News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ವಿಜ್ಞಾನ

12 ವರ್ಷದ ಈ ಹಳ್ಳಿಹುಡುಗನ ಆವಿಷ್ಕಾರಕ್ಕೆ ವಿಜ್ಞಾನಿಗಳೇ ಶಾಕ್ ಆಗಿದ್ದಾರೆ..!ಈ ಲೇಖನ ಓದಿ ಶಾಕ್ ಆಗ್ತೀರಾ..!

1937

ಉತ್ತರ ಕನ್ನಡ ಜೆಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಡ್ಡೆ ಸರಕಾರಿ ಶಾಲೆಯ ಈ ಹುಡ್ಗಾ ನೀರಿನಲ್ಲಿ ಚಲಿಸುವ ಸೈಕಲ್ ಆವಿಷ್ಕಾರ ಮಾಡಿದ್ದು, ಈ ಚಿಕ್ಕ ವಯಸ್ಸಿನಲ್ಲಿಯೇ ಈತನ ಪ್ರತಿಭೆ ಮೆಚ್ಚವಂತದ್ದು.

ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲಾ ಎನ್ನುದಕ್ಕೆ ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪುನೀತ್ ವೆಂಕಟೇಶ ಗೊಂಡ ಉದಾಹರಣೆಯಾಗಿದ್ದಾನೆ. ಹೌದು, 12 ರಿಂದ 14ರ ಆಸು ಪಾಸಿನ ಪೋರ ಈ ಪುನೀತ್ ಮಾಡಿದ ಆವಿಷ್ಕಾರವನ್ನು  ನೀವು ಕೇಳಿದರೇ  ಶಾಕ್ ಆಗ್ತೀರಾ.


ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನು 6ನೇ ಕ್ಲಾಸ್ ಓದುತ್ತಿರುವ ಪುನೀತ್ ಹಾಗೂ ಆತನ ಸಹಪಾಠಿಗಳು ಸೇರಿ ನೀರಿನಲ್ಲಿ ಚಲಿಸುವ ಬೈಸಿಕಲ್‌ನನ್ನು ಆವಿಷ್ಕಾರ ಮಾಡಿ ಅದೇ ಸೈಕಲ್ ನಿಂದ ಯಶಸ್ವಿಯಾಗಿ ಇಲ್ಲಿನ ವೆಂಕಟಾಪುರ ನದಿ ದಾಟಿ ಎಲ್ಲರಿಗೆ ಉಬ್ಬೆರುವಂತೆ ಮಾಡಿದ್ದಾನೆ.


ಈ ಆವಿಷ್ಕಾರವನ್ನು ಖ್ಯಾತ ವಿಜ್ಞಾನಿ ಆರ್ಕಿಮಿಡೀಸ್ ತತ್ವದ ತೇಲುವಿಕೆಯ ಅನ್ವಯ ಸೈಕಲ್ ಮತ್ತು ನಾಲ್ಕು ಕ್ಯಾನುಗಳನ್ನು ಬಳಸಿ ಅತ್ಯಂತ ಕಡಿಮೆ ಹಣದಲ್ಲಿ ನೀರಿನ ಮೇಲೆ ಚಲಿಸುವ ಸೈಕಲ್ ತಯಾರಿಸಲಾಗಿದೆ.

ಆವಿಷ್ಕಾರದ ಬಗ್ಗೆ:-

ಸ್ವಚ್ಛ ಭಾರತ ಅಭಿಯಾನದ ಬೆಂಬಲವಾಗಿ ಈ ಆವಿಷ್ಕಾರ ರೂಪಿಸಿದ್ದು, ಮುಂಭಾಗದಲ್ಲಿ ಜಾಳಿಗಳನ್ನು ಜೋಡಿಸಿ, ಕಸ ಕಡ್ಡಿಗಳನ್ನು ತೀರದಲ್ಲಿ ಸಂಗ್ರಹಿಸಿ ತೆಗೆಯಬಹುದಾಗಿದೆ. ಸೈಕಲನ್ನು ಸ್ವಲ್ಪ ಮಾತ್ರ ಬದಲಾವಣೆ ಮಾಡಿಕೊಂಡು ಕಬ್ಬಿಣದ ಪಟ್ಟಿಯ ಮೂಲಕ ನಾಲ್ಕು ಕಡೆಗಳಲ್ಲಿ ನೀರಿನ ಕ್ಯಾನ್ ಅಳವಡಿಸಲಾಗಿದೆ.

ಪುನೀತನ ಈ ಆವಿಷ್ಕಾರದ ವಿಡಿಯೋ ನೋಡಿ…

ಕ್ಯಾನ್ ಆಳಡಡಿಕೆಯ ಮುನ್ನ ಗಾಳಿಯನ್ನು ತುಂಬಿ ಸೀಲ್ ಮಾಡಲಾಗಿದೆ ಮಾತ್ರವಲ್ಲದೆ ಕಬ್ಬಿಣದ ಪಟ್ಟಿಗೆ ಅದನ್ನು ರಬ್ಬರಿನಿಂದ ಬಿಗಿಯಲಾಗಿದೆ. ಮುಂದಿನ ಚಕ್ರವನ್ನು ಸ್ಟೇರಿಂಗ್ ಆಗಿ ಬಳಸುವಂತೆ ಸೈಕಲ್ ಚೈನ್ ಬಳಸಲಾಗಿದ್ದು, ಯಾವ ದಿಕ್ಕಿನಲ್ಲಾದರೂ ಸೈಕಲ್ ತಿರುಗಿಸುವ ವ್ಯವಸ್ಥೆ ಮಾಡಲಾಗಿದೆ.

ಆವಿಷ್ಕಾರದ ಉದ್ದೇಶ :-

ಈ ಆವಿಷ್ಕಾರದ ಹಿಂದಿನ ಮುಖ್ಯ ಉದ್ದೇಶವೆಂದರೆ ನೀರಿನಲ್ಲಿ ತೇಲುವ ಎಲ್ಲ ಕಸಗಳನ್ನು ಜಾಳಿ ಸಹಾಯದಿಂದ ಸಂಗ್ರಹ ಮಾಡಿ ದಡಕ್ಕೆ ಹಾಕಬಹುದು ಎನ್ನುವ ಸಾಧನೆಯನ್ನು ಪುನೀತ್ ಮಾಡಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿದ ಪುನೀತ್ ತನ್ನ ಸಾಧನೆಗೆ ಸಹಕಾರ ನೀಡಿದ್ದು ಸಹಪಾಠಿಗಳು ಹಾಗೂ ಶಿಕ್ಷಕರು ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾನೆ.

ಪುನೀತ್ ನ ಮಾತು:-

ಈ ಆವಿಷ್ಕಾರದ ಹಿಂದೆ ಇರುವ ಮುಖ್ಯ ಕಾರಣವೆಂದರೆ ಶಾಲೆಯ ಶಿಕ್ಷಕ ಅನಂತ ಮೋಗೇರ ಕೊಟ್ಟ ಪ್ರೇರಣೆ , ಈ ಪ್ರೇರಣೆಯಿಂದಲೇ ಸಾಧನೆ ಮಾಡಿದ್ದೇನೆ ಮತ್ತು ಸ್ವಚ್ಛ ಭಾರತ್ ಸಂದೇಶವನ್ನು ಸಾರಲು ಈ ಸೈಕಲ್ ಸಹಕಾರಿಯಾಗಲಿದೆ ಎಂಬುದು ಪುನೀತ್ ಮನದಾಳದ ಮಾತು.

ಪುನೀತೀನ ಆವಿಷ್ಕಾರ ರಾಷ್ಟ್ರಮಟ್ಟಕ್ಕೆ ಆಯ್ಕೆ:-

ವಿದ್ಯಾರ್ಥಿ ಪುನೀತ್ ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಇನಸ್ಪೈರ್ಡ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅತ್ಯುತ್ತಮವಾಗಿ ಭಾಗವಹಿಸಿ ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ ಆವಿಷ್ಕಾರದಿಂದ ಆಯ್ಕೆಗೆ ಕಾರಣವು ಹೌದು.
ಡಿಸೆಂಬರ್. 7ರಂದು ದೆಹಲಿಯಲ್ಲಿ ಸ್ಪರ್ಧೆ ರಾಷ್ಟ್ರಮಟ್ಟದ ಸ್ಪರ್ಧೆ ಡಿಸೆಂಬರ್. 7ರಂದು ದೆಹಲಿಯಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಪುನೀತ್ ಸೈಕಲ್ ಹೊಡೆಯುವುದರ ಮೂಲಕ ಸ್ವಚ್ಚ್ ಭಾರತ್ ಸಂದೇಶವನ್ನು ಸಾರಲಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    15,000 ಕೆಜಿ ಕಾಗದ ತ್ಯಾಜ್ಯ ಸಂಗ್ರಹಿಸಿ ಪ್ರಶಸ್ತಿಯನ್ನು ಗೆದ್ದ ಭಾರತೀಯ ಹುಡುಗಿ…!

    ದುಬೈ: 8 ವರ್ಷದ ಭಾರತೀಯ ಬಾಲಕಿಯೊಬ್ಬಳು ಬರೋಬ್ಬರಿ 15 ಸಾವಿರ ಕಿಲೋಗ್ರಾಂ ಕಾಗದದ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾಳೆ.ಭಾರತೀಯ ಮೂಲದ ನಿಯಾ ಟೋನಿ 15 ಸಾವಿರ ಕೆಜಿ ತೂಕದ ಪೇಪರ್ ತ್ಯಾಜ್ಯ ಸಂಗ್ರಹಿಸಿದ್ದಾಳೆ. ಈಕೆ ಪೋಷಕರ ಜೊತೆ ದುಬೈನಲ್ಲಿ ನೆಲೆಸಿದ್ದಾಳೆ. ಟೋನಿ ಎಮಿರೇಟ್ಸ್ ಎನ್ವಿರಾನ್ಮೆಂಟಲ್ ಗ್ರೂಪ್‍ನ ರಾಷ್ಟ್ರವ್ಯಾಪಿ ಮರುಬಳಕೆ ಅಭಿಯಾನದ ಭಾಗವಾಗಿ ವೇಸ್ಟ್ ಪೇಪರ್‌ಗಳನ್ನು ಸಂಗ್ರಹಿಸಿದ್ದಾಳೆ. ಇತ್ತೀಚೆಗಷ್ಟೆ ದುಬೈಯ ಎಮಿರೇಟ್ಸ್ ರಿಸೈಕ್ಲಿಂಗ್ ಅವಾರ್ಡ್ಸ್ ನ 22ನೇ ಆವೃತ್ತಿಯಲ್ಲಿ ಬಾಲಕಿಯ ಅಸಾಮಾನ್ಯ ಸಾಧನೆಗೆ ಆಕೆಯನ್ನು ಗೌರವಿಸಲಾಗಿದೆ. ಇಂಗಾಲದ…

  • ಸುದ್ದಿ

    ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರಗಳನ್ನು, ಹಂಚದ ಪೋಸ್ಟ್‌ಮ್ಯಾನ್‌.

    ಕಳೆದ ನಾಲ್ಕು ವರ್ಷಗಳಿಂದ ಪತ್ರಗಳನ್ನು ಹಂಚದೆ ಯಲಬುರ್ಗಾ ತಾಲೂಕಿನ ಪೋಸ್ಟ್‌ಮ್ಯಾನ್‌ ನಿರ್ಲಕ್ಷ್ಯ ತೋರಿದ ಸುರೇಶ್. ಪೋಸ್ಟ್‌ಮ್ಯಾನ್‌ ಸುರೇಶ್ ತಳವಾರ ಎನ್ನುವರು ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರ, ಎಟಿಎಮ್ ಕಾರ್ಡ್, ಪರೀಕ್ಷಾ ಪ್ರವೇಶ ಪತ್ರ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಹಂಚದೆ ನಿರ್ಲಕ್ಷ್ಯ ತೋರಿರುವ ಈ ಘಟನೆ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕಂಡುಬಂದಿದೆ.  ಸರ್ಕಾರಿ ಕಚೇರಿಗಳಿಂದ ಬಂದ ಪೋಸ್ಟ್, ಹಾಗೂ ಬ್ಯಾಂಕಿನಿಂದ ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳು ಬರುತ್ತಿಲ್ಲವೆಂದು ಗ್ರಾಹಕರು ತಲೆಕೆಡಿಸಿಕೊಂಡಿದ್ದಾರೆ….

  • ಸುದ್ದಿ

    ಒಟ್ಟೊಟ್ಟಿಗೆ ಮನೆ ಮಾರಾಟಕ್ಕಿಟ್ಟ ಕಾಮಿಡಿ ನಟರು!ಇಷ್ಟಕ್ಕೂ ಇದಕ್ಕೆ ಕಾರಣವೇನು ಗೊತ್ತಾ?ತಿಳಿದರೆ ಶಾಕ್ ಆಗೋದಂತು ಗ್ಯಾರಂಟಿ,.!

    ಕನ್ನಡದ ಕಾಮಿಡಿ ನಟರಿದ್ದರೆ ಸಿನಿಮಾ ನೋಡಲು ಚೆಂದ ಹಾಗೆಯೇ  ಕನ್ನಡದ ಖ್ಯಾತ ಕಾಮಿಡಿ ಕಲಾವಿದರಾದ ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಎಲ್ಲರು ಒಟ್ಟಿಗೆ ಮನೆ ಮಾರಾಟಕ್ಕಿಟ್ಟಿರೋದು ಎಲ್ಲರಿಗು ಆಶ್ಚರ್ಯ  ಇಷ್ಟಕ್ಕೂ ಎಲ್ಲರೂ  ಒಟ್ಟಿಗೆ  ಮನೆ ಮಾರಾಟಕ್ಕಿಟ್ಟಿರೋದಕ್ಕೆ  ಕಾರಣವೇನು  ಗೊತ್ತಾ ಆ ಮನೆಯಲ್ಲಿ  ಭೂತ ಪ್ರೇತ ಬಾಧೆಗೀಡಾಗಿದೆ ಎಂದು ಹೇಳಿದ್ದಾರೆ ಇದು ತಮಾಷೆಯಲ್ಲಾ  ಸತ್ಯ. ಇಂಥಾದ್ದು ಸಂಭವಿಸಿರೋದು ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಎಂಬ ಚಿತ್ರದ ವಿಚಾರದಲ್ಲಿ. ಇದರಲ್ಲಿ ಈ ನಾಲ್ವರು…

  • inspirational

    ದೇಶಾದ್ಯಂತ ಮೊಬೈಲ್‌ಗಳಲ್ಲಿ ಮೊಳಗಿದ ಸೈರನ್ ಅಲರ್ಟ್..!

    ದೇಶಾದ್ಯಂತ ಮೊಬೈಲ್‌ಗಳಲ್ಲಿ ಮೊಳಗಿದ ಸೈರನ್ ಅಲರ್ಟ್..! 🔴 ಏನಿದು ಮೊಬೈಲ್ ಅಲರ್ಟ್? ಇತ್ತೀಚೆಗೆ ದೇಶದಾದ್ಯಂತ ಹಲವು ಜನರ ಮೊಬೈಲ್‌ಗಳಲ್ಲಿ ಏಕಾಏಕಿ ಜೋರಾಗಿ ಸೈರನ್ ಶಬ್ದದೊಂದಿಗೆ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಕಾಣಿಸಿಕೊಂಡಿತು.ಇದು ಯಾವುದೇ ಅಪಾಯದ ಸೂಚನೆ ಅಲ್ಲ — ಇದು ಸರ್ಕಾರದ ಪರೀಕ್ಷಾ ಅಲರ್ಟ್ (Test Alert) ಆಗಿತ್ತು. ಯಾರು ಕಳುಹಿಸಿದರು? ಈ ಅಲರ್ಟ್ ಅನ್ನು National Disaster Management Authority (NDMA) ಹಾಗೂ ಟೆಲಿಕಾಂ ಇಲಾಖೆ (DoT) ಒಟ್ಟಾಗಿ ಪರೀಕ್ಷೆಯ ಭಾಗವಾಗಿ ಕಳುಹಿಸಿದರು. ಹೇಗೆ ಕೆಲಸ ಮಾಡುತ್ತದೆ?…

  • ಸುದ್ದಿ

    29 ವರ್ಷದ ಯುವಕನ ದೇಹದಲ್ಲಿತ್ತು ಗರ್ಭಕೋಶ …ನಂತರ ಏನಾಯ್ತು?

    ಮುಂಬಯಿಯ ಜೆ.ಜೆ. ಹಾಸ್ಪಿಟಲ್‌ಗೆ ಕಳೆದ ತಿಂಗಳು 29 ವರ್ಷದ ಯುವಕನೊಬ್ಬ ಬಂದಿದ್ದ. ಅವನ ಸಮಸ್ಯೆ ಬಂಜೆತನ. ಪರೀಕ್ಷೆ ವೇಳೆ ಆತನ ವೃಷಣ ಹೊಟ್ಟೆಯೊಳಗಿರುವುದು ಕಂಡುಬಂತು! ಯಾಕೆ ಹೀಗಿದೆ ಎಂದು ಎಂಆರ್‌ಐ ನಡೆಸಿದಾಗ ಕಂಡದ್ದೇ ಬೇರೆ! ಯುವಕನ ದೇಹದಲ್ಲಿ ಸ್ತ್ರೀಯರಲ್ಲಿ ಇರುವ ಸಂತಾನೋತ್ಪತ್ತಿಗೆ ಸಂಬಂಧಿಸಿದ ಅಂಗಗಳೆಲ್ಲವೂ ಇದ್ದವು! ಅಂದರೆ, ಗರ್ಭಕೋಶ, ಫ್ಯಾಲೋಪಿಯನ್‌ ನಳಿಗೆಳು, ಗರ್ಭಾಶಯ ಮಾತ್ರವಲ್ಲ ಅರೆಬರೆಯಾದ ಮರ್ಮಾಂಗವೂ ಇತ್ತು! ಹಾಗಂತ ಇವ್ಯಾವುವೂ ಕೆಲಸ ಮಾಡುತ್ತಿರಲಿಲ್ಲ. ಮೂತ್ರ ಸಂಬಂಧಿ ಸಮಸ್ಯೆಗಳ ವಿಭಾಗದ ಸರ್ಜನ್‌ ಡಾ. ವೆಂಕಟ್‌ ಗೀತೆ ಅವರಲ್ಲಿಗೆ…

  • ರಾಜಕೀಯ

    ಸಿದ್ದರಾಮಯ್ಯನವರು ಜೆಡಿಎಸ್ ಬಿಟ್ಟು ಬರಲು ಕಾರಣವೇನು…?ರೆಬೆಲ್ ಶಾಸಕ ಬಾಲಕೃಷ್ಣರವರು ಕೊಟ್ಟ ಹೇಳಿಕೆ..!

    ಜೆಡಿಎಸ್ ನ ರೆಬೆಲ್ ಶಾಸಕರಲ್ಲಿ ಗುರುತಿಸಿಕೊಂಡಿರುವ ಮಾಗಡಿ ಶಾಸಕ ಬಾಲಕೃಷ್ಣ ರವರು ಎಂದು ಮಾಜಿ ಪ್ರಧಾನಿ ದೇವೇಗೌಡ್ರು ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.