ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ ಎಂಬ ಮಾಹಿತಿಯನ್ನು ಮುಂದೆ ಓದಿ….
*ದುಬಾರಿಯಾಗಲಿರುವ ಸೇವೆಗಳು:-
ನೋಟ್ ಬ್ಯಾನ್ ಆದ ನಂತರ ಬ್ಯಾಂಕ್ ವ್ಯವಹಾರಗಳ ಮತ್ತು , ಎಟಿಎಂ ನಿಂದ ಹಣ ತೆಗೆಯುವವರ ಮೇಲೆ ಲಿಮಿಟ್ ಹೇರಿದ್ದ ಬ್ಯಾಂಕ್ಗಳು ಈಗ ಜಿಎಸ್ಟಿ ತೆರಿಗೆ ಹೆಸರಲ್ಲಿ ಹೆಚ್ಚುವರಿ ಸೇವಾ ತೆರಿಗೆ ವಿಧಿಸಲು ಮುಂದಾಗಿವೆ.
ಬ್ಯಾಂಕ್ ನ ಯಾವ ಯಾವ ಸೇವೆಗಳು ದುಬಾರಿ?
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಿರ್ವಹಣೆಗೆ ಸೇವಾ ತೆರಿಗೆ ಹೆಚ್ಚಳವಾಗಲಿದೆ. ಜೊತೆಗೆ 4 ಬಾರಿ ಎಟಿಎಂ ವಿತ್ಡ್ರಾ ಲಿಮಿಟ್ ಮುಗಿದ್ಮೇಲೆ,ಮಾಡುವೆ ಪ್ರತಿ ವಿತ್ಡ್ರಾಗೂ ಶುಲ್ಕ ಕಟ್ಟಬೇಕು. ಪೆಟ್ರೋಲ್ ಹಾಕಿಸಿದ್ರೆ, ಶಾಪಿಂಗ್, ಹೋಟೆಲ್ನಲ್ಲಿ ಕಾರ್ಡ್ ಉಜ್ಜಿದ್ರೂ ಸರ್ವಿಸ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.
ನಿಮ್ಮ ವಿಮೆ(ಇನ್ಸುರೆನ್ಸೆ)ಮೇಲೆ ಜಿಎಸ್ಟಿ ಪ್ರಭಾವ
ನೀವು ವಿಮೆ(ಇನ್ಸುರೆನ್ಸೆ) ಮಾಡಿಸಿದ್ರೆ ಪ್ರತಿ ಕಂತಿನ ಮೇಲೆ ಸೇವಾ ತೆರಿಗೆ ಹಾಗೂ ಇನ್ಶುರೆನ್ಸ್ ಚೆಕ್ ರೂಪದಲ್ಲಿ, ನಗದು ರೂಪದಲ್ಲಿ ಹಣ ಕಟ್ಟಿದ್ರೂ ಸೇವಾ ತೆರಿಗೆ ಹೆಚ್ಚಳವಾಗಲಿದೆ.
ರೈತರನ್ನು ಬಿಡದ ಜಿಎಸ್ಟಿ:-
ಅನ್ನದಾತ ರೈತರು ವ್ಯವಸಾಯಕ್ಕಾಗಿ ಬಳಸುವ ರಾಸಾಯನಿಕ ಗೊಬ್ಬರ, ಯಂತ್ರಗಳ ಮೇಲೂ ಜಿಎಸ್ಟಿ ತೆರಿಗೆ ಬೀಳಲಿದೆ. ಹೊಸ ಟ್ರ್ಯಾಕ್ಟರ್ ಮತ್ತು ಬಿಡಿಭಾಗಗಳು ಖರೀದಿಗೂ ತೆರಿಗೆ ಹೊರೆ ಬೀಳಲಿದೆ. ಬೆಳೆಗಳಿಗೆ ಬಳಸುವ ಕ್ರಿಮಿನಾಶಕಗಳ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ತೆರಿಗೆ ಹೊರೆ ಬೀಳಲಿದೆ.
ಆಭರಣ ಪ್ರಿಯರಿಗೆ ತೆರಿಗೆ :-
ಆಭರಣ ಪ್ರಿಯರು ಇನ್ಮುಂದೆ ಸ್ವಲ್ಪ ಯೋಚನೆ ಮಾಡಿ ಚಿನ್ನ ಕೊಳ್ಳಬೇಕಾಗಬಹುದು. ಏಕೆಂದರೆ ಚಿನ್ನದ ಮೇಲೆ ಮತ್ತು ಮೇಕಿಂಗ್ ಮೇಲೆ ತೆರಿಗೆ ಬೀಳಲಿದೆ. ಬೆಳ್ಳಿ ಮೇಲೆಯೂ ಜಿಎಸ್ಟಿ ತೆರಿಗೆ ಬೀಳಲಿದೆ.
ಮಹಿಳೆಯರ ಇನ್ಮುಂದೆ ಮೇಕಪ್ ಮಾಡಕ್ಕೂ ಮುಂಚೆ ಯೋಚನೆ ಮಾಡಿ:-
ಮಹಿಳೆಯರ ಮೇಕಪ್ ಐಟಮ್ಸ್, ಬ್ಯೂಟಿ ಪಾರ್ಲರ್ ಸೇವೆಗಳು ದುಬಾರಿಯಾಗಲಿವೆ. ಮೆನಿಕ್ಯೂರ್, ಪೆಡಿಕ್ಯೂರ್, ಸುಗಂಧ ದ್ರವ್ಯಗಳ, ಮೇಕಪ್ ಸಾಧನಗಳ, ಸ್ಕಿನ್ ಕೇರ್ ಸನ್ಸ್ಕ್ರೀನ್ ಮೇಲೆ ಜಿಎಸ್ಟಿ ಬೀಳಲಿದೆ. ಇನ್ನು ಲೆದರ್ ಬ್ಯಾಗ್ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ಸ್ ಮೇಲೆ ಕೂಡ ಜಿಎಸ್ಟಿ ತೆರಿಗೆ ಹೆಚ್ಚಲಿದೆ.
ಜಿಎಸ್ಟಿಯಿಂದ ವಿನಾಯಿತಿ ಪಡೆಯಲಿರುವ ವಸ್ತುಗಳು ಯಾವುವು ಗೊತ್ತಾ…
ಮಹಿಳೆಯರ ಬಳೆ, ಕುಂಕುಮ ಹಾಗೂ ಬಿಂದಿಗೆ ಜಿಎಸ್ಟಿ ತೆರಿಗೆಯಿಂದ ವಿನಾಯಿತಿ ಸಿಕ್ಕಿದೆ.
ಕುಡುಕರ ನಶೆ ಇಳಿಸಲಿರುವ ಜಿಎಸ್ಟಿ..
ತುರಾಡೋ ಕುಡುಕರಿಗೆ ಶಾಕ್ ಕೊಡಲಿರುವ ಜಿಎಸ್ಟಿ ಜಾರಿಯಾದ್ಮೇಲೆ ಮದ್ಯ ತಯಾರಿಸೋ ಕಂಪನಿಗಳಿಗೆ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಇದನ್ನ ಸರ್ವೀಸ್ ಟ್ಯಾಕ್ಸ್ ಹೆಸರಲ್ಲಿ ವಸೂಲಿ ಮಾಡಲು ಕಂಪನಿಗಳು ನಿರ್ಧರಿಸಿವೆ. ಮದ್ಯ ತಯಾರಿಕಾ ಕಂಪನಿಗಳ ಪ್ರಕಾರ ಉತ್ಪಾದನಾ ತೆರಿಗೆ ಹೆಚ್ಚಾಗಲಿದ್ದು, ಈ ಹೊರೆಯನ್ನ ತಪ್ಪಿಸಲು ರಮ್, ಜಿನ್ನು, ವೈನ್, ಬಿಯರ್, ವಿಸ್ಕಿ ದರ ಹೆಚ್ಚಿಸಿ ಅದನ್ನ ಸೇವಾದರ ಹೆಸರಲ್ಲಿ ಗ್ರಾಹಕರಿಂದಲೇ ವಸೂಲಿ ಮಾಡಲು ಕಂಪನಿಗಳು ತೀರ್ಮಾನಿಸಿವೆ.
ನಟ ನಟಿಯರ ಮೇಲೆ ಜಿಎಸ್ಟಿ ತೆರಿಗೆ
ಜಿಎಸ್ಟಿ ಯಿಂದ 20 ಲಕ್ಷಕ್ಕೂ ಅಧಿಕ ಸಂಭಾವನೆ ಪಡೆಯುವ ನಟ ನಟಿಯರಿಗೂ ಬಿಸಿ ತಟ್ಟಲಿದೆ. ನಟ ನಟಿಯರ ಸಂಭಾವನೆ ಮೇಲಿನ ತೆರಿಗೆ ಹೆಚ್ಚಳವಾಗಿದೆ.
ಆನ್ಲೈನ್ ಬುಕ್ಕಿಂಗ್ ಮತ್ತು ವ್ಯವಹಾರದ ಮೇಲೆ ಜಿಎಸ್ಟಿ ಬರೆ
ಜುಲೈ 1 ರಾ ನಂತರ ಆನ್ಲೈನ್ ವ್ಯವಹಾರದ ಮೇಲೆ 1% ತೆರಿಗೆ ನಿಗದಿಯಾಗಿದೆ. ನಷ್ಟ ಸರಿದೂಗಿಸಲು ಆನ್ಲೈನ್ ಬುಕಿಂಗ್ ಕಂಪನಿಗಳ ವಸ್ತುಗಳ ಮೇಲಿನ ಬೆಲೆ ಏರಿಕೆಯಾಗಲಿದೆ.
ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್:-
ಜುಲೈ 1ರಿಂದ ದೇಶಾದ್ಯಂತ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ಜಾರಿಯಾಗ್ತಿದ್ದು, ಎಲ್ಲಾ ವಸ್ತುಗಳು ಒಂದೇ ತೆರಿಗೆ ವ್ಯಾಪ್ತಿಗೆ ಬರಲಿವೆ. ಇದ್ರಿಂದ ಮನೆ ಖರೀದಿ ಕಡಿಮೆಯಾಗಲಿದೆ ಎನ್ನಲಾಗಿದೆ.
ಕನಸಿನ ಮನೆ ನಿರ್ಮಾಣ ಕಷ್ಟ :-
ಕಟ್ಟಡಕ್ಕೆ ಬಳಸುವ ವಸ್ತುಗಳ ಬೆಲೆ ಹೆಚ್ಚಾಗಲಿದ್ದು, ಕಟ್ಟಡ ರಿಪೇರಿಗಾಗಿ ಪಡೆಯುವ ಸಾಲದ ಮೇಲೆ ಸಹ ಜಿಎಸ್ಟಿ ತೆರಿಗೆ ಬೀಳಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಬುಧವಾರ, 18/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಮೇಷ:- ಹಣಕಾಸಿನ ಹರಿವಿಗೆ ಇದ್ದ ತೊಂದರೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ವಾಕ್ ಚಾತುರ್ಯದಿಂದ ನಿಮ್ಮ…
ಸ್ನಾನ ಮಾಡುವ ವಿಷಯಕ್ಕೆ ಬಂದ್ರೆ ಕೆಲವರು ದಿನಾ ಮತ್ತೆ ಕೆಲವರು ಅವರವರ ಅನುಕೂಲಕ್ಕೆ ತಕ್ಕಂತೆ ಸ್ನಾನ ಮಾಡುತ್ತಾರೆ. ಆದರೆ ನಮಗೆ ಕೆಲಸಗಲಿರಲಿ ಬೇರೆ ಏನಾದ್ರೂ ಇರಲಿ ಪ್ರತಿನಿತ್ಯ ಸ್ನಾನ ಮಾಡುವುದು ಒಳಿತು.
ಪೆಟ್ರೋಲ್ ಬೆಲೆ 2014ರ ನಂತರ ಭಾರೀ ಏರಿಕೆಯಾಗಿದೆ. ಜುಲೈ ತಿಂಗಳಿನಿಂದ ದೇಶದಾದ್ಯಂತ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ಗಳನ್ನು ತಂದರೆ ಇವುಗಳ ಬೆಲೆ ಅರ್ಧದಷ್ಟು ಅಗ್ಗವಾಗಲಿದೆ ಎಂದು ದತ್ತಾಂಶಗಳನ್ನು ವಿಶ್ಲೇಷಿಸುವ ಫ್ಯಾಕ್ಟಲಿಡಾಟ್ಇನ್ (Factly.in) ಅಂತರ್ಜಾಲ ತಾಣವು ಅಭಿಪ್ರಾಯಪಟ್ಟಿದೆ.
ಅವಕಾಡೊ ಹಣ್ಣು ಎಲ್ಲರಿಗೂ ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಹೆಸರಿನಲ್ಲಿ ಚಿರಪರಿಚಿತ. ಭಾರತದಲ್ಲಿ ಈ ಹಣ್ಣನ್ನು ಶ್ರೀಲಂಕಾದಿಂದ ಪರಿಚಯಿಸಲ್ಪಟ್ಟಿತು ಎನ್ನಲಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಬಟರ್ ಫ್ರೂಟ್ನ್ನು ಬೆಳೆಯಲಾಗುತ್ತದೆ. ತನ್ನ ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಂತೆಯೇ ಇದೆ. ಇದನ್ನು ಹಾಗೆ ತಿನ್ನಲು ತುಂಬಾ ರುಚಿಕರ ದೇ ರೀತಿಯಾಗಿ ಇದನ್ನು ಹಲವಾರು ಖಾದ್ಯಗಳಲ್ಲೂ ಬಳಕೆ ಮಾಡಲಾಗುತ್ತದೆ. ಬೇರೆಲ್ಲಾ ಹಣ್ಣಿಗಿಂತಲೂ ಅವಕಾಡೊ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಯಾಕೆಂದರೆ…
ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಭಾರತದ ಅನೇಕ ನಾಯಕಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಅವರೊಂದಿಗೆ ಮೂವಿ ಮಾಡಿಲ್ಲ. ಯಾಕೆ? ಇತ್ತೀಚೆಗೆ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆಗ ಅವರನ್ನು ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂದು ಪ್ರಶ್ನಿಸಲಾಗಿತ್ತು. ಆಗ ಸಲ್ಮಾನ್, ಹೌದು, ನನಗೂ ನಿಜಕ್ಕೂ ಅಚ್ಚರಿ ಆಗುತ್ತಿದೆ.. ನಾನು ದೀಪಿಕಾ ಜೊತೆ ಯಾವಾಗ ಸಿನಿಮಾ ಮಾಡುತ್ತೇನೆ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ ದೀಪಿಕಾ ಜೊತೆ ನಟಿಸಲು ಇದುವರೆಗೂ ನನಗೆ…
ಈ ಮಹಿಳೆ ಈ ಕೆಲಸ ಮಾಡಲು ಕಾರಣ ತಿಳಿದು ಪ್ರತಿಯೊಬ್ಬರು ಕೂಡ ಶಾಕ್ ಆದರು. ಇಷ್ಟೊಂದು ಈಕೆ ಫೇಮಸ್ ಆಗಲು ಕಾರಣವಾದರೂ ಏನು? ಈ ಸುದ್ದಿ ಬಂದಿದ್ದು ಅಹಮದಾಬಾದ್ನಿಂದ. 35 ವರ್ಷದ ಅಂಕಿತ ಆಟೋ ಓಡಿಸುತ್ತಾ ಇದ್ದಾಳೆ. ಈಕೆ ಆಟೋ ಓಡಿಸಲು ಕಾರಣ ಅವರ ತಂದೆ. ಅವರ ತಂದೆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಅವರಿಗೆ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆ ಬಂದ ಕಾರಣ ಅಂಕಿತಾಳೇ ಮನೆಯ ಎಲ್ಲಾ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ…