ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತದಲ್ಲಿ ಸುಧಾರಣೆಯಾಗುವುದು ತುಂಬಾನೇ ಇದೆ ಆದರೆ ಕೆಲವರು ಮಾತ್ರ ಅದನ್ನು ಸ್ವೀಕರಿಸಿ ಅದರ ಪಾಲನೆಯನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿಯೇ ಬದುಕುವ ಮಂದಿ ಹೆಚ್ಚು. ಸಮಾಜ ಸುಧಾರಣೆ ಮಾಡುವವರ ಸಂಖ್ಯೆ ಕಡಿಮೆ.

ಹಿಗಿರುವಾಗ ಜರ್ಮನ್ ದೇಶದ ಮಹಿಳೆ ನಮ್ಮ ದೇಶದಲ್ಲಿ ಮಾಡುತ್ತಿರುವ ಕೆಲಸದ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರ. ಹೌದು ನಮ್ಮ ದೇಶದಲ್ಲಿ ಪ್ರಕೃತಿಯ ತಾಣಗಳು ಹಾಗು ನಮ್ಮ ದೇಶದ ಸಂಸ್ಕೃತಿ ವೇಷ ಭೂಷಣಗಳು ಎಲ್ಲವು ಅದ್ಭುತವೇ ಅಂತಹ ಸೊಬಗನ್ನು ನೋಡಲು ವಿದೇಶಗಳಿಂದ ಪ್ರವಾಸಿಗರು ಬರುತ್ತಿರುತ್ತಾರೆ.

ಇದೆ ರೀತಿಯಲ್ಲಿ ಭಾರತಕ್ಕೆ ಪ್ರವಾಸಿಯಾಗಿ ಬಂದಂತ ಫ್ರೈಡರೈಕ್ ಐರಿನಾ ಬ್ರುನಿಂಗ್ 59 ವರ್ಷದ ಈ ಮಹಿಳೆ ಜರ್ಮನಿಯವರು. ಇಂದು ಉತ್ತರ ಪ್ರದೇಶದ ಮಥುರಾದಲ್ಲಿ 1200 ಕ್ಕೂ ಹೆಚ್ಚು ಹಸುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಾಗು ಹಾಲು ಕೊಡದೆ ಇರುವಂತ ಹಸುಗಳನ್ನು ಹಾಗು ಅನಾರೋಗ್ಯದಿಂದ ಬಳಲುತ್ತಿರುವ ಗೋವುಗಳಿಗೆ ಇವರು ತಮ್ಮ ಆಶ್ರಮದಲ್ಲಿ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣವಾದ ಮೇಲೆ ಗೋ ಶಾಲೆಗಳಿಗೆ ಕಳಿಸುತ್ತಾರೆ.

MS ಬರ್ನಿಂಗ್ 35-40 ವರ್ಷಗಳ ಹಿಂದೆ ಉತ್ತರ ಪ್ರದೇಶದ ಮಥುರಾದಲ್ಲಿರುವಾಗ ಒಂದು ಹಸುವನ್ನು ಸಾಕಲು ಖರೀದಿಸಿದ್ದರು, ನಂತರ ಜೀವನದಲ್ಲಿ ಬದಲಾವಣೆಯಾದಾಗ. ಈ ಸೇವೆಯನ್ನು ಮಾಡಲು ಪ್ರಾರಂಭಿಸಿದ್ದಾರೆ. ಕೆಲ ಜನರು ಹಾಲು ಕೊಡದ ಹಸುವನ್ನು ಹಾಗು ಅನಾರೋಗ್ಯದಿಂದ ಬಳಲುವ ಹಸುವನ್ನು ತ್ಯಜಿಸುತ್ತಾರೆ. ಇವರು ಅಂತಹ ಹಸುಗಳನ್ನು ಗಮನಿಸಿದಾಗ ಈ ಕೆಲಸವನ್ನು ಮಾಡಲು ಪ್ರಾರಂಭಿಸುತ್ತಾರೆ.

ಈ ರೀತಿಯ ಹಸುಗಳಿಗೆ ತಮ್ಮ ಆಶ್ರಮದಲ್ಲಿ ಸಾಕಿ ಅವುಗಳನ್ನು ಚಿಕಿತ್ಸೆ ಕೊಟ್ಟು ನೋಡಿ ಕೊಳ್ಳುತ್ತಾರೆ. ಗುಣಮುಖವಾದ ನಂತರ ಹತ್ತಿರದ ಗೋಶಾಲೆಗಳಿಗೆ ಕಳಿಸುತ್ತಾರೆ. ಇವರು ೫೦-೬೦ ಜನರನ್ನು ಈ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಹಾಗು ಇದರ ಖರ್ಚು ತಿಂಗಳಿಗೆ 22ಲಕ್ಷ ರೂ. ಆದರೆ ಇದಕ್ಕೆ ನಮ್ಮ ಸ್ಥಳೀಯ ಯಾವ ಸಹಕಾರವು ಪಡೆಯುತ್ತಿಲ್ಲ.

ಇದುವರೆಗೂ ತಾವು ಸೇವೆ ಮಾಡಿದ ಹಸುಗಳ ಸಂಖ್ಯೆ 10000 ಕ್ಕೂ ಹೆಚ್ಚು ಆದರೆ ಇವರಲ್ಲಿ ಜಾಗದ ಕೊರತೆ ಇರುವ ಕಾರಣದಿಂದಾಗಿ ಎಲ್ಲ ಹಸುಗಳನ್ನು ಗೋಶಾಲೆಗೆ ತಲುಪಿಸಿದ್ದಾರೆ ಸದ್ಯಕ್ಕೆ ಇವರ ಹತ್ತಿರ ಚಿಕಿತ್ಸೆ ಪಡೆಯುತ್ತಿರುವ ಹಸುಗಳು 1200 ಗಳು. ಪ್ರವಾಸಾಕೆಂದು ಬಂದ ಇವರ ವೀಸಾ ತಾತ್ಕಾಲಿಕವಾದದ್ದು ಆಗಾಗಿ ಇವರು ಪ್ರತಿವರ್ಷ ನವೀಕರಣ ಮಾಡಿಸುತ್ತಾರೆ.

ಮತ್ತೊಂದು ವಿಷಯ ಎಲ್ಲರಿಗೂ ಅನಿಸುವಂತದ್ದು ಇದು ತಿಂಗಳಿಗೆ ೨೨ ಲಕ್ಷ ಖರ್ಚು ಬರುತ್ತಿದೆ ಅಂದರೆ ಇದಕ್ಕೆ ಹಣ ಎಲ್ಲಿಂದ ಬರುತ್ತದೆ ಅನ್ನೋ ಪ್ರಶ್ನೆ. ಆದರೆ ಇದಕ್ಕೆ ವರು ಹೇಳುವ ಮಾತುಗಳು ನಮ್ಮ ಊರಿನಲ್ಲಿ ನನ್ನ ಅಸ್ತಿ ಹೆಚ್ಚಿದೆ ಹಾಗು ಬಾಡಿಗೆ ಪಡೆಯುತ್ತಿದ್ದೇನೆ ಅದರಿಂದ ಬರುವ ಹಣವನ್ನು ಈ ಸೇವೆಗೆ ಬಳಸುತ್ತಿದ್ದೇನೆ ಅಲ್ಲದೆ ನಮ್ಮ ತಂದೆಯವರು ನನಗೆ ಸಹಾಯ ಮಾಡುತ್ತಿದ್ದರು ಆದರೆ ಈಗ ಆವರಿಗೆ ವಯಸ್ಸಾಗಿದೆ ಅವರು ಹಿರಿಯ ನಾಗರೀಕರಾಗಿದ್ದಾರೆ ಎಂದು ಹೇಳುತ್ತಾರೆ.

ಅದೇನೇ ಇರಲಿ ನಿಜಕ್ಕೂ ಇವರ ಈ ಸೇವೆಗೆ ಮೆಚ್ಚಲೇ ಬೇಕು ಆ ಹಸುಗಳನ್ನು ಚಿಕಿತ್ಸೆ ಕೊಟ್ಟು ತಮ್ಮ ಸ್ವಂತ ಹಣದಲ್ಲಿ ಎಷ್ಟೊಂದು ದೊಡ್ಡ ಸೇವೆ ಮಾಡುತ್ತಿರುವುದು ಅದ್ಭುತವೇ ಅನ್ನಬಹುದು.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಳಿಗಾಲ ಬಂದಾಗಿದೆ. ಚಳಿಗಾಲದಲ್ಲಿ ತಿನ್ನೋ ಹ್ಯಾಬಿಟ್ ಸ್ಪಲ್ಪ ಜಾಸ್ತಿಯಾಗೋದು ಸಹಜ. ಪದೇಪದೆ ಏನಾದ್ರೂ ತಿನ್ನಬೇಕು ಅನ್ನಿಸ್ತಾ ಇರತ್ತೆ.ಅದರಲ್ಲೂ ಸಂಜೆ ಚಳಿ ದೂರ ಮಾಡಿಕೊಳ್ಳಲು ಏನಾದ್ರೂ ಸರಿ ಬಿಸಿಬಿಸಿಯಾಗಿ ಕುರುಕಲು ತಿಂಡಿ ಬೇಕೇಬೇಕು. ಅದರಲ್ಲೂ ಪಕೋಡಾ, ಬಜ್ಜಿಯಂತಹ ಕುರುಕುಲ ಜತೆಗೆ ಒಂದು ಕಪ್ ಚಹಾನೋ, ಕಾಫಿನೋ ಇದ್ದುಬಿಟ್ಟರೆ ಅದಕ್ಕಿಂತ ಆಹ್ಲಾದಕರ ಇನ್ನೊಂದಿಲ್ಲ.ಆದರೆ ಹೀಗೆ ಚಳಿಗಾಲದಲ್ಲಿ ಆಹಾರ ಸೇವನೆಗೆ ಸಂಬಂಧಪಟ್ಟಂತೆ ಕೆಲವು ತಪ್ಪು ಕಲ್ಪನೆಗಳೂ ಇವೆ. ಆ ತಪ್ಪು ಕಲ್ಪನೆಗಳು ಏನು? ಚಳಿಗಾಲದಲ್ಲಿ ಏನು ಆಹಾರ ಸೇವಿಸಬಹುದು? ಎಷ್ಟು ತಿನ್ನಬೇಕು…
ಸಾಧನೆ ಮತ್ತು ಸಾಹಸಕ್ಕೆ ವಯೋಮಾನ ಎಂದಿಗೂ ಅಡ್ಡಿಯಲ್ಲ ಎಂಬುದು ಈ ಜಗತ್ತಿನಲ್ಲಿ ಅನೇಕ ಬಾರಿ ಸಾಬೀತಾಗಿದೆ. ವಯೋವೃದ್ದರೊಬ್ಬರು ಈ ಹಿಂದೆ ತಾವೇ ಸೃಷ್ಟಿಸಿದ ವಿಶ್ವ ದಾಖಲೆಯನ್ನು ತಾವೇಮುರಿದು ಗಮನಸೆಳೆದಿದ್ದಾರೆ. ಬನ್ನಿ ಈ ಕಿಲಾಡಿತಾತನನ್ನು ನಾವೀಗ ಭೇಟಿ ಮಾಡೋಣ.. ಎರಡನೇ ವಿಶ್ವ ಯುದ್ಧದ ಮಾಜಿಯೋಧ ಹಾಗೂ 96 ವರ್ಷದ ಸಾಹಸಿವೂಲೇ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು ಸ್ಕೂಬಾ ಡೈವಿಂಗ್ ಮಾಡಿತಮ್ಮ ವಿಶ್ವ ದಾಖಲೆಯನ್ನು ಈ ವಯೋವೃದ್ದರು ಮುರಿದಿದ್ಧಾರೆ. ವಿಶ್ವದ ಅತ್ಯಂತ ಹಿರಿಯ ಸ್ಕೂಬಾ ಡೈವರ್ ಎಂದೇ ಖ್ಯಾತಿಪಡೆದಿರುವ ಇವರು…
ಹೃದಯಾಘಾತದ ಬಗ್ಗೆ ಇರುವ ಮಾಹಿತಿಯನ್ನು ಎಲ್ಲರೂ ತಿಳಿದಿರಲೇಬೇಕು. ಹೃದಯಾಘಾತ ಯಾವ ಕ್ಷಣದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ನಮ್ಮ ಜೀವಮಾನದ ಅವದಿಯಲ್ಲಿ ನಮ್ಮ ಸಂಬದಿಕರಿಗೋ, ಸ್ನೇಹ್ತಿತರಿಗೋ ಯಾರಿಗಾದ್ರೂ ಹೃದಯಾಘಾತ ಬರಬಹುದು. ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಹೃದಯಾಘಾತದ ಅಪಾಯದಿಂದ ಪಾರಾಗಲು ನೀವು ಮತ್ತು ವೈದ್ಯರು ಮುಂಚಿನ ಕೆಲವು ಗಂಟೆಗಳಲ್ಲಿ ಏನು ಮಾಡುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ.
ಹೆದ್ದಾರಿಗಳ ಮೇಲೆ ಬಿಳಿ, ಹಳದಿ ಬಣ್ಣಗಳಲ್ಲಿ ಹಾಕುವ ಹಲವು ವಿಧದ ಪಟ್ಟೆಗಳನ್ನು ಸಹ ಎಲ್ಲರೂ ನೋಡಿಕೊಂಡು ಹೋಗಬೇಕು. ಇಷ್ಟಕ್ಕೂ ಆ ಪಟ್ಟೆಗಳನ್ನು ಯಾಕೆ ಹಾಕುತ್ತಾರೆ? ಅವುಗಳ ಉಪಯೋಗವೇನು ಎಂದು ಈಗ ತಿಳಿದುಕೊಳ್ಳೋಣ.
‘ನೀವು ಕೇಳಿದಷ್ಟು ಅನುದಾನ ಕೊಡಲು ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ’ ಎಂದು ಸಿಎಂ ಯಡಿಯೂರಪ್ಪ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.ಶಿವಮೊಗ್ಗದಲ್ಲಿ ನಿನ್ನೆ ಪ್ರವಾಹದಿಂದಾದ ನಷ್ಟದ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ಹಾಗೂ ನೀಡಬೇಕಿರುವ ಪರಿಹಾರದ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಿದಾಗ ಅವರು ಮೇಲಿನಂತೆ ಉತ್ತರ ನೀಡಿದ್ದಾರೆ. ‘ಬೆಳೆ ಹಾನಿ ಅಂದಾಜು ಮಾಡಲು ಆತುರ ಬೇಡ, ಕೇಳಿದಷ್ಟು ಹಣ ನೀಡಲು ಸರ್ಕಾರದ ಬಳಿ ನೋಟು ಮುದ್ರಿಸುವ ಯಂತ್ರಗಳಿಲ್ಲ, 8-10…
ಇಂದು ಬುಧವಾರ, 28/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…