ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್. ತಮಗೆಲ್ಲರಿಗೂ ತಿಳೆದಿರುವ ಹಾಗೆ ಪ್ರೀತಿ ಎಂಬುದು ಯಾವಾಗ, ಯಾರಿಗೆ, ಯಾವ ಜಾಗದಲ್ಲಿ, ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ.. ಯಾವ ರೂಪದಲ್ಲಿ ಯಾರ ಮೇಲಾದರೂ ಕೂಡ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ,ಸುಂದರಿ ಕುರೂಪಿ , ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ ಬೇಕಾದರೂ ಆಗಬಹುದು.. ಆದರೆ ಪ್ರೀತಿ ಮಾಡುವುದು ದೊಡ್ಡ ವಿಚಾರವಲ್ಲ. ಪ್ರೀತಿ ಮಾಡಿ ವಿವಾಹವಾಗಿ ಬದುಕಿ ಬಾಳಿ ತೋರಿಸಿದರೆ ನಮ್ಮ ಪ್ರೀತಿ ಮತ್ತು ಜೀವನಕ್ಕೆ ಒಂದು ಅರ್ಥ ಸಿಗುತ್ತದೆ.

ಅಂತೆಯೇ ಇಲ್ಲೊಬ್ಬ ಹಳ್ಳಿ ಹುಡುಗನ ಮೇಲೆ ವಿದೇಶಿ ಹುಡುಗಿಗೆ ಸಿಕ್ಕಾಪಟ್ಟೆ ಪ್ರೀತಿಯಾಗಿದೆ. ವಿಶೇಷವೇನೆಂದರೆ ಪ್ರಥಮ ಬಾರಿಗೆ ಅಂದರೆ ಒಂದೇ ನೋಟದಲ್ಲಿ ಆ ಹುಡುಗನ ಮೇಲೆ ಈಕೆಗೆ ಪ್ರೀತಿಯಾಗಿದೆ.ದ್ರೋಹ ಹುಡುಗಿ ವಿದೇಶದಲ್ಲಿ ಯಾವ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಕೊಂಡರೆ ಒಂದು ಕ್ಷಣ ನೀವು ಆಶ್ಚರ್ಯ ಪಡುತ್ತೀರಿ..
ಕುಗ್ರಾಮದಲ್ಲಿ ಹುಟ್ಟಿದ ನರೇಂದ್ರ ಅನ್ನುವ ಹುಡುಗ.. ಆದರೆ ಬಿಸಿಲಿಗೆ ಸರಸ್ವತಿ ಒಲಿದು ಬರಲಿಲ್ಲ. ಒಂದು ಅಕ್ಷರವೂ ತಲೆಗೆ ಹೋಗುತ್ತಿರಲಿಲ್ಲ. ಹಳ್ಳಿಯಲ್ಲಿ ಇದ್ದ ಕಾರಣ ಓದು ತಲೆಗೆ ಹತ್ತದ ಕಾರಣ ತಮಗಿದ್ದ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ಮತ್ತು ಬಿಡುವಿನ ಸಮಯದಲ್ಲಿ ಕೂಲಿ ಕೆಲಸವನ್ನ ಮಾಡುತ್ತಿದ್ದ.. ವ್ಯವಸಾಯ ನಂಬಿಕೊಂಡರೆ ಅಷ್ಟಾಗಿ ಹಣ ಗಳಿಸಲು ಸಾಧ್ಯವಿಲ್ಲ ಎಂದು ಕೆಲವರು ಅಂದುಕೊಂಡಿರುತ್ತಾರೆ. ಅಂತೆಯೇ ಈ ಹುಡುಗನ ಜೀವನದಲ್ಲೂ ಇದೇ ನಡೆದಿದೆ.

ಮಾಡುತ್ತಿದ್ದ ವ್ಯವಸಾಯ ಮತ್ತು ಕೂಲಿ ಕೆಲಸದಲ್ಲಿ ಆತನಿಗೆ ಬಿಡುಗಾಸು ಸಿಗುತ್ತಿದ್ದ ಕಾರಣ ಕರ್ನಾಟಕ ಮತ್ತು ಗೋವಾ ಗಡಿಯಲ್ಲಿ ಇರುವ ಒಂದು ಬಾರ್ ನಲ್ಲಿ ಕೆಲಸಕ್ಕೆ ಸೇರಿಕೊಂಡ. ಗೋವಾ ಗಡಿ ಎಂದರೆ ತಮಗೆಲ್ಲರಿಗೂ ತಿಳಿದಿರುತ್ತದೆ. ಆ ಬಾರ್ ನಲ್ಲಿ ಹೆಚ್ಚಾಗಿ ವಿದೇಶಿಗರೇ ಬರುತ್ತಿರುತ್ತಾರೆ.. ಇನ್ನು ನರೇಂದ್ರ ಕೆಲಸ ಮಾಡುತ್ತಿದ್ದ ಬಾರ್ ನಲ್ಲಿ ಒಮ್ಮೆ ಒಂದು ರಷ್ಯಾ ದೇಶದ ಸುಂದರ ಹುಡುಗಿ ಬರುತ್ತಾಳೆ. ನಂತರ ನರೇಂದ್ರ ನನ್ನು ಕರೆದು ಒಂದು ಬಿಯರ್ ತರುವಂತೆ ಹೇಳುತ್ತಾಳೆ.
