inspirational

ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

33

ಮಯೂನ್ ಎನ್
ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು ಆಧುನಿಕ ವೈದ್ಯರು ಆರೋಪಣೆ ಮಾಡುತ್ತಿದ್ದಾರೆ.
ನಿವು ಸರಿಯಾಗಿ ಉಸಿರಾಡುತಿದ್ತ್ದೀರ? ಇದನ್ನು ತಿಳಿದುಕೊಳ್ಳಲು ಒಂದು ಸರಳ ವಿಧಾನ ಇದೆ. ನೀವು ಈಗ ಎಲ್ಲೇ ಇರಿ. ಏನೇ ಮಾಡುತ್ತಿರಿ. ಒಮ್ಮೆ ಆಳವಾಗಿ ಉಸಿರನ್ನು ಎಳೆದುಕೊಳ್ಳಿ. ನಿಮ್ಮ ಎದೆ ಹೊಟ್ಟೆಗಿಂತಾ ಹೆಚ್ಚು ಉಬ್ಬಿದ್ದರೆ. ನೀವು ತಪ್ಪುತಪ್ಪಾಗಿ ಉಸಿರಾಡುತಿದ್ದೀರಾ ಎಂದು ತಿಳಿಯಿರಿ. ಬದಲಿಗೆ ಹೊಟ್ಟೆಯೇ ಎದೆಗಿಂತಾ ಹೆಚ್ಚು ಉಬ್ಬಿದ್ದರೆ ನೀವು ಸರಿಯಾಗಿ ಉಸಿರಾಡುತಿದ್ದೀರಿ ಎಂದು ತಿಳಿಯಿರಿ.


