News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಮನರಂಜನೆ

ಬಿಗ್ ಬಾಸ್-5ರ ಪಟ್ಟ ಯಾರಿಗೆ.?ಕಾಮಾನ್ ಮ್ಯಾನ್ Vs ಸೆಲೆಬ್ರೆಟಿಸ್!ಸೋಶಿಯಲ್ ಮೀಡಿಯಾದಲ್ಲಿ ಜನರ ಅಭಿಪ್ರಾಯ ಏನು ಗೊತ್ತಾ?ಇಲ್ಲಿದೆ ಪೂರ್ತಿ ವಿವರ,ತಿಳಿಯಲು ಮುಂದೆ ಓದಿ…

599

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ‌ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 5 ದಿನಗಳು ಬಾಕಿ ಉಳಿದಿವೆ. ನೆನ್ನೆ ಮಧ್ಯರಾತ್ರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ರಾತ್ರೋ ರಾತ್ರಿ ಒಬ್ಬರನ್ನು ಎಲಿಮಿನೇಟ್ ಮಾಡುವ ಮುಖಾಂತರ ಶಾಕ್ ಕೊಟ್ಟಿದ್ದಲ್ಲದೆ, ವೀಕ್ಷಕರಲ್ಲಿ ಬಾರಿ ಕುತೂಹಲವನ್ನು ಉಂಟುಮಾಡಿದೆ.

ಹೌದು, ಮಧ್ಯರಾತ್ರಿ ಇದ್ದಕ್ಕಿದ್ದಂತೆ ಸಮೀರ್ ಆಚಾರ್ಯವರನ್ನು ಎಲಿಮಿನೇಟ್ ಮಾಡುವ ಮುಖಾಂತರ ಉಳಿದ 5 ಜನ ಸ್ಪರ್ಧಿಗಳು ಬಿಗ್ ಬಾಸ್ ಸಂಚಿಕೆ 5ರ ಫೈನಲ್ ತಲುಪಿದ್ದಾರೆ. ದಿವಾಕರ್,ನಿವೇದಿತಾ ಗೌಡ,ಶ್ರುತಿ ಪ್ರಕಾಶ್,ಜಯರಾಂ ಕಾರ್ತಿಕ್,ಮತ್ತು ಚಂದನ್ ಶೆಟ್ಟಿ ಈ 5 ಜನರ ಗ್ರಾಂಡ್ ಪಿನಾಲೆ ತಲುಪಿದ್ದಾರೆ.

ಬಿಗ್ ಬಾಸ್ ಸಂಚಿಕೆ 5ರ ಪಟ್ಟಕ್ಕೆ ನೆನ್ನೆಯಿಂದಲೇ ವೋಟಿಂಗ್ ಶುರುವಾಗಿದೆ.ಈ 5 ಜನರಲ್ಲಿ ದಿವಾಕರ್ ಉಳಿದಂತೆ 4 ಜನ ಸೇಲೆಬ್ರೆಟಿಗಳಾಗಿದ್ದು, ಕಾಮನ್ ಮ್ಯಾನ್ Vs ಸೇಲೆಬ್ರೆಟಿಸ್ ಇವರಲ್ಲಿ ಯಾರೂ ಗೆಲ್ಲುತ್ತಾರೆಂಬ ಕುತೂಹಲ ಜನರಲ್ಲಿ ಇಮ್ಮಡಿಗೊಂಡಿದೆ.ಹಾಗಾದ್ರೆ ವೀಕ್ಷಕರು ಹೇಳುವ ಪ್ರಕಾರ ಯಾರು ಗೆಲ್ಬೇಕು ಎಂಬ ವಿವರ ಇಲ್ಲಿದೆ ಮುಂದೆ ನೋಡಿ…

ನಿವೇದಿತಾ ಗೌಡ:-  

ನಿವೇದಿತಾ ಗೌಡ ಹುಟ್ಟಿದ್ದು ಮತ್ತು ಬೆಳೆದಿದ್ದು ಮೈಸೂರಿನಲ್ಲಿಯೇ. ಆದರೂ ಆಕೆಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಏಕೆಂದರೆ ಆಕೆ ಓದಿದ ಶಾಲೆ ಅಟಾಮಿಕ್ ಎನರ್ಜಿ ಸ್ಕೂಲಿನಲ್ಲಿ. ಶಾಲೆಯಲ್ಲಿ ಕನ್ನಡ ಇಲ್ಲದ ಕಾರಣ ಕನ್ನಡ ಬರೆಯಲು ಗೊತ್ತಿಲ್ಲ, ಶಾಲೆಯಲ್ಲಿ ಮಾತಾಡಲು ಸಹ ಇಲ್ಲದಿರುವುದರಿಂದ ಕನ್ನಡ ಆಕೆಗೆ ಮಾತಾಡಲು ತುಂಬ ಕಷ್ಟ. ಮನೆಯಲ್ಲಿ ಕನ್ನಡ, ಶಾಲಾ ಕಾಲೇಜ್ನಲ್ಲಿ ಇಂಗ್ಲಿಷ್, ಇವೆರಡು ಮಿಶ್ರಣವಾಗಿ ಇಂಗ್ಲಿಷ್ ಸ್ಟೈಲಿನ ಕನ್ನಡ ಮಾತನಾಡುತ್ತಾರೆ. ನಿವೇದಿತಾ ಈಗ ಮೈಸೂರಿನ ಮಹಾಜನ್ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಆಕೆಯ ವಯಸ್ಸು 18. ಬಿಗ್ಬಾಸ್ ಇತಿಹಾಸದಲ್ಲಿ ಅತೀ ಕಡಿಮೆ ವಯಸ್ಸಿನ ಸ್ಪರ್ಧಿಯಾಗಿದ್ದಾರೆ.ತಂದೆ ರಮೇಶ್ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಒಬ್ಬ ಕಿರಿಯ ಸಹೋದರ ಇದ್ದಾನೆ.

ಡಬ್ ಸ್ಮ್ಯಾಶ್ ಮಾಡುವುದರಲ್ಲಿ ನಿವೇದಿತಾ ಗೌಡ ಎತ್ತಿದ ಕೈ. ನಿಜ ಹೇಳಬೇಕು ಅಂದ್ರೆ, ಡಬ್ ಸ್ಮ್ಯಾಶ್ ಜಗತ್ತಿನಲ್ಲಿ ನಿವೇದಿತಾ ಸೂಪರ್ ಸ್ಟಾರ್. ಕನ್ನಡದ ಸೂಪರ್ ಹಿಟ್ ಡೈಲಾಗ್ ಗಳನ್ನು ತಮ್ಮದೇ ಶೈಲಿಯಲ್ಲಿ ನಿವೇದಿತಾ ಹೇಳಿದ್ದಾರೆ. ಡಬ್ ಸ್ಮ್ಯಾಶ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಈಕೆ ಈಗ ಅದರಿಂದಲೇ ‘ಬಿಗ್ ಬಾಸ್’ ಎಂಬ ದೊಡ್ಡ ಕಾರ್ಯಕ್ರಮಕ್ಕೆ ಬಂದು, ಟಾಪ್ 5ರಲ್ಲಿ ತಮ್ಮ ಸ್ಥಾನ ಗಳಿಸುವ ಮೂಲಕ ಮೋಡಿ ಮಾಡಿದ್ದಾರೆ.

ಜಯರಾಂ ಕಾರ್ತಿಕ್:-

ಜಯರಾಂ ಕಾರ್ತಿಕ್ ಒಬ್ಬ ನಟನಾಗಿದ್ದು, ಕನ್ನಡ ಕಿರುತೆರೆ ಹಾಗೂ ಚಿತ್ರರಂಗಗಳಲ್ಲಿ ಪ್ರಸಿದ್ಧಿಪಡೆದಿದ್ದಾರೆ. ಇವರು ಕಲರ್ಸ್ ವಾಹಿನಿಯಲ್ಲಿ 2012-15ರಲ್ಲಿ ಪ್ರಸಾರಗೊಂಡ ಧಾರಾವಾಹಿಯಾದ ಅಶ್ವಿನಿ ನಕ್ಷತ್ರದಲ್ಲಿನ ಜೆ. ಕೃಷ್ಣ ಎಂಬ “ಸೂಪರ್‍ಸ್ಟಾರ್” ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು. ಇದೇ ಸಮಯದಲ್ಲಿ ಇವರು ಹಲವು ಚಲನಚಿತ್ರಗಳಲ್ಲಿ ಸಹನಟರಾಗಿ ಕೂಡ ಕಾಣಿಸಿಕೊಂಡರು.2014 ರಲ್ಲಿ ತೆರೆಕಂಡ  ಜಸ್ಟ್ ಲವ್ ಚಿತ್ರದ ಮೂಲಕ ನಾಯಕ ನಟರಾದರು. ನಟನೆಯ ಜೊತೆಜೊತೆಗೆ ಇವರು ಇಂಜಿನಿಯರ್ ಆಗಿಯೂ ಕೆಲಸ ಮಾಡಿದ್ದಾರೆ.

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 5ರ ಸಂಚಿಕೆಯಲ್ಲಿ ಸ್ಪರ್ದಿಸಿದ್ದ ಇವರು, ಈಗ ಟಾಪ್ 5 ತಲುಪುವ ಮೂಲಕ ಬಿಗ್ ಬಾಸ್ ಪಟ್ಟ ಗೆಲ್ಲುವಲ್ಲಿ ಮುನ್ನುಗ್ಗುತ್ತಿದ್ದಾರೆ.

ಚಂದನ್ ಶೆಟ್ಟಿ:-

ಚಂದನ್ ಶೆಟ್ಟಿ, ಇದು 2012ರಿಂದಲೇ ಕನ್ನಡ ಸಿನಿಮಾಗಳಲ್ಲಿ ಕೇಳುತ್ತಿದ್ದ, ಕಾಣುತ್ತಿದ್ದ ಹೆಸರು. ಹಾಡುಗಳನ್ನು ಬರೆಯುವ, ಹಾಡುವ ಮತ್ತು ಸಂಗೀತ ಸಂಯೋಜಿಸುವ ಚಂದನ್ ಶೆಟ್ಟಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದರೂ ಒಂದು ಐಡೆಂಟಿಟಿ ಎಂದು ಕೊಟ್ಟಿದ್ದು ‘ಧಮ್ ಪವರ್ರೇ…’ ಪುನೀತ್ ರಾಜಕುಮಾರ್ ಅಭಿನಯದ ‘ಪವರ್’ ಚಿತ್ರದ ಈ ಶೀರ್ಷಿಕೆ ಗೀತೆ ಬರೆದು, ಹಾಡಿದ ಚಂದನ್ ಒಮ್ಮೆಲೇ ಲೈಮ್‌ಲೈಟ್‌ಗೆ ಬಂದರು.
ಹಾಸನ ಚಂದನ್ ಹುಟ್ಟೂರಾದರೂ ಬೆಳೆದಿದ್ದು ಸಕಲೇಶಪುರದಲ್ಲಿ. ಅಲ್ಲಿ ಹೈಸ್ಕೂಲ್ ಮುಗಿಸಿ ಪುತ್ತೂರಲ್ಲಿ ಪಿಯು ಓದಿ, ಮೈಸೂರಿಗೆ ಬಂದು ಬಿಬಿಎಂ ಮುಗಿಸಿದರು. ಉದ್ಯೋಗದ ಬೆನ್ನು ಹತ್ತಿ ಕಾಲ್‌ಸೆಂಟರ್‌ನಲ್ಲಿ ಒಂದು ವರ್ಷ ಕೆಲಸವನ್ನೂ ಮಾಡಿದರು.

ಸಂಗೀತದ ಕಡೆಗೆ ಸೆಳೆಯುತ್ತಿದ್ದ ಮನಸು ಕಾಲ್‌ಸೆಂಟರ್ ಬಿಡಿಸಿತು. ಬೆಂಗಳೂರಲ್ಲಿ ಯಾವುದಾದರೂ ನೌಕರಿ ಹಿಡಿದರೆ ಸಂಗೀತವನ್ನೂ ಜೊತೆಯಲ್ಲೇ ತೂಗಿಸಿಕೊಂಡು ಹೋಗಬಹುದು ಎಂದುಕೊಂಡು ಬೆಂಗಳೂರಿಗೆ ಬಂದರು.ಕಂಡ ಕನಸು ಕೈಗೂಡಿದಂತೆ ಅರ್ಜುನ್ ಜನ್ಯ ಅವರ ಶಿಷ್ಯತ್ವವೂ ಸಿಕ್ಕಿತು. ಅವರ ಜೊತೆ ಚಂದನ್ ಈವರೆಗೆ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ‘ಅಲೆಮಾರಿ’ ಚಿತ್ರದಲ್ಲಿ ಹಾಡುವ ಮೂಲಕ ಚಂದನ್ ಹಾಡಿನ ಬಂಡಿಯೂ ಆರಂಭವಾಯಿತು.ಹೀಗೆ ತಮ್ಮ ವಿಶಿಷ್ಟ ಗಾಯನದ ಮೂಲಕ ಹೆಸರು ಮಾಡಿರುವ ಇವರು ಬಿಗ್ ಬಾಸ್’ನಲ್ಲಿ ಸ್ಪರ್ದಿಸಿ ಟಾಪ್ 5ರ ಹಂತಕ್ಕೆ ತಲುಪಿ, ಇವರು ಕೂಡ ಬಿಗ್ ಬಾಸ್ ಸಂಚಿಕೆ 5ರ ಗೆಲ್ಲುವ ಕುದುರೆ ಎಂದು ಹೇಳಲಾಗುತ್ತಿದೆ.

ಶ್ರುತಿ ಪ್ರಕಾಶ್ :-

ಗಾಯಕಿ ಹಾಗೂ ನಟಿ ಆಗಿರುವ ಶ್ರುತಿ ಪ್ರಕಾಶ್, ಬೆಳಗಾವಿಯಲ್ಲಿ ಹುಟ್ಟಿದ, ಮುಂಬೈನಲ್ಲಿ ನೆಲೆ ಕಂಡುಕೊಂಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚುವ ಆಸೆ ಶ್ರುತಿ ಪ್ರಕಾಶ್ ರವರಿಗಿದೆ. ಹೀಗಾಗಿ ಅವರಿಗೆ ‘ಬಿಗ್ ಬಾಸ್’ ಒಂದು ಒಳ್ಳೆಯ ವೇದಿಕೆಯಾಗಿದ್ದು, ಸಮರ್ಥವಾಗಿ ಉಪಯೋಗಿಸಿಕೊಂಡಿದ್ದಾರೆ ಕೂಡ.ಜಯರಾಂ ಕಾರ್ತಿಕ್ ಜೊತೆ ತುಂಬಾ ಸ್ನೇಹದಿಂದ ಇವರ ಮೇಲೆ, ಜಯರಾಂರವರನ್ನು ಪ್ರೀತಿಸುತ್ತಿದ್ದಾರೆಯೇ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.ಇವರೂ ಕೂಡ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ಟಪ್ 5ರ ಸ್ಪರ್ದಿಯಾಗಿದ್ದು ಬಿಗ್ ಬಾಸ್ ಪಟ್ಟ ಇವರಿಗೆ ಒಲಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

‘ಸೇಲ್ಸ್ ಮ್ಯಾನ್’ ದಿವಾಕರ್ “:-

ಸೊಂಟ ನೋವು, ತಲೆನೋವು… ದೇಹದ ಯಾವುದೇ ನೋವಿರಲಿ… ನೆಗಡಿ, ಶೀತ, ಕೆಮ್ಮು.. ನಿಮಗೆ ಏನೇ ಆದರೂ… ಇವರ ಹತ್ತಿರ ಇದೆ ಔಷಧಿ. ಇವರೇ ಆಯುರ್ವೇದ ಪ್ರಾಡೆಕ್ಟ್ ಸೇಲ್ಸ್ ಮ್ಯಾನ್ ದಿವಾಕರ್. ನರಸೀಪುರದಲ್ಲಿ ಹುಟ್ಟಿ ಮಡಿಕೇರಿಯಲ್ಲಿ ಬೆಳೆದಿರುವ ದಿವಾಕರ್ ಹೊಟ್ಟೆ ಪಾಡಿಗಾಗಿ ಮಾಡದ ಕೆಲಸ ಇಲ್ಲ. ಎಮ್ಮೆ ಮೇಯಿಸುವುದರಿಂದ ಹಿಡಿದು ಹೋಟೆಲ್ ನಲ್ಲಿ ಕೆಲಸ, ಕೂಲಿ ಕೆಲಸ, ಗಾರೆ ಕೆಲಸ ಕೂಡ ಮಾಡಿರುವ ದಿವಾಕರ್ ಹೊಟ್ಟೆ ಹಸಿವಾದಾಗ ಭಿಕ್ಷೆ ಕೂಡ ಬೇಡಿದ್ದಾರಂತೆ.

ಇಷ್ಟೊಂದು ಕಷ್ಟಗಳಲ್ಲಿಯೇ ಬೆಳೆದು ಬಂದಿರುವ ಕಾಮಾನ್ ಮ್ಯಾನ್ ದಿವಾಕರ್ ಬಿಗ್ ಬಾಸ್ 5ರ ಸಂಚಿಕೆಯಲ್ಲಿ ಭಾಗವಹಿಸಿ, ಘಟಾನುಘಟಿ ಸೇಲೆಬ್ರೆಟಿಗಳ ಜೊತೆ ಸ್ಪರ್ದಿಸಿ ತಮ್ಮ ಪರಿಶ್ರಮದಿಂದ ಟಾಪ್ 5ರ ಹಂತ ತಲುಪಿದ್ದಾರೆ.ಬಿಗ್ ಬಾಸ್ ಪಟ್ಟ ಒಲಿಸಿಕೊಳ್ಳುವಲ್ಲಿ ಇವರು ಸೇಲೆಬ್ರೆಟಿಗಳಿಗಿಂತ ಮುಂದೆ ಇದ್ದು,ಗೆಲ್ಲುವ ನೆಚ್ಚಿನ ಸ್ಪರ್ದಿಯಾಗಿದ್ದಾರೆ.

ಜನರ ಅಭಿಪ್ರಾಯದ ಪ್ರಕಾರ ದಿವಾಕರ್’ರವರಿಗೆ ಹೆಚ್ಚಿಗೆ ವೋಟ್ ಮಾಡಿ ಗೆಲ್ಲಿಸಿ ಎಂದು ಸೋಶಿಯಲ್ ಮಿಡಿಯಾದಲ್ಲಿ ಅಭಿಯಾನ ಶುರುವಾಗಿದೆ.ನಮ್ಮ ಪ್ರಕಾರ ತುಂಬಾ ಕಷ್ಟದಿಂದಲೇ ಬಂದಿರುವ ಕಾಮನ್ ಮ್ಯಾನ್ ದಿವಾಕರ್ ಗೆದ್ದರೆ, ಅದು ಕಾಮನ್ ಮ್ಯಾನ್ ಸಿಕ್ಕ ಗೆಲುವಾಗುತ್ತದೆ.

 

 

 

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ

  • ಸುದ್ದಿ

    ತನ್ನ ಸ್ವಂತ ಮನೆಯವರೇ ‘ಮತ’ ಹಾಕಿಲ್ಲವೆಂದು ಕಣ್ಣೀರಿಟ್ಟ ಅಭ್ಯರ್ಥಿ…!

    ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅಲೆಯ ಎದುರು ಪ್ರತಿಪಕ್ಷಗಳು ಕೊಚ್ಚಿ ಹೋಗಿವೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೆಲ ರಾಜ್ಯಗಳಲ್ಲಿ ಖಾತೆಯನ್ನೇ ತೆರೆಯಲು ವಿಫಲವಾಗಿದೆ. ಇದರ ಮಧ್ಯೆ ಬಹು ನಿರೀಕ್ಷೆಯಿಂದ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇವಲ ಐದು ಮತಗಳನ್ನು ಪಡೆದಿದ್ದಾರೆ. ಆ ಬಳಿಕ ಎಲ್ಲರ ಮನ ಕರಗುವಂತೆ ಅವರು ಕಣ್ಣೀರಿಟ್ಟಿದ್ದು, ಇದರ ನೈಜ ಕಾರಣ ತಿಳಿದ ಸಾರ್ವಜನಿಕರು ದಂಗಾಗಿದ್ದಾರೆ. ಪಂಜಾಬ್ ನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿ ಈ…

  • ಮನರಂಜನೆ, ಸುದ್ದಿ

    ಬಿಗ್ ಬಾಸ್ ಶಾಕಿಂಗ್ ಸುದ್ದಿ.!ರವಿ ಬೆಳಗೆರೆ ಬಿಗ್ ಬಾಸ್ ಕಂಟೆಸ್ಟಂಟ್ ಅಲ್ಲವೇ ಅಲ್ಲ..!ಹಾಗಾದ್ರೆ ಕೊನೆಯ ಸ್ಪರ್ಧಿ ಯಾರು?

    ಬಿಗ್ ಬಾಸ್ ಶಾಕಿಂಗ್ ಸುದ್ದಿ ಮನೆಯಿಂದ ಹೊರಬಂದಿದೆ. ಅನಾರೋಗ್ಯದ ಕಾರಣಕ್ಕೆ ಮೊದಲ ದಿನವೇ ಮನೆಯಿಂದ ಹೊರಬಂದಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಕುರಿತಂತೆ ಬಿಗ್ ಬಾಸ್ ಸುದ್ದಿಯನ್ನು ನೀಡಿದೆ. ರವಿ ಬೆಳಗರೆ ಆರೋಗ್ಯದ ಪರಿಶೀಲನೆ ಮಾಡಲಾಗಿದ್ದು ಟಾಸ್ಕ್ ಗಳಲ್ಲಿ ಅವರು ಭಾಗವಹಿಸಲು ಸಾಧ್ಯವಿಲ್ಲ. ಹಾಗಾಗಿ ರವಿ ಬೆಳಗೆರೆ ಈ ಶನಿವಾರದವರೆಗೆ ಮನೆಯಲ್ಲಿ ಅತಿಥಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಲ್ಲಿಗೆ ರವಿ ಬೆಳಗೆರೆ ಅವರ ವೋಟಿಂಗ್ ಸಹ ಬಂದ್ ಆಗಲಿದೆ. ಸ್ಪರ್ಧಿಯಾಗಿ ಮನೆ ಒಳ ಪ್ರವೇಶ ಮಾಡಿದ್ದ…

  • ಆಧ್ಯಾತ್ಮ

    ‘ಬಟಾಣಿ’ಯಲ್ಲಿರುವ 09 ಆರೋಗ್ಯಕಾರಿ ಉಪಯೋಗಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಬಟಾಣಿ ತಿಂದ್ರೆ ವಾಯು ಬರತ್ತೆ ಅನ್ನೋರೆಲ್ಲಾ ಇಲ್ಕೇಳಿ. ಬಟಾಣಿ ಗಿಡ ನಮ್ ದೇಶದಲ್ಲಿ ಹುಟ್ಟಿದಲ್ಲ. ಇದು ವಿಚಿತ್ರವಾಗಿರೋ ಗಿಡಗಳ ಸಾಲ್ನಲ್ಲಿ ಸೇರತ್ತೆ. ಆದ್ರೂ ಕೂಡಾ ಇದ್ರ ಉಪಯೋಗ ಇದ್ಯಲ್ಲಾ ಅದು ಒಂದೆರಡಲ್ಲ. ಇದ್ರಲ್ಲಿರೋ ಪಿಷ್ಟ ಇದ್ನ ಸಿಹಿಯಾಗಿರೋವಾಗೆ ಮಾಡ್ಸತ್ತೆ. ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರನ್ನ ಗುಣಪಡ್ಸತ್ತೆ.

  • ಉಪಯುಕ್ತ ಮಾಹಿತಿ

    ಲಕ್ಷಾಂತರ ಪ್ಯಾನ್ ಕಾರ್ಡ್ ರದ್ದು!ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಿದೆಯಾ,ಇಲ್ಲವಾ ಚೆಕ್ ಮಾಡಲು ಈ ಲೇಖನಿ ಓದಿ…

    ಹಣಕಾಸು ರಾಜ್ಯ ಸಚಿವ ಸಂತೋಷ ಕುಮಾರ್ ಗಂಗಾವರ್‌ರು ಸಂಸತ್ತಿಗೆ ಲಿಖಿತ ಪ್ರಶ್ನೆಗೆ ಉತ್ತರಿಸಿ ಒಬ್ಬವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹಂಚಲಾಗಿತ್ತು. ಜುಲೈ 27ರವರೆಗೆ 11.44 ಲಕ್ಷ ನಕಲಿ ಪ್ಯಾನ್ ಕಾರ್ಡ್ ಗುರುತಿಸಿ ರದ್ದು ಪಡಿಸಲಾಗಿದೆ. ಎಂದು ತಿಳಿಸಿದ್ದಾರೆ. ಒಬ್ಬನೆ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ನೀಡಿದ್ದು ಪತ್ತೆಯಾಗಿದೆ.

  • Sports

    ರಣಜಿ ಟ್ರೋಫಿ ಸಿಕೆ ನಾಯ್ಡು ಟ್ರೋಫಿ ಸೀನೀಯರ್ ವುಮೆನ್ಸ್ ಲೀಗ್ ಮುಂದೂಡಲಾಗಿದೆ

    ಬಿಸಿಸಿಐ ರಣಜಿ ಟ್ರೋಫಿ, ಕರ್ನಲ್ ಸಿ ಕೆ ನಾಯುಡು ಟ್ರೋಫಿ ಮತ್ತು ಸೀನಿಯರ್ ವುಮೆನ್ಸ್ ಟಿ 20 ಲೀಗ್ ಅನ್ನು 2021-22 ಋತುವಿಗೆ ಮುಂದೂಡಿದೆ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ 2021-22ರ ಸೀಸನ್‌ಗಾಗಿ ರಣಜಿ ಟ್ರೋಫಿ, ಕರ್ನಲ್ ಸಿ ಕೆ ನಾಯುಡು ಟ್ರೋಫಿ ಮತ್ತು ಸೀನಿಯರ್ ಮಹಿಳಾ ಟಿ20 ಲೀಗ್ ಅನ್ನು ಮುಂದೂಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ. ರಣಜಿ ಟ್ರೋಫಿ ಮತ್ತು ಕರ್ನಲ್ ಸಿ ಕೆ ನಾಯುಡು ಟ್ರೋಫಿ ಈ…

     2,919 total views,  1 views today

  • ಸುದ್ದಿ

    ಈ ಬ್ಯಾಗ್ ಬೆಲೆಗೆ ಒಂದು ಮನೆಯನ್ನು ಖರೀದಿ ಮಾಡ್ಬಹುದು…!

    ಕೈ ಚೀಲ ( ಹ್ಯಾಂಡ್ ಬ್ಯಾಗ್) ಮಹಿಳೆಯರ ಅಚ್ಚುಮೆಚ್ಚಿನ ವಸ್ತುಗಳಲ್ಲಿ ಒಂದು. ಸುಂದರ ಹ್ಯಾಂಡ್ ಬ್ಯಾಗ್ ಖರೀದಿ ಮಾಡಲು ಮಹಿಳೆಯರು ಇಷ್ಟಪಡ್ತಾರೆ. ಹಣವುಳ್ಳವರು ಲಕ್ಷಾಂತರ ರೂಪಾಯಿ ಮೌಲ್ಯದ ಹ್ಯಾಂಡ್ ಬ್ಯಾಗ್ ಖರೀದಿ ಮಾಡ್ತಾರೆ. ಆದ್ರೆ ಈ ಬ್ಯಾಗ್ ಬೆಲೆ ಕೇಳಿದ್ರೆ ದಂಗಾಗ್ತಿರಾ. ಈ ಕೈಚೀಲ ಸಾವಿರ, ಎರಡು ಸಾವಿರಕ್ಕಲ್ಲ, ಒಂದು ಕೋಟಿ 44 ಲಕ್ಷ ರೂಪಾಯಿಗೆ ಹರಾಜಾಗಿದೆ. ವಿಶ್ವದ ಅತ್ಯಂತ ದುಬಾರಿ ಕೈಚೀಲಗಳಲ್ಲಿ ಒಂದಾಗಿರುವ ಇದಕ್ಕೆ ದಿ 2015 ಹಿಮಾಲಯ್ ನಿಲೋಟಿಕಸ್ ಕ್ರೊಕೊಡಯಲ್ ಬರ್ಕಿನ್ 35 ಎಂದು…