ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರ ಕನ್ನಡ ಜೆಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಡ್ಡೆ ಸರಕಾರಿ ಶಾಲೆಯ ಈ ಹುಡ್ಗಾ ನೀರಿನಲ್ಲಿ ಚಲಿಸುವ ಸೈಕಲ್ ಆವಿಷ್ಕಾರ ಮಾಡಿದ್ದು, ಈ ಚಿಕ್ಕ ವಯಸ್ಸಿನಲ್ಲಿಯೇ ಈತನ ಪ್ರತಿಭೆ ಮೆಚ್ಚವಂತದ್ದು.

ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲಾ ಎನ್ನುದಕ್ಕೆ ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪುನೀತ್ ವೆಂಕಟೇಶ ಗೊಂಡ ಉದಾಹರಣೆಯಾಗಿದ್ದಾನೆ. ಹೌದು, 12 ರಿಂದ 14ರ ಆಸು ಪಾಸಿನ ಪೋರ ಈ ಪುನೀತ್ ಮಾಡಿದ ಆವಿಷ್ಕಾರವನ್ನು ನೀವು ಕೇಳಿದರೇ ಶಾಕ್ ಆಗ್ತೀರಾ.

ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನು 6ನೇ ಕ್ಲಾಸ್ ಓದುತ್ತಿರುವ ಪುನೀತ್ ಹಾಗೂ ಆತನ ಸಹಪಾಠಿಗಳು ಸೇರಿ ನೀರಿನಲ್ಲಿ ಚಲಿಸುವ ಬೈಸಿಕಲ್ನನ್ನು ಆವಿಷ್ಕಾರ ಮಾಡಿ ಅದೇ ಸೈಕಲ್ ನಿಂದ ಯಶಸ್ವಿಯಾಗಿ ಇಲ್ಲಿನ ವೆಂಕಟಾಪುರ ನದಿ ದಾಟಿ ಎಲ್ಲರಿಗೆ ಉಬ್ಬೆರುವಂತೆ ಮಾಡಿದ್ದಾನೆ.

ಈ ಆವಿಷ್ಕಾರವನ್ನು ಖ್ಯಾತ ವಿಜ್ಞಾನಿ ಆರ್ಕಿಮಿಡೀಸ್ ತತ್ವದ ತೇಲುವಿಕೆಯ ಅನ್ವಯ ಸೈಕಲ್ ಮತ್ತು ನಾಲ್ಕು ಕ್ಯಾನುಗಳನ್ನು ಬಳಸಿ ಅತ್ಯಂತ ಕಡಿಮೆ ಹಣದಲ್ಲಿ ನೀರಿನ ಮೇಲೆ ಚಲಿಸುವ ಸೈಕಲ್ ತಯಾರಿಸಲಾಗಿದೆ.
ಸ್ವಚ್ಛ ಭಾರತ ಅಭಿಯಾನದ ಬೆಂಬಲವಾಗಿ ಈ ಆವಿಷ್ಕಾರ ರೂಪಿಸಿದ್ದು, ಮುಂಭಾಗದಲ್ಲಿ ಜಾಳಿಗಳನ್ನು ಜೋಡಿಸಿ, ಕಸ ಕಡ್ಡಿಗಳನ್ನು ತೀರದಲ್ಲಿ ಸಂಗ್ರಹಿಸಿ ತೆಗೆಯಬಹುದಾಗಿದೆ. ಸೈಕಲನ್ನು ಸ್ವಲ್ಪ ಮಾತ್ರ ಬದಲಾವಣೆ ಮಾಡಿಕೊಂಡು ಕಬ್ಬಿಣದ ಪಟ್ಟಿಯ ಮೂಲಕ ನಾಲ್ಕು ಕಡೆಗಳಲ್ಲಿ ನೀರಿನ ಕ್ಯಾನ್ ಅಳವಡಿಸಲಾಗಿದೆ.
ಕ್ಯಾನ್ ಆಳಡಡಿಕೆಯ ಮುನ್ನ ಗಾಳಿಯನ್ನು ತುಂಬಿ ಸೀಲ್ ಮಾಡಲಾಗಿದೆ ಮಾತ್ರವಲ್ಲದೆ ಕಬ್ಬಿಣದ ಪಟ್ಟಿಗೆ ಅದನ್ನು ರಬ್ಬರಿನಿಂದ ಬಿಗಿಯಲಾಗಿದೆ. ಮುಂದಿನ ಚಕ್ರವನ್ನು ಸ್ಟೇರಿಂಗ್ ಆಗಿ ಬಳಸುವಂತೆ ಸೈಕಲ್ ಚೈನ್ ಬಳಸಲಾಗಿದ್ದು, ಯಾವ ದಿಕ್ಕಿನಲ್ಲಾದರೂ ಸೈಕಲ್ ತಿರುಗಿಸುವ ವ್ಯವಸ್ಥೆ ಮಾಡಲಾಗಿದೆ.
ಈ ಆವಿಷ್ಕಾರದ ಹಿಂದಿನ ಮುಖ್ಯ ಉದ್ದೇಶವೆಂದರೆ ನೀರಿನಲ್ಲಿ ತೇಲುವ ಎಲ್ಲ ಕಸಗಳನ್ನು ಜಾಳಿ ಸಹಾಯದಿಂದ ಸಂಗ್ರಹ ಮಾಡಿ ದಡಕ್ಕೆ ಹಾಕಬಹುದು ಎನ್ನುವ ಸಾಧನೆಯನ್ನು ಪುನೀತ್ ಮಾಡಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿದ ಪುನೀತ್ ತನ್ನ ಸಾಧನೆಗೆ ಸಹಕಾರ ನೀಡಿದ್ದು ಸಹಪಾಠಿಗಳು ಹಾಗೂ ಶಿಕ್ಷಕರು ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾನೆ.
ಈ ಆವಿಷ್ಕಾರದ ಹಿಂದೆ ಇರುವ ಮುಖ್ಯ ಕಾರಣವೆಂದರೆ ಶಾಲೆಯ ಶಿಕ್ಷಕ ಅನಂತ ಮೋಗೇರ ಕೊಟ್ಟ ಪ್ರೇರಣೆ , ಈ ಪ್ರೇರಣೆಯಿಂದಲೇ ಸಾಧನೆ ಮಾಡಿದ್ದೇನೆ ಮತ್ತು ಸ್ವಚ್ಛ ಭಾರತ್ ಸಂದೇಶವನ್ನು ಸಾರಲು ಈ ಸೈಕಲ್ ಸಹಕಾರಿಯಾಗಲಿದೆ ಎಂಬುದು ಪುನೀತ್ ಮನದಾಳದ ಮಾತು.

ವಿದ್ಯಾರ್ಥಿ ಪುನೀತ್ ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಇನಸ್ಪೈರ್ಡ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅತ್ಯುತ್ತಮವಾಗಿ ಭಾಗವಹಿಸಿ ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ ಆವಿಷ್ಕಾರದಿಂದ ಆಯ್ಕೆಗೆ ಕಾರಣವು ಹೌದು.
ಡಿಸೆಂಬರ್. 7ರಂದು ದೆಹಲಿಯಲ್ಲಿ ಸ್ಪರ್ಧೆ ರಾಷ್ಟ್ರಮಟ್ಟದ ಸ್ಪರ್ಧೆ ಡಿಸೆಂಬರ್. 7ರಂದು ದೆಹಲಿಯಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಪುನೀತ್ ಸೈಕಲ್ ಹೊಡೆಯುವುದರ ಮೂಲಕ ಸ್ವಚ್ಚ್ ಭಾರತ್ ಸಂದೇಶವನ್ನು ಸಾರಲಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಳೆಯ ವಸ್ತುಗಳು ಇದ್ದರೆ “ಮಾರಿ ಬಿಡಿ’ ಎನ್ನುವುದು ವೆಬ್ ಸೈಟ್ ಒಂದರ ಜಾಹೀರಾತು. ಅದೇ ರೀತಿ ಗೋವುಗಳ ಮಾರಾಟಕ್ಕೆ ಪ್ರತ್ಯೇಕವಾದ ವೆಬ್ಸೈಟ್ ಇದ್ದರೆ ಹೇಗಿರುತ್ತದೆ. ಇನ್ನು ಆರು ತಿಂಗಳು ಕಾದು ಕುಳಿತರೆ ಅದೂ ಸಿದ್ಧವಾಗಿ ಬಿಡುತ್ತದೆ. ಅದೂ ಓಎಲ್ಎಕ್ಸ್, ಕ್ವಿಕರ್ ಮಾದರಿಯಲ್ಲಿಯೇ.
ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿದ್ದ 24 ವರ್ಷದ ಮೋಹಿತ್ ಮೋರ್ ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಟಿಕ್ ಟಾಕ್ ಮೂಲಕ ಅರ್ಧ ಮಿಲಿಯನ್ ಸಂಖ್ಯೆಯ ಫಾಲೋಯರ್ಸ್ ಗಳನ್ನು ಹೊಂದಿರುವ ಮೋಹಿತ್ ಅವರು ಫಿಟ್ ನೆಸ್ ಗೆ ಸಂಬಂಧಿಸಿದಂತೆ ನಿರಂತರವಾಗಿ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದರು. ಮಂಗಳವಾರ ಸಂಜೆ ಐದು ಗಂಟೆ ವೇಳೆಗೆ ನಜಾಫ್ ಗಡದಲ್ಲಿ ಅವರು ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಏಕಾಏಕಿ ಮೂರು ಜನ ದಾಳಿ ಮಾಡಿದ್ದು, ಸಿಸಿ ಟಿವಿಯಲ್ಲಿ…
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದಿದ್ದು, ಅವರ ಬೆಂಬಲಕ್ಕೆ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಮಂದಿ ನಿಂತಿದ್ದಾರೆ. ಅದರಲ್ಲೂ ದರ್ಶನ್ ಹಾಗೂ ಯಶ್ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದು, ಇದು ಜೆಡಿಎಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಂಡ್ಯದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಗೆಲುವಿಗೆ ಇದು ಅಡ್ಡಗಾಲಾಗಬಹುದೆಂಬ ಆತಂಕ…
ಹೃದಯಾಘಾತದ ಬಗ್ಗೆ ಇರುವ ಮಾಹಿತಿಯನ್ನು ಎಲ್ಲರೂ ತಿಳಿದಿರಲೇಬೇಕು. ಹೃದಯಾಘಾತ ಯಾವ ಕ್ಷಣದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ನಮ್ಮ ಜೀವಮಾನದ ಅವದಿಯಲ್ಲಿ ನಮ್ಮ ಸಂಬದಿಕರಿಗೋ, ಸ್ನೇಹ್ತಿತರಿಗೋ ಯಾರಿಗಾದ್ರೂ ಹೃದಯಾಘಾತ ಬರಬಹುದು. ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಹೃದಯಾಘಾತದ ಅಪಾಯದಿಂದ ಪಾರಾಗಲು ನೀವು ಮತ್ತು ವೈದ್ಯರು ಮುಂಚಿನ ಕೆಲವು ಗಂಟೆಗಳಲ್ಲಿ ಏನು ಮಾಡುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡು ಹಿಡಿಯಬಹುದು ವ್ಯಕ್ತಿಗಳ ಜನ್ಮ ದಿನಾಂಕ ಆಧರಿಸಿ ಅವರು ಲವ್ ಮ್ಯಾರೇಜ್ ಆಗುತ್ತರಾ ಅಥವಾ ಅರೇಂಜ್ ಮ್ಯಾರೇಜ್ ಆಗುತ್ತಾರೆ ಎನ್ನುವುದನ್ನು ತಿಳಿಯಬಹುದು. ಸಂಖ್ಯೆ 1. ಒಂದನೇ ಸಂಖ್ಯೆಯನ್ನು ಸೂರ್ಯ ಎಂದು ಹೇಳಲಾಗುತ್ತದೆ. ಒಂದು ನಂಬರ್ ಅವರು ತುಂಬಾ ನಾಚಿಕೆ ಸ್ವಭಾವದವರು ಆಗಿರುತ್ತಾರೆ ಇವರು ಯಾವತ್ತೂ ಪ್ರೀತಿಯನ್ನು ತಿಳಿಸುವುದಿಲ್ಲ ಇದರಿಂದಾಗಿ ಪ್ರೇಮ ವಿವಾಹದಿಂದ ಇವರು ದೂರ ಇರುತ್ತಾರೆ. ಸಂಖ್ಯೆ 2. ಸಂಖ್ಯೆ 2…
ನಮ್ಮ ಭಾರತವು ಹಲುವು ಧರ್ಮ, ಜಾತಿಗಲಿರುವ ಒಂದು ರಾಷ್ಟ್ರ. ಇಲ್ಲಿ ಹಲವು ಹಬ್ಬಗಳನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಅದೇ ರೀತಿ ರಕ್ಷಾಬಂಧನ ಹಬ್ಬವನ್ನು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ. ಈ ಹಬ್ಬ ಸಂಬಂಧಗಳನ್ನು ಗಟ್ಟಿಗೊಳಿಸುವ ಮಹತ್ವವನ್ನು ಹೊಂದಿದೆ. ರಕ್ಷಾಬಂಧನ ಸಹೋದರ-ಸಹೋದರಿಯರ ವಿಶ್ವಾಸದ ಹಬ್ಬವಾಗಿದೆ. ಹಿರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ.