ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಾಸ್ತುಶಾಸ್ತ್ರವೆನ್ನುವುದು ಶತಮಾನಕ್ಕಿಂತಲೂ ಹಿಂದಿನಿಂದಲೂ ಇತ್ತು. ಆಗಿನ ಕಾಲದಲ್ಲಿ ಕಟ್ಟಡ, ಮನೆ ಹಾಗೂ ಯಾವುದೇ ರೀತಿಯ ನಿರ್ಮಾಣ ಮಾಡಬೇಕಿದ್ದರೂ ವಾಸ್ತು ಪ್ರಕಾರವೇ ಅದನ್ನು ಮಾಡಿಕೊಂಡು ಬರಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಪ್ರತಿಯೊಂದು ವಿಚಾರವೂ ವಾಣಿಜ್ಯೀಕರಣವಾಗಿರುವ ಹಿನ್ನೆಲೆಯಲ್ಲಿ ವಾಸ್ತು ಶಾಸ್ತ್ರವು ಹಾಗೆ ಆಗಿದೆ. ವಾಸ್ತುಶಾಸ್ತ್ರವು ಅತಿಯಾಗಿ ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ಇಂದು ಯಾವುದೇ ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಬೇಕಿದ್ದರೂ ಅಲಂಕಾರ ಅಥವಾ ಯಾವುದೇ ಪೀಠೋಪಕರಣ ಇಡಬೇಕಿದ್ದರೂ ಅದನ್ನು ವಾಸ್ತುಶಾಸ್ತ್ರದ ಪ್ರಕಾರ ಮಾಡಲಾಗುತ್ತದೆ.
ಮನೆ ಅಥವಾ ಕಟ್ಟಡದಲ್ಲಿ ಸುಖ, ಸಮೃದ್ಧಿ ನೆಲೆಸಬೇಕಿದ್ದರೆ ಕೆಲವೊಂದು ವಾಸ್ತು ಸೂತ್ರಗಳನ್ನು ಪಾಲಿಸಿಕೊಂಡು ಹೋಗಬೇಕು. ಇದರಿಂದ ಸಮಸ್ಯೆಗಳು ಪರಿಹಾರವಾಗುವುದು. ಹಣಕ್ಕಾಗಿ ಇರುವಂತಹ ಕೆಲವೊಂದು ವಾಸ್ತು ಸಸ್ಯಗಳು ಯಾವುದೆಂದರೆ ಮನಿ ಪ್ಲ್ಯಾಂಟ್, ಅದೃಷ್ಟದ ಬಿದಿರು, ಪೀಸ್ ಲಿಲಿ, ಸಿಂಗೊನಿಯಮ್ ಗಳು, ಅಥುರಿಯಮ್ ಗಳು ಮತ್ತು ಜೇಡ್ ಗಳು ಇದರಲ್ಲಿದೆ. ಹಣವನ್ನು ಆಹ್ವಾನಿಸಲು ಅದೃಷ್ಟದ ಬಿದಿರು ಮತ್ತು ಮನಿ ಪ್ಲ್ಯಾಂಟ್ ನ್ನು ಮನೆಯಲ್ಲಿ ಇಡುವುದು ಸಾಮಾನ್ಯ.

ವಾಸ್ತು ಪ್ರಕಾರ ಅದೃಷ್ಟದ ಬಿದಿರು : ಫೆಂಗ್ ಶೂಯಿ ಅದೃಷ್ಟದ ಬಿದಿರನ್ನು ಮನೆಯಲ್ಲಿ ಇಡಬೇಕು ಎಂದು ಸಲಹೆ ನೀಡುತ್ತದೆ. ಇದು ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿದೆ. ಇದನ್ನು ನೀವು ಖರೀದಿ ಮಾಡುವುದು ತುಂಬಾ ಒಳ್ಳೆಯದು. ಇದು ಆನ್ ಲೈನ್ ಮತ್ತು ಅಂಗಡಿಯಲ್ಲೂ ಸಿಗುವುದು. ಇದು ನೀರು ಮತ್ತು ಮಣ್ಣಿನಲ್ಲಿ ಎರಡರಲ್ಲೂ ಬೆಳೆಯುವುದು. ಇದು ಚಿಕಣಿ ಬಿದಿರಿಗೆ ಕಂಡುಬಂದರೂ ಅದು ಡ್ರಯಕೆನಾ ಕುಲಕ್ಕೆ ಸೇರಿರುವಂತದ್ದಾಗಿದೆ. ಆಫ್ರಿಕಾ ಮೂಲದಿಂದ ಬಂದಿರುವಂತಹ ಇದರ ಎರಡು ವೈಜ್ಞಾನಿಕವಾದ ಹೆಸರುಗಳೆಂದರೆ ಡ್ರಾಕನೆ ಬ್ರಾಯುನಿ ಅಥವಾ ಡ್ರಾಕನೆ ಸ್ಯಾಂಡೇರಿಯಾನಾ. ಇದು ಮನೆಯ ಒಳಗಡೆ ಸುಮಾರು ಮೂರು ಅಡಿಯಷ್ಟು ಎತ್ತರಕ್ಕೆ ಬೆಳೆಯುವುದು. ಆದರೆ ಇದರ ನಿರ್ವಹಣೆ ಮತ್ತು ಆರೈಕೆಯು ತುಂಬಾ ಸುಲಭ.

ಹಣಕ್ಕಾಗಿ ಅದೃಷ್ಟದ ಬಿದಿರನ್ನು ಇಡಲು ಕೆಲವು ಸಲಹೆಗಳು •ಅದೃಷ್ಟದ ಬಿದಿರಿನಲ್ಲಿ ಎಲ್ಲಾ ಐದು ಅಂಶಗಳಾಗಿರುವಂತಹ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶವು ಪ್ರತಿನಿಧಿಸುವ ಕಾರಣದಿಂದಾಗಿ ಇದು ಮನೆಯ ಒಳಗೆ ಸಮೃದ್ಧಿ ಹಾಗೂ ಅದೃಷ್ಟವನ್ನು ತರುವುದು. •ಮನೆಯಲ್ಲಿ ಲಕ್ಷ್ಮೀಯು ಬರಬೇಕೆಂದಿದ್ದರೆ ಆಗ ನೀವು ಈ ಅದೃಷ್ಟದ ಬಿದಿರನ್ನು ಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು. •ಉಡುಗೊರೆಯಾಗಿ ಇದನ್ನು ಪಡೆದಾಗ ಅದು ನಿಜವಾಗಿಯೂ ದೊಡ್ಡ ಮಟ್ಟದಲ್ಲಿ ಅದೃಷ್ಟ ತರುವುದು. •ಅದೃಷ್ಟದ ಬಿದಿರನ್ನು ಇಡುವ ವೇಳೆ ಇದರ ಸುತ್ತಲು ನಕಾರಾತ್ಮಕವಾದ ವಸ್ತುಗಳನ್ನು ಇಡಬೇಡಿ. ಅದೇನೆಂದರೆ ತುಂಡಾಗಿರುವ ಅಥವಾ ಕೆಲಸಕ್ಕೆ ಬಾರದ ವಸ್ತುಗಳನ್ನು ಇಡಬೇಡಿ.

ಮನಿಪ್ಲ್ಯಾಂಟ್ ನ್ನು ಮನೆಯಲ್ಲಿ ಇಡಲು ಕೆಲವೊಂದು ಸಲಹೆಗಳು •ಮನೆಯ ಹಾಲ್ ಅಥವಾ ವಾಸಿಸುವ ಕೊಠಡಿಯ ಆಗ್ನೇಯ ಭಾಗದಲ್ಲಿ ಮನಿಪ್ಲ್ಯಾಂಟ್ ನ್ನು ಇಡಲು ಸರಿಯಾದ ಜಾಗವಾಗಿದೆ. ಮನೆಯ ಆಗ್ನೇಯ ದಿಕ್ಕಿನ ಯಜಮಾನ ಗಣೇಶನಾಗಿರುವನು. ಈ ಪ್ರದೇಶದ ಆಡಳಿತಾಧಿಕಾರಿ ಶುಕ್ರ. ಗಣೇಶನು ಬರುವಂತಹ ತೊಂದರೆಗಳನ್ನು ನಿವಾರಣೆ ಮಾಡುವನು ಮತ್ತು ಶುಕ್ರನು ಸಂಪತ್ತನ್ನು ತರುವನು. ಇದರಿಂದ ಮನೆಯ ಆಗ್ನೇಯ ಭಾಗದಲ್ಲೇ ಈ ಮನಿಪ್ಲ್ಯಾಂಟ್ ನ್ನು ಇಡಬೇಕು. •ಮನೆಯ ಈಶಾನ್ಯ ಭಾಗದಲ್ಲಿ ಯಾವತ್ತಿಗೂ ಮನಿಪ್ಲ್ಯಾಂಟ್ ನ್ನು ಇಡಬಾರದು. ಈ ಭಾಗದ ಆಡಳಿತಾಧಿಕಾರಿ ಗುರು, ಇದು ಶುಕ್ರ ಗ್ರಹದ ಶತ್ರುವಾಗಿದೆ. ಈ ಜಾಗದಲ್ಲಿ ಮನಿಪ್ಲ್ಯಾಂಟ್ ನ್ನು ಇಟ್ಟರೆ ಅದರಿಂದ ದುರಾದೃಷ್ಟವು ಬರುವುದು. ಮರಗಳನ್ನು ನೆಡುವುದರಿಂದ ಎತ್ತರಕ್ಕೆ ಬೆಳೆಯುವ ಅಶೋಕ, ಬೇವು, ತೆಂಗಿನ ಮರ ಮತ್ತು ಗಿಡಗಳಾದ ತುಳಸಿ ಮತ್ತು ಅರಿಶಿನಗಳು ನಿಮ್ಮ ಮನೆಯೊಳಗೆ ದುಷ್ಟಶಕ್ತಿಗಳು ಪ್ರವೇಶಿಸುವುದನ್ನು ತಡೆಯುತ್ತವೆ ಹಾಗೂ ಇತರ ಸಸ್ಯಗಳಿಂದ ಎದುರಾಗಬಹುದಾಗಿದ್ದ ಕೆಟ್ಟ ಪ್ರಭಾವವನ್ನೂ ಕಡಿಮೆಗೊಳಿಸುತ್ತವೆ. ಹತ್ತಿಗಿಡ, ರೇಷ್ಮೆ ಹತ್ತಿಗಿಡ (Silky cotton plant) ಮತ್ತು ತಾಳೆ ಮರಗಳು ಮನೆಯ ಆವರಣದಲ್ಲಿರುವುದು ದುರಾದೃಷ್ಟವನ್ನು ತರುತ್ತದೆ ಎಂದು ವಾಸ್ತು ತಿಳಿಸುತ್ತದೆ. ವಿಶೇಷ ಟಿಪ್ಪಣಿ: ಮನೆಯ ಅಕ್ಕಪಕ್ಕ ಯಾವುದೇ ಗಿಡ ಅಥವಾ ಮರ ಸಾಯುತ್ತಿದ್ದರೆ ಅದನ್ನು ಆದಷ್ಟು ಬೇಗ ಅಲ್ಲಿಂದ ತೆಗೆಸಿ. ಒಣಗಿದ ಹೂವುಗಳು ಸಹಾ ದುರಾದೃಷ್ಟವನ್ನು ತರಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಶುಕ್ರವಾರದಂದು ವಿಶ್ವದಾದ್ಯಂತ ತೆರೆಕಂಡಿದ್ದು, ಸಿನಿ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 25 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಕೆಜಿಎಫ್ ಚಿತ್ರ 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಚಿತ್ರ…
ದಕ್ಷಿಣ ಕಾಶಿ ಅಂತರಗ0ಗೆಯಲ್ಲಿ ಶಿವ ಲಕ್ಷದೀಪೋತ್ಸವ ವೈಭವ ಕಾಶಿ ವಿಶ್ವೇಶ್ವರನ ಕಲ್ಯಾಣೋತ್ಸವ,ತೆಪ್ಪೋತ್ಸವಕ್ಕೆ ಹರಿದು ಬಂದ ಭಕ್ತಸಾಗರ ಕೋಲಾರ:- ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ನಗರದಲ್ಲಿ ಹೊರವಲಯದ ಅಂತರಗ0ಗೆಯಲ್ಲಿ ಬುಧವಾರ ರಾತ್ರಿ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬಂದ ಭಕ್ತ ಸಾಗರ ಸಾಕ್ಷಿಯಾಯಿತು. ಅಂತರಗ0ಗೆಯಲ್ಲಿ ಕಳೆದ 20 ವರ್ಷಗಳಿಂದಲೂ ಅದ್ದೂರಿಯಾಗಿ ನಡೆಯುತ್ತಿರುವ ಶಿವ ಲಕ್ಷ ದೀಪೋತ್ಸವವನ್ನು ಇಲ್ಲಿನ ಕಾಶೀ ವಿಶ್ವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಸಾರ್ವಜನಿಕ ಉತ್ಸವವನ್ನಾಗಿ ಆಚರಿಸುವ ಮೂಲಕ ಗಮನ…
