ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಗೃಹ ಉಪಯೋಗಿ ವಸ್ತುಗಳಲ್ಲಿ ತುಂಬಾನೇ ಹಾನಿ ಉಂಟುಮಾಡೋ, ನಮ್ಮ ಆರೋಗ್ಯದಮೇಲೆ ಕೆಟ್ಟ ಪರಿಣಾಮ ಬೀರೋ ಪದಾರ್ಥಗಳು ಇರುತ್ತೆ. ಈ ವಸ್ತುಗಳನ್ನ ಪದೇ ಪದೇ ಬಳಸೋದ್ರಿಂದ ಒಂದಲ್ಲ ಒಂದು ರೀತಿಯ ಕ್ಯಾನ್ಸರ್ ಉಂಟುಮಾಡೋ ಈ ಪದಾರ್ಥಗಳು ನಮ್ಮ ದೇಹ ಸೇರಿಕೊಳುತ್ತೆ. ಅಂತಹ ಕೆಲವು ಪದಾರ್ಥಗಳ ಪಟ್ಟಿ ಇಲ್ಲಿದೆ.

1.ಏರ್ ಫ್ರೆಶ್ನೆರ್:-
ಈ ಏರ್ ಫ್ರೆಶ್ನೆರ್ ಸ್ಪ್ರೇ, ಜೆಲ್ ಹೀಗೆ ಬೇರೆ ಬೇರೆ ರೂಪದಲ್ಲಿ ಸಿಗುತ್ತೆ. ಮನೆ ಒಳಗೆ, ಕಾರ್ ಒಳಗೆ ಘಮ ಘಮ ಅನ್ಲಿ ಅಂತ ಸಾಮಾನ್ಯವಾಗಿ ಇದನ್ನ ಬಳಸ್ತಾರೆ. ಇದ್ರಲ್ಲಿ ನಮ್ಮ ದೇಹಕ್ಕೆ ಹಾನಿ ಮಾಡೋ ವಿಷಾದ ಅಂಶ ಇರುತ್ತೆ.

ಅದ್ರಲ್ಲಿರೋ ಪಾಥಲಾಟ್ಸ್ ಅನ್ನೋ ಪದಾರ್ಥದಿಂದ ನಮ್ಮ ಸಂತಾನೋತ್ಪತ್ತಿ ಶಕ್ತಿಯನ್ನ ಹಾಳುಮಾಡೊದಲ್ದೆ ಅಸ್ತಮಾದಂತಹ ಕಾಯಿಲೆ ಗಂಭೀರ ರೂಪ ಪಡೆಯೋಹಾಗೆ ಮಾಡುತ್ತೆ.
2.ಸುವಾಸನೆಭರಿತ ಮೇಣದ ಬತ್ತಿ:-
ಈ ಸುವಾಸನೆಭರಿತ ಮೇಣದ ಬತ್ತಿ ಸಾಮಾನ್ಯವಾಗಿ ಎಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ, ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ, ಹಬ್ಬದಲ್ಲಿ ಹೀಗೆ ಹಲವಾರು ಸಲ ಇದನ್ನ ಉಪಯೋಗಿಸ್ತೀವಿ. ಕೆಲವೊಬ್ರು ಬೇರೆ ಫ್ರೆಶ್ನೆರ್ಗೆ ನೋಡಿದ್ರೆ ಇದು ಸ್ವಲ್ಪ ಕಡಿಮೆ ಬೆಲೆಗೆ ಸಿಗೋದ್ರಿಂದ ಇದನ್ನ ಬಚ್ಚಲಮನೇಲೇ ಇತ್ತು ಅಲ್ಲಿನ ವಾಸನೆ ಹೋಗಿಸೋದಕ್ಕೆ ಉಪಯೋಗಿಸ್ತಾರೆ.

