ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ 12 ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ‘ಮಣ್ಣಿನ ಮಗ’ ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.
ಜೆಡಿಎಸ್ ಅಧ್ಯಕ್ಷ ಮಣ್ಣಿನ ಮಗ ಹೆಚ್.ಡಿ.ದೇವೇಗೌಡರು 11-12-1994ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಮುಖ್ಯಮಂತ್ರಿಯಾಗಿ ಇಂದಿಗೆ 23 ವರ್ಷಗಳಾಗಿವೆ. ರಾಜಕೀಯದಲ್ಲಿ ದೇವೇಗೌಡರ ಬಗ್ಗೆ ತಿಳಿಯಬೇಕಾದ್ದು ತುಂಬಾ ಇದೆ.
“ಮಣ್ಣಿನ ಮಗ ಹೆಚ್.ಡಿ.ದೇವೇಗೌಡರ” ಬಗ್ಗೆ ಮೊಗೆದಷ್ಟು ಮುಗಿಯದ ಇತಿಹಾಸದ ಪುಟ..!
1.ಎಂದಿಗೂ ಸಹ ದುಷ್ಚಟಗಳ ದಾಸರಾಗಲಿಲ್ಲ………ವೈಯಕ್ತಿಕವಾಗಿಯೂ ಜೀವನದಲ್ಲಿ ಎಲ್ಲೂ ಸಹ ಒಂದೇ ಒಂದು ಕಪ್ಪುಚುಕ್ಕೆ ಮೂಡಿಸಿಕೊಂಡವರಲ್ಲ………ವೈಯಕ್ತಿಕ ಜೀವನ ಎಂದು ಒಂದು ಕ್ಷಣವೂ ಬಿಡುವು ಮಾಡಿಕೊಂಡು ಜೀವನದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತವರಲ್ಲ “ಅಪ್ಪಟ ರೈತರ ಮಗ ದೇವೇಗೌಡರು”…………
2. 24/7 ರಾಜಕಾರಣಿ ಯಾರಾದರೂ ಈ ಭೂಮಿ ಮೇಲಿದ್ದರೆ ನಾಯಕರ ತಯಾರು ಮಾಡುವ ಕಾರ್ಖಾನೆಯಾಗಿ ಎಲ್ಲ ಜನಾಂಗದವರನ್ನು ಮೇಲೆ ತಂದು ಅಧಿಕಾರ ನೀಡಿ ಆದರ್ಶ ಮೆರೆದ ಮಾಜಿ ಪ್ರಧಾನಿಯೊಬ್ಬರು ಸಕ್ರಿಯವಾಗಿ ಕಾರ್ಯಚಟುವಟಿಕೆಯಲ್ಲಿ ನಿರತರಾಗಿದ್ದರೆ ಅದು “ಮಣ್ಣಿನ ಮಗ ದೇವೇಗೌಡರು”……………..
3.ಶುದ್ದಹಸ್ತರಾಗಿ ಭ್ರಷ್ಟಾಚಾರದ ಲವಲೇಶವನ್ನೂ ತಮಗೆ ತಾಗಿಸಿಕೊಳ್ಳದೆ ರಾಜಕೀಯಕ್ಕೆ ಕಾಲಿಟ್ಟ ದಿನದಿಂದಲೂ ಸ್ವಚ್ಛವಾಗಿ ಜನಸೇವೆ ಮಾಡಿ ಜಾತಿ ಧರ್ಮ ಸೀಮೆ ಕುಲ ಭಾಷೆ ಪ್ರಾಂತ್ಯ ಎಂದು ಭೇಧ ಭಾವ ಮಾಡದೆ ಪ್ರಪಂಚಕ್ಕೆ ಮಾದರಿಯಾದ “ಶ್ರಮಜೀವಿ ದೇವೇಗೌಡರು”………….
