ಸಿನಿಮಾ

ಕನ್ನಡದಲ್ಲಿ ಆರ್ಭಟಿಸುತ್ತಿರುವ ಕಾಲೇಜ್ ಕುಮಾರ್ ಟ್ರೈಲರ್..!ತಿಳಿಯಲು ಈ ಲೇಖನ ಓದಿ..

362

ಹೌದು ಕನ್ನಡದ ಸಿನಿಮಾ ಯಾರಿಗೇನು ಕಡಿಮೆ ಇಲ್ಲದಂತೆ ಒಂದರ ಮೇಲೊಂದು ಹಿಟ್ ಆಗುತ್ತಲೇ ಇವೆ.. ಕಿರಿಕ್ ಪಾರ್ಟಿ, ರಾಜಕುಮಾರ, ಹೆಬ್ಬುಲಿ, ತಾರಕ್, ಈಗ ಇದೇ ಲಿಸ್ಟ್ ಗೆ ಸೇರ್ಪಡೆಯಾಗಲು ಯೂತ್ಸ್ ಸಿನಿಮಾ #ಕಾಲೇಜ್ ಕುಮಾರ್ ಬರುತ್ತಿದೆ.

ಕೆಂಡಸಂಪಿಗೆಯ ಮೂಲಕ ಎಲ್ಲರ ಮನಗೆದ್ದಿದ್ದ ನಾಯಕ “ವಿಕ್ಕಿ ವರುನ್” ಹಾಗೂ ಕಿರಿಕ್ ಪಾರ್ಟಿ ಸಿನಿಮಾದ “ಸಂಯುಕ್ತ ಹೆಗ್ಡೆ” ನಟಿಸಿರುವ *#ಕಾಲೇಜ್ ಕುಮಾರ್* ಟ್ರೈಲರ್ ಬಿಡುಗಡೆಯಾದ ಒಂದೇ ದಿನದಲ್ಲಿ 2 ಲಕ್ಷ ವೀಕ್ಷಣೆಗಳನ್ನು ಪಡೆದು ಮುನ್ನುಗ್ಗುತಿದೆ..

ಇದಕ್ಕಿಂತ ಹೆಚ್ಚಿನದು ಏನೆಂದರೆ ಬಾಲಿವುಡ್ ನ ಮೆಗಾ ಪ್ರಾಜೆಕ್ಟ್ ಎಂದೇ ಕರೆಯುತ್ತಿರುವ “ಪದ್ಮಾವತಿ” ಸಿನಿಮಾದ ಟ್ರೈಲರ್ ಯೂಟ್ಯೂಬ್ ನಲ್ಲಿ ಸತತವಾಗಿ ಟಾಪ್ 1 ಟ್ರೆಂಡ್ ನಲ್ಲಿ ಮುನ್ನುಗ್ಗುತಿತ್ತು.. ಆದರೆ ಈ ಓಟಕ್ಕೆ ನಮ್ಮ *”ಕಾಲೇಜ್ ಕುಮಾರ್”* ಚಿತ್ರದ ಟ್ರೈಲರ್ ಬ್ರೇಕ್ ಹಾಕಿ ನಂಬರ್ 1 ನಲ್ಲಿ ಟ್ರೆಂಡ್ ನಲ್ಲಿದೆ..

ಅಲೆಮಾರಿ ಚಿತ್ರವನ್ನು ನಿರ್ದೇಶನ ಮಾಡಿರುವ ಹರಿ ಸಂತೋಷ್ ಈ ಚಿತ್ರದ ನಿರ್ದೇಶನದ ಜವಬ್ದಾರಿಯನ್ನು ಹೊತ್ತಿದ್ದಾರೆ..ಈಗಾಗಲೇ ಜಾನ್ ಜಾನಿ ಜನಾರ್ದನ್ ಚಿತ್ರ ನಿರ್ಮಾಣ ಮಾಡಿರುವ “M R ಬ್ಯಾನರ್” ಅಡಿಯಲ್ಲಿ *L ಪದ್ಮನಾಭ* ರವರು ಈ ಸಿನಿಮಾ ವನ್ನು ನಿರ್ಮಾಣ ಮಾಡುತ್ತಿದ್ದಾರೆ.. ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ರವಿಶಂಕರ್ ಹಾಗೂ ಶೃತಿ ರವರು ಕಾಣಿಸಿಕೊಂಡಿದ್ದಾರೆ.. *ಅರ್ಜುನ್ ಜನ್ಯ* ಮ್ಯೂಸಿಕ್ ನೀಡಿರುವ ಈ ಸಿನಿಮಾದ ಎಲ್ಲಾ ಹಾಡುಗಳು ಹಿಟ್ ಆಗಿ ಎಲ್ಲರ ಮನ ಗೆದ್ದಿದೆ.. ವಿಶೇಷ ಎಂದರೆ ಜೀ ಕನ್ನಡದ ಪ್ರಖ್ಯಾತ ಸಿಂಗಿಂಗ್ ಶೋ ಸರಿಗಮಪ ಖ್ಯಾತಿಯ ಸಂಜಿತ್ ಹೆಗ್ಡೆ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ.. ಈ ಮೂಲಕ *L ಪದ್ಮನಾಭ* ರವರು ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡಿದ್ದಾರೆ..

ಕಿರಿಕ್ ಪಾರ್ಟಿಯ ನಂತರ ಮತ್ತೊಂದು ಕಾಲೇಜ್ ಕತೆಯುಳ್ಳ ಸಿನಿಮಾ ಇದಾಗಿರುವುದರಿಂದ ಜನರಲ್ಲಿ ಕ್ಯೂರಿಯಾಸಿಟಿ ಯನ್ನು ಕ್ರಿಯೇಟ್ ಮಾಡಿದೆ.. ಸಿನಿಮಾ ಅತಿ ಶೀಘ್ರದಲ್ಲಿ ಬಿಡುಗಡೆ ಯಾಗುವುದೆಂದು ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ತಿಳಿಸಿದೆ.. ಹಾಡುಗಳು ಹಾಗೂ ಟ್ರೈಲರ್ ಮೂಲಕ ಹೊಸದೊಂದು ಹಿಟ್ ನೀಡುವ ಭರವಸೆಯ ಸಿನಿಮಾ ಎನಿಸಿಕೊಂಡಿರುವ ಕಾಲೇಜ್ ಕುಮಾರ್ ಚಿತ್ರತಂಡಕ್ಕೆ ಶುಭವಾಗಲಿ..

ಕನ್ನಡದಲ್ಲಿ ಅಂತ ಒಳ್ಳೆ ಸಿನಿಮಾ ಬರುವುದಿಲ್ಲ ಎನ್ನುವವರ ಬಾಯಿ ಮುಚ್ಚಿಸುವಂತಿದೆ “ಕಾಲೇಜ್ ಕುಮಾರ್” ಟ್ರೈಲರ್.. ಏನೇ ಆಗಲಿ ನಮ್ಮ ಕನ್ನಡದ ಸಿನಿಮಾ ಒಂದು ಬಾಲಿವುಡ್ ನವರಿಗೆ ಕಾಂಪಿಟೇಟರ್ ಆಗಿ ನಿಂತಿರುವುದು ನಮಗೆ ಹೆಮ್ಮೆಯೇ ಸರಿ..

ಸ್ಯಾಂಡಲ್ವುಡ್ ಸ್ಟಾರ್ ಗಳು ಈಗಾಗಲೇ ಟ್ರೈಲರ್ ನೋಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ..  ನೀವು ಕೂಡ ಈ ಯೂತ್ ಫುಲ್ ಕಾಲೇಜ್ ಕತೆಯುಳ್ಳ ಸಿನಿಮಾದ ಅಧ್ಬುತ ಟ್ರೈಲರ್ ಅನ್ನು ಈ ಲಿಂಕ್  ಮೂಲಕ ಒಮ್ಮೆ ನೋಡಿ..

ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಿ.. ಶೇರ್ ಮಾಡುವ ಮೂಲಕ ಇತರರಿಗೂ ತಿಳಿಯುವಂತೆ ಮಾಡಿ..

 

ಜೈ ಕರ್ನಾಟಕ..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೀನುಗಾರರ 60 ಕೋಟಿ ಸಾಲ ಮನ್ನಾ ಮಾಡಿ ಬಂಪರ್ ಖುಷಿ ನೀಡಿದ ಯಡಿಯೂರಪ್ಪ…!

    ಬೆಂಗಳೂರು, ಜುಲೈ 29  ಅಧಿಕಾರಕ್ಕೆ ಬಂದ ದಿನವೇ ನೇಕಾರರ ಸಾಲಮನ್ನಾ ಮಾಡುವ ಮೂಲಕ ಮಹತ್ವದ ಘೋಷಣೆ ಮಾಡಿದ್ದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕರಾವಳಿ ಭಾಗದ ಮೀನುಗಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ. ಕರಾವಳಿ ಭಾಗದ ಮೂರು ಜಿಲ್ಲೆಗಳ ಮೀನುಗಾರರಿಗೆ ಯಡಿಯೂರಪ್ಪ ಅವರು ಸಾಲಮನ್ನಾದ ಸಿಹಿ ಸುದ್ದಿ ನೀಡಿದ್ದಾರೆ. 2017-18, 2018-19 ಸಾಲಿನಲ್ಲಿ  ಕರಾವಳಿಯ 3 ಜಿಲ್ಲೆಗಳಲ್ಲಿ  ಒಟ್ಟು 23507 ಮೀನುಗಾರರು  ವಾಣಿಜ್ಯ  ಮತ್ತು ಪ್ರಾದೇಶಿಕ ಬ್ಯಾಂಕುಗಳಲ್ಲಿ ಮಾಡಿರುವ ಒಂದು ಹಂತದವರೆಗಿನ ಸಾಲವನ್ನು ಮನ್ನಾ ಮಾಡುವ ಕುರಿತು ಬಿ.ಎಸ್…

  • ಸುದ್ದಿ

    ಇಲ್ಲಿದೆ ಸಿಹಿ ಸುದ್ದಿ! ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ…!

    ಲೋಕಸಭಾ ಚುನಾಣಾ ಫಲಿತಾಂಶ ಬಂದ ನಂತರದ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೆತ್ತ ಮುಖ ಮಾಡಿ, ರಾಜ್ಯದಲ್ಲಿ ಮೇ 23 ರಿಂದ 28ವರೆಗೆ ಕೇವಲ ಆರು ದಿನಗಳಲ್ಲಿ 72 ಪೈಸೆ ಪೇಟ್ರೊಲ್ ದರ ಏರಿಕೆ ಕಂಡಿತ್ತು. ಆದರೆ ಕಳೆದೆರಡು ದಿನಗಳಿಂದ ತೈಲ ದರ ಇಳಿಕೆಯೆತ್ತ ಮುಖ ಮಾಡಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಕಂಡಾಗ ವಾಹನ ಸವಾರರ ಆಕ್ರೋಶ ಹೆಚ್ಚಾಗತ್ತೆ, ಇಳಿಕೆ ಕಂಡರೆ ಅವರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ದೇಶದ ಪ್ರಮುಖ ನಗರಗಳಲ್ಲಿ…

  • ಸುದ್ದಿ

    ಕುಷ್ಠ ರೋಗಿಯ ಅನ್ನ, ಪಿಂಚಣಿ ಕಿತ್ತುಕೊಂಡ ಆಧಾರ್..! ಓದಿ ಈ ಮನಕಲುಕುವ ಸ್ಟೋರಿ…

    ಆಧಾರ್ ಕಾರ್ಡ್ ಎಂಬ ಸಾರ್ವತ್ರಿಕ ಗುರುತಿನ ಚೀಟಿ, ಒಂದೆಡೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲು, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಹಕಾರಿಯಾಗುತ್ತಿರುವ ಹೊತ್ತಲ್ಲೇ, ಇನ್ನೊಂದೆಡೆ ಹಲವು ಬಡವರ ಪಾಲಿಗೆ ಆಧಾರ್ ಕಾರ್ಡ್ ಒಂದು ಶಾಪವಾಗಿ ಪರಿಣಮಿಸಿದೆ!

  • ಸುದ್ದಿ

    100ಕ್ಕೂ ಹೆಚ್ಚು ಪುರುಷರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನೇ ಬಂಧಿಸಿದ್ರು…..ಕಾರಣ?

    ಇಂಗ್ಲೆಂಡ್ ನ ವೆಸ್ಟ್ ಯಾರ್ಕ್ ನಲ್ಲಿ 23 ವರ್ಷದ ಮಹಿಳೆ ಹೇಳಿದ ವಿಷ್ಯ ದಂಗಾಗಿಸುವಂತಿದೆ. 100ಕ್ಕೂ ಹೆಚ್ಚು ಪುರುಷರು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರಂತೆ. ಆದ್ರೆ ಆರೋಪಿಗಳನ್ನು ಬಂಧಿಸುವ ಬದಲು ಮಹಿಳೆಯನ್ನೇ ಪೊಲೀಸರು ಅನೇಕ ಬಾರಿ ಬಂಧಿಸಿದ್ದಾರಂತೆ. ಪೀಡಿತೆ 11 ವರ್ಷದಲ್ಲಿರುವಾಗ ಆಕೆ ಮೇಲೆ ಅತ್ಯಾಚಾರ ನಡೆಯಲು ಶುರುವಾಗಿತ್ತಂತೆ. ಡ್ರಗ್ ನೀಡಿ ಪೀಡಿತೆ ಮೇಲೆ ಅತ್ಯಾಚಾರ ನಡೆಸಲಾಗುತ್ತಿತ್ತಂತೆ. ಇದು ಪೊಲೀಸರಿಗೂ ತಿಳಿದಿತ್ತಂತೆ. ಆದ್ರೆ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು ಎನ್ನಲಾಗಿದೆ. ಡ್ರಗ್ಸ್ ಜೊತೆ ಪೀಡಿತೆ ಸಿಕ್ಕಿಬಿದ್ದಾಗ ಆಕೆಗೆ ಎಚ್ಚರಿಕೆ ನೀಡಿ…

  • ಜೀವನಶೈಲಿ

    ಚಾಣಕ್ಯನ ಪ್ರಕಾರ ಇಂತಹ ಸಮಯಗಳಲ್ಲಿ ಸ್ನಾನ ಮಾಡಲೆಬೇಕಂತೆ! ಏಕೆ ಗೊತ್ತಾ?ಮುಂದೆ ಓದಿ…

    ಸ್ನಾನ ಮಾಡುವ ವಿಷಯಕ್ಕೆ ಬಂದ್ರೆ ಕೆಲವರು ದಿನಾ ಮತ್ತೆ ಕೆಲವರು ಅವರವರ ಅನುಕೂಲಕ್ಕೆ ತಕ್ಕಂತೆ ಸ್ನಾನ ಮಾಡುತ್ತಾರೆ. ಆದರೆ ನಮಗೆ ಕೆಲಸಗಲಿರಲಿ ಬೇರೆ ಏನಾದ್ರೂ ಇರಲಿ ಪ್ರತಿನಿತ್ಯ ಸ್ನಾನ ಮಾಡುವುದು ಒಳಿತು.

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ, ರಾಶಿ ಭವಿಷ್ಯದ ಜೊತೆಗೆ ನಿಮ್ಮ ಇಂದಿನ ಅದೃಷ್ಟದ ಸಂಖ್ಯೆ ಯಾವುದು ನೋಡಿ..

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(22 ಏಪ್ರಿಲ್, 2019) ನೀವು ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಶಮನ ಪಡೆಯುತ್ತೀರಿ. ಅವುಗಳನ್ನು ಶಾಶ್ವತವಾಗಿ…