ಸುದ್ದಿ

ಜಗತ್ತನ್ನ ಆಳಲು ಸಿದ್ದವಾಗಿವೆ ಟೆಕ್ನಾಲಜಿ ಕಂಪನಿಗಳು…!

34

ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ ಕಪ್ಪು ಪರದೆ ಕಂಡರೆ ..? ಫೇಸ್ ಬುಕ್, ಟ್ವಿಟ್ಟರ್, ಅಮೆಜಾನ್ ಮತ್ತು ಮೈಕ್ರೋ ಸಾಫ್ಟ್ ಯಾವುದೂ ಇಲ್ಲದ ಜಗತ್ತನ್ನ ಊಹಿಸಿಕೊಳ್ಳಿ…. ಇದು ನಿಜ ಜೀವನದಲ್ಲಿ ಆಗಿಬಿಟ್ಟರೆ? ಜಗತ್ತು ಎಂತಹ ಪ್ಯಾನಿಕ್ ಗೆ ಒಳಗಾಗಬಹದು?

http://www.dreamstime.com/royalty-free-stock-images-top-computer-companies-world-kiev-ukraine-may-logotype-collection-well-known-technologies-monitor-screen-image41023829

ಗಮನಿಸಿ ನೋಡಿ ಇಂದು ಜಗತ್ತನ್ನ ಆಳುತ್ತಿರುವುದು ಟೆಕ್ನಾಲಜಿ ಕಂಪನಿಗಳು. ಮೊದಲೇ ಹೇಳಿದಂತೆ 2007 ರ ವರೆಗೆ ಜಗತ್ತನ್ನ ಆಳುತ್ತಿದ್ದದ್ದು ಬ್ಯಾಂಕಿಂಗ್ ವ್ಯವಸ್ಥೆ . ಇದೀಗ ಇದು ಟೆಕ್ನಾಲಜಿ ಕಂಪನಿಗಳ ಕೈ ಸೇರಿದೆ . ಜಗತ್ತು ಹೆಚ್ಚೆಚ್ಚು ನಗದನ್ನ ತೊರೆದು ಡಿಜಿಟಲ್ ಹಣವನ್ನ ಅಪ್ಪುವುದಕ್ಕೆ ಶುರು ಮಾಡಿದೆ. ಹಾಗಾಗಿ ಟೆಕ್ನಾಲಜಿ ಕಂಪನಿಗಳು ಹಣಕಾಸು ವಹಿವಾಟಿನ ಮೇಲೆ ತಮ್ಮ ಪ್ರಭಾವವನ್ನ ಹೆಚ್ಚು ಮಾಡಿಕೊಂಡಿವೆ. ಇಂದು ಜಗತ್ತನ್ನ ಆಳುತ್ತಿರುವ ಪ್ರಮುಖ ಟೆಕ್ನಾಲಜಿ ಕಂಪೆನಿಗಳಲ್ಲಿ ಐದು ಅತ್ಯಂತ ಪ್ರಮುಖವಾದವು. ಅವೆಂದರೆ 1.ಗೂಗಲ್ 2.ಆಪಲ್ 3.ಮೈಕ್ರೋಸಾಫ್ಟ್ 4. ಅಮೆಜಾನ್ 5.ಫೇಸ್ಬುಕ್.ಇಷ್ಟಕ್ಕೂ ನಮಗೇಕೆ ಬ್ಯಾಂಕ್ಗಳ ಮೇಲೆ ಅಷ್ಟೊಂದು ವ್ಯಾಮೋಹ ? ಬ್ಯಾಂಕ್ ಏನು ಬದಲಿಸಲಾಗದ ಶಾಶ್ವತ ವ್ಯವಸ್ಥೆಯೇನು ಅಲ್ಲ . ಬ್ಯಾಂಕ್ ಅಂದರೇನು ? ಬೇರೊಬ್ಬರ ಹಣವನ್ನ ಪಡೆದು ಇನ್ನೊಬ್ಬರಿಗೆ ಸಾಲ ಕೊಡುವ ದಲ್ಲಾಳಿ ಸಂಸ್ಥೆಯಷ್ಟೇ . ತಾನು ಹಣ ಪಡೆದವರಿಗೆ ಒಂದಷ್ಟು ಕೊಟ್ಟು ತಾನು ಕೊಟ್ಟವರಿಂದ ಒಂದಷ್ಟು ವಸೂಲಿ ಮಾಡಿ ಮಧ್ಯದಲ್ಲಿ ಒಂದಷ್ಟು ಹಣವನ್ನ ಲಾಭವನ್ನಾಗಿ ಮಾಡಿಕೊಳ್ಳುವ ಒಂದು ದಲ್ಲಾಳಿ ಮನಸ್ಥಿತಿಯ ಸಂಸ್ಥೆ ಇಷ್ಟು ಬಿಟ್ಟು ಬೇರೇನೂ ಅಲ್ಲ . ಇದೆ ಕಾರಣಕ್ಕೆ ಬ್ಯಾಂಕ್ಗಳು ನೇಪಥ್ಯಕ್ಕೆ ಸೇರುತ್ತದೆ ಅಂದದ್ದು . ಗಮನಿಸಿ ನೋಡಿ ಈ ಕೆಲಸವನ್ನ ಬ್ಯಾಂಕಿನ ಸಹಾಯವಿಲ್ಲದೆ ಟೆಕ್ನಾಲಜಿ ಕಂಪನಿಗಳು ಮಾಡಬಲ್ಲವು .

ಆದರೆ ಇಂದಿನ ಕಾಲಘಟ್ಟದಲ್ಲಿ ಬ್ಯಾಂಕ್ ಇದೆ ಕಾರ್ಯವನ್ನ ಟೆಕ್ನಾಲಜಿ ಸಂಸ್ಥೆಗಳ ಸಹಾಯವಿಲ್ಲದೆ ಮಾಡಲಾರವು . ಅಂದರೆ ಸರಳವಾಗಿ ಬ್ಯಾಂಕಿಗೆ ಟೆಕ್ನಾಲಜಿ ಕಂಪನಿ ಬೇಕು ಟೆಕ್ನಾಲಜಿ ಕಂಪನಿಗೆ ಬ್ಯಾಂಕಿನ ಅವಶ್ಯಕತೆ ಇಲ್ಲ . ಇಂತಹ ಸಂದರ್ಭದಲ್ಲಿ ಬ್ಯಾಂಕ್ಗಳು ಹೇಗೆ ತಾನೇ ಉಳಿದಾವು ? ಬ್ಯಾಂಕ್ ಎನ್ನುವುದು ಇಂದಲ್ಲ ನಾಳೆ ತೆರೆಮರೆಗೆ ಸರಿಯಲಿರುವ ಹಳೆಯ ಪಾತ್ರಧಾರಿ ಅಷ್ಟೇ . ಹಾಗಾದರೆ ಟೆಕ್ನಾಲಜಿ ಕಂಪನಿಗಳು ಮುಳುಗುವುದಿಲ್ಲವೇ ? ಎನ್ನುವ ಪ್ರಶ್ನೆ ಕೂಡ ಸಹಜವಾಗಿ ಓದುಗರಲ್ಲಿ ಹುಟ್ಟುತ್ತದೆ . ಇದಕ್ಕೆ ಉತ್ತರ ಬಹಳ ಸರಳ . ಗಮನಿಸಿ ನೋಡಿ 2007 ಕ್ಕೂ ಮುಂಚೆ ಬ್ಯಾಂಕಿನ ಬಗ್ಗೆ ಮೇಲಿನ ಸಾಲಿನಲ್ಲಿ ಹೇಳಿದ ಹಾಗೆ ಹೇಳಿದ್ದರೆ ಜನ ಹಾಗೆ ಹೇಳಿದವನ ಮಾತನ್ನ ಸಂಶಯದಿಂದ ನೋಡುತ್ತಿದ್ದರು . ಏಕೆಂದರೆ ಅಂದಿನ ಕಾಲಘಟ್ಟದಲ್ಲಿ ಅದೇ ವ್ಯವಸ್ಥೆಯಾಗಿತ್ತು . ಅರ್ಥ ಇಷ್ಟೇ ಟೆಕ್ನಾಲಜಿ ಕಂಪನಿಗಳು ಸದ್ಯದ ನಮ್ಮ ಜಗತ್ತಿನ ಹೊಸ ವ್ಯವಸ್ಥೆ . ಅವು ತಮ್ಮ ಆಟದ ಅತ್ಯುನ್ನತ ಸ್ಥಿತಿಯನ್ನ ತಲುಪುವ ಹಂತದಲ್ಲಿದೆ . ಪರಿಸ್ಥಿತಿ ಹೀಗಿರುವಾಗ ಅವುಗಳ ಕುಸಿತದ ಬಗ್ಗೆ ಈಗಲೇ ಮಾತಾಡುವುದಕ್ಕೆ ಇದು ಸರಿಯಾದ ಸಮಯವಲ್ಲ .