ವಿದೇಶಿ ಹುಡುಗಿಯ ಮಾತಿನಂತೆ ಒಂದು ಬಿಯರನ್ನು ತೆಗೆದುಕೊಂಡು ಬಂದು, ಅವಳ ಮುಂದೆ ಇಟ್ಟು ಗ್ಲಾಸ್ ನಲ್ಲಿ ಬಿಯರ್ ಹಾಕುತ್ತಾನೆ .ಆ ಕ್ಷಣದಲ್ಲಿ ಆಕೆಗೆ ಏನಾಯಿತೋ ಏನೋ? ನರೇಂದ್ರನ ಕಣ್ಣಿನಲ್ಲಿ ಒಂದು ಆಕರ್ಷಣೆ ಕಂಡಿತ್ತಂತೆ. ನಂತರ ಏನಾಯಿತೋ ಗೊತ್ತಿಲ್ಲ, ಅ ಕ್ಷಣದಿಂದ ಆ ರಷ್ಯಾ ಹುಡುಗಿ ನರೇಂದ್ರನನ್ನು ಇಷ್ಟಪಡಲು ಆರಂಭಿಸಿದಳು,ಅಲ್ಲದೆ ನೇರವಾಗಿ ನರೇಂದ್ರನಿಗೆ ತನ್ನ ಪ್ರೇಮದ ವಿಚಾರವನ್ನುಹೇಳಿಬಿಡುತ್ತಾಳೆ .ವಿಶೇಷವೇನೆಂದರೆ ಆಕೆ ಪ್ರಪೋಸ್ ಮಾಡಿದ ತಕ್ಷಣವೇ ಇವಳು ಬೇರೆ ದೇಶದವಳು, ಬೇರೆ ಜಾತಿಯವಳು, ಬೇರೆ ಧರ್ಮದವಳು ಎಂದು ಲೆಕ್ಕಿಸದೇ ಆಕೆಯ ಪ್ರೀತಿಗೆ ಬೆಲೆ ಕೊಟ್ಟು ನರೇಂದ್ರ ಒಪ್ಪಿಕೊಂಡು ಬಿಡುತ್ತಾನೆ.

ನಂತರ ಅವರ ಪ್ರೀತಿ ಚಿಗುರೊಡೆದು ಎಲ್ಲರಿಗೂ ತಿಳಿಯುತ್ತದೇ. ಅಲ್ಲದೇ ಅಲ್ಲಿ ಇಲ್ಲಿ ಸುತ್ತಾಡುತ್ತಿರುತ್ತಾರೆ.ಹೀಗೆ ದಿನಗಳುರುಳಿದಂತೆ ನರೇಂದ್ರನಿಗೆ ಒಂದು ಅಚ್ಚರಿಯ ಸುದ್ದಿ ತಿಳಿದು ಬರುತ್ತದೆ.
ಹೌದು ರಷ್ಯಾದ ಆ ದೇಶದ ಹುಡುಗಿಯ ಹೆಸರು ಅನಸ್ತತ. ಮತ್ತು ಆಕೆ ರಷ್ಯಾದ ಪಾರ್ಲಿಮೆಂಟಿನಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾಳೆ ಎಂಬುದು ನರೇಂದ್ರನಿಗೆ ತಿಳಿಯುತ್ತದೆ ಮತ್ತು ಇದನ್ನು ಕೇಳಿದ ಅವನು ಆಶ್ಚರ್ಯನಾಗುತ್ತಾನೆ.
ಇನ್ನು ಕೆಲಸದ ಕಾರಣದಿಂದ ಆಕೆ ರಷ್ಯಾಗೆ ಹೋಗಿಬಿಡುತ್ತಾಳೆ. ಆಕೆಯನ್ನು ಬಿಟ್ಟಿರಲಾರದ ನರೇಂದ್ರ ಎರಡು ಭಾರಿ ರಷ್ಯಾ ದೇಶಕ್ಕೆ ಹೋಗಿ ಬರುತ್ತಾನೆ. ನಂತರ ಕೆಲಸವನ್ನು ಮುಗಿಸಿ ಮರಳಿ ಭಾರತಕ್ಕೆ ಬಂದ ಅನಸ್ತತ, ನರೇಂದ್ರನನ್ನು ಮದುವೆ ಮಾಡಿಕೊಳ್ಳುತ್ತಾಳೆ. ನಂತರ ಆಕೆಯನ್ನು ನರೇಂದ್ರ ತನ್ನ ಊರಿಗೆ ಕರೆದುಕೊಂಡು ಹೋಗುತ್ತಾನೆ. ಹಳ್ಳಿಯವರು ಈ ಜೋಡಿಯನ್ನು ನೋಡಿ ಸಿಕ್ಕಾಪಟ್ಟೆ ಶಾಕ್ ಆಗುತ್ತಾರೆ.

ಸದ್ಯಕ್ಕೆ ರಷ್ಯಾ ದೇಶದಲ್ಲಿ ನೆಲೆಯೂರಲು ಆಲೋಚನೆ ಮಾಡಿರುವ ನರೇಂದ್ರ ಮತ್ತು ಅನಸ್ತತ ,ವರ್ಷದಲ್ಲಿ ಮೂರು ತಿಂಗಳು ಭಾರತದಲ್ಲಿ ಇರಲು ನಿರ್ಧಾರ ಮಾಡಿದ್ದಾರಂತೆ. ಅನಸ್ತತ ದೊಡ್ಡ ಹುದ್ದೆಯಲ್ಲಿ ಇರುವುದರಿಂದ ಅವಳು ಹೇಳಿದಂತೆ ನರೇಂದ್ರ ಬದುಕಬೇಕು ಎಂದು ನೀವು ಅಂದುಕೊಂಡಿದ್ದರೆ ಅದು ಅಕ್ಷರಶ ತಪ್ಪು, ನರೇಂದ್ರನನ್ನು ತುಂಬಾ ಪ್ರೀತಿ ಮಾಡುವ ಈ ಹುಡುಗಿ ಆತನಿಗೆ ಗೌರವ ಕೊಡುವುದರ ಜೊತೆಗೆ ಆತನ ಮಾತನ್ನ ಚಾಚೂತಪ್ಪದೆ ಪಾಲಿಸುತ್ತಾಳೆ.ನೋಡಿದ್ರಲ್ಲ ಅದೆಷ್ಟು ಜನ ನಾವು ಸುಂದರವಾಗಿಲ್ಲ ನಾವು ಬಿಳುಪಾಗಿಲ್ಲ ಎಂದು ಕೊರಗುತ್ತಿರುತ್ತಾರೆ.. ಆದರೆ ನಿಮ್ಮ ನಡವಳಿಕೆಯನ್ನ ಗಾಡವಾಗಿ ಪ್ರೀತಿ ಮಾಡುವವರು ಒಬ್ಬರಾದವು ಇದ್ದೆ ಇರುತ್ತಾರೆ ಅನ್ನುವುದು ಈ ಪ್ರೇಮಿಗಳಿಂದ ತಿಳಿದು ಬಂದಿದೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ವಿಧಿವಶರಾಗಿ ಇಂದಿಗೆ ಐದು ದಿನಗಳಾಗಿವೆ. ಸೋಮವಾರದಂದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಅಂತ್ಯಸಂಸ್ಕಾರ ನೆರವೇರಿದ್ದು, ಇಂದು ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ ಬಳಿಕ ಅಸ್ಥಿ ವಿಸರ್ಜನೆಗೆ ಶ್ರೀರಂಗಪಟ್ಟಣಕ್ಕೆ ತೆರಳಿದ್ದಾರೆ. ಈ ನಡುವೆ ಅಂಬರೀಶ್ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ತಮ್ಮ ಪುತ್ರ ಅಭಿಷೇಕ್ ಅಭಿನಯದ ಚಿತ್ರ ಇನ್ನೂ ಪೂರ್ಣವಾಗದಿದ್ದರೂ ಹಠ ಹಿಡಿದು ಮೊದಲರ್ಧವನ್ನು ವೀಕ್ಷಿಸಿದ್ದರಂತೆ. ಅಷ್ಟೇ ಅಲ್ಲ ಕಳೆದ…
ನವದೆಹಲಿ, ನವೆಂಬರ್ 18 : ಮೂಡೀಸ್ ರೇಟಿಂಗ್ ಕೇಂದ್ರಕ್ಕೆ ಹೊಸ ಚೈತನ್ಯ ತುಂಬಿದಂತಿದೆ. ನೋಟ್ ಬ್ಯಾನ್, ಜಿ.ಎಸ್.ಟಿ ಅನ್ನು ವಿಷಯವಾಗಿರಿಸಿಕೊಂಡು ಕೇಂದ್ರವನ್ನು ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡಿದೆ ಮೂಡೀಸ್ ರೇಟಿಂಗ್.
ಕೊತ್ತಂಬರಿ ಸೊಪ್ಪು….ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆ ಮನೆಯಲ್ಲೂ ಇದ್ದೇ ಇರುತ್ತೆ. ಅಗ್ಗವಾಗಿ ಸಿಗುವ ಈ ಸೊಪ್ಪು ನೀಡುವ ರುಚಿ ಮಾತ್ರ ಅಮೋಘ. ಹಚ್ಚ ಹಸಿರಾಗಿರುವ ಕೊತ್ತಂಬರಿ ಸೊಪ್ಪಿನ ಔಷಧೀಯ ಗುಣಗಳ ಬಗ್ಗೆ ಕೇಳಿದರೆ ನೀವು ಬೆರಗಾಗೋದು ಖಂಡಿತ. ಕೊತ್ತಂಬರಿ ಸೊಪ್ಪು ಚರ್ಮದ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನೂ ಹೊಂದಿದೆ. ಜೊತೆಗೆ ಚರ್ಮದ ಮೇಲಿನ ಶೀಲೀಂದ್ರ ಸೋಂಕುಗಳನ್ನೂ ಸಹ ಕೊತ್ತಂಬರಿ ಸೊಪ್ಪು ನಿವಾರಿಸುತ್ತದೆ. ಮೌತ್ ಅಲ್ಸರ್ ಅಥವಾ ಬಾಯಿಯಲ್ಲಾಗುವ ಉಷ್ಣದ ಗುಳ್ಳೆಗಳನ್ನೂ ಕೊತ್ತಂಬರಿ ಸೊಪ್ಪು…
ಒಬ್ಬರಂತೆ ಮತ್ತೊಬ್ಬರು ಇರುತ್ತಾರೆ ಎಂದು ಕೇಳಿರುತ್ತೇವೆ ಅಲ್ಲಲ್ಲಿ ನೋಡಿರುತ್ತೇವೆ.ಆದ್ರೆ ಅಂತಹ ವ್ಯೆಕ್ತಿಗಳನ್ನು ಕಂಡಾಗ ನಮಗೆ ರೋಮಾಂಚನವಾಗುತ್ತದೆ.ಅಂತಹದರಲ್ಲಿ ಕೆಲವು ಪ್ರಸಿದ್ದ ರಾಜಕಾರಣಿಗಳಂತೆ ಕಾಣುವ ಬೇರೆ ವ್ಯೆಕ್ತಿಗಳ ಕೆಲವು ಚಿತ್ರಗಳು ಇಲ್ಲಿವೆ.
ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಅರಿವಿದೆಯೇ…
ಕೇಂದ್ರದ ಪ್ರಸ್ತಾವನೆ ಜಾರಿಗೊಂಡರೆ ಇನ್ನು ಸರಕಾರಿ ನೌಕರರು 8 ಗಂಟೆ ಬದಲು 9 ಗಂಟೆ ಕೆಲಸ ಮಾಡಬೇಕಾಗುತ್ತದೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗಿನ ಕೆಲಸದ ಅವಧಿ 6 ಗಂಟೆವರೆಗೆ ವಿಸ್ತರಣೆಯಾಗಲಿದೆ! ಕೇಂದ್ರ ಸರಕಾರ ಪ್ರಕಟಿಸುವ ವೇತನ ನಿಯಮಾವಳಿಯ ಕರಡು ವರದಿಯಲ್ಲಿಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಆದರೆ, ಬಹು ಚರ್ಚೆಯಲ್ಲಿರುವ ಕನಿಷ್ಠ ವೇತನದ ವಿಷಯವನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲ. ಭವಿಷ್ಯದಲ್ಲಿ ವೇತನ ನಿಗದಿ ಮಾಡುವಾಗ ಮೂರು ಭೌಗೋಳಿಕ ವರ್ಗೀಕರಣವನ್ನು ಪರಿಗಣಿಸಬೇಕು ಎಂಬುದನ್ನು ಹೊರತು ಪಡಿಸಿದರೆ ಉಳಿದುದೆಲ್ಲವೂ ಹಳೆ ವಿಚಾರಗಳೆ. ಹಾಗಂತ,ಇದು…