ಪ್ರೇಮ

ಆಕೆ ನನಗೆ ಸ್ವಲ್ಪ ಉಸಿರಾಟದ ತೊಂದರೆಯಾಗಿದೆ ಎಂದಳು – ಒಂದು ಪ್ರೆಮ ಕಥೆ 2 ನಿಮಿಷ ಸಮಯ ವಿದ್ದರೆ ಓದಿ

424
ನನ್ನ ಕಥೆ

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದಾಗ ರಾತ್ರಿ 12 ಗಂಟೆ. ಬೆಂಗಳೂರಿಗೆ ನನ್ನ ಪ್ರಯಾಣದ ವಿಮಾನ ಇದ್ದದ್ದು ಮಧ್ಯರಾತ್ರಿ 2 ಗಂಟೆಗೆ. ಅದು ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟು ದುಬೈ ಮುಖಾಂತರ ದೆಹಲಿ ತಲುಪಿ ಅಲ್ಲಿಂದ ಬೆಂಗಳೂರಿಗೆ ಹೊರಡುತ್ತದೆ. ಸಾಮಾನ್ಯವಾಗಿ ಯಾವಾಗಲೂ ನನ್ನ ಆಯ್ಕೆ ಅದೇ ಆಗಿರುತ್ತಿತ್ತು.
ಇಡೀ ದಿನದ ಕೆಲಸದ ಒತ್ತಡದಿಂದ ತುಂಬಾ ಆಯಾಸವಾಗಿ ನಿದ್ರೆ ಬರುತ್ತಿತ್ತು. ಅದನ್ನು ತಡೆಯಲು ಅಲ್ಲಿಯೇ ಇದ್ದ COFFEE DAY ಯಲ್ಲಿ ನನ್ನ ಇಷ್ಟದ MEXICAN COFFEE ಕುಡಿಯುತ್ತಾ ಕುಳಿತೆ. WATSAPP OPEN ಮಾಡಿ ಕೆಲವು ಸ್ನೇಹಿತರಿಗೆ ಸಂದೇಶ ಕಳುಹಿಸಿ ಬೇಕಂತಲೇ ಅವರ ನಿದ್ರೆಗೆ ಭಂಗ ಮಾಡಿ ಗೋಳಾಡಿಸಿದೆ.
ವಿಮಾನ ಸರಿಯಾದ ಸಮಯಕ್ಕೆ ಬಂದಿತು.EMIRATES ನ ಆ ಬೃಹತ್ ಅಂತರರಾಷ್ಟ್ರೀಯ ವಿಮಾನದಲ್ಲಿ ದೆಹಲಿಯ ಪ್ರಯಾಣಿಕರೇ ಹೆಚ್ಚಿಗೆ ಇದ್ದು ಬಹುತೇಕರು ಅಲ್ಲಿಯೇ ಇಳಿದರು. ಕೇವಲ 60 ಜನ ಮಾತ್ರ ಬೆಂಗಳೂರಿನತ್ತ ಹೊರಟೆವು. ಆರಾಮವಾಗಿ ಖಾಲಿ ಇದ್ದ ಸೀಟಿನಲ್ಲಿ ಕುಳಿತು ನಿದ್ರೆಗೆ ಜಾರಿದೆ. ಬೆಂಗಳೂರಿಗೆ ಸುಮಾರು 2 ಗಂಟೆ 20 ನಿಮಿಷದಷ್ಡು ಪ್ರಯಾಣ.
ವಿಮಾನ TAKE OFF ಆಗಿ 20 ನಿಮಿಷವೂ ಆಗಿರಲಿಲ್ಲ. ನನ್ನ ಮುಂದಿನ ಸೀಟಿನಿಂದ ಒಂದು ಹೆಣ್ಣು ಧ್ವನಿ UNEASINESS ನಿಂದ ನರಳುತ್ತಿರುವುದು ಕೇಳಿಸಿತು. ತಕ್ಷಣ ಎದ್ದು ನನ್ನಿ೦ದ ಏನಾದರೂ ಸಹಾಯ ಬೇಕೆ ಎಂದು ಕೇಳಿದೆ. ಆಕೆ ನನಗೆ ಸ್ವಲ್ಪ ಉಸಿರಾಟದ ತೊಂದರೆಯಾಗಿದೆ ಎಂದಳು. ನಾನು ಅಲ್ಲಿನ ಪರಿಚಾರಕಿಯರಿಗೆ ಹೇಳಬೇಕು ಎನ್ನುವಷ್ಟರಲ್ಲಿ ನಾನು ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಅಲ್ಲಿನ ಎಸಿಯ ತೊಂದರೆಗಾಗಿ ಇರಲಿ ಎಂದು OTRIVIN ADULT NOSE DROPS

ತಗೆದುಕೊಂಡು ಹೋಗಿರುತ್ತೇನೆ. ಈಗ ಅದರ ನೆನಪಾಗಿ ಬ್ಯಾಗಿನಿಂದ ಅದನ್ನು ತೆಗೆದುಕೊಟ್ಟೆ. ಆಕೆ ಅದನ್ನು ಉಪಯೋಗಿಸಿದ ಕೆಲ ನಿಮಿಷಗಳಲ್ಲೇ ನಿರಾಳ ಉಸಿರಾಟ ಸಾಧ್ಯವಾಯಿತು. ಆಕೆ ಅತಿ ಎನಿಸುವಷ್ಟು ಕೃತಜ್ಙತೆ ಅರ್ಪಿಸಿದಳು.

ಸಮೃದ್ಧಿ

ಸಮಸ್ಯೆ ಪ್ರಾರಂಭವಾಗಿದ್ದು ಇಲ್ಲಿಂದಲೇ. ಆಕೆಯ ಸುಮಧುರ ಧ್ವನಿ ಆಕರ್ಷಕ ರೂಪ ಮಲ್ಲಿಗೆ ಹೂವಿನಂತ ನಗು ಸೌಮ್ಯತೆಯ ಮಾತಿನ ಮೋಡಿಗೆ ನನ್ನ ನಿದ್ರೆ ಹಾರಿ ಹೋಗಿತ್ತು. ಕನಸಿನ ಕನ್ಯೆ ಧರೆಗಿಳಿದು ಬಂದಂತ ಸೌಂದರ್ಯ ಅವಳಲ್ಲಿ ತುಂಬಿತ್ತು. ನೀಲಿ ಜೀನ್ಸ್ ಸ್ಕರ್ಟ್, ಸ್ಲೀವ್ ಲೆಸ್ MILK WHITE T SHIRT ತೊಟ್ಡಿದ್ದ ಆಕೆ CURLY HAIR ನಿಂದಾಗಿ ನನಗೆ ಸಾಕ್ಷಾತ್ ಮರ್ಲಿನ ಮೆನ್ರೋ ತರ ಕಾಣುತ್ತಿದ್ದಳು.
ಒಂದಷ್ಡು ಸಂಕೋಚ ಸ್ವಭಾವದ ನಾನು ನಾಚಿಕೆಯಿಂದಲೇ ಆಕೆಯೊಂದಿಗೆ ಮಾತಿಗಿಳಿದೆ.
ಆಕೆಯ ಹೆಸರು ಸಮೃದ್ಧಿ. ಬೆಂಗಳೂರಿನವರು..ಇಂಗ್ಲೆಂಡಿನ OXFORD SCHOOL OF ECONOMICS ನಲ್ಲಿ GRADUATION ಮಾಡಿ ಈಗತಾನೆ ಅಲ್ಲಿಂದ CONVOCATION CERTIFICATE ಪಡೆದು ನೇರ ಬೆಂಗಳೂರಿನ ಅವಳ ಮನೆಗೆ ಹೊರಟಿದ್ದಳು. ಆಕೆಯ ಅಪ್ಪ ನಿವೃತ್ತ ಕರ್ನಲ್. ಅಮ್ಮ GYNOCALOGIST. ಮನೆ ಜೆ ಪಿ ನಗರದಲ್ಲಿ. ಮುಂದೆ ಬೆಂಗಳೂರಿನಲ್ಲಿಯೇ SERVICE ORIENTED BUSINESS ಮಾಡಬೇಕೆಂಬ ಯೋಜನೆಯಿದೆ.
ನನ್ನನ್ನು ಸಣ್ಣದಾಗಿ ಪರಿಚಯಿಸಿಕೊಂಡೆ. LANDINGS ANNOUNCEMENT ಬಂದಾಗಲೇ ನಾನು ಈ ಲೋಕಕ್ಕೆ ಬಂದದ್ದು. ವಿಮಾನದ ಪೈಲೆಟ್ ಏನಾದರೂ ನನ್ನ ಸ್ನೇಹಿತನಾಗಿದ್ದಿದ್ದರೆ ಏನೋ ಒಂದು ನೆಪ ಹೇಳಿ ವಿಮಾನವನ್ನು ಮತ್ತೆ ದೆಹಲಿಗೇ ತಿರುಗಿಸು ಎಂದೇಳುತ್ತಿದ್ದೆ. ಅಷ್ಟರ ಮಟ್ಟಿಗೆ ಆಕೆಯ ಮೋಹಕ್ಕೆ ಒಳಗಾಗಿದ್ದೆ.
ಇಬ್ಬರೂ ಒಟ್ಟಿಗೆ ಕೆಳಗಿಳಿದು BAGGAGE COUNTER ಗೆ ಕಾಯುತ್ತಾ ನಿಂತಿರುವಾಗ ಆಕೆ ಕೇಳಿದಳು ನೀವು ಇರುವುದೆಲ್ಲಿ. ನಾನು R T NAGAR. ಎಂದು ಹೇಳಿದೆ. ಹೇಗೆ ಹೋಗುವಿರಿ ಕೇಳಿದಳು. TAXI ಎಂದೆ. ಬೇಡ ನನಗೆ ಅಪ್ಪಾ ಅವರ ಸಹಾಯಕನ ಜೊತೆ ಕಾರು ಕಳಿಸಿದ್ದಾರೆ. ಹೇಗೂ ನಾನು ಹಾಗೆಯೇ ಹೋಗಬೇಕು DROP ಮಾಡುತ್ತೇನೆ ಎಂದಳು. ನಾನು ಸೌಜನ್ಯಕ್ಕೂ ಬೇಡ ಎನ್ನದೆ ಒಪ್ಪಿಕೊ೦ಡೆ.
ನಾವು ಹೊರಗೆ ಬರುತ್ತಿದ್ದಂತೆ ಆಕೆಯ ಕಾರು ನಮ್ಮ ಮುಂದೆ ನಿಂತಿತು. ಬೆಳಗಿನ ಸಮಯದಲ್ಲಿ AIRPORT ನಿಂದ ನನ್ನ ಮನೆ ತಲುಪಲು ಸುಮಾರು 30 ನಿಮಿಷ ಬೇಕಾಗುತ್ತದೆ. ಆ ಸಮಯದಲ್ಲಿ ನಮ್ಮ ನಡುವೆ ಫೋನ್ ನಂಬರ್ WATSAPP, FACEBOOK MAIL ID ಎಲ್ಲಾ ವಿನಿಮಯವಾಯಿತು. ಬೇಡವೆಂದರೂ ಮನೆಯ ಹತ್ತಿರವೇ ಕಾರು ನಿಲ್ಲಿಸಿ, ಕೆಳಗಿಳಿದು SHAKE HAND ಮಾಡಿ ಮೊನಲಿಸಾಳಂತೆ ಒಂದು ಸುಂದರ ನಗು ಬಿಸಾಡಿ ಟಾಟಾ ಮಾಡುತ್ತಾ ಹೊರಟು ಹೋದಳು.
ಮನಸ್ಸು ಒದ್ದಾಡತೊಡಗಿತು. ಮನೆಯಲ್ಲಿ ಸ್ವಲ್ಪ ನಿದ್ದೆ ಮಾಡೋಣ ಎಂದು ಮಲಗಿದೆ. ನಿದ್ದೆ ಹತ್ತಿರ ಸುಳಿಯಲಿಲ್ಲ. ಏನೋ ಒಂಥರ ಚೇತೋಹಾರಿ. ಎದ್ದು ಎಂದಿನಂತೆ GYM ಗೆ ಹೊರಟೆ. CORDIO ಮಾಡಲು TRED MILL ಮೇಲೆ ಓಡತೊಡಗಿದೆ. ಸಾಮಾನ್ಯವಾಗಿ ಪ್ರತಿದಿನ ಗಂಟೆಗೆ 12 ಕಿ.ಮೀ ವೇಗದಲ್ಲಿ 45/50 ನಿಮಿಷ ಓಡುತ್ತೇನೆ. ಇಂದು 5 ನಿಮಿಷವೂ ಸಾಧ್ಯವಾಗಲಿಲ್ಲ. ಕೆಳಗಿಳಿದು WEIGHT LIFT ಮಾಡಲು ಮುಂದಾದೆ. ಶಕ್ತಿಯೇ ಇರಲಿಲ್ಲ. ಮನಸ್ಸಿನ ತುಂಬಾ ಸಮೃಧ್ಧಿಯೇ ತುಂಬಿಕೊಂಡಿದ್ದಳು. GYM INSTRUCTOR ಗೆ ಏನೋ ನೆಪ ಹೇಳಿ ಮನೆಗೆ ವಾಪಸ್ ಬಂದೆ.
OFFICE ಗೆ ರೆಡಿಯಾಗಲು BATH ROOM ಹೊಕ್ಕೆ. ಅಲ್ಲಿರುವ FM RADIO ದಲ್ಲಿ ರಾಜ್ ಕುಮಾರ್ ಅವರ ಚಿತ್ರದ “ಆಗುಂಬೆಯಾ ಪ್ರೇಮ ಸಂಜೆಯಾ ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೇ ” ಹಾಡು ಬರುತ್ತಿತ್ತು. ಅದನ್ನು ಆಸ್ವಾದಿಸುತ್ತಾ ಎಂದಿನ 20 ನಿಮಿಷದ ಸ್ನಾನಕ್ಕೆ ಬದಲು BATH TUB ನಲ್ಲಿ ಖುಷಿ ಖುಷಿಯಾಗಿ ಒಂದು ಗಂಟೆ ಕಳೆದೆ.
ಮತ್ತೆ ರೆಡಿಯಾಗಿ BREAKFAST TABLE ಗೆ ಬರುವಷ್ಟರಲ್ಲಿ ಗುರುವಾರದ TIMETABLE ನಂತೆ ಅಮೆರಿಕನ್ ಶೈಲಿಯ BREAD – OMLET – CORNFLEX – FRUIT SALAD ಮತ್ತು AFRICAN TEA ಸಿದ್ದವಿತ್ತು. ಆದರೂ ತಿನ್ನುವ ಮನಸ್ಸಾಗಲಿಲ್ಲ. ಒಂದೆರಡು APPLE AND GRAPES ಪೀಸ್ ಬಾಯಿಗೆ ಹಾಕಿಕೊಂಡು ಅಷ್ಟರಲೇ ಮುಗಿಸಿ ನಾನೇ ಕಾರ್ ಡ್ರೈವ್ ಮಾಡಿಕೊಂಡು OFFICE ಗೆ ಹೊರಟೆ.
TRAFFIC ದಿನವೂ IRRITATE ಮಾಡುತ್ತಿತ್ತು. ಆದರೆ ಇವತ್ತು ಅಸಹನೆ ಮೂಡಲೇ ಇಲ್ಲ. ಕಾರಿನ ಗ್ಲಾಸ್ ಕ್ಲೋಸ್ ಮಾಡಿ ಸಮೃಧ್ಧಿಯ ನೆನಪಿನಲ್ಲೇ ಸಾಗುತ್ತಿದ್ದೆ. FM ON ಮಾಡಿದೆ. ಯಾವುದೋ ಸಿನಿಮಾದ ಹಾಡು ” ಒಪ್ಕೊಂಡ್ ಬಿಟ್ಲು ಕಂಡ್ಲ ಪ್ರೀತಿ ಮಾಡೋಕೆ ” ಬರುತ್ತಿತ್ತು. ಅದರ ಜೊತೆಗೆ ಹಾಡುತ್ತಾ ಒಳಗೊಳಗೆ ಹುಚ್ಚನಂತೆ ಒಬ್ಬನೇ ನಗುತ್ತಾ OFFICE ತಲುಪಿದೆ.
ನನ್ನ ಕ್ಯಾಬಿನ್ ನಲ್ಲಿ ಕುಳಿತು ಮಾಡಿದ ಮೊದಲ ಕೆಲಸವೆಂದರೆ ಆಕೆಗೆ FACEBOOK FRIEND REQUEST ಕಳಿಸಿದ್ದು. ಆಮೇಲೆ WATSAPP CONNECT ಮಾಡಿ ಒಂದು ಪ್ರೀತಿಯ QUOTE ಇದ್ದ BEAUTIFUL GOOD MORNING MESSAGE ಕಳುಹಿಸಿದೆ.
ಅಷ್ಟರಲ್ಲಿ OFFICE ಸಹಾಯಕಿ ತಂದಿಟ್ಟ ಅರೇಬಿಯನ್ ಟೀ ಕುಡಿಯುತ್ತಾ – ಕಿಟಕಿಯಾಚೆಗಿನ ದಿಗಂತವನ್ನು ನೋಡುತ್ತಾ ಪ್ರತಿ ಗುಟುಕಿನಲ್ಲೂ ಸಮೃಧ್ಧಿಯ ನೆನಪನ್ನು ಆಸ್ವಾದಿಸುತ್ತಾ ಮೈಮರೆತಿದ್ದೆ.
OFFICE ನಲ್ಲಿ ಮಾಡಲು ಬಹಳಷ್ಟು ಕೆಲಸವಿತ್ತು. ಆಂತರಿಕವಾಗಿ ದೃಢ ಮನಸ್ಸಿನ ಕೆಲಸದಲ್ಲಿ ಅಪಾರ ನಿಷ್ಠೆ, ಪ್ರಾಮಾಣಿಕತೆ ,ಶ್ರದ್ಧೆ ಮತ್ತು HARD WORKER ಆದ ನಾನು ಇಂದೇಕೋ ಸಂಪೂರ್ಣ ಬದಲಾಗಿದ್ದೆ . ಹಗುರ ವಿವರಿಸಲಾಗದ ಮನಸ್ಸಿನ ಅಲೆಯಲ್ಲಿ ತೇಲುತ್ತಿದ್ದೆ.
ನೋಡ ನೋಡುತ್ತಿದ್ದಂತೆ 1.30.ಊಟದ ಸಮಯ. ನನ್ನ ಟೇಬಲ್ ಗೆ ಮಂಗಳೂರು ಶೈಲಿಯ ಊಟದ ಥಾಲಿ ತಂದಿಟ್ಟರು. ANJAL FRY, ಬಾಂಗ್ ಡ ಕರಿ, WHITE PAMPLET ತವಾ ಪ್ರೈ, ನೀರ್ ದೋಸೆ ಮತ್ತು BOILED RICE. ಊಟಕ್ಕೆ ಕುಳಿತರೇ ಹಸಿವೇ ಇಲ್ಲ. ಸಮೃಧ್ಧಿಯೊಂದಿಗೆ ಮನ ವಿಹರಿಸುತ್ತಿತ್ತು. ಕೆದಕಿ ಕೆದಕಿ ಸ್ವಲ್ಪ ಅಂಜಲ್ ತಿಂದೆ. ಹಾಗೇ ಎದ್ದು ಬಿಟ್ಟೆ.
ನಿಧಾನವಾಗಿ ಅರ್ಥವಾಗತೊಡಗಿತು. ಪ್ರೀತಿಯ ಸೆಳೆತಕ್ಕೆ ಸಿಲುಕಿರಬಹುದೆಂದು. ಅರೆ ಕೇವಲ ಒಂದು ಭೇಟಿಯಿಂದಲೇ ಪ್ರೀತಿ ಮೂಡುತ್ತದೆಯೇ. ಇಲ್ಲ ಇಲ್ಲ ಇದು ನನ್ನ ಕಲ್ಪನೆ ಇರಬೇಕು ಎಂದು ಯೋಚಿಸುತ್ತಾ FACEBOOK OPEN ಮಾಡಿದೆ. ಆಕೆ REQUEST ACCEPT ಮಾಡಿದ್ದಳು. ನನ್ನ NOSE DROPS ಸಹಾಯಕ್ಕಾಗಿ ಮತ್ತೆ ಕೃತಜ್ಞತೆ ಸಲ್ಲಿಸಿ I LIKE YOUR HELPING NATURE AND LOOKING SMART TOO ಎಂದು INBOX MESSAGE ಬೇರೆ ಇತ್ತು. ಸ್ವರ್ಗಕ್ಕೆ ಮೂರೇ ಗೇಣಿದೆ ಎಂದು ಭಾವಿಸಿದೆ. ಅದಕ್ಕೆ ನನ್ನದೇ ಭಾಷೆಯಲ್ಲಿ ಉತ್ತರಿಸಿ WATSAPP OPEN ಮಾಡಿದೆ. ಅವಳೂ ಸುಂದರ ಸಂದೇಶದ GOOD MORNING MESSAGE ಕಳಿಸಿದ್ದಳು. ” ನಾನು ಒಬ್ಬಳೇ ನಡೆಯುತ್ತಿರುವಾಗ ದಾರಿ ಬೇಗ ಕೊನೆಯಾಗಲಿ ಎನಿಸುತ್ತಿತ್ತು ಈಗ ನೀನು ಜೊತೆಯಾಗಿರುವಾಗ ದಾರಿ ಎಂದೆಂದಿಗೂ ಮುಗಿಯದಿರಲಿ ಎನಿಸುತ್ತಿದೆ. ” ವಾ ವಾ ಎಂತ ಅತ್ಯಮೋಘ ಸಂದೇಶ. ಪ್ರೀತಿ ಪ್ರೇಮ ಮಾನವೀಯ ಸಂಬಂಧದ ತುತ್ತ ತುದಿ…….
ಸಮಯ 4 ಗಂಟೆಯಾಯಿತು. ನನ್ನ ಟೀ ಟೇಬಲ್ ಮೇಲೆ ಕ್ಯೂಬನ್ ಕಾಫಿ ಮತ್ತು ಪಾಕಿಸ್ತಾನದ ಕರಾಚಿ ಬೇಕರಿಯ ರುಚಿಯಾದ ಸಿಹಿಯಾದ DRY FRUIT BISCUIT ಇತ್ತು. ಆದರೆ ಸಮೃಧ್ಧಿಯ ನೆನಪಿನ ಸಿಹಿಯ ಮುಂದೆ ಅದು ರುಚಿಸಲಿಲ್ಲ. ಸ್ವಲ್ಪ ಮಾತ್ರ ಕಾಫಿ ಕುಡಿದೆ. OFFICE ನಲ್ಲಿ ಇರಲಾಗಲಿಲ್ಲ. ನೇರ ಮನೆಗೆ ಬಂದೆ. ಮನಸ್ಸು ನಿಯಂತ್ರಣದಲ್ಲಿರಲಿಲ್ಲ. ಸಂಜೆ ಎಂದಿನಂತೆ ಯೋಗ ಮತ್ತು ಧ್ಯಾನ ಕ್ಲಾಸ್ ಗೆ ಹೊರಟೆ.
ಧ್ಯಾನದ ಸಮಯದಲ್ಲಿ ಉಸಿರಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದೆ. ಆದರೆ ಆ ಉಸಿರಿನಲ್ಲಿ ಸಮೃಧ್ಧಿಯೇ ಆಮ್ಲಜನಕವಾಗಿದ್ದಳು. ಅದರ ಪ್ರಮಾಣ ಎಷ್ಟಿತ್ತೆದಂರೆ ಯೋಗ ಟೀಚರ್ ಒಂದೆರಡು ಬಾರಿ ಭುಜ ಮುಟ್ಡಿ ಎಚ್ವರಿಸಬೇಕಾಯಿತು. ಹೇಗೋ ಅದನ್ನು ಒಂದು ಗಂಟೆ ಮುಗಿಸಿ ಮನೆಗೆ ಬಂದು ಊಟ ಮುಗಿಸಿ ಬೇಗ ಮಲಗೋಣ ಎಂದು DINING ಗೆ ಹೋದೆ ಚೀನೀ ಶೈಲಿಯ ಊಟ ಟೇಬಲ್ ಅಲಂಕರಿಸಿತ್ತು MIXED VEGETABLE SOUP, BOILD EGG, BROWN NOODLES AND GREEN TEA ಇತ್ತು.
ಎಲ್ಲಿಯ ಹಸಿವು ಎಲ್ಲಿಯ ಊಟ. ಬೆಳಗಿನಿಂದ ವಿಶ್ವದ ಬೇರೆ ಬೇರೆ ಪ್ರದೇಶದ ಊಟ ತಿಂಡಿ ಕಾಫಿ ಟೀ ಇದ್ದರೂ ಮನಸ್ಸು ಮಾತ್ರ ಭಾರತೀಯವಾಗೇ ಇತ್ತು. ಕೇವಲ ಗ್ರೀನ್ ಟೀ ಕುಡಿದು ಹಾಸಿಗೆಯ ಮೇಲೆ ಹೊರಳಿದೆ. ನಿದ್ದೆ ಹತ್ತಲಿಲ್ಲ. ಟಿವಿ ON ಮಾಡಿದೆ. ಯಾವುದೋ ಚಾನಲ್ ನಲ್ಲಿ ಶಾರುಕ್ ಖಾನ್ ಮತ್ತು ಕಾಜೋಲ್ ಅಭಿನಯದ ” DILVALE DULHANIYA LEJAYENGE ” ಸಿನಿಮಾ ಪ್ರಸಾರವಾಗುತ್ತಿತ್ತು. ಅದನ್ನು ಬಹಳಷ್ಟು ಬಾರಿ ನೋಡಿದ್ದರೂ ಇಂದು ಏನೋ ಹೊಸ ಹೊಸ ಅರ್ಥ ಮೂಡಿಸುತ್ತಿತ್ತು. ಮನಸ್ಸು ಹಗುರಾಗುತ್ತಿತ್ತು. ಕಣ್ಣು ಮಬ್ಬಾಗಿತ್ತಿತ್ತು. ಆಗ WATSAPP SOUND ಮಾಡಿತು‌
.” HI SWEET HEART. HAVE A SWEET DREAMS ” ಸಮೃಧ್ಧಿಯ ಮೆಸೇಜ್ ……………………

ಪುಟ್ಟ ಮಗುವಿನಿ೦ದ ವೃಧ್ಧರವರೆಗೂ ಎರಡು ಭಿನ್ನ ಲಿಂಗಗಳ ಪ್ರೀತಿಯ ಆಕರ್ಷಣೆ ಸೃಷ್ಟಿಯ ಜೀವನೋತ್ಸಾಹದ ಕುರಹಾಗಿ ಉಳಿದಿದೆ. ಸೃಷ್ಡಿ ಇರುವವರೆಗೆ ಪ್ರೀತಿಯೂ ಅಮರ…………………
ನಿಜ ಪ್ರೀತಿಯ ಮನಸ್ಸುಗಳಿಗಾಗಿ ………..
ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ .
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ
ಇದು ಮನಸ್ಸುಗಳ ಅಂತರಂಗದ ಚಳುವಳಿ.
ವಿವೇಕಾನ೦ದ. ಹೆಚ್.ಕೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    99 ಮೊಬೈಲ್ ಎಳೆದುಕೊಂಡು ಹೋಗಿ ಗೂಗಲ್ ಮ್ಯಾಪಿಗೆ ಚಮಕ್ ಕೊಟ್ಟ! ಕಾರಣ ಮಾತ್ರ ಶಾಕಿಂಗ್.

    ನಗರದಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎನ್ನುವ ಮಾಹಿತಿ ನೀಡುವ ಗೂಗಲ್ ಕಂಪನಿಗೆ ವ್ಯಕ್ತಿಯೊಬ್ಬ ಚಮಕ್ ಕೊಟ್ಟ ಘಟನೆ ಜರ್ಮನಿಯಲ್ಲಿ ನಡೆದಿದೆ. ಗೂಗಲ್ ಮ್ಯಾಪ್ ಸಂಚಾರದ ಸಂದರ್ಭದಲ್ಲಿ ಜಿಪಿಎಸ್ ಸಾಧನಗಳು ಎಷ್ಟು ಆನ್ ಆಗಿದೆ ಎನ್ನುವುದನ್ನು ತಿಳಿದುಕೊಂಡು ಜನರಿಗೆ ಪ್ರದೇಶದಲ್ಲಿ ಎಷ್ಟು ಸಂಚಾರ ದಟ್ಟಣೆಯಿದೆ ಎನ್ನುವ ವಿವರ ಇರುವ ಸಂದೇಶವನ್ನು ನೀಡುತ್ತಿರುತ್ತದೆ. ಈ ವಿಚಾರವನ್ನು ತಿಳಿದ ವ್ಯಕ್ತಿಯೊಬ್ಬ ಗೂಗಲ್ ಕಂಪನಿ ಮುಂದೆ ಕೃತಕವಾಗಿ ಟ್ರಾಫಿಕ್ ಜಾಮ್ ಸೃಷ್ಟಿಸಿ ಸುದ್ದಿ ಮಾಡಿದ್ದಾನೆ. ಜರ್ಮನಿಯ ಕಲಾವಿದ ಸೈಮನ್ ವೆಕರ್ಟ್ ಬರ್ಲಿನ್…

  • inspirational

    ಇಲ್ಲೊಬ್ಬ ವಿಚಿತ್ರ ವ್ಯಕ್ತಿ, ಇವನ ದೇಹದಲ್ಲಿ ಯಾವ ಪಾರ್ಟೂ ಇರಬೇಕಾದ ಜಾಗದಲ್ಲಿ ಇಲ್ಲ! ಆದ್ರೂ ಇವನ ಜೀವಕ್ಕೆ ತೊಂದರೆ ಇಲ್ಲ,.!

    ಉತ್ತರ ಪ್ರದೇಶದ ವ್ಯಕ್ತಿಯೊಬ್ಬರ ದೇಹದ ವಿವಿಧ ಅಂಗಾಂಗಗಳು ವಿರುದ್ಧ ದಿಕ್ಕಿನಲ್ಲಿಇರುವ ವಿಚಾರ ಆತನ ದೇಹ ತಪಾಸಣೆಯಿಂದ ಬಯಲಾಗಿದೆ. ಇಲ್ಲಿನ ಖುಷಿನಗರದ ಜಮಾಲುದ್ದೀನ್‌ ಎಂಬುವವರು ಇತ್ತೀಚೆಗೆ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿಗೋರಖ್‌ಪುರ ಆಸ್ಪತ್ರೆಗೆ ತೆರಳಿದ್ದರು.  ವೈದ್ಯರು ರೋಗ ತಪಾಸಣೆಗಾಗಿ ಸ್ಕ್ಯಾ‌ನಿಂಗ್‌ ಮಾಡಿದಾಗ, ಅವರ ದೇಹದ ಎಲ್ಲಾ ಅಂಗಗಳು ಸಾಮಾನ್ಯವಾಗಿ ಇರಬೇಕಾದ ಜಾಗದಲ್ಲೇ ಇರಲಿಲ್ಲ. ಬದಲಿಗೆ ದೇಹದ ಮತ್ತೊಂದು ಬದಿಯಲ್ಲಿಇರುವುದು ಕಂಡು ವೈದ್ಯರೇ ಬೆರಗಾಗಿದ್ದಾರೆ. ಕನ್ನಡಿಯಲ್ಲಿ ನೋಡಿದರೆ ಕಾಣುವಂತೆ ಆತನ ದೇಹದ ಅಂಗಾಂಗಗಳು ‘ರಿವರ್ಸ್‌’ ಆಗಿ ಜೋಡಿಸಲ್ಪಟ್ಟಿದ್ದವು. ‘ಸೈಟಸ್‌ ಇನ್‌ವರ್ಸಸ್‌’ ಎಂದು ಕರೆಯಲಾಗುವ ಇದೊಂದು…

  • ಸುದ್ದಿ

    ಶಿಯೋಮಿ ಕಂಪೆನಿಯಿಂದ ಅದ್ಭುತ ಸ್ಮಾರ್ಟ್​ಫೋನ್ ಬಿಡುಗಡೆ 108 MP ಕ್ಯಾಮೆರಾ, 1 TB ಸ್ಟೋರೇಜ್,12 ಜಿಬಿ RAM…!

    ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ದರ ಮತ್ತು ಉತ್ತಮ ಫೀಚರ್ಸ್​ ಮೂಲಕ ಜನಪ್ರಿಯತೆ ಗಳಿಸಿರುವ ಶಿಯೋಮಿ ಕಂಪೆನಿ ಸೆಪ್ಟೆಂಬರ್​ನಲ್ಲಿ ಮತ್ತೊಂದು ಹೊಸ ಸ್ಮಾರ್ಟ್​ಫೋನ್​ನ್ನು ಬಿಡುಗಡೆ ಮಾಡಲಿದೆ. ಶಿಯೋಮಿ ಮಿಕ್ಸ್ ಸಿರೀಸ್​ನ ಈ ನೂತನ ಸ್ಮಾರ್ಟ್‌ಫೋನ್​ಗೆ ಮಿ ಮಿಕ್ಸ್ 4 ಎಂದು ಹೆಸರಿಡಲಾಗಿದೆ. ಇವೆಲ್ಲಕ್ಕಿಂತ ಈ ಹೊಸ ಫೋನ್ ಎಲ್ಲರ ಗಮನ ಸೆಳೆಯುತ್ತಿರುವುದು ನೂತನ ಮೊಬೈಲ್​ಗೆ ನೀಡಲಾಗಿರುವ  ಕ್ಯಾಮೆರಾ. ಹೌದು, ಮಿ ಮಿಕ್ಸ್​ 4ನಲ್ಲಿ 108 ಮೆಗಾಪಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆಯಂತೆ. ಚೀನಾದ ವೆಬ್‌ಸೈಟ್ ವೀಬೊದಲ್ಲಿ ನೀಡಿರುವ ಮಾಹಿತಿಯ ಪ್ರಕಾರ,…

  • ಸುದ್ದಿ

    ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿತಿ ಗಂಭೀರ ; ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು..!

    ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸೆ.28ಕ್ಕೆ 90ನೇ ವರ್ಷ ವಸಂತಕ್ಕೆ ಕಾಲಿಟ್ಟಿದ್ದ ಲತಾ ಮಂಗೇಶ್ಕರ್ ಅವರಿಗೆ ಇಂದು ನಸುಕಿನ ಜಾವ 2 ಗಂಟೆ ಸಮಯದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಕುಟುಂಸ್ಥರು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಹಿಂದಿ ಭಾಷೆಯೊಂದರಲ್ಲೇ ಸುಮಾರು1 ಸಾವಿರಕ್ಕೂ…

  • ವಿಚಿತ್ರ ಆದರೂ ಸತ್ಯ

    ಈಕೆ 23 ವರ್ಷದ ಯುವಕನನ್ನು ಮದ್ವೆಯಾಗಲು ಕೊಟ್ಟಿದ್ದು ಬರೋಬರಿ….?ಆಮೇಲೆ ಏನಾಯ್ತು ಗೊತ್ತಾ..?

    ಈ ಮದುವೆ ಅನ್ನುವುದೇ ವಿಚಿತ್ರ ನೋಡ್ರಿ.ಯಾರು ಯಾವಾಗ ಯಾರನ್ನ,ಏತಕ್ಕೆ ಮದ್ವೆ ಆಗ್ತಾರೆ ಅಂತ ಹೇಳೋದಕ್ಕೆ ಆಗಲ್ಲ.ಇದು ದೇಶ,ಭಾಷೆ ಸಂಸ್ಕೃತಿ ಎಲ್ಲವನ್ನು ಮೀರಿದ್ದು.

  • ಸುದ್ದಿ

    ತನ್ನ ಗಂಡನಿಗೆ ಬುರ್ಖಾ ಹಾಕಿಸಿ ಉಟಕ್ಕೆ ಕರೆದುಕೊಂಡು ಹೋದ ಯುವತಿ!

    ಮುಸ್ಲಿಂ ಸಮುದಾಯದಲ್ಲಿ ಸಾಮಾನ್ಯವಾಗಿ ಮಹಿಳೆಯರು ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ಸಂಪ್ರದಾಯವಿದೆ. ಇನ್ನು ಪಾಕಿಸ್ತಾನದಂತ ರಾಷ್ಟ್ರಗಳಲ್ಲಿ ಈ ನಿಯಮ ಕಡ್ಡಾಯ. ಆದರೆ ಇಲ್ಲೊಂದು ಜೋಡಿ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ಊಟಕ್ಕೆ ತೆರಳಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದಾರೆ. ಹೌದು, ಪಾಕಿಸ್ತಾನ ಮೂಲದ ನವವಿವಾಹಿತ ಜೋಡಿಯೊಂದು ಊಟಕ್ಕೆ ತೆರಳಿದ್ದು, ಈ ವೇಳೆ ಯುವತಿ ಬುರ್ಖಾ ಧರಿಸಿಲ್ಲ. ಬದಲಿಗೆ ಆಕೆಯ ಪತಿ ಬುರ್ಖಾ ಧರಿಸಿದ್ದಾನೆ. ಪುರುಷ ಪ್ರಧಾನ ಸಮುದಾಯದಲ್ಲಿರುವ ಈ ರೀತಿಯ ಮೌಢ್ಯ ಹಾಗೂ ಮಹಿಳಾ ಸಬಲೀಕರಣ…