ಸರಕಾರಿ ಮತ್ತು ಖಾಸಗಿ ಕಂಪನಿ ಎಲ್ಲಿ ಕೆಲಸ ಮಾಡಿದರೂ ,ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿದರೂ, ಉದ್ದ್ಯೋಗಿಗಳು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದರು ಪ್ರಮೋಷನ್, ಸಂಬಳ ಹೆಚ್ಚಳದ ಬಗ್ಗೆ ಎದರು ನೋಡುತ್ತಿರುತ್ತಾರೆ
ಇಂದು ಬುಧವಾರ, 14/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ರೈಲ್ವೆ ಇಲಾಖೆ ಕೇಂದ್ರ ಸರ್ಕಾರಕ್ಕೊಂದು ಪತ್ರ ಬರೆದಿದೆ. ರೈಲ್ವೆ ಇಲಾಖೆಯಲ್ಲಿ ಕುಟುಂಬ ಪಿಂಚಣಿ ವ್ಯವಸ್ಥೆಯಿದೆ. ಅದಕ್ಕೆ ಕೆಲವೊಂದು ನಿಯಮಗಳಿವೆ. ಆದ್ರೆ ಒಂದು ವರ್ಷದ ಹಿಂದೆ ರೈಲ್ವೆ ಸಿಬ್ಬಂದಿ ಪುತ್ರ ಈಗ ಪುತ್ರಿಯಾಗಿರುವ ವ್ಯಕ್ತಿ ಕುಟುಂಬ ಪಿಂಚಣಿಗಾಗಿ ಪತ್ರ ಬರೆದಿದ್ದಾನೆ. ಇದೇ ವಿಚಾರ ಸದ್ಯ ಕೇಂದ್ರದ ಮೆಟ್ಟಿಲೇರಿದೆ. 2017ರಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಅವ್ರ 32 ವರ್ಷದ ಮಗ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಾಸ್ತವವಾಗಿ ಸಿಬ್ಬಂದಿ ಹಣವನ್ನೇ ಕುಟುಂಬ ಆಶ್ರಯಿಸಿಕೊಂಡಿದ್ದರೆ ಮಾತ್ರ ಪಿಂಚಣಿ ನೀಡಲಾಗುತ್ತದೆ. 25 ವರ್ಷದೊಳಗಿನ ಮದುವೆಯಾಗದ…
ಹೌದು,ನೀವೂ ಕೇಳಿದ್ದು ನಿಜ, ರೈತರು ಸರ್ಕಾರದ ಈ ಯೋಜನೆ ಮೂಲಕ 2.5 ಲಕ್ಷ ಸಬ್ಸಿಡಿ ಪಡೆದು ಬೋರ್ ವೆಲ್ ಕೊರೆಸುವ ಸಂಪೂರ್ಣ ಮಾಹಿತಿ ಇಲ್ಲಿದೆ… ಈ ಮಾಹಿತಿ ನಮ್ಮ ರೈತ ಭಾಂದವರಿಗೆ ಹೆಚ್ಚು ಉಪಯುಕ್ತವಾಗಿದ್ದು,ಆದಷ್ಟೂ ಎಲ್ಲರಿಗೂ ಮತ್ತು ನಿಮ್ಮ ಸ್ನೇಹಿತರಿಗೂ ಮರೆಯದೇ ಶೇರ್ ಮಾಡಿ… ಈಗಂತೂ ಹಲವಾರು ವಿಭಾಗಗಳಲ್ಲಿ ಸರ್ಕಾರಗಳು ಜನರಿಗೆ ಉಪಯುಕ್ತವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ.ಅದರಲ್ಲಿ ಇದು ಒಂದು ರೈತರಿಗೆ ಅನುಕೂಲವಾಗುವಂತಹ ಯೋಜನೆಯಾಗಿದೆ. ಕೆಲವೊಂದು ಅಭಿವೃದ್ಧಿ ನಿಗಮದ ಸಹಕಾರದಡಿಯಲ್ಲಿ ಗಂಗಾ ಕಲ್ಯಾಣ ಯೋಜನೆ ಜಾರಿಯಲ್ಲಿದ್ದು.. ಇದರ…