ಉಪಯುಕ್ತ ಮಾಹಿತಿ

ಈ ಸಾಮಾನುಗಳು ನೀವು ಉಪಯೋಗಿಸಿದ್ರೆ ಕ್ಯಾನ್ಸರ್ ಕಾಯಿಲೆಯನ್ನು ಉಂಟು ಮಾಡುತ್ತದೆ ..!ತಿಳಿಯಲು ಈ ಲೇಖನ ಓದಿ ..

368

ಈ ಗೃಹ ಉಪಯೋಗಿ ವಸ್ತುಗಳಲ್ಲಿ ತುಂಬಾನೇ ಹಾನಿ ಉಂಟುಮಾಡೋ, ನಮ್ಮ ಆರೋಗ್ಯದಮೇಲೆ ಕೆಟ್ಟ ಪರಿಣಾಮ ಬೀರೋ ಪದಾರ್ಥಗಳು ಇರುತ್ತೆ. ಈ ವಸ್ತುಗಳನ್ನ ಪದೇ ಪದೇ ಬಳಸೋದ್ರಿಂದ ಒಂದಲ್ಲ ಒಂದು ರೀತಿಯ ಕ್ಯಾನ್ಸರ್ ಉಂಟುಮಾಡೋ ಈ ಪದಾರ್ಥಗಳು ನಮ್ಮ ದೇಹ ಸೇರಿಕೊಳುತ್ತೆ. ಅಂತಹ ಕೆಲವು ಪದಾರ್ಥಗಳ ಪಟ್ಟಿ ಇಲ್ಲಿದೆ.

1.ಏರ್ ಫ್ರೆಶ್ನೆರ್:-

ಈ ಏರ್ ಫ್ರೆಶ್ನೆರ್ ಸ್ಪ್ರೇ, ಜೆಲ್ ಹೀಗೆ ಬೇರೆ ಬೇರೆ ರೂಪದಲ್ಲಿ ಸಿಗುತ್ತೆ. ಮನೆ ಒಳಗೆ, ಕಾರ್ ಒಳಗೆ ಘಮ ಘಮ ಅನ್ಲಿ ಅಂತ ಸಾಮಾನ್ಯವಾಗಿ ಇದನ್ನ ಬಳಸ್ತಾರೆ. ಇದ್ರಲ್ಲಿ ನಮ್ಮ ದೇಹಕ್ಕೆ ಹಾನಿ ಮಾಡೋ ವಿಷಾದ ಅಂಶ ಇರುತ್ತೆ.

ಅದ್ರಲ್ಲಿರೋ ಪಾಥಲಾಟ್ಸ್  ಅನ್ನೋ ಪದಾರ್ಥದಿಂದ ನಮ್ಮ ಸಂತಾನೋತ್ಪತ್ತಿ ಶಕ್ತಿಯನ್ನ ಹಾಳುಮಾಡೊದಲ್ದೆ ಅಸ್ತಮಾದಂತಹ ಕಾಯಿಲೆ ಗಂಭೀರ ರೂಪ ಪಡೆಯೋಹಾಗೆ ಮಾಡುತ್ತೆ.

2.ಸುವಾಸನೆಭರಿತ ಮೇಣದ ಬತ್ತಿ:-

ಈ ಸುವಾಸನೆಭರಿತ ಮೇಣದ ಬತ್ತಿ ಸಾಮಾನ್ಯವಾಗಿ ಎಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ, ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ, ಹಬ್ಬದಲ್ಲಿ ಹೀಗೆ ಹಲವಾರು ಸಲ ಇದನ್ನ ಉಪಯೋಗಿಸ್ತೀವಿ. ಕೆಲವೊಬ್ರು ಬೇರೆ ಫ್ರೆಶ್ನೆರ್ಗೆ ನೋಡಿದ್ರೆ ಇದು ಸ್ವಲ್ಪ ಕಡಿಮೆ ಬೆಲೆಗೆ ಸಿಗೋದ್ರಿಂದ ಇದನ್ನ ಬಚ್ಚಲಮನೇಲೇ ಇತ್ತು ಅಲ್ಲಿನ ವಾಸನೆ ಹೋಗಿಸೋದಕ್ಕೆ ಉಪಯೋಗಿಸ್ತಾರೆ.

