News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ದಿನಕ್ಕೊಂದು ನೀತಿ ಕಥೆ

ಭೂಮಿ ತಲೆಕೆಳಗಾದರೆ …? ಓದಿ ದಿನಕ್ಕೊಂದು ನೀತಿ ಕಥೆ….

2504

ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತಿದ್ದಾಗ ಬೋದಿಸತ್ವ ಒಂದು ಸಿಂಹದ ಹೊಟ್ಟೆಯಲ್ಲಿ ಹುಟ್ಟಿ ಕಾಡಿನಲ್ಲಿದ್ದ. ಆ ಕಾಡಿನ ಅಂಚಿನ ಸಮುದ್ರತೀರದಲ್ಲಿ ಒಂದು ಬೇಲದ ಮತ್ತು ತಾಳೆಯ ಮರಗಳ ತೋಪಿತ್ತು. ಒಂದು ತಾಳೆಯ ಮರ ಮತ್ತು ಬೇಲದಮರದ ಅಕ್ಕಪಕ್ಕದಲ್ಲಿ ಕಡೆ ಮೊಲವೊಂದು ವಾಸಮಾಡುತ್ತಿತ್ತು.

ಒಂದು ದಿನ ಆ ಮೊಲ ತಾಳೆಯ ಮರದ ನೆರಳಿನಲ್ಲಿ ಮಲಗಿತ್ತು. ಒಂದು ಕ್ಷಣ ಅದಕ್ಕೆ ಅಕಸ್ಮಾತ್ ಈ ಭೂಮಿಯೇ ತಲೆಕೆಳಗಾದರೇನುಗತಿ? ಎಂಬ ಯೋಚನೆ ಬಂತು. ಅದೇ ಸಮಯದಲ್ಲಿ ಒಂದು ಬೇಲದ ಹಣ್ಣು ತೊಟ್ಟು ಕಳಚಿ ತಾಳೆಯ ಗರಿಯ ಮೇಲೆ ಬಿದ್ದು ಶಬ್ದವಾಯಿತು. ಅದನ್ನು ಕೇಳಿ ಮೊಲ ಭೂಮಿ ತಲೆಕೆಳಗಾಗುತ್ತಿದೆ ಎಂದೇ ಬಾವಿಸಿ ಬೀತಿಯಿಂದ ಓಡತೊಡಗಿತು.

ವಿಪರೀತ ಭಯದಿಂದ ಓಡುತ್ತಿರುವ ಅದನ್ನು ದಾರಿಯಲ್ಲಿ ಇನ್ನೊಂದು ಮೊಲ ಕಂಡು, ‘’ಏಕೆ ಹೀಗೆ ಓಡುತ್ತಿರುವೆ? ಏನಾಯಿತು?’’ ಎಂದು ಕೇಳಿತು.

‘’ಅಯ್ಯೋ, ಅದನ್ನು ಏನೆಂದು ಹೇಳಲಿ? ಭೂಮಿ ತಲೆಕೆಳಗಾಗುತ್ತಿದೆ‘’ ಎಂದು ಅದು ಓಡುತ್ತಲೇ ಇತ್ತು. ಆ ಇನ್ನೊಂದು ಮೊಲವು ಭಯಬೀತಿಯಿಂದ ಅದರ ಹಿಂದೆ ಓಡತೊಡಗಿತು. ಅವೆರಡನ್ನೂ ನೋಡಿ ಇನ್ನೊಂದು ಮತ್ತೊಂದು, ಹೀಗೆ ಸಾವಿರ ಮೊಲಗಳ ಹಿಂಡೇ ಓಡತೊಡಗಿತು.

