ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಳಿಗ್ಗೆ ಎದ್ದಾಗ ನೀವ್ ಮಾಡೋ ಕೆಲಸ ನಿಮ್ಮ ದಿನ ಹೇಗಿರುತ್ತೆ ಅಂತ ನಿರ್ಧಾರ ಮಾಡುತ್ತೆ. ಆದ್ರಿಂದ ಒಳ್ಳೆ ಹವ್ಯಾಸಗಳ್ನ ಬೆಳಗ್ಗಿನ ಹೊತ್ತು ರೂಢಿಸಿಕೊಲ್ಲಿ ಹಾಗೂ ಬೇಗ ಎಚ್ಚರಗೊಳ್ಳಿ. ನೀವು ಇಡೀ ದಿನ ಸಂತೋಷವಾಗಿರುತ್ತೀರಿ.
ಕೆಟ್ಟದಾಗಿ ದಿನ ಶುರುವಾದ್ರೆ ದಿನವಿಡೀ ಏನೋ ಸರಿ ಇಲ್ವಲ್ಲ ಅನ್ನೋಹಾಗೆ ಮಾಡುತ್ತೆ. ರಾತ್ರಿ ನಿದ್ದೆ ಸರಿಯಾಗ್ ಆದ್ರೆ ಬೆಳಿಗ್ಗೆ ಹರ್ಷವಾಗಿರ್ತೀವಿ. ನಿದ್ರೆ ತುಂಬ ಅಗತ್ಯ ನಮ್ಗೆ. ವಿಶ್ರಾಂತಿ ನಂತರ ಒಳ್ಳೆ ಅಭ್ಯಾಸ ರೂಢಿಸಿಕೊಂಡ್ರೆ ದಿನವೆಲ್ಲಾ ಹುಮ್ಮಸ್ಸಿಂದ ಇರ್ತೀವಿ. ಹುರುಪಿಂದ ಕೆಲಸ ಮಾಡ್ತೀವಿ. ಆದ್ರಿಂದ ಈ ಅಭ್ಯಾಸಗಳ್ನ ಶುರು ಹಚ್ಕೊಳಿ.
ಮೊಬೈಲ್ನ ಮಲ್ಗೊವಾಗ ಪಕ್ಕದಲ್ಲೇ ಇಟ್ಕೊಂಡ್ರೆ ಬೆಳಿಗ್ಗೆ ಎದ್ದಾಗ ಬೇಡ ಅಂದ್ರೂ ನೋಡ್ಬೇಕು ಅನ್ಸತ್ತೆ ಅಲ್ವಾ. ಅದ್ಕೆ ಒಂದ್ ಸಣ್ಣ ಪುಸ್ತಕನೋ ಸಣ್ಣ ಚೀಟಿಯನ್ನೋ ಇಟ್ಕೊಳಿ. ಅದ್ರಲ್ಲಿ ನಿಮ್ ಗುರಿ, ನಾಳೆ ಮಾಡ್ಬೇಕಾದ ಕೆಲ್ಸಗಳ್ನ ಬರ್ದಿಟ್ಕೊಳಿ. ಇದನ್ನ ಎದ್ದ ತಕ್ಷಣ ನೋಡಿ.
ಬೆಳಿಗ್ಗೆ ಎದ್ದ ತಕ್ಷಣ ತುಂಬಾ ಕೆಲ್ಸ ಇದೆ ಆದ್ರೆ ಎನ್ ಮಾಡ್ಬೇಕು ಅಂತಾನೇ ಗೊತ್ತಾಗ್ತ ಇಲ್ಲ ಅನ್ನೋ ಗೊಂದಲಕ್ಕೆ ಬೀಳ್ದೇ ನೀವ್ ಮಾಡ್ಕೊಂಡಿರೋ ನೋಟ್ಸಗಳ್ನ ನೋಡಿ, ದಿನ ಹೇಗಿರ್ಬೇಕು ಅಂತ ಪ್ಲಾನ್ ಮಾಡ್ಕೊಂಡು ದಿನ ಆರಂಭಿಸಿ.
ಧ್ಯಾನ ಮಾಡೊದ್ರಿಂದ ನಮ್ ಮನಸ್ಸಿಗೆ ಖುಷಿ ಸಿಗತ್ತೆ. ರೀಸರ್ಚ್ ಪ್ರಕಾರ ಧ್ಯಾನ ಮಾಡೊದ್ರಿಂದ ಪಾಸಿಟಿವ್ ಆಗಿರ್ತೀವಿ, ನಮ್ಮಲ್ಲಿರೋ ಕ್ರಿಯೀಟಿವಿಟಿ ಹೊರಬರತ್ತೆ.
ಧ್ಯಾನ ಅಂದ ತಕ್ಷಣ ಅರ್ಧ ಗಂಟೆನೋ ಒಂದ್ ಗಂಟೆನೋ ಕಷ್ಟ ಪಟ್ಟು ಕೂತ್ಕೊಬೇಕಿಲ್ಲ. 5-10 ನಿಮಿಷ ಉಸಿರಾಟ ಗಮನಿಸಿ, ಮನ್ಸನ್ನ ಕೇಂದ್ರಿಕರಿಸಿ, ಸ್ವಲ್ಪ ಹೊತ್ತು ಕೂತಿರಿ ಸಾಕು. ನಿಧಾನವಾಗಿ ಅದು 5-10 ನಿಮಿಷದಿಂದ 15-30 ನಿಮಿಷ ಆಗುತ್ತೆ, ಒಂದ್ ಗಂಟೆನೂ ಆಗ್ಬೋದು.
ಇದೊಂತರ ಧ್ಯಾನದ ತರಾನೇ. ತುಂಬಾನೇ ಪರಿಣಾಮಕಾರಿಯಾದ ವಿಧಾನ. ಆಗೋದಕ್ಕಿಂತ ಮುಂಚೆನೇ ಹೀಗೆ ಆಗ್ಬೇಕು ಇಲ್ಲ ಹೀಗೆ ಆಗ್ಬಿಟ್ರೆ ಅದಕ್ಕೆ ಹೇಗೆ ತಯಾರಿರ್ಬೇಕು ಅನ್ನೋದನ್ನ ಕಲ್ಪನೆ ಮಾಡ್ಕೊಳ್ಳೊದು. ನನ್ನ ದಿನ ಪೂರ್ತಿ ಈ ತರಾನೇ ಇರ್ಬೇಕು ಅನ್ನೋ ಕಲ್ಪನೆ ಮಾಡ್ಕೊಂಡ್ರೆ ಅದೇ ತರ ಇರೋ ಹಾಗೆ ನೀವ್ ಪ್ರಯತ್ನಿಸ್ತೀರ.
ಉದಾಹರ್ಣೆಗೆ ಮಾಡ್ಬೇಕಾಗಿರೋ ಕೆಲ್ಸಾನ ಕಲ್ಪಿಸಿಕೊಳ್ಳಿ, ಹೇಗೆ ನಿರ್ವಹಿಸ್ತೀರ ಅಂತ ಮುಂಚೆನೇ ನಿರ್ಧರಿಸಿ. ಇದು ನಿಮಗೆ ಕೆಲಸದ ಬಗ್ಗೆ ಜವಾಬ್ದಾರಿ ಮೂಡ್ಸತ್ತೆ. ತೊಂದ್ರೆ ಇಲ್ದೇ ಕೆಲ್ಸ ಮಾಡಿ ಮುಗಿಸೋಹಾಗಾಗತ್ತೆ.
ಇಷ್ಟೇ ಸಾಕು ದಿನ ಪೂರ್ತಿ ಪಾಸಿಟಿವ್ ಆಗಿರಕ್ಕೆ. ಇದೇನು ಕಷ್ಟದ ಕೆಲ್ಸ ಅಲ್ಲ, ತುಂಬಾನೇ ಪ್ರಯೋಜವಕಾರಿ ವಿಧಾನ.
ಈ ಹವ್ಯಾಸ ನಿಮ್ ಮನ್ಸಿಗೂ ನಿಮ್ ದೇಹಕ್ಕೂ ಶಕ್ತಿ ಕೊಡೊವಂತದ್ದು. ಬಿಸಿ ಬಿಸಿಯಾದದ್ದು ಕುಡೀರಿ ಅಂದಾಕ್ಷಣ ಕಾಫಿ ಟೀ ಓಕೆ ನಾ ಅಂತೀರಿ ಅಲ್ವಾ? ಯಾವ್ದಾದ್ರೂ ಆಯ್ತು ಪರವಾಗಿಲ್ಲ ಬಿಸಿ ಬಿಸಿ ಇದ್ರೆ ಸಾಕು. ಪ್ರತಿ ಗುಟುಕು ಕುಡಿಯೋವಾಗ ಅದ್ನ ಆನಂದಿಸಿ. ಬಿಸಿ ಬಿಸಿಯಾಗಿರೋದ್ರಿಂದ ಅದು ಹೊಟ್ಟೆಗೆ ಹೋಗೋದನ್ನ ಗಮನಿಸ್ಬೋದು, ಈ ಅನುಭವನ ಆಸ್ವಾದಿಸಿ.
ಬೆಳಗ್ಗೆ ಹಾಸಿಗೆ ಬಿಟ್ಟು ಬರಕ್ಕೆ ಯಾರ್ಗೂ ಮನಸ್ಸಿರಲ್ಲ. ತುಂಬ ಬೇಜಾರ್ ಮಾಡ್ಕೊಂಡು ಯಾರ್ದೋ ಕಷ್ಟಕ್ಕೆ ಏಳ್ತೀವಿ. ಒಂಚೂರ್ ಮನಸ್ಸು ಮಾಡಿ… ಬಲ್ಗಡೆಗೆ ಹೊರ್ಳಿ ಎದ್ದು ಕೂತ್ಕಳಿ. ನಿಧಾನವಾಗಿ ಎರಡೂ ಕಾಲನ್ನ ನೆಲದ ಮೇಲೆ ಇಟ್ಟು ನೇರವಾಗಿ ನಿಂತ್ಕೊಳ್ಳಿ. ಇದ್ರಿಂದ ನಿಮ್ಮ ಹೃದಯ ಮತ್ತೆ ಬೆನ್ನಿಗೆ ಒಳ್ಳೇದು.
ಬೆಳಿಗ್ಗಿನ ತಿಂಡಿ ಅನ್ನೋದು ನಿಮ್ ದಿನದ ಅತೀ ಮುಖ್ಯವಾದ ಆಹಾರ. ವಿಪರ್ಯಾಸ ಅಂದ್ರೆ ತುಂಬಾ ಜನ್ರು ಕಾಲೇಜು ಆಫಿಸಿಗೆ ಹೋಗೋ ಆತ್ರದಲ್ಲಿ ತಿಂಡಿನ ತಿನ್ನದೇ ಇಲ್ಲ. ಟಿಂಡಿ ದಿನ ಪೂರ್ತಿ ಕೆಲ್ಸ ಮಾಡಕ್ಕೆ ಶಕ್ತಿ ಕೊಡುತ್ತೆ, ಚೈತನ್ಯದಿಂದ ಇರ್ಲಿಕ್ಕೆ ಸಹಾಯ ಮಾಡತ್ತೆ. ಅದಿಕ್ಕೆ ಇನ್ಮೇಲೆ ತಿಂಡಿ ತಿನ್ನದ್ ಮಿಸ್ ಮಾಡ್ಬೇಡಿ.
ಇನ್ಮೇಲೆ ಆದರೂ ಎದ್ದಾಗ ಈ ತರದ ಅಭ್ಯಾಸಗಳನ್ನು ಶುರು ಹಚ್ಕೊಳ್ಳಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿದ್ದ ಬಾರ್ಬಿ ಡಾಲ್ ನಿವೇದಿತಾ ಗೌಡ ತನ್ನ ಆತ್ಮೀಯ ಗೆಳೆಯ ರ್ಯಾಪರ್ ಚಂದನ್ ಶೆಟ್ಟಿಗೆ ಕಾಫಿ ಮಗ್ ಮೂಲಕ ತಮ್ಮ ಮನದ ಮಾತನ್ನು ಹೇಳಿದ್ದಾರೆ. ನಿವೇದಿತಾ ತಮ್ಮ ಗೆಳೆಯ ಚಂದನ್ ಅವರಿಗೆ ಒಂದು ಕಾಫಿ ಮಗ್ ನೀಡಿದ್ದಾರೆ. ಆ ಕಾಫಿ ಮಗ್ ಮೇಲೆ “ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ನನ್ನ ಪಕ್ಕದಲ್ಲೇ ಇರಬೇಕು ಎಂದು ನಾನು ಬಯಸುತ್ತೇನೆ. ಇಂತಿ ನಿನ್ನ ಪ್ರೀತಿಯ ನಿವಿ” ಎಂದು ಬರೆದು ಅದನ್ನು ಚಂದನ್ಗೆ…
ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಾಗಲೇ ಆರಂಭವಾಗಿವೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೆಚ್ಚಿನ ಹೋಂವರ್ಕ್ ನೀಡಲಾಗುತ್ತಿದೆ. ಇದು ಪಾಲಕ, ಪೋಷಕರಿಗೆ ನೇರ ಹೊರೆಯಾಗಲಿದೆ. ಅಲ್ಲದೆ, ಈ ಮಕ್ಕಳ ಹೋಂ ವರ್ಕ್ನ್ನು ಮನೆಯಲ್ಲಿ ಪಾಲಕ, ಪೋಷಕರೇ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ…
ಹಾಸ್ಟೆಲ್ನಲ್ಲಿ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಯುವಕನೊಬ್ಬ ಪೈಪ್ ಲೈನ್ ಹತ್ತಿ ಬಂದು ಸಿಕ್ಕಿಬಿದ್ದಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ. ಮಧ್ಯಪ್ರದೇಶದ ಭೋಪಾಲ್ ಎಂ.ಪಿ.ನಗರದ ಬಾಲಕಿಯರ ಹಾಸ್ಟೆಲ್ನಲ್ಲಿ ಈ ಘಟನೆ ನಡೆದಿದೆ. ಅಮನ್ ಕುಮಾರ್ ಬಂಧಿತ ಆರೋಪಿ. ಹಾಸ್ಟೆಲ್ ಎರಡನೇ ಮಹಡಿಯಲ್ಲಿದ್ದು, ಕೆಳಗಿನ ಮಹಡಿಯಲ್ಲಿ ಒಂದು ಅಂಗಡಿಯಿದೆ. ಈ ಅಂಗಡಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದನು. ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಬಾಲಕಿಯರ ಹಾಸ್ಟೆಲ್ ಇದ್ದುದರಿಂದ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಹೋಗಿದ್ದಾನೆ. ಈ ವೇಳೆ ಹುಡುಗಿಯೊಬ್ಬಳ ಕೈಗೆ ಯುವಕ…
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whapp ಮೇಷ ರಾಶಿ ನಿಮ್ಮ…
ಇಂದು ಶನಿವಾರ, 10/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಲಿಕವಾಗಿ ನೀರಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ತಮ್ಮ ಕಳವಳವನ್ನು ಹೊರಹಾಕಿದ್ದಾರೆ.ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ನೀರಿನ ಸಮಸ್ಯೆಯಾಗಿದೆ. ಘಟ್ಟದ ಭಾಗದಲ್ಲಿ ಮಳೆಯಾಗದ ಕಾರಣ ನೇತ್ರಾವತಿಯಲ್ಲಿ ನೀರಿಲ್ಲ. ಅಲ್ಲದೆ ಹವಾಮಾನ ಇಲಾಖೆ ಇನ್ನೂ ಹತ್ತು ದಿನ ಮಳೆ ಬರಲ್ಲ ಎಂದು ಸೂಚನೆ ಕೊಟ್ಟಿದೆ. ಹೀಗಾಗಿ ಕ್ಷೇತ್ರ ದರ್ಶನ ಮುಂದೂಡಿ…