ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಲ್ಲ, ನಾನು ವಾಟ್ಸ್ಯಾಪ್ ಯೂಸ್ಮಾಡ್ತಿಲ್ಲ… ಹಾಗಂತ ಯಾರಾದರು ಹೇಳಿದರೆ , ಇವನ್ಯಾರೋ ಗುಗ್ಗು ಅಂತ ನೋಡೋ ಕಾಲ ಇದು.ಯಾಕಂದ್ರೆ, ಹಳ್ಳಿ ಯಿಂದ ದಿಲ್ಲಿಯವರಿಗೆ, ಹೈದನಿಂದ ವೃದ್ಧರವರೆಗೆ ಎಲ್ಲರೂ ವಾಟ್ಸ್ಯಾಪ್ ಬಳಸುವವರೇ. ಆದರೆ, ಜನರನ್ನು ಬೆಸೆಯುವ ವಾಟ್ಸ್ಯಾಪ್ಈಗ ಹಳಿ ತಪ್ಪಿದ ರೈಲಿನಂತಾಗಿರುವುದು ಸುಳ್ಳಲ್ಲ. ವಾಟ್ಸ್ಯಾಪ್ಅನ್ನೋದು ಗೀಳು ರೋಗವಾಗಿ ಬದುಕನ್ನು ಆವರಿಸುತ್ತಿರೋದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ.
ಒಂದೆರಡು ಗಂಟೆ ಇಂಟರ್ನೆಟ್ಆಫ್ ಮಾಡಿ ಸುಮ್ಮನೆ ಕುಳಿತುಕೊಳ್ಳಿ. ವಾಟ್ಸ್ಯಾಪ್ ಕಡೆಗೆ ನಿಮ್ಮ ಗಮನ ಎಳೆಯದಿದ್ದರೆ, ನೀವು ಈ ಗೀಳಿನಿಂದ ಸೇಫ್ ಅಂತ ಅರ್ಥ. ಹಾಗಾದ್ರೆ, ಅತಿಯಾದ ವಾಟ್ಸ್ಯಾಪ್ಬಳಕೆಯಿಂದ ನಿಮಗೆ ಏನೇನು ನಷ್ಟ ಆಗ್ತಿದೆ ಗೊತ್ತಾ? ನಿಮ್ಮನ್ನು ವೇಸ್ಟ್ಆಗಿಸ್ತಿದೆ ವಾಟ್ಸ್ ಆಪ್!
1. ಸಮಯ ಹಾಳು:-
ನೋಡೋಣ, ಯಾರಾದ್ರೂ ಆನ್ಲೈನ್ಇದ್ದಾರ ಅಂತ ಚೆಕ್ ಮಾಡುವುದರಲ್ಲೆ 30 ನಿಮಿಷ ವ್ಯರ್ಥವಾಗುತ್ತದೆ. ದಿನಕ್ಕೆ ಅರ್ಧ ಗಂಟೆ ಅಂತಾದ್ರೆ ತಿಂಗಳಿಗೆ ಎಷ್ಟಾಗುತ್ತೆ ಲೆಕ್ಕ ಹಾಕಿ? ಪ್ರತಿ ಸಲ ಆನ್ ಲೈನ್ಗೆ ಬಂದಾಗ , ಯಾರಾದ್ರೂ ಚಾಟ್ಗೆ ಸಿಗ್ತಾರಾ ಅಂತ ಹುಡುಕೋದು ಕೂಡ ಕೆಲವರಿಗೆ ಚಟವಾಗಿಬಿಟ್ಟಿದೆ. ಹೀಗೆ ಮಾಡೂ ದಿಂದ ಆಗೂ ಪ್ರಯೋಜನವಾದ್ರೂ ಏನು? ಅಂತಿಮವಾಗಿ ನಿಮಗೆ ಸಿಕ್ಕಿದ್ದಾದರೂ ಏನು? ಸೊನ್ನೆ! 00000000000000000000000000000000000000000
2. ಡಿಪಿ: ಪೋಟೂ ಅಷ್ಟೇ ಅಲ್ಲ!
