ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಣದ್ರಾಕ್ಷಿ ಎಂದರೆ ಒಣಗಿಸಿದ ದ್ರಾಕ್ಷಿ. ಒಣದ್ರಾಕ್ಷಿಯನ್ನು ವಿಶ್ವದ ಹಲವು ಪ್ರದೇಶಗಳಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಅಡುಗೆ, ಬೇಕಿಂಗ್ ಮತ್ತು ಮದ್ಯ ತಯಾರಿಕೆಯಲ್ಲಿ ಬಳಸಬಹುದು.

ಪ್ರಯೋಜನಗಳು:-
ಕೆಮ್ಮು, ಕಫ ನಿವಾರಣೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ, ಶುಂಠಿ, ಕಾಳುಮೆಣಸಿನ ಕಷಾಯದಲ್ಲಿ 3-4 ಒಣದ್ರಾಕ್ಷಿಯನ್ನು ಜಜ್ಜಿ ಹಾಕಬೇಕು. ಆಗಾಗ ಹುಳಿ ದ್ರಾಕ್ಷಿಯನ್ನು ತಿನ್ನುತ್ತಿದ್ದರೆ ಹೊಟ್ಟೆಯ ಉರಿ, ಆಹಾರ ಪಚನವಾಗದ ಸಮಸ್ಯೆ ದೂರವಾಗುತ್ತದೆ. 2 ಚಮಚ ಒಣದ್ರಾಕ್ಷಿಯನ್ನು 1 ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ ಆ ನೀರನ್ನು ತಣಿಸಿ ಕುಡಿದರೆ ಹಸಿವೆ ಇಲ್ಲದಿರುವ ಸಮಸ್ಯೆ ದೂರವಾಗುತ್ತದೆ. ಅಲ್ಸರ್ ನಿಂದ ಬಳಲುವವರು 1 ಬಟ್ಟಲು ದ್ರಾಕ್ಷಾರಸವನ್ನು ದಿನಕ್ಕೆರಡು ಬಾರಿ ಕುಡಿಯುವುದರಿಂದ ಪ್ರಯೋಜನವಾಗುತ್ತದೆ.

ಅರ್ಧ ಬಟ್ಟಲು ನೀರಿನಲ್ಲಿ 2 ಚಮಚೆ ಒಣದ್ರಾಕ್ಷಿಯನ್ನು 1 ಗಂಟೆ ಕಾಲ ನೆನೆಸಿಟ್ಟು ನಂತರ ದ್ರಾಕ್ಷಿಯನ್ನು ಚೆನ್ನಾಗಿ ಅಗಿದು ತಿಂದರೆ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ ಇದನ್ನು ದಿನಕ್ಕೆರಡು ಸಲ ಮಾಡಬೇಕು. ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಪ್ರತಿನಿತ್ಯ ಸೇವಿಸುತ್ತಿದ್ದರೆ ಮಿದುಳು ಚುರುಕಾಗಿರುತ್ತದೆ, ಮಾನಸಿಕ ಶಕ್ತಿ ಹೆಚ್ಚುತ್ತದೆ.

ಪ್ರತಿ ದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನಾಲ್ಕೈದು ಒಣದ್ರಾಕ್ಷಿಯನ್ನು ತಿನ್ನುವುದರಿಂದ ನಿಶ್ಯಕ್ತಿ, ದೈಹಿಕ ದೌರ್ಬಲ್ಯ ದೂರವಾಗುತ್ತದೆ. ಪಿತ್ತಕೋಶದ ಸಮಸ್ಯೆ , ಕಾಮಾಲೆಯಂತಹ ಸಮಸ್ಯೆ ಇದ್ದಾಗ ಪ್ರತಿನಿತ್ಯ ದ್ರಾಕ್ಷಾರಸವನ್ನು ಕುಡಿಯಬೇಕು.
ದೇಹಕ್ಕೆ ಪುಷ್ಠಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಮುಂಜಾನೆ 4-5 ಒಣದ್ರಾಕ್ಷಿ ಮತ್ತು 2-3 ಬಾದಾಮಿಯನ್ನು ಚೆನ್ನಾಗಿ ಅಗಿದು ತಿನ್ನಬೇಕು.
ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನಸಿ ನಂತರ ಅದೇ ಹಾಲಲ್ಲಿ ಅರೆದು ಚಿಕ್ಕಮಕ್ಕಳಿಗೆ ಪ್ರತಿನಿತ್ಯ ತಿನ್ನಿಸಿದರೆ ಮಕ್ಕಳು ದೃಡಕಾಯರಾಗಿ ಬೆಳೆಯುತ್ತಾರೆ.
1 ಲೋಟ ಹಾಲಿನಲ್ಲಿ1 ಚಮಚ ಒಣದ್ರಾಕ್ಷಿಯನ್ನು ಸೆರಿಸಿ ಬೇಯಿಸಿ ದಿನಕ್ಕೆರಡು ಬಾರಿ ತಿನ್ನಬೇಕು ಇದರಿಂದ ಕಣ್ಣಿನ ಸಮಸ್ಯೆ ದೂರವಾಗುವುದಲ್ಲದೆ ದೃಷ್ಠಿ ಶಕ್ತಿ ಚುರುಕಾಗುತ್ತದೆ.

ಹಾಲಲ್ಲಿ ಒಣದ್ರಾಕ್ಷಿಯನ್ನು ಅರೆದು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಮುಖ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
1 ಚಮಚ ಒಣದ್ರಾಕ್ಷಿ 2 ಒಣ ಅಂಜೂರವನ್ನು 1ಲೋಟ ಹಾಲಿನಲ್ಲಿ ಬೇಯಿಸಿ ಹಣ್ಣನ್ನು ತಿಂದು ಆ ಹಾಲನ್ನು ಕುಡಿದರೆ ಕಣ್ಣಿನ ದೃಷ್ಠಿಶಕ್ತಿ ಹೆಚ್ಚುತ್ತದೆ, ಇದನ್ನು ಪ್ರತಿ ನಿತ್ಯ ಮಾಡಿದರೆ ಕಣ್ಣಿನ ಆರೋಗ್ಯ ಹೆಚ್ಚುತ್ತದೆ.
ಒಣ ಕೆಮ್ಮು ಕಾಡುತ್ತಿರುವಾಗ 3 ಚಮಚೆ ಒಣದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ತಿನ್ನಬೇಕು ರಕ್ತದ ಒತ್ತಡ ಇರುವವರು ಪ್ರತಿನಿತ್ಯ ದ್ರಾಕ್ಷಾರಸ ಕುಡಿಯುವುದರಿಂದ ರಕ್ತದ ಒತ್ತಡದ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು.
ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ರಾತ್ರಿ ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನಸಿಟ್ಟು ಬೆಳ್ಳಿಗೆ ಹಾಲಿನೊಂದಿಗೆ ಸೇವಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.

2 ಚಮಚೆಯಷ್ಟು ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು ಬೆಳ್ಳಿಗೆ ಸೇವಿಸುವುದರಿಂದ ಎದೆ ಉರಿ, ಮಲಬದ್ದತೆ, ರಕ್ತಹೀನತೆ ಪರಿಹಾರವಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಗ್ ಬಾಸ್ ಸೀಸನ್-7ರಲ್ಲಿ ಡ್ಯಾನ್ಸರ್ ಕಿಶನ್ ಸ್ಪರ್ಧಿ ಚಂದನಾರಿಗೆ ಮುತ್ತು ನೀಡಿದ್ದಾರೆ. ಮುತ್ತು ನೀಡಿದ್ದ ಕಿಶನ್ಗೆ ಡೈರೆಕ್ಟ್ ನಾಮಿನೇಟ್ ಮಾಡುವ ಮೂಲಕ ಚಂದನಾ ಶಾಕ್ ಕೊಟ್ಟಿದ್ದಾರೆ. ಸೋಮವಾರ ಡೈನಿಂಗ್ ಏರಿಯಾದಲ್ಲಿ ವಾಸುಕಿ, ದೀಪಿಕಾ, ಚೈತ್ರಾ ಕೊಟ್ಟೂರು ಹಾಗೂ ಶೈನ್ ಶೆಟ್ಟಿ ಕುಳಿತಿರುತ್ತಾರೆ. ಈ ವೇಳೆ ಚಂದನಾ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಿಶನ್ ಹಾಗೂ ಚೈತ್ರಾರ ರೊಮ್ಯಾಂಟಿಕ್ ದೃಶ್ಯ ಸೆರೆ ಹಿಡಿಯುತ್ತಿದ್ದರು. ಆಗ ವಾಸುಕಿ, ಕಿಶನ್ ಅವರನ್ನು ಕರೆದು ಚಂದನಾರಿಗೆ ಮುತ್ತು ನೀಡುವಂತೆ ಹೇಳುತ್ತಾರೆ. ವಾಸುಕಿ ಮಾತನ್ನು ಕೇಳಿ ಕಿಶನ್,…
ಸಾಮಾನ್ಯವಾಗಿ ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ.
ಪ್ರಪಂಚದಲ್ಲಿನ ದೇಶಗಳು ಈ ಮಾಡ್ರನ್ ಟ್ರಾನ್ಸ್ಪೋರ್ಟೆಷನ್ ಮೇಲೆ ಇಂಟರೆಸ್ಟನ್ನ ತೋರಿಸುತ್ತಾರೆ. ಇದರಲ್ಲಿ ಟೆಕ್ನಾಲಜಿ ಕೂಡ ಬೆಳೆಯುತ್ತಿರುವುದರಿಂದ ಟ್ರಾನ್ಸ್ಪೋರ್ಟೆಷನ್ ಎಲ್ಲಾ ದೇಶಗಳಲ್ಲಿ ಇಂಪ್ರೂವ್ ಆಗುತ್ತಿದೆ. ಇದರಿಂದ ಭಾರತ ಕೂಡ ಹೊಸ ಹೊಸ ಟ್ರಾನ್ಸ್ಪೋರ್ಟೆಷನ್ ಪದ್ಧತಿಯನ್ನು ಕಂಡುಹಿಡಿಯುತ್ತಲೇ ಇದೆ. ಆದರೆ ಯುನೈಟೆಡ್ ಎಮಿರೇಟ್ಸ್ ದುಬೈಯಿಂದ ಮುಂಬೈವರೆಗೂ ಒಂದು ಹೈ ಸ್ಪೀಡ್ ಅಂಡರ್ವಾಟರ್ ರೈಲ್ವೇ ನೆಟ್ವರ್ಕನ್ನ ಬಿಲ್ಡ್ ಮಾಡಬೇಕೆಂಬ ಆಲೋಚನೆಯಲ್ಲಿ ಇದೆ. ಅಂದರೆ ಸಮುದ್ರದಲ್ಲಿ ಪ್ರಯಾಣಿಸುವ ರೈಲನ್ನ ನಿರ್ಮಿಸಬೇಕೆಂಬ ಆಲೋಚನೆ ಇದೆ.ಇದರಿಂದ ಟ್ರೈನ್ UAE ನಲ್ಲಿನ ಫುಜಿ಼ರಾ ನಗರದಿಂದ ಭಾರತದಲ್ಲಿನ ಮುಂಬೈವರೆಗೆ…
‘ರಾಧಾರಮಣ’ ಧಾರಾವಾಹಿಯಲ್ಲಿ ಸಿತಾರಾ ದೇವಿ ಆಗಿ ಅಭಿನಯಿಸುತ್ತಿದ್ದ ಸುಜಾತ ನಿಜ ಜೀವನದಲ್ಲಿ ‘ವಿಲನ್’ಅಲ್ಲ. ಆಕೆ ಅನ್ನಪೂರ್ಣೇಶ್ವರಿ ಅಂತೆಲ್ಲಾ ‘ಅಗ್ನಿಸಾಕ್ಷಿ’ ಚಂದ್ರಿಕಾ ಖ್ಯಾತಿಯ ಪ್ರಿಯಾಂಕಾ ಹಾಡಿ ಹೊಗಳುತ್ತಿದ್ದರು. ಯಾಕಂದ್ರೆ, ಅಡುಗೆ ಮನೆಯ ನೇತೃತ್ವ ವಹಿಸಿಕೊಂಡಿದ್ದ ಸುಜಾತಾ ರುಚಿರುಚಿಯಾಗಿ ಮಾಡುತ್ತಿದ್ದ ಅಡುಗೆ ಪ್ರಿಯಾಂಕಾಗೆ ಇಷ್ಟ ಆಗಿತ್ತು. ಮೊದಲವಾರ ಸುಜಾತ ಜೊತೆ ಕ್ಲೋಸ್ ಆಗಿದ್ದವರು ಪ್ರಿಯಾಂಕಾ. ಇದೀಗ ಅದೇ ಪ್ರಿಯಾಂಕಾ ಎರಡನೇ ವಾರದ ನಾಮಿನೇಷನ್ ನಲ್ಲಿ ಸುಜಾತಾರನ್ನ ಟಾರ್ಗೆಟ್ ಮಾಡಿದ್ದಾರೆ.ಅವಶ್ಯಕತೆ ಇಲ್ಲದೇ ಇದ್ದರೂ ಸುಜಾತಾ ಕೂಗಾಡಿದ್ರಂತೆ. ಇದನ್ನೇ ನೆಪ ಮಾಡಿಕೊಂಡು ಸುಜಾತಾ…
ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಸುದ್ದಿ ಕೇಳಿ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಬಂದಿದ್ದಾರೆ. ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ,”ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದರು. ಬಹುಶಃ ದರ್ಶನ್ ಅವರು ಭಯ ಪಡುವ…
ಭಾನುವಾರ, 8/4/2018, ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು : 9663542672 ಸೂರ್ಯೋದಯ : 06:14 ಸೂರ್ಯಾಸ್ತ : 18:43 ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ ಸಂವತ್ಸರ (ಉತ್ತರ):ವಿರೋಧಿಕೃತ್ ಪಕ್ಷ : ಕೃಷ್ಣ ಪಕ್ಷ ತಿಥಿ : ಸಪ್ತಮಿ ನಕ್ಷತ್ರ : ಪೂರ್ವಷಾಡ…