ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನರೇಂದ್ರ ಮೋದಿ ಭಾರತದ ನಾಯಕರಾದ ನಂತರ ಬೇರೆ ದೇಶಗಳು ಭಾರತವನ್ನು ನೋಡುವ ರೀತಿ ಈಗ ಬದಲಾಗಿದೆ. ಭಾರತವನ್ನು ತಿರುಕರ ದೇಶ, ಹಾವಾಡಿಗರ ದೇಶ ಎಂದೆಲ್ಲಾ ಹೀಯಾಳಿಸುತ್ತಿದ್ದ ಕಾಲವೊಂದಿತ್ತು. ಆದ್ರೆ ಈಗ ಹಾಗಿಲ್ಲ. ಏಕೆಂದ್ರೆ ಹಿಗಂತೂ ಭಾರತ ಅಭಿವೃದ್ದಿಯತ್ತ ವೇಗವಾಗಿ ದಾಪುಗಾಲಿಡುತ್ತಿದೆ. ಭಾರತದ ನಾಯಕನ ಮಾತಿಗೆ ಬೇರೆ ದೇಶಗಳು ಕೇಳುವ ಹಾಗಿದೆ.

ಒಂದು ಕಾಲದಲ್ಲಿ ನರೇಂದ್ರ ಮೋದಿಯವರಿಗೆ ವೀಸಾ ಕೊಡೋದಿಲ್ಲ ಎಂದು ಹೇಳುತ್ತಿದ್ದ ಜಗತ್ತಿನ ದೊಡ್ಡಣ್ಣ ಅಮೇರಿಕಾ, ಅದೇ ಮೋದಿಯವರನ್ನು ತಾವಾಗೆ ಅಮೆರಿಕಾಕ್ಕೆ ಬೇಟಿ ಕೊಡಿ ಎಂದು ಆಹ್ವಾನಿಸುತ್ತಾರೆ. ಹಾಗೆ ಅಲ್ಲಿಗೆ ಹೋದ ಮೋದಿಯವರಿಗೆ ಅಭೂತಪೂರ್ವ ಸ್ವಾಗತ ಸಿಗುತ್ತೆ. ಮೊದಲಿಗಿಂತಲೂ ಈಗ ಭಾರತ ಅಮೆರಿಕಾದ ಭಾಂದವ್ಯ ಹೆಚ್ಚಾಗಿದೆ.

ಬೇರೆ ದೇಶಗಳು ಹೇಗೆ ಮೋದಿ ಮಾತುಗಳನ್ನು, ಆಜ್ಞೆಯಂತೆ ಪಾಲಿಸುತ್ತವೆ ಎಂಬುದಕ್ಕೆ, ಒಂದು ಉದಾಹರಣೆ ಹೇಳಬೇಕಂದ್ರೆ ಇತ್ತೀಚೆಗಷ್ಟೇ ಸೌದಿ ಅರೇಬಿಯಾ ದೇಶವು ಯೆಮನ್ ದೇಶದ ಮೇಲೆ ಯುದ್ದ ಸಾರಿತ್ತು. ಆಗ ಯೆಮನ್ ದೇಶದಲ್ಲಿರುವ ಭಾರತೀಯರನ್ನು ರಕ್ಷಿಸಲು ಸಚಿವೆ ಸುಶ್ಮಾಸ್ವಾರಜ್’ರವರು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ರು. ಭಾರತೀಯರ ರಕ್ಷಣೆಗಾಗಿ ಮೋದಿಯವರು, ಸೌದಿ ಅರೇಬಿಯಾ ಅಧ್ಯಕ್ಷ ಸಲ್ಮಾನ್ ಬಿನ್ ಅಬ್ದುಲಾಜಿಜ್’ವರೆಗೂ ಫೋನ್ ಕಾಲ್ ಮಾಡಿ, ತಕ್ಷಣವೇ ಯೆಮನ್ ಮೇಲಿನ ಯುದ್ದ ನಿಲ್ಲಿಸಿ, ನಮ್ಮವರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದಾಗ, ಮೋದಿಯವರ ಮಾತಿಗೆ ಎದುರಾಡದ ಸಲ್ಮಾನ್ ಬಿನ್ ಅಬ್ದುಲಾಜಿಜ್ ಯುದ್ದವನ್ನು ನಿಲ್ಲಿಸಿದ್ರು. ಇದು ಜಗತ್ತಿನ ರಾಷ್ಟ್ರಗಳು ಹೇಗೆ ಮೋದಿ ಮಾತಿಗೆ ಗೌರವ ಕೊಡುತ್ತವೆ ಎಂಬುದನ್ನು ಎತ್ತಿ ತೋರಿಸುತ್ತೆ.

