ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಸಂಚಿಕೆ 5ರಲ್ಲಿ ವಿಜೇತರಾಗಿದ್ದ ಒಳ್ಳೆ ಹುಡುಗ ಪ್ರಥಮ್,ಈಗಂತೂ ಸಾಮಾಜಿಕ ಜಾಲತಾಣ ಫೇಸ್ಬುಕ್’ನಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ.ರಾಜ್ಯದಲ್ಲಿ ಯಾರಿಗೆ ಏನೇ ಆದರೂ, ಅದರ ಬಗ್ಗೆ ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡು ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ.

ಈಗ ವಿಷಯ ಏನಪ್ಪಾ ಅಂದ್ರೆ, ರಾಜ್ಯಸರ್ಕಾರದ ಸಚಿವ ಯು.ಟಿ.ಖಾದರ್’ರವರು ಹೇಳಿಕೆಯೊಂದನ್ನು ನೀಡಿದ್ದರು.ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ವಿರೋಧ ವ್ಯಕ್ತವಾಗಿತ್ತು.ಅಷ್ಟಕ್ಕೂ ಅವರು ಕೊಟ್ಟಿದ ಹೇಳಿಕೆ ಏನು ಗೊತ್ತಾ..?
ಮುಸ್ಲೀಮರನ್ನು ಅನುಮಾನದಿಂದ ನೋಡಲಾಗುತ್ತಿದೆ ಎಂಬುದು ಸಚಿವ ಯು.ಟಿ.ಖಾದರ್’ರವರ ಹೇಳಿಕೆಯಾಗಿತ್ತು.ಇದಕ್ಕೆ ಪ್ರತಿಕ್ರಿಯಿಸಿದ ಒಳ್ಳೆ ಹುಡುಗ ಪ್ರಥಮ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ರೀತಿಯಾಗಿ ಟಾಂಗ್ ನೀಡಿದ್ದಾರೆ.

ಪ್ರಥಮ್ ತಮ್ಮ ಫೇಸ್ಬುಕ್ ವಾಲ್ನಲ್ಲಿ ರೀತಿಯಾಗಿ ಬರೆದುಕೊಂಡಿದ್ದಾರೆ…
#ಮುಸ್ಲಿಂರನ್ನು_ಅನುಮಾನದಿಂದ ನೋಡಲಾಗುತ್ತಿದೆ… ಸಚಿವ #UTಖಾದರ್…!
ನಿಮಗೆ ಅಷ್ಟು #ಅನುಮಾನ,#ಅವಮಾನ ಆಗ್ತಿದ್ರೆ #ಮತಾಂತರ ಆಗಿಬಿಡಿ.ಯಾವ ಧರ್ಮಕ್ಕೆ ಬೇಕಾದರೂ….
ಯಾಕೆ ಪಾಪ ಕಷ್ಟ ಪಟ್ಕೊಂಡು ಮುಸ್ಲಿಂ ಆಗಿರ್ತೀರಾ?
ಭಾರತದಲ್ಲಿ ಯಾರು ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಬಹುದು.
ನೀವೇನಾದರೂ ಹಿಂದು ಧರ್ಮಕ್ಕೆ ಬರೋದಾದರೆ ಬನ್ನಿ.

but terms & conditions apply…ನಿಮ್ಮ ಜೊತೆ ಆ selfie ತಗೊಂಡಿದ್ರಲ್ಲ ಕೆಲವು ಆರೋಪಿಗಳು,ಅವ್ರಿಗೆ No entry…
Most important, ಪೇಜಾವರ ಶ್ರೀಗಳ ಆಶೀರ್ವಾದ ತಗೆದುಕೊಂಡು,ನಡೆದಾಡುವ ದೇವರ ಪಾದಕ್ಕೆ ವಂದಿಸಿ,ನಿರ್ಮಾಲಾನಂದರಿಗೆ ಹಿತವಚನ ಕೇಳಿ ಆಮೇಲೆ #ಹಿಂದುಧರ್ಮಕ್ಕೆ ಬನ್ನಿ…
ಇನ್ನು ಹಿಂದು ಧರ್ಮದಲ್ಲಿ ಯಾವ ಜಾತಿಗೆ ಸೇರಬೇಕಂಕೊಂಡಿದ್ದೀರೋ ಆ ಆಯ್ಕೆ ನಿಮಗೆ ಬಿಟ್ಟುಬಿಡ್ತೀನಿ…
ನನ್ನ ಪ್ರೀತಿಯ #ದಲಿತರಾಗಿ #ನಾಯಕ,#ಕುರುಬರಾದರೂ ಆಗಿ…full freedom ಇದೆ…
ನಾನು ಗ್ಯಾರಂಟಿ ಕೊಡ್ತೀನಿ…ಹಿಂದು ಧರ್ಮದಲ್ಲಿ ಯಾರೂ ನಿಮ್ಮನ್ನ ಅನುಮಾನದಿಂದ ನೋಡಲ್ಲ….
ಆರಾಮಾಗಿ ಬನ್ನಿ #ಖಾದರ್ ಅವ್ರೇ…

ಆಮೇಲೆ ಪ್ರೀತಿಯ ಮುಸ್ಲಿಂ ಸಹೋದರರೇ plz ನನ್ನಮೇಲೆ ಕೋಪ ಮಾಡ್ಕೋಬೇಡಿ ನನ್ನ ಪ್ರೀತಿಯ ಧರ್ಮ ಮುಸ್ಲಿಂ ಧರ್ಮ…ಅದರ ಮೇಲೆ ಯಾರೇ ಅನುಮಾನ ಪಟ್ಟರೂ ನನ್ನಮನಸ್ಸಿಗೆ ನೋವಾಗುತ್ತೆ.
ನಾನು ಹೇಳಿದ್ದು ತಪ್ಪಾ? ಒಮ್ಮೆ ಯೋಚಿಸಿ….ಯಾರೂ sympathy ತಗೊಳೋ dailogue ,ಧರ್ಮಾದಾರಿತವಾಗಿ emotionally disturb ಮಾಡೋ ಮಾತು ಹೇಳಬಾರದು…ಅದಷ್ಟೇ ನನ್ನ ಕಳಕಳಿ…