ಅಲ್ಲದೆ ಟೆಕ್ನಾಲಜಿ ಕಂಪನಿಗಳು ತಮ್ಮ ಲಾಭದ ಬಹು ದೊಡ್ಡ ಮೊತ್ತವನ್ನ ರಿಸೆರ್ಚ್ ಅಂಡ್ ಡೆವಲಪ್ಮೆಂಟ್ ಗಾಗಿ ವಿನಿಯೋಗಿಸುತ್ತವೆ . ಮುಂದಿನ ಹತ್ತು ವರ್ಷದಲ್ಲಿ ಜಗತ್ತಿನಲ್ಲಿ ಆಗಬಹದುದಾದ ಬದಲಾವಣೆಗಳ ಊಹೆ ಮಾಡಿಕೊಂಡು ಅದಕ್ಕೆ ಬೇಕಾದ ಸಿದ್ಧತೆಗಳನ್ನ ನೆಡೆಸುತ್ತದೆ . ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಮುದೊಂದು ದಿನ ಹೀಗಾಗಬಹದು ಎನ್ನುವ ಪರಿಕಲ್ಪನೆ ಕೂಡ ಇಟ್ಟುಕೊಂಡಿರಲಿಲ್ಲ . ಹೀಗಾಗಿ ಅವು ಸೋತು ಟೆಕ್ನಾಲಜಿ ಕಂಪನಿಗಳಿಗೆ ಅಧಿಕಾರದ ಚುಕ್ಕಾಣಿ ಬಿಟ್ಟು ಕೊಡಲಿವೆ .
ಕೊನೆ ಮಾತು : ಮೈಕ್ರೋಸಾಫ್ಟ್ ಸಂಸ್ಥೆಯ ಸ್ಥಾಪಕ ಬಿಲ್ ಗೇಟ್ಸ್ ಹೇಳುತ್ತಾರೆ ‘ ನಾವು ಮುಂದಿನ ಎರಡು ವರ್ಷದಲ್ಲಿ ಸಾಧಿಸಬಹುದಾದ ವಿಷಯಗಳನ್ನ ಅತಿಯಾಗಿ ವರ್ಣಿಸಿ ಹೇಳುತ್ತೇವೆ . ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಸಾಧಿಸಬಹದುದಾದ ವಿಷಯಗಳ ಬಗ್ಗೆ ನಮಗೆ ನಿಖರತೆಯಿಲ್ಲ ಹೀಗಾಗಿ ಅವುಗಳನ್ನ ನಾವು ಕಡೆಗಾಣಿಸುತ್ತೇವೆ ‘ . ಟೆಕ್ನಾಲಜಿ ಕಂಪನಿಗಳು ನಮ್ಮನ್ನಾಳುವ ಸಂಸ್ಥೆಗಳು ಇದರಲ್ಲಿ ಸಂಶಯ ಬೇಡ . .

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸೌಂದರ್ಯ

    ಚಳಿಗಾಲದಲ್ಲಿ ಫೇಶಿಯಲ್ ಮಾಡಿಸುವುದರಿಂದಾಗುವ ಆ 7 ಪ್ರಯೋಜನಗಳೇನು ಗೊತ್ತಾ?

    ಚಳಿಗಾಲ ಬಂತೆಂದರೆ ಸಾಕು ಒಂದೆಲ್ಲಾ ಒಂದು ತ್ವಚೆ ಸಮಸ್ಯೆ ಶುರುವಾಗುವುದು. ಮೈಯನ್ನು ಉಣ್ಣೆ ಬಟ್ಟೆ, ಸ್ವೆಟರ್, ಕೋಟ್ ಇವುಗಳಿಂದ ರಕ್ಷಣೆ ಮಾಡಿದರೂ ಮುಖವನ್ನು ಹಾಗೇ ಬಿಡುವುದರಿಂದ ಮುಖದ ತ್ವಚೆ ಒಡೆಯಲಾರಂಭಿಸುತ್ತದೆ. ಇದರಿಂದ ಮುಖದ ತ್ವಚೆ ಡ್ರೈಯಾಗಿ ಮುಖದ ಕಾಂತಿ ಕಡಿಮೆಯಾಗುವುದು. ತುಟಿ ಒಡೆಯಲಾರಂಭಿಸುತ್ತದೆ, ಇದರಿಂದ ಮುಖ ಮತ್ತಷ್ಟು ಮಂಕಾಗಿ ಆಗಿ ಕಾಣುವುದು. ಚಳಿಯ ಪರಿಣಾಮ ನಿಮ್ಮ ಮುಖದ ಮೇಲೆ ಬೀರದಂತೆ ತಡೆಗಟ್ಟಲು ಫೇಶಿಯಲ್ ಮಾಡಿಸುವುದು ಒಳ್ಳೆಯದು. ಫೇಶಿಯಲ್ ಮಾಡಿಸುವುದರಿಂದ ಚಳಿಯಿಂದ ಒಡೆದು ಮುಖ ಕಪ್ಪಾಗುವುದಿಲ್ಲ, ಎಂದಿನಂತೆ ನಿಮ್ಮ…

  • ಉಪಯುಕ್ತ ಮಾಹಿತಿ

    ಜ್ವರದಿಂದ-ಹೃದಯಘಾತದವರೆಗೆ ಎಲ್ಲಾ ಕಾಯಿಲೆಗಳನ್ನು ತಡೆಯುವ ರಾಮಬಾಣ ಯಾವುದು ಗೊತ್ತಾ?

    ‘ವಿಟಮಿನ್ ಡಿ’ ಇರುವ ಆಹಾರ, ಫುಡ್ ಸಪ್ಲಿಮೆಂಟ್ಸ್ ಅನ್ನು ನಿಯಮಿತವಾಗಿ ಸೇವಿಸುವು ದರಿಂದ ಅನೇಕ ಕಾಯಿಲೆಗಳನ್ನು ಕ್ಷಣಮಾತ್ರದಲ್ಲಿ ಹಿಮ್ಮೆಟ್ಟಿಸಬಹುದು. ಆದರೆ ಭಾರತದಲ್ಲಿ ಹೆಚ್ಚಿನ ಜನರು ‘ವಿಟಮಿನ್ ಡಿ’ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಇದ್ದು, ಮೂಳೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಉತ್ತಮ ಔಷಧ. ಪ್ರತಿಯೊಂದು ಸಂಶೋಧನೆಗಳು ‘ವಿಟಮಿನ್ ಡಿ’ ಸೇವನೆಯಿಂದ ಕೊರತೆ ಯಿರುವ ಜನರಲ್ಲಿ ತೀವ್ರವಾದ ಉಸಿರಾಟದ ಸೋಂಕಿನ ಅಪಾಯ ಅರ್ಧಕ್ಕರ್ಧ ಕಡಿಮೆಯಾಗಿದೆ ಎಂದು ತೋರಿಸಿವೆ. ಆದರೆ ‘ವಿಟಮಿನ್ ಡಿ’…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ…ಇಂದು ನಿಮಗೆ ಗುರು ಒಲಿಯುತ್ತಾನೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ..

    ಗುರುವಾರ, 05/04/2018  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ… ಮೇಷ:– ಬಹುದಿನದ ನೀರಿಕ್ಷಿತ ಕನಸು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಮುಖಿಯಾಗಿ ಉ  ನ್ನತ ಅಧಿಕಾರವನ್ನು ಹೊಂದುವಿರಿ. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಒಳಿತಾಗುವುದು. ವೃಷಭ:- ಇವತ್ತಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಈ ಬಗ್ಗೆ ಈ ಅನುಭೂತಿ ನಿಮ್ಮ ಮನದಲ್ಲಿರಲಿ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುವುದು. ಶತ್ರುವನ್ನು ಕೂಡಾ…