ಭಾರತ ದೇಶವು ಕಳೆದೆ ವರ್ಷ ನಡೆದ ಗಡಿ ಕದನದಿಂದ ಏಷಿಯಾದಲ್ಲಿಯೇ ತಾನು ಚೀನಾಕ್ಕಿಂತ ಬಲಶಾಲಿ ಎಂಬುದನ್ನು ಹಲವಾರು ಬಾರಿ ಸಾಬೀತು ಪಡಿಸುತ್ತಾ ಬಂದಿದೆ.ಭಾರತವು ಪಕ್ಕದಲ್ಲಿರುವ ಪಾಪಿ ಪಾಕಿಸ್ತಾನವನ್ನು ಬಿಟ್ಟು, ಚೀನಾಕ್ಕಿಂತಲೂ ಉಳಿದೆಲ್ಲಾ ದೇಶಗಳೊಂದಿಗೆ ಬೆಳೆಸುತ್ತಿರುವ ಭಾಂದವ್ಯ,ಏಷಿಯಾದ ಹಿರಿಯಣ್ಣನಾಗಿ ಅಧಿಕಾರ ಪಡೆಯುವಲ್ಲಿ ಮುನ್ನುಗ್ಗುತ್ತಿದೆ.ಜಪಾನ್, ವಿಯೆಟ್ನಾಮ್, ಕೋರಿಯಾ, ತೈವಾನ್ಗಳನ್ನೆಲ್ಲ ತನ್ನೆಡೆಗೆ ಸೆಳೆದುಕೊಂಡಿರುವ ಭಾರತ, ಟಿಬೆಟ್ನಲ್ಲೂ ಕೈಯ್ಯಾಡಿಸಿ ಶಕುನಿ ಚೀನಾಕ್ಕೆ ಉಸಿರುಗಟ್ಟುವಂತೆ ಮಾಡುತ್ತಿದೆ.
ಮೋದಿ ಸರ್ಕಾರ ಬಂದಾಗಿನಿಂದ ಮೋದಿಯವರು ಬರೀ ಬೇರೆ ದೇಶಗಳನ್ನು ಸುತ್ತುವುದೇ ಆಗಿದೆ ಎಂಬ ಮಾತು ಕೇಳಿಬಂದದ್ದು ಸುಳ್ಳಲ್ಲ. ಆದ್ರೆ ಜಗತ್ತಿನ ಅನೇಕ ದೇಶಗಳನ್ನು ಭೇಟಿ ಮಾಡಿದ ಮೋದಿ ಅವರೊಂದಿಗೆ ಬಹಳ ಗಟ್ಟಿಯಾದ ಬಾಂಧವ್ಯವನ್ನು ಸ್ಥಾಪಿಸಿ ಬಂದಿದ್ದಾರೆ. ಅಮೇರಿಕ, ಜಪಾನ್, ಆಸ್ಟ್ರೇಲಿಯಾ, ಇಸ್ರೇಲ್ಗಳನ್ನೆಲ್ಲ ತಮ್ಮೆಡೆಗೆ ಸೆಳೆದುಕೊಂಡು, ಮುಂಗೋಲಿಯ, ಶ್ರೀಲಂಕಾ, ತೈವಾನ್ಗಳೂ ಚೀನಾ ವಿರುದ್ಧ ತಿರುಗಿ ಬೀಳುವಂತೆ ಮಾಡಿ ಚೀನಾಕ್ಕೆ ಮೋದಿ ಕಂಟಕಪ್ರಾಯವಾಗಿಬಿಟ್ಟಿದ್ದಾರೆ. ಶಕುನಿ ಚೀನಾ ದೇಶವು ಡೋಕ್ಲಾಂನಲ್ಲಿ ನಮ್ಮೆದುರಾಗಿ ನಿಂತು,1962ರ ಯುದ್ಧವನ್ನು ನೆನಪಿಸಿ ಭಾರತೀಯ ಸೈನಿಕರ ಆತ್ಮಸ್ತೈರವನ್ನಕೆಣಕಲು ಪ್ರಯತ್ನಿಸಿತ್ತು. ಆದ್ರೆ ಭಾರತವು ಇದಕ್ಕೆ ಪ್ರತಿಯಾಗಿ ಇದು ಇದು 1962 ಅಲ್ಲ, 2017 ಎಂದಾಗ ಚೀನಾ ದೇಶಕ್ಕೆ ಬಾಲ ಮುದುರಿದ ನಾಯಿಯಂತಾಗಿತ್ತು.
ಆಗ ಮೋದಿ ಅಮೇರಿಕಾ-ಇಸ್ರೇಲ್ ಪ್ರವಾಸದಲ್ಲಿದ್ದರು.ಇನ್ನೇನು ನಾವು ಭಾರತದಲ್ಲಿ ಯುದ್ದ ಮಾಡಿಯೇ ಬಿಡುತ್ತೇವೆ ಎಂಬ ಉತ್ಸಾಹದಲ್ಲಿತ್ತು.ಅದೇ ಟೈಮಿಗೆ ಸರಿಯಾಗಿ ದಕ್ಷಿಣ ಚೀನಾ ಸಮುದ್ರಕ್ಕೆ ಲಗ್ಗೆಯಿಟ್ಟ ಅಮೇರಿಕಾ-ಜಪಾನ್ ದೇಶದ ಹಡಗುಗಳು ಚೀನಾವನ್ನು ನಡುಗುವಂತೆ ಮಾಡಿದವು.ಈ ಹೊತ್ತಲ್ಲಿಯೇ ಭಾರತದ ಪರ ನಿಂತ ತೈವಾನ್ ದೇಶವು ಎಣ್ಣೆ ಬಾವಿ ಕೊರೆಯುವ ಒಪ್ಪಂದವನ್ನು ನವೀಕರಿಸಿ ಚೀನಾ ವಿರುದ್ದ ಸೆಟೆದು ನಿಂತಿತು.ಭಾರತವನ್ನೇ ತನ್ನ ಚಕ್ರವ್ಯೂಹದಲ್ಲಿ ಸಿಕ್ಕಿಸಲು ಹೋರಾಟ ಶಕುನಿ ಚೀನಾ, ತಾನು ಎನೆದ ಚಕ್ರವ್ಯೂಹದಲ್ಲಿ ತಾನೇ ಸಿಕ್ಕಿಹಾಕಿಕೊಂಡಿತ್ತು.

ಜಗತ್ತಿನ ಅನೇಕ ದೇಶಗಳನ್ನು ಸುತ್ತಾಡಿದ್ದ ಮೋದಿ, ತಾನು ಹೋದ ಕಡೆಯೆಲ್ಲಾಲ್ಲಾ ಭಯೋತ್ಪಾದನೆಯ ಕುರಿತಂತೆ ಮಾತನಾಡಿ ಪಾಕಿಸ್ತಾನವನ್ನು ಜಗತ್ತಿನ ಶತ್ರುವನ್ನಾಗಿ ಮಾಡಿಬಿಟ್ಟಿದ್ದರು.ಆದ್ರೆ ಪಾಪಿ ಪಾಕಿಸ್ತಾನವು ತಾನು ಭಯೋತ್ಪಾದನೆಯ ಬೆಂಬಲಿಗನಲ್ಲವೆಂದು ಸಾಬೀತುಪಡಿಸಲು ಹೋಗಿ ಜಗತ್ತಿನ ಮುಂದೆ ತಲೆತಗ್ಗಿಸಬಿಟ್ಟಿತ್ತು.ಇದೆಲ್ಲಾ ಕೇವಲ ಮೋದಿ ತಂತ್ರಗಾರಿಕೆಯಿಂದ ಮಾತ್ರ ಸಾಧ್ಯವಾಯಿತು.ಪಾಕ್ ಪತ್ರಕರ್ತರು, ಟಿವಿ ಚಾನೆಲ್ಲುಗಳು ಮೋದಿ ಪರವಾದ ಮಾತುಗಳನ್ನಾಡಲಾರಂಭಿಸಿದವು. ಇದಕ್ಕೆ ಮತ್ತೊಂದು ಉದಾಹರಣೆಯಾಗಿ ಸಿಕ್ಕಿಹಾಕಿಕೊಂಡಿದ್ದ ಹೆಣ್ಣು ಮಗಳನ್ನು ಬಿಡಿಸಿ ಕ್ಯಾಮೆರಾಕ್ಕೆ ಪೋಸು ಕೊಟ್ಟರು. ಅಲ್ಲಿನ ಮಕ್ಕಳ ಚಿಕಿತ್ಸೆಗಾಗಿ ವೀಸಾ ಕೊಡಿಸಿದರು. ಈ ರಾಜತಾಂತ್ರಿಕ ಸಂಗತಿಗಳನ್ನು ಎಷ್ಟು ಸೂಕ್ಷ್ಮವಾಗಿ ನಿಭಾಯಿಸಲಾಯಿತೆಂದರೆ ಚಿಕಿತ್ಸೆ ಪಡೆದ ಮಗುವಿನ ತಾಯಿ ಪಾಕೀಸ್ತಾನದ ಪ್ರಧಾನಿ ಸುಷ್ಮಾರೇ ಆದರೆ ಚೆನ್ನಾಗಿತ್ತು ಎಂದುಬಿಟ್ಟಿದ್ದರು.

ಭಾರತದ ವಿಶ್ವಸಂಸ್ಥೆಯ ಕಾರ್ಯದರ್ಶಿ ಯೆನಾಮ್ ಗಂಭೀರ್ ಅವರು, “ಪಾಕಿಸ್ತಾನ ಭೌಗೋಳಿಕವಾಗಿ ಉಗ್ರವಾದದ ಸಮನಾರ್ಥಕವಾಗಿ ಗುರುತಿಸಿಕೊಂಡಿದೆ. ಅದೀಗ ”ಟೆರರಿಸ್ಥಾನ್” ಆಗಿದ್ದು, ಉಗ್ರರ ಕಾರ್ಖಾನೆಗಳಲ್ಲಿ ಉಗ್ರರನ್ನು ಉತ್ಪಾದನೆ ಮಾಡಿ ಜಗತ್ತಿಗೆ ರಫ್ತು ಮಾಡುತ್ತಿದೆ. ಒಸಮಾ ಬಿನ್ ಲಾಡೆನ್, ಮುಲ್ಲಾ ಓವರ್ ಗೆ ರಕ್ಷಣೆ ನೀಡಿದ ದೇಶ, 26/11 ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ. ಜಾಗತಿಕ ಉಗ್ರರನ್ನು ಉತ್ಪಾದಿಸುವುದು ಪಾಕಿಸ್ತಾನದ ಮುಖ್ಯ ಗುರಿಯಾಗಿದ್ದು, ಉಗ್ರರಿಗೆ ಸುರಕ್ಷಿತ ತಾಣಗಳನ್ನು ನೀಡುತ್ತಿದೆ. ಉಗ್ರ ಸಂಘಟನೆಗಳ ಮುಖಂಡರು ಪಾಕ್ ಮಿಲಿಟರಿ ಮತ್ತು ರಾಜಕಾರಣಿಗಳೊಂದಿಗೆ ಉತ್ತಮ ನಂಟು ಹೊಂದಿದ್ದಾರೆ” ಎಂದು ಪಾಕ್ ಮಾನ ಹರಾಜು ಹಾಕಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಗಳವಾರ, 03/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಉದ್ಯೋಗಾಕಾಂಕ್ಷಿಗಳಿಗೆ ಸದವಕಾಶ ಒದಗಿ ಬರಲಿದೆ. ಕೂಲವಾದೀತು. ವೃತ್ತಿರಂಗದಲ್ಲಿ ನಿಮ್ಮ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳುವುದು ಅಗತ್ಯವಿದೆ. ವಿಶ್ವಾಸದ ದುರುಪಯೋಗವಾಗುತ್ತದೆ. ಆಗಾಗ ಅಡಚಣೆಗಳಿಂದಲೇ ಕಾರ್ಯಾನು ವೈಯಕ್ತಿಕ ಸಮಸ್ಯೆಗಳು ಬಗೆಹರಿದು ಮನೋಲ್ಲಾಸ ಮೂಡಲಿದೆ. ದಾರ್ಶನಿಕ ಸಂತರ ಸಮಾಗಮದಿಂದ ಆಧ್ಯಾತ್ಮ ಜೀವನಕ್ಕೆ ಹೊಸ ಆಯಾಮ. ವೃಷಭ:- ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರುತ್ಸಾಹ ತಂದೀತು. ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬದ ಬಾಧ್ಯತೆಗಳ ನಿರ್ವಹಣೆ ಸರಾಗ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿವೆ. ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ತೆರೆದುಕೊಳ್ಳಲಿವೆ. ಆರೋಗ್ಯದ…
ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಮೊಬೈಲ್ ಚಾರ್ಜರ್ನ್ನು ಇನ್ನೊಬ್ಬರಿಂದ ಪಡೆಯುವುದು ಸಹಜ. ಇನ್ನೇನು ಸ್ವಿಚ್ ಆಫ್ ಆಗುತ್ತದೆ ಎನ್ನುವ ವೇಳೆ ಇನ್ನೊಬ್ಬರಿಂದ ಚಾರ್ಜರ್ ಕೇಳುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಪಡೆಯುವಾಗ ಎಚ್ಚರದಿಂದ ಇರಿ. ಹೌದು, ಚಾರ್ಜರ್ ಪಡೆಯುವುದರಿಂದ ಏನು ಸಮಸ್ಯೆ ಎಂದು ಯೋಚಿಸುತ್ತಿದ್ದರೆ, ಈ ರೀತಿ ಚಾರ್ಜಿಂಗ್ ಕೇಬಲ್ ಪಡೆಯುವುದರಿಂದಲೂ ಮೊಬೈಲ್ ಗೆ ವೈರಸ್ ಬರುವ ಸಾಧ್ಯತೆಯಿದೆ ಎನ್ನುವ ಆಘಾತಕಾರಿ ವರದಿ ಹೊರ ಬಿದಿದ್ದೆ. ಐಬಿಎಂ ಸೆಕ್ಯುರಿಟಿಯ ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದೆ. ಇನ್ನೊಬ್ಬರ…
ಕರಿಬೇವಿನ ಸೊಪ್ಪು ಅಂದ್ರೆ ಮಹಿಳೆಯರಿಗೆ ವಿಶೇಷ ಪ್ರೀತಿ. ಅವರು ಮಾಡೋ ಅಡುಗೆಗೆ ವಿಶೇಷ ಪರಿಮಳ ನೀಡೋ ಮುಖ್ಯ ಪದಾರ್ಥ ಅದು. ಹೌದು….ಅಡುಗೆಗೆ ವಿಶೇಷ ಮೆರಗು ನೀಡುತ್ತೆ ಕರಿಬೇವು. ಕೇವಲ ಪರಿಮಳಕ್ಕಷ್ಟೇ ಅಲ್ಲ, ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳೂ ಇವೆ. ಕರಿಬೇವು ಕಬ್ಬಿಣದಂಶ ಹಾಗೂ ಪೋಲಿಕ್ ಆಸಿಡ್ ಗಳ ಗುಚ್ಛವೆಂದೇ ಹೇಳಬಹುದು. ರಕ್ತಹೀನತೆಗೂ ಇದು ರಾಮಬಾಣ. ಕರಿಬೇವು ಲಿವರ್ ಗೂ ಒಳ್ಳೆಯದು. ಲಿವರ್ ಹಾಳಾಗದಂತೆ ತಡೆಯುತ್ತದೆ. ಕರಿಬೇವು ಆಂಟಿಬಯಾಟಿಕ್ ಎಂದು ಆಯುರ್ವೇದಲ್ಲಿ ಹೇಳಲಾಗುತ್ತದೆ. ಕರಿಬೇವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ….
ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯಿಂದ ಶಾಲೆಗೆ ಹೋಗುವ ಎಲ್ಲಾ ಮಕ್ಕಳ ಪೋಷಕರಿಗೆ ಸಿಹಿ ಸುದ್ದಿ ಬಂದಿದೆ, ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು ಹೊಸ ಆದೇಶವನ್ನ ಜಾರಿಗೆ ತಂದಿದ್ದು ಇದು ಶಾಲೆಗೆ ಹೋಗುವ ಎಲ್ಲಾ ಮಕ್ಕಳ ಪೋಷಕರಿಗೆ ಸಂತಸವನ್ನ ತಂದಿದೆ. ಹಾಗಾದರೆ ರಾಜ್ಯ ಶಿಕ್ಷಣ ಇಲಾಖೆಯು ಜಾರಿಗೆ ತಂದಿರುವ ಆ ಹೊಸ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ…
ನಮ್ಮ ರುಪಾಯಿ ಮುಂದೆ ಡಾಲರ್ ಮೌಲ್ಯ ಜಾಸ್ತಿ ಇರುವುದರಿಂದ ಅದರ ಬಗ್ಗೆಯೇ ನಮ್ಮಲ್ಲಿ ಚರ್ಚೆ ನಡೆಯುತ್ತದೆ. ಆದರೆ ನಮಗೆ ಗೊತ್ತೇ ಇಲ್ಲದ ವಿಷಯ ಏನಪ್ಪಾ ಅಂದ್ರೆ ಜಗತ್ತಿನಲ್ಲಿ ನಮ್ಮ ದೇಶದ ರುಪಾಯಿಗಿಂತ ಕಡಿಮೆ ಬೆಲೆಯುಳ್ಳ ಕರೆನ್ಸಿ ದೇಶಗಳು ಬಹಳಷ್ಟಿವೆ.
ಕೇದಾರನಾಥ ಗುಹೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ಈಗ ಪ್ರಧಾನಿ ಅವರ ನಡೆಯನ್ನೇ ಇಲ್ಲಿಗೆ ಬರುವ ಯಾತ್ರಿಕರು ಅನುಸರಿಸುತ್ತಿದ್ದಾರೆ.ಹೌದು, ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೂ ಮೊದಲು ಮೇ 18ರಂದು ಮೋದಿ ಅವರು ಕೇದಾರನಾಥದಲ್ಲಿರುವ ಗುಹೆಯಲ್ಲಿ 24 ಗಂಟೆಗಳು ಸುದೀರ್ಘ ಧ್ಯಾನ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದರು. ಹಾಗೆಯೇ ಹಲವರ ಗಮನ ಸೆಳೆದಿದ್ದರು. ಈಗ ಈ ಗುಹೆಯಲ್ಲಿ ಧ್ಯಾನ ಮಾಡಲು ಯಾತ್ರಿಕರು ತಾ ಮುಂದು ನಾ ಮುಂದು ಅಂತ ಮುಗಿಬಿದ್ದಿದ್ದಾರೆ. ಕೇದಾರನಾಥ ಗುಹೆಯಲ್ಲಿ…