News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ದಿನಕ್ಕೊಂದು ನೀತಿ ಕಥೆ

ಭೂಮಿ ತಲೆಕೆಳಗಾದರೆ …? ಓದಿ ದಿನಕ್ಕೊಂದು ನೀತಿ ಕಥೆ….

2502

ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತಿದ್ದಾಗ ಬೋದಿಸತ್ವ ಒಂದು ಸಿಂಹದ ಹೊಟ್ಟೆಯಲ್ಲಿ ಹುಟ್ಟಿ ಕಾಡಿನಲ್ಲಿದ್ದ. ಆ ಕಾಡಿನ ಅಂಚಿನ ಸಮುದ್ರತೀರದಲ್ಲಿ ಒಂದು ಬೇಲದ ಮತ್ತು ತಾಳೆಯ ಮರಗಳ ತೋಪಿತ್ತು. ಒಂದು ತಾಳೆಯ ಮರ ಮತ್ತು ಬೇಲದಮರದ ಅಕ್ಕಪಕ್ಕದಲ್ಲಿ ಕಡೆ ಮೊಲವೊಂದು ವಾಸಮಾಡುತ್ತಿತ್ತು.

ಒಂದು ದಿನ ಆ ಮೊಲ ತಾಳೆಯ ಮರದ ನೆರಳಿನಲ್ಲಿ ಮಲಗಿತ್ತು. ಒಂದು ಕ್ಷಣ ಅದಕ್ಕೆ ಅಕಸ್ಮಾತ್ ಈ ಭೂಮಿಯೇ ತಲೆಕೆಳಗಾದರೇನುಗತಿ? ಎಂಬ ಯೋಚನೆ ಬಂತು. ಅದೇ ಸಮಯದಲ್ಲಿ ಒಂದು ಬೇಲದ ಹಣ್ಣು ತೊಟ್ಟು ಕಳಚಿ ತಾಳೆಯ ಗರಿಯ ಮೇಲೆ ಬಿದ್ದು ಶಬ್ದವಾಯಿತು. ಅದನ್ನು ಕೇಳಿ ಮೊಲ ಭೂಮಿ ತಲೆಕೆಳಗಾಗುತ್ತಿದೆ ಎಂದೇ ಬಾವಿಸಿ ಬೀತಿಯಿಂದ ಓಡತೊಡಗಿತು.

ವಿಪರೀತ ಭಯದಿಂದ ಓಡುತ್ತಿರುವ ಅದನ್ನು ದಾರಿಯಲ್ಲಿ ಇನ್ನೊಂದು ಮೊಲ ಕಂಡು, ‘’ಏಕೆ ಹೀಗೆ ಓಡುತ್ತಿರುವೆ? ಏನಾಯಿತು?’’ ಎಂದು ಕೇಳಿತು.

‘’ಅಯ್ಯೋ, ಅದನ್ನು ಏನೆಂದು ಹೇಳಲಿ? ಭೂಮಿ ತಲೆಕೆಳಗಾಗುತ್ತಿದೆ‘’ ಎಂದು ಅದು ಓಡುತ್ತಲೇ ಇತ್ತು. ಆ ಇನ್ನೊಂದು ಮೊಲವು ಭಯಬೀತಿಯಿಂದ ಅದರ ಹಿಂದೆ ಓಡತೊಡಗಿತು. ಅವೆರಡನ್ನೂ ನೋಡಿ ಇನ್ನೊಂದು ಮತ್ತೊಂದು, ಹೀಗೆ ಸಾವಿರ ಮೊಲಗಳ ಹಿಂಡೇ ಓಡತೊಡಗಿತು.

ಅಷ್ಟೇ ಅಲ್ಲದೆ ಅಷ್ಟು ಮೊಲಗಳ ಗಾಬರಿಯಿಂದ ಹಾಗೆ ಓಡುತ್ತಿರುವುದನ್ನು ಕಂಡು ಭೂಮಿ ತಲೆಕೆಳಗಾಗುವ ಆಪತ್ತು ಬಂದಿದೆಯೆಂದು ತಿಳಿದು ಭಯದಿಂದ ಒಂದು ಹಂದಿ, ಹಸು, ಎಮ್ಮೆ ಮತ್ತು ಹುಲಿ, ಸಿಂಹ, ಆನೆ ಇತ್ಯಾದಿ ಪ್ರಾಣಿಗಳೂ ಓಡತೊಡಗಿದವು ಹಲವು ಪ್ರಾಣಿಗಳ ಸಾಲುಗಳ ಸೇರಿ ಒಂದು ಯೋಜನದಷ್ಟು ಉದ್ದವಾಯಿತು.

ದಾರಿಯಲ್ಲಿ ಸಿಂಹವಾಗಿದ್ದ ಬೋದಿಸುತ್ತ ಈ ಮೆರವಣಿಗೆಯನ್ನು ಕಂಡು ‘’ಎಲ್ಲ ಏಕೆ ಹೀಗೆ ಓಡುತ್ತಿರುವಿರಿ?’’ ಎಂದು ಕೇಳಿದ. ಅವೆಲ್ಲ ‘ಭೂಮಿ ತಲೆಕೆಳಗಾಗುವುದು ಎಂದಾದರೂ ಸಾದ್ಯವೇ? ಇವು ಬೇರೆ ಏನನ್ನೋ ಕಂಡು ತಪ್ಪು ತಿಳಿದು ಹೀಗೆ ಓಡುತ್ತಿರಬೇಕು. ಹೀಗೆ ಬಿಟ್ಟರೆ ಎಲ್ಲ ಪ್ರಾಣಿಗಳು ಅನ್ಯಾಯವಾಗಿ ನಾಶವಾಗಿಬಿಡುತ್ತವೆ. ಅದನ್ನು ತಪ್ಪಿಸಬೇಕು’ ಎಂದು ಬೋದಿಸತ್ವ ಯೋಚಿಸಿದ.

ಕೂಡಲೇ ಸಿಂಹ ವೇಗವಾಗಿ ಓಡಿ ಬಂದು ಎಲ್ಲ ಪ್ರಾಣಿಗಳು ಅಡ್ಡವಾಗಿ ನಿಂತು ಮೂರೂ ಸಲ ಸಿಂಹನಾದ ಮಾಡಿತು. ಹೆದರಿದ ಪ್ರಾಣಿಗಳೆಲ್ಲ ನಿಂತವು. ‘’ಏಕೆ ಓಡುತ್ತಿರುವೆ?’’ಎಂದು ಅವನು ಕೇಳಿದ.

‘’ಭೂಮಿ ತಲೆಕೆಳಗಾಗುತ್ತಿದೆ.’’

‘’ಅದನ್ನು ನೋಡಿದವರಾರು?’’

‘’ಆನೆ’’

ಆನೆ ತನಗೆ ಗೊತ್ತಿಲ್ಲ, ಸಿಂಹಕ್ಕೆ ಗೊತ್ತು ಎಂದು ಹೇಳಿತು. ಸಿಂಹ ಹುಲಿಯನ್ನು ತೋರಿಸಿತು. ಹುಲಿ ಇನ್ನೊಂದು ಪ್ರಾಣಿಯನ್ನು ತೋರಿಸಿತು. ಹುಲಿ ಇನ್ನೊಂದು ಪ್ರಾಣಿಯನ್ನು ತೋರಿಸಿತು.  ಕಡೆಗೆ ಮೊಲಗಳ ಸರದಿ ಬಂತು. ಮೊಲಗಳು ತಮ್ಮ ಮುಂದೆ ಓಡಾಡುತಿದ್ದ ಮೊಲವನ್ನು ತೋರಿಸಿದೆವು.

‘’ಭೂಮಿ ತಲೆಕೆಳಗಾಗಿರುವದನ್ನು ನೋಡಿದೆಯಾ?’’ ಎಂದು ಸಿಂಹ ಮೊಲವನ್ನು ಕೇಳಿತು.

‘’ಹೌದು, ನಾನು ನೋಡಿದೆ’’ ಎಂದಿತು ಮೊಲ.

‘’ಎಲ್ಲಿ?’’

‘’ಸಮುದ್ರದಲ್ಲಿ ಹತ್ತಿರ ಬೇಲ ಮತ್ತು ತಾಳೆಯ ಮರಗಳ ತೋಪಿನಲ್ಲಿ. ಅಲ್ಲಿ ನಾನು ಬೇಲದ ಮರದ ಬುಡದಲ್ಲಿ ಮಲಗಿದ್ದೆ. ಒಂದು ವೇಳೆ ಭೂಮಿ ತಲೆಕೆಳಗಾದರೆ ಎಲ್ಲಿ ಹೋಗಲಿ? ಎಂದು ನಾನು ಯೋಚಿಸಿದ್ದೆ. ಆಗ ಭೂಮಿ ತಲೆಕೆಳಗಾಗುವ ಸದ್ದು ಕೇಳಿ ಬಂತು. ನಾನು ಓಡಿ ಬಂದೆ.’’

ನಿಜ ಸಂಗತಿಯನ್ನು ತಿಳಿಯಬೇಕೆಂದು ಸಿಂಹ ಇತರ ಪ್ರಾಣಿಗಳನ್ನು ಕುರಿತು ‘’ಈ ಮೊಲ ಹೇಳಿದ ಮಾತು ನಿಜವೇ ಎಂಬುದನ್ನು ನಾನು ತಿಳಿದು ಬರುವವರೆಗೆ ನೀವೆಲ್ಲ ಇಲ್ಲಿಯೇ ಇರಿ‘’ ಎಂದು ಹೇಳಿ ಮೊಲವನ್ನು ಕರೆದು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ಹೊರಟಿತು.

ಅವೆರೆಡೂ ಬಹುಬೇಗ ಆ ತೋಪಿನ ಬಳಿಗೆ ಬಂದವು. ಮೊಲವನ್ನು ಇಳಿಸಿ ‘’ಆ ಸ್ಥಳವನ್ನು ತೋರಿಸಿ’’ ಎಂದು ಸಿಂಹ ಹೇಳಿತು. ಅದು ಹೆದುರುತ್ತಲೇ ಹೋಗಿ, ‘’ಇದೇ ಶಬ್ದವಾದ ಸ್ಥಳ’’  ಎಂದು ತೋರಿಸಿತು.

ಸಿಂಹ ಆ ಸ್ಥಳಕ್ಕೆ ಹೋಗಿ ಪರಿಶೀಲಿಸಿತು. ಅಲ್ಲೇ ತಾಳೆಗರಿಯ ಮೇಲೆ ಬಿದ್ದಿದ್ದ ಬೇಲದ ಹಣ್ಣನ್ನು ನೋಡಿ, ಇದು ಭೂಮಿ ತಲೆಕೆಳಗಾಗುತ್ತಿರುವ ಶಬ್ದವಲ್ಲ. ಬೇಲದ ಹಣ್ಣು ತಾಳೆಯ ಗರಿಯ ಮೇಲೆ ಬಿದ್ದ ಶಬ್ದವನ್ನು ಕೇಳಿ ತಪ್ಪು ತಿಳಿದುಕೊಂಡಿದೆಯೆಂದು ಅರ್ಥಮಾಡಿಕೊಂಡಿತು.

ಅನಂತರ ಮತ್ತೆ ಮೊಲವನ್ನು ಬೆನ್ನ ಮೇಲೆ ಕೂಡಿಸಿಕೊಂಡು ಸಿಂಹ ಆ ಪ್ರಾಣಿಗಳಿದ್ದ ಸ್ಥಳಕ್ಕೆ ಬಂದು, ನಿಜ ಸಂಗತಿಯನ್ನ್ಜು ತಿಳಿಸಿ ಪ್ರಾಣಿಗಳಿಗೆ ಧೈರ್ಯ ಹೇಳಿತು. ತಮ್ಮ ಪ್ರಾಣವುಳಿಸಿದ ಸಿಂಹವನ್ನು ಎಲ್ಲ ಪ್ರಾಣಿಗಳೂ ಕೊಂಡಾಡಿದವು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರೆಫ್ರಿಜರೇಟರ್ ಸ್ಫೋಟಗೊಂಡು ಮೂವರ ದುರ್ಮರಣ…..!

    ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್‍ನಲ್ಲಿ ನಡೆದಿದೆ. ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಗುರುವಾರ ಬೆಳಗ್ಗೆ ಪಕ್ಕದ…

  • ಉಪಯುಕ್ತ ಮಾಹಿತಿ, ಸಂಬಂಧ

    ನೀವು ಯಾವ ವಯಸ್ಸಿನಲ್ಲಿ ಮದುವೆಯಾದ್ರೆ, ನಿಮ್ಗೆ ಆಗುವ ಲಾಭ ಏನು ಗೊತ್ತಾ?ತಿಳಿಯಲು ಈ ಲೇಖನ ಓದಿ..

    ಮದುವೆಯ ಪರ್‌ಫೆಕ್ಟ್‌ ವಯಸ್ಸು ಯಾವುದು ಎಂಬುದರ ಬಗ್ಗೆ ಯಾವಾಗಲೂ ಪ್ರಶ್ನೆ ಮೂಡುತ್ತದೆ? ಅದಕ್ಕೆ ಸರಿಯಾದ ಉತ್ತರ ಇಲ್ಲಿವರೆಗೆ ಸಿಕ್ಕಿಲ್ಲ. ಕೆಲವೊಂದು ಸರ್ವೆಗಳು ಮದುವೆಯಾಗಲು ಸರಿಯಾದ ವಯಸ್ಸು 29 ಎನ್ನುತ್ತಾರೆ. ಆದರೆ ಒಬ್ಬೊಬ್ಬರ ಮದುವೆ ಒಂದೊಂದು ವಯಸ್ಸಿನಲ್ಲಿ ಆಗುತ್ತದೆ. ಕೆಲವರು 20 ರಿಂದ 30 ವರ್ಷದೊಳಗೆ ಮದುವೆಯಾದರೆ, ಇನ್ನೂ ಕೆಲವರು 30 ರಿಂದ 40 ವರ್ಷದೊಳಗೆ ಮದುವೆಯಾಗುತ್ತಾರೆ.

  • ಸುದ್ದಿ

    ಚಂದನ್-ನಿವೇದಿತ ಎಂಗೇಜ್ಮೆಂಟ್ ಬಗ್ಗೆ ಸುದೀಪ್ ಪ್ರತಿಕ್ರಿಯೆ ಏನು ಗೊತ್ತ…!

    ಗಾಯಕ ಚಂದನ್ ಶೆಟ್ಟಿ ಅವರು ಯುವದಸರಾ ವೇದಿಕೆಯಲ್ಲಿ ತಮ್ಮ ಗೆಳತಿ ನಿವೇದಿತಾ ಗೌಡ ಅವರಿಗೆ ಲವ್ ಪ್ರಪೋಸ್ ಮಾಡಿದ್ದರು. ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದ್ದು ಭಾರಿ ವಿರೋಧಕ್ಕೆ ಗುರಿಯಾಗಿತ್ತು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಬಿಗ್ ಮನೆಯಲ್ಲಿ ಇಬ್ಬರು ಆತ್ಮೀಯ ಬಾಂಧವ್ಯ ಹೊಂದಿದ್ದರು. ಬಿಗ್ ಬಾಸ್ ಮುಗಿದ ಮೇಲೂ ತಮ್ಮ ಫ್ರೆಂಡ್ ಷಿಪ್ ಮುಂದುವರಿಸಿದ್ದರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರುಕನ್ನಡ ರ‍್ಯಾಪರ್,…

  • ಜೀವನಶೈಲಿ

    ಉಗರು ಕಚ್ಚೋ ಅಭ್ಯಾಸದಿಂದ ಆಗೋ ಪರಿಣಾಮಗಳ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಒಬ್ಬೊಬ್ಬರಿಗೆ ಒಂದೊಂದು ರೀತಿಯ ದುಶ್ಚಟವಿರುವುದು ಸಾಮಾನ್ಯ. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದನ್ನು ಬಿಡಬೇಕೆಂದರೂ ಸಾಧ್ಯವಾಗುವುದಿಲ್ಲ. ಸಣ್ಣವರಿದ್ದಾಗ, ಅಷ್ಟೇ ಏಕೆ ದೊಡ್ಡವರೂ ಕೂಡ ಆಗಾಗ ಉಗುರು ಕಚ್ಚುವುದನ್ನು ನೋಡಿರುತ್ತೇವೆ. ಒತ್ತಡದಲ್ಲಿ ಅಥವಾ ಕೆಲವೊಮ್ಮೆ ಅದನ್ನೇ ರೂಢಿ ಮಾಡಿಕೊಂಡವರು ಉಗುರು ಕಚ್ಚುತ್ತಾರೆ. ಹೀಗೆ ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿರುತ್ತಾರೆ ಎಂದು ವರದಿಯೊಂದು ಹೇಳಿದೆ. ಉಗುರು ಕಚ್ಚುವುದು, ತಲೆ ಕೆರೆದುಕೊಳ್ಳುವುದು, ಬೆರಳ ತುದಿಯ ಚರ್ಮ ಕಡಿಯುವುದು ಮೊದಲಾದ ಸ್ವಭಾವ ಹೊಂದಿದ್ದ ಹಾಗೂ ಹೊಂದಿರದವರನ್ನು ಅಧ್ಯಯನಕ್ಕೆ…

  • ಸುದ್ದಿ

    ಮಹಿಳಾಮಣಿಗಳಿಗೆ ಬಂಪರ್ ಆಫರ್!ಹತ್ತು ಸಾವಿರ ಹಣದ ಜೊತೆಗೆ ಸಿಗಲಿದೆ ಒಂದು ಸ್ಮಾರ್ಟ್ ಮೊಬೈಲ್..!

    ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ತಯಾರಿ ಆಂಧ್ರಪ್ರದೇಶದಲ್ಲಿ ಜೋರಾಗಿ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಹತ್ವದ ಘೋಷಣೆ ಮಾಡಿದ್ದಾರೆ. ನಾಯ್ಡು ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ 10 ಸಾವಿರ ರೂಪಾಯಿ ಹಾಗೂ ಒಂದು ಮೊಬೈಲ್ ಫೋನ್ ನೀಡಲಿದ್ದಾರಂತೆ. ಅಮರಾವತಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಾಯ್ಡು ಈ ಘೋಷಣೆ ಮಾಡಿದ್ದಾರೆ. ಹಣ ಮಹಿಳೆಯರಿಗೆ ಮೂರು ಹಂತದಲ್ಲಿ ಸಿಗಲಿದೆ. ಫೆಬ್ರವರಿಯಲ್ಲಿ ಮೊದಲ ಚೆಕ್ ವಿತರಣೆಯಾಗಲಿದೆ.ಮಹಿಳೆಯರಿಗೆ ಫೆಬ್ರವರಿಯಲ್ಲಿ 2500 ರೂಪಾಯಿ ಚೆಕ್ ಸಿಗಲಿದೆ. ಶೀಘ್ರವೇ ಸ್ಮಾರ್ಟ್ಫೋನ್ ನೀಡುವುದಾಗಿ ಅವರು…

  • ಸುದ್ದಿ

    ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದ ರಾಕಿಂಗ್ ಸ್ಟಾರ್ ಯಶ್,.!

    ರಾಕಿಂಗ್ ಸ್ಟಾರ್ ಯಶ್ ಎಂದರೆ ನಮ್ಮೆಲ್ಲರ ಅಚ್ಚು ಮೆಚ್ಚಿನ ಹೀರೋ ಅವರಿಗೆ  ಫಾಲೋ ವರ್ಸ್ ತುಂಬಾನೇ ಜಾಸ್ತಿ  ಈಗ ಅವರಿಗೆ  ದಿ ಜಿಕ್ಯೂ ಇಂಡಿಯಾ ಆಯೋಜಿಸಿದ್ದ, ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು (The GQ 50 MostInfluential Young Indians) ಪಟ್ಟಿಯಲ್ಲಿ ಯಶ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ. ಸೋಮವಾರ ಸಂಜೆ ಮುಂಬೈನಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಮಾಡಿದ ಸಾಧನೆ, ಯುವ ಮನಸ್ಸುಗಳಲ್ಲಿ ಸಂಚಲನ ಸೃಷ್ಟಿಸಿದ, ಅವರ ಯೋಚನೆ,…