ಅಷ್ಟೇ ಅಲ್ಲದೆ ಅಷ್ಟು ಮೊಲಗಳ ಗಾಬರಿಯಿಂದ ಹಾಗೆ ಓಡುತ್ತಿರುವುದನ್ನು ಕಂಡು ಭೂಮಿ ತಲೆಕೆಳಗಾಗುವ ಆಪತ್ತು ಬಂದಿದೆಯೆಂದು ತಿಳಿದು ಭಯದಿಂದ ಒಂದು ಹಂದಿ, ಹಸು, ಎಮ್ಮೆ ಮತ್ತು ಹುಲಿ, ಸಿಂಹ, ಆನೆ ಇತ್ಯಾದಿ ಪ್ರಾಣಿಗಳೂ ಓಡತೊಡಗಿದವು ಹಲವು ಪ್ರಾಣಿಗಳ ಸಾಲುಗಳ ಸೇರಿ ಒಂದು ಯೋಜನದಷ್ಟು ಉದ್ದವಾಯಿತು.

ದಾರಿಯಲ್ಲಿ ಸಿಂಹವಾಗಿದ್ದ ಬೋದಿಸುತ್ತ ಈ ಮೆರವಣಿಗೆಯನ್ನು ಕಂಡು ‘’ಎಲ್ಲ ಏಕೆ ಹೀಗೆ ಓಡುತ್ತಿರುವಿರಿ?’’ ಎಂದು ಕೇಳಿದ. ಅವೆಲ್ಲ ‘ಭೂಮಿ ತಲೆಕೆಳಗಾಗುವುದು ಎಂದಾದರೂ ಸಾದ್ಯವೇ? ಇವು ಬೇರೆ ಏನನ್ನೋ ಕಂಡು ತಪ್ಪು ತಿಳಿದು ಹೀಗೆ ಓಡುತ್ತಿರಬೇಕು. ಹೀಗೆ ಬಿಟ್ಟರೆ ಎಲ್ಲ ಪ್ರಾಣಿಗಳು ಅನ್ಯಾಯವಾಗಿ ನಾಶವಾಗಿಬಿಡುತ್ತವೆ. ಅದನ್ನು ತಪ್ಪಿಸಬೇಕು’ ಎಂದು ಬೋದಿಸತ್ವ ಯೋಚಿಸಿದ.

ಕೂಡಲೇ ಸಿಂಹ ವೇಗವಾಗಿ ಓಡಿ ಬಂದು ಎಲ್ಲ ಪ್ರಾಣಿಗಳು ಅಡ್ಡವಾಗಿ ನಿಂತು ಮೂರೂ ಸಲ ಸಿಂಹನಾದ ಮಾಡಿತು. ಹೆದರಿದ ಪ್ರಾಣಿಗಳೆಲ್ಲ ನಿಂತವು. ‘’ಏಕೆ ಓಡುತ್ತಿರುವೆ?’’ಎಂದು ಅವನು ಕೇಳಿದ.

‘’ಭೂಮಿ ತಲೆಕೆಳಗಾಗುತ್ತಿದೆ.’’

‘’ಅದನ್ನು ನೋಡಿದವರಾರು?’’

‘’ಆನೆ’’

ಆನೆ ತನಗೆ ಗೊತ್ತಿಲ್ಲ, ಸಿಂಹಕ್ಕೆ ಗೊತ್ತು ಎಂದು ಹೇಳಿತು. ಸಿಂಹ ಹುಲಿಯನ್ನು ತೋರಿಸಿತು. ಹುಲಿ ಇನ್ನೊಂದು ಪ್ರಾಣಿಯನ್ನು ತೋರಿಸಿತು. ಹುಲಿ ಇನ್ನೊಂದು ಪ್ರಾಣಿಯನ್ನು ತೋರಿಸಿತು.  ಕಡೆಗೆ ಮೊಲಗಳ ಸರದಿ ಬಂತು. ಮೊಲಗಳು ತಮ್ಮ ಮುಂದೆ ಓಡಾಡುತಿದ್ದ ಮೊಲವನ್ನು ತೋರಿಸಿದೆವು.