ಇದ್ರಲ್ಲೂ ಕೂಡ ವಿಷಪದಾರ್ಥ ಇರಬಹುದು, ಯಾಕೆ ಅಂದ್ರೆ ಬಹಳಷ್ಟು ಜನ ಇದರ ಬತ್ತಿಯನ್ನ ಸೀಸದಿಂದ ಮಾಡಿರ್ತಾರೆ., ಒಂದುಸಲ ನೋಡ್ಕೊಳೋದು ಒಳ್ಳೇದು. ಹೇಗೆ ಪರೀಕ್ಷೆ ಮಾಡೋದು ಅಂದ್ರ ? ಒಂದು ಬಿಳಿ ಪೇಪರ್ ತೊಗೊಂಡು ಆ ಕ್ಯಾಂಡೆಲ್ನ ಬತ್ತಿ ತುದಿಯಿಂದ ಒಂದು ಲೈನ್ ಬರೆದಹಾಗೆ ಮಾಡಿ, ನಿಮಗೆ ಯಾವುದೇ ಲೈನ್ ಕಾಣಿಸಲಿಲ್ಲ ಅಂದ್ರೆ ಸೀಸ ಇಲ್ಲ ಅಂತ. ಅಕಸ್ಮಾತ್ ಲೈನ್ ಕಾಣಿಸಿದ್ರೇ ಇದ್ರಲ್ಲಿ ವಿಷಪದಾರ್ಥಗಳು ಇರೋದು ಗ್ಯಾರಂಟಿ.

3.ಬಚ್ಚಲುಮನೆಯ ಕರ್ಟನ್:-

ಇತ್ತೀಚಿನ ದಿನಗಳಲ್ಲಿ ಬಚ್ಚುಲು ಮನೇಲಿ ಶವರ್ ಇದ್ದೆ ಇರುತ್ತೆ. ತುಂಬಾ ಮನೆಗಳಲ್ಲಿ ಈ ಶವರ್ನಲ್ಲಿ  ಸ್ನಾನ ಮಾಡೋವಾಗ ನೀರು ಹಾರದೆ ಇರೋ ಹಾಗೆ ಕರ್ಟನ್ ಹಾಕ್ತಾರೆ. ಈ ಕರ್ಟನ್ ನಲ್ಲಿ ಪ್ಲಾಸ್ಟಿಕ್ ಹಾಗೂ PVC ಇರುತ್ತೆ. ಈ ಕಾರ್ಸಿನೋಜೆನಿಕ್ ಅನ್ನೋ ವಿಷಕಾರಿ ಪದಾರ್ಥನ ಹೊರ ಹಾಕುತ್ತೆ.

ಇದು ಪರಿಸರಕ್ಕೂ ತುಂಬಾ ಹಾನಿಮಾಡುತ್ತೆ. ಬಿಸಿ ನೀರಿನ ಶಾಖಕ್ಕೆ ಈ ವಿಷಾದ ಪದಾರ್ಥ ಹೊರಬರುತ್ತಲ್ಲ ಅದು ನಮ್ಮ  ಉಸಿರಾಟ ಹಾಗೆ ಸಂತಾನೋತ್ಪತ್ತಿ ಕ್ರಿಯೆಗೆ ಹಾನಿ ಮಾಡುತ್ತೆ. ಇದರ ಬದಲು ಕಾಟನ್ ಕರ್ಟನ್ ಬಳಸೋದು ಒಳ್ಳೇದು.

4.ಕಾರ್ಪೆಟ್ ಕ್ಲೀನರ್:-

ಕಾರ್ಪೆಟ್ ಗೆ ಅಂಟಿಕೊಂಡಿರು ಕಲೆ ಹೋಗ್ಬೇಕು ಅಂತ ಈ ವಸ್ತು ತಾಯಾರಿಸೋದಕ್ಕೆ ಅತ್ಯಂತ ಹೆಚ್ಚು ಹಾನಿಕಾರಿಕ ಕೆಮಿಕಲ್ ಉಪಯೋಗಿಸಿರ್ತಾರೆ. ಪರ್ಕ್ಲೋರೆಥೈಲಿನ್ ಮತ್ತು ನಾಫ್ಥಲೀನ್ ಅನ್ನೋ ಕೆಮಿಕಲ್ ಇದ್ರಲ್ಲಿ ಇರೋದ್ರಿಂದ ಇದನ್ನ ಉಸಿರಾಡಿದಾಗ ಶ್ವಾಸಕೋಶದ ಕ್ಯಾನ್ಸರ್ ಬಾರೋ ಸಾಧ್ಯತೆ ಹೆಚ್ಚು. ಈ ನುಸಿ ಗುಳಿಗೇಲೂ ಈ ಪದಾರ್ಥ ಇರುತ್ತೆ.

ಈ ಕಾರ್ಪೆಟ್ ಕ್ಲೀನ್ ಮಾಡಕ್ಕೆ ಅಡುಗೆ ಸೋಡಾ ಹಾಗೂ ವಿನೆಗರ್ ಮಿಶ್ರಣ ಉಪಯೋಗಿಸಿ ನೋಡಿ. ಇದ್ರಿಂದ ಯಾವುದೇ ತೊಂದರೆ ಇರಲ್ಲ.

5.ಡ್ರೈ ಕ್ಲೀನ್ ಮಾಡಕ್ಕೆ ಉಪಯೋಗಿಸೋ ವಸ್ತುಗಳು:-

ಡ್ರೈ ಕ್ಲೀನ್ ಮಾಡಕ್ಕೆ ಉಪಯೋಗಿಸೋ ವಸ್ತುಗಳಲ್ಲಿ ಎಟ್ರಾಕ್ಲೋರೆಥೈಲಿನ್ ಅಥವಾ ಪರ್ಚ್ಲೋರೆಥೈಲಿನ್ ಅನ್ನೋ ಕೆಮಿಕಲ್ ಇರುತ್ತೆ. ಇದನ್ನ ಬಳಸಿ ಕ್ಲೀನ್ ಮಾಡಿರೋ ಬಟ್ಟೆ ಹಾಕ್ಕೊಂಡ್ರೆ ಹಾನಿಕಾರಕ ಕಾರ್ಸಿನೋಜೆನ್ಸ್ ನಮ್ಮ ದೇಹಕ್ಕೆ ಸುಲಭವಾಗಿ ಹೋಗುತ್ತೆ.

ಇದ್ರಿಂದ ಹಲವಾರು ರೀತಿಯ ಕ್ಯಾನ್ಸರ್ ಆಗೋ ಸಾಧ್ಯತೆ ಇರೋದ್ರಿಂದ ಡ್ರೈ ಕ್ಲೀನ್ ಮಾಡಕ್ಕೆ ಕೊಡೋದಕ್ಕೆ ಮುಂಚೆ ಈ ವಿಷಕಾರಿ ಅಂಶ ಇರೋ ವಸ್ತು ಬಳಸಬೇಡಿ ಅಂತ ಹೇಳೋದು ಒಳ್ಳೇದು.

6.ಕೀಟನಾಶಕಗಳು.

ಎಲ್ಲರೂ ಒಂದಲ್ಲ ಒಂದುಸಲ ರೈತರು ಕ್ರಿಮಿ, ಕೀಟನಾಶಕ ಸಿಂಪಡಿಸೋವಾಗ ತೊಂದರೆ ಆಗಿ ಸತ್ರು, ಯಾವುದೊ ಸಮಸ್ಯೆಗೆ ಸಿಲುಕಿ ಇದನ್ನ ಕುಡಿದು ಆತ್ಮ ಹತ್ಯೆ ಮಾಡ್ಕೊಂಡ್ರು ಅಂತ ಓದಿರ್ತೀವಿ, ಕೇಳಿರ್ತೀವಿ. ಇದು ಬರಿ ಕ್ರಿಮಿ, ಕೀಟಗಳಿಗೆ ಅಷ್ಟೆ ಅಲ್ಲ ನಮಗೂ ಹಾಗೆ ನಮ್ಮ ಮುದ್ದಿನ ಸಾಕು ಪ್ರಾಣಿಗಳಿಗೂ ಹಾನಿ ಮಾಡುತ್ವೆ.

ಇದ್ರಲ್ಲಿ ಆರ್ಗನೋಫಾಸ್ಫೇಟ್ ಕೀಟನಾಶಕಗಳು, ಪೆರೆಥೆರಿನ್ ಮತ್ತು ಕಾರ್ಬಮೆಟ್ಗಳು ಇರುತ್ತೆ , ಇವುಗಳು ತುಂಬಾನೇ ಅಪಾಯಕಾರಿ ಮತ್ತು ಮನುಷ್ಯರಿಗೆ ಕ್ಯಾನ್ಸರ್ ತರೋ ಸಾಧ್ಯತೆ ಹೆಚ್ಚು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ವೊಡಾಫೋನ್ ಗ್ರಾಹಕರಿಗೆ ಸಿಹಿ ಸುದ್ದಿ! ತನ್ನ ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡಿದ ವೊಡಾಫೋನ್ !!!

    ಮುಖೇಶ್ ಅಂಬಾನಿ ಅವರ ನೇತೃತ್ವದ ರಿಲಾಯನ್ಸ್ ಜಿಯೋ, ತನ್ನ ಗ್ರಾಹಕರಿಗೆ ಹಲವಾರು ಆಫರ್’ಗಳನ್ನು ಕೊಟ್ಟು ಇತಿಹಾಸ ಸೃಷ್ಟಿಸುತ್ತಿದ್ದಲ್ಲದೆ, ಬೇರೆ ಟೆಲಿಕಾಂ ಕಂಪನಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದರ ಪ್ರಭಾವ ಏರ್ಟೆಲ್, ವೊಡಾಫೋನ್ ಮುಂತಾದ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿದ್ದು, ಈಗ ಈ ಕಂಪನಿಗಳು ಕೂಡ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಜಿಯೋ ಕಾಪನಿಗೆ ಟಾಂಗ್ ಕೊಡಲು ಹಲವು ರೀತಿಯ ಇತಿಹಾಸ ಸೃಷ್ಟಿಸುವಂತ ಆಫರ್’ಗಳನ್ನು ತನ್ನ ಗ್ರಾಹಕರಿಗೆ ಕೊಡುವಲ್ಲಿ ಹಟಕ್ಕೆ ಬಿದ್ದಿವೆ.

  • ಸುದ್ದಿ

    ಹಾಸನ SSLC ಫಲಿತಾಂಶದಲ್ಲಿ ರಾಜ್ಯಕ್ಕೆ ಫಸ್ಟ್ ಪ್ಲೇಸ್ ಬರಲು ಕಾರಣ ನನ್ನ ಹೆಂಡತಿಯೇ ಹೊರತು ರೋಹಿಣಿ ಸಿಂಧುರಿ ಅಲ್ಲ ಎಂದ ರೇವಣ್ಣ..!

    ಹಾಸನದಲ್ಲಿ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶ ಬರಲು ಡಿಸಿ ರೋಹಿಣಿ ಸಿಂಧೂರಿಯಲ್ಲ, ನನ್ನ ಪತ್ನಿ ಭವಾನಿ ರೇವಣ್ಣ ಕಾರಣ ಎಂದು ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ. ಹಿಂದಿನ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕೊಡುಗೆ ಹೆಚ್ಚಿದೆ ಎಂದು ನಿನ್ನೆ ಮಾಧ್ಯಮಗಳ ಪ್ರಕಟವಾದ ಬೆನ್ನಲ್ಲೇ ಇದೀಗ ರೇವಣ್ಣ ಅವರು ರೋಹಿಣಿ ಸಿಂಧೂರಿ ಅವರ ಕೊಡುಗೆ ಏನು ಇಲ್ಲ. ನನ್ನ ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದು ಹಾಸನ ಪ್ರಥಮ ಸ್ಥಾನಕ್ಕೇರಲು 3-4 ಬಾರಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(15 ಡಿಸೆಂಬರ್, 2018) ದಿನದಲ್ಲಿ ನಂತರಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಸಂಬಂಧಗಳೊಂದಿಗಿನ ಸಂಬಂಧಗಳು ಹಾಗೂ ಬಂಧಗಳ ನವೀಕರಣದ ಒಂದು ದಿನ. ನಿಮ್ಮಪ್ರಿಯತಮೆಯ ಜೊತೆ…

  • Health

    ಬಾಯಿ ಹುಣ್ಣಾಗಿ ಏನೂ ತಿನ್ನೋಕೆ ಆಗ್ತಿಲ್ವಾ..? ಇಲ್ಲಿದೆ ನೋಡಿ ಮನೆಮದ್ದು.

    ಬಾಯಿ ಹುಣ್ಣು ತುಂಬಾ ನೋವುಂಟು ಮಾಡುವುದು ಮಾತ್ರವಲ್ಲದೆ, ಆಹಾರ ಸೇವನೆಗೂ ಇದು ಅವಕಾಶ ನೀಡುವುದಿಲ್ಲ. ಇದು ಕೆಲವೊಮ್ಮೆ ಹಲವಾರು ದಿನಗಳ ಕಾಲ ಬಾಯಿಯಲ್ಲಿ ನೋವುಂಟು ಮಾಡುತ್ತ ಲಿರುತ್ತದೆ. ಇಂತಹ ಸಮಯದಲ್ಲಿ ಇದನ್ನು ನಿವಾರಣೆ ಮಾಡಲು ನೀವು ತುಂಬಾ ಶ್ರಮ ಪಟ್ಟಿರಬಹುದು. ಇದಕ್ಕೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ ಆಗಿ ಬಾಯಿಯ ಹುಣ್ಣು ನಿವಾರಣೆ ಮಾಡುತ್ತದೆ. ತೆಂಗಿನ ಎಣ್ಣೆ : ಉರಿಯೂತ ಶಮನಕಾರಿ, ಶಿಲೀಂಧ್ರ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿರುವ ತೆಂಗಿನ ಎಣ್ಣೆಯು…

  • ಸ್ಪೂರ್ತಿ

    ರಿಕ್ಷಾ ಚಾಲಕನ ಮಗ ಐಎಎಸ್ ಅಧಿಕಾರಿಯಾಗಿದ್ದು ಹೇಗೆ ಗೋತ್ತಾ..?ತಿಳಿಯಲು ಈ ಲೇಖನ ಓದಿ..

    ಜೀವನದ ಪಾಠವನ್ನು ಹಸಿವು ಅನ್ನೊದ್ದು ಅತಿ ಬೇಗನೆ ಕಲಿಸಿ ಕೊಡುತ್ತದೆ ಅನ್ನಬಹುದು. ಬಡತನದಲ್ಲಿ ಬೆಂದು ನೊಂದು ಹಲವರ ಬಾಯಲ್ಲಿ ಬೋಯಿಸಿಕೊಂಡು ಜೀವನವನ್ನು ಸಾಗಿಸುತ್ತ, ಇವುಗಳ ಮದ್ಯೆ ತನ್ನ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು ಅನ್ನೋ ಕನಸನ್ನು ಹೊತ್ತು ಶ್ರಮ ಪಟ್ಟ ಆ ಶ್ರಮ ಜೀವಿಗೆ ಆ ದೇವರು ಪ್ರತಿ ಫಲವನ್ನು ಕೊಟ್ಟಿದ್ದಾನೆ.