ವಾಟ್ಸ್ವಾಪ್ ಡಿಪಿ ಅಥವಾ ಡಿಸ್ಪ್ಲೇ ಪಿಕ್ಚರ್ಈಗ ಕೇವಲ ಪೋಟೂ ಮಾತ್ರ ಆಗಿ ಉಳಿದಿಲ್ಲ. ನಿಮ್ಮ ಬದುಕನ್ನು ಎಲ್ಲರೆದುರು ಬಿಂಬಿಸುವ ಸಾಧನವಾಗಿ ಬದಲಾಗಿದೆ. ಎಲ್ಲರೂ ಮೆಚ್ಚುವಂಥ ಫೋಟೊವನ್ನು ಸೆಲೆಕ್ಟ್ ಮಾಡುವುದೇ ದೊಡ್ಡ ಸವಾಲು. ಈಗಂತೂ ನಿಮ್ಮ ಡಿಪಿಯನ್ನು ಯಾರ್ಯಾರು ನೋಡಿದ್ದಾರೆ, ನೋಡಿಲ್ಲ ಅಂತಲೂ ಗೊತ್ತಾಗುತ್ತೆ. ಅಯ್ಯೋ ಅವನು/ ಅವಳು ನನ್ನ ಡಿಪಿ ಚೆಕ್ಮಾಡಿಲ್ಲ. ಇನ್ನೂ ಚೆಂದದ ಪೋಟೂ ಹಾಕ್ತೀನಿ ಅಂತ ಅರ್ಧ ಗಂಟೆಗೊಮ್ಮೆ ಡಿಪಿ ಬದಲಿಸುತ್ತಾರೆ. ಜಗ ಮೆಚ್ಚುವ ಡಿಪಿಗಾಗಿ ಹಂಬಲಿಸುತ್ತಾ, ಅದಕ್ಕಾಗಿಯೇ ಫೋಟೊ ಕ್ಲಿಕ್ಕಿಸಿಕೊಳ್ಳುವವರೂ ಇದ್ದಾರೆ. ಇದರಿಂದ ನಿಮ್ಮೊಳಗೆ ಆತ್ಮರತಿ ಬೆಳೆಯುತ್ತಿದೆ. ಹೊರಜಗತ್ತಿಗೆ ನಿಮ್ಮ ಮೇಲಿನ ಗಂಭೀರತೆ ಹೊರಟುಹೋಗುತ್ತಿದೆ.
3. ಪೋನೆ ಇಲ್ಲ, ಮೆಸೇಜೆ ಎಲ್ಲಾ…
ವಾಟ್ಸ್ಯಾಪ್ಬರುವುದಕ್ಕಿಂತಲೂವು ಮುಂಚೆ, ಪ್ರೀತಿ ಪಾತ್ರರಿಗೆ ಆಗೂಮ್ಮೆ , ಈಗೊಮ್ಮೆಯಾದರೂ ಫೋನ್ ಮಾಡುತ್ತಿದ್ದೆವು. ಆದರೆ, ಈಗ ವಾಟ್ಸ್ಯಾಪ್ನಲ್ಲಿ ಮೆಸೇಜ್ಕಳಿಸಿದರೆ ಮುಗಿಯಿತು. ಇನ್ನೂ ದುರಂತವೆಂದರೆ, ಮದುವೆ ಕರೆಯೋಲೆಗಳೂ ವಾಟ್ಸ್ಯಾಪ್ನಲ್ಲೇ ತಲುಪುತ್ತಿವೆ, ಸಂಭಂದಗಳು ಗಟ್ಟಿಯಾಗಿಸಬೇಕಿದ್ದ ವಾಟ್ಸ್ಯಾಪ್ನಿಂದಲೇ ಮನುಷ್ಯ- ಮನುಷ್ಯರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ವ್ಯಕ್ತಿ ತನಗೆ ಗೊತ್ತಿಲ್ಲದಂತೆ, ಆತ್ಮೀಯನೊಂದಿಗೆ ದೂರವಾಗುತ್ತಿದ್ದಾನೆ.
4. ಟಿಕ್ಟಿಕ್ಬ್ಲೂ ಟಿಕ್….
ನಾನು ಮೆಸೇಜ್ಕಳಿಸಿ ಆಗಲೇ ಅರ್ಧ ಗಂಟೆಯಾಯ್ತು. ಇನ್ನೂ ಸಿಂಗಲ್ಟಿಕ್ಇದೆ, ಬ್ಲೂ ಟಿಕ್ ಬಂದಿದೆ, ಆದ್ರೂ ರಿಪ್ಲೆ ಮಾಡಿಲ್ಲ, ಆನ್ಲೈನ್ಇದ್ದಾನೆ, ಆದ್ರೂ ನನ್ನ ಮೆಸೇಜ್ನೋಡದೆ ನಿರ್ಲಕ್ಷಿಸುತ್ತಿದ್ದಾನೆ, ಸಿಂಗಲ್ಟಿಕ್ಅಷ್ಟೇ ಇದೆ ಅವಳೇನಾದ್ರೂ ನನ್ನನ್ನ ಬ್ಲಾಕ್ ಮಾಡಿದ್ಲಾ..? ಮೆಸೇಜ್ಮಾಡಿದಾಗ ಮೂಡುವ ಟಿಕ್ಗಳು ಇಂಥವೆಲ್ಲಾ ಟೆನನ್ಗಳನ್ನು ಸೃಷ್ಟಿಸುತ್ತಿವೆ. ನಿಮ್ಮನ್ನು ಅನುಮಾನದ ಗೂಡಾಗಿಸುತ್ತಿದೆ.
