ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಟಾಣಿ ತಿಂದ್ರೆ ವಾಯು ಬರತ್ತೆ ಅನ್ನೋರೆಲ್ಲಾ ಇಲ್ಕೇಳಿ. ಬಟಾಣಿ ಗಿಡ ನಮ್ ದೇಶದಲ್ಲಿ ಹುಟ್ಟಿದಲ್ಲ. ಇದು ವಿಚಿತ್ರವಾಗಿರೋ ಗಿಡಗಳ ಸಾಲ್ನಲ್ಲಿ ಸೇರತ್ತೆ. ಆದ್ರೂ ಕೂಡಾ ಇದ್ರ ಉಪಯೋಗ ಇದ್ಯಲ್ಲಾ ಅದು ಒಂದೆರಡಲ್ಲ. ಇದ್ರಲ್ಲಿರೋ ಪಿಷ್ಟ ಇದ್ನ ಸಿಹಿಯಾಗಿರೋವಾಗೆ ಮಾಡ್ಸತ್ತೆ. ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರನ್ನ ಗುಣಪಡ್ಸತ್ತೆ.
ಅಷ್ಟಲ್ಲದೇ ಉರಿಯೂತಕ್ಕೆ ಸಂಬಂಧಿಸಿದ ಯಾವ್ದೇ ತರದ ತೊಂದ್ರೆ ಇದ್ರೆ ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಕಮ್ಮಿ ಮಾಡ್ಸತ್ತೆ. ಪ್ರೋಟೀನ್ ಮತ್ತೆ ನಾರಿನ ಅಂಶ ಸಕ್ಕತ್ತಾಗಿ ಇರೋದ್ರಿಂದ ಮಧುಮೇಹ ಕಾಯಿಲೆಯನ್ನ ಕಮ್ಮಿ ಮಾಡ್ಸತ್ತೆ.
ಇದೇ ತರ ಇನ್ನೂ 09 ಉಪಯೋಗಗಳಿದೆ
1. ಇದ್ರಲ್ಲಿರೋ ಪೌಷ್ಟಿಕಾಂಶಗಳು ಮಂಡಿ ನೋವು ಕಮ್ಮಿಮಾಡತ್ತೆ:-
ಬಟಾಣಿಗಳಲ್ಲಿ ಬೇರೆ ಬೇರೆ ತರದ ಬಟಾಣಿಗಳಿವೆ. ಫ್ಲಾವನೊಯ್ಡ್ ಗುಂಪಿನ ಬಟಾಣಿಗಳಲ್ಲಿ ಕ್ಯಟಾಚಿನ್ ಮತ್ತೆ ಎಪಿಕ್ಯಟಾಚಿನ್ ಅನ್ನೋ ಆಂಟಿ ಆಕ್ಸಿಡೆಂಟ್ ಇದೆಯಂತೆ.
ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಮಿನ್ರಲ್, ಜಿಂಕ್, ಒಮೆಗಾ 3 ಫ್ಯಾಟಿ ಆಸಿಡ್, ಇದೆಲ್ಲದ್ರ ಭಂಡಾರಾನೇ ಬಟಾಣಿಗಳಲ್ಲಿ ಅಡ್ಗಿದೆಯಂತೆ. ಇದೆಲ್ಲದ್ರ ಸಹಾಯದಿಂದ ಮಧುಮೇಹ , ಹೃದಯದ ತೊಂದ್ರೆ , ಮಂಡಿ ನೋವ್ಗಳನ್ನ ಕಮ್ಮಿ ಮಾಡ್ತದಂತೆ.
2. ರಕ್ತದಲ್ಲಿರೋ ಸಕ್ಕರೆ ಪ್ರಮಾಣ ಕಮ್ಮಿ ಮಾಡತ್ತೆ:-
ರಕ್ತದಲ್ಲಿರೋ ಸಕ್ಕರೆ ಪ್ರಮಾಣವನ್ನ ಕಮ್ಮಿ ಮಾಡ್ಸಕ್ಕೆ ಬಟಾಣಿ ಒಂದೊಳ್ಳೆ ಆಹಾರ ಅಂತ ಕೆಲ್ವು ಆಹಾರ ತಜ್ಞರು ಹೇಳಿದ್ದನ್ನ ಕೇಳಿದ್ ನೆನಪಿದೆ. ಆದ್ರೆ ಹೇಗ್ ಕಮ್ಮಿ ಮಾಡ್ಸತ್ತೆ ಅಂತ ಗೊತ್ತಿರ್ಲಿಲ್ಲ.
ಇವಾಗ ಗೊತ್ತಾಗಿದ್ ಹೊಸ್ ವಿಷ್ಯ ಎನಂದ್ರೆ ಇದ್ರಲ್ಲಿರೋ ಪ್ರೋಟೀನ್ ಮತ್ತೆ ನಾರಿನ ಅಂಶ ಪಿಷ್ಟವನ್ನ ತುಂಡ್ಮಾಡಿ ಕಾರ್ಬೋಹೈಡ್ರೇಟ್ಸಗಳನ್ನ ಜೀರ್ಣಾಂಗವ್ಯೂಹದ ಕಡೆಗೆ ತಳ್ಳತ್ತೆ. ಈ ಕಾರ್ಬೋಹೈಡ್ರೇಟ್ಸಗಳು ರಕ್ತದಲ್ಲಿರೋ ಸಕ್ಕರೆಯ ಪ್ರಮಾಣಾನ ಕಡ್ಮೆ ಮಾಡ್ಸತ್ತೆ.
3. ಇದ್ರಲ್ಲಿರೋ ವಿಟಮಿನ್ ಬಿ ಅಂಶ ಹೃದಯ ಚನ್ನಾಗಿ ಕೆಲಸ ಮಾಡೋ ಹಾಗೆ ನೋಡ್ಕೊಳತ್ತೆ:-
ಹಾಳು ಮೂಳನ್ನೆಲ್ಲಾ ತಿಂದು ಹೊಟ್ಟೆ ಬರ್ಸಕೊಂಡು ಆಮೇಲೆ ನಿಧಾನವಾಗಿ ಬೇಡ್ದೇ ಇರೋ ಕೊಬ್ಬನ್ನ ಹೆಚ್ಸಿಕೊಂಡ್ರೆ ಹೃದಯದ ಕಾಯ್ಲೆ ಸಾಮಾನ್ಯ. ಬಟಾಣಿಯಲ್ಲಿರೋ ನಿಯಾಸಿನ್ ಅನ್ನೋ ಅಂಶ ಈ ಕೆಟ್ಟ್ ಕೊಬ್ಬನ್ನ ಕರ್ಗಸತ್ತೆ. ಇದ್ರ ಜೊತೆಗೆ ನಾನು ಸಾಥ್ ಕೊಡ್ತೀನಿ ಅಂತ ಒಮೆಗಾ 3 ಫ್ಯಾಟಿ ಆಸಿಡ್ ಬೇರೆ ಇದೆ. ಕೆಟ್ಟ್ ಕೊಬ್ಬಿನ ಜೊತೆ ಹೋಮೋ ಸಿಸ್ಟಿನ್ ಅನ್ನೋದ್ಬೇರೆ ಕೂಡ್ಕಂಡು ತುಂಬಾನೇ ತೊಂದ್ರೆ ಕೊಡತ್ತೆ.
4. ಆಂಟಿ ಆಕ್ಸಿಡೆಂಟ್ಸ್ ಸಹಾಯದಿಂದ ಹೊಟ್ಟೆ ಕ್ಯಾನ್ಸರ್ ಬರೋದನ್ನ ತಡೆಗಟ್ಟತ್ತೆ:-
ಒತ್ತಡ ಮತ್ತು ತಲೆಬಿಸಿ ಜಾಸ್ತಿ ಮಾಡ್ಕೊಳೋದ್ರಿಂದ ಕ್ಯಾನ್ಸರ್ ಬೆಳೀಬೋದು. ನಿಮ್ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಕಮ್ಮಿ ಇದ್ರೆ ಈ ಸಮಸ್ಯೆನಾ ಪರಿಹರ್ಸಕ್ಕೆ ಆಗಲ್ಲ.
ಆಗ್ಲೇ ಹೇಳ್ದಾಗೆ ಬಟಾಣಿ ಆಂಟಿ ಆಕ್ಸಿಡೆಂಟ್ಗಳ ಭಂಡಾರಾವೇ ಆಗಿರೋದ್ರಿಂದ ಹೊಟ್ಟೆ ಕ್ಯಾನ್ಸರ್ ಇಂದ ನಮ್ಮನ್ನ ಕಾಪಾಡತ್ತೆ.
5. ಬಟಾಣೀಲಿ ಕ್ಯಾಲೋರಿ ಕಮ್ಮಿ ಇರೋದ್ರಿಂದ ತೂಕ ಇಳಿಸ್ಕೊಳಕ್ಕೆ ಸಹಾಯ ಮಾಡತ್ತೆ:-
ಒಳ್ಳೆ ಪೋಷಕಾಂಶ ಮತ್ತೆ ಕಮ್ಮಿ ಕ್ಯಾಲೋರಿಯನ್ನ ಹೊಂದಿರೋ ಬಟಾಣಿ ನಿಮ್ ತೂಕ ಇಳ್ಸೋದ್ರಲ್ಲಿ ಅನುಮಾನಾನೇ ಇಲ್ಲ. ಒಂದು ಕಪ್ ಬಟಾಣಿಯಲ್ಲಿ ಸುಮಾರು 118 ಕ್ಯಾಲೋರಿಗಳು ಮಾತ್ರ ಇರತ್ತೆ. ಹಾಗೇ ನೀವ್ ಬಟಾಣಿ ತಿಂದಾದ್ಮೇಲೆ ಇನ್ನೇನ್ ತಿನ್ನೋಕೂ ಮನ್ಸ್ ಬರಲ್ಲ. ಯಾಕಂದ್ರೆ ನಿಮ್ ಹೊಟ್ಟೆ ಅದಾಗ್ಲೇ ತುಂಬಿರತ್ತೆ. ಬಟಾಣಿಗೆ ಸ್ವಲ್ಪ ಮಟ್ಟಿಗೆ ಉಪ್ಪನ್ನ ಹಾಕ್ಬಿಟ್ಟು ತಿಂದ್ರೆ ಸಕ್ಕತ್ತಾಗ್ ಶಕ್ತಿನೂ ಸಿಗತ್ತೆ.
6. ಇದ್ರಲ್ಲಿರೋ ನಾರಿನಂಶ ಹೊಟ್ಟೆ ಕಟ್ಕೊಳ್ದೆ ಇರೋ ಹಾಗೆ ನೋಡ್ಕೊಳತ್ತೆ:-
ಮಲಬದ್ದತೆ ಇದ್ಯಲ್ಲಾ… ಅದು ಎಲ್ಲಾ ಕಾಯ್ಲೆಗೂ ಇಲ್ ಜಾಗ ಇದೆ ಬಾರಪ್ಪಾ ಅನ್ನತ್ತೆ. ಬಟಾಣಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರೋದ್ರಿಂದ ಎಷ್ಟೋ ದಿನ್ಗಳಿಂದ ಕೂಡ್ಕಂಡಿರೋ ತ್ಯಾಜ್ಯಗಳನ್ನ ಹೊರ್ಗಹಾಕ್ಲಿಕ್ಕೆ ಸಹಾಯ ಮಾಡತ್ತೆ. ಹಾಗೇ ಬಟಾಣಿ ಜೀರ್ಣಾಂಗ ವ್ಯವಸ್ಥೆಗೆ ತುಂಬಾನೇ ಸಾಥ್ ಕೊಡೋದೂ ಇದಕ್ಕೆ ಕಾರಣ ಇರ್ಬೋದು.
7. ಕೂದಲಿನ ಅಂದ ಕಾಪಾಡೋಕೆ ಇದ್ರಲ್ಲಿರೋ ವಿಟಮಿನ್ ಬಿ ಸಹಾಯ ಮಾಡತ್ತೆ:-
ಬಟಾಣಿಯಲ್ಲಿರೋ ವಿಟಮಿನ್ ಬಿ , ಫೋಲೆಟ್ , ವಿಟಮಿನ್ ಬಿ 6 ಕೂದಲು ಬೇರಿನಿಂದ ಗಟ್ಟಿಯಾಗೋ ಹಾಗೆ ನೋಡ್ಕೊಳತ್ತೆ. ವಿಟಮಿನ್ ಸಿ ಅನ್ನೋದು ಕೂದ್ಲು ಉದ್ರದೇ ಇರೋ ಹಾಗೆ ಕಾಪಾಡತ್ತೆ.
8.ಆಗಾಗ ಹುಷಾರ್ ತಪ್ಪಿ ಬೀಳದೆ ಇರೋ ಹಾಗೆ ನೋಡ್ಕೊಳತ್ತೆ:-
ನಮ್ ದೇಹದಲ್ಲಿರೋ ವ್ಯಾಧಿ ಕ್ಷಮತ್ವ ನಿರ್ಧಾರ ಆಗೋದೇ ವಿಟಮಿನ್ ಎ ಮೂಲಕ. ಒಂದು ತಟ್ಟೇ ಬಟಾಣಿಯಲ್ಲಿ ಸುಮಾರು 22 % ವಿಟಮಿನ್ ಎ ನಮ್ ದೇಹಕ್ಕೆ ಸಿಗತ್ತಂತೆ. ಅದ್ಕೊಸ್ಕರ ಇಮ್ಯುನಿಟಿ ಇಲ್ಲಾಂತ ಕೊರಗ್ಬೇಡಿ. ಬಟಾಣಿ ತಿನ್ನಿ. ಉಸಿರಾಟದ ತೊಂದ್ರೆ ಆಗ್ದೆ ಇರಕ್ಕೂ ವಿಟಮಿನ್ ಎ ಬೇಕಾಗತ್ತೆ.
9. ಚರ್ಮ ಹೊಳಿಯೋ ಹಾಗೆ ಮಾಡಿ ಚಿಕ್ಕೋರ ತರ ಕಾಣೋಹಾಗೆ ಮಾಡತ್ತೆ:-
ನಮ್ ದೇಹದಲ್ಲಿ ಫ್ರೀ ರಾಡಿಕಲ್ ಅನ್ನೋ ಅಂಶ ಇಲ್ದೇ ಹೋಗಿದ್ರೆ ಬಿಸ್ಲು , ಚಳಿ , ಮಳೆಯಂತ ನಮ್ ಚರ್ಮ ಬೇಗನೇ ಸುಕ್ಕು ಗಟ್ತಿತ್ತು. ಬಟಾಣಿಯಲ್ಲಿರೋ ಆಂಟಿ ಆಕ್ಸಿಡೆಂಟ್ ಈ ಫ್ರೀ ರಾಡಿಕಲ್ಗಳ ಆಯಸ್ಸು ಮತ್ತು ಅದ್ರ ಶಕ್ತಿಯನ್ನ ಜಾಸ್ತಿ ಮಾಡ್ಸತ್ತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತುಮಕೂರು, ಆ.23-ವಿವಿಧ ಕಡೆಗಳಲ್ಲಿ ಮೋಟಾರ್ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಖತರ್ನಾಕ್ ಕಳ್ಳನನ್ನು ಕ್ಯಾತಸಂದ್ರ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅನಂತಪುರ ಜಿಲ್ಲೆ ಅರೆಸಮುದ್ರಂ ನಿವಾಸಿ ನರಸಿಂಹ ಮೂರ್ತಿ (30) ಬಂಧಿತ ಆರೋಪಿಯಾಗಿದ್ದು, ಈತ ತುಮಕೂರು ಪಟ್ಟಣದ ಹಳೇ ದೇವರಾಯಪಟ್ಟಣದಲ್ಲಿ ಪ್ರಸ್ತುತ ವಾಸವಾಗಿದ್ದನು. ಕಳೆದ 2013ರಲ್ಲಿ ಬೆಂಗಳೂರು, ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ ಕಡೆಗಳಲ್ಲಿ ಮೋಟಾರ್ಬೈಕ್ಗಳನ್ನು ಕಳ್ಳತನ ಮಾಡಿದ್ದು, ಈತನ ಬಂಧನದಿಂದ ಹಲವು ಪ್ರಕರಣಗಳು ಪತ್ತೆಯಾದಂತಾಗಿದೆ….
ಪಣಜಿ, ದೇಶದ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಿರುವ ಜಿಎಸ್ಟಿ ಮಂಡಳಿ ಕೆಫೀನ್ ಆಧಾರಿತ ಪೇಯಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದೇ ವೇಳೆ ಪ್ರವಾಸೋದ್ಯಮಕ್ಕೆ ಒತ್ತು ಕೊಡಲು ಹೋಟೆಲ್ ಕೋಣೆಗಳ ಬಾಡಿಗೆ ಮೇಲಿನ ತೆರಿಗೆಯನ್ನು ಇಳಿಸಿದೆ. ಜಿಎಸ್ಟಿ ಮಂಡಳಿ ಸಭೆಯ ಬಳಿಕ ಶುಕ್ರವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಒಂದು ರಾತ್ರಿ ತಂಗಲು 1 ಸಾವಿರ ರೂ.ವರೆಗಿನ ಹೋಟೆಲ್ ಕೋಣೆಗಳ ಬಾಡಿಗೆ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಒಂದು…
ಯಾವುದೇ ತರಹದ ಗುಂಪಿನ ದಾಖಲೆಗಳನ್ನು ಹೊಂದಿರದ ಅಕ್ರಮ ವಲಸಿಗರಿಗೆ ಬಾಡಿಗೆ ಮನೆ ಕೊಡಬಾರದು, ಕೊಟ್ಟರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಮನೆ ಮಾಲೀಕರು ಬಾಡಿಗೆ ಮನೆಯನ್ನು ಕೊಡುವ ಮೊದಲು ಅವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡ ಬಳಿಕ ಮನೆ ಬಾಡಿಗೆಗೆ ಕೊಡಿ ,ಬಾಡಿಗೆದಾರ ಅಕ್ರಮವಾಗಿ ನೆಲೆಸಿರುವುದು ಕಂಡುಬಂದರೆ ಸಂಬಂಧಪಟ್ಟ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮತ್ತು…
ಭಾರತ ಹಲವಾರು ದೇವರು ಧರ್ಮಗಳ ನೆಲಬೀಡು. ಆಂಗ್ಲರ ಕಾಲದಿಂದಲೂ ದೇವಾಸ್ಥಾನ ಮಂದಿರಗಳ ಮೇಲೆ ದಾಳಿಗಳು ನಡೆದಿವೆ. ಹಾಗೂ ನಮ್ಮಲ್ಲಿನ ವಿವಿದ ರೀತಿಯ ಆಚರಣೆಗಳು, ಮತ್ತು ಸಂಪ್ರದಾಯಗಳ ಮೇಲೆ ಪರಕೀಯರ ದಾಳಿಯಾಗಿದೆ.ಆದ್ರೆ ಏನೇ ಆಗಿದ್ದರೂ ಭಾರತ ತನ್ನ ಅನಾದಿಕಾಲದಿಂದ ಬಂದ ಸಂಸ್ಕೃತಿಯನ್ನು ಉಳಿಸುಕೊಂಡು ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.ರಾಜಸ್ಥಾನದ ತನೋಟ್ ಮಾತಾ ದೇವಾಲಯ ಇಂತಹ ಅಚ್ಚರಿಗಳ ಸಾಲಿಗೆ ಸೇರುವ ದೇವಾಲಯವಾಗಿದೆ.
ಬೆಳ್ಳುಳ್ಳಿ ಕರೋನಾ ಕಿಲ್ಲರ್ ಹೌದೇ..? ಬೆಳ್ಳುಳ್ಳಿ ಎದುರು ಕರೋನಾ ಆಟ ನಡೆಯೋದಿಲ್ಲ ಅನ್ನೋದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರವಾಗುತ್ತಿರುವ ಲೇಟೆಸ್ಟ್ ಮನೆಮದ್ದು. ಈ ಮಾತಿನಲ್ಲಿ ಸತ್ಯ ಎಷ್ಟಿದೆ ಅನ್ನೋದನ್ನು ನಾವು ತಿಳಿದುಕೊಳ್ಳಲೇ ಬೇಕು. ಬೆಳ್ಳುಳ್ಳಿ ತಿಂದರೆ ಈ ಮಾರಕ ವೈರಸ್ ನಿಂದ ನಾವು ಬಚಾವ್ ಆಗ ಬಹುದೇ..? ಅದಕ್ಕೆ ಉತ್ತರ ಹುಡುಕೋಣ. WHO ಸ್ಪಷ್ಟವಾಗಿ ಹೇಳಿದೆ.. ಬೆಳ್ಳುಳ್ಳಿ ಒಂದು ಹೆಲ್ತಿ ಹರ್ಬ್. ಅದರಲ್ಲಿ ಎರಡು ಮಾತಿಲ್ಲ. ಇದನ್ನು ತಿಂದರೆ ಹೊಟ್ಟೆ ಸಮಸ್ಯೆ ಪರಿಹಾರವಾಗುತ್ತದೆ. ಇದರಿಂದ ಕರೋನಾ ವೈರಸ್…
ನಟ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನಟ ಸಾರ್ವಭೌಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರ ಅಪ್ಪು ಅಭಿಮಾನಿಗಳ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ಚಿತ್ರದಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು ನಟಿ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಹಿರಿಯ ನಟಿ ಬಿ ಸರೋಜಾದೇವಿ, ಅಚ್ಯುತ್, ರವಿಶಂಕರ್ ಅವರು ಪೋಷಕ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಹಾಸ್ಯ ನಟ ಚಿಕ್ಕಣ್ಣ ಅವರ ಪಾತ್ರವೂ ವಿಶೇಷವಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಚಿತ್ರದ ಟ್ರೈಲರ್…