ದಿನಕ್ಕೊಂದು ನೀತಿ ಕಥೆ

ಭೂಮಿ ಮೇಲೆ ಯಾರು ಹೆಚ್ಚು ಸುಖೀ?ರಾಜನಿಗೆ ಕಾಡಿದ ಈ ಪ್ರಶ್ನೆಗೆ ಉತ್ತರ ಕೊಟ್ಟವರು ಯಾರು ಗೊತ್ತಾ..?ತಿಳಿಯಲು ಈ ಕಥೆ ಓದಿ…

490

ಒಮ್ಮೆ ರಾಜನಿಗೆ ಈ ಇಳೆಯಲ್ಲಿ ಯಾರು ಹೆಚ್ಚು ಸುಖೀ ಹಾಗೂ ಸಂತೃಪ್ತ…! ಎಂದು ತಿಳಿಯುವ ಮನಸ್ಸಾಯಿತು. ತನ್ನ ಪ್ರಶ್ನೆಯನ್ನು ಸಭಾಸದರ ಮುಂದಿಟ್ಟ. ತಲೆಗೊಂದೊಂದು ಉತ್ತರ ಬಂತು. ಯಾವ ಉತ್ತರವೂ ರಾಜನಿಗೆ ಸಮಾಧಾನ ತರಲಿಲ್ಲ. ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಹೇಗಾದರೂ ಉತ್ತರ ಕಂಡುಕೊಳ್ಳಬೇಕೆಂಬ ತವಕದಿಂದ ರಾಜ ಮಾರುವೇಷದಲ್ಲಿ ಸಂಚಾರ ಹೊರಟ. ರಾಜ್ಯದ ಹಳ್ಳಿ, ಹಳ್ಳಿಗಳನ್ನು ಸುತ್ತುತ್ತಾ, ಅಲ್ಲಿನ ಜನರನ್ನು ಮಾತಾಡಿಸುತ್ತಾ, ಅವರ ಕಷ್ಟ-ಸುಖಗಳನ್ನು, ಆಲಿಸುತ್ತಾ, ಸಮಾಧಾನವನ್ನೋ, ಪರಿಹಾರವನ್ನೋ ಹೇಳುತ್ತಾ ನಡೆದ.

ಒಂದು ರಾತ್ರಿ ದೂರದ ಹಳ್ಳಿಯೊಂದರ ಜಗಲಿಯಲ್ಲಿ ಕುಳಿತು ಆನಂದದಿಂದ ಹಾಡುತ್ತಿದ್ದ ರೈತನೊಬ್ಬ ಕಾಣಿಸಿದ. ಮಾರುವೇಷದಲ್ಲಿದ್ದ ರಾಜನಿಗೆ ಆತನನ್ನು ಕಂಡು ಅಚ್ಚರಿಯಾಯಿತು. ಆತನ ಕುಶಲ ವಿಚಾರಿಸಿ, ಬಹಳ ಸಂತೋಷದಿಂದ ಹಾಡುತ್ತಿರುವ ಕಾರಣ ಕೇಳಿದ. ಅದಕ್ಕೆ ರೈತನ ಉತ್ತರ ಹೀಗಿತ್ತು; “ದಿನವೂ ಕಷ್ಟಪಟ್ಟು ಹೊಲದಲ್ಲಿ ದುಡಿಯುತ್ತೇನೆ. ಭಗವಂತನ ದಯೆಯಿಂದ ಸಿಕ್ಕ ಫ‌ಲದಲ್ಲಿ ಅರ್ಧ ಭಾಗವನ್ನು ಮಾತ್ರ ನನ್ನ ದೈನಂದಿನ ಜೀವನದ ನಿರ್ವಹಣೆಗೆ ಖರ್ಚು ಮಾಡುತ್ತೇನೆ. ಉಳಿದ ಅರ್ಧಭಾಗದಲ್ಲಿ ಕಾಲು ಭಾಗವನ್ನು ಸಾಲ ತೀರಿಸಲು, ಇನ್ನುಳಿದ ಕಾಲು ಭಾಗವನ್ನು ಸಾಲ ಕೊಡುವುದಕ್ಕೂ ವ್ಯಯಿಸುತ್ತೇನೆ. ಹೀಗಾಗಿ ನನ್ನ ಆದಾಯದ ಮಿತಿಯಲ್ಲಿ ನಾನು ಜೀವಿಸುತ್ತಾ ನನ್ನ ಕುಟುಂಬದವರೊಟ್ಟಿಗೆ ಸುಖ- ಸಂತೋಷದಿಂದಿದ್ದೇನೆ’ ಎಂದ.