5. ನಿಮ್ಮ ಫೋನು, ಕಸದ ಬುಟ್ಟಿ..!
ಪ್ರೈಮರಿ ದೂಸ್ತಾಗಳು , ಕ್ರೇಝಿ ಕ್ಲಾಸ್ಮೇಟ್ಸ್, ಓಲ್ಡ್ಫ್ರೆಂಡ್ಸ್ ಅಸೋಸಿಯೇ?ನ್… ಎಂಬ ಇತ್ಯಾದಿ ವಾಟ್ಸ್ಯಾಪ್ಗ್ರೂಪಿಗೆ ನೀವು ಸದಸ್ಯರಾಗಿರುತ್ತೀರಿ. ಅಲ್ಲಿ ಬೆಳಗ್ಗೆ, ರಾತ್ರಿ ಬರುವ ಗುಡ್ಮಾರ್ನಿಂಗ್, ಗುಡ್ನೈಟ್ಮೆಸೇಜ್ಗಳು, ಮೀಮ್ಸ್, ಹಳಸಲು ಜೋಕ್ಗಳಿಂದಲೇ ಪೋನ್ ಮೆಮೋರಿ ತುಂಬಿ ಮೋಬೈಲ್ ದಿನಕ್ಕೊಮ್ಮೆ ಹ್ಯಾಂಗ್ಆಗುತ್ತದೆ. ಎಷ್ಟೇ ಬೇಡ ಬೇಡ ಅಂದರೂ, ಇಂಥ ಗ್ರೂಪ್ಗ್ಳಿಂದ ದೂರ ಉಳಿಯುವುದು ಕಷ್ಟದ ವಿಷಯ. ವಾಟ್ಸ್ಯಾಪ್ಕಾರಣದಿಂದಲೇ ನಿಮ್ಮ ಪೋನು ಕಸದ ಬುಟ್ಟಿ ಆಗಿರುತ್ತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರ ಕನ್ನಡ ಜಿಲ್ಲೆಯ ಯೆಲ್ಲಾಪುರ ಗ್ರಾಮದ ಸಹಕಾರ ಸೊಸೈಟಿ ಶಾದಿಭಾಗ್ಯ ಯೋಜನೆಯಡಿ ಬಂಪರ್ ಬಹುಮಾನ ಘೋಷಿಸಿದೆ.ಆನಗೋಡು ಗ್ರಾಮದ ರೈತನನ್ನು ವಿವಾಹವಾದ ಯಾವುದೇ ಯುವತಿಯ ಅಕೌಂಟ್ ಗೆ 1 ಲಕ್ಷ ರು ಹಣ ಡೆಪಾಸಿಟ್ ಮಾಡಲಾಗುವುದು. ಈ ಆಫರ್ ಆನಗೋಡು ಗ್ರಾಮಸ್ಥರಿಗೆ ಹಾಗೂ ಆನಗೋಡು ಸೇವಾ ಸಹಕಾರಿ ಸಂಘದ ಸದಸ್ಯರಿಗೆ ಮಾತ್ರ ಅನ್ವಯಿಸುತ್ತಿದೆ.ಈ ಯೋಜನೆ 2019ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಸಹಾಯಕರಾಗಿರುವ ಕುಟುಂಬಗಳಿಗೆ ಧನ ಸಹಾಯವಾಗಲಿದೆ, ಭವಿಷ್ಯದಲ್ಲಿ ಅವರಿಗೆ ಸಹಾಯವಾಗಲಿ ಎಂಬ…
ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಶುರುವಾದಾಗಿನಿಂದ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ಯುವತಿಯರು ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಈ ಯುವತಿಯ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು. ತಕ್ಷಣ ಯುವತಿಗೆ ಸಹಾಯ ಮಾಡಲು ಮುಂದಾಗಿದ್ದು, ನಂತರ ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ…
ತೂಕ ಜಾಸ್ತಿಯಾಗಿದೆ ಎನ್ನುವ ಚಿಂತೆ ಕಾಡ್ತಿದೆಯಾ. ತೆಳ್ಳಗಾಗಲು ಸಿಕ್ಕಾಪಟ್ಟೆ ಪ್ರಯತ್ನ ಪಟ್ಟು, ಕೈ ಖಾಲಿ ಮಾಡಿಕೊಂಡು ಕುಳಿತಿದ್ದೀರಾ? ಹಾಗಿದ್ರೆ ಖರ್ಚಿಲ್ಲದೆ ಮನೆಯಲ್ಲಿಯೇ ಆರಾಮವಾಗಿ ತೂಕ ಇಳಿಸಿಕೊಳ್ಳೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ. ಕೇವಲ 10 ದಿನಗಳಲ್ಲಿ 5 ಕೆ.ಜಿ ತೂಕ ಇಳಿಸಿಕೊಳ್ಳುವ ಉಪಾಯ ಇಲ್ಲಿದೆ. ನೈಸರ್ಗಿಕ ಔಷಧಿ ವಾಟರ್ ಥೆರಪಿ ಮೂಲಕ ತೂಕ ಇಳಿಸಿಕೊಳ್ಳಬಹುದು. ಬ್ರಿಟನ್ ನ ಫಿಟ್ನೆಸ್ ಕೋಚ್ ಶೌನ್ ವಾಕರ್ ವಾಟರ್ ಥೆರಪಿಯ ಕೆಲವೊಂದು ಪ್ರಯೋಗಗಳನ್ನು ಮಾಡಿದ್ದಾರೆ. ವಾಕರ್ ಹೇಳುವಂತೆ ವಾಟರ್ ಥೆರಪಿ…
ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್ ಪರವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಮಂಡ್ಯ ಜೆಡಿಎಸ್ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದ್ದು, ಸಿನಿಮಾ ರಂಗದವರು ಬಂದರೆ ಮಂಡ್ಯದ ಜನ ಮರುಳಾಗುವುದಿಲ್ಲ ಎಂದು ಹೇಳಿದ್ದಾರೆ. ‘ಗಜಕೇಸರಿ’, ‘ಐರಾವತ’ ಬಂದರೂ, ಗೆಲ್ಲುವುದು ‘ಅಭಿಮನ್ಯು’ ನಿಖಿಲ್ ಎಂದು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಚಾರ ಮಾಡಿ ಸಿದ್ದರಾಮಯ್ಯ, ಆನಂದ ಅಪ್ಪುಗೋಳ, ಕೆ….
ಇಂದು ನೀವು ತೋರಿಸುತ್ತಿರುವ ಪ್ರೀತಿಗೆ ನಮ್ಮ ಮೈಯಲ್ಲಿರುವ ರಕ್ತವನ್ನು ತೆಗೆದು ನಿಮ್ಮ ಕಾಲನ್ನು ತೊಳೆದರೂ ಅದು ಕಡಿಮೆಯೇ ಎಂದು ನಟ ದರ್ಶನ್ ಅವರು ಅಭಿಮಾನಿಗಳಿಗೆ ಹೇಳಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ದರ್ಶನ್ ನಮ್ಮ ಬಗ್ಗೆ ಏನೇ ಮಾತಾಡಿದ್ರೂ ನಾವು ಕೋಪ ಮಾಡ್ಕೊಳಲ್ಲ, ಬೇಜಾರಿಲ್ಲ, ನೊಂದುಕೊಳ್ಳಲ್ಲ. ನಾವು ಅಂಬರೀಶ್ ಅವರಿಗಾಗಿ, ಸುಮಲತಾ ಅಮ್ಮನಿಗಾಗಿ ಬಂದಿದ್ದೇವೆ ಎಂದು ನಟ ದರ್ಶನ ಹೇಳಿದರು. ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್,…
ಹುಡುಗಿ ತುಂಬಾ ಕುಳ್ಳಿ ಅನ್ನುವ ಮಾತುಗಳನ್ನ ನಾವು ಪ್ರತಿದಿನ ಕೇಳುತ್ತಲೇ ಇರುತ್ತೇವೆ, ಹುಡುಗಿ ಕುಳ್ಳಗಿರುವುದು ಅವರ ವೀಕ್ನೆಸ್ಸ್ ಅಲ್ಲ ಅವರ ಪ್ಲಸ್ ಪಾಯಿಂಟ್ ಅನ್ನುವುದು ಇನ್ನು ಕೆಲವರಿಗೆ ತಿಳಿದಿಲ್ಲ. ಇನ್ನು ಹೆಚ್ಚಿನ ಹುಡುಗರು ಹುಡುಗಿ ಕುಳ್ಳಿ ಅನ್ನುವ ಕಾರಣಕ್ಕೆ ಅವರನ್ನ ಮದುವೆ ಮಾಡಿಕೊಳ್ಳಲು ನಿರಾಕರಣೆ ಮಾಡುತ್ತಾರೆ, ಆದರೆ ಅದೂ ದೊಡ್ಡ ತಪ್ಪು ಸ್ನೇಹಿತರೆ. ಇನ್ನು ಉದ್ದ ಇರುವ ಹುಡುಗಿಯರಿಗಿಂತ ಕುಳ್ಳಗಿರುವ ಹುಡುಗಿಯರ ತುಂಬಾ ವಾಸಿ ಅನ್ನುವುದು ಪರಿಣಿತರ ಅಭಿಪ್ರಾಯವಾಗಿದೆ. ಇನ್ನು ಕುಳ್ಳಗಿರುವ ಹುಡುಗಿಯರ ವಯಸ್ಸನ್ನ ಅಂದಾಜು ಮಾಡುವುದು…