ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಂದು ಸೈಕಲ್ ನಲ್ಲಿ ಹಳ್ಳಿ ಹಳ್ಳಿ ತಿರುಗಿ ರೈತರಿಂದ ಹಾಲು ಸಂಗ್ರಹಿಸುತ್ತಿದ್ದ ಇವರು, ಇಂದು 255 ಕೋಟಿ ವಹಿವಾಟಿನ ಒಡೆಯನಾಗಿದ್ದು ಹೇಗೆ ಗೋತ್ತಾ? ಓದಿ ಈ ಸ್ಪೂರ್ತಿದಾಯಕ ಸ್ಟೋರಿಯನ್ನು..!
ಒಂದು ಕಾಲದಲ್ಲಿ ಆರ್ಥಿಕ ಸಂಕಷ್ಟದಿಂದ ತಮ್ಮ ಜೀವನ ನಡೆಸಲು ಆಗದ ಪರಿಸ್ಥಿತಿಯಲ್ಲಿದ್ದ ಇವರು ತನ್ನ ಗ್ರಾಮದಲ್ಲಿ ರೈತರಿಂದ ಹಾಲು ಸಂಗ್ರಹಿಸುವ ಕೆಲಸವನ್ನು ಪ್ರಾರಂಭಿಸುತ್ತಾರೆ. ಅಂದು ಆ ಕೆಲಸವನ್ನು ಮಾಡಲು ಶುರು ಮಾಡಿದ್ದ ಇವರು ೨ದಶಕಗಳ ನಂತರ ೨೫೫ ಕೋಟಿಯ ಒಡೆಯನಾಗಿದ್ದರೆ.

ಹೆಸರು ನಾರಾಯಣ ಮಜುಂದಾರ್ ಇವರು ತಮ್ಮದೇಯಾದ ರೆಡ್ ಕೌ ಡೈರಿ ಪ್ರೈವೇಟ್ ಲಿಮಿಟೆಡ್ ಅನ್ನೋ ಕಂಪನಿಯನ್ನು ಸ್ಥಾಪಿಸಿದ್ದಾರೆ. ಈ ಕಂಪನಿಯು ಭಾರತದ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತಿದೊಡ್ಡ ಸರಬರಾಜುದಾರರಲ್ಲಿ ಒಂದಾಗಿದೆ.
ಇವರ ಕಂಪನಿಯು ಮೊಸರು, ತುಪ್ಪ, ಪನೀರ್ ಮತ್ತು ರಾಸುಗುಲ್ಲಾ ಹೊರತುಪಡಿಸಿ ಐದು ವಿಧದ ಹಾಲುಗಳನ್ನು ಮಾರಾಟ ಮಾಡುತ್ತದೆ.

ಹಾಗು ಇವರ ಕಂಪನಿಯಲ್ಲಿ 1.8 ಲಕ್ಷ ಲೀಟರ್ ಪ್ಯಾಕ್ಡ್ ಹಾಲು, 1.2 ಮೆಟ್ರಿಕ್ ಟನ್ಗಳಷ್ಟು ಪನೀರ್, 10 ಮೆಟ್ರಿಕ್ ಟನ್ಗಳಷ್ಟು ಮೊಸರು , 10-12 ಮೆಟ್ರಿಕ್ ಟನ್ಗಳಷ್ಟು ತುಪ್ಪ, 1,500 ಕ್ಯಾನ್ಗಳ ರಾಸಗುಲ್ಲಾಸ್ ಮತ್ತು 500 ಕ್ಯಾನುಗಳ ಗುಲಾಬ್ ಜಾಮೂನ್ಗಳನ್ನು ಪ್ರತಿ ದಿನವೂ ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ 2017-18ರಲ್ಲಿ ಇವರು 300 ಕೋಟಿ ರೂಪಾಯಿ ವಹಿವಾಟಿನ ಗುರಿ ಹೊಂದಿದ್ದಾರೆ. ಪ್ರಸ್ತುತ ದಿನದಲ್ಲಿ ಆರ್ಥಿಕವಾಗಿ ಅಷ್ಟೆಲ್ಲ ಬೆಳೆದಿದ್ದರು ಸರಳವಾದ ಜೀವನವನ್ನು ನಡೆಸುತ್ತಿದ್ದಾರೆ.

ಜುಲೈ 25, 1958 ರಂದು ಪಶ್ಚಿಮ ಬಂಗಾಳದ ನಾಧಿಯ ಜಿಲ್ಲೆಯ ಫುಲಿಯಾ ಗ್ರಾಮದಲ್ಲಿ ಜನಿಸಿದ ನಾರಾಯಣ್ ಅವರು ಮೂರು ಸಹೋದರರನ್ನು ಹೊಂದಿದ್ದಾರೆ ಮತ್ತು ಇಬ್ಬರು ಸಹೋದರಿಯರಿದ್ದಾರೆ. ಅವರ ತಂದೆ, ಬಿಮಾಂಡು ಮಜುಂದಾರ್ ರೈತರಾಗಿದ್ದರು, ಅವರ ತಾಯಿ ಬಸಂತಿ ಮಜುಂದಾರ್ ಗೃಹಿಣಿಯಾಗಿದ್ದರು.ಇವರ ತಂದೆ ಹಳ್ಳಿಯಲ್ಲಿ ಒಂದು ಎಕರೆ ಭೂಮಿಯನ್ನು ಹೊಂದಿದ್ದನು ಆದರೆ ಕುಟುಂಬವನ್ನು ಚಲಾಯಿಸಲು ಅದು ಸಾಕಾಗಲಿಲ್ಲ” ಎಂದು ನಾರಾಯಣ್ ಹೇಳುತ್ತಾರೆ. ಇವರ ತಂದೆ ಕೆಲವೊಮ್ಮೆ ಚಿಕ್ಕ ಪುಟ್ಟ ಉದ್ಯೋಗವನ್ನು ಮಾಡುತ್ತಿದ್ದರು, ಆದರೆ ನಾನು ಹುಟ್ಟಿದ ಸಮಯದಲ್ಲಿ ಅವರು ತಿಂಗಳಿಗೆ ರೂ 100 ಅಥವಾ ಅದಕ್ಕೂ ಹೆಚ್ಚಿನ ಹಣ ಸಂಪಾದಿಸಲು ಸಾಧ್ಯವಾಗಲಿಲ್ಲ. ಹಣಕಾಸಿನ ಪರಿಸ್ಥಿತಿ ಒತ್ತಡದಿಂದ ಕೂಡಿತ್ತು.

ಇಷ್ಟೆಲ್ಲ ಕಷ್ಟದ ನಡುವೆಯೂ ನಾರಾಯಣ್ ಅವರು ವಿದ್ಯಾಭ್ಯಾಸವನ್ನು ಮಾಡಲು ಮುಂದಾಗುತ್ತಾರೆ. ರಣಘಾಟ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ತಮ್ಮ ಪದವಿಯನ್ನು ಪ್ರಾರಂಭಿಸಿದರು ಆದರೆ ಒಂದು ವರ್ಷದಲ್ಲಿ ಆಸಕ್ತಿ ಕಳೆದುಕೊಂಡರು. ನಾನು ಉದ್ಯೋಗವನ್ನು ಮಾಡಬೇಕೆಂದು.ಇವರ ಊರಿನ ಜಾನುವಾರು ಅಧಿಕಾರಿ ಒಬ್ಬರು ರಸಾಯನಶಾಸ್ತ್ರ ಪದವಿಗೆ ಬದಲಾಗಿ ಡೈರಿ ಫಾರ್ಮ್ನಲ್ಲಿ ಕೋರ್ಸ್ ಮಾಡಿದರೆ ಬಹು ಬೇಗ ಕೆಲಸವನ್ನು ಪಡೆಯ ಬಹುದು ಎಂದು ಸಲಹೆ ನೀಡುತ್ತಾರೆ. ಅವರ ಸಲಹೆಯನ್ನು ಇಷ್ಟ ಪಟ್ಟು ಆ ಕೋರ್ಸನ್ನು ಮಾಡಲು ನಿರ್ಧರಿಸುತ್ತಾರೆ.

1975 ರಲ್ಲಿ, ಅವರು ಡೈರಿ ಟೆಕ್ನಾಲಜಿಯಲ್ಲಿ ಬಿ.ಟೆಕ್ ಅನ್ನು ಹರಿಯಾಣದ ಕರ್ನಾಲ್ನ ರಾಷ್ಟ್ರೀಯ ಡೈರಿ ಇನ್ಸ್ಟಿಟ್ಯೂಟ್ನಲ್ಲಿ ಪ್ರಾರಂಭಿಸಿದರು. ಇದು ನಾಲ್ಕು ವರ್ಷಗಳ ಕೋರ್ಸ್ ಆಗಿತ್ತು. ತಮ್ಮ ಜೀವನ ವೆಚ್ಚಗಳಿಗೆ ಹಣ ಬೇಕಾಗುವ ಸಲುವಾಗಿ 5 ರಿಂದ 7 ರವರೆಗೆ ಹಾಲಿನಡೈರಿಯಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.
ನಾರಾಯಣ್ ಅವರು ತಮ್ಮ ಜೀವನದ ಹಾದಿಯ ಕುರಿತು ಹೇಳುವ ಮಾತುಗಳು
“ನನ್ನ ತಂದೆ ಸುಮಾರು 12,000 ರೂಪಾಯಿಗಳ ಕೋರ್ಸ್ ಶುಲ್ಕವನ್ನು ಪಾವತಿಸಲು ತನ್ನ ಭೂಮಿಯನ್ನು ಈಗಾಗಲೇ ಮಾರಾಟ ಮಾಡಿದ್ದರಿಂದ ನನ್ನ ದಿನನಿತ್ಯದ ಖರ್ಚುಗಳಿಗಾಗಿ ನಾನು ಕೆಲಸ ಮಾಡಲು ಪ್ರಾರಂಭಿಸಿದ್ದೆ.”

ಬೇರೆ ಬೇರೆ ಕಂಪೆನಿಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಿ ಅನುಬವನ್ನು ಪಡೆದರು ಕಾಲ ಕ್ರಮೇಣ ತಿಂಗಳಿಗೆ ರೂ 50,000 ರ ವೇತನದೊಂದಿಗೆ ಜನರಲ್ ಮ್ಯಾನೇಜರ್ ಆಗಿ ಮತ್ತೊಂದು ಡೈರಿ ಸಂಸ್ಥೆಯೊಂದನ್ನು ಸೇರಿಕೊಂಡರು. ಈ ಕಂಪನಿಯು ಹಾಲು ಮತ್ತು ಹಾಲು ಉತ್ಪನ್ನಗಳನ್ನು ತಯಾರಿಸಿತು, ಮತ್ತು ಅವರು 2005 ರವರೆಗೆ 10 ವರ್ಷಗಳವರೆಗೆ ಅವರೊಂದಿಗೆ ಕೆಲಸ ಮಾಡಿದರು.