‘’ಭೂಮಿ ತಲೆಕೆಳಗಾಗಿರುವದನ್ನು ನೋಡಿದೆಯಾ?’’ ಎಂದು ಸಿಂಹ ಮೊಲವನ್ನು ಕೇಳಿತು.

‘’ಹೌದು, ನಾನು ನೋಡಿದೆ’’ ಎಂದಿತು ಮೊಲ.

‘’ಎಲ್ಲಿ?’’

‘’ಸಮುದ್ರದಲ್ಲಿ ಹತ್ತಿರ ಬೇಲ ಮತ್ತು ತಾಳೆಯ ಮರಗಳ ತೋಪಿನಲ್ಲಿ. ಅಲ್ಲಿ ನಾನು ಬೇಲದ ಮರದ ಬುಡದಲ್ಲಿ ಮಲಗಿದ್ದೆ. ಒಂದು ವೇಳೆ ಭೂಮಿ ತಲೆಕೆಳಗಾದರೆ ಎಲ್ಲಿ ಹೋಗಲಿ? ಎಂದು ನಾನು ಯೋಚಿಸಿದ್ದೆ. ಆಗ ಭೂಮಿ ತಲೆಕೆಳಗಾಗುವ ಸದ್ದು ಕೇಳಿ ಬಂತು. ನಾನು ಓಡಿ ಬಂದೆ.’’

ನಿಜ ಸಂಗತಿಯನ್ನು ತಿಳಿಯಬೇಕೆಂದು ಸಿಂಹ ಇತರ ಪ್ರಾಣಿಗಳನ್ನು ಕುರಿತು ‘’ಈ ಮೊಲ ಹೇಳಿದ ಮಾತು ನಿಜವೇ ಎಂಬುದನ್ನು ನಾನು ತಿಳಿದು ಬರುವವರೆಗೆ ನೀವೆಲ್ಲ ಇಲ್ಲಿಯೇ ಇರಿ‘’ ಎಂದು ಹೇಳಿ ಮೊಲವನ್ನು ಕರೆದು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ಹೊರಟಿತು.

ಅವೆರೆಡೂ ಬಹುಬೇಗ ಆ ತೋಪಿನ ಬಳಿಗೆ ಬಂದವು. ಮೊಲವನ್ನು ಇಳಿಸಿ ‘’ಆ ಸ್ಥಳವನ್ನು ತೋರಿಸಿ’’ ಎಂದು ಸಿಂಹ ಹೇಳಿತು. ಅದು ಹೆದುರುತ್ತಲೇ ಹೋಗಿ, ‘’ಇದೇ ಶಬ್ದವಾದ ಸ್ಥಳ’’  ಎಂದು ತೋರಿಸಿತು.

ಸಿಂಹ ಆ ಸ್ಥಳಕ್ಕೆ ಹೋಗಿ ಪರಿಶೀಲಿಸಿತು. ಅಲ್ಲೇ ತಾಳೆಗರಿಯ ಮೇಲೆ ಬಿದ್ದಿದ್ದ ಬೇಲದ ಹಣ್ಣನ್ನು ನೋಡಿ, ಇದು ಭೂಮಿ ತಲೆಕೆಳಗಾಗುತ್ತಿರುವ ಶಬ್ದವಲ್ಲ. ಬೇಲದ ಹಣ್ಣು ತಾಳೆಯ ಗರಿಯ ಮೇಲೆ ಬಿದ್ದ ಶಬ್ದವನ್ನು ಕೇಳಿ ತಪ್ಪು ತಿಳಿದುಕೊಂಡಿದೆಯೆಂದು ಅರ್ಥಮಾಡಿಕೊಂಡಿತು.

