News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ದೇಶ-ವಿದೇಶ

ಇದು ಜಗತ್ತಿನ ಏಕೈಕ ಗಂಡುಗಲಿ ರಾಷ್ಟ್ರ! ಈ ಲೇಖನಿ ಓದಿ ಶಾಕ್ ಆಗ್ತೀರಾ…

6547

ನಮ್ಮ ಭಾರತ ಶಾಂತಿ ಪ್ರಿಯ ರಾಷ್ಟ್ರ. ಪಕ್ಕದ ಶತ್ರು ರಾಷ್ಟ್ರಗಳು ಏನೇ ಮಾಡಿದರೂ,ಅವರಿಗೆ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ.ಇನ್ನೊಮ್ಮೆ ಹೀಗೆ ಮಾಡಿದ್ರೆ ನಾವು ಸುಮ್ಮನಿರಲ್ಲ ಅಂತ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ. ಆದ್ರೆ ಕೆಲವೊಂದು ರಾಷ್ಟ್ರಗಳು ಇದಕ್ಕೆ ತದ್ವಿರುದ್ದ.ಏಕೆಂದರೆ ಅವರು ನಮ್ಮ ತರ ಎಚ್ಚರಿಕೆ ಮಾತ್ರ, ಯಾವುದೋ ಒಂದು ರೀತಿ ಸೇಡು ತೀರಿಸಿಕೊಳ್ಳುತ್ತವೆ.

ಅದೇ ರೀತಿ ಇಸ್ರೇಲ್ ದೇಶ ಸಹ. 1972 ರಲ್ಲಿ ಇಸ್ರೇಲಿನ ಫೂಟಬಾಲ್ ಟೀಮ್ ಮೇಲೆ  ಭಯೋತ್ಪಾದಕರು ದಾಳಿ ನಡೆಸಿ ಎಲ್ಲರನ್ನೂ ಕೊಂದುಹಾಕಿ ಮರ್ಮಾಂಗ ಕತ್ತರಿಸಿದ್ದರು. ಈ ಕೃತ್ಯಕ್ಕಾಗಿ ಇಸ್ರೇಲ್ ಸೇಡು ತೀರಿಸಿಕೊಂಡ ರೀತಿ ತುಂಬಾ ರೋಚಕವಾಗಿದೆ.ಮುಂದೆ ಓದಿ….

ಈ ಕೃತ್ಯ ನಂತರ ಇಸ್ರೇಲ್ ದೇಶವು ಅತ್ಯಂತ ರಹಸ್ಯವಾದ ಒಂದು “ಮೊಸ್ಸಾದ್ ” ಎಂಬ ಟೀಮ್ ರಚಿಸಿ, ಈ ದಾಳಿಗೆ ಕಾರಣರಾದ ಎಲ್ಲಾ ಭಯೋತ್ಪಾದಕರನ್ನು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕೊಲ್ಲಲು ನಿರ್ಧರಿಸಿದರು. ಆದರೆ ಅದಾಗಲೇ ಅವರೆಲ್ಲರೂ ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಹೋಗಿ ಅಡಗಿದ್ದರು. ಇಸ್ರೇಲ್ ಈ ಎಲ್ಲರನ್ನೂ ಮುಗಿಸಲು ತೆಗೆದುಕೊಂಡಿದ್ದು ಬರೋಬ್ಬರಿ ಇಪ್ಪತ್ತು ವರ್ಷ. ಕಾರ್ಯಾಚರಣೆ ಅಷ್ಟೂ ವರ್ಷ ನಡೆದಿತ್ತು. ಇದು ಯಾವ ಹಾಲಿವುಡ್ ಚಿತ್ರಗಳಿಗಿಂತಲೂ ಕಡಿಮೆ ಇರಲಿಲ್ಲ, ಅಷ್ಟು ರೋಚಕವಾಗಿತ್ತು. ಇಸ್ರೇಲ್ ಹೊಡೆದಿದೆ ಅಂತ ಗೊತ್ತಾಗದಂತೆ ನೋಡಿಕೊಳ್ಳುವುದೂ ಕೂಡ ಮುಖ್ಯ ವಾಗಿತ್ತು. ಇದನ್ನು ‘ ಮ್ಯೂನಿಕ್ ‘ ಅಂತ ಸಿನಿಮಾ ಮಾಡಿದ್ದಾರೆ.

