ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನರೇಂದ್ರ ಮೋದಿ ಭಾರತದ ನಾಯಕರಾದ ನಂತರ ಬೇರೆ ದೇಶಗಳು ಭಾರತವನ್ನು ನೋಡುವ ರೀತಿ ಈಗ ಬದಲಾಗಿದೆ. ಭಾರತವನ್ನು ತಿರುಕರ ದೇಶ, ಹಾವಾಡಿಗರ ದೇಶ ಎಂದೆಲ್ಲಾ ಹೀಯಾಳಿಸುತ್ತಿದ್ದ ಕಾಲವೊಂದಿತ್ತು. ಆದ್ರೆ ಈಗ ಹಾಗಿಲ್ಲ. ಏಕೆಂದ್ರೆ ಹಿಗಂತೂ ಭಾರತ ಅಭಿವೃದ್ದಿಯತ್ತ ವೇಗವಾಗಿ ದಾಪುಗಾಲಿಡುತ್ತಿದೆ. ಭಾರತದ ನಾಯಕನ ಮಾತಿಗೆ ಬೇರೆ ದೇಶಗಳು ಕೇಳುವ ಹಾಗಿದೆ.

ಒಂದು ಕಾಲದಲ್ಲಿ ನರೇಂದ್ರ ಮೋದಿಯವರಿಗೆ ವೀಸಾ ಕೊಡೋದಿಲ್ಲ ಎಂದು ಹೇಳುತ್ತಿದ್ದ ಜಗತ್ತಿನ ದೊಡ್ಡಣ್ಣ ಅಮೇರಿಕಾ, ಅದೇ ಮೋದಿಯವರನ್ನು ತಾವಾಗೆ ಅಮೆರಿಕಾಕ್ಕೆ ಬೇಟಿ ಕೊಡಿ ಎಂದು ಆಹ್ವಾನಿಸುತ್ತಾರೆ. ಹಾಗೆ ಅಲ್ಲಿಗೆ ಹೋದ ಮೋದಿಯವರಿಗೆ ಅಭೂತಪೂರ್ವ ಸ್ವಾಗತ ಸಿಗುತ್ತೆ. ಮೊದಲಿಗಿಂತಲೂ ಈಗ ಭಾರತ ಅಮೆರಿಕಾದ ಭಾಂದವ್ಯ ಹೆಚ್ಚಾಗಿದೆ.

ಬೇರೆ ದೇಶಗಳು ಹೇಗೆ ಮೋದಿ ಮಾತುಗಳನ್ನು, ಆಜ್ಞೆಯಂತೆ ಪಾಲಿಸುತ್ತವೆ ಎಂಬುದಕ್ಕೆ, ಒಂದು ಉದಾಹರಣೆ ಹೇಳಬೇಕಂದ್ರೆ ಇತ್ತೀಚೆಗಷ್ಟೇ ಸೌದಿ ಅರೇಬಿಯಾ ದೇಶವು ಯೆಮನ್ ದೇಶದ ಮೇಲೆ ಯುದ್ದ ಸಾರಿತ್ತು. ಆಗ ಯೆಮನ್ ದೇಶದಲ್ಲಿರುವ ಭಾರತೀಯರನ್ನು ರಕ್ಷಿಸಲು ಸಚಿವೆ ಸುಶ್ಮಾಸ್ವಾರಜ್’ರವರು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ರು. ಭಾರತೀಯರ ರಕ್ಷಣೆಗಾಗಿ ಮೋದಿಯವರು, ಸೌದಿ ಅರೇಬಿಯಾ ಅಧ್ಯಕ್ಷ ಸಲ್ಮಾನ್ ಬಿನ್ ಅಬ್ದುಲಾಜಿಜ್’ವರೆಗೂ ಫೋನ್ ಕಾಲ್ ಮಾಡಿ, ತಕ್ಷಣವೇ ಯೆಮನ್ ಮೇಲಿನ ಯುದ್ದ ನಿಲ್ಲಿಸಿ, ನಮ್ಮವರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದಾಗ, ಮೋದಿಯವರ ಮಾತಿಗೆ ಎದುರಾಡದ ಸಲ್ಮಾನ್ ಬಿನ್ ಅಬ್ದುಲಾಜಿಜ್ ಯುದ್ದವನ್ನು ನಿಲ್ಲಿಸಿದ್ರು. ಇದು ಜಗತ್ತಿನ ರಾಷ್ಟ್ರಗಳು ಹೇಗೆ ಮೋದಿ ಮಾತಿಗೆ ಗೌರವ ಕೊಡುತ್ತವೆ ಎಂಬುದನ್ನು ಎತ್ತಿ ತೋರಿಸುತ್ತೆ.

ಭಾರತ ದೇಶವು ಕಳೆದೆ ವರ್ಷ ನಡೆದ ಗಡಿ ಕದನದಿಂದ ಏಷಿಯಾದಲ್ಲಿಯೇ ತಾನು ಚೀನಾಕ್ಕಿಂತ ಬಲಶಾಲಿ ಎಂಬುದನ್ನು ಹಲವಾರು ಬಾರಿ ಸಾಬೀತು ಪಡಿಸುತ್ತಾ ಬಂದಿದೆ.ಭಾರತವು ಪಕ್ಕದಲ್ಲಿರುವ ಪಾಪಿ ಪಾಕಿಸ್ತಾನವನ್ನು ಬಿಟ್ಟು, ಚೀನಾಕ್ಕಿಂತಲೂ ಉಳಿದೆಲ್ಲಾ ದೇಶಗಳೊಂದಿಗೆ ಬೆಳೆಸುತ್ತಿರುವ ಭಾಂದವ್ಯ,ಏಷಿಯಾದ ಹಿರಿಯಣ್ಣನಾಗಿ ಅಧಿಕಾರ ಪಡೆಯುವಲ್ಲಿ ಮುನ್ನುಗ್ಗುತ್ತಿದೆ.ಜಪಾನ್, ವಿಯೆಟ್ನಾಮ್, ಕೋರಿಯಾ, ತೈವಾನ್ಗಳನ್ನೆಲ್ಲ ತನ್ನೆಡೆಗೆ ಸೆಳೆದುಕೊಂಡಿರುವ ಭಾರತ, ಟಿಬೆಟ್ನಲ್ಲೂ ಕೈಯ್ಯಾಡಿಸಿ ಶಕುನಿ ಚೀನಾಕ್ಕೆ ಉಸಿರುಗಟ್ಟುವಂತೆ ಮಾಡುತ್ತಿದೆ.
ಮೋದಿ ಸರ್ಕಾರ ಬಂದಾಗಿನಿಂದ ಮೋದಿಯವರು ಬರೀ ಬೇರೆ ದೇಶಗಳನ್ನು ಸುತ್ತುವುದೇ ಆಗಿದೆ ಎಂಬ ಮಾತು ಕೇಳಿಬಂದದ್ದು ಸುಳ್ಳಲ್ಲ. ಆದ್ರೆ ಜಗತ್ತಿನ ಅನೇಕ ದೇಶಗಳನ್ನು ಭೇಟಿ ಮಾಡಿದ ಮೋದಿ ಅವರೊಂದಿಗೆ ಬಹಳ ಗಟ್ಟಿಯಾದ ಬಾಂಧವ್ಯವನ್ನು ಸ್ಥಾಪಿಸಿ ಬಂದಿದ್ದಾರೆ. ಅಮೇರಿಕ, ಜಪಾನ್, ಆಸ್ಟ್ರೇಲಿಯಾ, ಇಸ್ರೇಲ್ಗಳನ್ನೆಲ್ಲ ತಮ್ಮೆಡೆಗೆ ಸೆಳೆದುಕೊಂಡು, ಮುಂಗೋಲಿಯ, ಶ್ರೀಲಂಕಾ, ತೈವಾನ್ಗಳೂ ಚೀನಾ ವಿರುದ್ಧ ತಿರುಗಿ ಬೀಳುವಂತೆ ಮಾಡಿ ಚೀನಾಕ್ಕೆ ಮೋದಿ ಕಂಟಕಪ್ರಾಯವಾಗಿಬಿಟ್ಟಿದ್ದಾರೆ. ಶಕುನಿ ಚೀನಾ ದೇಶವು ಡೋಕ್ಲಾಂನಲ್ಲಿ ನಮ್ಮೆದುರಾಗಿ ನಿಂತು,1962ರ ಯುದ್ಧವನ್ನು ನೆನಪಿಸಿ ಭಾರತೀಯ ಸೈನಿಕರ ಆತ್ಮಸ್ತೈರವನ್ನಕೆಣಕಲು ಪ್ರಯತ್ನಿಸಿತ್ತು. ಆದ್ರೆ ಭಾರತವು ಇದಕ್ಕೆ ಪ್ರತಿಯಾಗಿ ಇದು ಇದು 1962 ಅಲ್ಲ, 2017 ಎಂದಾಗ ಚೀನಾ ದೇಶಕ್ಕೆ ಬಾಲ ಮುದುರಿದ ನಾಯಿಯಂತಾಗಿತ್ತು.
ಆಗ ಮೋದಿ ಅಮೇರಿಕಾ-ಇಸ್ರೇಲ್ ಪ್ರವಾಸದಲ್ಲಿದ್ದರು.ಇನ್ನೇನು ನಾವು ಭಾರತದಲ್ಲಿ ಯುದ್ದ ಮಾಡಿಯೇ ಬಿಡುತ್ತೇವೆ ಎಂಬ ಉತ್ಸಾಹದಲ್ಲಿತ್ತು.ಅದೇ ಟೈಮಿಗೆ ಸರಿಯಾಗಿ ದಕ್ಷಿಣ ಚೀನಾ ಸಮುದ್ರಕ್ಕೆ ಲಗ್ಗೆಯಿಟ್ಟ ಅಮೇರಿಕಾ-ಜಪಾನ್ ದೇಶದ ಹಡಗುಗಳು ಚೀನಾವನ್ನು ನಡುಗುವಂತೆ ಮಾಡಿದವು.ಈ ಹೊತ್ತಲ್ಲಿಯೇ ಭಾರತದ ಪರ ನಿಂತ ತೈವಾನ್ ದೇಶವು ಎಣ್ಣೆ ಬಾವಿ ಕೊರೆಯುವ ಒಪ್ಪಂದವನ್ನು ನವೀಕರಿಸಿ ಚೀನಾ ವಿರುದ್ದ ಸೆಟೆದು ನಿಂತಿತು.ಭಾರತವನ್ನೇ ತನ್ನ ಚಕ್ರವ್ಯೂಹದಲ್ಲಿ ಸಿಕ್ಕಿಸಲು ಹೋರಾಟ ಶಕುನಿ ಚೀನಾ, ತಾನು ಎನೆದ ಚಕ್ರವ್ಯೂಹದಲ್ಲಿ ತಾನೇ ಸಿಕ್ಕಿಹಾಕಿಕೊಂಡಿತ್ತು.

ಜಗತ್ತಿನ ಅನೇಕ ದೇಶಗಳನ್ನು ಸುತ್ತಾಡಿದ್ದ ಮೋದಿ, ತಾನು ಹೋದ ಕಡೆಯೆಲ್ಲಾಲ್ಲಾ ಭಯೋತ್ಪಾದನೆಯ ಕುರಿತಂತೆ ಮಾತನಾಡಿ ಪಾಕಿಸ್ತಾನವನ್ನು ಜಗತ್ತಿನ ಶತ್ರುವನ್ನಾಗಿ ಮಾಡಿಬಿಟ್ಟಿದ್ದರು.ಆದ್ರೆ ಪಾಪಿ ಪಾಕಿಸ್ತಾನವು ತಾನು ಭಯೋತ್ಪಾದನೆಯ ಬೆಂಬಲಿಗನಲ್ಲವೆಂದು ಸಾಬೀತುಪಡಿಸಲು ಹೋಗಿ ಜಗತ್ತಿನ ಮುಂದೆ ತಲೆತಗ್ಗಿಸಬಿಟ್ಟಿತ್ತು.ಇದೆಲ್ಲಾ ಕೇವಲ ಮೋದಿ ತಂತ್ರಗಾರಿಕೆಯಿಂದ ಮಾತ್ರ ಸಾಧ್ಯವಾಯಿತು.ಪಾಕ್ ಪತ್ರಕರ್ತರು, ಟಿವಿ ಚಾನೆಲ್ಲುಗಳು ಮೋದಿ ಪರವಾದ ಮಾತುಗಳನ್ನಾಡಲಾರಂಭಿಸಿದವು. ಇದಕ್ಕೆ ಮತ್ತೊಂದು ಉದಾಹರಣೆಯಾಗಿ ಸಿಕ್ಕಿಹಾಕಿಕೊಂಡಿದ್ದ ಹೆಣ್ಣು ಮಗಳನ್ನು ಬಿಡಿಸಿ ಕ್ಯಾಮೆರಾಕ್ಕೆ ಪೋಸು ಕೊಟ್ಟರು. ಅಲ್ಲಿನ ಮಕ್ಕಳ ಚಿಕಿತ್ಸೆಗಾಗಿ ವೀಸಾ ಕೊಡಿಸಿದರು. ಈ ರಾಜತಾಂತ್ರಿಕ ಸಂಗತಿಗಳನ್ನು ಎಷ್ಟು ಸೂಕ್ಷ್ಮವಾಗಿ ನಿಭಾಯಿಸಲಾಯಿತೆಂದರೆ ಚಿಕಿತ್ಸೆ ಪಡೆದ ಮಗುವಿನ ತಾಯಿ ಪಾಕೀಸ್ತಾನದ ಪ್ರಧಾನಿ ಸುಷ್ಮಾರೇ ಆದರೆ ಚೆನ್ನಾಗಿತ್ತು ಎಂದುಬಿಟ್ಟಿದ್ದರು.

ಭಾರತದ ವಿಶ್ವಸಂಸ್ಥೆಯ ಕಾರ್ಯದರ್ಶಿ ಯೆನಾಮ್ ಗಂಭೀರ್ ಅವರು, “ಪಾಕಿಸ್ತಾನ ಭೌಗೋಳಿಕವಾಗಿ ಉಗ್ರವಾದದ ಸಮನಾರ್ಥಕವಾಗಿ ಗುರುತಿಸಿಕೊಂಡಿದೆ. ಅದೀಗ ”ಟೆರರಿಸ್ಥಾನ್” ಆಗಿದ್ದು, ಉಗ್ರರ ಕಾರ್ಖಾನೆಗಳಲ್ಲಿ ಉಗ್ರರನ್ನು ಉತ್ಪಾದನೆ ಮಾಡಿ ಜಗತ್ತಿಗೆ ರಫ್ತು ಮಾಡುತ್ತಿದೆ. ಒಸಮಾ ಬಿನ್ ಲಾಡೆನ್, ಮುಲ್ಲಾ ಓವರ್ ಗೆ ರಕ್ಷಣೆ ನೀಡಿದ ದೇಶ, 26/11 ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ. ಜಾಗತಿಕ ಉಗ್ರರನ್ನು ಉತ್ಪಾದಿಸುವುದು ಪಾಕಿಸ್ತಾನದ ಮುಖ್ಯ ಗುರಿಯಾಗಿದ್ದು, ಉಗ್ರರಿಗೆ ಸುರಕ್ಷಿತ ತಾಣಗಳನ್ನು ನೀಡುತ್ತಿದೆ. ಉಗ್ರ ಸಂಘಟನೆಗಳ ಮುಖಂಡರು ಪಾಕ್ ಮಿಲಿಟರಿ ಮತ್ತು ರಾಜಕಾರಣಿಗಳೊಂದಿಗೆ ಉತ್ತಮ ನಂಟು ಹೊಂದಿದ್ದಾರೆ” ಎಂದು ಪಾಕ್ ಮಾನ ಹರಾಜು ಹಾಕಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪರಿಸರ ದಿನಾಚರಣೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲು ಲಕ್ಷ ಲಕ್ಷ ದುಡ್ಡು ವೆಚ್ಚ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಪರಿಸರ ದಿನಾಚರಣೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ. ಜೂನ್ 5 ರಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಮಾಡಲಾಗಿತ್ತು.ಸರಳವಾಗಿ ಆಚರಿಸಬೇಕಿದ್ದ ಪರಿಸರ ದಿನಾಚರಣೆಗೆ 20.45 ಲಕ್ಷ ರೂ. ಹಣ ಖರ್ಚಾಗಿದೆ. ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ…
ನೀವು ಎಂದಾದರೂ ಚೆಕ್ ಬೌನ್ಸ್ ಆದ ಸಂದರ್ಭವನ್ನು ಎದುರಿಸಿದ್ದೀರಾ? ಇದು ಮುಜುಗರದ ವಿಚಾರ ಮಾತ್ರವಲ್ಲ, ನಿಮ್ಮ ಹಣಕಾಸಿನ ಅರ್ಹತೆ ಮತ್ತು ಕಾನೂನಿಗೆ ಸಂಬಂಧಿಸಿದ ವಿಚಾರವೂ ಹೌದು. ನಾನಾ ಕಾರಣಗಳಿಗೋಸ್ಕರ ಚೆಕ್ ಬೌನ್ಸ್ ಆಗಬಹುದು. ಹಾಗಂತ ಇವುಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮೊದಲು ಚೆಕ್ ಬೌನ್ಸ್ ಆಗಲು ಮುಖ್ಯ ಕಾರಣಗಳೇನೆಂದು ತಿಳಿಯೋಣ. ನೀವು ಬರೆದ ಅಥವಾ ಪಡೆದ ಚೆಕ್ ಹಿಂತಿರುಗಿತು ಎಂದರೆ ಬ್ಯಾಂಕ್ ಅದನ್ನು ಮಾನ್ಯಗೊಳಿಸಿಲ್ಲ ಎಂದರ್ಥ. ಚೆಕ್ ಬೌನ್ಸ್ ಆಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಕೆಲವು ನೀವು ಬರೆದ ಅಥವಾ ಪಡೆದ…
‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿ ಮಾಯಾ ತಮ್ಮಗೆಳೆಯನನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ಧಾರಾವಾಹಿ ಖ್ಯಾತಿಯ ನಟಿ ಇಶಿತಾ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಶಿತಾವರ್ಷ ಎನ್ನುವುದಕ್ಕಿಂತ ಮಾಯಾ ಎಂದರೆ ಎಲ್ಲರಿಗೂ ತಿಳಿಯುತ್ತದೆ. ಯಾಕೆಂದರೆ ಈಕೆ ಧಾರಾವಾಹಿಯಲ್ಲಿ ಮಾಯಾ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಮಾಯಾ ತಮ್ಮ ಬಹು ಕಾಲದ ಗೆಳೆಯ ಮುರುಗಾನಂದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾಯಾ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವ…
ಕ್ರಿಕೆಟ್ ನಮ್ಮ ಭಾರತೀಯ ಆಟವಲ್ಲದಿದ್ದರು, ಇಡೀ ಭಾರತೀಯರ ಮನ ಮನದಲ್ಲೂ ಮನೆ ಮಾಡಿದೆ. ಅದರಲ್ಲೂ ಭಾರತ ಪಾಕಿಸ್ತಾನದ ನಡುವೆ ನಡೆಯುವ ಮ್ಯಾಚ್ ವೇಳೆ ಹೆಚ್ಚೂ ಕಡಿಮೆ ಇಡಿಯ ಭಾರತವೇ
ತಾಜ್ ಮಹಲ್ ಗೆ ಯಾಕೆ ರಾತ್ರಿಯ ಸಮಯದಲ್ಲಿ ಯಾವುದೇ ದೀಪಗಳನ್ನ ಹಚ್ಚುವುದಿಲ್ಲಾ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಅಲ್ಲಿನ ಸ್ಥಳೀಯ ಜನರು ಹೇಳುವ ಪ್ರಕಾರ ತಾಜ್ ಮಹಲ್ ನಿರ್ಮಾಣ ಮಾಡಿದ ಶಹಜಾನ್ ಪತ್ನಿಯ ಆತ್ಮ ರಾತ್ರಿ ಸಮಯದಲ್ಲಿ ಇಲ್ಲಿ ದೀಪಗಳನ್ನ ಅಂದರೆ ಲೈಟ್ ಗಳನ್ನ ಹಾಕಿದರೆ ಅದನ್ನ ಆ ಆತ್ಮ ಒಡೆದು ಹಾಕುತ್ತದೆ ಅನ್ನುವುದು ಅಲ್ಲಿನ ಸ್ಥಳೀಯ…
ಕೆಲವೊಮ್ಮೆ ಒಳ್ಳೆಯ ವಿಚಾರಗಳಿಂದ ಕೆಟ್ಟ ವಿಚಾರಗಳಿಗೆ ಹೆಚ್ಚಿನ ಮಾನ್ಯತೆ ಹಾಗೂ ಪಬ್ಲಿಸಿಟಿ ಸಿಗುತ್ತದೆ. ಇದೀಗ ಪ್ರಪಂಚದ ಏಳನೇ ಅದ್ಭುತ ಎನ್ನಿಸಿರುವ ದೆಹಲಿಯ ತಾಜ್ಮಹಲ್ ವಿಚಾರದಲ್ಲೂ ಹೀಗೆ ಆಗಿದೆ. ಹೌದು ತಾಜಮಹಲ್ಗಿಂತ ಮುಂಬೈನ ಧಾರವಿ ಸ್ಲಂಗೆ ಹೆಚ್ಚಿನ ಮಹತ್ವ ಸಿಗತೊಡಗಿದ್ದು, ಆ ಬಗ್ಗೆ ಡಿಟೇಲ್ಸ್ ಇಲ್ಲಿದೆ ನೋಡಿ ಹಿಂದೆ ಮುಂಬೈನಲ್ಲಿರುವ ಧಾರವಿ ಸ್ಲಂಗೆ ಜನ ಹೋಗಲು ಹಿಂದೇಟು ಹಾಕುತ್ತಿದ್ದರು. ಆದರೀಗಾ ಇದೇ ಧಾರವಿ ಸ್ಲಂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಹೌದು ತಾಜ್ ಮಹಲ್ ನನ್ನೇ ಸೆಡ್ಡು ಹೊಡೆದು ಕೊಳಚೇರಿ…