ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚರಕ ಸಂಹಿತೆ ಇಂದಿಗೂ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಗ್ರಂಥ ಎಂದು ಎಲ್ಲ ವೈದ್ಯರು ಒಕ್ಕೊರಲಿನಿಂದ ಒಪ್ಪುತ್ತಾರೆ , ಹೊಸ ಆರೋಗ್ಯ ಸಮಸ್ಯೆಗಳು , ಜಟಿಲ ಕಾಯಿಲೆಗಳು ಉತ್ಪತ್ತಿ ಆದಾಗ ವೈಜ್ಞಾನಿಕ ಪ್ರಪಂಚ ಆಸೆ ಭರವಸೆಗಳಿಂದ ನೋಡುವುದು ಈ 2ನೇ ಶತಮಾನದ ಗ್ರಂಥದೆಡೆಗೆ , ಚರಕ ಸಂಹಿತೆಯಲ್ಲಿ ಅಗ್ನಿವೇಶ ಎಂಬ ವಿದ್ಯಾರ್ಥಿಯು ಗುರುವಾದ ಅತ್ರೇಯರಲ್ಲಿ ನಮ್ಮ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳಿದ್ದಾನೆ -ಹಿತಕರವಾದ ಅಥವಾ ಅಹಿತಕರವಾದ ಆಹಾರ ಸೇವಿಸುವ ಎರಡು ತರಹದ ಜನರಲ್ಲಿ ಕೂಡ ಕೆಲವರು ಆರೋಗ್ಯದಿಂದ ಇರುತ್ತಾರೆ ,ಕೆಲವರು ರೋಗಿಗಳಾಗುತ್ತಾರೆ ಅಂತಹ ಸಂಧರ್ಭದಲ್ಲಿ ಹಿತ ಅಥವಾ ಅಹಿತ ಆಹಾರದಿಂದಲೇ ಆರೋಗ್ಯ , ಅನಾರೋಗ್ಯಗಳಾಯಿತು ಎಂದು ಹೇಗೆ ನಾವು ನಿಶ್ಚಯಿಸಿಕೊಳ್ಳಬಹುದು ಎಂಬುದೇ ಆ ಪ್ರಶ್ನೆ.
ಇದಕ್ಕೆ ಉತ್ತರಿಸುತ್ತಾ ಅತ್ರೇಯರು ಹೇಳುತ್ತಾರೆ ಕೇವಲ ಹಿತಾಹಾರ ಸೇವನೆಯಿಂದ ಎಲ್ಲ ರೋಗಗಳ ಆತಂಕ ನಿವಾರಣೆ ಅಸಾಧ್ಯ. ಏಕೆಂದರೆ ಅಹಿತ ಆಹಾರಕ್ಕೂ ಮಿಗಿಲಾಗಿ ರೋಗದ ಉತ್ಪತ್ತಿಗೆ ಇನ್ನು ಅನೇಕ ಕಾರಣಗಳಿರುತ್ತವೆ. ಉದಾಹರಣೆಗೆ-ಕಾಲ ವಿಪರ್ಯಾಯ ಎಂದರೆ ಋತು ಕಾಲಕ್ಕೆ ಅನುಸಾರ ಗುಣಗಳಾದ ಚಳಿ ಸೆಖೆ ಮಳೆಗಳು ತೀವ್ರವಾಗಿ ಏರು ಪೆರು ಆಗುವುದು ,ಇದು ರೋಗಕಾರಕ ಕ್ರಿಮಿಗಳನ್ನು ಬಲಪಡಿಸುವುದು ನಮ್ಮ ಶರೀರ ಬಲವನ್ನು ಕಡಿಮೆ ಮಾಡುವುದು.
ಪ್ರಜ್ಞಾಪರಾಧ – ಆರೋಗ್ಯಕ್ಕೆ ಹಾನಿಕರ ಎಂದು ತಿಳಿದು ತಿಳಿದು ಮಾಡುವಂತಹವು ಅನೇಕ ಗುಟ್ಕಾ ,ತಂಬಾಕು ಸೇವನೆಯಿಂದ ಹಿಡಿದು ಐಸ್ ಕ್ರೀಮ್ , ಅತಿ ಮಾಸಲೆಗಳನ್ನು ತಿಂದು ಅಸಿಡಿಟಿ ಮಾಡಿಕೊಳ್ಳುವುದು, ಹಸಿವಿಲ್ಲದಿದ್ದರು ಕೂಡ ಅತಿಯಾಗಿ ತಿನ್ನುವುದು, ಶುಚಿಯಾಗಿ ಕೈ ಕಾಲು ತೊಳೆಯದೆ ಇರುವುದು ,ಸ್ವಚ್ಛ ಬಟ್ಟೆ ಧರಿಸದಿರುವುದು , ಎಲ್ಲವು ಪ್ರಜ್ಞಾಪರಾಧಗಳೇ ,ನಮ್ಮ ಜ್ಞಾನೇಂದ್ರಿಯಗಳಿಗೆ ಒಗ್ಗದ ಶಬ್ದ ,ಸ್ಪರ್ಶ ,ರೂಪ , ರುಚಿ , ಹಾಗು ವಾಸನೆಗಳನ್ನು ಅನುಭವಿಸುವುದು ಇತ್ಯಾದಿ.
ಪ್ರತಿ ವ್ಯಕ್ತಿಯ ಶರೀರದ ರಕ್ತ ಮಾಂಸಾದಿ ಧಾತುಗಳು ,ವಾಸಿಸುವ ಸ್ಥಳ,ಶರೀರ ಬಲ ,ಕಾಲ- ವಾತಾವರಣ , ಸ್ಥೂಲ ಜೀರ್ಣ ಶಕ್ತಿ ಹಾಗು ಸೂಕ್ಷ್ಮವಾದ ಪ್ರತಿ ಕೋಶಗಳ ಮೈಟೊಕಾಂಡ್ರಿಯ ದಲ್ಲಿ ಆಗುವ ಜೀರ್ಣ ಕ್ರಿಯೆ ,ವಯಸ್ಸು , ಅಹಿತದ ಪ್ರಮಾಣ ಇತ್ಯಾದಿ ಅನೇಕ ಕಾರಣಗಳ ವಿವಿಧ ರೀತಿಯ ಸಂಯೋಗದಿಂದ ವ್ಯಾಧಿ ಉತ್ಪತ್ತಿ ಆಗುತ್ತದೆ ಅದಕ್ಕಾಗಿಯೇ ಅದೇ ರೋಗವು ಕೆಲವರಲ್ಲಿ ಶೀಘ್ರವಾಗಿ ಉತ್ಪತ್ತಿ ಆಗಬಹುದು ಕೆಲವರಲ್ಲಿ ನಿಧಾನವಾಗಿ , ಹಾಗು ಸಣ್ಣದಾಗಿಯೂ ಬರಬಹುದು ಅಥವಾ ಉಗ್ರ ರೂಪ ತಾಳಿ ಸಾವಿಗೂಕಾರಣ ಆಗಬಹುದು. ಇದೇ ಕಾರಣಕ್ಕಾಗಿ ಯಾವುದೇ ಕೊರೊನದಂತಹ ಸಾಂಕ್ರಾಮಿಕ ಕಾಯಿಲೆಗಳು ಕೂಡ ಒಂದೇ ಮನೆಯ, ಒಂದೇ ಕಚೇರಿಯ ಎಲ್ಲರಿಗು ಒಂದೇ ತರಹದಲ್ಲಿ ಭಾದಿಸುತ್ತಿಲ್ಲ.
ಮುಂದುವರಿದು ಅತ್ರೇಯರು ಸಾಂಧರ್ಭಿಕವಾಗಿ ಹೇಳುತ್ತಾರೆ “ನಾನಾವೃತ ಮುಖೋ ಜೃಂಭ ,ಕ್ಷವತು, ಹಾಸ್ಯಾಂ ವಾ ಪ್ರವರ್ತಯೇತ್” ಅಂದರೆ ಬಾಯಿ ಹಾಗು ಮೂಗನ್ನು ಮುಚ್ಚದೆ ಆಕಳಿಸುವುದು ,ಸೀನುವುದು ,ನಗೆಯಾಡುವುದು ಮಾಡಬಾರದು ,ಮೂಗಿನ ಹೊಳ್ಳೆಗಳಿಗೆ ಬೆರಳು ಹಾಕುವುದು ,ಉಗುರು ಕಚ್ಚುವುದು ,ಕಂಡ ಕಂಡಲ್ಲಿ ಉಗುಳುವುದು ,ಮಲಮೂತ್ರಗಳ ವಿಸರ್ಜನೆಯನ್ನು ಕೂಡ ಆರೋಗ್ಯದ ದೃಷ್ಟಿಯಿಂದ ಮಾಡದಂತೆ ಎಚ್ಚರಿಸಿದ್ದಾರೆ ,.
ವ್ಯಾಧಿಕ್ಷಮತ್ವ- ಆಯುರ್ವೇದದಲ್ಲಿ ವ್ಯಾಧಿಕ್ಷಮತ್ವ ಎಂಬುದು ಬಹುಚರ್ಚಿತ ವಿಷಯವಾಗಿದ್ದು ಅದನ್ನೇ ಶರೀರ ಬಲ ಅಥವಾ ಈ ದಿನಗಳಲ್ಲಿ ಇಮ್ಯೂನಿಟಿ ಎಂದು ಕರೆಯುತ್ತಾರೆ ,ವ್ಯಾಧಿ ಕ್ಷಮತ್ವ ಎಂದರೆ ವ್ಯಾಧಿ ಬಲವನ್ನು ವಿರೋಧಿಸುವ ಶರೀರ ಹಾಗು ಮನಸ್ಸಿನ ಶಕ್ತಿಯಾಗಿದ್ದು ವ್ಯಾಧಿ ಬರದಂತೆ ತಡೆಯುವುದರೊಂದಿಗೆ ,ಬಂದರೋಗದಿಂದ ಬೇಗನೆ ಗುಣಮುಖವಾಗಲು ಪ್ರಧಾನ ಕಾರಣವಾಗಿರುವ ಪ್ರತಿರೋಧಕ ಶಕ್ತಿಯೇ ಆಗಿರುತ್ತದೆ ಅದರ ಕೊರತೆಯಿಂದಾಗಿ ಅನೇಕ ವಯಸ್ಕರು , ಹೃದ್ರೋಗಿಗಳು ಕೊರೋನ ಕ್ಕೆ ಬಲಿಯಾಗುವುದು ಗೋಚರಿಸುತ್ತಿದೆ ,
ಶರೀರ ಬಲ ಚರಕ ಸಂಹಿತೆ ಪ್ರಕಾರ ಮೂರು ತರಹದ್ದಾಗಿರುತ್ತದೆ ,
1) ಸಹಜ ಬಲ- ಇದು ಜನ್ಮದಿಂದ ಪ್ರಾಪ್ತಿ ಆಗುವಂತದ್ದು ,ಅಪ್ಪ ಅಮ್ಮನಿಂದ ಉತ್ಪತ್ತಿ ಆದ ವೀರ್ಯ ಅಂಡಾಣು, ಗರ್ಭಿಣಿಯ ಆಹಾರ ಹಾಗು ಅವರ ಮನಸ್ಸಿಗೆ ಅನುಗುಣವಾಗಿರುತ್ತದೆ , ಸಧೃಡ ದೇಹ ಇದ್ದು ದುರ್ಬಲ ಮನಸ್ಸಿರಬಹುದು ಅಥವಾ ಬಲಹೀನ ಶರೀರದಲ್ಲಿ ಅಪ್ಪ ಅಮ್ಮನಿಗೆ ಅನುಗುಣವಾಗಿ ಸತ್ವಯುತ ಮನಸ್ಸಿರಬಹುದು.
2) ಎರಡನೆಯದು ಕಾಲಜ ಬಲ- ಎಂದರೆ ಋತುವಿಗೆ ಹಾಗು ವಯಸ್ಸಿಗೆ ಅನುಸಾರವಾಗಿ ಉದಾಹರಣೆಗೆ ಹೇಮಂತ ಶಿಶಿರ ಋತುಗಳಲ್ಲಿ ಸಹಜವಾಗಿ ಶರೀರ ಬಲ ಹೆಚ್ಚಿದ್ದು ಕಾಯಿಲೆಗಳು ಕಮ್ಮಿ ಇರುವುದು ಕಂಡು ಬರುತ್ತದೆ ಅಂತೆಯೇ ಬಾಲ್ಯ , ಯೌವನ ಹಾಗು ವೃದ್ಧಾಪ್ಯ ಕಾಲಾನುಸಾರ ಶರೀರ ಬಲ.
3) ಮೂರನೆಯದಾಗಿ ಯುಕ್ತಿ ಕೃತ ಬಲ- ಅಂದರೆ ನಮ್ಮ ಬುದ್ಧಿವಂತಿಕೆಯಿಂದ ಶರೀರ ಬಲವನ್ನು ಪಡೆದುಕೊಳ್ಳುವುದು ಇದರಲ್ಲಿ ವ್ಯಾಯಾಮ, ಹಾಲು , ತುಪ್ಪ, ಹಣ್ಣುಗಳ ಸೇವನೆ , ಒಳ್ಳೆಯ ದಿನಚರಿ ಪಾಲನೆ ,ಲೇಹ್ಯ ರಾಸಾಯನದಂತಹ ಔಷಧಿಗಳು ಇಂದಿನ ಯುಗದ ವ್ಯಾಕ್ಸೀನ್ ಕೂಡ ಒಳಗೊಂಡಂತೆ ಇದೆ.
ವ್ಯಾಧಿಕ್ಷಮತ್ವ ಎಂಬುದು ಆಯುರ್ವೇದದ ಸಿದ್ಧಾಂತ ಪ್ರಕಾರ ಪೋಲಿಯೋ, ದಡಾರ ಅಥವಾ ಇತರೆ ಯಾವುದೇ ವ್ಯಾಕ್ಸೀನ್ ನಂತೆ ಯಾವುದೇ ಒಂದು ನಿರ್ದಿಷ್ಟ ಕ್ರಿಮಿಯ ರೋಗದ ವಿರುದ್ಧವಾಗಿ ಇರುವುದಿಲ್ಲ, ಇದು ಎರಡು ವಿಷಯಗಳ ಆಧಾರಿತವಾಗಿ ಇದೆ.
ಮೊದಲನೆಯದಾಗಿ ಕಾಯಿಲೆ ತರುವ ಕ್ರಿಮಿಗೆ ಅನುಕೂಲಕರವಾಗುವಂತೆ ನಮ್ಮ ದೇಹ ಇದ್ದಾಗ ಕಾಯಿಲೆ ಆಗುತ್ತದೆ ಹಾಗು ಎರಡನೆಯದಾಗಿ ಎಲ್ಲ ವ್ಯಕ್ತಿಗಳು ಕೂಡ ಒಂದೇ ಮಟ್ಟಕ್ಕೆ ಕಾಯಿಲೆಗೆ ಒಳಪಡುವುದಿಲ್ಲ. ,ತಾತ್ಪರ್ಯ ಏನೆಂದರೆ ಹೇಗೆ ಅನುಕೂಲವಾದಂತ ಭೂಮಿ ಸಿಗದಿದ್ದರೆ ಬಿತ್ತಿದ ಬೀಜ ತಾನೇ ನಾಶವಾಗುವುದೋ ,ಇಂಧನ ಇಲ್ಲದ ಅಥವಾ ಗಾಳಿ ಇಲ್ಲದೆ ಬೆಂಕಿ ಹೇಗೆ ಆರುವುದೋ ಅಂತೆಯೇ ವ್ಯಾಧಿಕ್ಷಮತ್ವದಿಂದಾಗಿ ವ್ಯಾಧಿಗೆ ಅನುಕೂಲ ಪರಿಸ್ಥಿತಿ ನಮ್ಮ ದೇಹದಲ್ಲಿ ಇಲ್ಲದಿದ್ದಾಗ ಸಹಜವಾಗಿ ಸಾಂಕ್ರಾಮಿಕ ಹಾಗು ಇತರೆ ಕಾಯಿಲೆಗಳ ವಿರುದ್ಧ ದೇಹ ಗೆಲ್ಲುತ್ತದೆ , ಕ್ರಿಮಿ ಯಾವುದು ಎಂಬುದು ಮುಖ್ಯ ಅಲ್ಲ ನಮ್ಮ ಶರೀರ ಹೇಗಿದೆ ಎಂಬುದೇ ಅತಿ ಮುಖ್ಯ.
