ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಾನು ಇನ್ನೊಬ್ಬರಿಗೆ ಚೆನ್ನಾಗಿ ಕಾಣಬೇಕು ಎಂದು ಯಾರಿಗೆ ತಾನೇ ಅನ್ನಿಸೋದಿಲ್ಲ ಹೇಳಿ.ಉತ್ತಮ ತ್ವಚೆ ಹೊಂದುವುದು ಪ್ರತಿಯೊಬ್ಬ ಯುವತಿಯರ ಮತ್ತು ಹೆಂಗಳೆಯರ ಆಸೆಯಾಗಿರುತ್ತದೆ. ಇದರಲ್ಲಿ ಯುವಕರು ಸಹ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ಬಳಸುವ ಸೌಂದರ್ಯ ವರ್ಧಕಗಳು 100 ರೂಪಾಯಿಯಿಂದ ಸಾವಿರಾರು ರೂಪಾಯಿಗಳವರೆಗೂ ಇರುತ್ತದೆ.
ಸ್ಟೆರಾಯ್ಡ್ ಆಧಾರಿತ ಸೌಂದರ್ಯವರ್ಧಕಗಳು 100 ರೂಪಾಯಿಗಿಂತಲೂ ಕಡಿಮೆಗೆ ಸಿಗುತ್ತದೆ. ಮುಖ ಸೌಂದರ್ಯ ಕಾಣಲೆಂದು ಕಡಿಮೆ ಬೆಲೆಯ ಸೌಂದರ್ಯ ವರ್ಧಕ ಬಳಸುವ ಮುನ್ನ ಎಚ್ಚರ.
ಕಾಲೇಜಿಗೆ ಹೋಗುವ ಯುವಕ ಯುವತಿಯರು ಇಂತಹ ಸೌಂದರ್ಯವರ್ಧಕಗಳನ್ನು ಖರೀದಿಸಲು ಬಯಸುತ್ತಾರೆ. ಸ್ವಲ್ಪ ದಿನಗಳವರೆಗೆ ಇದು ಸುಂದರವಾಗಿ ಏನೋ ಕಾಣುತ್ತದೆ. ಆದರೆ ಸೌಂದರ್ಯವರ್ಧಕಗಳನ್ನು ಹಾಕಲು ಆರಂಭಿಸಿ 15 ದಿನಗಳ ನಂತರ ಅದರಿಂದಾಗುವ ಅಪಾಯಗಳ ಸೂಚನೆ ಕಂಡುಬರುತ್ತದೆ.
ಒಬ್ಬ ಯುವತಿ, ಆಕೆಯ ಮದುವೆ ದಿನ ಸೊಗಸಾಗಿ ಕಾಣಬೇಕೆಂದು ಬಯಸಿದಳು. ಬ್ಯೂಟಿ ಪಾರ್ಲರ್ ಗೆ ಫೇಶಿಯಲ್ ಕ್ಲೀನ್ ಅಪ್ ಗೆಂದು ಹೋದಳು. ಅಲ್ಲಿ ಬ್ಯೂಟಿಷಿಯನ್ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ತೋರುವ ಫೇರ್ ನೆಸ್ ಕ್ರೀಮ್ ಬಳಸಲು ಹೇಳಿದಳು.
ಅದರಂತೆ ಆ ಯುವತಿ ಕ್ರೀಮ್ ಬಳಸಲು ಆರಂಭಿಸಿದ ಒಂದು ತಿಂಗಳ ಬಳಿಕ ಅವಳ ಮುಖದಲ್ಲಿ ಮೊಡವೆ, ಕೂದಲು ಬೆಳೆಯಲು ಆರಂಭಿಸಿತು. ಅದೇ ಬ್ಯೂಟಿ ಪಾರ್ಲರ್ ಗೆ ಹೋಗಿ ಆ ಯುವತಿ ಕೇಳಿದಾಗ ತಮ್ಮ ಸೂಕ್ಷ್ಮ ಚರ್ಮದಿಂದ ಹೀಗಾಗಿದೆ ಎಂದು ಹೇಳಿ ಬ್ಯೂಟಿಷಿಯನ್ ಜಾರಿಕೊಂಡುಬಿಟ್ಟಳು.
ಚರ್ಮರೋಗ ತಜ್ಞರಲ್ಲಿ ಹೋಗಿ ಕೇಳಿದಾಗ ಮುಖಕ್ಕೆ ಸ್ಟಿರಾಯ್ಡ್ ಬಳಸುತ್ತಿದ್ದ ಕಾರಣ ಕೂದಲು ಬೆಳೆದಿದೆ ಎಂದರು. ಹೊಳೆಯುವ ಚರ್ಮದ ಕಾಂತಿಗೆಂದು ಸ್ಟಿರಾಯ್ಡ್ ನ್ನು ಜನರು ಬಳಸುತ್ತಾರೆ. ಅದನ್ನು ಸರಿಯಾಗಿ ಬಳಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಚರ್ಮರೋಗ ತಜ್ಞರು.
ಸ್ಟಿರಾಯ್ಡ್ ನಿಜಕ್ಕೂ ಚರ್ಮಕ್ಕೆ ಹಾನಿ ಎನ್ನುತ್ತಾರೆ ತಜ್ಞರು. ಒಬ್ಬ ಮಹಿಳೆ ಕಳೆದ ವರ್ಷ ಬೆಂಗಳೂರಿಗೆ ಬಂದು ನೆಲೆಸಿದ್ದರು. ಕಡಿಮೆ ಕ್ರಯದ ಫೇಶಿಯಲ್ ಕ್ರೀಮ್ ಬಳಸಿದ್ದರು. ಒಂದು ತಿಂಗಳು ಆಗುವಾಗ ಮುಖದಲ್ಲಿ ಸಣ್ಣ ಸಣ್ಣ ಕಲೆಗಳು ಬರಲಾರಂಭಿಸಿದವು. ಜನರು ಬೇಗನೆ ತಮ್ಮ ತ್ವಚೆ ಸುಂದರವಾಗಬೇಕೆಂದು ಸ್ಟಿರಾಯ್ಡ್ ಮಾದರಿಯ ಕ್ರೀಮ್ ಗಳನ್ನು ಬಳಸುತ್ತಾರೆ. ಆದರೆ ಇದರಿಂದ ಆ ಮೇಲೆ ಸಮಸ್ಯೆಗಳು ತಲೆದೋರುತ್ತವೆ. ಸ್ನೇಹಿತರು, ಅಕ್ಕಪಕ್ಕದ ಮನೆಯವರು, ಜಾಹಿರಾತು ಮತ್ತು ಸೌಂದರ್ಯತಜ್ಞರನ್ನು ಸಂಪರ್ಕಿಸುವ ಮುನ್ನ ನುರಿತ ವೃತ್ತಿಪರರ ಸಲಹೆ ಪಡೆದು ಸೌಂದರ್ಯ ವರ್ಧಕಗಳನ್ನು ಬಳಸಬೇಕು ಎನ್ನುತ್ತಾರೆ ಚರ್ಮರೋಗ ತಜ್ಞರು.
ಸ್ಚಿರಾಯ್ಡ್ ಗೆ ಸಂಬಂಧಪಟ್ಟಂತೆ 15ರಿಂದ 23 ವರ್ಷಗಳವರೆಗೆ ಮತ್ತು 35ರಿಂದ 45 ವರ್ಷಗಳವರೆಗಿನವರಿಗೆ ಚರ್ಮದಲ್ಲಿ ತೊಂದರೆ ಕಾಣಿಸಿಕೊಳ್ಳುವುದು ಹೆಚ್ಚು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವೈವಾಹಿಕ ಹಿಂಸೆ, ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮಹಿಳೆಯರಿಂದ ಹೆಚ್ಚಿನ ದೂರು ದಾಖಲಾಗುವುದು ಸಾಮಾನ್ಯ ಸಂಗತಿ. ಆದರೆ, ಉತ್ತರ ಪ್ರದೇಶದಲ್ಲಿ 6500 ಕ್ಕೂ ಅಧಿಕ ಮಂದಿ ತಮ್ಮ ಪತ್ನಿ ಹೊಡಿತಾಳೆ ಎಂದು ಯು.ಪಿ. -100 ಗೆ ಕರೆ ಮಾಡಿದ್ದಾರೆ.
ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳನ್ನು ನಡೆದಾಡುವ ದೇವರು ಎಂದೇ ಭಕ್ತರು ಕರೆಯುತ್ತಾರೆ.ಮೊನ್ನೆಯಷ್ಟೇ ಸಿದ್ದಗಂಗಾ ಶ್ರೀ ಗಳನ್ನು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮಠದಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ನಡೆದಾಡುವ ದೇವರು ಎಂದೇ ಕರೆಯುವ ಸಿದ್ದಗಂಗಾ ಶ್ರೀ ಗಳು ಕಿರಿಯಾ ಸ್ವಾಮೀಜಿಗಳಲ್ಲಿ ನನ್ನ ವಯಸ್ಸು ಎಷ್ಟು ಅಂತ ಕೇಳಿದ್ದಾರೆ! ಅದಕ್ಕೆ ಕಿರಿಯ ಶ್ರೀ ಗಳು 111 ವರ್ಷ ಆಗಿದೆ ಎಂದಾಗ ಬಹಳ ಆಯ್ತು ಎಂದು ಶಿವಕುಮಾರ ಸ್ವಾಮೀಜಿಗಳು ಹೇಳಿದ್ದಾರೆ. ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಸಿದ್ದಗಂಗಾ ಮಠಕ್ಕೆ ಆಗಮಿಸಿದರು….
ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ಮೇಷ:- ನಿಮ್ಮನ್ನು ವಿಚಲಿತಗೊಳಿಸಲು ಸನ್ನದ್ಧರಾಗಿಯೇ ವಿರೋಧಿಗಳು ಆಟ ಆಡುತ್ತಾರೆ. ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ಜನತೆಗೆ ಭರವಸೆ ನೀಡುವ ನೆಪದಲ್ಲಿ ಕೈಲಿ ಆಗದ ಭರವಸೆಗಳನ್ನು ನೀಡದಿರಿ. ಇದರಿಂದ ಅಪಹಾಸ್ಯಕ್ಕೆ ಗುರಿಯಾಗುವಿರಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…
ಕೊಡಗು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸುವ ಮೂಲಕ ಮಾದರಿಯಾಗಿದ್ದರೆ. ತಮ್ಮ ಪುಟ್ಟ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸಿ ಕನ್ನಡ ಕಲಿಗೆ ಒತ್ತು ನೀಡಿದ್ದಾರೆ.ಗ್ರಾಮೀಣ ಮಕ್ಕಳೊಂದಿಗೆ ಬೆರೆಯುವ ಉದ್ದೇಶದಿಂದ ಮಗುವನ್ನು ಅಂಗನವಾಡಿಗೆ ನಿತ್ಯವೂ ಕಳಿಸಿ ತಾವು ಕೆಲಸಕ್ಕೆ ತೆರಳುತ್ತಾರೆ ಸುಮನ್. ಕಲಿಕೆ, ಆಟ, ಊಟದ ಜೊತೆಗೆ ಮಕ್ಕಳೊಂದಿಗೆ ಈ ಅಂಗನವಾಡಿಯಲ್ಲಿ ಎಸ್ಪಿ ಮಗಳು ಸಹ ಬೆರೆಯುತ್ತಿದ್ದಾಳೆ. ಸಾಮಾನ್ಯರ ಮಕ್ಕಳಂತೆ ಸರ್ಕಾರಿ ಅಂಗನವಾಡಿಯಲ್ಲಿ ಎಸ್ಪಿ ಪುತ್ರಿ ಖುಷಿ ಸಹ ಪಾಠ…
ನಾವು ಇಲ್ಲಿ ಅ, ಆ ಅಕ್ಷರಗಳಿಂದ ಪ್ರಾರಂಭವಾಗುವ ಎಲ್ಲಾ ಕನ್ನಡ ಸಿನಿಮಾಗಳ ಪಟ್ಟಿಯನ್ನು ಕೊಟ್ಟಿದ್ದೇವೆ.ಅ ಮತ್ತು ಆ ಅಕ್ಷರಗಳಿಂದ ಪ್ರಾರಂಭವಾಗುವ ಯಾವುದಾದರೂ ಸಿನಿಮಾ ಹೆಸರು ತಪ್ಪಿ ಹೋಗಿದ್ದಾರೆ ಕಾಮೆಂಟ್ ಮಾಡಿ ತಿಳಿಸಿ… 1. ಅಗ್ರಜ 2.ಅಜ್ಜು 3.ಅಣ್ಣ ಬಾಂಡ್ 4.ಅನುರಾಗ ಸಂಗಮ 5.ಅಪ್ಪಾಜಿ 6.ಅಮೃತಧಾರೆ 7.ಅರಮನೆ 8.ಅರುಣರಾಗ 9.ಅಲ್ಲಮ 10.ಅವಳೇ ನನ್ನ ಹೆಂಡತಿ 11.ಅವ್ವ 12.ಅಹಂ ಪ್ರೇಮಾಸ್ಮಿ 13.ಆಕಾಶ ಗಂಗೆ 14.ಆಕಾಶ್ 15.ಆಕ್ಸಿಡೆಂಟ್ ೨೦೦೮ 16.ಆಗೋದೆಲ್ಲ ಒಳ್ಳೇದಕ್ಕೆ 17.ಆಘಾತ 18.ಆಟಗಾರ 19.ಆದಿ 20.ಆಪ್ತ ರಕ್ಷಕ 21.ಆಪ್ತಮಿತ್ರ 22.ಆಯುಧ 23.ಆಹಾ ನನ್ನ…
ಹಬ್ಬಗಳ ದಿನ ಇ-ಕಾಮರ್ಸ್ ಕಂಪನಿಗಳು ಭಾರಿ ರಿಯಾಯಿತಿ ನೀಡಿ ಸಾಮಾನ್ಯ ವ್ಯಾಪಾರಿಗಳಿಗೆ ಹೊಡೆತ ನೀಡುತ್ತಿವೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಭಾರತ ಸರ್ಕಾರಕ್ಕೆ ದೂರು ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ದೂರು ನೀಡಿದ್ದಾರೆ. ಸಿಎಐಟಿ ಅಧ್ಯಕ್ಷ ಬಿ.ಸಿ. ಭಾರತೀಯಾ ಹಾಗೂ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಇ-ಕಾಮರ್ಸ್ ಕಂಪನಿಗಳ ವಿರುದ್ಧ ಅಪಸ್ವರ ಎತ್ತಿದ್ದಾರೆ. ಇ-ಕಾಮರ್ಸ್ ಕಂಪನಿಗಳು ಕೇವಲ ಆನ್ಲೈನ್ ಮಾರುಕಟ್ಟೆಗಳಾಗಿದ್ದು, ಅವಾಗಿಯೇ ಸಾಮಾನುಗಳ ಸಂಗ್ರಹಣೆ ಹಾಗೂ…