4.ವಿಧಾನಸೌಧದ ದಾಖಲೆಗಳು ಹೇಳುವಂತೆ ಜನರಿಂದ ನೇರವಾಗಿ ಆರಿಸಿ ಬಂದು ಮುಖ್ಯಮಂತ್ರಿಯಾಗಿ ಪ್ರಮಾಣಿಕವಾಗಿ ಪಾರದರ್ಶಕ ಆಡಳಿತ ನೀಡಿ ಎಲ್ಲ ಜನಾಂಗಗಳನ್ನು ಸಮನಾಗಿ ಕಂಡು ಸಮಾಜ ಕಲ್ಯಾಣಕ್ಕಾಗಿ ಅತ್ಯವಶ್ಯಕವಾದ ಮೀಸಲಾತಿಗಳ ತಂದು ಜನಸೇವೆ ಮಾಡಿದ ಏಕೈಕ “ಮುಖ್ಯಮಂತ್ರಿ ದೇವೇಗೌಡರು”……………
5.ಸೋತಾಗಲೆಲ್ಲ ಧೃತಿಗೆಡದೆ ಮತ್ತೆ ಮತ್ತೆ ಕಳೆದುಕೊಂಡಲ್ಲೆ ಹುಡುಕಬೇಕು ಎನ್ನುವ ಹಾಗೆ ಮತ್ತೆ ಮತ್ತೆ ಮೇಲೆದ್ದು ಬಂದು ಪಾರುಪತ್ಯ ಸಾಧಿಸಿದ ಸಾಮಾನ್ಯರಲ್ಲಿ ಅಸಾಮಾನ್ಯ ಜನನಾಯಕರಿದ್ದರೆ ಪ್ರಧಾನಿಯಾಗಿ ಕನ್ನಡಮ್ಮನ ಬಾವುಟ ಕೆಂಪುಕೋಟೆಯ ಮೇಲೆ ಹಾರಿಸಿದ ಏಕೈಕ “ಕನ್ನಡಿಗ ದೇವೇಗೌಡರು”………………….
6.ತಮ್ಮ ಇಳಿವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಎಚ್ಚರವಹಿಸಿ ತಪಸ್ಸಿನಂತೆ ಯೋಗಾಭ್ಯಾಸ ಕಲಿತು ಪ್ರವೀಣ ಪರಿಣಿತರಾಗಿದ್ದರೆ ಯುವಕರು ನಾಚುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಜನಸಾಮಾನ್ಯರ ವಿಚಾರದಲ್ಲಿ ರೈತರ ವಿಷಯದಲ್ಲಿ ಅನ್ಯಾಯವಾದಾಗ ಮನೆಯಲ್ಲಿ ಕೂರದೆ ಬೀದಿಗಿಳಿದು ಹೋರಾಟ ಮಾಡಿ ನ್ಯಾಯ ಕೊಡಿಸುವ “ದಣಿವರೆಯದ ಧಣಿ ದೇವೇಗೌಡರು”……………..
7.ಕರ್ನಾಟಕದ ಪ್ರತಿ ಹಳ್ಳಿಹಳ್ಳಿಯ ಹೋಬಳಿಗಳ ತಾಲ್ಲೂಕು ಜಿಲ್ಲೆ ಪ್ರಾಂತ್ಯ ಸಹಿತ ರಾಜಕೀಯ ಅಂಕಿಅಂಶಗಳ ಜನಸಂಖ್ಯೆ ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ರಾಜಕೀಯ ಚಿಂತನೆಗಳನ್ನು ಮಾಡುವ ಕಾರ್ಯಕ್ರಮ ರೂಪಿಸಿ ಏಳಿಗೆಗೆ ಕಾರಣವಾಗುವ ಮಾನವ “ಗಣಕಯಂತ್ರ ದೇವೇಗೌಡರು”………………..
8.ಸುದೀರ್ಘ 55 ವರ್ಷಗಳು ನಿರಂತರವಾಗಿ ಜನರೊಂದಿಗೆ ಒಡನಾಟ ಇಟ್ಟುಕೊಂಡು ಅಧಿಕಾರ ಇರಲಿ ಇಲ್ಲದಿರಲಿ ಸುಮ್ಮನಿರದೆ ಕಷ್ಟಗಳ ಕೇಳಿಸಿಕೊಳ್ಳುವ ಪ್ರಯತ್ನ ಪಟ್ಟು ಬಿಡದೆ ಕೈಲಾಗುವಷ್ಟು ಕಷ್ಟ ಪರಿಹರಿಸಿ ಪರಿಹಾರ ಕೊಡಿಸಿ ಕಣ್ಣೀರು ಒರೆಸಿಯೆ ತೀರುವ “ಜನಸಾಮಾನ್ಯರ ಒಡನಾಡಿ ದೇವೇಗೌಡರು”…………..
9.ಈ ಕ್ಷಣಕ್ಕೂ ಸಹ ಯಾರೇ ಭೇಟಿ ಮಾಡಲು ಬಂದರೂ ತುಂಬಾ ಸುಲಭವಾಗಿ ಲಭ್ಯರಾಗಿ ಬರಮಾಡಿಕೊಂಡು ತದೇಕಚಿತ್ತದಿಂದ ಗಮನಿಸಿ ಸೌಜನ್ಯದಿಂದ ಮಾತನಾಡಿಸಿ ತಾಳ್ಮೆಯಿಂದ ಎಲ್ಲವನ್ನೂ ಆಲಿಸುವ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಜನರಿಗಾಗಿ ಮಾತ್ರ ಮೀಸಲಿಡುವ “ಮುತ್ಸದಿ ದೇವೇಗೌಡರು”…………….
10.ಎದುರಾಳಿಗಳು ವಿಪಕ್ಷಗಳ ಟೀಕೆಗೆ ಪ್ರತ್ಯುತ್ತರ ಕೊಡದೆ ಕೆಸರೆರಚಾಟಕ್ಕಿಳಿಯದೆ ಛಲದಿಂದ ಹಠ ಬಿಡದೆ ಹಿಡಿದ ಕೆಲಸ ಸಾಧಿಸಿ ತೋರಿಸಿ ತಮ್ಮ ಶ್ರಮದಿಂದ ಕೆಲಸ ಯಶಸ್ವಿಗೊಳಿಸಿ ಟೀಕಾಕಾರರ ಬಾಯಿ ಮುಚ್ಚಿಸುವ “ಅಭಿವೃದ್ಧಿ ಹರಿಕಾರ ದೇವೇಗೌಡರು”………………
ಇಷ್ಟೆಲ್ಲಾ ಸಾಧನೆಗಳು ಕೇವಲ ತೃಣಮಾತ್ರವಷ್ಟೆ……. “ದೇವೇಗೌಡರು ಒಂದು ಅಪೂರ್ವ ಗ್ರಂಥ”………..”ಮೊಗೆಯುತ್ತ ಹೋದಷ್ಟು ಮತ್ತೆ ಮತ್ತೆ ಉಕ್ಕುವ ಕುತೂಹಲಕ್ಕೆ ಕಾರಣವಾಗುವ ಮುಗಿಯದ ನೀರಿನ ಸೆಲೆಯಂತೆ”………….
“ಇಂದಿಗೆ ಸರಿಯಾಗಿ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ 23 ವರ್ಷಗಳು 11/12/1994″…………….ಈ ಶುಭ ಸಂದರ್ಭದಲ್ಲಿ “ಹಳ್ಳಿ ಹುಡುಗರು”ಕಡೆಯಿಂದ ಕಿರುಪರಿಚಯ ನೀಡುವ ಒಂದು ಸಣ್ಣ ಪ್ರಯತ್ನ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ ಉಳಿಯುತ್ತಿದ್ದಾರೆ. ಅವರ ಪ್ರಕಾರ ತುಪ್ಪ ಹಾಗೂ ಎಣ್ಣೆಯಿಂದ ಮಾಡಿದ ಪ್ರತಿಯೊಂದು ಆಹಾರವೂ ಹಾನಿಕಾರ. ನೀವು ಹೀಗೆ ಯೋಚನೆ ಮಾಡುವವರಾಗಿದ್ದರೆ ನಿಮ್ಮ ಕಲ್ಪನೆ ತಪ್ಪು. ಸ್ವಲ್ಪ ಪ್ರಮಾಣದ ತುಪ್ಪ ದೇಹಕ್ಕೆ ಬೇಕು. ಹಾಗಂತ ಅತಿಯಾಗಿ ಸೇವನೆ ಮಾಡಬಾರದು. ಅಧ್ಯಯನವೊಂದರ ಪ್ರಕಾರ ಹಾಲಿನಿಂದ ಮಾಡಿದ ಪದಾರ್ಥದಲ್ಲಿ ಸ್ಯಾಚ್ಯುರೇಟೆಡ್ ಕೊಬ್ಬಿರುತ್ತದೆ. ಇದು…
ನಮ್ಮ ಭಾರತದಲ್ಲಿ ಸುಧಾರಣೆಯಾಗುವುದು ತುಂಬಾನೇ ಇದೆ ಆದರೆ ಕೆಲವರು ಮಾತ್ರ ಅದನ್ನು ಸ್ವೀಕರಿಸಿ ಅದರ ಪಾಲನೆಯನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿಯೇ ಬದುಕುವ ಮಂದಿ ಹೆಚ್ಚು. ಸಮಾಜ ಸುಧಾರಣೆ ಮಾಡುವವರ ಸಂಖ್ಯೆ ಕಡಿಮೆ.
ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ 5% ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಕೆಲವರ್ಗದ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿಗೂ ಮುನ್ನ ಬೋನಸ್ ಹಾಗೂ ಸಾರಿಗೆ ಭತ್ಯೆ(TA) ಲಭ್ಯವಾಗಿದೆ. ಈಗ ನವೆಂಬರ್ ತಿಂಗಳಿನಲ್ಲಿ ಬಂಪರ್ ಕೊಡುಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರಿ ನೌಕರರ ಸಂಬಳ ಏರಿಕೆ ಬಗ್ಗೆ ನವೆಂಬರ್ ತಿಂಗಳಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಅಧಿಕೃತ ಆದೇಶ ಹೊರಬರಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ…
ದೇಶಾದ್ಯಂತ ಎರಡು ಸಾವಿರ ರೂಪಾಯಿ ನೋಟ್ ಚಲಾವಣೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. ಈ ವರ್ಷ ಸೆಪ್ಟೆಂಬರ್ 30ವರೆಗೂ ನೋಟು ವಿನಿಮಯಕ್ಕೆ ಕಾಲಾವಕಾಶ ನೀಡಲಾಗಿದೆ. ಮೇ 23 ರಿಂದ ಸಮೀಪದ ಬ್ಯಾಂಕ್ಗಳಿಗೆ ತೆರಳಿ ಸಾರ್ವಜನಿಕರು ನೋಟು ಬದಲಾವಣೆ ಮಾಡಿಕೊಳ್ಳಬಹುದು. ಇದಕ್ಕಾಗಿ ಬ್ಯಾಂಕ್ಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶಾದ್ಯಂತ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ. 2023 ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ವಿನಿಮಯ…
ನಿಮ್ಮ ಗುರಿಯನ್ನು ತಲುಪಲು ಶ್ರಮ ಪಡಬೇಕು. ಶ್ರಮ ಪಟ್ಟಾಗಲೇ ಅದಕ್ಕೆ ಪ್ರತಿಫಲ ಸಿಗುವುದು. ಗಂಡ ಇಲ್ಲದ ಈ 22 ವರ್ಷದ ಹೆಣ್ಣು ತಾನು ಆಟೋ ಓಡಿಸಿ ತನ್ನ ಚಿಕ್ಕ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದಾಳೆ .
ಮತದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳಿಗೆ ನೀಡದಿರಿ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಂತೆ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಎನ್.ಜಿ.ಓ.ಗಳು ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿವೆ. ಇಂತಹ ವಂಚನೆ ಪ್ರಕರಣಗಳಿಂದ ಸಾರ್ವಜನಿಕರು ಜಾಗರೂಕರಾಗಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ. ಚುನಾವಣಾ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳಂತೆ ಹಾಗೂ ಐ.ಟಿ ತಂತ್ರಾAಶಗಳ ಮೂಲಕ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಕೆಲವು ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದೂರುಗಳು ಮತ್ತು…