ವ್ಯಾಧಿಕ್ಷಮತ್ವ ಎಂಬುದು ಸೂಪರ್ ಮಾರ್ಕೆಟ್ ಗಳಲ್ಲಿ ಮಾರಾಟಕ್ಕಿರುವ ವಸ್ತುವಲ್ಲ ,ಆರೋಗ್ಯವನ್ನು ಕಾಪಾಡಲು ಬೇಕಾದ ಆಹಾರ ,ವಿಹಾರ, ನಿದ್ರೆ , ಒತ್ತಡ ರಹಿತ ಜೀವನ ಹಾಗು ದಿನಚರಿಗಳಲ್ಲಿ ಅಡಗಿದೆ ,ಅಂತೆಯೇ ಮನೆ ಮದ್ದಿಗೆ ಹೇಳುವ ಅರಶಿನ ಇತ್ಯಾದಿ ಮಸಾಲೆಗಳು ಮಾತ್ರ ಆಯುರ್ವೇದ ಅಲ್ಲ ಅವು ಆಯುರ್ವೇದದ ಔಷಧಿ ಸಮುದ್ರದಿಂದ ಒಂದು ಹನಿ ತೆಗೆದಂತೆ ಮಾತ್ರ .
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪೂರ್ವ ಮತ್ತು ಪಶ್ಚಿಮ ಘಟ್ಟಗಳಬೆಸೆಯುವ ಸೇತುವೆ ಎಂದೇ ಕರೆಸಿಕೊಳ್ಳುವಹಾಗೂ ಬಿಳಿ ಬಣ್ಣವನ್ನು ಹೊದ್ದುಕೊಂಡಿರುವಸ್ವಚ್ಛಂದ ಶ್ವೇತ ವರ್ಣದ ಬೆಟ್ಟದಹೆಸರೇ ಶ್ವೇತಾದ್ರಿ.ಇಂತಹದೊಂದು ಅಪರೂಪವಾದ ಪ್ರಕೃತಿ ರಮಣೀಯವಾದ ಪ್ರೇಕ್ಷಣೀಯಸ್ಥಳ ಇರುವುದು ಚಾಮರಾಜನಗರ ಜಿಲ್ಲೆಹಾಗೂ ತಾಲೂಕಿನಲ್ಲಿ. ಹಸಿರು ಸೀರೆಯುಟ್ಟ ನಾರಿಯಂತೆಕಾಣುವ ಆ ಹಚ್ಚಹಸಿರಾದ ಬೆಟ್ಟನೋಡಲು ಕಣ್ಣೆರಡು ಸಾಲದು. ಅಂದ ಚೆಂದದ ಬೆಟ್ಟದ ಸಾಲುಗಳ ಮಧ್ಯೆ ನುಸುಳುವಗಾಳಿಗೆ ಮೈ ಒಡ್ಡಿದರೆ ಆಹಾಸ್ವರ್ಗದ ಸುಖ.ತೇಲುವ ಮೋಡಗಳ ಮಧ್ಯೆ ಬೆಟ್ಟದ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ರೀತಿಯ ಆಹ್ಲಾದಕರ. ಪ್ರಕೃತಿ ಸೊಬಗನ್ನು ಹೊದ್ದು ಮಲಗಿದಂತೆ ಕಾಣುವ ಈ ಶ್ವೇತಾದ್ರಿ…
ಮೇಷ ರಾಶಿ ಭವಿಷ್ಯ (Tuesday, November 23, 2021) ನಿಮ್ಮ ಅನಿರೀಕ್ಷಿತ ಸ್ವಭಾವ ನಿಮ್ಮ ವೈವಾಹಿಕ ಸಂಬಂಧವನ್ನು ಹಾಳು ಮಾಡಲು ಬಿಡಬೇಡಿ. ಇದನ್ನು ತಡೆಯುವುದನ್ನು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದಲ್ಲಿ ನೀವು ನಂತರ ವಿಷಾದಪಡಬಹುದು. ಆಹ್ವಾನಿಸದ ಯಾವುದೇ ಅತಿಥಿ ಇಂದು ಮನೆಗೆ ಬರಬಹುದು ಆದರೆ ಈ ಅತಿಥಿಯ ಅದೃಷ್ಟದ ಕಾರಣದಿಂದ ಇಂದು ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ಮಕ್ಕಳು ನಿಮ್ಮ ದಿನವನ್ನು ಕಠಿಣಗೊಳಿಸುತ್ತಾರೆ. ಅವರ ಆಸಕ್ತಿ ಕಾಯ್ದುಕೊಳ್ಳಲು ಪ್ರೀತಿಯ ಅಸ್ತ್ರ ಬಳಸಿ ಮತ್ತು ಯಾವುದೇ ಅನಗತ್ಯ ಒತ್ತಡ ತಪ್ಪಿಸಿ. ಪ್ರೀತಿಯಿಂದ…
ಆನ್ಲೈನಿನಲ್ಲಿ ಮಾರಕಟ್ಟಗೆ ಬಂದ ಶಿಯೋಮಿ ರೆಡ್ಮಿ ನೋಟ್ 4 ಸ್ಮಾರ್ಟ್ಪೋನು ಈ ಹಿಂದಿನ ನೋಟ್ 3 ಮಾರಾಟದ ದಾಖಲೆಯನ್ನು ಅನಾಯಸವಾಗಿ ಆಳಿಸಿ ಹಾಕಿತ್ತು. ಮೂರು ವಿಧದಲ್ಲಿ ಈ ಪೋನು ಲಭ್ಯವಿದ್ದು, 4 GB RAM ಮತ್ತು 64 GB ROM ಮಾದರಿಗಳಲ್ಲಿ ಮಾರಾಟವಾಗುತ್ತಿದೆ….
ಸಸ್ಯಾಹಾರಿ ಖಾದ್ಯವನ್ನು ಆರ್ಡರ್ ಮಾಡಿದ್ದ ವಕೀಲರೊಬ್ಬರಿಗೆ ಮಾಂಸಾಹಾರಿ ಖಾದ್ಯವನ್ನು ಡೆಲಿವರಿ ಮಾಡಿದ್ದಕ್ಕಾಗಿ ಆಹಾರ ಸರಬರಾಜು ಮಾಡುವ ಝೊಮ್ಯಾಟೋ ಹಾಗೂ ಆ ಮಾಂಸಾಹಾರಿ ಖಾದ್ಯವನ್ನು ನೀಡಿದ ಹೋಟೆಲ್ ಗೆ ಪುಣೆಯ ಗ್ರಾಹಕ ನ್ಯಾಯಾಲಯವು 55 ಸಾವಿರ ರುಪಾಯಿ ದಂಡ ವಿಧಿಸಿದೆ. ಮಾಧ್ಯಮದ ವರದಿ ಪ್ರಕಾರ, ಇನ್ನು ನಲವತ್ತೈದು ದಿನದೊಳಗೆ ವಕೀಲ ಷಣ್ಮುಖ್ ದೇಶ್ ಮುಖ್ ಗೆ ದಂಡದ ಮೊತ್ತ ಪಾವತಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ,…
ಜಾಮ್ ಬಾಟ್ಲಿಯ ಮುಚ್ಚಳ ತೆಗೆಯುವುದು ಸಾಹಸದ ಕೆಲಸ. ಎರಡೂ ಕೈಗಳನ್ನು ಚೆನ್ನಾಗಿ ಸೋಪು ನೀರಿನಲ್ಲಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿ. ಈಗ ಒಣಗಿದ ಕೈಗಳಿಂದ ಬಾಟ್ಲಿಯ ಮುಚ್ಚಳವನ್ನು ತಿರುಗಿಸಿದರೆ ಸುಲಭವಾಗಿ ತೆರೆಯುವುದು.
ಹಲಸಿನ ಹಣ್ಣಿನ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಆದ್ರೆ ಇದು ವರ್ಷ ಪೂರ್ತಿ ನಮ್ಗೆ ಸಿಗೋದಿಲ್ಲ. ಕೆಲವೊಂದು ಸೀಸನ್’ಗಳಲ್ಲಿ ಮಾತ್ರ ಸಿಗುತ್ತೆ. ಹಲಸಿನ ಹಣ್ಣಿನ ವಿಚಾರದಲ್ಲಿ, ಆರೋಗ್ಯದ ಕಡೆ ಬಂದ್ರೆ ಕೆಲವೊಂದು ಅಭಿಪ್ರಾಯಗಳು ವಿಭಿನ್ನವಾಗಿವೆ. ಎನಂದ್ರೆ ಹಲಸಿನ ಹಣ್ಣು ತಿಂದ್ರೆ ಖಾಯಿಲೆ ಬರುತ್ತೆ, ಆರೋಗ್ಯ ಕೆಡುತ್ತೆ ಅನ್ನೋದು ಇದೆ.