News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಸುದ್ದಿ

ನೀವು ಇನ್ಸೂರೆನ್ಸ್ ಬಳಕೆದಾರರೇ? ಆಗದರೆ ತಪ್ಪದೇ ಇದನ್ನು ಒಮ್ಮೆ ಓಧಿ…..!

34

ಆಕಸ್ಮಿಕ ದುರ್ಘಟನೆಗಳು ಹಾಗೂ ಸಂಭವನೀಯ ಹಾನಿಗಳಿಂದ ಪಾರಾಗುವ ಮುಂಜಾಗ್ರತಾ ಕ್ರಮವಾಗಿ ವಿಮಾ ಸುರಕ್ಷೆಯನ್ನು ಬಳಸಲಾಗುತ್ತದೆ. ಜೀವ ವಿಮೆ, ಆಸ್ತಿ ವಿಮೆ, ಆರೋಗ್ಯ ವಿಮೆ ಹೀಗೆ ಹಲವಾರು ರೀತಿಯ ವಿಮಾ ಸುರಕ್ಷೆಯ ಪಾಲಿಸಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಹಣಕಾಸು ಉತ್ಪನ್ನಗಳಿಗೆ ಸಹ ವಿಮೆ ಸುರಕ್ಷೆ ಇರುತ್ತದೆ ಎಂಬುದು ಬಹುತೇಕರಿಗೆ ಈವರೆಗೂ ತಿಳಿದಿಲ್ಲ. ಕೆಲ ಹಣಕಾಸು ಉತ್ಪನ್ನಗಳಿಗೆ ಉಚಿತ ವಿಮಾ ಸುರಕ್ಷೆ ಇದ್ದರೆ ಇನ್ನು ಕೆಲವಕ್ಕೆ ಅತಿ ಕಡಿಮೆ ಹಣ ಪಾವತಿಸುವುದರ ಮೂಲಕ ವಿಮಾ ಸೌಲಭ್ಯ ಪಡೆಯಬಹುದು. ಯಾವೆಲ್ಲ ಹಣಕಾಸು ಉತ್ಪನ್ನಗಳಿಗೆ ವಿಮಾ ಸೌಲಭ್ಯವಿದೆ ಹಾಗೂ ಅವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ವಿವರವಾಗಿ ತಿಳಿಯೋಣ.

ವಿಮೆಗಳ ಬಗ್ಗೆ ಮೇಲ್ನೋಟಕ್ಕೆ ತಿಳಿಯುವ ಬದಲು ಆಳವಾಗಿ ಕೂಡ ಅಭ್ಯಸಿಸಬೇಕಾಗುತ್ತದೆ. ನಿಮಗೆ ಗೊತ್ತಿರದ ಕೆಲ ಪ್ರಮುಖ ಉಚಿತ ಅಂತರ್ಗತ ವಿಮಾ ಸುರಕ್ಷತೆ-ಇನ್ಸೂರೆನ್ಸ್‌ ಕವರ್ ಬಗ್ಗೆ ತಿಳಿಯೋಣ ಬನ್ನಿ..

  1. ಬ್ಯಾಂಕ್ ಡಿಪಾಸಿಟ್‌ಗಳು ; ಭಾರತದಲ್ಲಿ ಕಾರ್ಯನಿರ್ವಹಿಸುವ ಪ್ರಾದೇಶಿಕ, ಸಹಕಾರಿ ಹಾಗೂ ವಿದೇಶಿ ಬ್ಯಾಂಕುಗಳು ಸೇರಿದಂತೆ ಇತರ ಎಲ್ಲ ಬ್ಯಾಂಕುಗಳಲ್ಲಿನ ಫಿಕ್ಸೆಡ್ ಡಿಪಾಸಿಟ್ (ನಿಶ್ಚಿತ ಠೇವಣಿ) ಗಳಿಗೆ ಸರಕಾರದ ಡಿಪಾಸಿಟ್ ಇನ್ಸೂರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ) ಯಿಂದ ವಿಮಾ ಸುರಕ್ಷತೆ ನೀಡಲಾಗಿರುತ್ತದೆ. ಒಂದೊಮ್ಮೆ ಯಾವುದೇ ಬ್ಯಾಂಕು ವಿಲೀನ ಅಥವಾ ಲೈಸೆನ್ಸ್ ರದ್ದತಿಯ ಕಾರಣದಿಂದ ಗ್ರಾಹಕರ ಫಿಕ್ಸೆಡ್ ಡಿಪಾಸಿಟ್ ಮೊತ್ತವನ್ನು ಮರುಪಾವತಿ ಮಾಡಲು ವಿಫಲವಾದಲ್ಲಿ ಹೂಡಿಕೆ ಮೊತ್ತ ಹಾಗೂ ಬಡ್ಡಿಯ ಮೇಲೆ 1 ಲಕ್ಷ ರೂ.ಗಳವರೆಗೆ ವಿಮಾ ಸುರಕ್ಷತೆ ಇರುತ್ತದೆ. ಆದರೆ ಒಂದು ವೇಳೆ ಎಫ್‌ಡಿ ಇಟ್ಟ ಗ್ರಾಹಕನು ಬ್ಯಾಂಕಿಗೆ ಯಾವುದಾದರೂ ಮೊತ್ತ ಪಾವತಿಸಬೇಕಿದ್ದಲ್ಲಿ ಡಿಐಸಿಜಿಸಿ ಮೊದಲಿಗೆ ಅದನ್ನು ಕಡಿತಗೊಳಿಸುತ್ತದೆ. ಇಂಥ ವಿಮೆಯ ಪಾಲಿಸಿ ಹಣವನ್ನು ಬ್ಯಾಂಕುಗಳೇ ಭರಿಸುತ್ತವೆ. ಉಳಿತಾಯ, ಚಾಲ್ತಿ ಖಾತೆ, ಫಿಕ್ಸೆಡ್ ಡಿಪಾಸಿಟ್ ಹಾಗೂ ರೆಕರಿಂಗ್ ಡಿಪಾಸಿಟ್ ಖಾತೆಗಳಿಗೆ ಡಿಐಸಿಜಿಸಿ ವಿಮಾ ಸುರಕ್ಷತೆ ಇರುತ್ತದೆ.
  2. ಗೃಹೋಪಕರಣಗಳಿಗೆ ವಿಮೆ ; ಫ್ರಿಜ್, ಟಿವಿ ಮತ್ತು ವಾಶಿಂಗ್ ಮಶೀನ್ ಸೇರಿದಂತೆ ಇನ್ನಿತರ ಇನ್ನೂ ಹಲವಾರು ಗೃಹೋಪಯೋಗಿ ಉಪಕರಣಗಳು ಎಲೆಕ್ಟ್ರಿಕ್ ಅಥವಾ ಮೆಕ್ಯಾನಿಕಲ್ ತೊಂದರೆಯಿಂದ ಹಾಳಾದಲ್ಲಿ ಅದಕ್ಕೆ ವಿಮಾ ಸುರಕ್ಷತೆ ಯೋಜನೆಯನ್ನು ಆಯಾ ಗೃಹೋಪಯೋಗಿ ವಸ್ತು ತಯಾರಿಕಾ ಕಂಪನಿಗಳು ನೀಡುತ್ತವೆ. ಈ ವಿಮಾ ಸೌಲಭ್ಯವನ್ನು ವಾರಂಟಿಯೊಂದಿಗೆ ತಳಕು ಹಾಕಿ ಗೊಂದಲ ಮಾಡಿಕೊಳ್ಳಬೇಡಿ. ಇವೆರಡೂ ಭಿನ್ನ ಸಂಗತಿಗಳಾಗಿವೆ. ಸಾಮಾನ್ಯವಾಗಿ ಹಬ್ಬದ ಸೇಲ್ ಸಂದರ್ಭಗಳಲ್ಲಿ ಇಂಥ ವಿಮಾ ಸೌಕರ್ಯಗಳನ್ನು ಹೆಚ್ಚುವರಿಯಾಗಿ ಕಂಪನಿಗಳು ಆಫರ್ ಮಾಡುತ್ತವೆ. ಈ ವಿಮೆಗೆ ನೀವು ನೇರವಾಗಿ ಯಾವುದೇ ಮೊತ್ತವನ್ನು ಪಾವತಿ ಮಾಡುವುದಿಲ್ಲವಾದರೂ ಕಂಪನಿಗಳೇ ತಮ್ಮ ಉಪಕರಣಗಳ ಬೆಲೆಯನ್ನು ಒಂದಿಷ್ಟು ಹೆಚ್ಚಿಸಿ ಅದರಿಂದ ವಿಮಾ ಖರ್ಚಿನ ಮೊತ್ತವನ್ನು ಭರಿಸುತ್ತವೆ.
  3. ಮೊಬೈಲ್ ಫೋನುಗಳಿಗೆ ವಿಮೆ ; ಮೊಬೈಲ್ ತಯಾರಿಕಾ ಕಂಪನಿಗಳು ಮೊಬೈಲ್ ಫೋನುಗಳಿಗೆ ವಿಮಾ ಸೌಲಭ್ಯ ನೀಡುತ್ತಿವೆ. ಮೊಬೈಲ್ ಫೋನ್ ಕಳುವಾದಲ್ಲಿ ಅಥವಾ ಹಾನಿಗೀಡಾದಲ್ಲಿ ವಿಮಾ ಸುರಕ್ಷತೆ ಪಡೆಯಬಹುದು. ಉದಾಹರಣೆಗೆ ನೋಡುವುದಾದರೆ, ನೋಕಿಯಾ ಕಂಪನಿಯು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಸಹಯೋಗದಲ್ಲಿ ತನ್ನ ಕಂಪನಿಯ ಮೊಬೈಲ್ ಫೋನುಗಳಿಗೆ ವಿಮಾ ಸುರಕ್ಷತೆ ಒದಗಿಸುತ್ತಿದೆ. ಹಾಗೆಯೇ ಟೆಲಿನಾರ್ ಇಂಡಿಯಾ ಕಮ್ಯೂನಿಕೇಶನ್ ಕಂಪನಿ ತನ್ನ ಗ್ರಾಹಕರಿಗೆ ಸುಮಾರು 50 ಸಾವಿರ ರೂ.ಗಳವರೆಗೂ ವಿಮಾ ಸೌಲಭ್ಯ ನೀಡುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ.
  4. ಎಲ್ಪಿಜಿ ವಿಮಾ ; ಸುರಕ್ಷೆ ಎಲ್ಲ ನೋಂದಾಯಿತ ಎಲ್ಪಿಜಿ ಗ್ರಾಹಕರು ಹಾಗೂ ಅವರ ಕುಟುಂಬಸ್ಥರಿಗೆ ಗ್ಯಾಸ್ ಸಿಲಿಂಡರ್‌ನಿಂದ ಉಂಟಾಗಬಹುದಾದ ಅಪಘಾತಗಳ ಸಂದರ್ಭದಲ್ಲಿ ವಿಮಾ ಸುರಕ್ಷತೆ ನೀಡಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ಅಪಘಾತ ಪ್ರಕರಣದ ಬಗ್ಗೆ ಮೊದಲಿಗೆ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಬೇಕು. ಈ ಬಗ್ಗೆ ಎಲ್ಪಿಜಿ ವಿತರಕರಿಗೆ ಸಹ ಲಿಖಿತವಾಗಿ ದೂರು ಸಲ್ಲಿಸಬೇಕಾಗುತ್ತದೆ. ಆದರೆ ಈ ರೀತಿಯ ವಿಮೆ ಪಡೆಯಬೇಕಾದರೆ ನೀವು ಮಾನ್ಯತೆ ಪಡೆದ ಐಎಸ್‌ಐ ಮಾರ್ಕಿನ ಗ್ಯಾಸ್ ಪೈಪ್ ಹಾಗೂ ಲೈಟರ್‌ಗಳನ್ನೇ ಉಪಯೋಗಿಸುತ್ತಿರಬೇಕು. ಹಾಗೆಯೇ ವಿತರಕರಲ್ಲಿ ನೋಂದಾಯಿತ ವಿಳಾಸದಲ್ಲಿಯೇ ಎಲ್ಪಿಜಿ ಸಂಪರ್ಕವನ್ನು ಬಳಸುತ್ತಿರಬೇಕು. ನೀವು ನೀಡಿದ ವಿಳಾಸ ಹಾಗೂ ಎಲ್ಪಿಜಿ ಕನೆಕ್ಷನ್ ಬಳಸುತ್ತಿರುವ ಸ್ಥಳ ಬೇರೆಯಾಗಿದ್ದಲ್ಲಿ ಈ ವಿಮೆ ಕ್ಲೇಮ್ ಮಾಡಲಾಗದು.
  5. ರೈಲು ಪ್ರಯಾಣ ; ರೈಲಿನಲ್ಲಿ ಪ್ರಯಾಣಿಸುವ ವೇಳೆ ನಿಮ್ಮ ಲಗೇಜ್‌ಗಳು ಕಳುವಾದಲ್ಲಿ ಅದಕ್ಕೆ ವಿಮಾ ಸೌಲಭ್ಯ ಸಿಗುತ್ತದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ನೀವು ಇ-ಟಿಕೆಟ್ ಬುಕ್ ಮಾಡಿದಾಗಲೇ ಐಆರ್‌ಸಿಟಿಸಿ ಈ ವಿಮೆ ನೀಡಿರುತ್ತದೆ. ಪ್ರಯಾಣ ಮಾಡುವಾಗ ಬ್ಯಾಗ್ ಅಥವಾ ಲಗೇಜು ಕಳುವಾದಲ್ಲಿ ಈ ವಿಮಾ ಸೌಲಭ್ಯವನ್ನು ಕ್ಲೇಮ್ ಮಾಡಬಹುದು. ಮೊಬೈಲ್ ಫೋನ್, ಲ್ಯಾಪಟಾಪ್ ಹಾಗೂ ಇನ್ನಿತರ ಯಾವುದೇ ಬೆಲೆಬಾಳುವ ವಸ್ತುಗಳಿಗೂ ಈ ವಿಮೆ ಅನ್ವಯಿಸುತ್ತದೆ.
  6. ಜೀರೊ ಲಯಾಬಿಲಿಟಿ ; ಕಾರ್ಡ್ಸ್ (ಶೂನ್ಯ ಹೊಣೆಗಾರಿಗೆ ಕಾರ್ಡ್) ವೀಸಾ ಹಾಗೂ ಮಾಸ್ಟರಕಾರ್ಡ್ ಕಾರ್ಡುಗಳನ್ನು ಹೊಂದಿದ ಗ್ರಾಹಕರಿಗೆ ಹಲವಾರು ಬ್ಯಾಂಕುಗಳು ಜೀರೊ ಲಯಾಬಿಲಿಟಿ ಇನ್ಸೂರೆನ್ಸ್ ಕವರೇಜ್ ನೀಡುತ್ತವೆ. ತಮ್ಮ ಕಾರ್ಡುಗಳ ಮೇಲೆ ನಡೆಯುವ ಯಾವುದೇ ಅನಧಿಕೃತ ವ್ಯವಹಾರಗಳಿಗೆ ಬ್ಯಾಂಕುಗಳು ವಿಮಾ ಸುರಕ್ಷೆ ನೀಡುತ್ತವೆ. ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ತಕ್ಷಣ ಬ್ಯಾಂಕಿಗೆ ತಿಳಿಸಿದಲ್ಲಿ ಆ ಕಾರ್ಡ್‌ನಿಂದ ಮಾಡಲಾಗುವ ಯಾವುದೇ ಅನಧಿಕೃತ ವ್ಯಹಹಾರಗಳ ಹಾನಿಯನ್ನು ಬ್ಯಾಂಕುಗಳೇ ಭರಿಸುತ್ತವೆ. ಹಾಗೆಯೇ ಡೆಬಿಟ್ ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ಗ್ರಾಹಕರಿಗೆ ಉಂಟಾಗುವ ಹಾನಿಯನ್ನು ಬ್ಯಾಂಕುಗಳು ಮರುಪಾವತಿಸುತ್ತವೆ.
  7. ಪ್ರಧಾನ ಮಂತ್ರಿ ಜನ ಧನ ಯೋಜನೆ ; ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಬ್ಯಾಂಕಿನಲ್ಲಿ ಖಾತೆ ಹೊಂದಿದ ಗ್ರಾಹಕರಿಗೆ ಜೀರೋ ಬ್ಯಾಲೆನ್ಸ್ ಅಕೌಂಟ್ ಸೌಲಭ್ಯದೊಂದಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಹೊಂದಿದವರಿಗೆ ಕ್ರಮವಾಗಿ 1 ಲಕ್ಷ ರೂ.ವರೆಗೆ ವೈಯಕ್ತಿಕ ಅಪಘಾತ ವಿಮೆ ಹಾಗೂ 30 ಸಾವಿರ ರೂ.ಗಳವರೆಗೆ ಜೀವ ವಿಮಾ ಸುರಕ್ಷತೆ ಇರುತ್ತದೆ.
  8. ರುಪೇ ಕಾರ್ಡ್ ; ರುಪೇ ಎಂಬುದು ಮಾಸ್ಟರ್ ಕಾರ್ಡ್ ಹಾಗೂ ವೀಸಾ ಕಾರ್ಡುಗಳ ಬದಲಿಗೆ ಭಾರತೀಯ ಕಾರ್ಡ್ ಕಂಪನಿಯಾಗಿದೆ. ಇದನ್ನು ಎಟಿಎಂಗಳಲ್ಲಿ, ಅಂಗಡಿಗಳಲ್ಲಿ ಹಾಗೂ ಇ-ಕಾಮರ್ಸ್ ವೆಬ್ಸೈಟ್‌ಗಳಲ್ಲಿ ಬಳಸಬಹುದು. ಈ ಕಾರ್ಡ್ ಹೊಂದಿದವರಿಗೆ ವೈಯಕ್ತಿಕ ಅಪಘಾತ ಮರಣ ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭಗಳಲ್ಲಿ 2 ಲಕ್ಷ ರೂ.ಗಳವರೆಗೆ ಉಚಿತ ವಿಮಾ ಸುರಕ್ಷತೆ ಇರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.
  9. ಎಂಪ್ಲಾಯೀಸ್ ಡಿಪಾಸಿಟ್ ಲಿಂಕ್ಡ್ ಇನ್ಸೂರೆನ್ಸ್ (ಇಡಿಎಲ್‌ಐ) ಇಪಿಎಫ್ (ಕಾರ್ಮಿಕ ಭವಿಷ್ಯ ನಿಧಿ) ; ಸದಸ್ಯರಿಗೆ 6 ಲಕ್ಷ ರೂ. ಮೊತ್ತದ ವಿಮಾ ಸುರಕ್ಷತೆ ಇರುತ್ತದೆ. ಇಪಿಎಫ್ ಸದಸ್ಯನೋರ್ವ ಮರಣ ಹೊಂದಿದಲ್ಲಿ ಆತನ ಕುಟುಂಬಕ್ಕೆ ವಿಮಾ ಸುರಕ್ಷತೆ ನೀಡಲಾಗುತ್ತದೆ. ಎಲ್ಲ ಇಪಿಎಫ್ ಸದಸ್ಯರು ಇಡಿಎಲ್‌ಐ ವಿಮಾ ಸುರಕ್ಷತೆ ಪಡೆದಿರುತ್ತಾರೆ. ಇಪಿಎಫ್ ಹೊಂದಿದ ಕಾರ್ಮಿಕನ ಒಟ್ಟು ವಂತಿಗೆಯಲ್ಲಿ ಶೇ 0.5 ರಷ್ಟು ಮೊತ್ತವನ್ನು ಇಡಿಎಲ್‌ಐಗೆ ಪ್ರೀಮಿಯಂ ಮೊತ್ತವಾಗಿ ಪಾವತಿಸಲಾಗಿರುತ್ತದೆ.
  10. ಮ್ಯೂಚುವಲ್ ಫಂಡ್‌ಗಳಿಗೆ ವಿಮಾ ಸುರಕ್ಷೆ ಬಿರ್ಲಾ ಸನ್ ಲೈಫ್; ಐಸಿಐಸಿಐ ಪ್ರುಡೆನ್ಷಿಯಲ್ ಮತ್ತು ರಿಲಯನ್ಸ್ ಕ್ಯಾಪಿಟಲ್ ಸೇರಿದಂತೆ ಇನ್ನೂ ಹಲವಾರು ಮ್ಯೂಚುವಲ್ ಫಂಡ್ ಕಂಪನಿಗಳು ತಮ್ಮ ಸಿಪ್ (SIP) ಹೂಡಿಕೆದಾರರಿಗೆ ಜೀವ ವಿಮಾ ಸೌಲಭ್ಯ ನೀಡುತ್ತಿವೆ. ಈ ಯೋಜನೆಯಡಿ ಫಂಡ್ ಹೂಡಿಕೆದಾರ ಅನಿರೀಕ್ಷಿತವಾಗಿ ಸಾವನ್ನಪ್ಪಿದಲ್ಲಿ ಫಂಡ್ ಕಂಪನಿ ತಾನಾಗಿಯೇ ಪ್ರೀಮಿಯಂ ಪಾವತಿ ಜಾರಿಯಲ್ಲಿಡುತ್ತದೆ. ಫಂಡ್ ಮ್ಯಾಚುರಿಟಿ ನಂತರ ನಾಮಿನಿಗೆ ಮೊತ್ತ ಪಾವತಿಸಲಾಗುತ್ತದೆ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ

  • ಸುದ್ದಿ

    ಪ್ರವಾಹದಲ್ಲಿ ಕೊಚ್ಚಿ ಹೋದ ಅರ್ಚಕ , ಎರಡು ದಿನ ಸೇತುವೆ ಕೆಳಗೆ ಇದ್ದು ಬದುಕಿ ಬಂದಿದ್ಹೇಗೆ..?

    ಎರಡು ದಿನಗಳ ಹಿಂದೆ ಕಪಿಲಾ ನದಿಗೆ ಜಿಗಿದಿದ್ದ ವೃದ್ಧ, ಎಲ್ಲರಲ್ಲೂ ಭಯ ಹುಟ್ಟಿಸಿದ್ದರು. ಎರಡು ದಿನವಾದರೂ ಮರಳದ ಕಾರಣ, ಅವರ ಪ್ರಾಣಕ್ಕೇನಾದ್ರೂ ಅಪಾಯವಾಗಿತ್ತಾ ಎಂದು ಮನೆಮಂದಿಯಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ ಎರಡು ದಿನಗಳ ಕಾಲ ಊಟ-ತಿಂಡಿ ಬಿಟ್ಟು ನೀರಿನಲ್ಲಿ ಕುಳಿತು, ಇಂದು ಈಜಿ ಹೊರಬಂದಿದ್ದಾರೆ. ನಂಜನಗೂಡಿನ ರೈಲ್ವೆ ಸೇತುವೆ ಮೇಲಿಂದ ಜಿಗಿದಿದ್ದ ವೆಂಕಟೇಶ್ ಎಂಬ ವೃದ್ದರು, ಎರಡು ದಿನದ ಬಳಿಕ ಈಜಿ ದಡ ಸೇರಿದ್ದಾರೆ. ಟಿವಿ5 ಜೊತೆ ಈ ಬಗ್ಗೆ ಮಾತನಾಡಿದ ವೆಂಕಟೇಶ್, ರೋಚಕ ಕ್ಷಣಗಳನ್ನ…

  • govt, modi, ತಂತ್ರಜ್ಞಾನ

    ಹೊಸ ವರ್ಷಕ್ಕೆ ಹೊಸ ಕೊಡುಗೆ: 2018 ಕ್ಕೆ ದೇಶಿ ಜಿಪಿಎಸ್ ಹೊಂದಲಿರುವ ನಮ್ಮ ಭಾರತ!

    ದೇಶಿ ಜಿಪಿಎಸ್ ಗೆ ನಾವಿಕ್ ಎಂದು ನಾಮಕರಣ ಮಾಡಿದ್ದ ಪ್ರಧಾನಿ, ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಕರು ದಾರಿ ತಪ್ಪಿದರೆ, ಸರಿಯಾದ ದಾರಿ ತೋರಿಸುವ ದೇಶಿ ಜಿಪಿಎಸ್ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ ಅಥವಾ ದಿಕ್ಸೂಚಿ ವ್ಯವಸ್ಥೆಯ ತಂತ್ರಜ್ಞಾನ) ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, 2018 ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

  • ಉಪಯುಕ್ತ ಮಾಹಿತಿ

    ಸಾಗರದ ಪಾಲಾಗಲಿದೆಯೇ ಮಂಗಳೂರು, ಮುಂಬೈ..!ತಿಳಿಯಲು ಈ ಲೇಖನ ಓದಿ ..

    ಮಂಗಳೂರು ಹಾಗೂ ಮುಂಬೈಗೆ ಭಾರೀ ಅಪಾಯವೊಂದು ಕಾದಿದೆ. ಸಮುದ್ರ ತೀರಕ್ಕೆ ಎರಡೂ ನಗರಗಳು ಹತ್ತಿರದಲ್ಲಿರುವುದರಿಂದ ಅಪಾಯದ ಅಂಚಿನಲ್ಲಿದೆ. ಅಂಟಾರ್ಕಿಟಿಕಾದಲ್ಲಿ ಹಿಮ ಕರುಗುತ್ತಿರುವುದರಿಂದ ಸಮುದ್ರ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮುದ್ರದ ಅಕ್ಕಪಕ್ಕ ಇರುವ ನಗರಗಳಿಗೆ ಅಪಾಯ ಕಾದಿದೆ ಎಂದು ನಾಸಾ ಹೊರ ತಂದಿರುವ ಡೇಟಾ ಪ್ರಕಾರ ನ್ಯೂಯಾರ್ಕ್ ಪತ್ರಿಕೆ ವರದಿ ಮಾಡಿದೆ.

  • ಸುದ್ದಿ

    ಸೇತುವೆ ಮೇಲಿಂದ ಬಸ್ ಪಲ್ಟಿ…..29 ಪ್ರಯಾಣಿಕರ ಮರಣ…..!

    ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬಸ್ ವೊಂದು ಜಾರಿ ಹದಿನೈದು ಅಡಿ ಆಳದ ದೊಡ್ಡ ಮೋರಿಯಲ್ಲಿ ಬಿದ್ದ ಪರಿಣಾಮ ಇಪ್ಪತ್ತೊಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರಾ ಅರವತ್ತೈದು ಕಿ.ಮೀ. ಉದ್ದ ಎಕ್ಸ್ ಪ್ರೆಸ್ ಹೈವೆ ಉತ್ತರಪ್ರದೇಶದಲ್ಲಿ ನೋಯ್ಡಾ ಹಾಗೂ ಆಗ್ರಾದ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ.ರಾಜ್ಯ ರಸ್ತೆ ಸಾರಿಗೆ ಬಸ್ ಸ್ಕಿಡ್ ಆಗಿ 50 ಅಡಿ ಆಳದ ಚರಂಡಿಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ 29 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಚಾಲಕ ನಿದ್ದೆ…

  • ಸುದ್ದಿ

    ರೆಫ್ರಿಜರೇಟರ್ ಸ್ಫೋಟಗೊಂಡು ಮೂವರ ದುರ್ಮರಣ…..!

    ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್‍ನಲ್ಲಿ ನಡೆದಿದೆ. ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಗುರುವಾರ ಬೆಳಗ್ಗೆ ಪಕ್ಕದ…

  • nation, National, News Paper

    ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಭಾರತದ ಟಾಪ್ 5 ರಾಜ್ಯಗಳು ಇಲ್ಲಿವೆ.

    “ಓದುವುದಕ್ಕಿಂತ ದೊಡ್ಡ ಸಂತೋಷವಿಲ್ಲ, ಸ್ನೇಹಿತರಿಗಿಂತ ದೊಡ್ಡವರಲ್ಲ ..” ಎಂದು ಪ್ರಧಾನಿ ನರೇಂದ್ರ ಹೇಳಿದರು. 50 ವರ್ಷಗಳಿಗಿಂತ ಹೆಚ್ಚು ಕಾಲ ಅಂತರರಾಷ್ಟ್ರೀಯ ಸಾಕ್ಷರತಾ ದಿನವು ಎಲ್ಲರಿಗೂ ಸಾಕ್ಷರತೆಯ ಮಹತ್ವದ ಬಗ್ಗೆ ನೆನಪಿಸುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ವಿಶ್ವದ ಮಿಲಿಯನ್ ಜನರಲ್ಲಿ ಸುಮಾರು 733 ಮಿಲಿಯನ್ ಜನರಿಗೆ ಓದಲು ಮತ್ತು ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಯುನೆಸ್ಕೋ ಹೇಳಿದೆ. ನಾವು .. ಸಾಕ್ಷರತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಾಗ, ಸುಧಾರಣೆಯನ್ನು ತೋರಿಸಿದ ಭಾರತೀಯ ರಾಜ್ಯಗಳ ನೋಟ ಇಲ್ಲಿದೆ. ಜನಗಣತಿ…