  • govt, nation, ಉಪಯುಕ್ತ ಮಾಹಿತಿ, ಸರ್ಕಾರದ ಯೋಜನೆಗಳು, ಸರ್ಕಾರಿ ಯೋಜನೆಗಳು

    ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ

    ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ ಎಂದರೇನು? ದೇಶದ ರೈತರ ಕಷ್ಟವನ್ನು ಕಡಿಮೆ ಮಾಡಲು, ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, 6,000 ರೂಪಾಯಿಗಳನ್ನು ಕೇಂದ್ರ ಸರ್ಕಾರವು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುತ್ತದೆ ನೋಂದಣಿಗೆ ಯಾವ ದಾಖಲೆ ಬೇಕು? ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಲಾಭ ಪಡೆಯುವ ರೈತನಿಗೆ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದೆ. ನೀವು ಆಧಾರ್ ಕಾರ್ಡ್ ನೀಡದಿದ್ದರೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಜೊತೆಗೆ ಕಂತು ಪಡೆಯಲು, ನೀವು ಬ್ಯಾಂಕ್ ಖಾತೆ…

  • ಸುದ್ದಿ

    ನಗರಕ್ಕೆ ಬಂದಿದೆ ಲೂಸಿಯಾ ಮಾತ್ರೆ! ಟೆಕ್ಕಿ ಮತ್ತು ಸ್ಟುಡೆಂಟ್​​ಗಳೇ ಇವರ ಟಾರ್ಗೆಟ್​​!!

    ಸ್ಯಾಂಡಲವುಡ್​ನಲ್ಲಿ ಹೊಸತನದಿಂದ ಗೆದ್ದಿದ್ದ ಚಿತ್ರ ಲೂಸಿಯಾ ಎಲ್ಲರ ಗಮನವನ್ನು ಸೆಳೆದಿದ್ದದ್ದು ಆ ಚಿತ್ರದಲ್ಲಿ ಹೀರೋ ಸತೀಶ್ ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ. ಇದೀಗಾ ಅಂತಹದ್ದೇ ಮಾತ್ರೆ ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ. ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್‌ನ ಬೆಲೆ 1000 ರೂಪಾಯಿ….

  • ಆರೋಗ್ಯ

    ಈ ಟಿಪ್ಸ್ ಫಾಲೋ ಮಾಡಿ. ಕೇವಲ 5 ನಿಮಿಷದಲ್ಲಿ ನೆಗಡಿ ಕೆಮ್ಮು ಕಫ ಗಂಟಲು ಕಿರಿಕಿರಿ ಮಾಯ.

    ನೆಗಡಿ ಮತ್ತು ಕೆಮ್ಮು ಕಫ ಇದ್ದರೆ ಮನೆಯಲ್ಲಿ ಮನೆಮದ್ದನ್ನು ನೀವೇ ತಯಾರು ಮಾಡಿಕೊಳ್ಳಿ. ಬೇಕಾಗಿರುವ ಸಾಮಾಗ್ರಿಗಳು ಬೆಲ್ಲ ತುಳಸಿ ಮತ್ತು ಶುಂಠಿ ಅರಿಶಿನ ಪುಡಿ ಹಾಗೂ ಓಂಕಾಳು ಇಷ್ಟು ಸಾಮಗ್ರಿಗಳು ಬೇಕು ಇರಲಿ ತುಂಬಾ ಪ್ರೋಟೀನ್ಗಳು ಮತ್ತು ವಿಟಮಿನ್ ಗಳು ಇರುತ್ತದೆ ಮಾಡುವ ವಿಧಾನ ಮೊದಲು ಬೆಲ್ಲವನ್ನು ಪಾಕ ಮಾಡಿಕೊಳ್ಳಬೇಕು ನಂತರ ತುಳಸಿ ಮತ್ತು ಓಂ ಕಾಳು ತೆಗೆದುಕೊಂಡು ಜಜ್ಜಿ ಬೇಕು ನಂತರ ಶುಂಠಿಯನ್ನು ತೆಗೆದುಕೊಂಡು ತುರಿದು ರಸ ಮಾಡಿಕೊಳ್ಳಬೇಕು ಆಮೇಲೆ ಒಲೆಯ ಮೇಲೆ ಒಂದು ಪಾತ್ರೆಯನ್ನು…