ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಂದು ಸೈಕಲ್ ನಲ್ಲಿ ಹಳ್ಳಿ ಹಳ್ಳಿ ತಿರುಗಿ ರೈತರಿಂದ ಹಾಲು ಸಂಗ್ರಹಿಸುತ್ತಿದ್ದ ಇವರು, ಇಂದು 255 ಕೋಟಿ ವಹಿವಾಟಿನ ಒಡೆಯನಾಗಿದ್ದು ಹೇಗೆ ಗೋತ್ತಾ? ಓದಿ ಈ ಸ್ಪೂರ್ತಿದಾಯಕ ಸ್ಟೋರಿಯನ್ನು..!
ಒಂದು ಕಾಲದಲ್ಲಿ ಆರ್ಥಿಕ ಸಂಕಷ್ಟದಿಂದ ತಮ್ಮ ಜೀವನ ನಡೆಸಲು ಆಗದ ಪರಿಸ್ಥಿತಿಯಲ್ಲಿದ್ದ ಇವರು ತನ್ನ ಗ್ರಾಮದಲ್ಲಿ ರೈತರಿಂದ ಹಾಲು ಸಂಗ್ರಹಿಸುವ ಕೆಲಸವನ್ನು ಪ್ರಾರಂಭಿಸುತ್ತಾರೆ. ಅಂದು ಆ ಕೆಲಸವನ್ನು ಮಾಡಲು ಶುರು ಮಾಡಿದ್ದ ಇವರು ೨ದಶಕಗಳ ನಂತರ ೨೫೫ ಕೋಟಿಯ ಒಡೆಯನಾಗಿದ್ದರೆ.

ಹೆಸರು ನಾರಾಯಣ ಮಜುಂದಾರ್ ಇವರು ತಮ್ಮದೇಯಾದ ರೆಡ್ ಕೌ ಡೈರಿ ಪ್ರೈವೇಟ್ ಲಿಮಿಟೆಡ್ ಅನ್ನೋ ಕಂಪನಿಯನ್ನು ಸ್ಥಾಪಿಸಿದ್ದಾರೆ. ಈ ಕಂಪನಿಯು ಭಾರತದ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತಿದೊಡ್ಡ ಸರಬರಾಜುದಾರರಲ್ಲಿ ಒಂದಾಗಿದೆ.
ಇವರ ಕಂಪನಿಯು ಮೊಸರು, ತುಪ್ಪ, ಪನೀರ್ ಮತ್ತು ರಾಸುಗುಲ್ಲಾ ಹೊರತುಪಡಿಸಿ ಐದು ವಿಧದ ಹಾಲುಗಳನ್ನು ಮಾರಾಟ ಮಾಡುತ್ತದೆ.

ಹಾಗು ಇವರ ಕಂಪನಿಯಲ್ಲಿ 1.8 ಲಕ್ಷ ಲೀಟರ್ ಪ್ಯಾಕ್ಡ್ ಹಾಲು, 1.2 ಮೆಟ್ರಿಕ್ ಟನ್ಗಳಷ್ಟು ಪನೀರ್, 10 ಮೆಟ್ರಿಕ್ ಟನ್ಗಳಷ್ಟು ಮೊಸರು , 10-12 ಮೆಟ್ರಿಕ್ ಟನ್ಗಳಷ್ಟು ತುಪ್ಪ, 1,500 ಕ್ಯಾನ್ಗಳ ರಾಸಗುಲ್ಲಾಸ್ ಮತ್ತು 500 ಕ್ಯಾನುಗಳ ಗುಲಾಬ್ ಜಾಮೂನ್ಗಳನ್ನು ಪ್ರತಿ ದಿನವೂ ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ 2017-18ರಲ್ಲಿ ಇವರು 300 ಕೋಟಿ ರೂಪಾಯಿ ವಹಿವಾಟಿನ ಗುರಿ ಹೊಂದಿದ್ದಾರೆ. ಪ್ರಸ್ತುತ ದಿನದಲ್ಲಿ ಆರ್ಥಿಕವಾಗಿ ಅಷ್ಟೆಲ್ಲ ಬೆಳೆದಿದ್ದರು ಸರಳವಾದ ಜೀವನವನ್ನು ನಡೆಸುತ್ತಿದ್ದಾರೆ.

ಜುಲೈ 25, 1958 ರಂದು ಪಶ್ಚಿಮ ಬಂಗಾಳದ ನಾಧಿಯ ಜಿಲ್ಲೆಯ ಫುಲಿಯಾ ಗ್ರಾಮದಲ್ಲಿ ಜನಿಸಿದ ನಾರಾಯಣ್ ಅವರು ಮೂರು ಸಹೋದರರನ್ನು ಹೊಂದಿದ್ದಾರೆ ಮತ್ತು ಇಬ್ಬರು ಸಹೋದರಿಯರಿದ್ದಾರೆ. ಅವರ ತಂದೆ, ಬಿಮಾಂಡು ಮಜುಂದಾರ್ ರೈತರಾಗಿದ್ದರು, ಅವರ ತಾಯಿ ಬಸಂತಿ ಮಜುಂದಾರ್ ಗೃಹಿಣಿಯಾಗಿದ್ದರು.ಇವರ ತಂದೆ ಹಳ್ಳಿಯಲ್ಲಿ ಒಂದು ಎಕರೆ ಭೂಮಿಯನ್ನು ಹೊಂದಿದ್ದನು ಆದರೆ ಕುಟುಂಬವನ್ನು ಚಲಾಯಿಸಲು ಅದು ಸಾಕಾಗಲಿಲ್ಲ” ಎಂದು ನಾರಾಯಣ್ ಹೇಳುತ್ತಾರೆ. ಇವರ ತಂದೆ ಕೆಲವೊಮ್ಮೆ ಚಿಕ್ಕ ಪುಟ್ಟ ಉದ್ಯೋಗವನ್ನು ಮಾಡುತ್ತಿದ್ದರು, ಆದರೆ ನಾನು ಹುಟ್ಟಿದ ಸಮಯದಲ್ಲಿ ಅವರು ತಿಂಗಳಿಗೆ ರೂ 100 ಅಥವಾ ಅದಕ್ಕೂ ಹೆಚ್ಚಿನ ಹಣ ಸಂಪಾದಿಸಲು ಸಾಧ್ಯವಾಗಲಿಲ್ಲ. ಹಣಕಾಸಿನ ಪರಿಸ್ಥಿತಿ ಒತ್ತಡದಿಂದ ಕೂಡಿತ್ತು.

ಇಷ್ಟೆಲ್ಲ ಕಷ್ಟದ ನಡುವೆಯೂ ನಾರಾಯಣ್ ಅವರು ವಿದ್ಯಾಭ್ಯಾಸವನ್ನು ಮಾಡಲು ಮುಂದಾಗುತ್ತಾರೆ. ರಣಘಾಟ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ತಮ್ಮ ಪದವಿಯನ್ನು ಪ್ರಾರಂಭಿಸಿದರು ಆದರೆ ಒಂದು ವರ್ಷದಲ್ಲಿ ಆಸಕ್ತಿ ಕಳೆದುಕೊಂಡರು. ನಾನು ಉದ್ಯೋಗವನ್ನು ಮಾಡಬೇಕೆಂದು.ಇವರ ಊರಿನ ಜಾನುವಾರು ಅಧಿಕಾರಿ ಒಬ್ಬರು ರಸಾಯನಶಾಸ್ತ್ರ ಪದವಿಗೆ ಬದಲಾಗಿ ಡೈರಿ ಫಾರ್ಮ್ನಲ್ಲಿ ಕೋರ್ಸ್ ಮಾಡಿದರೆ ಬಹು ಬೇಗ ಕೆಲಸವನ್ನು ಪಡೆಯ ಬಹುದು ಎಂದು ಸಲಹೆ ನೀಡುತ್ತಾರೆ. ಅವರ ಸಲಹೆಯನ್ನು ಇಷ್ಟ ಪಟ್ಟು ಆ ಕೋರ್ಸನ್ನು ಮಾಡಲು ನಿರ್ಧರಿಸುತ್ತಾರೆ.

1975 ರಲ್ಲಿ, ಅವರು ಡೈರಿ ಟೆಕ್ನಾಲಜಿಯಲ್ಲಿ ಬಿ.ಟೆಕ್ ಅನ್ನು ಹರಿಯಾಣದ ಕರ್ನಾಲ್ನ ರಾಷ್ಟ್ರೀಯ ಡೈರಿ ಇನ್ಸ್ಟಿಟ್ಯೂಟ್ನಲ್ಲಿ ಪ್ರಾರಂಭಿಸಿದರು. ಇದು ನಾಲ್ಕು ವರ್ಷಗಳ ಕೋರ್ಸ್ ಆಗಿತ್ತು. ತಮ್ಮ ಜೀವನ ವೆಚ್ಚಗಳಿಗೆ ಹಣ ಬೇಕಾಗುವ ಸಲುವಾಗಿ 5 ರಿಂದ 7 ರವರೆಗೆ ಹಾಲಿನಡೈರಿಯಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.
ನಾರಾಯಣ್ ಅವರು ತಮ್ಮ ಜೀವನದ ಹಾದಿಯ ಕುರಿತು ಹೇಳುವ ಮಾತುಗಳು
“ನನ್ನ ತಂದೆ ಸುಮಾರು 12,000 ರೂಪಾಯಿಗಳ ಕೋರ್ಸ್ ಶುಲ್ಕವನ್ನು ಪಾವತಿಸಲು ತನ್ನ ಭೂಮಿಯನ್ನು ಈಗಾಗಲೇ ಮಾರಾಟ ಮಾಡಿದ್ದರಿಂದ ನನ್ನ ದಿನನಿತ್ಯದ ಖರ್ಚುಗಳಿಗಾಗಿ ನಾನು ಕೆಲಸ ಮಾಡಲು ಪ್ರಾರಂಭಿಸಿದ್ದೆ.”

ಬೇರೆ ಬೇರೆ ಕಂಪೆನಿಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಿ ಅನುಬವನ್ನು ಪಡೆದರು ಕಾಲ ಕ್ರಮೇಣ ತಿಂಗಳಿಗೆ ರೂ 50,000 ರ ವೇತನದೊಂದಿಗೆ ಜನರಲ್ ಮ್ಯಾನೇಜರ್ ಆಗಿ ಮತ್ತೊಂದು ಡೈರಿ ಸಂಸ್ಥೆಯೊಂದನ್ನು ಸೇರಿಕೊಂಡರು. ಈ ಕಂಪನಿಯು ಹಾಲು ಮತ್ತು ಹಾಲು ಉತ್ಪನ್ನಗಳನ್ನು ತಯಾರಿಸಿತು, ಮತ್ತು ಅವರು 2005 ರವರೆಗೆ 10 ವರ್ಷಗಳವರೆಗೆ ಅವರೊಂದಿಗೆ ಕೆಲಸ ಮಾಡಿದರು.

ಆ ಕಂಪನಿಯ ಮಾಲೀಕರು ಇವರಿಗೆ ಸ್ವಂತ ವ್ಯವಹಾರವನ್ನು ಆರಂಭಿಸಲು ಪ್ರೋತ್ಸಾಹಿಸಿದರು. ಮುಖ್ಯವಾಗಿ ಅವರ ಪ್ರೋತ್ಸಾಹ ಮತ್ತು ಪ್ರೇರಣೆ ಇವರ ಯಶಸ್ಸಿಗೆ ಕಾರಣ ಅನ್ನುತ್ತಾರೆ. ಹಾಗೆ ತಮ್ಮ ಸ್ವಂತ ವ್ಯವಹಾರವನ್ನು ಪ್ರಾಂಭಿಸಿ ಮಾರುಕಟ್ಟೆಯಲ್ಲಿ ಇವ್ರ ಉದ್ಯಮ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಕಷ್ಟ ಪಟ್ಟರೆ ಆ ಭಗವಂತ ಅದಕ್ಕೆ ಸರಿಯಾದ ಪ್ರತಿ ಫಲ ಕೊಡುತ್ತಾನೆ ಅನ್ನೋದಕ್ಕೆ ಇವರು ಉದಾಹರಣೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವರ್ಷಗಳ ಕಾಲ ಪ್ರೀತಿ ಮಾಡಿದ ಹುಡುಗಿಯರು ಮದುವೆ ವಿಚಾರ ಬಂದಾಗ ತಮ್ಮ ಮನಸ್ಸನ್ನು ಬದಲಿಸ್ತಾರೆ. ಪ್ರೀತಿಸಿದ ಅದೆಷ್ಟೋ ಹುಡುಗಿಯರು ಬಾಯ್ ಫ್ರೆಂಡ್ ಬಿಟ್ಟು ಬೇರೆ ಹುಡುಗನ ಕೈ ಹಿಡಿತಾರೆ. ಅಷ್ಟಕ್ಕೂ ಹುಡುಗಿಯರು ಯಾಕೆ ಹೀಗೆ ಮಾಡ್ತಾರೆ ಎಂಬ ಪ್ರಶ್ನೆ ಹುಡುಗರನ್ನು ಕಾಡದೆ ಇರುವುದಿಲ್ಲ. ಮಹಿಳೆಯರು ಎಷ್ಟು ಮುಂದುವರೆದಿದ್ದರು ತಂದೆ-ತಾಯಿ ಪ್ರೀತಿ, ಭಯ ಅವರನ್ನು ಕಾಡುತ್ತದೆ. ಪ್ರೀತಿಸಿದ ಹುಡುಗನಿಗೆ ಪಾಲಕರು ಒಲ್ಲೆ ಎಂದ್ರೆ ಭಯ ಅವ್ರನ್ನು ಕಾಡುತ್ತದೆ. ತಂದೆ-ತಾಯಿಗೆ ನೋವು ನೀಡಲು ಮನಸ್ಸು ಮಾಡದ ಹುಡುಗಿಯರು ಪ್ರೇಮಿಯಿಂದ ದೂರ…
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಲು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭೇಟಿ ಮಾಡಿದ್ದಾರೆ. ರತನ್, ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಚಿಕ್ಕವಯಸ್ಸಿನಲ್ಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ದರ್ಶನ್ ಅವರನ್ನು ನೋಡುವುದು ರತನ್ನ ಬಹುದಿನದ ಆಸೆ ಆಗಿದ್ದು. ಒಂದೇ ಒಂದು ಬಾರಿ ದರ್ಶನ್ ಅವರನ್ನು ನೋಡಬೇಕೆಂದು ರತನ್ ತುಂಬಾ ಹಂಬಲಿಸುತ್ತಿದ್ದನು. ಈ ವಿಷಯ ತಿಳಿದ ದರ್ಶನ್, ರತನ್ ಕುಟುಂಬವನ್ನು ಹಾಸನದಿಂದ ಬೆಂಗಳೂರಿಗೆ ಕರೆಸಿಕೊಂಡರು. ಬಳಿಕ ರತನ್ ದರ್ಶನ್ ಅವರನ್ನು ಭೇಟಿ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾನೆ….
ಕೋಲಾರ: ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಚಲನಚಿತ್ರದ ಪ್ರಚಾರಕ್ಕಾಗಿ ಭಾನುವಾರ ಕೋಲಾರ ನಗರಕ್ಕೆ ಆಗಮಿಸಿದ ದುನಿಯಾ ವಿಜಿ ಮತ್ತು ಚಿತ್ರದ ನಿರ್ದೇಶದ ಗೋಪಿಚಂದ್ ಮಲಿನೇನಿ ಅವರಿಗೆ ಎನ್ಬಿಕೆ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ವೀರಸಿಂಹಾರೆಡ್ಡಿ ಚಿತ್ರದ ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ಜಗನ್ ಶನಿವಾರ ರಾತ್ರಿಯೇ ಕೋಲಾರಕ್ಕೆ ಆಗಮಿಸಿ ನಗರದ ಹೊರವಲಯದ ನಾಗಾರ್ಜುನ ಹೋಟೆಲ್ನಲ್ಲಿ ವಾಸ್ತವ್ಯಹೂಡಿದ್ದರು. ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ದುನಿಯಾ ವಿಜಿ ಅವರನ್ನು ಸೇರಿಕೊಂಡರು. ಉಪಹಾರದ ನಂತರ ಇವರನ್ನು ಕೋಲಾರದ…
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ಆಹಾರದ ಸ್ವಾದ…
ಅನೇಕ ಜನರಿಗೆ ಜೀನ್ಸ್ ಅಂದ್ರೆ ಇಷ್ಟ. ಅವರ ಕಪಾಟಿನಲ್ಲಿ ಜೀನ್ಸ್ ಸಂಖ್ಯೆಯೇ ಜಾಸ್ತಿ ಇರುತ್ತೆ. ಜೀನ್ಸ್ ಆರಾಮದಾಯಕ ಹಾಗೂ ಅದು ಅಷ್ಟು ಬೇಗ ಕೊಳಕಾಗುವುದಿಲ್ಲ. ಹಾಗಾಗಿ ಒಂದೇ ಜೀನ್ಸ್ ಪ್ಯಾಂಟನ್ನು ತೊಳೆಯದೆ ಪದೇ ಪದೇ ಧರಿಸಬಹುದು. ಆದ್ರೆ ಈ ಜೀನ್ಸ್ ತೊಳೆಯೋದು ಮಾತ್ರ ಕಷ್ಟದ ಕೆಲಸ. ಕೆಲಮೊಮ್ಮೆ ನಾವು ಮಾಡುವ ತಪ್ಪಿನಿಂದ ಜೀನ್ಸ್ ಬಣ್ಣ ಬೇಗ ಮಾಸುತ್ತದೆ. ಹರಿದು ಹೋಗುವ ಛಾನ್ಸ್ ಕೂಡ ಇದೆ. ನಾವು ಹೇಳುವ ಉಪಾಯ ಅನುಸರಿಸಿದ್ರೆ ಜೀನ್ಸ್ ಬಣ್ಣವನ್ನು ಹಾಗೇ ಉಳಿಸಿಕೊಂಡು ಹೋಗಬಹುದು.ನೀವು…
ಜಗತ್ತಿನಲ್ಲಿ ಎಂತಹ ವಿಚಿತ್ರ ಜನಗಳಿರುತ್ತಾರೆ ಎಂದ್ರೆ ಯಾವಾಗ ಏನ್ ಮಾಡ್ತಾರೆ ಅಂತ ಸ್ವತಃ ಅವರಿಗೆ ಗೊತ್ತಿರುವುದಿಲ್ಲ. ಯಾಕೆಂದ್ರೆ ನಮ್ಮ ದೇಶದಲ್ಲಿ ಈಗಾಗಲೇ ಕ್ಯಾಶ್ ಲೆಸ್ ವ್ಯವಹಾರ ನಡೆಯುತ್ತಿದೆ. ಆದರೆ ಚೀನಾದಲ್ಲಿ ಮಹಿಳೆಯೊಬ್ಬರು ಕಾರೊಂದೊನ್ನು ಖರೀದಿಸಲು ಚೀಲದ ತುಂಬಾ ಹಣ ತುಂಬಿಕೊಂಡು ಹೋಗಿದ್ದಾರೆ.