 

1948 ಬ್ರಿಟಿಷರು ಭಾರತ- ಪಾಕ್ ನಂತೇ, ಇಸ್ರೇಲ್- ಪಾಲೆಸ್ಟೈನ್ ವಿಭಜಿಸಿ ಸ್ವಾತಂತ್ರ್ಯ ಕೊಟ್ಟರು. ಇದಕ್ಕೆ ಮೊದಲು ಅಲ್ಲಿ ಜ್ಯೂ ಮತ್ತು ಮುಸ್ಲಿಮರು ಒಟ್ಟಾಗಿಯೇ ಇದ್ದರು.

ಸ್ವಾತಂತ್ರ ಸಿಕ್ಕ ತಕ್ಷಣ ಅಕ್ಕ ಪಕ್ಕದ ಮುಸ್ಲಿಮ ರಾಷ್ಟ್ರಗಳು ಇಸ್ರೇಲ್ ಮೇಲೆ ಆಕ್ರಮಣ ಮಾಡಿದವು. ಹಿಟ್ಲರ್ ಅದಕ್ಕೂ ಮೊದಲು ಇಡೀ ಜಗತ್ತಿನಲ್ಲಿದ್ದ ಒಟ್ಟೂ ಒಂದು ಕೋಟಿ ಹತ್ತು ಲಕ್ಷ ಜ್ಯೂಗಳ ಪೈಕಿ ಅರ್ಧಕ್ಕೂ ಹೆಚ್ಚು ಅಂದರೆ 60 ಲಕ್ಷ ಜ್ಯೂ ಗಳನ್ನು ಕೊಂದಿದ್ದ. . ಈಗ ಅವರ ಒಟ್ಟೂ ಸಂಖ್ಯೆ ಒಂದು ಕೋಟಿ ಇಪ್ಪತ್ತು ಲಕ್ಷ.

ಈ ಯುದ್ಧ ಜ್ಯೂ ಗಳ ಅಳಿವು ಉಳಿವಿನ ಪ್ರಶ್ನೆ ಆಗಿತ್ತು. ಇಸ್ರೇಲ್ ಯುದ್ಧ ಗೆದ್ದಿತು. 1967 ಮತ್ತೆ ಇಸ್ರೇಲ್ ಮೇಲೆ ಆಕ್ರಮಣ, ಮತ್ತೆ ಇಸ್ರೇಲ್ ಗೆಲುವು. ಇಸ್ರೇಲ್ ಯಾವ ಯುದ್ಧವನ್ನೂ ಸೋಲಲೇ ಇಲ್ಲ. ಸೋತಿದ್ದರೆ ಜಗತ್ತಿನಲ್ಲಿ ಜ್ಯೂಗಳು ಉಳಿಯುವುದಿಲ್ಲ ಎಂಬ ಅರಿವೇ ಅವರಿಗೆ ಗೊತ್ತಿತ್ತು. ಬೆಕ್ಕನ್ನು ಕೋಣೆಯಲ್ಲಿ ಕೂಡಿ ಹಾಕಿ ಅದರ ಮೇಲೆ ದೌರ್ಜನ್ಯ ಮಾಡಿದರೆ ಅದೂ ತಿರುಗಿ ಬೀಳುತ್ತದೆ. ಹೇಳಿ ಕೇಳಿ ಇಸ್ರೇಲ್ ಹುಲಿಯ ಜಾತಿ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ದೌರ್ಜನ್ಯಕ್ಕೆ ಒಳಗಾದವರು ಜ್ಯೂಗಳು.

“ನೀವು ನಮ್ಮ ಒಬ್ಬ ಪ್ರೆಜೆಯನ್ನು ಹೊಡೆದರೆ ನಾವು ನಿಮ್ಮ ನೂರು ಜನರನ್ನು ಹೊಡೆಯುತ್ತೇವೆ ” 

ಎರಡನೇ ಮಹಾಯುದ್ಧದ ನಂತರ ತನ್ನ ಗಡಿಯನ್ನು ಯುದ್ಧ ದಲ್ಲಿ ಗೆಲ್ಲುವ ಮೂಲಕ ವಿಸ್ತರಿಸಿದ ಜಗತ್ತಿನ ಏಕೈಕ ರಾಷ್ಟ್ರ ಇಸ್ರೇಲ್.
“ನೀವು ನಮ್ಮ ಒಬ್ಬ ಪ್ರೆಜೆಯನ್ನು ಹೊಡೆದರೆ ನಾವು ನಿಮ್ಮ ನೂರು ಜನರನ್ನು ಹೊಡೆಯುತ್ತೇವೆ ” ಅಂತ ಹೇಳಿ ಮಾಡಿ ತೋರಿಸಿದ ಜಗತ್ತಿನ ಏಕೈಕ ಗಂಡುಗಲಿ ರಾಷ್ಟ್ರ.

ಇಸ್ರೇಲ್ ಮೇಲೆ ಸುತ್ತಲಿನ ದೇಶಗಳು ನೂರಾರು ಬಾರಿ ಭಯೋತ್ಪಾದನಾ ದಾಳಿ ಮಾಡಿದವು. ಎಂಟೆಬ್ಬೆ  ವಿಮಾನ ಅಪಹರಸಿ ಶತ್ರು ರಾಷ್ಟ್ರಕ್ಕೆ ಒಯ್ಯಲಾಯಿತು. ಇಸ್ರೇಲ್ ಕಮಾಂಡೋಗಳು ಅಲ್ಲಿಗೇ ಹೋಗಿ ಭಯೋತ್ಪಾದಕರನ್ನು ಮುಗಿಸಿದರು. ಆ ಕಮಾಂಡೋಗಲ್ಲಿ ಇಸ್ರೇಲ್ ಪ್ರಧಾನಿಯ ಸ್ವಂತ ಅಣ್ಣನಿದ್ದ.

ಪಿಎಲಓ ಲೀಡರ್ ಯಾಸಿರ್ ಅರಾಫತ ರನ್ನು ಇಸ್ರೇಲ್ ಸೇನೆ ಸುತ್ತುವರೆದು ಒಂದು ಬಿಲ್ಡಿಂಗನಲ್ಲಿ ನೀರು ವಿದ್ಯುತ್ ಕಟ್ ಮಾಡಿ ಏಳು ದಿನ ಕೂಡಿಹಾಕಿತ್ತು.ಇಸ್ರೇಲ್ ಆರ್ಥಿಕ ವಾಗಿ ತುಂಬಾ ಮುಂದಿದೆ. ಜಗತ್ತಿನ ಶೇ ಹತ್ತು ಶಸ್ತ್ರ ಗಳು ಇಲ್ಲಿ ತಯಾರಾಗುವವು.

ಇಸ್ರೇಲ್ ಬಳಿ ರಹಸ್ಯ ವಾಗಿ ತಯಾರಾದ ಆಟಮ್ ಬಾಂಬ್. ರಾಸಾಯನಿಕ ಅಸ್ತ್ರ ಇವೆ. ಇಡೀ ಜಗತ್ತಿನಲ್ಲಿ ಶಸ್ತ್ರಾಸ್ತ್ರ ತಯಾರಿಕೆ ಪರೀಕ್ಷೆ ಮಾಡಲು ಒಪ್ಪಂದ ಇದೆ. ಆದರೆ ಪರೀಕ್ಷೆಗೆ ಒಳಪಡಿಸಲಾಗದ ಜಗತ್ತಿನ ಏಕೈಕ ರಾಷ್ಟ್ರ ಇಸ್ರೇಲ್.

ತುಂಬಾ ಹಿಂದೆ ಅಮೆರಿಕ ಇಸ್ರೇಲ್ ಅಣು ಬಾಂಬ್ ತಯಾರಿಕಾ ಘಟಕ ವನ್ನು ಪರೀಕ್ಷೆ ಮಾಡಲು ಹೋಗಿತ್ತು. ಏನೂ ಸಿಗಲಿಲ್ಲ. ಯಾಕೆಂದರೆ ಪರೀಕ್ಷಕರಿಗೆ ನೆಲ ಮಹಡಿ ತೋರಿಸಿ ಯಾಮಾರಿಸಿದರು. ಘಟಕ ಇದ್ದದ್ದು ನೆಲದಿಂದ ಏಳು ಮಹಡಿ ಕೆಳಗೆ. ಈಗ ಅಮೆರಿಕ ಇಸ್ರೇಲ್ ಗೆ ಪ್ರತೀ ವರ್ಷ ಬಿಲಿಯನ್ ಡಾಲರ್ ಕೊಡುತ್ತದೆ.

 

ಅಮೆರಿಕದ ಕೇವಲ ನಾಲ್ಕು ಶೇಕಡಾ ಜ್ಯೂಗಳು ಅಮೆರಿಕದ ಆಯಕಟ್ಟಿನ ಪ್ರಭಾವೀ ಅಧಿಕಾರ ಹೊಂದಿದ್ದಾರೆ. ಜರ್ಮನಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಜ್ಯೂಗಳು ದೊಡ್ಡ ದೊಡ್ಡ ಅಧಿಕಾರದಲ್ಲಿರುವುದು ಹಿಟ್ಲರನ ಕೋಪಕ್ಕೆ ಕಾರಣವಾಗಿತ್ತು. ಅದಕ್ಕಾಗಿ ಆತ ಜಗತ್ತಿನಲ್ಲಿ ಜ್ಯೂಗಳು ಇರಬಾರದು ಅಂತ ಕೊಂದಿದ್ದು. ಇದಕ್ಕೂ ಮೊದಲು ಮುಸ್ಲಿಮರು ಜ್ಯೂ ಗಳನ್ನು ಕೊಲ್ಲುತ್ತಿದ್ದುದು ಇತಿಹಾಸ. ಆದರೆ ಇಷ್ಟು ಕಡಿಮೆ ಸಂಖ್ಯೆಯ ಜನರು ಪುಟಿದೆದ್ದರು. ಸಂಸ್ಕೃತ ದಂತೆಯೇ ಅವರ ” ಹೀಬ್ರೂ ” ಭಾಷೆ ಸತ್ತು ಹೋಗಿತ್ತು. ಪುರಾತನ ಭಾಷೆಯನ್ನು ಮತ್ತೆ ಜೀವಂತ ಗಳಿಸಿದ ಏಕೈಕ ಜನ ಜ್ಯೂಗಳು.

” ಹೀಬ್ರೂ ” ಭಾಷೆ

ನಿಮಗೆ ಆಚಾರಿ ಅನಿಸಬಹುದು.ಏಕೆಂದರೆ ಜಗತ್ತಿನಲ್ಲಿ ಕೇವಲ ಒಂದು ಕೋಟಿ ಇಪ್ಪತ್ತು ಲಕ್ಷ ಇರುವ ಜ್ಯೂಗಳು ಇಡೀ ಜಗತ್ತಿನ ಮೇಲೆ ಹಿಡಿತ ಸಾಧಿಸಿದ್ದಾರೆ. ಎಷ್ಟು ತುಳಿದರೂ ಮೇಲೆ ಎದ್ದಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ತಮ್ಮ ಭಾಷೆಯಾದ ಹೀಬ್ರೂ ವನ್ನು ಮತ್ತೆ ಕಲಿತು ಅದರಲ್ಲೇ ಮಾತನಾಡುತ್ತಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಟೈಗರ್ ಪ್ರಭಾಕರ್ ಅವರ ಮೂರು ಹೆಂಡತಿಯರನ್ನು ಮೊದಲ ಬಾರಿಗೆ ತೋರಿಸ್ತೀವಿ ನೋಡಿ.

    ಒಂದು ಕಾಲಕ್ಕೆ ಜನಮನ ಗೆದ್ದ ನಟ, ಯಾವುದೇ ಗಾಡ್ ಫಾದರ್ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಸ್ಟಂಟ್ ಮಾಸ್ಟರ್ ಆಗಿ, ಖಳನಟನಾಗಿ, ನಾಯಕನಾಗಿ, ಛಾಯಾಗ್ರಾಹಕನಾಗಿ, ನಿರ್ಮಾಪಕ, ನಿರ್ದೇಶಕನಾಗುವ ಮೂಲಕ ಆಲ್ ರೌಂಡರ್ ಆಗಿದ್ದವರು. ಫ್ರೇಜರ್ ಟೌನ್ ನ ಆ್ಯಂಥೋನಿ ಎಂಬ ಕಟ್ಟುಮಸ್ತಾದ ಯುವಕ ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಆಗಿದ್ದರ ಹಿಂದೆ ಅಗಾದ ನೋವು, ನಲಿವು, ಸೋಲು, ಗೆಲುವು ಎಲ್ಲವೂ ಇದೆ. ಪ್ರಭಾಕರ್ ಹುಟ್ಟು ಫೈಟರ್ ಆಗಿಯೇ ಬೆಳೆದವರು..ಸ್ಟಂಟ್ ಮ್ಯಾನ್ ಆಗಿದ್ದ ಪ್ರಭಾಕರ್ ಹೀರೋ ಆಗಲು ದೀರ್ಘಕಾಲದ ಶ್ರಮ…

  • ಮನರಂಜನೆ

    ರಿಲಯನ್ಸ್‌ ಬಿಗ್‌ ಟಿವಿ, ಬಿಗ್ ಆಫರ್..ಎಲ್ಲಾ ಚಾನೆಲ್ 5 ವರ್ಷ ಉಚಿತ.!ಇವತ್ತಿನಿಂದಲೇ ಪ್ರೀ ಬುಕ್ಕಿಂಗ್‌ ಶುರು..ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ಇಂದಿನಿಂದ ಡೈರೆಕ್ಟ್ ಟು ಹೋಮ್‌ ರಿಲಯನ್ಸ್‌ ಬಿಗ್‌ ಟಿವಿ ಸೆಟ್ ಆಪ್ ಬಾಕ್ಸ್ ಪ್ರೀ ಬುಕ್ಕಿಂಗ್‌ ಆರಂಭಗೊಂಡಿದೆ. ರಿಲಯನ್ಸ್‌ ಬಿಗ್‌ ಟಿವಿ ಸುಮಾರು 500ಕ್ಕೂ ಹೆಚ್ಚು ಫ್ರೀ-ಟು-ಏರ್‌ ಚ್ಯಾನಲ್‌ಗ‌ಳನ್ನು 5 ವರ್ಷಗಳ ಕಾಲ ಉಚಿತವಾಗಿ ವೀಕ್ಷಿಸಬಹುದಾಗಿದೆ.

  • ಆರೋಗ್ಯ

    10 ಸಾವಿರ ಮಂದಿಯಿಂದ ಗಿನ್ನೀಸ್ ದಾಖಲೆಯ ಬೃಹತ್ ಯೋಗ ಪ್ರದರ್ಶನ

    ಜಿಲ್ಲಾಡಳಿತ, ಜಿಪಂ,ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ,ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಗಿನ್ನೀಸ್ ದಾಖಲೆಯ ಯೋಗಾಥಾನ್ ಅಂಗವಾಗಿ ನಡೆದ 10 ಸಾವಿರಕ್ಕೂ ಹೆಚ್ಚು ಮಂದಿಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದರು. ನಡುಗುವ ಚಳಿಯಲ್ಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಯುವಜನರು ಜಿಲ್ಲಾ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೇರಿದರು. ವಿವಿಧ ಶಾಲೆ,ಕಾಲೇಜುಗಳಿಂದ ಆಗಮಿಸಿದ್ದ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಗಮನ ಸೆಳೆದರು.ನಗರ ಮಾತ್ರವಲ್ಲದೇ ತಾಲ್ಲೂಕಿನ ವಿವಿಧ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು. ಯೋಗ ಪ್ರದರ್ಶನಕ್ಕೆ 1100 ಮಕ್ಕಳನ್ನು ಕರೆತಂದಿದ್ದ…

  • ಸುದ್ದಿ

    ಶೀಘ್ರದಲ್ಲೇ ಇನ್ಮುಂದೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆಗಳಲ್ಲಿ ಬಿಸಿ ಬಿಸಿ ಟೀ ಲಭ್ಯ…!

    ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಏರ್ಪೋರ್ಟ್ಗಳು ಮತ್ತು ಮಾಲ್ಗಳಲ್ಲಿ ನೀವು ‘ಟೀ’ಯನ್ನು ಮಣ್ಣಿನ ಲೋಟಗಳಲ್ಲಿ(ಕುಲ್ಹಾದ್) ಕುಡಿಯುವ ಅವಕಾಶ ಸದ್ಯದಲ್ಲೇ ಸಿಗಲಿದೆ. ಇಂಥದ್ದೊಂದು ವ್ಯವಸ್ಥೆ ಜಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ ನಿರ್ದೇಶನ ನೀಡಿದ್ದಾರೆ ಮಣ್ಣಿನ ಲೋಟಗಳನ್ನು ಬಳಸುವ ಪರಿಸರಸ್ನೇಹಿ ವ್ಯವಸ್ಥೆಯನ್ನು ದೇಶದ ಪ್ರಮುಖ100 ರೈಲ್ವೆ…

  • ಸುದ್ದಿ

    ದಾರಿ ಮಧ್ಯೆ ಕಾರು ನಿಲ್ಲಿಸಿ ವೃದ್ಧನಿಗೆ ಹಣ ನೀಡಿದ ಕನ್ನಡದ ಟಾಪ್ ನಟ,.!ಯಾರು ಗೊತ್ತೇ

    ಇತ್ತೀಚೆಗೆ ಶಿವರಾಜ್‍ಕುಮಾರ್ ಅವರು ತಮ್ಮ ನಿವಾಸ ನಾಗಾವರದ ಬಳಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅವರು ಬಿಸಿಲಲ್ಲಿ ನಿಂತಿದ್ದ ಹಿರಿಯ ವೃದ್ಧರೊಬ್ಬರನ್ನು ನೋಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಶಿವಣ್ಣ ವ್ಯಕ್ತಿ ನಿಂತಿದ್ದ ಜಾಗದಿಂದ ಸ್ವಲ್ಪ ಮುಂದೆ ಹೋಗಿದ್ದಾರೆ. ನಂತರ ಅವರನ್ನು ನೋಡಿ ಮತ್ತೆ ಕಾರು ರಿವರ್ಸ್ ಮಾಡಿ ವಾಪಸ್ ಬಂದು ಜೇಬಿನಲ್ಲಿದ್ದ ಹಣವನ್ನು ತೆಗೆದುಕೊಂಡು ವೃದ್ಧರೊಬ್ಬರಿಗೆ  ನೀಡಿ ಮಾನವೀಯತೆ ಮೆರೆದಿದ್ದಾರೆ. ಶಿವರಾಜ್‍ಕುಮಾರ್ ಅವರು ಹಣ ನೀಡುತ್ತಿರುವಾಗ ಪಕ್ಕದಲ್ಲಿದ್ದ ವ್ಯಕ್ತಿ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಈ ಫೋಟೋದಲ್ಲಿ ಶಿವಣ್ಣ ಸ್ಪಷ್ಟವಾಗಿ ಕಾಣಿಸುವುದಿಲ್ಲ….

  • ವ್ಯಕ್ತಿ ವಿಶೇಷಣ

    ‘ಗೂಗಲ್’ ಕಂಪನಿಯ ಸಿಇಒ ಭಾರತೀಯರಾದ ‘ಸುಂದರ್ ಪಿಚೈ ‘..!ಬಗ್ಗೆ ತಿಳಿಯಲು ಈ ಲೇಖನ ಓದಿ …

    ಸುಂದರ್‌ ಪಿಚೈ ಅವರು ಮೊದಲು ಕಂಪನಿಯ ಇಂಟರ್‌ ನೆಟ್‌ ವ್ಯವಹಾರವನ್ನು ಉನ್ನತಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಾಡಕ್ಟ್‌ ಮತ್ತು ಇಂಜಿನಿಯರಿಂಗ್‌ ವಿಭಾಗದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.