ರೈತನ ಈ ಮಾತು ರಾಜನಿಗೆ ಒಗಟಾಗಿ ಕಂಡಿತು. “ಸಾಲ ಕೊಡುವುದು, ಸಾಲ ತೀರಿಸುವುದು ಹೀಗಂದರೇನು? ಕೊಂಚ ಬಿಡಿಸಿ ಹೇಳು ಮಹರಾಯ’ ಎಂದ. ರಾಜನ ಮಾತಿಗೆ ನಗುತ್ತ ರೈತನೆಂದ; “ಸಾಲ ಕೊಡುವುದೆಂದರೆ, ನನ್ನ ದುಡಿಮೆಯ ಕಾಲು ಭಾಗವನ್ನು ನಾನು ನನ್ನ ತಂದೆ- ತಾಯಿಯರನ್ನು ಸಾಕಲು ವ್ಯಯಿಸುತ್ತೇನೆ. ಕಾರಣ ಅವರು ನನ್ನನ್ನು ತಮ್ಮ ಕಷ್ಟದಲ್ಲೂ ನನ್ನನ್ನು ಸಾಕಿ- ಸಲಹಿ ದೊಡ್ಡವನನ್ನಾಗಿ ಮಾಡಿ¨ªಾರೆ. ಅವರ ಋಣ ನನ್ನ ಮೇಲಿದೆ. ಹೀಗಾಗಿ ವೃದ್ಧರಾದ ಅವರನ್ನು ನೋಡಿಕೊಳ್ಳುವುದು ನನ್ನ ಹೊಣೆ. ಇದು ನಾನು ಪಡೆದ ಸಾಲ ತೀರಿಸುವ ರೀತಿ. ಇನ್ನು ನಿಮ್ಮ ಅನುಮಾನ ಸಾಲ ಕೊಡುವ ಕುರಿತದ್ದು; ಅದೂ ಹೀಗೆಯೇ, ನಾನು ನನ್ನ ಮಕ್ಕಳನ್ನು ಸಾಕಿ-ಸಲಹಿ, ಸಶಕ್ತರನ್ನಾಗಿ ಮಾಡುತ್ತಿದ್ದೇನೆ. ಇದು ಒಂದು ರೀತಿ ಸಾಲ ಕೊಟ್ಟಂತೆ; ಅಂದರೆ ಅವರು ಮುಂದೆ ನನಗೆ ಮತ್ತು ನನ್ನ ಹೆಂಡತಿಗೆ ವಯಸ್ಸಾದಾಗ ದಿಕ್ಕಾಗುತ್ತಾರೆ. ಇನ್ನು ಉಳಿದ ಅರ್ಧಭಾಗದಲ್ಲಿ ನನ್ನ ದೈನಂದಿನ ಜೀವನ ಹೇಗೋ ಸಾಗುತ್ತದೆ.

ಹೀಗಾಗಿ ನನ್ನ ನೆಮ್ಮದಿಯ ಜೀವನಕ್ಕೆ ಭಂಗವಿಲ್ಲ’ ಎಂದು ನಗೆ ಬೀರಿದ. ರೈತನ ಜೀವನೋತ್ಸಾಹದ ಮಾತು ರಾಜನಲ್ಲಿ ಹೊಸ ಅರಿವನ್ನೇ ಹುಟ್ಟಿಸಿತು. ಸರಳ ಜೀವನ ಹಾಗೂ ಇದ್ದುದರ ತೃಪ್ತಿ ಹೊಂದುವ ಗುಣ ಇವೇ ಬದುಕಿನ ಸುಖ-ಸಂತೋಷದ ಮೂಲ ಎನ್ನುವ ಸತ್ಯ ಗೊತ್ತಾಯಿತು. ಆಗಲೇ ರಾಜನನ್ನು ಕಾಡುತ್ತಿದ್ದ ಪ್ರಶ್ನೆಗೆ ಉತ್ತರವೂ ದೊರಕಿತು.

ಮೂಲ:- 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    132 ಕೋಟಿಮೌಲ್ಯ ಬೆಲೆ ಬಾಳುವ ಈ ನಂಬರ್ ಪ್ಲೇಟನ್ನು ಮಾರಟಕ್ಕೆ ಇಟ್ಟಿದ್ದಾರೆ, ಇಷ್ಟಕ್ಕೂ ಇದರ ವಿಶೇಷತೆಯಾದರು ಏನು?

    ನಮ್ಮ ದೈನಂದಿನ ದಿನ ಪತ್ರಿಕೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಫ್ಯಾನ್ಸಿ ನಂಬರ್‌ಗಳನ್ನು ಖರೀದಿಸುವ ಸುದ್ದಿಗಳನ್ನು ಓದಿರುತ್ತೇವೆ. ಆದರೇ, ಇಲ್ಲೊಬ್ಬ ಉದ್ಯಮಿ ತನ್ನ ದುಬಾರಿ ಸೂಪರ್ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರ ಬೆಲೆಯು ಕೇವಲ 132 ಕೋಟಿ ಎಂದು ಹೇಳಿಕೊಂಡಿದ್ದಾನೆ.ಹೌದು, ಬ್ರಿಟನ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ‘ಎಫ್1’ ನಂಬರ್ ಪ್ಲೇಟ್‌ಗೆ ಇದೀಗ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಈ ಹಿಂದೆ 2008ರಲ್ಲಿ ಕೇವಲ 4.5 ಕೋಟಿ ಬೆಲೆ ಹೊಂದಿದ್ದ ಎಫ್1 ನಂಬರ್ ಪ್ಲೇಟ್‌ಗಳು…

  • ಸುದ್ದಿ

    ಚಿಕಿತ್ಸೆ ಹೆಸರಿನಲ್ಲಿ ವೈದ್ಯ ಮಾಡ್ತಿದ್ದ ಕೊಳಕು ಕೆಲಸ…!

    ಮುಂಬೈನ ಓಶಿವಾರ ಪೊಲೀಸರು ವೈದ್ಯನೊಬ್ಬನನ್ನು ಬಂಧಿಸಿದ್ದಾರೆ. ಚಿಕಿತ್ಸೆ ಸ್ಥಳದಲ್ಲಿ ವೈದ್ಯ ಕ್ಯಾಮರಾ ಇಟ್ಟಿದ್ದನೆಂದು ಮಹಿಳೆ ಆರೋಪ ಮಾಡಿದ್ದಾಳೆ. ಮಹಿಳೆ ಕೂದಲು ತೆಗೆಸಿಕೊಳ್ಳಲು ಮುಂದಾಗಿದ್ದಳಂತೆ. ಇದೇ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದಾಳೆ. ಚಿಕಿತ್ಸಾ ಸ್ಥಳದಲ್ಲಿ ವೈದ್ಯರ ಜೊತೆ ಮೂವರು ಸಹಾಯಕರು ಇದ್ದರು ಎನ್ನಲಾಗಿದೆ. ಚಿಕಿತ್ಸೆ ವೇಳೆ ಮಹಿಳೆ ಬಟ್ಟೆ ಬಿಚ್ಚುತ್ತಿದ್ದಂತೆ ಮುಂದಿದ್ದ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ತಕ್ಷಣ ಆ ಕ್ಯಾಮರಾ ಫೋಟೋವನ್ನು ಸೆರೆ ಹಿಡಿದ ಮಹಿಳೆ ಅಲ್ಲಿಂದ ಹೊರಗೆ ಬಂದಿದ್ದಾಳೆ. ಹದಿನೈದು ದಿನಗಳಿಗೊಮ್ಮೆ ಕ್ಯಾಮರಾದಲ್ಲಿರುವ ತುಣುಕುಗಳು ಸ್ವಯಂಚಾಲಿತವಾಗಿ ಅಳಿಸಿ ಹೋಗುತ್ತವೆ…

  • ವಿಸ್ಮಯ ಜಗತ್ತು

    ಈ ಕಾಲದಲ್ಲೂ ಈ ಜನ ವರ್ಷ ಪೂರ್ತಿ ನೀರಿನಲ್ಲೇ ವಾಸ ಮಾಡುತ್ತಾರೆ!

    ಆಗಸದಲ್ಲಿ ವಾಸಮಾಡಲು ಜನರು ನಿರ್ಧರಿಸುತ್ತಿರುವ ಈ ಆಂತರಿಕ ಯುಗದಲ್ಲಿ, ಇನ್ನೂ ಕೆಲುವು ಬುಡಕಟ್ಟು ಜನಾಂಗಗಳು ನೀರಿನಲ್ಲಿ ವಾಸ ಮಾಡುತ್ತಿರುವುದು ಆಚ್ಚರಿ ಸಂಗತಿ.

  • ತಂತ್ರಜ್ಞಾನ

    ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ ! ತಿಳಿಯಲು ಇದನ್ನು ಓದಿ..

    ಈ ವರ್ಷದ ಡಿಸೆಂಬರ್ 1ರ ಒಳಗಾಗಿ ನಾಲ್ಕು-ಚಕ್ರ ವಾಹನ ಅಥವಾ ಎಲ್ಲಾ ಕಾರುಗಳ ಮುಂಭಾಗದ ವಿಂಡ್‌ಸ್ಕ್ರೀನ್‌ನಲ್ಲಿ ಹೊಸ ಟೋಲ್‌ಗಳಲ್ಲಿ ಫಾಸ್ಟ್ ಟ್ಯಾಗ್ ಸಾಧನಗಳನ್ನು ಹೊಂದಲು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.

  • ಸುದ್ದಿ

    ಹಳ್ಳಿ ಹುಡುಗನ ಮೇಲೆ ವಿದೇಶಿ ಹುಡುಗಿಯ ಪ್ರಪೋಸ್. ಪ್ರೇಮ ಕುರುಡೋ? ಪ್ರೇಮಿ ಕುರುಡೋ? ದೇವರೇ ಬಲ್ಲ..

    ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್. ತಮಗೆಲ್ಲರಿಗೂ ತಿಳೆದಿರುವ ಹಾಗೆ ಪ್ರೀತಿ ಎಂಬುದು ಯಾವಾಗ, ಯಾರಿಗೆ, ಯಾವ ಜಾಗದಲ್ಲಿ, ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ.. ಯಾವ ರೂಪದಲ್ಲಿ ಯಾರ ಮೇಲಾದರೂ ಕೂಡ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ,ಸುಂದರಿ ಕುರೂಪಿ , ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ…

  • ಸುದ್ದಿ

    ಬ್ರಹ್ಮಾವರದಲ್ಲಿ ಮಹಾಮಳೆಯ ಅಬ್ಬರ : ಜನಜೀವನ ಅಸ್ತವ್ಯಸ್ತ…..!

    ಬ್ರಹ್ಮಾವರ ತಾಲೂಕಿನೆಲ್ಲೆಡೆ ಕುಂಭ ದ್ರೋಣ ಮಳೆಯ ಅಬ್ಬರ ಜೋರಾಗಿದ್ದು, ಮಂಗಳವಾರ ಬೆಳಗ್ಗಿನಿಂದಲೇ ಸುರಿದ ಮಳೆಯಿಂದಾಗಿ ಹಲವೆಡೆಗಳಲ್ಲಿ ನೆರೆ ಆವರಿಸಿದೆ. ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ್ದರೆ, ಅನೇಕ ಕಡೆಗಳಲ್ಲಿ ಗದ್ದೆ, ಅಡಿಕೆ, ತೆಂಗಿನ ತೋಟ ಸಹಿತ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ. ಬ್ರಹ್ಮಾವರ ಪರಿಸರದ ಮಟಪಾಡಿ, ನೀಲಾವರ, ನಂದನಕುದ್ರು, ರಾಮನಕುದ್ರು, ಬಲ್ಜಿ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು ಇದರಿಂದಾಗಿ ವಾಹನ ಸವಾರರು ಕೂಡ ಸಮಸ್ಯೆಯನ್ನು ಅನುಭವಿಸಿದರು. ಅನೇಕ ಕಡೆಗಳಲ್ಲಿ ಭತ್ತದ ಕೃಷಿ ಬೆಳೆದಿರುವ ಗದ್ದೆ ಜಲಾವೃತಗೊಂಡಿದ್ದರೆ, ಅಡಿಕೆ ತೋಟಗಳಲ್ಲಿ ನೀರು ನಿಂತಿದೆ….