inspirational

ನೀರೊಳಗಿರುವ ಟೈಟಾನಿಕ್ ಹಡಗನ್ನು ಮೇಲೆತ್ತುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ ಏಕೆ? ರೋಚಕ ಸತ್ಯವನ್ನು ತಿಳಿಯಿರಿ.

734

ಟೈಟಾನಿಕ್ ಸಿನಿಮಾವನ್ನ ಯಾರು ತಾನೇ ನೋಡಿಲ್ಲ ಹೇಳಿ, ಭಾರಿ ಗಾತ್ರದ ಈ ಹಡಗು ಪ್ರಯಾಣಿಸಿದ ರೀತಿ ಹಾಗು ಹೇಗೆ ಮುಳುಗಿತು ಎನ್ನುವುದನ್ನು ವಿವರವಾಗಿ ಹೇಳಿಕೊಟ್ಟ ಈ ಚಿತ್ರ ಇಂದಿಗೂ ದಾಖಲೆಯನ್ನು ಬರೆದಿದೆ. ಹಾಲಿವುಡ್ ನ ಸಿನಿಮಾ ನಿರ್ಮಾಣದ ರೂಪುರೇಷೆಯನ್ನೇ ಬದಲಿಸಿದ್ದ ಈ ಚಿತ್ರ ಅಂದಿನ ಕಾಲದ ಬಿಗ್ ಬಜೆಟ್ ಮೂವಿ ಆಗಿತ್ತು, ಚಿತ್ರ ನೋಡಿದವರು ಕೂಡ ಒಂದು ಕ್ಷಣ ದಂಗಾಗಿದ್ದರು, ಅಷ್ಟು ಎಫೆಕ್ಟ್ ನೀಡಿ ಇಡೀ ಚಿತ್ರ ತಂಡ ಇದೊಂದು ಘಟನೆಯನ್ನು ಜನರ ಮುಂದೆ ಇಡಲು ಪ್ರಯತ್ನಿಸಿದ್ದರು. ಇನ್ನು ಈ ಸಿನೆಮಾ ಅಂದಿನ ಕಾಲದಲ್ಲೇ ಸುಮಾರ 20 ಕೋಟಿ USD ಯಲ್ಲಿ ನಿರ್ಮಾಣ ಮಾಡಲಾಗಿತ್ತು, ಜೇಮ್ಸ್ ಕ್ಯಾಮರೂನ್ ಇರ್ದೆಶಿಸಿದ ಈ ಚಿತ್ರ ಇಂದಿಗೂ ಒಂದು ದೊಡ್ಡ ಸಾಧನೆಯೇ ಸರಿ.

ಇನ್ನು ಈ ಟೈಟಾನಿಕ್ ಮುಳುಗಿ ಅದರ ಅವಶೇಷಗಳು ಈಗಲೂ ಸುಮುದ್ರದಾಳದಲ್ಲಿ ಇರುವುದು ನಮಗೆಲ್ಲ ತಿಳಿದೇ ಇದೆ. ಪ್ರಪಂಚದ ಅತಿ ದೊಡ್ಡ ಹಡಗು ಮುಳುಗಿ ಎಷ್ಟೊಂದು ಜನ ಸಾವನ್ನಪ್ಪಿದರೂ ಕೂಡ ಈ ಹಡಗನ್ನು ಮೇಲೆತ್ತುವ ಕೆಲಸವನ್ನು ಇಂದಿಗೂ ಕೂಡ ಮಾಡಿಲ್ಲ ಯಾಕೆ ಗೊತ್ತಾ. ಯಾಕೆ ಟೈಟಾನಿಕ್ ಇನ್ನು ಸಮುದ್ರದಲ್ಲೇ ಇದೆ ಇದನ್ನು ಎತ್ತುವ ಪ್ರಯತ್ನ ಮಾಡಿ ಯಾವುದಾದರೂ ಒಂದು ಮ್ಯೂಸಿಯಂ ಮಾಡಾಬಹುದಲ್ಲ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತದೆ, ಸ್ನೇಹಿತರೆ ಈ ವಿಶಾಲ ಹಡಗಿನ ಬಗ್ಗೆ ಇರುವ ರೋಚಕ ಸಂಗತಿ ತಿಳಿಯಿರಿ. 1912 ರಲ್ಲಿ ಮುಳುಗಿದ ಈ ಶಿಪ್ ಬಹಳ ವಿಶಾಲವಾದ ಗಾತ್ರ ಹೊಂದಿತ್ತು, ಈ ಶಿಪ್ ಮುಳುಗಿ ಈಗಾಗಲೇ ನೂರಕ್ಕೂ ಅಧಿಕ ವರ್ಷವಾಗಿದೆ.

ಪ್ರಸ್ತುತ ಈ ಹಡಗು ಈಗ 12,500 ಅಡಿಗಳಷ್ಟು ಆಳದಲ್ಲಿದೆ, ಅಷ್ಟೊಂದು ಆಳದಲ್ಲಿರುವ ಇದನ್ನು ಎತ್ತುವುದು ಕೂಡ ಅಸಾಧ್ಯದ ಕೆಲಸ ಏಕೆಂದರೆ ಅಷ್ಟೊಂದು ಆಳದಿಂದ ಮೇಲ್ಬರುವ ಸಮಯದಲ್ಲಿ ಇದು ಹಲವಾರು ಒತ್ತಡಗಳನ್ನು ಅನುಭವಿಸುತ್ತದೆ ಹೀಗಾಗಿ ಯಾವುದೇ ಕ್ಷಣದಲ್ಲೂ ಕೂಡ ಇದು ಕುಸಿದು ಮತ್ತೆ ನೀರಿನ ಆಳಕ್ಕೆ ಬೀಳಬಹುದು. ಟೈಟಾನಿಕ್ ಅನ್ನು ಮೇಲೆತ್ತಿದರೂ ಕೂಡ ನೀವು ಆ ಹಡಗನ್ನು ಎಲ್ಲಿ ಇಡುತ್ತೀರಿ ಎನ್ನುವುದೇ ಒಂದು ದೊಡ್ಡ ಪ್ರಶ್ನೆಯಾಗಿದೆ, 1912 ರಲ್ಲಿ ಟೈಟಾನಿಕ್ 882 ಅಡಿ ಉದ್ದವಿತ್ತು, ಇದು ಈಗಲೂ ಸಾಕಷ್ಟು ದೊಡ್ಡ ಗಾತ್ರವಾಗಿದೆ. ನೀರೊಳಗಿನ ಈ ಅವಶೇಷ ಸದ್ಯಕ್ಕೆ ಸಂಪೂರ್ಣ ಹದಗೆಟ್ಟಿದೆ ಮತ್ತು ಅದನ್ನು ತಂದು ಭೂಮಿ ಮೇಲೆ ಇಡುವುದು ಮೂರ್ಖತನ ಎನ್ನುವುದು ಹಲವರ ವಾದ ಇನ್ನು ಮತ್ತೊಂದು ಮುಖ್ಯ ಕಾರಣ ಎಂದರೆ ಟೈಟಾನಿಕ್ ಹಡಗಿನ ವಾರಸುದಾರ ಯಾರು ಎನ್ನುವ ಬಗ್ಗೆ ಹಲವಾರು ಗೊಂದಲಗಳಿವೆ, ಇದು ಯಾವ ಕಂಪನಿಯ ಸೊತ್ತು ಎನ್ನುವುದರ ಬಗ್ಗೆ ಕೆಲವು ಸಮಸ್ಯೆಗಳಿವೆ.

ಟೈಟಾನಿಕ್ ಮೇಲೆತ್ತದೆ ಇರಲು ಮತ್ತೊಂದು ಮುಖ್ಯ ಕಾರಣ ಎಂದರೆ ಹಣದ ದುಂದು ವೆಚ್ಚ, ಉದಾಹರಣೆಗೆ 50 ಅಡಿ ವಿಹಾರ ನೌಕೆಯನ್ನು ನೀವು ಮೇಲೆತ್ತಲು ಕೇವಲ ಏರ್‌ಬ್ಯಾಗ್‌ಗಳ ಬಳಕೆಗಾಗಿ ಗಂಟೆಗೆ $ 250 ಖರ್ಚಾಗುತ್ತದೆ. ಇನ್ನು ಇಷ್ಟೊಂದು ಭಾರಿ ಗಾತ್ರದ ಹಡಗನ್ನು ಈ ಬ್ಯಾಗ್ ಗಳ ಮೂಲಕ ಎತ್ತುವುದು ಎಂದರೆ ಅದು ದುಬಾರಿ ಮತ್ತು ಕೆಲಸಕ್ಕೆ ಬಾರದ್ದು ಎನ್ನಲಾಗಿದೆ. ಇನ್ನು ಈ ದುರಂತದಲ್ಲಿ ಮೃತಪಟ್ಟವರ ನೆನಪಿನ ಜೀವಂತ ಸಮಾಧಿ ಇದು ಎಂದು ಎಷ್ಟೋ ಜನರು ಇವತ್ತಿಗೂ ಕೂಡ ಅಂದುಕೊಂಡಿದ್ದಾರೆ, ಹಾಗಾಗಿ ಇದಕ್ಕೆ ಅಡಚಣೆ ಮಾಡಬಾರದು ಎನ್ನುವ ವಾದ ಕೂಡ ಇದೆ. ಈ ಎಲ್ಲಾ ಕಾರಣದಿಂದ ಟೈಟಾನಿಕ್ ಮೇಲೆತ್ತುವ ಗೋಜಿಗೆ ಯಾರು ಕೂಡ ಹೋಗಿಲ್ಲ ಮತ್ತು ಹೋದರು ಕೂಡ ಅದೊಂದು ವ್ಯರ್ಥ ಪ್ರಯತ್ನ ಎಂದು ಎಷ್ಟೋ ಕಂಪನಿಗಳು ಈಗಾಗಲೇ ನಂಬಿ ಬಿಟ್ಟಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    ಮಿಲನದಲ್ಲಿದ್ದ 20 ಅಡಿ ಉದ್ದದ ಹೆಬ್ಬಾವುಗಳನ್ನು ಫ್ರೈ ,ಬಿರಿಯಾನಿ ಮಾಡಿ,ಊರಿಗೆಲ್ಲಾ ಹಂಚಿ ತಿಂದು ಹಬ್ಬ ಮಾಡಿದ್ರು..!

    ಇದು ಕಾಡಿನಲ್ಲಿ ಮುರಿದು ಬಿದ್ದಿದ್ದ, ಮರದ ಟೊಂಗೆಯೊಂದರಲ್ಲಿದ್ದ,ಹೆಣ್ಣು ಪೈಥಾನ್ (ಹೆಬ್ಬಾವು)ನ್ನು, ಗ್ರಾಮಸ್ತರು ಹಿಡಿದು ಫ್ರೈ ಮಾಡಿ, ಊರಿಗೆಲ್ಲಾ ಹಂಚಿ ತಿಂದಿರುವ ಘಟನೆಯೊಂದು ನಡೆದಿದೆ.

  • ಆರೋಗ್ಯ, ಉಪಯುಕ್ತ ಮಾಹಿತಿ

    ಈ ಕಾರಣಗಳಿಗಾಗಿ ಪ್ರತೀದಿನ ತಪ್ಪದೇ ಬಾಳೆಹಣ್ಣು ತಿನ್ನಲೇಬೇಕು…

    ಊಟ ಆದ್ಮೇಲೆ ಬಾಳೆ ಹಣ್ಣು ತಿನ್ನುವುದು ಸಾಮಾನ್ಯವಾಗಿದೆ. ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ ಅಂತ ತಜ್ಞರು ಹೇಳಿದ್ದಾರೆ. ಬೊಜ್ಜು ನಿಯಂತ್ರಿಸುತ್ತದೆ :- ಅತೀವ ಒತ್ತಡದಲ್ಲಿ ಕೆಲಸಮಾಡುವವರು, ಬೊಜ್ಜಿನ ಸಮಸ್ಯೆಗೆ ಹೆಚ್ಚಾಗಿ ಒಳಗಾಗುವರು. ಸುಮಾರು , 5000 ಒಳರೋಗಿಗಳ ಆರೋಗ್ಯಸಮೀಕ್ಷೆಯಿಂದ ದ್ರುಢಪಟ್ಟಿದೆ….

  • ಆರೋಗ್ಯ, ಉಪಯುಕ್ತ ಮಾಹಿತಿ

    ಪದೇ ಪದೇ ನಿಮ್ಮ ಕಿವಿ ನೋವು ಕಾಡುತ್ತಿದೆಯೇ.? ಹಾಗಿದ್ದರೆ ಇಲ್ಲಿದೆ ಮನೆ ಮದ್ದು..!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ದೇಹಕ್ಕೆ ಬರುವ ನೋವುಗಳಲ್ಲಿ ಕಿವಿ ನೋವು ಕೂಡ ಒಂದು. ದೊಡ್ಡವರು ಮತ್ತು ಮಕ್ಕಳು ಎಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದಲ್ಲ ಒಂದು ದಿನ ಇದು ಕಾಡುತ್ತದೆ. ಕಿವಿನೋವು ಬರಲು ಹಲವು ಕಾರಣಗಳಿದ್ದು, ಇದರಲ್ಲಿ ದೀರ್ಘ ಮತ್ತು ಅಲ್ಪ ಕಾಲದ ಕಿವಿ ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿರುವುದು, ಕಿವಿಯಲ್ಲಿ ಗಾಯ, ಕಿವಿಯ ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್ ಸೋಂಕು ಕಾರಣವಾಗಿರುತ್ತದೆ. ಕಿವಿ ನೋವಿಗೆ…