ಇದ್ರಲ್ಲೂ ಕೂಡ ವಿಷಪದಾರ್ಥ ಇರಬಹುದು, ಯಾಕೆ ಅಂದ್ರೆ ಬಹಳಷ್ಟು ಜನ ಇದರ ಬತ್ತಿಯನ್ನ ಸೀಸದಿಂದ ಮಾಡಿರ್ತಾರೆ., ಒಂದುಸಲ ನೋಡ್ಕೊಳೋದು ಒಳ್ಳೇದು. ಹೇಗೆ ಪರೀಕ್ಷೆ ಮಾಡೋದು ಅಂದ್ರ ? ಒಂದು ಬಿಳಿ ಪೇಪರ್ ತೊಗೊಂಡು ಆ ಕ್ಯಾಂಡೆಲ್ನ ಬತ್ತಿ ತುದಿಯಿಂದ ಒಂದು ಲೈನ್ ಬರೆದಹಾಗೆ ಮಾಡಿ, ನಿಮಗೆ ಯಾವುದೇ ಲೈನ್ ಕಾಣಿಸಲಿಲ್ಲ ಅಂದ್ರೆ ಸೀಸ ಇಲ್ಲ ಅಂತ. ಅಕಸ್ಮಾತ್ ಲೈನ್ ಕಾಣಿಸಿದ್ರೇ ಇದ್ರಲ್ಲಿ ವಿಷಪದಾರ್ಥಗಳು ಇರೋದು ಗ್ಯಾರಂಟಿ.
3.ಬಚ್ಚಲುಮನೆಯ ಕರ್ಟನ್:-
ಇತ್ತೀಚಿನ ದಿನಗಳಲ್ಲಿ ಬಚ್ಚುಲು ಮನೇಲಿ ಶವರ್ ಇದ್ದೆ ಇರುತ್ತೆ. ತುಂಬಾ ಮನೆಗಳಲ್ಲಿ ಈ ಶವರ್ನಲ್ಲಿ ಸ್ನಾನ ಮಾಡೋವಾಗ ನೀರು ಹಾರದೆ ಇರೋ ಹಾಗೆ ಕರ್ಟನ್ ಹಾಕ್ತಾರೆ. ಈ ಕರ್ಟನ್ ನಲ್ಲಿ ಪ್ಲಾಸ್ಟಿಕ್ ಹಾಗೂ PVC ಇರುತ್ತೆ. ಈ ಕಾರ್ಸಿನೋಜೆನಿಕ್ ಅನ್ನೋ ವಿಷಕಾರಿ ಪದಾರ್ಥನ ಹೊರ ಹಾಕುತ್ತೆ.

ಇದು ಪರಿಸರಕ್ಕೂ ತುಂಬಾ ಹಾನಿಮಾಡುತ್ತೆ. ಬಿಸಿ ನೀರಿನ ಶಾಖಕ್ಕೆ ಈ ವಿಷಾದ ಪದಾರ್ಥ ಹೊರಬರುತ್ತಲ್ಲ ಅದು ನಮ್ಮ ಉಸಿರಾಟ ಹಾಗೆ ಸಂತಾನೋತ್ಪತ್ತಿ ಕ್ರಿಯೆಗೆ ಹಾನಿ ಮಾಡುತ್ತೆ. ಇದರ ಬದಲು ಕಾಟನ್ ಕರ್ಟನ್ ಬಳಸೋದು ಒಳ್ಳೇದು.
4.ಕಾರ್ಪೆಟ್ ಕ್ಲೀನರ್:-
ಕಾರ್ಪೆಟ್ ಗೆ ಅಂಟಿಕೊಂಡಿರು ಕಲೆ ಹೋಗ್ಬೇಕು ಅಂತ ಈ ವಸ್ತು ತಾಯಾರಿಸೋದಕ್ಕೆ ಅತ್ಯಂತ ಹೆಚ್ಚು ಹಾನಿಕಾರಿಕ ಕೆಮಿಕಲ್ ಉಪಯೋಗಿಸಿರ್ತಾರೆ. ಪರ್ಕ್ಲೋರೆಥೈಲಿನ್ ಮತ್ತು ನಾಫ್ಥಲೀನ್ ಅನ್ನೋ ಕೆಮಿಕಲ್ ಇದ್ರಲ್ಲಿ ಇರೋದ್ರಿಂದ ಇದನ್ನ ಉಸಿರಾಡಿದಾಗ ಶ್ವಾಸಕೋಶದ ಕ್ಯಾನ್ಸರ್ ಬಾರೋ ಸಾಧ್ಯತೆ ಹೆಚ್ಚು. ಈ ನುಸಿ ಗುಳಿಗೇಲೂ ಈ ಪದಾರ್ಥ ಇರುತ್ತೆ.

ಈ ಕಾರ್ಪೆಟ್ ಕ್ಲೀನ್ ಮಾಡಕ್ಕೆ ಅಡುಗೆ ಸೋಡಾ ಹಾಗೂ ವಿನೆಗರ್ ಮಿಶ್ರಣ ಉಪಯೋಗಿಸಿ ನೋಡಿ. ಇದ್ರಿಂದ ಯಾವುದೇ ತೊಂದರೆ ಇರಲ್ಲ.
5.ಡ್ರೈ ಕ್ಲೀನ್ ಮಾಡಕ್ಕೆ ಉಪಯೋಗಿಸೋ ವಸ್ತುಗಳು:-
ಡ್ರೈ ಕ್ಲೀನ್ ಮಾಡಕ್ಕೆ ಉಪಯೋಗಿಸೋ ವಸ್ತುಗಳಲ್ಲಿ ಎಟ್ರಾಕ್ಲೋರೆಥೈಲಿನ್ ಅಥವಾ ಪರ್ಚ್ಲೋರೆಥೈಲಿನ್ ಅನ್ನೋ ಕೆಮಿಕಲ್ ಇರುತ್ತೆ. ಇದನ್ನ ಬಳಸಿ ಕ್ಲೀನ್ ಮಾಡಿರೋ ಬಟ್ಟೆ ಹಾಕ್ಕೊಂಡ್ರೆ ಹಾನಿಕಾರಕ ಕಾರ್ಸಿನೋಜೆನ್ಸ್ ನಮ್ಮ ದೇಹಕ್ಕೆ ಸುಲಭವಾಗಿ ಹೋಗುತ್ತೆ.

ಇದ್ರಿಂದ ಹಲವಾರು ರೀತಿಯ ಕ್ಯಾನ್ಸರ್ ಆಗೋ ಸಾಧ್ಯತೆ ಇರೋದ್ರಿಂದ ಡ್ರೈ ಕ್ಲೀನ್ ಮಾಡಕ್ಕೆ ಕೊಡೋದಕ್ಕೆ ಮುಂಚೆ ಈ ವಿಷಕಾರಿ ಅಂಶ ಇರೋ ವಸ್ತು ಬಳಸಬೇಡಿ ಅಂತ ಹೇಳೋದು ಒಳ್ಳೇದು.
6.ಕೀಟನಾಶಕಗಳು.
ಎಲ್ಲರೂ ಒಂದಲ್ಲ ಒಂದುಸಲ ರೈತರು ಕ್ರಿಮಿ, ಕೀಟನಾಶಕ ಸಿಂಪಡಿಸೋವಾಗ ತೊಂದರೆ ಆಗಿ ಸತ್ರು, ಯಾವುದೊ ಸಮಸ್ಯೆಗೆ ಸಿಲುಕಿ ಇದನ್ನ ಕುಡಿದು ಆತ್ಮ ಹತ್ಯೆ ಮಾಡ್ಕೊಂಡ್ರು ಅಂತ ಓದಿರ್ತೀವಿ, ಕೇಳಿರ್ತೀವಿ. ಇದು ಬರಿ ಕ್ರಿಮಿ, ಕೀಟಗಳಿಗೆ ಅಷ್ಟೆ ಅಲ್ಲ ನಮಗೂ ಹಾಗೆ ನಮ್ಮ ಮುದ್ದಿನ ಸಾಕು ಪ್ರಾಣಿಗಳಿಗೂ ಹಾನಿ ಮಾಡುತ್ವೆ.

ಇದ್ರಲ್ಲಿ ಆರ್ಗನೋಫಾಸ್ಫೇಟ್ ಕೀಟನಾಶಕಗಳು, ಪೆರೆಥೆರಿನ್ ಮತ್ತು ಕಾರ್ಬಮೆಟ್ಗಳು ಇರುತ್ತೆ , ಇವುಗಳು ತುಂಬಾನೇ ಅಪಾಯಕಾರಿ ಮತ್ತು ಮನುಷ್ಯರಿಗೆ ಕ್ಯಾನ್ಸರ್ ತರೋ ಸಾಧ್ಯತೆ ಹೆಚ್ಚು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಬುಧವಾರ, 14/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಕೆಲಸ ಕಾರ್ಯಗಳಲ್ಲಿ ಅಡಚಣೆ. ಕಾರ್ಯಸಾಧನೆಗಾಗಿ ಸಂಚಾರದ ಸಾಧ್ಯತೆ. ನಿಮ್ಮ ಪಾಲಿಗೆ ಬರಬೇಕಾಗಿದ್ದ ಆಸ್ತಿಯು ಕೈಸೇರುವುದು.ಕುಟುಂಬದಲ್ಲಿ ಮಾತಿನ ಚಕಮಕಿ. ಅಧಿಕಾರಿ ವರ್ಗದವರಿಗೆ ವೃತ್ತಿರಂಗದಲ್ಲಿ ಅಭಿವೃದ್ಧಿ. ಕೌಟುಂಬಿಕವಾಗಿ ಸಂತೋಷ. ವೃಷಭ:- ಬಂಧುಗಳೊಂದಿಗೆ ಮನಸ್ತಾಪ. ಆರ್ಥಿಕ ಸ್ಥಿತಿಯಲ್ಲಿ ಏರುಪೇರು. ಅನವಶ್ಯಕ ವೆಚ್ಚ. ದೂರದ ಪ್ರಯಾಣ ಉಚಿತವಲ್ಲ. ಯೋಗ್ಯ ವಯಸ್ಕರಿಗೆ ಕಂಕಣಬಲ. ಮನೆಯ ಹಿರಿಯರ ಮಾತಿಗೆ ಎದುರಾಡದಿರಿ. ವಿದ್ಯಾರ್ಥಿಗಳಿಗೆ ಆಗಾಗ ನಿರುತ್ಸಾಹ ತರಲಿದೆ. ಆರೋಗ್ಯದಲ್ಲಿ ಏರುಪೇರು. ಮಿಥುನ:– ವ್ಯಾಪಾರದಲ್ಲಿ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(15 ಏಪ್ರಿಲ್, 2019) ನಿಯಮಿತ ತೊಂದರೆ ನಿಮಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ನರಮಂಡಲದ ಕಾರ್ಯವೆಸಗುತ್ತಿರಲು ಸಂಪೂರ್ಣ ವಿಶ್ರಾಂತಿ…
ದೇಶದ 7 ರಾಜ್ಯಗಳಲ್ಲಿ ಈಗ ಜಲಕಂಟಕ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಒಡಿಶಾ, ರಾಜಸ್ಥಾನ, ಗುಜರಾತ್ನಲ್ಲಿ ಪ್ರವಾಹ ತಲೆದೋರಿದೆ. ಪ್ರವಾಹ ಹಾಗೂ ಭೂ ಕುಸಿತಕ್ಕೆ ಊರಿಗೆ ಊರುಗಳೇ ನಾಶವಾಗಿವೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತ ಶಿಬಿರ ಸೇರಿರುವ ಸಂತ್ರಸ್ತರ ಗೋಳು ಹೇಳತೀರದು. ಕೇರಳದಲ್ಲಿ ಭಾರೀ ಭೂಕುಸಿತ : ಈ ಬಾರಿಯೂ ಭಾರೀ ಮಳೆ ಮತ್ತು ಭೂಕುಸಿತಕ್ಕೆ ತುತ್ತಾಗಿರುವ ಕೇರಳದಲ್ಲಿ ಇಲ್ಲಿವರೆಗೆ 30 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇಂದು ಒಂದೇ ದಿನ…
ಬೆಂಗಳೂರು, ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಚಂದ್ರನ ಅಂಗಳದ ಮೇಲೆ ಲ್ಯಾಂಡರ್ ಅನ್ನು ಇಳಿಸುವ ಕೊನೆಯ 15ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿ.ಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ…
ಕೇಂದ್ರದ ಪ್ರಸ್ತಾವನೆ ಜಾರಿಗೊಂಡರೆ ಇನ್ನು ಸರಕಾರಿ ನೌಕರರು 8 ಗಂಟೆ ಬದಲು 9 ಗಂಟೆ ಕೆಲಸ ಮಾಡಬೇಕಾಗುತ್ತದೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗಿನ ಕೆಲಸದ ಅವಧಿ 6 ಗಂಟೆವರೆಗೆ ವಿಸ್ತರಣೆಯಾಗಲಿದೆ! ಕೇಂದ್ರ ಸರಕಾರ ಪ್ರಕಟಿಸುವ ವೇತನ ನಿಯಮಾವಳಿಯ ಕರಡು ವರದಿಯಲ್ಲಿಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಆದರೆ, ಬಹು ಚರ್ಚೆಯಲ್ಲಿರುವ ಕನಿಷ್ಠ ವೇತನದ ವಿಷಯವನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲ. ಭವಿಷ್ಯದಲ್ಲಿ ವೇತನ ನಿಗದಿ ಮಾಡುವಾಗ ಮೂರು ಭೌಗೋಳಿಕ ವರ್ಗೀಕರಣವನ್ನು ಪರಿಗಣಿಸಬೇಕು ಎಂಬುದನ್ನು ಹೊರತು ಪಡಿಸಿದರೆ ಉಳಿದುದೆಲ್ಲವೂ ಹಳೆ ವಿಚಾರಗಳೆ. ಹಾಗಂತ,ಇದು…
ಟೀ ರುಚಿ ಹೆಚ್ಚಿಸುವ ಜೊತೆಗೆ ಗಂಟಲು ನೋವನ್ನು ಗುಣಪಡಿಸುವ ಕೆಲಸವನ್ನು ಮಾತ್ರ ಶುಂಠಿ ಟೀ ಮಾಡುವುದಿಲ್ಲ. ಮಸಾಲೆ ರೂಪದಲ್ಲಿ ಬಳಸುವ ಶುಂಠಿ ಬಹು ಉಪಯೋಗಿ. ಇದ್ರ ನೀರನ್ನು ಪ್ರತಿದಿನ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದ್ರಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯ, ಆ್ಯಂಟಿ ಫಂಗಲ್ ಅಂಶ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಊಟ ಮಾಡಿದ 20 ನಿಮಿಷದ ನಂತ್ರ ಒಂದು ಕಪ್ ಶುಂಠಿ ನೀರನ್ನು ಕುಡಿಯಿರಿ. ಇದು ದೇಹದಲ್ಲಿರುವ ಆಮ್ಲ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದ್ರಿಂದ ಹೊಟ್ಟೆಯಲ್ಲಾಗುವ ಉರಿ ಕಡಿಮೆಯಾಗುತ್ತದೆ. ಶುಂಠಿಯನ್ನು ಕುಟ್ಟಿ ನೀರಿಗೆ ಹಾಕಿ ಕುದಿಸಿ…