ಆ ಕಂಪನಿಯ ಮಾಲೀಕರು ಇವರಿಗೆ ಸ್ವಂತ ವ್ಯವಹಾರವನ್ನು ಆರಂಭಿಸಲು ಪ್ರೋತ್ಸಾಹಿಸಿದರು. ಮುಖ್ಯವಾಗಿ ಅವರ ಪ್ರೋತ್ಸಾಹ ಮತ್ತು ಪ್ರೇರಣೆ ಇವರ ಯಶಸ್ಸಿಗೆ ಕಾರಣ ಅನ್ನುತ್ತಾರೆ. ಹಾಗೆ ತಮ್ಮ ಸ್ವಂತ ವ್ಯವಹಾರವನ್ನು ಪ್ರಾಂಭಿಸಿ ಮಾರುಕಟ್ಟೆಯಲ್ಲಿ ಇವ್ರ ಉದ್ಯಮ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಕಷ್ಟ ಪಟ್ಟರೆ ಆ ಭಗವಂತ ಅದಕ್ಕೆ ಸರಿಯಾದ ಪ್ರತಿ ಫಲ ಕೊಡುತ್ತಾನೆ ಅನ್ನೋದಕ್ಕೆ ಇವರು ಉದಾಹರಣೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಒಂದು ವೇಳೆ ಟೆನ್ಶನ್ನಿಂದ ತುಂಬಿದ ಜೀವನ ಸಾಗಿಸುತ್ತಿದ್ದೀರಿ ಎಂದಾದರೆ ನಿಮ್ಮ ಎಲ್ಲಾ ಆಲೋಚನೆಗಳ ಬಗ್ಗೆ ನೀವು ಮತ್ತೆ ವಿಚಾರಣೆ ನಡೆಸಬೇಕು. ಯಾಕೆಂದರೆ ನೀವು ವಿಪರೀತ ಟೆನ್ಶನ್ನಲ್ಲಿ ಇದ್ದರೆ , ಅದರಿಂದ ನೀವು ಹೊರ ಬರಲು ಇಷ್ಟಪಡದೆ ಇದ್ದರೆ ಮುಂದೆ ಗಂಭೀರ ಸಮಸ್ಯೆಯನ್ನುಂಟು ಮಾಡುತ್ತದೆ.
ಚಂದನವನದ ನಟ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ, ಬುಲ್ಡೋಜರ್ಸ್ ತಂಡದ ಖ್ಯಾತ ಆಟಗಾರ ಧ್ರುವ ಶರ್ಮಾ ನಿಧನರಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಜನರ ನಗದು ಚಲಾವಣೆಯನ್ನು ಸುಲಭವಾಗಿಸಲು 200 ರೂಪಾಯಿಯ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿವೆ. 200 ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ಭಾರತ ಮತ್ತು ಚೀನಾಗಳ ನಡುವಿನ ರಾಜಕೀಯ ಪರಿಸ್ತಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು ಯುದ್ದದ ಕಾರ್ಮೋಡದ ಛಾಯೆ ಉಭಯ ದೇಶಗಳ ಮೇಲೆ ಕಾಡುತ್ತಿದೆ.
ಅಳು ಹುಟ್ಟಿನಿಂದಲೇ ನಮ್ಮ ಸಂಗಾತಿ, ನಾವು ಮಕ್ಕಳಾಗಿದ್ದಾಗ ನಮ್ಮ ಭಾವನಾತ್ಮಕ, ಶಾರೀರಿಕ ಅವಶ್ಯಕತೆಗಳಿಗಾಗಿ ಅಳುತ್ತಿದ್ದೆವು, ಇನ್ನು ಭಾವನಾತ್ಮಕ ಕಣ್ಣೀರು ಉಕ್ಕಿ ಬರಲು ಅನೇಕ ಕಾರಣಗಳಿವೆ. ದುಃಖ, ನಿರಾಶೆ, ದೈಹಿಕ ಅಥವಾ ಮಾನಸಿಕ ವೇದನೆ ಇವೆಲ್ಲಾ ನಾವು ಕಣ್ಣೀರಿಡುವಂತೆ ಮಾಡುತ್ತವೆ, ಸಂತೋಷ, ಸಮಾಧಾನ, ಸಾಧನೆಯಂಥ ಸನ್ನಿವೇಶಗಳು ಕೂಡ ಭಾವನಾತ್ಮಕ ಕಣ್ಣೀರು ಬರಿಸುತ್ತವೆ, ಆದರೆ ಇವು ಆನಂದಬಾಷ್ಪಗಳು. ಕೆಲವೊಮ್ಮೆ ಒಬ್ಬರು ಅಳುವುದನ್ನು ನೋಡಿ ಇನ್ನೊಬ್ಬರಿಗೆ ಕಣ್ಣೀರು ಬರುತ್ತದೆ, ನಿಮಗೆ ಗೊತ್ತಿರಲು ಸಾಧ್ಯವಿಲ್ಲ ಅಳುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ, ಅಮೆಕದ ವಿಜ್ಞಾನಿಗಳು…
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ…