ಸುದ್ದಿ

ನೀವು ಇನ್ಸೂರೆನ್ಸ್ ಬಳಕೆದಾರರೇ? ಆಗದರೆ ತಪ್ಪದೇ ಇದನ್ನು ಒಮ್ಮೆ ಓಧಿ…..!

46

ಆಕಸ್ಮಿಕ ದುರ್ಘಟನೆಗಳು ಹಾಗೂ ಸಂಭವನೀಯ ಹಾನಿಗಳಿಂದ ಪಾರಾಗುವ ಮುಂಜಾಗ್ರತಾ ಕ್ರಮವಾಗಿ ವಿಮಾ ಸುರಕ್ಷೆಯನ್ನು ಬಳಸಲಾಗುತ್ತದೆ. ಜೀವ ವಿಮೆ, ಆಸ್ತಿ ವಿಮೆ, ಆರೋಗ್ಯ ವಿಮೆ ಹೀಗೆ ಹಲವಾರು ರೀತಿಯ ವಿಮಾ ಸುರಕ್ಷೆಯ ಪಾಲಿಸಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಹಣಕಾಸು ಉತ್ಪನ್ನಗಳಿಗೆ ಸಹ ವಿಮೆ ಸುರಕ್ಷೆ ಇರುತ್ತದೆ ಎಂಬುದು ಬಹುತೇಕರಿಗೆ ಈವರೆಗೂ ತಿಳಿದಿಲ್ಲ. ಕೆಲ ಹಣಕಾಸು ಉತ್ಪನ್ನಗಳಿಗೆ ಉಚಿತ ವಿಮಾ ಸುರಕ್ಷೆ ಇದ್ದರೆ ಇನ್ನು ಕೆಲವಕ್ಕೆ ಅತಿ ಕಡಿಮೆ ಹಣ ಪಾವತಿಸುವುದರ ಮೂಲಕ ವಿಮಾ ಸೌಲಭ್ಯ ಪಡೆಯಬಹುದು. ಯಾವೆಲ್ಲ ಹಣಕಾಸು ಉತ್ಪನ್ನಗಳಿಗೆ ವಿಮಾ ಸೌಲಭ್ಯವಿದೆ ಹಾಗೂ ಅವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ವಿವರವಾಗಿ ತಿಳಿಯೋಣ.

ವಿಮೆಗಳ ಬಗ್ಗೆ ಮೇಲ್ನೋಟಕ್ಕೆ ತಿಳಿಯುವ ಬದಲು ಆಳವಾಗಿ ಕೂಡ ಅಭ್ಯಸಿಸಬೇಕಾಗುತ್ತದೆ. ನಿಮಗೆ ಗೊತ್ತಿರದ ಕೆಲ ಪ್ರಮುಖ ಉಚಿತ ಅಂತರ್ಗತ ವಿಮಾ ಸುರಕ್ಷತೆ-ಇನ್ಸೂರೆನ್ಸ್‌ ಕವರ್ ಬಗ್ಗೆ ತಿಳಿಯೋಣ ಬನ್ನಿ..

  1. ಬ್ಯಾಂಕ್ ಡಿಪಾಸಿಟ್‌ಗಳು ; ಭಾರತದಲ್ಲಿ ಕಾರ್ಯನಿರ್ವಹಿಸುವ ಪ್ರಾದೇಶಿಕ, ಸಹಕಾರಿ ಹಾಗೂ ವಿದೇಶಿ ಬ್ಯಾಂಕುಗಳು ಸೇರಿದಂತೆ ಇತರ ಎಲ್ಲ ಬ್ಯಾಂಕುಗಳಲ್ಲಿನ ಫಿಕ್ಸೆಡ್ ಡಿಪಾಸಿಟ್ (ನಿಶ್ಚಿತ ಠೇವಣಿ) ಗಳಿಗೆ ಸರಕಾರದ ಡಿಪಾಸಿಟ್ ಇನ್ಸೂರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ) ಯಿಂದ ವಿಮಾ ಸುರಕ್ಷತೆ ನೀಡಲಾಗಿರುತ್ತದೆ. ಒಂದೊಮ್ಮೆ ಯಾವುದೇ ಬ್ಯಾಂಕು ವಿಲೀನ ಅಥವಾ ಲೈಸೆನ್ಸ್ ರದ್ದತಿಯ ಕಾರಣದಿಂದ ಗ್ರಾಹಕರ ಫಿಕ್ಸೆಡ್ ಡಿಪಾಸಿಟ್ ಮೊತ್ತವನ್ನು ಮರುಪಾವತಿ ಮಾಡಲು ವಿಫಲವಾದಲ್ಲಿ ಹೂಡಿಕೆ ಮೊತ್ತ ಹಾಗೂ ಬಡ್ಡಿಯ ಮೇಲೆ 1 ಲಕ್ಷ ರೂ.ಗಳವರೆಗೆ ವಿಮಾ ಸುರಕ್ಷತೆ ಇರುತ್ತದೆ. ಆದರೆ ಒಂದು ವೇಳೆ ಎಫ್‌ಡಿ ಇಟ್ಟ ಗ್ರಾಹಕನು ಬ್ಯಾಂಕಿಗೆ ಯಾವುದಾದರೂ ಮೊತ್ತ ಪಾವತಿಸಬೇಕಿದ್ದಲ್ಲಿ ಡಿಐಸಿಜಿಸಿ ಮೊದಲಿಗೆ ಅದನ್ನು ಕಡಿತಗೊಳಿಸುತ್ತದೆ. ಇಂಥ ವಿಮೆಯ ಪಾಲಿಸಿ ಹಣವನ್ನು ಬ್ಯಾಂಕುಗಳೇ ಭರಿಸುತ್ತವೆ. ಉಳಿತಾಯ, ಚಾಲ್ತಿ ಖಾತೆ, ಫಿಕ್ಸೆಡ್ ಡಿಪಾಸಿಟ್ ಹಾಗೂ ರೆಕರಿಂಗ್ ಡಿಪಾಸಿಟ್ ಖಾತೆಗಳಿಗೆ ಡಿಐಸಿಜಿಸಿ ವಿಮಾ ಸುರಕ್ಷತೆ ಇರುತ್ತದೆ.
  2. ಗೃಹೋಪಕರಣಗಳಿಗೆ ವಿಮೆ ; ಫ್ರಿಜ್, ಟಿವಿ ಮತ್ತು ವಾಶಿಂಗ್ ಮಶೀನ್ ಸೇರಿದಂತೆ ಇನ್ನಿತರ ಇನ್ನೂ ಹಲವಾರು ಗೃಹೋಪಯೋಗಿ ಉಪಕರಣಗಳು ಎಲೆಕ್ಟ್ರಿಕ್ ಅಥವಾ ಮೆಕ್ಯಾನಿಕಲ್ ತೊಂದರೆಯಿಂದ ಹಾಳಾದಲ್ಲಿ ಅದಕ್ಕೆ ವಿಮಾ ಸುರಕ್ಷತೆ ಯೋಜನೆಯನ್ನು ಆಯಾ ಗೃಹೋಪಯೋಗಿ ವಸ್ತು ತಯಾರಿಕಾ ಕಂಪನಿಗಳು ನೀಡುತ್ತವೆ. ಈ ವಿಮಾ ಸೌಲಭ್ಯವನ್ನು ವಾರಂಟಿಯೊಂದಿಗೆ ತಳಕು ಹಾಕಿ ಗೊಂದಲ ಮಾಡಿಕೊಳ್ಳಬೇಡಿ. ಇವೆರಡೂ ಭಿನ್ನ ಸಂಗತಿಗಳಾಗಿವೆ. ಸಾಮಾನ್ಯವಾಗಿ ಹಬ್ಬದ ಸೇಲ್ ಸಂದರ್ಭಗಳಲ್ಲಿ ಇಂಥ ವಿಮಾ ಸೌಕರ್ಯಗಳನ್ನು ಹೆಚ್ಚುವರಿಯಾಗಿ ಕಂಪನಿಗಳು ಆಫರ್ ಮಾಡುತ್ತವೆ. ಈ ವಿಮೆಗೆ ನೀವು ನೇರವಾಗಿ ಯಾವುದೇ ಮೊತ್ತವನ್ನು ಪಾವತಿ ಮಾಡುವುದಿಲ್ಲವಾದರೂ ಕಂಪನಿಗಳೇ ತಮ್ಮ ಉಪಕರಣಗಳ ಬೆಲೆಯನ್ನು ಒಂದಿಷ್ಟು ಹೆಚ್ಚಿಸಿ ಅದರಿಂದ ವಿಮಾ ಖರ್ಚಿನ ಮೊತ್ತವನ್ನು ಭರಿಸುತ್ತವೆ.
  3. ಮೊಬೈಲ್ ಫೋನುಗಳಿಗೆ ವಿಮೆ ; ಮೊಬೈಲ್ ತಯಾರಿಕಾ ಕಂಪನಿಗಳು ಮೊಬೈಲ್ ಫೋನುಗಳಿಗೆ ವಿಮಾ ಸೌಲಭ್ಯ ನೀಡುತ್ತಿವೆ. ಮೊಬೈಲ್ ಫೋನ್ ಕಳುವಾದಲ್ಲಿ ಅಥವಾ ಹಾನಿಗೀಡಾದಲ್ಲಿ ವಿಮಾ ಸುರಕ್ಷತೆ ಪಡೆಯಬಹುದು. ಉದಾಹರಣೆಗೆ ನೋಡುವುದಾದರೆ, ನೋಕಿಯಾ ಕಂಪನಿಯು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಸಹಯೋಗದಲ್ಲಿ ತನ್ನ ಕಂಪನಿಯ ಮೊಬೈಲ್ ಫೋನುಗಳಿಗೆ ವಿಮಾ ಸುರಕ್ಷತೆ ಒದಗಿಸುತ್ತಿದೆ. ಹಾಗೆಯೇ ಟೆಲಿನಾರ್ ಇಂಡಿಯಾ ಕಮ್ಯೂನಿಕೇಶನ್ ಕಂಪನಿ ತನ್ನ ಗ್ರಾಹಕರಿಗೆ ಸುಮಾರು 50 ಸಾವಿರ ರೂ.ಗಳವರೆಗೂ ವಿಮಾ ಸೌಲಭ್ಯ ನೀಡುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ.
  4. ಎಲ್ಪಿಜಿ ವಿಮಾ ; ಸುರಕ್ಷೆ ಎಲ್ಲ ನೋಂದಾಯಿತ ಎಲ್ಪಿಜಿ ಗ್ರಾಹಕರು ಹಾಗೂ ಅವರ ಕುಟುಂಬಸ್ಥರಿಗೆ ಗ್ಯಾಸ್ ಸಿಲಿಂಡರ್‌ನಿಂದ ಉಂಟಾಗಬಹುದಾದ ಅಪಘಾತಗಳ ಸಂದರ್ಭದಲ್ಲಿ ವಿಮಾ ಸುರಕ್ಷತೆ ನೀಡಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ಅಪಘಾತ ಪ್ರಕರಣದ ಬಗ್ಗೆ ಮೊದಲಿಗೆ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಬೇಕು. ಈ ಬಗ್ಗೆ ಎಲ್ಪಿಜಿ ವಿತರಕರಿಗೆ ಸಹ ಲಿಖಿತವಾಗಿ ದೂರು ಸಲ್ಲಿಸಬೇಕಾಗುತ್ತದೆ. ಆದರೆ ಈ ರೀತಿಯ ವಿಮೆ ಪಡೆಯಬೇಕಾದರೆ ನೀವು ಮಾನ್ಯತೆ ಪಡೆದ ಐಎಸ್‌ಐ ಮಾರ್ಕಿನ ಗ್ಯಾಸ್ ಪೈಪ್ ಹಾಗೂ ಲೈಟರ್‌ಗಳನ್ನೇ ಉಪಯೋಗಿಸುತ್ತಿರಬೇಕು. ಹಾಗೆಯೇ ವಿತರಕರಲ್ಲಿ ನೋಂದಾಯಿತ ವಿಳಾಸದಲ್ಲಿಯೇ ಎಲ್ಪಿಜಿ ಸಂಪರ್ಕವನ್ನು ಬಳಸುತ್ತಿರಬೇಕು. ನೀವು ನೀಡಿದ ವಿಳಾಸ ಹಾಗೂ ಎಲ್ಪಿಜಿ ಕನೆಕ್ಷನ್ ಬಳಸುತ್ತಿರುವ ಸ್ಥಳ ಬೇರೆಯಾಗಿದ್ದಲ್ಲಿ ಈ ವಿಮೆ ಕ್ಲೇಮ್ ಮಾಡಲಾಗದು.
  5. ರೈಲು ಪ್ರಯಾಣ ; ರೈಲಿನಲ್ಲಿ ಪ್ರಯಾಣಿಸುವ ವೇಳೆ ನಿಮ್ಮ ಲಗೇಜ್‌ಗಳು ಕಳುವಾದಲ್ಲಿ ಅದಕ್ಕೆ ವಿಮಾ ಸೌಲಭ್ಯ ಸಿಗುತ್ತದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ನೀವು ಇ-ಟಿಕೆಟ್ ಬುಕ್ ಮಾಡಿದಾಗಲೇ ಐಆರ್‌ಸಿಟಿಸಿ ಈ ವಿಮೆ ನೀಡಿರುತ್ತದೆ. ಪ್ರಯಾಣ ಮಾಡುವಾಗ ಬ್ಯಾಗ್ ಅಥವಾ ಲಗೇಜು ಕಳುವಾದಲ್ಲಿ ಈ ವಿಮಾ ಸೌಲಭ್ಯವನ್ನು ಕ್ಲೇಮ್ ಮಾಡಬಹುದು. ಮೊಬೈಲ್ ಫೋನ್, ಲ್ಯಾಪಟಾಪ್ ಹಾಗೂ ಇನ್ನಿತರ ಯಾವುದೇ ಬೆಲೆಬಾಳುವ ವಸ್ತುಗಳಿಗೂ ಈ ವಿಮೆ ಅನ್ವಯಿಸುತ್ತದೆ.
  6. ಜೀರೊ ಲಯಾಬಿಲಿಟಿ ; ಕಾರ್ಡ್ಸ್ (ಶೂನ್ಯ ಹೊಣೆಗಾರಿಗೆ ಕಾರ್ಡ್) ವೀಸಾ ಹಾಗೂ ಮಾಸ್ಟರಕಾರ್ಡ್ ಕಾರ್ಡುಗಳನ್ನು ಹೊಂದಿದ ಗ್ರಾಹಕರಿಗೆ ಹಲವಾರು ಬ್ಯಾಂಕುಗಳು ಜೀರೊ ಲಯಾಬಿಲಿಟಿ ಇನ್ಸೂರೆನ್ಸ್ ಕವರೇಜ್ ನೀಡುತ್ತವೆ. ತಮ್ಮ ಕಾರ್ಡುಗಳ ಮೇಲೆ ನಡೆಯುವ ಯಾವುದೇ ಅನಧಿಕೃತ ವ್ಯವಹಾರಗಳಿಗೆ ಬ್ಯಾಂಕುಗಳು ವಿಮಾ ಸುರಕ್ಷೆ ನೀಡುತ್ತವೆ. ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ತಕ್ಷಣ ಬ್ಯಾಂಕಿಗೆ ತಿಳಿಸಿದಲ್ಲಿ ಆ ಕಾರ್ಡ್‌ನಿಂದ ಮಾಡಲಾಗುವ ಯಾವುದೇ ಅನಧಿಕೃತ ವ್ಯಹಹಾರಗಳ ಹಾನಿಯನ್ನು ಬ್ಯಾಂಕುಗಳೇ ಭರಿಸುತ್ತವೆ. ಹಾಗೆಯೇ ಡೆಬಿಟ್ ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ಗ್ರಾಹಕರಿಗೆ ಉಂಟಾಗುವ ಹಾನಿಯನ್ನು ಬ್ಯಾಂಕುಗಳು ಮರುಪಾವತಿಸುತ್ತವೆ.
  7. ಪ್ರಧಾನ ಮಂತ್ರಿ ಜನ ಧನ ಯೋಜನೆ ; ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಬ್ಯಾಂಕಿನಲ್ಲಿ ಖಾತೆ ಹೊಂದಿದ ಗ್ರಾಹಕರಿಗೆ ಜೀರೋ ಬ್ಯಾಲೆನ್ಸ್ ಅಕೌಂಟ್ ಸೌಲಭ್ಯದೊಂದಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಹೊಂದಿದವರಿಗೆ ಕ್ರಮವಾಗಿ 1 ಲಕ್ಷ ರೂ.ವರೆಗೆ ವೈಯಕ್ತಿಕ ಅಪಘಾತ ವಿಮೆ ಹಾಗೂ 30 ಸಾವಿರ ರೂ.ಗಳವರೆಗೆ ಜೀವ ವಿಮಾ ಸುರಕ್ಷತೆ ಇರುತ್ತದೆ.
  8. ರುಪೇ ಕಾರ್ಡ್ ; ರುಪೇ ಎಂಬುದು ಮಾಸ್ಟರ್ ಕಾರ್ಡ್ ಹಾಗೂ ವೀಸಾ ಕಾರ್ಡುಗಳ ಬದಲಿಗೆ ಭಾರತೀಯ ಕಾರ್ಡ್ ಕಂಪನಿಯಾಗಿದೆ. ಇದನ್ನು ಎಟಿಎಂಗಳಲ್ಲಿ, ಅಂಗಡಿಗಳಲ್ಲಿ ಹಾಗೂ ಇ-ಕಾಮರ್ಸ್ ವೆಬ್ಸೈಟ್‌ಗಳಲ್ಲಿ ಬಳಸಬಹುದು. ಈ ಕಾರ್ಡ್ ಹೊಂದಿದವರಿಗೆ ವೈಯಕ್ತಿಕ ಅಪಘಾತ ಮರಣ ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭಗಳಲ್ಲಿ 2 ಲಕ್ಷ ರೂ.ಗಳವರೆಗೆ ಉಚಿತ ವಿಮಾ ಸುರಕ್ಷತೆ ಇರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.
  9. ಎಂಪ್ಲಾಯೀಸ್ ಡಿಪಾಸಿಟ್ ಲಿಂಕ್ಡ್ ಇನ್ಸೂರೆನ್ಸ್ (ಇಡಿಎಲ್‌ಐ) ಇಪಿಎಫ್ (ಕಾರ್ಮಿಕ ಭವಿಷ್ಯ ನಿಧಿ) ; ಸದಸ್ಯರಿಗೆ 6 ಲಕ್ಷ ರೂ. ಮೊತ್ತದ ವಿಮಾ ಸುರಕ್ಷತೆ ಇರುತ್ತದೆ. ಇಪಿಎಫ್ ಸದಸ್ಯನೋರ್ವ ಮರಣ ಹೊಂದಿದಲ್ಲಿ ಆತನ ಕುಟುಂಬಕ್ಕೆ ವಿಮಾ ಸುರಕ್ಷತೆ ನೀಡಲಾಗುತ್ತದೆ. ಎಲ್ಲ ಇಪಿಎಫ್ ಸದಸ್ಯರು ಇಡಿಎಲ್‌ಐ ವಿಮಾ ಸುರಕ್ಷತೆ ಪಡೆದಿರುತ್ತಾರೆ. ಇಪಿಎಫ್ ಹೊಂದಿದ ಕಾರ್ಮಿಕನ ಒಟ್ಟು ವಂತಿಗೆಯಲ್ಲಿ ಶೇ 0.5 ರಷ್ಟು ಮೊತ್ತವನ್ನು ಇಡಿಎಲ್‌ಐಗೆ ಪ್ರೀಮಿಯಂ ಮೊತ್ತವಾಗಿ ಪಾವತಿಸಲಾಗಿರುತ್ತದೆ.
  10. ಮ್ಯೂಚುವಲ್ ಫಂಡ್‌ಗಳಿಗೆ ವಿಮಾ ಸುರಕ್ಷೆ ಬಿರ್ಲಾ ಸನ್ ಲೈಫ್; ಐಸಿಐಸಿಐ ಪ್ರುಡೆನ್ಷಿಯಲ್ ಮತ್ತು ರಿಲಯನ್ಸ್ ಕ್ಯಾಪಿಟಲ್ ಸೇರಿದಂತೆ ಇನ್ನೂ ಹಲವಾರು ಮ್ಯೂಚುವಲ್ ಫಂಡ್ ಕಂಪನಿಗಳು ತಮ್ಮ ಸಿಪ್ (SIP) ಹೂಡಿಕೆದಾರರಿಗೆ ಜೀವ ವಿಮಾ ಸೌಲಭ್ಯ ನೀಡುತ್ತಿವೆ. ಈ ಯೋಜನೆಯಡಿ ಫಂಡ್ ಹೂಡಿಕೆದಾರ ಅನಿರೀಕ್ಷಿತವಾಗಿ ಸಾವನ್ನಪ್ಪಿದಲ್ಲಿ ಫಂಡ್ ಕಂಪನಿ ತಾನಾಗಿಯೇ ಪ್ರೀಮಿಯಂ ಪಾವತಿ ಜಾರಿಯಲ್ಲಿಡುತ್ತದೆ. ಫಂಡ್ ಮ್ಯಾಚುರಿಟಿ ನಂತರ ನಾಮಿನಿಗೆ ಮೊತ್ತ ಪಾವತಿಸಲಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    ನ್ಯಾಯಾಲಯದ ಈ ಪ್ರಕರಣಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ! ಮುಂದೆ ಸಿಗೋದು ಇಲ್ಲ!ಇನ್ನೂ ವಾದ ನಡೀತಾ ಇದೆ!ಯಾಕೆ ಗೊತ್ತಾ?ಈ ಲೇಖನಿ ಓದಿ…

    ಅನೇಕ ವರ್ಷಗಳ ಹಿಂದೆ, ವಿದ್ಯಾರ್ಥಿಯೋಬ್ಬನು ಕಾನೂನು ಶಿಕ್ಷಣವನ್ನು ಕಲಿಯಲು ಬಂದ. ಆದ್ರೆ ಅವನ ಹತ್ತಿರ ಶುಲ್ಕವನ್ನು ಪಾವತಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅವನು ಶಿಕ್ಷಕರ ಜೊತೆ ಒಪ್ಪಂದವೊಂದನ್ನು ಮಾದಿಲೊಂಡನು.ಅದೆಂದರೆ “ನಾನು ನ್ಯಾಯಾಲಯದಲ್ಲಿ ನನ್ನ ಮೊದಲ ಪ್ರಕರಣವನ್ನು ಗೆಲ್ಲುವ ದಿನ ನಿಮ್ಮ ಶುಲ್ಕವನ್ನು ನಾನು ಪಾವತಿಸುತ್ತೇನೆ” ಎಂದು ವಿಧ್ಯಾರ್ಥಿ ಮತ್ತು ಶಿಕ್ಷಕರು ಒಪ್ಪಂದ ಮಾಡಿಕೊಂಡರು.

  • ಜ್ಯೋತಿಷ್ಯ

    ಹೊಸ ವರ್ಷ ಆ ಮಹಾದೇವನ ಕೃಪೆ ನಿಮ್ಮ ಮೇಲೆ ಆಗಬೇಕೆಂದ್ರೆ ತಪ್ಪದೇ ಹೀಗೆ ಮಾಡಿ…

    ಹೊಸ ವರ್ಷದ ಆಗಮನಕ್ಕೆ ಒಂದೇ ದಿನ ಬಾಕಿಯಿದೆ. ಹೊಸ ವರ್ಷ ಈ ವರ್ಷಕ್ಕಿಂತ ಹೆಚ್ಚು ಖುಷಿ, ಯಶಸ್ಸು ತರಲಿ ಎಂದು ಪ್ರತಿಯೊಬ್ಬರೂ ಬಯಸ್ತಾರೆ. ಹೊಸ ವರ್ಷ ಸುಖ, ಸಂತೋಷ, ಸಮೃದ್ಧಿಯಿಂದ ಕೂಡಿರಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ ಸುಖ, ಸಂತೋಷದಿಂದ ಕೂಡಿರಬೇಕು ಎಂದಾದ್ರೆ ಹೊಸ ವರ್ಷದ ಮೊದಲ ದಿನ ಅಂದ್ರೆ ಜನವರಿ ಒಂದರಂದು ತಾಮ್ರದ ಲೋಟದಲ್ಲಿ ನೀರನ್ನು ಹಾಕಿ, ಅದಕ್ಕೆ ಕೇಸರಿ ಹಾಕಿ ಶಿವಲಿಂಗಕ್ಕೆ ಅರ್ಪಿಸಿ. ಜಲ ಅರ್ಪಿಸುವ ವೇಳೆ ಓಂ…

  • ಸುದ್ದಿ

    ಕರೋನ ಸಮಸ್ಯೆ ಹೀಗೆ ಇದ್ದರೆ ಚಿನ್ನದ ಬೆಲೆ ಎಷ್ಟಾಗಲಿದೆ. ಮಾರ್ಕೆಟ್ ತಜ್ಞರು ಹೇಳಿದ್ದೇನು ನೋಡಿ.!

    ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇದೆ, ಭಾರತದಲ್ಲಿ ಕೊರೋನಾ ಈಗ ಸ್ಟೇಜ್ 2 ಹಂತದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಸ್ಟೇಜ್ 4 ಗೆ ಕೊರೋನಾ ಆಕ್ರಮಿಸಿದರೆ ಖಂಡಿತ ದುರಂತ ಸಂಭವಿಸಲಿದೆ ಎಂದು ಹಲವಾರು ಮಂದಿ ಅಭಿಪ್ರಾಯ ಪಟ್ಟಿದ್ದಾರೆ, ಚೀನಾ ಈಗಾಗಲೇ ಈ ಸಂಕಷ್ಟದಿಂದ ಪಾರಾಗಿದೆ ಮತ್ತು ಭಾರತ ಈಗಾಗಲೇ ಹಲವಾರು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ. ಇಷ್ಟೇ ಅಲ್ಲದೆ ಕೊರೋನಾ ಅಬ್ಬರಕ್ಕೆ ಈಗಾಗಲೇ ಆರ್ಥಿಕ ವಹಿವಾಟು ಕುಸಿದು ಬಿದ್ದಿದೆ, ಕೇವಲ ಏಳು ದಿನಗಳಲ್ಲಿ ಅಂತರದಲ್ಲಿ…

  • ಸಿನಿಮಾ

    ದೊಡ್ಮನೆ ಹುಡುಗ ಅಣ್ಣಾವ್ರ ಮೊಮ್ಮಗನ ಮದುವೆ ಸಂಭ್ರಮ ಹೇಗಿತ್ತು ಯಾವೆಲ್ಲಾ ಸ್ಟಾರ್’ಗಳು ಬಂದಿದ್ದರು..ತಿಳಿಯಲು ಈ ಲೇಖನ ಓದಿ…

    ಕನ್ನಡ ಚಿತ್ರರಂಗದ ದೊಡ್ಮನೆ ಅಣ್ಣಾವ್ರ ಮನೆಯಲ್ಲಿ‌ ಮದುವೆ ಸಂಭ್ರಮ ನಡೆದಿದೆ. ಇದು ದೊಡ್ಮನೆಯ ಮೂರನೇ‌ ತಲೆಮಾರಿನ‌ ಮದುವೆಯಾಗಿದ್ದು, ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಹಿರಿಯ ಪುತ್ರಿ ಲಕ್ಷ್ಮೀ ಅವರ ಮಗ ಶಾನ್ (ಷಣ್ಮುಖ) ರ ಮದುವೆ ಮಾರ್ಚ್ 26 ರಂದು ಶಿವಮೊಗ್ಗದಲ್ಲಿ ನಡೆದಿದೆ. ಶಾನ್ ಮತ್ತು ಸಿಂಧೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಬಿಮಾನಿಗಳು ಮದುವೆಗೆ ಬನ್ನಿ ಎಂದು ಎಲ್ಲರನ್ನೂ ಆಹ್ವಾನ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಪುತ್ರಿ ನಿರುಪಮಾ ಮದುವೆ…

  • ಉಪಯುಕ್ತ ಮಾಹಿತಿ

    ಕೇವಲ ಲಕ್ಷದಷ್ಟು ಬ್ರಿಟೀಶ್ ಸೈನಿಕರು ಇಡೀ ಭಾರತವನ್ನು, ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದ್ದು ಹೇಗೆ ಗೊತ್ತಾ.? ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಬಾಲ ಬಿಚ್ಚಿ ಕುಣಿದಾಡುತ್ತಿದ್ದ ದೇಶಗಳೆಲ್ಲವನ್ನು ಜುಟ್ಟು ಹಿಡಿದು ಟೊಂಕ ಮುರಿದು ಬಡಿದು ಹಾಕಿದ  ದೇಶವದು. ಅಮೇರಿಕ ಆಸ್ಟ್ರೇಲಿಯಾದಂತ  ಬಲಿಷ್ಠ ದೇಶಗಳೇ ಗಪ್ ಚುಪ್ ಎನ್ನುತ ಅವರ ಅಧಿಕಾರದವನ್ನು ತಮ್ಮ ಮೇಲೆ ಹರಿಯಬಿಟ್ಟುಕೊಂಡಿದ್ದವು. ಪ್ರಸ್ತುತ ಜಗತ್ತಿನ  ಕೇವಲ ಇಪ್ಪತ್ತರಿಂದ ಇಪ್ಪತ್ತೆರಡು ದೇಶಗಳನ್ನು ಒರತುಪಡಿಸಿದರೆ ಉಳಿದೆಲ್ಲ ದೇಶಗಳು ಒಂದಿಲ್ಲೊಂದು ಇತಿಹಾಸದ ಕಾಲಘಟ್ಟದಲ್ಲಿ  ಈವೊಂದು ಪುಟ್ಟ ದೇಶದಿಂದ ಆಳ್ವಿಕೆಗೊಳಲ್ಪಟ್ಟಿವೆ! ಹೆಚ್ಚೆಂದರೆ ನಮ್ಮ ಉತ್ತರಪ್ರದೇಶ ರಾಜ್ಯದಷ್ಟಿರುವ ಈ ದೇಶ ಅದೇಗೆ ವಿಶ್ವದ ನಾಲ್ಕನೇ ಒಂದರಷ್ಟು…

  • ಸುದ್ದಿ

    ವಿಟಮಿನ್ ‘ಡಿ’ ಮಹಿಳೆಯರಿಗೆ ಯಾಕೆ ಮುಖ್ಯ ಗೊತ್ತ…?

    ಮನೆಕೆಲಸದಲ್ಲಿ ಗೃಹಿಣಿಯರು ಬಿಝಿ ಇರುವುದರಿಂದ ಮನೆಯಿಂದ ಹೊರಬರುವುದು ಅಷ್ಟಕಷ್ಟೆ. ಹೀಗಾಗಿ ಅಂತಹವರಲ್ಲಿ ವಿಟಮಿನ್ ಡಿ ಲೋಪ ಉಂಟಾಗುತ್ತದೆ. ವಿಟಮಿನ್ ‘ಡಿ’ ಮಹಿಳೆಯರಲ್ಲಿ 30 ನಾನೋ ಗ್ರಾಂಗಳಿಗಿಂತ ಹೆಚ್ಚಾಗಿ ಇರಬೇಕು. ವಿಟಮಿನ್ ಡಿ ಮಹಿಳೆಯರಲ್ಲಿ ಹಾರ್ಮೋನಿನಂತೆ ಕೆಲಸ ಮಾಡುತ್ತದೆ. ಹಾಗಾಗಿ ಅದರ ಲೋಪವಿದ್ದಾಗ ನಿರ್ಲಕ್ಷ್ಯ ಮಾಡಬಾರದು.ಮುಖ್ಯವಾಗಿ ಡಿ ವಿಟಮಿನ್ ಶರೀರದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಇದರ ಲೋಪವಿದ್ದಾಗ ಶರೀರ ಕ್ಯಾಲ್ಸಿಯಂ ಅನ್ನು ಸರಿಯಾಗಿ ಗ್ರಹಿಸುವುದಿಲ್ಲ. ಇದರಿಂದ ಕ್ಯಾಲ್ಸಿಯಂ ಕೊರತೆ ಕೂಡ ಉಂಟಾಗುತ್ತದೆ. ವಿಟಮಿನ್ ಡಿ, ಆಹಾರದಿಂದ ನಮಗೆ ಸರಿಯಾಗಿ ದೊರೆಯುವುದಿಲ್ಲ….