  • ಸುದ್ದಿ

    ಗಂಡು ಹೆಣ್ಣು ಹಾರ ಬದ್ಲಾಯಿಸಿಕೊಂಡ ನಂತರ ವರನ ದುರ್ಮರಣ……?ಯಾಕೆ

    ವಧುವಿನೊಂದಿಗೆ ಹಾರ ಬದಲಾಯಿಸಿಕೊಂಡ ನಂತರ ಸಂಭ್ರಮಾಚರಣೆಯಲ್ಲಿ ಸ್ನೇಹಿತ ಗುಂಡು ಹಾರಿಸಿದ್ದ ಪರಿಣಾಮ ಬುಲೆಟ್ ವರನಿಗೆ ಬಿದ್ದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.ಸತ್ಯೇಂದ್ರ ಕುಮಾರ್ ಮೃತ ವರ. ಈ ಘಟನೆ ಭಾನುವಾರ ರಾತ್ರಿ ಶಹಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡು ಬಿದ್ದ ತಕ್ಷಣ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ವರನ ಸಹೋದರನಿಗೂ ಗಾಯಗಳಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಏನಿದು ಪ್ರಕರಣ? ಮೃತ ಕುಮಾರ್ ಮದುವೆ ಭಾನುವಾರ ನಿಗದಿಯಾಗಿತ್ತು….

  • ಸ್ಪೂರ್ತಿ

    ಜೀವನ ನಡೆಸಲು ವಿದ್ಯೆ ಒಂದೇ ಮಾತ್ರ ಮುಖ್ಯ ಎನ್ನುವವರು ಯುವಕನ ಈ ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ…

    ಇತ್ತೀಚಿನ ವೇಗದ ಜೀವನ ಶೈಲಿಯಲ್ಲಿ ಬಹಳಷ್ಟು ಜನರಿಗೆ ಮಾರುಕಟ್ಟೆಗಳಿಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಳ್ಳಲು ಸಮಯವಿಲ್ಲ, ಅಷ್ಟೆ ಯಾಕೆ ತಾವು ತಮ್ಮ ಕೆಲಸ ಮುಗಿಸಿ ಮನೆಗೆ ಬಂದರೆ ತಮ್ಮ ಹೊಟ್ಟೆಗೆ ಊಟ ಮಾಡಿಕೊಂಡು ತಿನ್ನಲು ಸಹ ಸಮಯವಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೆಂಬಂತೆ ಹಲವಾರು ಆನ್ಲೈನ್ ಶಾಪಿಂಗ್ (ಅಂತರ್ಜಲ ಮಾರುಕಟ್ಟೆ) ವೆಬಸೈಟ್ಗಳು ಪ್ರಾರಂಭವಾಗಿವೆ. ಇದರೊಂದಿಗೆ ಊಟವನ್ನು ಸಹ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸಹ ನಾವು ಕಾಣಬಹುದು. ಆದರೆ ಇವುಗಳೆಲ್ಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ…

  • ಜ್ಯೋತಿಷ್ಯ

    ಗುರುವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ..?ಶುಭವೋ ಅಶುಭವೋ ನೋಡಿ ತಿಳಿಯಿರಿ…

    ಗುರುವಾರ, 22/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಗತಿ. ಭೂಮಿ ಖರೀದಿ, ಮನೆ ನಿರ್ಮಾಣ ಕಾರ್ಯಗಳಿಗೆ ಒಳ್ಳೆಯ ಕಾಲ. ವಿನಾಕಾರಣ ಮನಸ್ತಾಪ ಬೇಡ. ದೂರ ಪ್ರಯಾಣದ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ನೀವು ಉತ್ತಮ. ವೃಷಭ:- ತೊಂದರೆಗಳು ಹಂತಹಂತವಾಗಿ ಪರಿಹಾರವಾಗಲಿವೆ.ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಆರೋಗ್ಯಭಾಗ್ಯ ಉತ್ತಮವಾಗಿದೆ. ಮಕ್ಕಳು ಹೆಚ್ಚು ಶ್ರಮವಹಿಸಬೇಕು. ವಿನಾಕಾರಣ ಮನೆಯಲ್ಲಿ ಮನಸ್ತಾಪ. ಮಿಥುನ:– ಉದ್ಯೋಗಿಗಳಿಗೆ ಭಡ್ತಿ.ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರದಿಂದ ಅಧಿಕ ಲಾಭ. ವಾದ-ವಿವಾದಗಳ ಬಗ್ಗೆ ಹೆಚ್ಚಿನ ಜಾಗ್ರತೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ…