕುರುಕುಲು ತಿಂಡಿಗಳ ಆಯ್ಕೆ ಯ ವಿನೂತನ ಆರೋಗ್ಯ ಉಪಕ್ರಮ- ದಿ ಹೆಲ್ತ್ ಸ್ವಾಪ್ಗೆ ಚಾಲನೆ ನೀಡಿತು. ಸಮೀಕ್ಷೆಯ ಅನ್ವಯ 3೦,೦೦೦ ನಗರದ ಗ್ರಾಹಕರು ಅಂದರೆ ಶೇ.67 ರಷ್ಟು ಭಾರತೀಯರು ಉಪಾಹಾರಕ್ಕೆ ಬದಲಾಗಿ ಕುರುಕಲು ತಿಂಡಿಗಳನ್ನು ಸೇವಿಸುತ್ತಿದ್ದರು. ಶೇ.56ರಷ್ಟು ಮಂದಿ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲು ಕುರುಕಲು ತಿಂಡಿಗಳನ್ನು ಸೇವಿಸುತ್ತಿದ್ದರು.
ಪ್ರಸ್ತುತದ ಕುರುಕುಲು ತಿನಿಸಿನ ಪ್ರವೃತ್ತಿಯನ್ನು ಗಮನಿಸಿ ಖ್ಯಾತ ಪೌಷ್ಠಿಕ ತಜ್ಞರು, ಐಡಿಎ ಬೆಂಗಳೂರು ಚಾಪ್ಟರ್ ಅಧ್ಯಕ್ಷರು ಹಾಗೂ ಮೌಂಟ್ ಕಾರ್ಮಲ್ ಕಾಲೇಜಿನ ನ್ಯೂಟ್ರಿನ್ ಅಂಡ್ ಡಯಾಟೆಟಿಕ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಗೀತಾ ಸಂತೋಷ್, ಡಯೆಟ್,ನ್ಯೂಟ್ರಿನ್ ಅಂಡ್ ವೆಲ್ನೆಸ್ ಕನ್ಸಲ್ಟೆಂಟ್ ಶೀಲಾ ಕೃಪಸ್ವಾಮಿ, ವೆಲ್ನೆಸ್ ಉದ್ಯಮದ ಆರ್ಡಿ, ಟ್ರಾನ್ಸ್ವ್ಯೂ ಎಂಟರ್ಪ್ರೈಸ್ನ ಜನರಲ್ ಮ್ಯಾನೇಜರ್ ಅಂಜನಾ ನಾಯರ್, ಚೀಫ್ ಕ್ಲಿನಿಕಲ್ ಡಯೆಟಿಷಿಯನ್ ಮತ್ತು ಅಪೋಲೋ
ಆಸ್ಪತ್ರೆಗಳ ಮುಖ್ಯಸ್ಥೆ ಡಾ.ಪ್ರಿಯಾಂಕ ರೋಹಟಗಿ ಭಾರತೀಯರಿಗೆ ರುಚಿಕರ, ಪೋಷಕಾಂಶ ಶಕ್ತಿಯುಳ್ಳ ಆರೋಗ್ಯಕರ ಆಯ್ಕೆಗಳ ಮೂಲಕ ಅನಾರೋಗ್ಯಕರ ಆಯ್ಕೆಗಳನ್ನು ನಿವಾರಿಸುವ ಉಪಕ್ರಮಕ್ಕೆ ಚಾಲನೆ ನೀಡಿದರು.
ಈ ಉಪಕ್ರಮ ಕುರಿತು ಡಾ.ಗೀತಾ ಸಂತೋಷ, ‘ವೇಗದ ಜೀವನದ ಯುಗ ದಲ್ಲಿ ಆರೋಗ್ಯಕರ ಕುರುಕುಲು ನಿಮ್ಮ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕುರುಕುಲು ಸೇವನೆ ಸರಿಯಾದ ಪೋಷಕಾಂಶಗಳನ್ನು ಪಡೆ ಯಲು ಮತ್ತೊಂದು ಅವಕಾಶ ನೀಡುತ್ತದೆ. ಕುರುಕುಲು ತಿನಿಸನ್ನು ಸರಿ ಯಾದ ಪ್ರಮಾಣದ ಪೋಷಕಾಂಶಗಳ ಅದರಲ್ಲೂ
ಕಾರ್ಬೊ ಹೈಡ್ರೇಟ್ಗಳು, ಪ್ರೊಟೀನ್, ವಿಟಮಿನ್ಗಳು ಮತ್ತು ಮಿನರಲ್ಗಳೊಂದಿಗೆ ಸೇವಿಸುವುದು ಸೂಕ್ತ. ಕುರುಕುಲು ತಿಂಡಿಯ ಪೌಷ್ಠಿಕತೆಯ ಅಂಶವನ್ನು ಅದರಲ್ಲಿ ಪೌಷ್ಠಿಕತೆಯ ಅಂಶ ಕುರಿತು ಓದುವುದರಿಂದ ಪಡೆಯಬಹುದು. ಉತ್ತಮ ಆರೋಗ್ಯಕ್ಕೆ ಮುಖ್ಯವಾದುದು ವ್ಯಾಯಾಮದೊಂದಿಗೆಪೋಷಕಾಂಶಯುಕ್ತ ಸಮತೋಲನದ ಆಹಾರ’ಎಂದರು.
ಡಾ.ಪ್ರಿಯಾಂಕ ರೋಹಟಗಿ, ‘ಆರೋಗ್ಯಕರ ಕುರುಕುಲು ಸೇವನೆ ಊಟದ ಅಂತರದ ನಡುವೆ ಹಸಿವನ್ನು ನಿವಾರಿಸಲು ಮಹತ್ತರ ಕ್ರಮವಾಗಿದೆ. ಇದರೊಂದಿಗೆ ಅಂತಿಮವಾಗಿ
ಹಸಿವು ಮತ್ತು ಮುಂದಿನ ಊಟದಲ್ಲಿ ಹೆಚ್ಚು ತಿನ್ನುವುದು ತಪ್ಪುತ್ತದೆ. ಇದರಿಂದ ದೇಹತೂಕ ನಿರ್ವಹಿಸಲು ನೆರವಾಗುತ್ತದೆ. ಅನಾರೋಗ್ಯಕರ ಆಹಾರವನ್ನು ಉತ್ತಮ ಆಹಾರ ಹಾಗೂ ವ್ಯಾಯಾಮದೊಂದಿಗೆ ಬದಲಾಯಿಸಿದರೆ ನಿಮ್ಮ ಜೀವನಶೈಲಿ ಬದಲಾಯಿಸುವಲ್ಲಿ ಬಹಳ ಪರಿಣಾಮ ಬೀರುತ್ತದೆ’ ಎಂದರು.
ಗ್ರಾಹಕರಿಗೆ ಆರೋಗ್ಯಕರ ಆಯ್ಕೆಗಳನ್ನು ನೀಡುವಲ್ಲಿ ಆಹಾರ ಉತ್ಪಾದಕರ ಪಾತ್ರ ಕುರಿತು ಡಾ.ಅಂಜನಾ ನಾಯರ್, ‘ಇಂದು ನಾವು ಮೊಸರು, ಪ್ರೊಟೀನ್ ಬಾರ್ಗಳು
ಇತ್ಯಾದಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಆರೋಗ್ಯಕರ ಕುರುಕುಲು ವಿಭಾಗದಲ್ಲಿ ಹೆಚ್ಚು ಆವಿಷ್ಕಾರ ನಡೆಯಬೇಕಿದೆ’ ಎಂದರು.
ಈ ಕುರಿತು ಶೀಲಾ ಕೃಷ್ಣಸ್ವಾಮಿ ‘ಆರೋಗ್ಯಕರವಾದ ಆಹಾರ ಸೇವಿಸುವುದು ಕಷ್ಟವಲ್ಲ. ಇದು ಸರಿಯಾದ ಆಹಾರದ ಆಯ್ಕೆಗಳನ್ನು ಮಾಡುವುದು. ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಮಂದಿ ಆಯ್ಕೆಯ ಅವಕಾಶವಿಲ್ಲದೆ ಅನಾರೋಗ್ಯಕರ ಆಹಾರ ಆಯ್ಕೆ ಮಾಡಿಕೊಳ್ಳುವುದನ್ನು ಕಂಡಿದ್ದೇನೆ. ಮೊಳಕೆಕಾಳು, ತಾಜಾ ಹಣ್ಣುಗಳು ಮತ್ತಿತರೆ ಉತ್ತಮ ಆರೋಗ್ಯ ನೀಡುತ್ತವೆ’ ಎಂದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸದ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದು, ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಚಾರ ಕಾರ್ಯದಲ್ಲೂ ಪಾಲ್ಗೊಂಡಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ರಾಜ್ಯ ರಾಜಕಾರಣದಿಂದ ದೂರವಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲ, ಮಂಡ್ಯ ಕ್ಷೇತ್ರದಲ್ಲಿ ಮತದಾನ ಮಾಡುವ ಗೋಜಿಗೂ ರಮ್ಯಾ ಹೋಗಿರಲಿಲ್ಲ. ಇದೀಗ ಗುರುವಾರದಂದು ರಾಜ್ಯದಲ್ಲಿ ಮೊದಲ ಹಂತದ…
ರಾಜ್ಯದ ಬರಪೀಡಿತ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ನಗರ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅವಶ್ಯವಿರುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ತುರ್ತಾಗಿ ಅನುಷ್ಠಾನಗೊಳಿಸಬೇಕು. ಬಿಡುಗಡೆ ಮಾಡಿರುವ ಅನುದಾನದಡಿ ಕೊಳವೆ ಬಾವಿಗಳನ್ನು ಆಳಗೊಳಿಸುವ, ಸ್ವಚ್ಛಗೊಳಿಸುವುದು ಹಾಗೂ ಹೈಡ್ರೋಫ್ರಾಕ್ಚರಿಂಗ್ ಕೈಗೊಳ್ಳುವುದು. ನೀರು…
ಪ್ರತಿ ಒಬ್ಬ ಮನುಷ್ಯನಿಗೂ ತನ್ನದೆಯಾದ ಅಸೆ ಆಕಾಂಕ್ಷೆಗಳು ಇರುತ್ತವೆ ಅದರ ಜೊತೆಗೆ ಒಂದು ದೊಡ್ಡ ಕನಸು ಕೂಡ ಇರುತ್ತದೆ. ಇವುಗಳ ನಡುವೆ ತನ್ನ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿ ಕೊಳ್ಳಬೇಕು ಎಂದು ನಿರ್ಧರಿಸುತ್ತಾನೆ. ಆದರೆ ಅವುಗಳಿಗೆಲ್ಲ ಒಂದು ಅವಕಾಶ ಅನ್ನೋದು ಸಿಗಲೇ ಬೇಕು ಅಲ್ವಾ.? ಅಂತಹ ಅವಕಾಶ ಸಿಕ್ಕಾಗ ಅದನ್ನು ಸದೋಪಯೋಗ ಪಡಿಸಿ ಕೊಂಡರೆ ಯಶಸ್ಸು ಸಿಗುತ್ತದೆ.
ನೀವು ಕೂಡ ಒಂದಲ್ಲ ಒಂದು ಬಾರಿ ರೈಲಿನಲ್ಲಿ ಪ್ರಯಾಣ ಮಾಡಿರುತ್ತೀರಿ. ಆಗ ಟ್ರೈನ್ನ ಪ್ರತಿ ಕಂಪಾರ್ಟ್ಮೆಂಟ್ನ ಮೇಲೆ ಐದು ಡಿಜಿಟ್ ಹೊಂದಿರುವ ಒಂದು ನಂಬರ್ ಬರೆದಿರುವುದನ್ನು ನೀವು ಗಮನಿಸಿರುತ್ತೀರಿ.ಈ ಐದು ಡಿಜಿಟ್ ನಂಬರ್ನ ಹಿಂದಿರುವ ರಹಸ್ಯ ಏನ್ ಗೊತ್ತಾ. ಆದರೆ ಯಾವತ್ತಾದರೂ ಈ ನಂಬರ್ ಏನು..? ಯಾಕೆ ಈ ನಂಬರ್ ಬರೆಯುತ್ತಾರೆ ಅನ್ನೋದನ್ನು ಯೋಚನೆ ಮಾಡಿದ್ದೀರಾ…? ರೈಲಿನ ಪ್ರತಿ ಕಂಪಾರ್ಟ್ಮೆಂಟ್ ಮೇಲೆಯೂ ಐದು ಡಿಜಿಟ್ನ ಈ ನಂಬರ್ ಇರುವುದು ಏಕೆ ಗೊತ್ತಾ..? ರೈಲಿನ ಪ್ರತಿ ಕಂಪಾರ್ಟ್ಮೆಂಟ್ ಮೇಲೆಯೂ…
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ಏರಿದೆ. ಇನ್ನೂ ಹಲವಾರು ಮಂದಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಪ್ರಸಾದಕ್ಕೆ ವಿಷ ಬೆರೆಸಿದವರು ಯಾರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ ಎನ್ನಲಾಗಿದೆ. ಸಾಲೂರು ಮಠದ ಸ್ವಾಮಿಗಳ ನಡುವಿನ ಒಳಜಗಳದ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಿರಿಯ ಸ್ವಾಮೀಜಿ ಮಹಾದೇವಸ್ವಾಮಿ ಚಿತಾವಣೆ ಮೇರೆಗೆ ದೊಡ್ಡಯ್ಯ ಎಂಬಾತ…
ಬಾಯಿ ಚಪ್ಪರಿಸುತ್ತ ತಿನ್ನುವ ನೆಲ್ಲಿಕಾಯಿ ಮಾರ್ಕೆಟ್ ನಲ್ಲಿ ಎಲ್ಲಾ ಕಾಲದಲ್ಲೂ ದೊರೆಯುತ್ತದೆ.ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು ವಿಟಮಿನ್ ಸಿ ಅಂಶ ನೆಲ್ಲಿಕಾಯಿಯಲ್ಲಿದೆ.ಇದನ್ನು ಪ್ರತಿನಿತ್ಯ ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ಕೂದಲು ಉದುರುವ ಸಮಸ್ಯೆ ಕಂಡು ಬರುವುದಿಲ್ಲ.ಎಲ್ಲ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಶಕ್ತಿ ಇದಕ್ಕಿದೆ. ಫೈಬರ್, ಪ್ರೋಟೀನ್ ಮತ್ತು ಜೀವಸತ್ವಗಳಿರುವ ನೆಲ್ಲಿಕಾಯಿ, ರಕ್ತವನ್ನು ಶುದ್ಧಗೊಳಿಸಲು ಸಹಕಾರಿ. *ಆಯುರ್ವೇದದ ಪ್ರಕಾರ ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ.ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ಈ…