ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೌದು, ಬಡತನದಲ್ಲಿ ಅರಳಿದ ಪ್ರತಿಭೆಗಳು ನಮ್ಮ ರಾಜ್ಯದಲ್ಲಿ ಹಾಗು ದೇಶದಲ್ಲಿ ತುಂಬಾನೇ ಜನ ಇದ್ದಾರೆ ಅವರಲ್ಲಿ ಈ ಲಕ್ಷಿ ಕೂಡ ಒಬ್ಬರು ಅನ್ನಬಹುದು. ನಮ್ಮ ನೆಲದ ಸೊಗಡು ಅಥವಾ ನಮ್ಮ ನೆಲದ ಸಂಸ್ಕೃತಿಯ ಮೂಲ ಅಂದರೆ ಅದುವೇ ಜಾನಪದ ಎಂಬುದಾಗಿ ಹೇಳಲಾಗುತ್ತದೆ. ಅಂತಹ ಜಾನಪದ ಸೊಗಡು ಹೆಚ್ಚಿನದಾಗಿ ಗ್ರಾಮೀಣ ಪ್ರದೇಶದಲ್ಲಿ ಹಾಗು ಹಳ್ಳಿಗಳಲ್ಲಿ ಕಾಣಬಹುದು.

ಹಾಡುಗಾರಿಕೆಯ ಪ್ರತಿಭೆಗಳನ್ನು ಗುರಿತಿಸುವಲ್ಲಿ ಅದೆಷ್ಟೋ ಖಾಸಗಿ ಚಾನಲ್ ಗಳು ವೇದಿಕೆಯನ್ನು ಮಾಡಿ ಕೊಟ್ಟಿವೆ. ಅಂತಹ ಚಾನಲ್ಗಳಲ್ಲಿ ಕನ್ನಡದ ಜೀ ಕನ್ನಡ ವಾಹಿನಿ ಕೂಡ ಒಂದು. ಜೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 14 ಸ್ಪರ್ಧೆಯಲ್ಲಿ ಲಕ್ಷ್ಮಿ ಜನಪದ ಗೀತೆ ಹಾಡುವ ಮೂಲಕ ತೀರ್ಪುಗಾರರ, ಹಾಗು ಜನರ ಮನ ಗೆದ್ದಿದ್ದಾಳೆ.

ಯಾರೂ ಈ ಲಕ್ಷ್ಮಿ…
ಲಕ್ಷ್ಮಿಯ ಹುಟ್ಟೂರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಘೋಡಗೇರಿ. ತಂದೆ ರಾಮಪ್ಪ ಮತ್ತು ತಾಯಿ ಸಂಗೀತಾ. ಕೂಲಿಯೇ ಕುಟುಂಬಕ್ಕೆ ಜೀವನಾಧಾರ. ಸ್ವಂತ ಜಮೀನು ಇಲ್ಲ. ಆಕೆ ತನ್ನ ಊರಿನಲ್ಲಿರುವ ಎಸ್.ಎಂ.ಎಸ್. ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ. ಆಕೆ ಹಾಡುವುದರಲ್ಲಷ್ಟೇ ಮುಂದಿಲ್ಲ. ಓದಿನಲ್ಲಿಯೂ ಮುಂದಿದ್ದಾಳೆ. ಚಿತ್ರಕಲೆಯಲ್ಲಿಯೂ ಆಕೆಗೆ ಆಸಕ್ತಿ ಇದೆ.

ತನ್ನ ಮಗಳು ಸರಿಗಮಪ ಸ್ಪರ್ಧೆಯಲ್ಲಿ ಹಾಡಬೇಕು ಅನ್ನೋದು ತಂದೆ ತಾಯಿಯರ ಕನಸು ಕೂಡ ಆಗಿತ್ತು. ಇದರ ಸಲುವಾಗಲಿ ಬೆಂಗಳೂರಿಗೆ ಬಂದಿದ್ದರು ಆದರೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಟುಡಿಯೋದ ಸ್ಥಳ ಅವರಿಗೆ ಗೊತ್ತಾಗಲಿಲ್ಲದ ಕಾರಣ ಮರಳಿ ವಾಪಸ್ ಹೋಗುತ್ತಾರೆ.
ತನ್ನ ಪ್ರತಿಭೆಯನ್ನು ಗುರುತಿಸಿ ಕೊಳ್ಳಲು ಒಂದು ಒಳ್ಳೆ ಅವಕಾಶವನ್ನು ಜೀ ವಾಹಿನಿ ಮಾಡಿದೆ. ಲಕ್ಷ್ಮಿ ಹಾಡಿದಂತ ಹಾಡು ‘ಯಾವ ದೇಶದ ಗಂಡು ಇವನು ರಂಗಿಲಾಲಾ’ ಜನಪದ ಗೀತೆ ಕೆಲವೇ ಸೆಕೆಂಡ್ಗಳಲ್ಲಿ ತೀರ್ಪುಗಾರರ ಕಣ್ಣು ತೆರೆಸಿತು. ಅಲ್ಲದೆ ಜನರ ಮನದಲ್ಲಿ ಲಕ್ಷ್ಮಿ ಉಳಿಯುವಂತೆ ಮಾಡಿತು.

ಕಲಿತಿದ್ದು ಹೇಗೆ..?
ಲಕ್ಷ್ಮಿ ತಾನು ಮೂಲ ಸಂಗೀತದ ಹಿನ್ನಲೆಯಿಂದ ಬಂದಿದವಳಲ್ಲ ಆದರೂ ತಾನು ಮೊಬೈಲ್ನಲ್ಲಿ ಈ ಹಾಡುಗಳನ್ನು ಕೇಳಿ ಹಾಡೋದನ್ನ ಕಲಿತಿದ್ದಾಳೆ. ಹಾಗು ಇದರ ಕುರಿತು ಲಕ್ಷ್ಮಿ ಹೇಳುವುದು ಹೀಗೆ…

ನಾನು ಟಿವಿ ವಾಹಿನಿಯಲ್ಲಿ ಹಾಡುತ್ತಿರುವುದು ನನಗೆ ತುಂಬಾನೇ ಖುಷಿ ಕೊಟ್ಟಿದೆ ಹಾಗು ನಮ್ಮ ಅಪ್ಪ ಅಮ್ಮ ನವರ ಕನಸು ನನಸಾಗಿದಿದೆ ಎಲ್ಲರ ಕಡೆಯಿಂದಲ್ಲೂ ನನಗೆ ಉತ್ತಮ ಪ್ರೋತ್ಸಾಗಳು ಬರುತ್ತಿವೆ ಅನ್ನುತ್ತಾಳೆ ಲಕ್ಷ್ಮಿ. ಅದೇನೇ ಇರಲಿ ಬಡತನದಲ್ಲಿ ಇಂತಹ ಒಂದು ಪ್ರತಿಭೆ ಹರಳುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯೇ ಅನ್ನಬಹದು.
ಈ ಲಕ್ಷಣಗಳಿರೋ ಹುಡುಗ ಸಿಕ್ಕಿದ್ರೆ ಬಿಗಬಾಸ್ ಡಾಲ್ ನಿವೇದಿತಾ ಗೌಡ ಮದುವೆ ಆಗ್ತಾರಂತೆ..!ತಿಳಿಯಲು ಈ ವಿಡಿಯೋ ನೋಡಿ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಪೈರಸಿ ಸಿನಿಮಾದ ನೋಡದೇ, ಚಿತ್ರಮಂದಿರಗಳಿಗೆ ಹೋಗಿ ಚಿತ್ರ ವೀಕ್ಷಣೆ ಮಾಡಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಮ್ಮ ಹಾರ್ಡ್ ವರ್ಕ್ ಪರಿಗಣಿಸಿ ಸಿನಿಮಾವನ್ನು ಥಿಯೇಟರ್ ಗಳಲ್ಲಿ ವೀಕ್ಷಣೆ ಮಾಡಿರೋದು ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ನಮ್ಮ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಶುಕ್ರವಾರ ರಾತ್ರಿ ಚಿತ್ರದ ಪೈರಸಿ ಬಗ್ಗೆ ಖಡಕ್ ಟ್ವೀಟ್ ಮಾಡಿದ್ದ ಸುದೀಪ್, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ…
ಅದು ಇಟಲಿಯ ಒಂದು ಪ್ರಾಂತ್ಯ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಕಡಿಮೆಯಾಗುತ್ತಲೇ ಇತ್ತು. ಸರ್ಕಾರಕ್ಕೂ ಇದನ್ನು ನೋಡಿ ತಲೆ ಕೆಟ್ಟು ಹೋಗಿತ್ತು. ಹಾಗಾಗಿ ಒಂದು ಭರ್ಜರಿ ಆಫರ್ ನೀಡಿದೆ. ಈ ಪ್ರದೇಶಕ್ಕೆ ಯಾರೇ ಹೋಗಿ ನೆಲೆಸಿದರೂ ಅವರಿಗೆ 22000 ಪೌಂಡ್ ಕೊಡಲಾಗುತ್ತದೆ ಎಂದು ಘೋಷಿಸಿದೆ. ಆದರೆ ಷರತ್ತುಗಳು ಅನ್ವಯ. ಇದು ಇಟಲಿಯ ಮೊಲೀಸ್ ಪ್ರಾಂತ್ಯ. ಸದ್ಯ ಈ ಪ್ರದೇಶದಲ್ಲಿ 2000ಕ್ಕಿಂತ ಕಡಿಮೆ ಮಂದಿ ವಾಸವಾಗಿದ್ದಾರೆ. ಕಳೆದ 5 ವರ್ಷದಲ್ಲಿ ಸುಮಾರು 9000 ದಷ್ಟು ಮಂದಿ ಈ ಪ್ರಾಂತ್ಯವನ್ನು ತೊರೆದಿದ್ದಾರೆ….
ರಾತ್ರಿ ಎಲ್ಲಾ ಮದುವೆ ಗಂಡಿನ ಜೊತೆ ಮಾಡಿದ ಶಾಸ್ತ್ರ ಸಂಪ್ರದಾಯಗಳಿಗೆ ನಗು ನಗುತ್ತಲೇ ನವ ವಧು ಪಾಲ್ಗೊಂಡಿದ್ದಳು.ಆದರೆ ಬೆಳಿಗ್ಗೆ ತಾಳಿ ಕಟ್ಟುವ ಮಹೂರ್ತದಲ್ಲಿ ತಾನು ಪ್ರ್ರಿತಿಸುತ್ತಿದ್ದ ಹುಡುಗ ಬಂದು ಎದುರಿಗೆ ನಿಂತಿರುವುದನ್ನ ನೋಡಿದ್ದಾಳೆ. ಆತ ಅಳುವುದನ್ನು ಕಂಡು ಮನಸ್ಸು ಕರಗಿ ನಾನು ಈ ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು, ನಾನು ನನ್ನ ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ತಿಳಿಸಿದ್ದಳು ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರೇ ಮುಂದೇ ನಿಂತು ಪ್ರೇಮಿಗಳಿಗೆ ಮದುವೆ ಮಾಡಿಸಿದ್ದಾರೆ. ಈ ಘಟನೆ ಬೆಂಗಳೂರು…
ಮೇಷ ರಾಶಿ ಭವಿಷ್ಯ (Sunday, November 28, 2021) ವಿಧಿಯನ್ನು ಆಧರಿಸದಿರಿ ಮತ್ತು ನಿಮ್ಮ ಆರೋಗ್ಯ ಸುಧಾರಿಸಲು ಪ್ರಯತ್ನಿಸಿ ಏಕೆಂದರೆ ಅದೃಷ್ಟವು ಒಂದು ಸೋಮಾರಿ ದೇವತೆಯಾಗಿದ್ದು ಇದು ಎಂದಿಗೂ ತಾನಾಗಿಯೇ ನಿಮ್ಮ ಬಳಿ ಬರುವುದಿಲ್ಲ. ನಿಮ್ಮ ತೂಕವನ್ನು ನಿಯಂತ್ರಿಸಲು ಮತ್ತು ನಿಮ್ಮ ಆರೋಗ್ಯವನ್ನು ಪುನಃ ಪಡೆಯಲು ವ್ಯಾಯಾಮ ಮಾಡಲು ಇದು ಒಳ್ಳೆಯ ಸಮಯ. ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದವರು, ಅವರು ಇಂದು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು, ಇದು ಜೀವನದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ನೀವು ಇಡೀ ಕುಟುಂಬಕ್ಕೆ…
ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಶೌಚಾಲಯವು ರೋಗ ರುಜಿನಗಳ ತವರಾಗಿದೆ ಎಂದಾಗಿದೆ. ಆದ್ದರಿಂದ ನೀವು ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛಗೊಳಿಸಿದಂತೆ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ.
ತಮಗಿರುವ ಸೌಲಭ್ಯಗಳು, ಅವಕಾಶಗಳಿಗಿಂತ ಇತರರಿಗೆ ಉತ್ತಮವಾದ ಸೌಲಭ್ಯಗಳು ಇವೆ ಎಂದು ಕೆಲವರು ಭಾವಿಸುತ್ತಾರೆ. ಹಣ, ಸೌಂದರ್ಯ, ಓದು, ಆಸ್ತಿ, ಹುದ್ದೆ…ಹೀಗೆ ಪ್ರತಿ ವಿಷಯದಲ್ಲೂ ಇತರರ ಜತೆಗೆ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ರೀತಿ ಇನ್ನೊಬ್ಬರ ಜತೆಗೆ ನಮ್ಮನ್ನು ಹೋಲಿಸಿಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ.