ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್. ತಮಗೆಲ್ಲರಿಗೂ ತಿಳೆದಿರುವ ಹಾಗೆ ಪ್ರೀತಿ ಎಂಬುದು ಯಾವಾಗ, ಯಾರಿಗೆ, ಯಾವ ಜಾಗದಲ್ಲಿ, ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ.. ಯಾವ ರೂಪದಲ್ಲಿ ಯಾರ ಮೇಲಾದರೂ ಕೂಡ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ,ಸುಂದರಿ ಕುರೂಪಿ , ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ ಬೇಕಾದರೂ ಆಗಬಹುದು.. ಆದರೆ ಪ್ರೀತಿ ಮಾಡುವುದು ದೊಡ್ಡ ವಿಚಾರವಲ್ಲ. ಪ್ರೀತಿ ಮಾಡಿ ವಿವಾಹವಾಗಿ ಬದುಕಿ ಬಾಳಿ ತೋರಿಸಿದರೆ ನಮ್ಮ ಪ್ರೀತಿ ಮತ್ತು ಜೀವನಕ್ಕೆ ಒಂದು ಅರ್ಥ ಸಿಗುತ್ತದೆ.

ಅಂತೆಯೇ ಇಲ್ಲೊಬ್ಬ ಹಳ್ಳಿ ಹುಡುಗನ ಮೇಲೆ ವಿದೇಶಿ ಹುಡುಗಿಗೆ ಸಿಕ್ಕಾಪಟ್ಟೆ ಪ್ರೀತಿಯಾಗಿದೆ. ವಿಶೇಷವೇನೆಂದರೆ ಪ್ರಥಮ ಬಾರಿಗೆ ಅಂದರೆ ಒಂದೇ ನೋಟದಲ್ಲಿ ಆ ಹುಡುಗನ ಮೇಲೆ ಈಕೆಗೆ ಪ್ರೀತಿಯಾಗಿದೆ.ದ್ರೋಹ ಹುಡುಗಿ ವಿದೇಶದಲ್ಲಿ ಯಾವ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಕೊಂಡರೆ ಒಂದು ಕ್ಷಣ ನೀವು ಆಶ್ಚರ್ಯ ಪಡುತ್ತೀರಿ..
ಕುಗ್ರಾಮದಲ್ಲಿ ಹುಟ್ಟಿದ ನರೇಂದ್ರ ಅನ್ನುವ ಹುಡುಗ.. ಆದರೆ ಬಿಸಿಲಿಗೆ ಸರಸ್ವತಿ ಒಲಿದು ಬರಲಿಲ್ಲ. ಒಂದು ಅಕ್ಷರವೂ ತಲೆಗೆ ಹೋಗುತ್ತಿರಲಿಲ್ಲ. ಹಳ್ಳಿಯಲ್ಲಿ ಇದ್ದ ಕಾರಣ ಓದು ತಲೆಗೆ ಹತ್ತದ ಕಾರಣ ತಮಗಿದ್ದ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ಮತ್ತು ಬಿಡುವಿನ ಸಮಯದಲ್ಲಿ ಕೂಲಿ ಕೆಲಸವನ್ನ ಮಾಡುತ್ತಿದ್ದ.. ವ್ಯವಸಾಯ ನಂಬಿಕೊಂಡರೆ ಅಷ್ಟಾಗಿ ಹಣ ಗಳಿಸಲು ಸಾಧ್ಯವಿಲ್ಲ ಎಂದು ಕೆಲವರು ಅಂದುಕೊಂಡಿರುತ್ತಾರೆ. ಅಂತೆಯೇ ಈ ಹುಡುಗನ ಜೀವನದಲ್ಲೂ ಇದೇ ನಡೆದಿದೆ.

ಮಾಡುತ್ತಿದ್ದ ವ್ಯವಸಾಯ ಮತ್ತು ಕೂಲಿ ಕೆಲಸದಲ್ಲಿ ಆತನಿಗೆ ಬಿಡುಗಾಸು ಸಿಗುತ್ತಿದ್ದ ಕಾರಣ ಕರ್ನಾಟಕ ಮತ್ತು ಗೋವಾ ಗಡಿಯಲ್ಲಿ ಇರುವ ಒಂದು ಬಾರ್ ನಲ್ಲಿ ಕೆಲಸಕ್ಕೆ ಸೇರಿಕೊಂಡ. ಗೋವಾ ಗಡಿ ಎಂದರೆ ತಮಗೆಲ್ಲರಿಗೂ ತಿಳಿದಿರುತ್ತದೆ. ಆ ಬಾರ್ ನಲ್ಲಿ ಹೆಚ್ಚಾಗಿ ವಿದೇಶಿಗರೇ ಬರುತ್ತಿರುತ್ತಾರೆ.. ಇನ್ನು ನರೇಂದ್ರ ಕೆಲಸ ಮಾಡುತ್ತಿದ್ದ ಬಾರ್ ನಲ್ಲಿ ಒಮ್ಮೆ ಒಂದು ರಷ್ಯಾ ದೇಶದ ಸುಂದರ ಹುಡುಗಿ ಬರುತ್ತಾಳೆ. ನಂತರ ನರೇಂದ್ರ ನನ್ನು ಕರೆದು ಒಂದು ಬಿಯರ್ ತರುವಂತೆ ಹೇಳುತ್ತಾಳೆ.
ವಿದೇಶಿ ಹುಡುಗಿಯ ಮಾತಿನಂತೆ ಒಂದು ಬಿಯರನ್ನು ತೆಗೆದುಕೊಂಡು ಬಂದು, ಅವಳ ಮುಂದೆ ಇಟ್ಟು ಗ್ಲಾಸ್ ನಲ್ಲಿ ಬಿಯರ್ ಹಾಕುತ್ತಾನೆ .ಆ ಕ್ಷಣದಲ್ಲಿ ಆಕೆಗೆ ಏನಾಯಿತೋ ಏನೋ? ನರೇಂದ್ರನ ಕಣ್ಣಿನಲ್ಲಿ ಒಂದು ಆಕರ್ಷಣೆ ಕಂಡಿತ್ತಂತೆ. ನಂತರ ಏನಾಯಿತೋ ಗೊತ್ತಿಲ್ಲ, ಅ ಕ್ಷಣದಿಂದ ಆ ರಷ್ಯಾ ಹುಡುಗಿ ನರೇಂದ್ರನನ್ನು ಇಷ್ಟಪಡಲು ಆರಂಭಿಸಿದಳು,ಅಲ್ಲದೆ ನೇರವಾಗಿ ನರೇಂದ್ರನಿಗೆ ತನ್ನ ಪ್ರೇಮದ ವಿಚಾರವನ್ನುಹೇಳಿಬಿಡುತ್ತಾಳೆ .ವಿಶೇಷವೇನೆಂದರೆ ಆಕೆ ಪ್ರಪೋಸ್ ಮಾಡಿದ ತಕ್ಷಣವೇ ಇವಳು ಬೇರೆ ದೇಶದವಳು, ಬೇರೆ ಜಾತಿಯವಳು, ಬೇರೆ ಧರ್ಮದವಳು ಎಂದು ಲೆಕ್ಕಿಸದೇ ಆಕೆಯ ಪ್ರೀತಿಗೆ ಬೆಲೆ ಕೊಟ್ಟು ನರೇಂದ್ರ ಒಪ್ಪಿಕೊಂಡು ಬಿಡುತ್ತಾನೆ.

ನಂತರ ಅವರ ಪ್ರೀತಿ ಚಿಗುರೊಡೆದು ಎಲ್ಲರಿಗೂ ತಿಳಿಯುತ್ತದೇ. ಅಲ್ಲದೇ ಅಲ್ಲಿ ಇಲ್ಲಿ ಸುತ್ತಾಡುತ್ತಿರುತ್ತಾರೆ.ಹೀಗೆ ದಿನಗಳುರುಳಿದಂತೆ ನರೇಂದ್ರನಿಗೆ ಒಂದು ಅಚ್ಚರಿಯ ಸುದ್ದಿ ತಿಳಿದು ಬರುತ್ತದೆ.
ಹೌದು ರಷ್ಯಾದ ಆ ದೇಶದ ಹುಡುಗಿಯ ಹೆಸರು ಅನಸ್ತತ. ಮತ್ತು ಆಕೆ ರಷ್ಯಾದ ಪಾರ್ಲಿಮೆಂಟಿನಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾಳೆ ಎಂಬುದು ನರೇಂದ್ರನಿಗೆ ತಿಳಿಯುತ್ತದೆ ಮತ್ತು ಇದನ್ನು ಕೇಳಿದ ಅವನು ಆಶ್ಚರ್ಯನಾಗುತ್ತಾನೆ.
ಇನ್ನು ಕೆಲಸದ ಕಾರಣದಿಂದ ಆಕೆ ರಷ್ಯಾಗೆ ಹೋಗಿಬಿಡುತ್ತಾಳೆ. ಆಕೆಯನ್ನು ಬಿಟ್ಟಿರಲಾರದ ನರೇಂದ್ರ ಎರಡು ಭಾರಿ ರಷ್ಯಾ ದೇಶಕ್ಕೆ ಹೋಗಿ ಬರುತ್ತಾನೆ. ನಂತರ ಕೆಲಸವನ್ನು ಮುಗಿಸಿ ಮರಳಿ ಭಾರತಕ್ಕೆ ಬಂದ ಅನಸ್ತತ, ನರೇಂದ್ರನನ್ನು ಮದುವೆ ಮಾಡಿಕೊಳ್ಳುತ್ತಾಳೆ. ನಂತರ ಆಕೆಯನ್ನು ನರೇಂದ್ರ ತನ್ನ ಊರಿಗೆ ಕರೆದುಕೊಂಡು ಹೋಗುತ್ತಾನೆ. ಹಳ್ಳಿಯವರು ಈ ಜೋಡಿಯನ್ನು ನೋಡಿ ಸಿಕ್ಕಾಪಟ್ಟೆ ಶಾಕ್ ಆಗುತ್ತಾರೆ.

ಸದ್ಯಕ್ಕೆ ರಷ್ಯಾ ದೇಶದಲ್ಲಿ ನೆಲೆಯೂರಲು ಆಲೋಚನೆ ಮಾಡಿರುವ ನರೇಂದ್ರ ಮತ್ತು ಅನಸ್ತತ ,ವರ್ಷದಲ್ಲಿ ಮೂರು ತಿಂಗಳು ಭಾರತದಲ್ಲಿ ಇರಲು ನಿರ್ಧಾರ ಮಾಡಿದ್ದಾರಂತೆ. ಅನಸ್ತತ ದೊಡ್ಡ ಹುದ್ದೆಯಲ್ಲಿ ಇರುವುದರಿಂದ ಅವಳು ಹೇಳಿದಂತೆ ನರೇಂದ್ರ ಬದುಕಬೇಕು ಎಂದು ನೀವು ಅಂದುಕೊಂಡಿದ್ದರೆ ಅದು ಅಕ್ಷರಶ ತಪ್ಪು, ನರೇಂದ್ರನನ್ನು ತುಂಬಾ ಪ್ರೀತಿ ಮಾಡುವ ಈ ಹುಡುಗಿ ಆತನಿಗೆ ಗೌರವ ಕೊಡುವುದರ ಜೊತೆಗೆ ಆತನ ಮಾತನ್ನ ಚಾಚೂತಪ್ಪದೆ ಪಾಲಿಸುತ್ತಾಳೆ.ನೋಡಿದ್ರಲ್ಲ ಅದೆಷ್ಟು ಜನ ನಾವು ಸುಂದರವಾಗಿಲ್ಲ ನಾವು ಬಿಳುಪಾಗಿಲ್ಲ ಎಂದು ಕೊರಗುತ್ತಿರುತ್ತಾರೆ.. ಆದರೆ ನಿಮ್ಮ ನಡವಳಿಕೆಯನ್ನ ಗಾಡವಾಗಿ ಪ್ರೀತಿ ಮಾಡುವವರು ಒಬ್ಬರಾದವು ಇದ್ದೆ ಇರುತ್ತಾರೆ ಅನ್ನುವುದು ಈ ಪ್ರೇಮಿಗಳಿಂದ ತಿಳಿದು ಬಂದಿದೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
2016 ರಲ್ಲಿ ಚಿತ್ರದುರ್ಗದ ಈ ಗಣಪತಿ ಅತಿ ಹೆಚ್ಚು ಜನ ಸೇರಿದರಿಂದ ಕರ್ನಾಟಕದ ಹೆಚ್ಚು ಜನ ಆಕರ್ಷಿಸಿದ ಗಣಪ ಎಂದು ತಿಳಿದು ಬಂದಿದೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಕ್ಯಾರವ್ಯಾನ್ ಖರೀದಿಸಿದ್ದು, ಅದರ ಬೆಲೆ 7 ಕೋಟಿ ರೂ. ಎಂದು ತಿಳಿದು ಬಂದಿದೆ. ಇದು ನೋಡಲು ಬಹಳ ಆಕರ್ಷಣಿಯವಾಗಿದೆ ಎಂದು ತಿಳಿದುಬಂದಿದೆ. ಮತ್ತು ತಾವೂ ಖರೀದಿಸಿರುವ ಹೊಸ ಕ್ಯಾರವ್ಯಾನ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ತಮಗೆ ಬೇಕಾದಂತೆ ಡಿಸೈನ್ ಮಾಡಿಸಿಕೊಂಡಿದ್ದಾರೆ. ಇದು ಕಪ್ಪು ಬಣ್ಣದ ಬಸ್ ಆಗಿದ್ದು, ಒಳಗೆ ಅತ್ಯಂತ ಸ್ಟೈಲಿಶ್ ಆಗಿ ವಿನ್ಯಾಸ ಮಾಡಲಾಗಿದೆ. ವಿಶೇಷವೆಂದರೆ ಈ ಕ್ಯಾರವ್ಯಾನ್ ಮೇಲೆ ಮತ್ತು ಒಳಗೆ ಅಲ್ಲು ಅರ್ಜುನ್ ತಮ್ಮ ಹೆಸರನ್ನ…
ಅಭಿಷೇಕ್ ಪಟೇಲ್ ಎಂಬ ಪೇದೆಯೊಬ್ಬರು 400 ಮಂದಿ ಮಕ್ಕಳ ಪ್ರಾಣವನ್ನು ರಕ್ಷಿಸಲು, 10 ಕೆಜಿ ತೂಕದ ಬಾಂಬ್ ಅನ್ನು ಹೊತ್ತುಕೊಂಡು 1 ಕಿ.ಮೀ ಓಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬೆಂಗಳೂರು: ಸಾಲ ಮನ್ನಾ ಯೋಜನೆಯಲ್ಲಿ ಈವರೆಗೆ ರಾಜ್ಯದ 18.70 ಲಕ್ಷ ರೈತ ಕುಟುಂಬಗಳ 8759 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ರಾಷ್ಟ್ರೀಯ ಬ್ಯಾಂಕ್ಗಳು ಸಾಲ ಮನ್ನಾ ವರ್ಗೀಕರಣ ಮಾಡುವಾಗ ಯಾದಗಿರಿಯಲ್ಲಿ ಕೆಲಗೊಂದಲ ಮೂಡಿದ್ದು ಈ ಕುರಿತು ಶುಕ್ರವಾರ ಜೂ.14ರಂದು ರಾಜ್ಯ ಮಟ್ಟದ ಬ್ಯಾಂಕರ್ಗಳ ಸಭೆ ಕರೆದಿದ್ದೇನೆ ಎಂದು ಹೇಳಿದ್ದಾರೆ. ಸಾಲ ಮನ್ನಾ ಯೋಜನೆಗೆ ಮೈತ್ರಿ ಸರ್ಕಾರ ಬದ್ಧವಾಗಿದ್ದು ನಿಗದಿತ ಅವಧಿಯೊಳಗೆ ಸಾಲಮನ್ನಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.ವಾಣಿಜ್ಯ ಬ್ಯಾಂಕ್ಗಳಲ್ಲಿ 7.49…
ನಮ್ಮ ಭಾರತೀಯ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸ್ತೋತ್ರ ಮತ್ತು ಮಂತ್ರಗಳಿಗೆ ವಿಶೇಷ ಸ್ಥಾನವಿದೆ. ಹಾಗೆಯೇ ಪ್ರತಿಯೊಂದು ಗುರಿ ಉದ್ದೇಶಗಳು ಸಾಕಾರಗೊಳ್ಳುವುದಕ್ಕೆ ಪ್ರತ್ಯೇಕ ಮಂತ್ರಗಳನ್ನು ಆಧ್ಯಾತ್ಮಿಕ ಚಿಂತಕರು ನೀಡಿದ್ದಾರೆ.
ಈಗ ಹೆಚ್ಚಿನ ಯುವಕ, ಯುವತಿಯರು ಕಪ್ಪು ದಾರವನ್ನ ಕಟ್ಟಿಕೊಳ್ಳುತ್ತಾರೆ. ದೃಷ್ಟಿಯನ್ನ ತಡೆಯಲು ಮತ್ತು ಹೋಗಲಾಡಿಸಲು ಕೇವಲ ಕಪ್ಪು ಬಣ್ಣದಿಂದ ಮಾತ್ರ ಸಾಧ್ಯ.