ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್. ತಮಗೆಲ್ಲರಿಗೂ ತಿಳೆದಿರುವ ಹಾಗೆ ಪ್ರೀತಿ ಎಂಬುದು ಯಾವಾಗ, ಯಾರಿಗೆ, ಯಾವ ಜಾಗದಲ್ಲಿ, ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ.. ಯಾವ ರೂಪದಲ್ಲಿ ಯಾರ ಮೇಲಾದರೂ ಕೂಡ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ,ಸುಂದರಿ ಕುರೂಪಿ , ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ ಬೇಕಾದರೂ ಆಗಬಹುದು.. ಆದರೆ ಪ್ರೀತಿ ಮಾಡುವುದು ದೊಡ್ಡ ವಿಚಾರವಲ್ಲ. ಪ್ರೀತಿ ಮಾಡಿ ವಿವಾಹವಾಗಿ ಬದುಕಿ ಬಾಳಿ ತೋರಿಸಿದರೆ ನಮ್ಮ ಪ್ರೀತಿ ಮತ್ತು ಜೀವನಕ್ಕೆ ಒಂದು ಅರ್ಥ ಸಿಗುತ್ತದೆ.

ಅಂತೆಯೇ ಇಲ್ಲೊಬ್ಬ ಹಳ್ಳಿ ಹುಡುಗನ ಮೇಲೆ ವಿದೇಶಿ ಹುಡುಗಿಗೆ ಸಿಕ್ಕಾಪಟ್ಟೆ ಪ್ರೀತಿಯಾಗಿದೆ. ವಿಶೇಷವೇನೆಂದರೆ ಪ್ರಥಮ ಬಾರಿಗೆ ಅಂದರೆ ಒಂದೇ ನೋಟದಲ್ಲಿ ಆ ಹುಡುಗನ ಮೇಲೆ ಈಕೆಗೆ ಪ್ರೀತಿಯಾಗಿದೆ.ದ್ರೋಹ ಹುಡುಗಿ ವಿದೇಶದಲ್ಲಿ ಯಾವ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಕೊಂಡರೆ ಒಂದು ಕ್ಷಣ ನೀವು ಆಶ್ಚರ್ಯ ಪಡುತ್ತೀರಿ..
ಕುಗ್ರಾಮದಲ್ಲಿ ಹುಟ್ಟಿದ ನರೇಂದ್ರ ಅನ್ನುವ ಹುಡುಗ.. ಆದರೆ ಬಿಸಿಲಿಗೆ ಸರಸ್ವತಿ ಒಲಿದು ಬರಲಿಲ್ಲ. ಒಂದು ಅಕ್ಷರವೂ ತಲೆಗೆ ಹೋಗುತ್ತಿರಲಿಲ್ಲ. ಹಳ್ಳಿಯಲ್ಲಿ ಇದ್ದ ಕಾರಣ ಓದು ತಲೆಗೆ ಹತ್ತದ ಕಾರಣ ತಮಗಿದ್ದ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ಮತ್ತು ಬಿಡುವಿನ ಸಮಯದಲ್ಲಿ ಕೂಲಿ ಕೆಲಸವನ್ನ ಮಾಡುತ್ತಿದ್ದ.. ವ್ಯವಸಾಯ ನಂಬಿಕೊಂಡರೆ ಅಷ್ಟಾಗಿ ಹಣ ಗಳಿಸಲು ಸಾಧ್ಯವಿಲ್ಲ ಎಂದು ಕೆಲವರು ಅಂದುಕೊಂಡಿರುತ್ತಾರೆ. ಅಂತೆಯೇ ಈ ಹುಡುಗನ ಜೀವನದಲ್ಲೂ ಇದೇ ನಡೆದಿದೆ.

ಮಾಡುತ್ತಿದ್ದ ವ್ಯವಸಾಯ ಮತ್ತು ಕೂಲಿ ಕೆಲಸದಲ್ಲಿ ಆತನಿಗೆ ಬಿಡುಗಾಸು ಸಿಗುತ್ತಿದ್ದ ಕಾರಣ ಕರ್ನಾಟಕ ಮತ್ತು ಗೋವಾ ಗಡಿಯಲ್ಲಿ ಇರುವ ಒಂದು ಬಾರ್ ನಲ್ಲಿ ಕೆಲಸಕ್ಕೆ ಸೇರಿಕೊಂಡ. ಗೋವಾ ಗಡಿ ಎಂದರೆ ತಮಗೆಲ್ಲರಿಗೂ ತಿಳಿದಿರುತ್ತದೆ. ಆ ಬಾರ್ ನಲ್ಲಿ ಹೆಚ್ಚಾಗಿ ವಿದೇಶಿಗರೇ ಬರುತ್ತಿರುತ್ತಾರೆ.. ಇನ್ನು ನರೇಂದ್ರ ಕೆಲಸ ಮಾಡುತ್ತಿದ್ದ ಬಾರ್ ನಲ್ಲಿ ಒಮ್ಮೆ ಒಂದು ರಷ್ಯಾ ದೇಶದ ಸುಂದರ ಹುಡುಗಿ ಬರುತ್ತಾಳೆ. ನಂತರ ನರೇಂದ್ರ ನನ್ನು ಕರೆದು ಒಂದು ಬಿಯರ್ ತರುವಂತೆ ಹೇಳುತ್ತಾಳೆ.
ವಿದೇಶಿ ಹುಡುಗಿಯ ಮಾತಿನಂತೆ ಒಂದು ಬಿಯರನ್ನು ತೆಗೆದುಕೊಂಡು ಬಂದು, ಅವಳ ಮುಂದೆ ಇಟ್ಟು ಗ್ಲಾಸ್ ನಲ್ಲಿ ಬಿಯರ್ ಹಾಕುತ್ತಾನೆ .ಆ ಕ್ಷಣದಲ್ಲಿ ಆಕೆಗೆ ಏನಾಯಿತೋ ಏನೋ? ನರೇಂದ್ರನ ಕಣ್ಣಿನಲ್ಲಿ ಒಂದು ಆಕರ್ಷಣೆ ಕಂಡಿತ್ತಂತೆ. ನಂತರ ಏನಾಯಿತೋ ಗೊತ್ತಿಲ್ಲ, ಅ ಕ್ಷಣದಿಂದ ಆ ರಷ್ಯಾ ಹುಡುಗಿ ನರೇಂದ್ರನನ್ನು ಇಷ್ಟಪಡಲು ಆರಂಭಿಸಿದಳು,ಅಲ್ಲದೆ ನೇರವಾಗಿ ನರೇಂದ್ರನಿಗೆ ತನ್ನ ಪ್ರೇಮದ ವಿಚಾರವನ್ನುಹೇಳಿಬಿಡುತ್ತಾಳೆ .ವಿಶೇಷವೇನೆಂದರೆ ಆಕೆ ಪ್ರಪೋಸ್ ಮಾಡಿದ ತಕ್ಷಣವೇ ಇವಳು ಬೇರೆ ದೇಶದವಳು, ಬೇರೆ ಜಾತಿಯವಳು, ಬೇರೆ ಧರ್ಮದವಳು ಎಂದು ಲೆಕ್ಕಿಸದೇ ಆಕೆಯ ಪ್ರೀತಿಗೆ ಬೆಲೆ ಕೊಟ್ಟು ನರೇಂದ್ರ ಒಪ್ಪಿಕೊಂಡು ಬಿಡುತ್ತಾನೆ.

ನಂತರ ಅವರ ಪ್ರೀತಿ ಚಿಗುರೊಡೆದು ಎಲ್ಲರಿಗೂ ತಿಳಿಯುತ್ತದೇ. ಅಲ್ಲದೇ ಅಲ್ಲಿ ಇಲ್ಲಿ ಸುತ್ತಾಡುತ್ತಿರುತ್ತಾರೆ.ಹೀಗೆ ದಿನಗಳುರುಳಿದಂತೆ ನರೇಂದ್ರನಿಗೆ ಒಂದು ಅಚ್ಚರಿಯ ಸುದ್ದಿ ತಿಳಿದು ಬರುತ್ತದೆ.
ಹೌದು ರಷ್ಯಾದ ಆ ದೇಶದ ಹುಡುಗಿಯ ಹೆಸರು ಅನಸ್ತತ. ಮತ್ತು ಆಕೆ ರಷ್ಯಾದ ಪಾರ್ಲಿಮೆಂಟಿನಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾಳೆ ಎಂಬುದು ನರೇಂದ್ರನಿಗೆ ತಿಳಿಯುತ್ತದೆ ಮತ್ತು ಇದನ್ನು ಕೇಳಿದ ಅವನು ಆಶ್ಚರ್ಯನಾಗುತ್ತಾನೆ.
ಇನ್ನು ಕೆಲಸದ ಕಾರಣದಿಂದ ಆಕೆ ರಷ್ಯಾಗೆ ಹೋಗಿಬಿಡುತ್ತಾಳೆ. ಆಕೆಯನ್ನು ಬಿಟ್ಟಿರಲಾರದ ನರೇಂದ್ರ ಎರಡು ಭಾರಿ ರಷ್ಯಾ ದೇಶಕ್ಕೆ ಹೋಗಿ ಬರುತ್ತಾನೆ. ನಂತರ ಕೆಲಸವನ್ನು ಮುಗಿಸಿ ಮರಳಿ ಭಾರತಕ್ಕೆ ಬಂದ ಅನಸ್ತತ, ನರೇಂದ್ರನನ್ನು ಮದುವೆ ಮಾಡಿಕೊಳ್ಳುತ್ತಾಳೆ. ನಂತರ ಆಕೆಯನ್ನು ನರೇಂದ್ರ ತನ್ನ ಊರಿಗೆ ಕರೆದುಕೊಂಡು ಹೋಗುತ್ತಾನೆ. ಹಳ್ಳಿಯವರು ಈ ಜೋಡಿಯನ್ನು ನೋಡಿ ಸಿಕ್ಕಾಪಟ್ಟೆ ಶಾಕ್ ಆಗುತ್ತಾರೆ.

ಸದ್ಯಕ್ಕೆ ರಷ್ಯಾ ದೇಶದಲ್ಲಿ ನೆಲೆಯೂರಲು ಆಲೋಚನೆ ಮಾಡಿರುವ ನರೇಂದ್ರ ಮತ್ತು ಅನಸ್ತತ ,ವರ್ಷದಲ್ಲಿ ಮೂರು ತಿಂಗಳು ಭಾರತದಲ್ಲಿ ಇರಲು ನಿರ್ಧಾರ ಮಾಡಿದ್ದಾರಂತೆ. ಅನಸ್ತತ ದೊಡ್ಡ ಹುದ್ದೆಯಲ್ಲಿ ಇರುವುದರಿಂದ ಅವಳು ಹೇಳಿದಂತೆ ನರೇಂದ್ರ ಬದುಕಬೇಕು ಎಂದು ನೀವು ಅಂದುಕೊಂಡಿದ್ದರೆ ಅದು ಅಕ್ಷರಶ ತಪ್ಪು, ನರೇಂದ್ರನನ್ನು ತುಂಬಾ ಪ್ರೀತಿ ಮಾಡುವ ಈ ಹುಡುಗಿ ಆತನಿಗೆ ಗೌರವ ಕೊಡುವುದರ ಜೊತೆಗೆ ಆತನ ಮಾತನ್ನ ಚಾಚೂತಪ್ಪದೆ ಪಾಲಿಸುತ್ತಾಳೆ.ನೋಡಿದ್ರಲ್ಲ ಅದೆಷ್ಟು ಜನ ನಾವು ಸುಂದರವಾಗಿಲ್ಲ ನಾವು ಬಿಳುಪಾಗಿಲ್ಲ ಎಂದು ಕೊರಗುತ್ತಿರುತ್ತಾರೆ.. ಆದರೆ ನಿಮ್ಮ ನಡವಳಿಕೆಯನ್ನ ಗಾಡವಾಗಿ ಪ್ರೀತಿ ಮಾಡುವವರು ಒಬ್ಬರಾದವು ಇದ್ದೆ ಇರುತ್ತಾರೆ ಅನ್ನುವುದು ಈ ಪ್ರೇಮಿಗಳಿಂದ ತಿಳಿದು ಬಂದಿದೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
1000 ಮತ್ತು 500ರೂಗಳ ನೋಟ್ ಬ್ಯಾನ್ ಮಾಡಿ ಕಾಳಧನಿಕರ ಸೊಕ್ಕಡಿಗಿಸಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಈಗ ಮತ್ತೊಂದು ಕಾರ್ಯಕ್ಕೆ ಡೆಡ್ ಲೈನ್ ಕೊಟ್ಟಿದೆ.
ಬೆಂಗಳೂರು: ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯಕ್ಕೆ ತೆರೆ ಬಿದ್ದಿದೆ. ಟೀಂ ಇಂಡಿಯಾ ಗೆದ್ದ ಖುಷಿಯಲ್ಲಿ ದೇಶಾದ್ಯಂತ ಯುದ್ಧವನ್ನೇ ಗೆದ್ದ ಸಂಭ್ರಮ ಮನೆ ಮಾಡಿದೆ. ಈ ನಡುವೆ ಗೆಲುವು ತಂದು ಕೊಟ್ಟ ಟೀಂ ಇಂಡಿಯಾಗೆ ಕೋಟಿ ಕೋಟಿ ಭಾರತೀಯರು ಭೇಷ್, ಇಂಡಿಯಾ ಭೇಷ್ ಎಂದು ಬೆನ್ನು ತಟ್ಟಿದರು. ಹೌದು. ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಏಳನೇ ಬಾರಿಗೆ ಪಾಕ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ ಲಭಿಸಿದೆ. ಟೀಂ…
ಒಂದು ಬಾರಿ ಹಾವು ಕಚ್ಚಿದರೂ ಪರಂಧಾಮ ಸೇರುವವರ ಮಧ್ಯೆ ಇಲ್ಲೊಬ್ಬಾಕೆ ಯುವತಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಈಕೆಯನ್ನು ಕೊಲ್ಲಬೇಕು ಎಂದು ಅದೆಷ್ಟೋ ವಿಷಜಂತುಗಳು ಪ್ರಯತ್ನ ಪಟ್ಟರೂ ವಿಷಕಂಠನಂತೆ ಈಕೆ ವಿಷವೇರಿಸಿಕೊಂಡಳೇ ಹೊರತು ಸಾವನ್ನಪ್ಪಿಲ್ಲ.
ಕೆಲವರು ಸದಾಕಾಲ ಬಿಸಿಬಿಸಿ ನೀರನ್ನೇ ಕುಡಿಯಲು ಇಷ್ಟಪಡ್ತಾರೆ, ಇನ್ನು ಕೆಲವರಿಗೆ ನೀರು ಎಷ್ಟು ತಣ್ಣಗಿದ್ರೂ ಸಾಲದು. ಚರ್ಮದ ಆರೋಗ್ಯ, ಜೀರ್ಣಕ್ರಿಯೆ, ಮೈಗ್ರೇನ್ ನಿಂದ ಹಿಡಿದು ಎಲ್ಲದಕ್ಕೂ ನೀರು ಪರಿಹಾರ. ಬಿಸಿ ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದನ್ನು ವೈದ್ಯಕೀಯ ಲೋಕ ಕೂಡ ಒಪ್ಪಿಕೊಂಡಿದೆ. ಊಟದ ಜೊತೆಗೆ ಒಂದು ಲೋಟ ಬಿಸಿ ನೀರು ಸೇವನೆ ಒಳ್ಳೆಯದು ಅನ್ನೋದು ಆಯುರ್ವೇದ ವೈದ್ಯರ ಸಲಹೆ. ಚೀನಾ ಮತ್ತು ಜಪಾನ್ ನಲ್ಲಿ ಊಟದ ಜೊತೆ ಬಿಸಿಬಿಸಿ ಚಹಾ ಕುಡಿಯುವ ಪದ್ಧತಿಯಿದೆ. ಹಾಗಂತ ಅದೇನು…
ಜಾನುವಾರುಗಳ ದಾಹ ನೀಗಿಸಿದ ಜಲದಾತ-ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿದ ಅನ್ನದಾತ ಕಾಫಿನಾಡಿನ ವೀರಣ್ಣ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ವಿಟ್ಲಾಪುರದ ನಿವಾಸಿಯಾಗಿರುವ 63 ವರ್ಷದ ವೀರಣ್ಣ ಗೋಕಟ್ಟೆ ನಿರ್ಮಿಸಿದ್ದಾರೆ. 9ನೇ ತರಗತಿವರೆಗೆ ಮಾತ್ರ ಓದಿರುವ ವೀರಣ್ಣ, ಕೃಷಿಯೊಂದಿಗೆ ಮತ್ತು ಮೂಕ ಪ್ರಾಣಿಗಳ ದಿನನಿತ್ಯ ಸೇವೆ ಮಾಡುತ್ತಿದ್ದಾರೆ. ಅರೆಮಲೆನಾಡಾಗಿರುವ ಚಿಕ್ಕಮಗಳೂರಲ್ಲಿ ಬೇಸಿಗೆ ವೇಳೆ ಜಾನುವಾರುಗಳಿಗೆ ನೀರು ಸಿಗೋದು ಕಷ್ಟ ಆಗಿತ್ತು. ಕುಡಿಯಲು ನೀರು ಸಿಗದೇ ದನಕರು ಪರದಾಡೋದನ್ನು ನೋಡಲಾಗದ ವೀರಣ್ಣ, ಮೂರು ವರ್ಷದ ಹಿಂದೆ ಅರಣ್ಯ ಇಲಾಖೆ ಅನುಮತಿ ಪಡೆದು…
ಹೊಸ ಟ್ರಾಫಿಕ್ ನಿಯಮ ಜಾರಿಯಾಗುತ್ತಿದ್ದಂತೆ ಪರ ವಿರೋಧ ಕೇಳಿ ಬಂದಿದೆ. ಇದರಲ್ಲಿ ರಸ್ತೆ ರಿಪೇರಿ ಮಾಡಿ ಹೊಸ ನಿಯಮ ಜಾರಿ ಮಾಡಿ ಅನ್ನೋ ಒತ್ತಾಯ ಕೇಳಿ ಬಂದಿತ್ತು. ಇದೀಗ ಈ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ನೆರೆ ರಾಜ್ಯ ರಸ್ತೆ ರಿಪೇರಿ ಬಳಿಕ ಹೊಸ ನಿಯಮ ಜಾರಿ ಮಾಡಲು ಮುಂದಾಗಿದೆ. ಹೊಸ ಟ್ರಾಫಿಕ್ ರೂಲ್ಸ್ ಜಾರಿಯಾಗಿ 10 ದಿನಗಳಾಗಿವೆ. ಆಗಲೇ ಕೋಟಿ ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರು ದುಬಾರಿ ದಂಡ ಕಟ್ಟಿ ಸುಸ್ತಾಗಿದ್ದಾರೆ. ದುಬಾರಿ…