ನಿಧಾನವಾಗಿ ಮತ್ತು ಆಳವಾಗಿ ಹೊಟ್ಟೆ ಉಬ್ಬಿ ಇಳಿಯುವಂತೆ ನಡೆಸುವ ಶ್ವಾಸೋಚ್ಛಾ ಸದಿಂದ ಅದ್ಭುತ ಲಾಭಗಳಿವೆ ಎಂದು ನಮ್ಮ ಪೂರ್ವಜರು ಹೇಳಿದ್ದಾರೆ. ಇದರ ಸತ್ಯಾಸತ್ಯತೆಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಿದ ಇಂದಿನ ವೈದ್ಯರೂ ಸಹ ದೀರ್ಘ ಶ್ವಾಸೋಚ್ಛಾ ಸವನ್ನು ಅನುಮೋಸಿದ್ದಾರೆ. ದೊಡ್ಡ ದೊಡ್ಡ ದೇಶದಲ್ಲಿನ ದೊಡ್ಡ ದೊಡ್ಡ ಆಸ್ಪತ್ರೆಂiಲ್ಲಿನ ವೈದ್ಯರು ಈಗ ತಮ್ಮ ಎಲ್ಲ ರೋಗಿಗಳಿಗೆ ದೀರ್ಘ ಶ್ವಾಸೋಚ್ಛಾ ಸದ ಮೂಲ ಪಾಠಗಳನ್ನು ಬೋಧಿಸಲು ಪ್ರಾರಂಭಿಸಿದ್ದಾರೆ. ನೆಗಡಿಯಿಂದ ಹಿಡಿದು ಕ್ಯಾನ್ಸರ್ ವರೆಗಿನ ಎಲ್ಲ ರೋಗಗಳ ಉಪಶಮನದಲ್ಲಿ ದೀರ್ಘಶ್ವಾಸೋಚ್ಛಾ ಸದಿಂದ ಪ್ರಯೋಜನಗಳಿವೆ ಇಂದು ವೈದ್ಯರು ಕಂಡುಕೊಂಡಿದ್ದಾರೆ. ಹೀಗಾಗಿ ಕೆಲ ವೈದ್ಯರಂತೂ ತಮ್ಮ ಪರಿಣಿತ ಚಿಕಿತ್ಸೆಯನ್ನು ಬದಿಗೊತ್ತಿ ರೋಗಿಗಳಿಗೆ ದೀರ್ಘಶ್ವಾಸೋಚ್ಛಾ ಸದ ಮಹತ್ತ್ವವನ್ನು ಒತ್ತಿ ಒತ್ತಿ ಹೇಳಲಾರಂಭಸಿದ್ದಾರೆ.
ನಿಜಕ್ಕೂ ನಾವೀಗ ಅವಸರ ಅವಸರವಾಗಿ ತಪ್ಪುತಪ್ಪಾಗಿ ಉಸಿರಾಡುತ್ತಿದ್ದೇವೆ . ನಮ್ಮಲ್ಲಿನ ಮಾನಸಿಕ ಒತ್ತಡ, ಆಂತಕ, ಉದ್ವೇಗ ಹಾಗೂ ಉಸಿರಾಟದ ಬಗ್ಗೆ ಗಮನಹರಿಸದಿರುವುದೇ ಇದಕ್ಕೆ ಕಾರಣವಾಗಿದೆ. ಉಸಿರಾಟ ಅನೈಶ್ಚಿಕವಾಗಿ ನಡೆಯುವ ಕ್ರಿಯೆಯಾದರೂ ಚಿತ್ತೈಕಾಗ್ರತೆ ಇಂದ ನಮ್ಮ ಉಸಿರಾಟವನ್ನು ಉತ್ಕರ್ಷಗೊಳಿಸಿಕೊಳ್ಳಬಹುದು.
ನಿಧಾನವಾಗಿ ಹೊಟ್ಟೆಹೆಚ್ಚು ಉಬ್ಬುವಂತೆ ಉಸಿರನ್ನು ಎಳೆದುಕೊಂಡಾಗ ವಾಯು ಶ್ವಾಸಕೋಶದ ತಳದಲ್ಲಿ ಹೆಚ್ಚಾಗಿ ಜಮಾಯಿಸುತ್ತದೆ. ಆಗ ದೇಹಕ್ಕೆ ಹೆಚ್ಚು ಆಮ್ಲಜನಕ ಸೇರಲು ಹಾಗೂ ದೇಹದಿಂದ ಇಂಗಾಲ ಮುಂತಾದ ಕಲ್ಮಷ ಸಂಪೂರ್ಣವಾಗಿ ಹೊರಹೋಗಲು ಹೆಚ್ಚು ಅವಕಾಶ ದೊರೆಯ್ತುತದೆ. ಉತ್ತಮ ವಾಯುವಿನಿಮಯದಿಂದ ದೇಹದ ಆರೋಗ್ಯ ಉತ್ತಮಗೊಳ್ಳುತ್ತದೆ. ಉಸಿರಾಟದ ಗತಿ ನಿಮಿಷಕ್ಕೆ ಏಳು ಅಥವಾ ಎಂಟಕ್ಕೆ ಇಳಿಯುತ್ತದೆ. ಈ ಎಲ್ಲ ವಿದ್ಯಮಾನಗಳಿಂದ ಆರೋಗ್ಯದೊಂದಿಗೆ ಆಯುಷ್ಯವೂ ಹೆಚ್ಚುತ್ತದೆ. ಈಗಾಗಲೇ ರುಜುವಾತು ಆಗಿರುವಂತೆ ದೀರ್ಘಶ್ವಾಸೋಚ್ಛಾ ಸದಿಂದ ರಕ್ತದೊತ್ತಡ ತಗ್ಗುತ್ತದೆ. ಹೃದಯ ಬಡಿತ ಕಡಿಮೆಯಾಗುತ್ತದೆ. ದೇಹದ ಮಾಂಸಖಂಡಗಳು ಸಡಿಲಗೊಂಡು ವಿಶ್ರಾಂತಿ ಪಡೆಯುತ್ತವೆ. ಮಾನಸಿಕ ಉದ್ವೇಗ ತಗ್ಗತ್ತದೆ. ಮನಸ್ಸು ಪ್ರಶಾಂತವಾಗುತ್ತದೆ. ಮಾನವನು ಪ್ರತಿ ನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾ ಸರಾಸರಿ ಅರವತ್ತು ವರ್ಷಮಾತ್ರ ಬದುಕುತಿದ್ದಾನೆ. ಅದೇ ಆಮೆಯನ್ನು ನೋಡಿ ಅದು ನಿಮಿಷಕ್ಕೆ ಕೇವಲ ಮೂರ್‍ನಾಲ್ಕು ಬಾರಿ ಉಸಿರಾಡುತ್ತಾ ಬಹುದೀರ್ಘಕಾಲ ಬದುಕುತ್ತದೆ. ಚಿಕ್ಕ ಮಗುವನ್ನು ನೋಡಿ, ಅದು ಮಲಗಿದ್ದಾಗ ದೀರ್ಘವಾಗಿ ಉಸಿರಾಡುತ್ತಾ ಹೊಟ್ಟೆಯನ್ನು ಬಲೂನಿನಂತೆ ಉಬ್ಬಿಸುತ್ತದೆ. ಹೀಗಾಗಿ ನಾವೆಲ್ಲಾ ಮಕ್ಕಳಂತೆ ಉಸಿರಾಡಬೇಕು ಎನ್ನುತ್ತಾರೆ ತಜ್ಞ ವೈದ್ಯರು ಉಸಿರಾಟಂದ ಉತ್ತಮ ಪ್ರಯೋಜನಗಳನ್ನು ಪಡೆಯಲು ನಾವು ದೀರ್ಘವಾಗಿ ಹೊಟ್ಟೆ ಉಬ್ಬುವಂತೆ ಉಸಿರಾಡುವ ಕಲೆಯನ್ನು ಕರಗತಮಾಡಿಕೊಳ್ಳಬೇಕು. ಆರಂಭದಲ್ಲಿ ನಾವು ಪ್ರತಿದಿನ ಹತ್ತಿಪ್ಪತ್ತು ನಿಮಿಷ ನಮ್ಮ ಗಮನವನ್ನು ಉಸಿರಾಟದ ಮೇಲೆ ಹರಿಸಿ, ಚಿತ್ತೈಕಾಗ್ರತೆ ಇಂದ ಉಸಿರಾಟದಲ್ಲಿ ಸಾಕಷ್ಟು ಸುಧಾರಣಿಗಳನ್ನು ತಂದುಕೊಳ್ಳಬಹುದು. ಬೆನ್ನಮೇಲೆ ಮಲಗಿ ಹೊಟ್ಟೆ ಮೇಲೆ ಪುಸ್ತಕ ಇರಿಸಿ ಈ ಅಭ್ಯಾಸ ಮಾಡಬಹುದು. ಇಲ್ಲವೆ, ಕುಳಿತುಕೊಂಡು ಒಂದು ಕೈಯನ್ನು ಹೊಟ್ಟೆ ಮೇಲೆ, ಮತ್ತೊಂದು ಕೈಯನ್ನು ಎದೆ ಮೇಲೇ ಇರಿಸಿ ಅಭ್ಯಸಿಸಬಹುದು. ಪ್ರಾರಂಭದಲ್ಲಿ ನಮಗೆ ಕಾಣುವಂತೆ ಒಂದು ಗಡಿಯಾರವನ್ನು ಇರಿಸಿಕೊಳ್ಳುವುದು ಒಳ್ಳೆಯದು.

ಪ್ರ್ರಶಾಂತವಾದ, ಏಕಾಂತ ಸ್ಥಳವನ್ನು ಆಯ್ದುಕೊಳ್ಳಿ. ನಿಮ್ಮ ಕಣ್ಣಿಗೆ ಕಾಣುವಂತೆ ಸೆಕೆಂಡು ಮುಳ್ಳು ಇರುವ ಗಡಿಯಾರವನ್ನು ಇಟ್ಟುಕೊಳ್ಳಿ. ನಿಮ್ಮ ಉಡುಪು ಸಡಿಲವಾಗಿರಲಿ.
ಬೆನ್ನಮೇಲೆ ಮಲಗಿಕೊಳ್ಳಿ. ಹುಟ್ಟೆಮೇಲೆ ಹಗುರಾದ ಪುಸ್ತಕ ಇರಿಸಿ. ಚಿತ್ತೈಕಾಗ್ರತೆ ಇಂದ ನಿಧಾನವಾಗಿ ಆಳವಾದ ಉಸಿರನ್ನು ಎಳೆದುಕೊಳ್ಳಿ. ಹೊಟ್ಟೆ ಎದೆ ಉಸಿರಿನಿಂದ ತುಂಬಿದ ಅನಂತರ ಒಂದೆರಡು ಕ್ಷಣ ಉಸಿರನ್ನು ಹಾಗೇ ಹಿಡಿದುಕೊಳ್ಳಿ. ಅನಂತರ ನಿಧಾನ ನಿಧಾನವಾಗಿ ಉಸಿರನ್ನು ಹೊರಬಿಡಿ. ಉಸಿರಾಟದುದ್ದಕ್ಕೂ ಹೊಟ್ಟೆಯ ಮೇಲಿನ ಪಸ್ತಕ ಏರಿಳಿಯುವುದನ್ನು ಗಮನಿಸಿ.

ಆರಾಮವಾಗಿ ಕುಳಿತುಕೊಳ್ಳಿ. ಬಲಗೈಯನ್ನು ಹೊಟ್ಟೆಯ ಮೇಲಿಡಿ. ಎಡಗೈಯನ್ನು ಎದೆಯ ಮೇಲಿಡಿ. ಮೇಲಿನಂತೆ ನಿಧಾನವಾ ಆಳವಾಗಿ ಉಸಿರಾಡಿ. ಎಡಗೈ ನಿಶ್ಚಲವಾಗಿ, ಬಲಗೈ ಏರಿಳಿಯುತ್ತಿರುವುದನ್ನು ಗಮನಿಸಿ.
ಗಡಿಯಾರದಲ್ಲಿ ನಿಮ್ಮ ಶ್ವಾಸೋಚ್ಛಾ ಸದ ಗತಿಯನ್ನು ಲೆಕ್ಕ ಹಾಕಿ. ನಿಮ್ಮ ಉಸಿರಾಟ ನಿಮಿಷಕ್ಕೆ ಏಳು ಅಥವಾ ಎಂಟು ಬಾರಿ ಇರಬೇಕು.
ದೀರ್ಘಶ್ವಾಸೋಚ್ಛಾ ಸದ ಪ್ರಯೋಜನಗಳು:
ದೇಹಕ್ಕೆ ಅಧಿಕ ಆಮ್ಲಜನಕ ದೊರೆಯುತ್ತದೆ.
ದೇಹದ ಕಲ್ಮಶ (ಇಂಗಾಲ) ಸಂಪೂರ್ಣವಾಗಿ ವಿಸರ್ಜನೆಯಾಗುತ್ತದೆ.
ಹೃದಯದ ಮಿಡಿತ ಕಡಿಮೆಯಾಗುತ್ತದೆ. ಹೃದಯ ಗಟ್ಟಿಯಾಗುತ್ತದೆ.
ರಕ್ತದೊತ್ತಡ (ಬಿ. ಪಿ.) ಕಡಿಮೆಯಗುತ್ತದೆ.
ಮಾಂಸಖಂಡಗಳಿಗೆ ಸಡಿಲಗೊಂಡು ವಿರಮಿಸುವ ಅವಕಾಶ ಸಿಗುತ್ತದೆ.
ಮಾನಸಿಕ ಉದ್ವೇಗ, ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.
ಮನಸ್ಸು ಉಲ್ಲಾಸಗೊಳ್ಳುತ್ತದೆ, ಪ್ರಶಾಂತಗೊಳ್ಳುತ್ತದೆ.
ಆರೋಗ್ಯ ಉತ್ತಮವಾಗುತ್ತದೆ. ಆಯಷ್ಸು ಹೆಚ್ಚುತ್ತದೆ.

ವಿಳಾಸ: MAYOON N

DIRECTOR OF DRM CAREER BUILD CENTER

MANNAGER @ JEEVA SANJEEVANA NATURAL LIFE, KOLAR – 563101, ಕರ್ನಾಟಕ, ಭಾರತ.

About the author / 

DRM

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ಉಗರು ಕಚ್ಚೋ ಅಭ್ಯಾಸದಿಂದ ಆಗೋ ಪರಿಣಾಮಗಳ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಒಬ್ಬೊಬ್ಬರಿಗೆ ಒಂದೊಂದು ರೀತಿಯ ದುಶ್ಚಟವಿರುವುದು ಸಾಮಾನ್ಯ. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದನ್ನು ಬಿಡಬೇಕೆಂದರೂ ಸಾಧ್ಯವಾಗುವುದಿಲ್ಲ. ಸಣ್ಣವರಿದ್ದಾಗ, ಅಷ್ಟೇ ಏಕೆ ದೊಡ್ಡವರೂ ಕೂಡ ಆಗಾಗ ಉಗುರು ಕಚ್ಚುವುದನ್ನು ನೋಡಿರುತ್ತೇವೆ. ಒತ್ತಡದಲ್ಲಿ ಅಥವಾ ಕೆಲವೊಮ್ಮೆ ಅದನ್ನೇ ರೂಢಿ ಮಾಡಿಕೊಂಡವರು ಉಗುರು ಕಚ್ಚುತ್ತಾರೆ. ಹೀಗೆ ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿರುತ್ತಾರೆ ಎಂದು ವರದಿಯೊಂದು ಹೇಳಿದೆ. ಉಗುರು ಕಚ್ಚುವುದು, ತಲೆ ಕೆರೆದುಕೊಳ್ಳುವುದು, ಬೆರಳ ತುದಿಯ ಚರ್ಮ ಕಡಿಯುವುದು ಮೊದಲಾದ ಸ್ವಭಾವ ಹೊಂದಿದ್ದ ಹಾಗೂ ಹೊಂದಿರದವರನ್ನು ಅಧ್ಯಯನಕ್ಕೆ…

  • ಸುದ್ದಿ

    ಪ್ರೇಯಸಿಯೊಂದಿಗೆ ಪತ್ನಿಯನ್ನೂ ಮರುಮದ್ವೆಯಾದ ಸಿಆರ್‌ಪಿಎಫ್ ಯೋಧ…ಕಾರಣ?

    ರಾಯ್ಪುರ್: ಸಿಆರ್‌ಪಿಎಫ್ ಯೋಧನೊಬ್ಬ ಪ್ರೇಯಸಿ ಮತ್ತು ಪತ್ನಿಯನ್ನು ಮರು ವಿವಾಹವಾಗುವ ಮೂಲಕ ಇಬ್ಬರನ್ನೂ ಏಕಕಾಲಕ್ಕೆ ಮದುವೆಯಾಗಿರುವ ಅಪರೂಪದ ಘಟನೆ ಛತ್ತೀಸ್‍ಗಢದ ಜಾಷ್ಪುರ್ ಜಿಲ್ಲೆಯ ಬಗ್ದೋಲ್ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಜಾಷ್ಪುರ್ ಮೂಲದ ಅನಿಲ್ ಪೈಕ್ರಾ ಇಬ್ಬರು ಮಹಿಳೆಯರನ್ನು ಮದುವೆಯಾದ ಸಿಆರ್‌ಪಿಎಫ್ ಯೋಧ. ಇವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿಆರ್‌ಪಿಎಫ್ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನಿಲ್ ಪೈಕ್ರಾ ನಾಲ್ಕು ವರ್ಷಗಳ ಹಿಂದೆ ತಮ್ಮ ಗ್ರಾಮದ ಪಕ್ಕದ ಗ್ರಾಮದ ಯುವತಿ ಜೊತೆ ಮದುವೆಯಾಗಿದ್ದರು. ಮದುವೆಯಾಗಿದ್ದರೂ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು…

  • corona

    ಕೋಲಾರ ಜಿಲ್ಲೆ ಯಲ್ಲಿ ಕೊರೋನ ಹೆಚ್ಚಳ

    ಕೊರೋನ ದೇಶದಲ್ಲಿ ರಾಜ್ಯದಲ್ಲಿ ಹೆಚ್ಚಳದಿಂದಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕದ ಆರೋಗ್ಯ ಸಚಿವ ಸುಧಾಕರ್ ಅವರು ತಿಳಿಸಿದ್ದಾರೆ. ಸಕ್ರೀಯ ಪ್ರಕರಣಗಳು ಹೆಚ್ಚುತ್ತಿವೆ.ದಿನದಿಂದ ದಿನಕ್ಕೆ ಸರಾಸರಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ರಾಜ್ಯವ್ಯಾಪಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ.ಆದರಂತೆ ಜಿಲ್ಲಾವಾರು ಪ್ರಕರಣಗಳು ಹೆಚ್ಚುತ್ತಿವೆ.ಕೋಲಾರ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣ ಏರುಮುಖವಾಗಿದೆ.ಇಪ್ಪತ್ತರ ಆಸುಪಾಸಿನಲ್ಲಿದ್ದ ಪ್ರಕರಣಗಳು ಈಗ 75 ಸಕ್ರಿಯ ಪ್ರಕರಣ ದಾಖಲಾಗಿದೆ. ತಾಲ್ಲೂಕುವಾರು ಸಕ್ರಿಯ ಪ್ರಕರಣಗಳು ಇಂತಿದೆ. ಕೋಲಾರ 5, ಮಾಲೂರು 13, ಬಂಗಾರಪೇಟೆ 13, ಕೆಜಿಎಫ್…

    Loading

  • ಸುದ್ದಿ

    ನೀವು ಹುಟ್ಟಿದ ದಿನಾಂಕವನ್ನು ಬಳಸಿ ನೀವು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಆಗುವಿರಾ ಎಂದು ತಿಳಿಯಲು ಇದನ್ನು ಓದಿ…!

     ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡು ಹಿಡಿಯಬಹುದು ವ್ಯಕ್ತಿಗಳ ಜನ್ಮ ದಿನಾಂಕ ಆಧರಿಸಿ ಅವರು ಲವ್ ಮ್ಯಾರೇಜ್ ಆಗುತ್ತರಾ ಅಥವಾ ಅರೇಂಜ್ ಮ್ಯಾರೇಜ್ ಆಗುತ್ತಾರೆ ಎನ್ನುವುದನ್ನು ತಿಳಿಯಬಹುದು. ಸಂಖ್ಯೆ 1. ಒಂದನೇ ಸಂಖ್ಯೆಯನ್ನು ಸೂರ್ಯ ಎಂದು ಹೇಳಲಾಗುತ್ತದೆ. ಒಂದು ನಂಬರ್ ಅವರು ತುಂಬಾ ನಾಚಿಕೆ ಸ್ವಭಾವದವರು ಆಗಿರುತ್ತಾರೆ ಇವರು ಯಾವತ್ತೂ ಪ್ರೀತಿಯನ್ನು ತಿಳಿಸುವುದಿಲ್ಲ ಇದರಿಂದಾಗಿ ಪ್ರೇಮ ವಿವಾಹದಿಂದ ಇವರು ದೂರ ಇರುತ್ತಾರೆ. ಸಂಖ್ಯೆ 2. ಸಂಖ್ಯೆ 2…

  • ಆರೋಗ್ಯ

    ನೀವು ಬ್ರೇಕ್‌ಫಾಸ್ಟ್ ತಪ್ಪಿಸಿದರೆ ಈ ಗಂಭೀರ ಆರೋಗ್ಯ ಸಮಸ್ಯ ನಿಮಗೆ ಗ್ಯಾರೆಂಟಿ..!ತಿಳಿಯಲು ಈ ಲೇಖನ ಓದಿ..

    ಬೆಳಗಿನ ತಿಂಡಿಯನ್ನು ತಿನ್ನಲೂ ಹೆಚ್ಚಿನವರಿಗೆ ಪುರಸೊತ್ತು ಇರುವುದಿಲ್ಲ. ಹೆಚ್ಚಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ

  • ಆರೋಗ್ಯ, ತಂತ್ರಜ್ಞಾನ

    ಜಗತ್ತಿನಲ್ಲೇ ಮೊದಲ ಬಾರಿ ‘ಡಿಜಿಟಲ್ ಮಾತ್ರೆ’ ನೀಡಲು ಮುಂದಾದ ದೇಶ ಯಾವುದು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಮಾನವನ ದೇಹದೊಳಗೆ ಪ್ರವೇಶಿಸಿದ ಮಾತ್ರೆಯು ಅಲ್ಲಿ ತಾನು ನಡೆಯುವ ಕ್ರಿಯೆಗಳನ್ನು ವೈದ್ಯನಿಗೆ ಕಳುಹಿಸಿಕೊಡುವ ವಿಶಿಷ್ಟ ತಂತ್ರಜ್ಞಾನದ ಡಿಜಿಟಲ್ ಮಾತ್ರೆಗೆ ಅಮೆರಿಕ ಅನುಮತಿ ನೀಡಿದೆ.! ವಿಶ್ವದಲ್ಲಿಯೇ ಇಂತಹದೊಂದು ಡಿಜಿಟಲ್ ಮಾತ್ರೆ ಇದೀಗ ಜನ ಬಳಕೆಗೆ ಬಂದಿದ್ದು, ಇದು ಎಲ್ಲರಿಗೂ ಆಶ್ಚರ್ಯವಾಗಿದೆ.!