ದೇವರು-ಧರ್ಮ

ಈ ದೇವಸ್ಥಾನದಲ್ಲಿ ದೇವರಿಗೆ ಕೊಡೋ ಕಾಣಿಕೆ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..?ಏನದು..?ಮುಂದೆ ಓದಿ…

272

ಹಿಂದೂ ರಾಷ್ರ ಭಾರತದಲ್ಲಿ ದೇವಾಲಯಗಳು, ಭಾರತದ ಜನರ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿವೆ.ಭಾರತದಲ್ಲಿ ಎಲ್ಲಿ ಹೋದರು ದೇವಾಲಯಗಳ ಕಾಣಸಿಗುತ್ತವೆ. ಜನ ಎಷ್ಟೇ ಕಷ್ಟ ಸುಖಗಳಿದ್ದರೂ ಮನಸ್ಸಿನ ನೆಮ್ಮದಿಗಾಗಿ ದೇವಾಲಯಗಳಿಗೆ ಹೋಗುತ್ತಾರೆ.

ಇಲ್ಲಿ ಎಷ್ಟೋ ದೇವಾಲಯಗಳಲ್ಲಿ ಎಷ್ಟೋ ವಿಚಿತ್ರಗಳು ನಡೆಯುತ್ತವೆ.ಇದೇ ತರ ಉತ್ತರಾಖಂಡ್ ನ ಫತೇಪುರದಲ್ಲಿರುವ ಗೋಪಾಲ್ ಬಿಶ್ತ್ ದೇವಾಲಯದಲ್ಲಿ ವಿಚಿತ್ರ ಸಂಪ್ರದಾಯವೊಂದು ನಡೆಯುತ್ತದೆ.

ಈ ದೇವಾಲಯದ ವಿಶೇಷತೆ ಮತ್ತು ಆ ವಿಚಿತ್ರ ಸಂಪ್ರದಾಯ ಏನು ಗೊತ್ತಾ..?

ಎಲ್ಲಾ ದೇವಾಲಯಗಳಲ್ಲಿ ದೇವರ ಪೂಜೆಗಾಗಿ, ದೇವರಿಗೆ ಹಣ್ಣು-ಕಾಯಿ, ನೈವೇದ್ಯ, ಕಾಣಿಕೆಗಳನ್ನು ಅರ್ಪಿಸುವುದರ ಜೊತೆಗೆ, ಹರಕೆಗಳನ್ನು ಹೊರುವುದು ಸಾಮಾನ್ಯ.ಆದರೆ ಈ ದೇವಾಲಯದಲ್ಲಿ ವಿಚಿತ್ರ ಏನಪ್ಪಾ ಅಂದ್ರೆ, ಭಕ್ತಾದಿಗಳು ತಮ್ಮ ಇಷ್ಟಾರ್ಥಗಳು ಈಡೇರಲು ಹರಕೆ ಹೊತ್ತು ಕುಡಗೋಲನ್ನು ಅರ್ಪಿಸುತ್ತಾರೆ!

ದಟ್ಟ ಕಾಡಿನ ನಡುವೆ ಇರುವ ಈ ದೇವಾಲಯದ ಬಗ್ಗೆ ಸ್ಥಳೀಯರಿಗೆ ಅಪಾರ ಶ್ರದ್ಧೆ ಮತ್ತು ಭಕ್ತಿ ಇದೆ. ಭಕ್ತಾದಿಗಳು ಏನೇ ಕೋರಿದರೂ ಈ ದೇವರು ಅದನ್ನು ಈಡೇರಿಸುತ್ತಾನೆ ಎಂಬುವುದು ಇಲ್ಲಿರುವ ಸ್ಥಳೀಯರ ನಂಬಿಕೆ.

ಈ ದೇವಾಲಯಕ್ಕೆ ಬರುವ ಹೆಚ್ಚಿನ ಭಕ್ತಾದಿಗಳು ತಮ್ಮ ದನ ಕರುಗಳು, ಹಾಗೂ ವ್ಯವಸಾಯದ ಭೂಮಿಯನ್ನು ರಕ್ಷಿಸುವಂತೆ ದೇವಾಲಯದಲ್ಲಿ ಪ್ರಾರ್ಥಿಸಿ ಕುಡಗೋಲು ಅರ್ಪಿಸುವುದು ಇಲ್ಲಿ ಸಾಮಾನ್ಯದ ಸಂಗತಿಯಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