ಅನಂತರ ಮತ್ತೆ ಮೊಲವನ್ನು ಬೆನ್ನ ಮೇಲೆ ಕೂಡಿಸಿಕೊಂಡು ಸಿಂಹ ಆ ಪ್ರಾಣಿಗಳಿದ್ದ ಸ್ಥಳಕ್ಕೆ ಬಂದು, ನಿಜ ಸಂಗತಿಯನ್ನ್ಜು ತಿಳಿಸಿ ಪ್ರಾಣಿಗಳಿಗೆ ಧೈರ್ಯ ಹೇಳಿತು. ತಮ್ಮ ಪ್ರಾಣವುಳಿಸಿದ ಸಿಂಹವನ್ನು ಎಲ್ಲ ಪ್ರಾಣಿಗಳೂ ಕೊಂಡಾಡಿದವು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ʼಬಿಪಿಎಲ್ʼ ಕಾರ್ಡ್ ಪಡೆದವರಿಗೆ ಒಂದು ಶಾಕಿಂಗ್ ಸುದ್ದಿ….!

    ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿವೆ. ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರನ್ನು ಪತ್ತೆಹಚ್ಚಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಸರ್ಕಾರ ಬಿಪಿಎಲ್ ಪಡಿತರ ಚೀಟಿ ಪಡೆಯಲು 1.20 ಲಕ್ಷ ರೂ. ಒಳಗೆ ಕುಟುಂಬದ ಆದಾಯ ನಿಗದಿಪಡಿಸಿದೆ. ಆದಾಯವನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ್ದಾರೆ. ನೌಕರರು, ವರ್ತಕರು,…

  • ಜ್ಯೋತಿಷ್ಯ

    ಸೋಮವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಇಂದು ಸೋಮವಾರ, 12/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಖರ್ಚುವೆಚ್ಚಗಳಿದ್ದರೂ ಧನಾಗಮನ ಉತ್ತಮ. ಆರೋಗ್ಯದಲ್ಲಿ ಸ್ಥಿರತೆ ಕಂಡುಬರುವುದು. ತುಸು ಅನಾರೋಗ್ಯ ಕಾಡುವ ಸ್ಥಿತಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ . ವೃಷಭ:- ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ. ಶತ್ರುಗಳಿಂದ ಭೀತಿಯ ವಾತಾವರಣ ಸೃಷ್ಟಿ. ಹಣವನ್ನು ಒಯ್ಯುವಾಗ ಎಚ್ಚರಿಕೆಯಿಂದ ಇರಿ.ಅಧಿಕಾರಿಗಳ ಕೆಂಗಣ್ಣಿಗೆ ಗುರಿ. ಕೋರ್ಟು ಕಚೇರಿಯ ಕೆಲಸಗಳಲ್ಲಿ ನಿಮ್ಮ ಪರವಾಗಿ ತೀರ್ಪು . ಮಿಥುನ:– ದೂರ ಸಂಚಾರದಲ್ಲಿ ಜಾಗ್ರತೆ.ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ. ಯೋಗ್ಯ ವಯಸ್ಕರಿಗೆ ಕಂಕಣಬಲ.ಯಂತ್ರೋಪಕರಣಗಳಿಂದ ಆದಾಯ….

  • Cinema

    ರೂಮಿಗೆ ಬಾ ಎಂದ ನಿರ್ದೇಶಕ : ನಟಿ ಮಾಡಿದ್ದೇನು ಗೊತ್ತ..?

    ಇತ್ತೀಚೆಗೆ ವಿದ್ಯಾ ಬಾಲನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಕೆರಿಯರ್ ಬಗ್ಗೆ ಹಾಗೂ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. 2005ರಲ್ಲಿ ವಿದ್ಯಾ ಬಾಲಾನ್ ‘ಪರಿಣೀತಾ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ಬಾಲಿವುಡ್‍ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು. ಸಂದರ್ಶನದಲ್ಲಿ ವಿದ್ಯಾ ತಾವು ನಟಿಯಾಗಲು ಎಷ್ಟು ಕಷ್ಟಪಟ್ಟಿದ್ದೇನೆ ಎಂಬ ವಿಷಯವನ್ನು ಈಗ ಹಂಚಿಕೊಂಡಿದ್ದಾರೆ. ಅಲ್ಲದೆ ಒಂದೇ ಸಮಯದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 12 ಚಿತ್ರಗಳನ್ನು ಕಳೆದುಕೊಂಡಿದ್ದರ…

  • Automobile

    ಈ ಬೈಕ್ ಕಲುಷಿತ ನೀರಿನಲ್ಲಿ ಓಡಿಸಬಹುದು! ಇದು ಕೊಡೋ ಮೈಲೇಜ್ ಬಗ್ಗೆ ಕೇಳಿದ್ರೆ, ಶಾಕ್ ಆಗ್ತೀರಾ…

    ನಾವು ದಶಕಗಳಿಂದಲೂ ನೀರಿನಲ್ಲಿ ಓಡುವ ಬೈಕ್ ಗಳ ಕತೆಗಳ ಬಗ್ಗೆ ಓದಿರುತ್ತೇವೆ. ಅದೇ ರೀತಿ ಬ್ರೆಜಿಲ್ ಒಬ್ಬರು ನೀರಿನಲ್ಲಿ ಓಡುವ ಬೈಕ್’ನ್ನು ಕಂಡುಹಿಡಿದಿದ್ದಾರೆ.

  • ಸಂಬಂಧ

    ಮೊದಲ ಬಾರಿಗೆ ಹುಡುಗ ಹುಡುಗಿಯ ಕೈ ಹಿಡಿದ್ರೆ :ಆಕೆಯ ಮನಸ್ಸು ಏನನ್ನುತ್ತೆ?ತಿಳಿಯಲು ಈ ಲೇಖನ ಓದಿ..

    ಪ್ರೀತಿಸುವ ಹುಡುಗ ಹುಡುಗಿಯ ಕೈಯನ್ನು ತನ್ನ ಕೈಗಳಲ್ಲಿ ಬಂಧಿಸಿದಾಗ ಉಂಟಾಗುವ ಅನುಭವವೇ ಮಧುರವಾಗಿರುತ್ತದೆ. ಆ ಒಂದು ಹಿಡಿತದಲ್ಲಿ ಹುಡುಗನ ಹೃದಯದ ಮಾತು ಅರ್ಥವಾಗುತ್ತದೆ. ಪ್ರೀತಿಯ ಮಹತ್ವ ಏನು ಎಂಬುದು ಆ ಹಿಡಿತವು ತಿಳಿಸುತ್ತದೆ.

  • ಸುದ್ದಿ

    ಅಸ್ಸಾಂನ 700 ಹಳ್ಳಿ ಜಲಾವೃತ-ಅಪಾಯದ ತುದಿ ಮೀರಿ ಹರಿಯುತ್ತಿರೋ ಬ್ರಹ್ಮಪುತ್ರ…..ಜನ ಜೀವನ ಅಸ್ತ ವ್ಯಸ್ತ….!

    ಮಳೆರಾಯನ ಆರ್ಭಟಕ್ಕೆ ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಅಸ್ಸಾಂನಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 17 ಜಿಲ್ಲೆಗಳ 700 ಹಳ್ಳಿಗಳು ಜಲಾವೃತವಾಗಿದ್ದು, ಸುಮಾರು 4 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಭಾರೀ ಭೂಕುಸಿತ ಮುಂದುವರಿದಿದ್ದು, ಮೂರು ಜನರು ಸಾವನ್ನಪ್ಪಿದ್ದಾರೆ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್, ದಾರಂಗ್, ಬಾರ್ಪೆಟಾ, ನಲ್ಬಾರಿ, ಮಜುಲಿ, ಚಿರಾಂಗ್, ದಿಬ್ರುಗರ್ಹ್ ಮತ್ತು ಗೋಲಘಾಟ್ ಸೇರಿದಂತೆ ಒಟ್ಟು 17 ಜಿಲ್ಲೆಗಳ 700 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಸುಮಾರು ನಾಲ್ಕು ಲಕ್ಷ…