ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ಸಂಸ್ಕೃತಿ ಎಂದರೆ ಜಗತ್ಪ್ರಸಿದ್ಧ ಸಂಸ್ಕೃತಿ ಎಂಬುದರಲ್ಲಿ ಸಂಶಯವಿಲ್ಲ. ಹಿಂದೂ ಧರ್ಮದ ಆಚರಣೆಗಳು ಯಾವ ರೀತಿ ಜಗತ್ತು ಒಪ್ಪಿಕೊಂಡಿವೆ ಎಂದರೆ ಮನುಷ್ಯರು ಮಾತ್ರವಲ್ಲದೆ ಇಡೀ ಪ್ರಕೃತಿಯೇ ಸನಾತನ ಧರ್ಮದ ಆಚರಣೆಗೆ ಒಳಪಡುತ್ತದೆ. ಕಣ ಕಣದಲ್ಲೂ ದೇವರನ್ನು ಕಾಣುವ ಹಿಂದೂ ಧರ್ಮ, ಕಲ್ಲು, ಮಣ್ಣು, ನೀರು, ಬೆಂಕಿ, ಪ್ರಾಣಿ ಪಕ್ಷಿ, ಗಿಡ ಮರ, ಹೀಗೆ ಎಲ್ಲಾ ಜೀವಿಗಳಲ್ಲೂ ದೇವರನ್ನು ಕಾಣುವ ಧರ್ಮ ಒಂದಿದ್ದರೆ ಅದು ಹಿಂದೂ ಧರ್ಮ ಮಾತ್ರ ಎಂಬುದು ಸ್ಪಷ್ಟ. ಭೂಮಿಯ ಯಾವುದೇ ಮೂಲೆಗೆ ಹೋದರೂ ಅಲ್ಲಿ ಹಿಂದೂ ಧರ್ಮದ ದೇವಾಲಯ, ಗುಡಿಗಳು ನಮಗೆ ಸಿಗುತ್ತವೆ.
ದೇವಾಲಯದ ಇತಿಹಾಸ ಮತ್ತು ವಿಶೇಷತೆ! :ನೆಲ್ಲಿತೀರ್ಥ ಹೆಸರಲ್ಲೇ ನಮಗೆ ಈ ದೇವಾಲಯದ ವಿಶೇಷತೆ ಏನೆಂಬುದನ್ನು ತಿಳಿಯಬಹುದು. ನೆಲ್ಲಿತೀರ್ಥ ದೇವಾಲಯ ಇರುವುದು ಮಂಗಳೂರು ನಗರದಿಂದ ಕೇವಲ 17 ಕಿಮೀ ದೂರದಲ್ಲಿ ಇರುವ ಈ ದೇವಾಲಯ ಸುಮಾರು 500 ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ. ಈ ದೇವಾಲಯದ ಪ್ರಮುಖ ದೇವರೆಂದರೆ ಶಿವ. ನೆಲ್ಲಿತೀರ್ಥ ಎಂಬ ಹೆಸರಿನಿಂದ ಈ ದೇವಾಲಯ ಜಗತ್ಪ್ರಸಿದ್ಧವಾದರೆ, ಸೋಮನಾಥ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇದೊಂದು ಗುಹಾ ದೇವಾಲಯ ಆಗಿರುವುದರಿಂದ ಇಲ್ಲಿನ ಪೂಜೆ ಬಹಳ ವಿಶೇಷ. ಗುಹೆಯ ಹೊಸ ಭಾಗದಲ್ಲಿ ದೇವಾಲಯವಿದ್ದು, ಶಿವನ ಪೂಜೆ ನಿತ್ಯ ನಡೆಯುತ್ತದೆ. ಅದೇ ರೀತಿ ಗುಹೆಯ ಒಳಗೂ ಕೂಡ ಒಂದು ದೊಡ್ಡ ಶಿವಲಿಂಗ ಸ್ಥಾಪನೆಯಾಗಿದ್ದು, ಭಕ್ತರು ಅಲ್ಲಿಗೂ ಹೋಗಿ ಪ್ರಾರ್ಥಿಸುವ ಅವಕಾಶ ಇದೆ.
ಈ ದೇವಾಲಯದ ಮತ್ತೊಂದು ವಿಶೇಷವೆಂದರೆ, ವರ್ಷದ ಆರು ತಿಂಗಳು ಗುಹೆ ತೆರೆದಿರುತ್ತಾರೆ ಮತ್ತು ಇನ್ನುಳಿದ ಆರು ತಿಂಗಳು ಗುಹೆಯ ಒಳಗೆ ಅರ್ಚಕರು ಅಥವಾ ಭಕ್ತರು ಯಾರಿಗೂ ಅವಕಾಶ ಇರುವುದಿಲ್ಲ. ಇಲ್ಲಿನ ನಂಬಿಕೆಯ ಪ್ರಕಾರ, ಮಳೆಗಾಲದ ಈ ತಿಂಗಳುಗಳಲ್ಲಿ ಗುಹೆಯ ಒಳಗೆ ನದಿ ನೀರಿನ ಹರಿವು ಇರುತ್ತದೆ ಎಂದು ಹೇಳಲಾಗುತ್ತದೆ ಮಾತ್ರವಲ್ಲದೆ ಈ ಆರು ತಿಂಗಳು ಈ ಗುಹೆಯಲ್ಲಿ ದೇವರು ವಾಸವಾಗಿರುತ್ತಾರೆ ಎಂಬುದು ನಂಬಿಕೆ. ಪುರಾಣದ ಉಲ್ಲೇಖದಂತೆ, ಈ ದೇವಾಲಯದಲ್ಲಿ ಜಾಬಾಲಿ ಋಷಿ ಮುನಿಗಳು ತಪಸ್ಸು ಮಾಡಿದ್ದರು ಮತ್ತು ಅವರು ಕೈಗೊಂಡ ತಪಸ್ಸಿಗೆ ಮೆಚ್ಚಿ ಸ್ವತಃ ಶಿವನೇ ಅನುಗ್ರಹ ನೀಡಿದ್ದ ಎಂಬುದು ಇತಿಹಾಸ. ಸದ್ಯ ಈ ಗುಹಾ ದೇವಾಲಯ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಒಂದು ಪುಣ್ಯ ಕ್ಷೇತ್ರವಾಗಿದೆ.
ಈ ದೇವಾಲಯ ಇರುವುದು ಒಂದು ಸಣ್ಣ ಹಳ್ಳಿಯಲ್ಲಿ, ಆದರೆ ಸದ್ಯ ಈ ಹಳ್ಳಿಯನ್ನೇ ನೆಲ್ಲಿತೀರ್ಥ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಪ್ರಕೃತಿಯ ಮಡಿಲಲ್ಲೇ ಇರುವ ಈ ದೇವಾಲಯ ನಿಜಕ್ಕೂ ಭಕ್ತರ ಮನದಲ್ಲಿ ಏಕಾಗ್ರತೆ ಮೂಡಿಸುವ ತಾಣವಾಗಿದೆ. ಈ ದೇವಾಲಯದ ಹೊರ ಭಾಗದಲ್ಲಿ “ನಾಗಪ್ಪ” ಎಂಬ ಕೆರೆ ಇದ್ದು, ಗುಹೆಯನ್ನು ಪ್ರವೇಶಿಸುವ ಮೊದಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಈ ಕೆರೆಯಲ್ಲಿ ಸ್ನಾನ ಮಾಡಿ ಹೋಗಬೇಕು ಎಂಬುದು ಸ್ಥಳ ಪುರಾಣ. ಗುಹೆಯ ಒಳಗೆ ಯಾವುದೇ ಲಿಂಗ ತಾರತಮ್ಯ ಇಲ್ಲದೆ ಮುಕ್ತ ಪ್ರವೇಶವಿದ್ದು, ಶುಚತ್ವ ಮತ್ತು ಮಡಿ ಕಾಪಾಡಬೇಕಾದ ಕರ್ತವ್ಯ ಭಕ್ತರದ್ದೇ ಆಗಿರುತ್ತದೆ. 5 ವರ್ಷದೊಳಗಿನ ಮಕ್ಕಳಿಗೆ ಗುಹೆಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಈ ಗುಹೆಯ ಮತ್ತೊಂದು ವಿಶೇಷವೆಂದರೆ ಗುಹೆಯ ಪ್ರವೇಶ ಭಾಗದಲ್ಲಿ ಭಕ್ತರು ನೇರವಾಗಿ ನಿಂತುಕೊಂಡು ಹೋಗಬಹುದು, ನಂತರದಲ್ಲಿ ಸ್ವಲ್ಪ ಬಗ್ಗಿ ನಡೆಯಬೇಕಾಗುತ್ತದೆ. ಅದಾದ ನಂತರ ಸಂಪೂರ್ಣ ನೆಲಕ್ಕೆ ಸಮನಾಗಿ ಮಲಗಿ ಮಣ್ಣಿನಲ್ಲಿ ತೆವಳಿಕೊಂಡು ಹೋಗಬೇಕಾಗುತ್ತದೆ. ಗುಹೆಯ ಒಳ ಭಾಗದಲ್ಲಿ ಕಲ್ಲಿನಿಂದ ನೀರು ಹರಿಯುತ್ತಿದ್ದು, ಇದು ನೆಲ್ಲಿ ಕಾಯಿಯ ಆಕಾರದಲ್ಲಿ ಕಾಣಿಸುತ್ತದೆ. ಇದೇ ಕಾರಣಕ್ಕೆ “ನೆಲ್ಲಿತೀರ್ಥ” ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ಗುಹೆ ದಿನೇ ದಿನೇ ಬೆಳೆಯುತ್ತಲಿದ್ದು ಸದ್ಯ ಇರುವ ದೇವಾಲಯದ ಒಂದು ದಿಕ್ಕಿನಿಂದ ಈ ಗುಹೆ ದೇವಾಲಯವನ್ನೇ ಆವರಿಸಿದೆ. ಕೆಲವರು ಹೇಳುವ ಪ್ರಕಾರ, ಈ ಗುಹೆಯ ಒಳಗೆ ಏಳು ಶಿವಲಿಂಗ ಇದೆ. ಶಿವ ಭಕ್ತರು ಪೂಜಿಸುವ ಲಿಂಗವನ್ನು ಈ ಗುಹೆ ಬೆಳೆಯುತ್ತಾ ಹೋದಂತೆ ತನ್ನೊಳಗೆ ಸೇರಿಸಿಕೊಂಡಿದೆ ಎಂದು ಹೇಳುತ್ತಾರೆ.ನಿಜಕ್ಕೂ ಇದೊಂದು ಅಚ್ಚರಿ ಮೂಡಿಸುವ ದೇವಾಲಯವೇ ಆಗಿದೆ. ಒಂದೊಂದು ಕಥೆ ಪುರಾಣಗಳು ಒಂದೊಂದು ರೀತಿಯಾಗಿ ಹೇಳುತ್ತವೆ. ಇಲ್ಲಿನ ಅರ್ಚಕರು ಈ ಕ್ಷೇತ್ರದ ಸಂಪೂರ್ಣ ಕಥೆ ಹೇಳುತ್ತಾರೆ ಮತ್ತು ಅದರ ಆಧಾರದಲ್ಲಿ ನಾವು ಇಲ್ಲಿನ ಇತಿಹಾಸ ತಿಳಿಯಬಹುದಾಗಿದೆ. ಅದೇನೇ ಇರಲಿ ಶಿವನ ಮಹಿಮೆ ಯಾವ ರೀತಿ ಇದೆ ಮತ್ತು ಹಿಂದೂ ಪುರಾಣಗಳು ಯಾವ ರೀತಿ ಇದೆ ಎಂಬುದಕ್ಕೆ ಈ ಒಂದು ಗುಹಾ ದೇವಾಲಯವೇ ಸಾಕ್ಷಿ..!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಿ ಪರೀಕ್ಷೆ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ 6 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ಬುಧವಾರ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಬ್ಯಾಡಮೂಡ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಚರ್ಚಿಸಿದ ಬಳಿಕ…
ಅನೇಕ ವರ್ಷಗಳ ಹಿಂದೆ, ವಿದ್ಯಾರ್ಥಿಯೋಬ್ಬನು ಕಾನೂನು ಶಿಕ್ಷಣವನ್ನು ಕಲಿಯಲು ಬಂದ. ಆದ್ರೆ ಅವನ ಹತ್ತಿರ ಶುಲ್ಕವನ್ನು ಪಾವತಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅವನು ಶಿಕ್ಷಕರ ಜೊತೆ ಒಪ್ಪಂದವೊಂದನ್ನು ಮಾದಿಲೊಂಡನು.ಅದೆಂದರೆ “ನಾನು ನ್ಯಾಯಾಲಯದಲ್ಲಿ ನನ್ನ ಮೊದಲ ಪ್ರಕರಣವನ್ನು ಗೆಲ್ಲುವ ದಿನ ನಿಮ್ಮ ಶುಲ್ಕವನ್ನು ನಾನು ಪಾವತಿಸುತ್ತೇನೆ” ಎಂದು ವಿಧ್ಯಾರ್ಥಿ ಮತ್ತು ಶಿಕ್ಷಕರು ಒಪ್ಪಂದ ಮಾಡಿಕೊಂಡರು.
ಡಿಜಿಟಲ್ ಯುಗದಲ್ಲಿ ಜನರು ಎಟಿಎಂ ಬಳಕೆ ಹೆಚ್ಚು ಮಾಡಿದ್ದಾರೆ. ಒಂದು ದಿನ ಎಟಿಎಂ ಕೆಲಸ ನಿಲ್ಲಿಸಿದ್ರೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎಟಿಎಂ ಬಳಕೆ ಮಾಡ್ತಿದ್ದಾರೆ. ಎಟಿಎಂ ಬಳಕೆ ವೇಳೆ ಕೆಲವೊಂದು ತಪ್ಪುಗಳನ್ನು ನಾವು ಮಾಡ್ತೇವೆ. ಈ ತಪ್ಪುಗಳೇ ಹ್ಯಾಕರ್ ಗೆ ಅನುಕೂಲ ಮಾಡಿಕೊಡುತ್ತದೆ. ಎಟಿಎಂ ಬಳಕೆ ವೇಳೆ ಕೆಲವೊಂದು ಸಂಗತಿಗಳನ್ನು ಅವಶ್ಯವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಎಟಿಎಂನಲ್ಲಿ ಕಾರ್ಡ್ ಹಾಕುವ ಸ್ಲಾಟ್ ಅನ್ನು ಮೊದಲು ಎಚ್ಚರಿಕೆಯಿಂದ ನೋಡಿ. ಕಾರ್ಡ್ ಸ್ಲಾಟ್ ಅನುಮಾನ ಹುಟ್ಟಿಸುವಂತಿದ್ದರೆ, ಸ್ಲಾಟ್ ತಿದ್ದುಪಡಿಯಾಗಿದ್ದರೆ, ತುಂಬಾ…
ಭಾರತದಲ್ಲಿ ಅತಿ ಹೆಚ್ಚು ಸಂಬಳ ಗಳಿಸಬಹುದಾದ ಪ್ರಮುಖ 1೦ ಉದ್ಯೋಗಗಳ ಪಟ್ಟಿ ಇಲ್ಲಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಧೀಶರಾಗ ಬಯಸುವವರಿಗೆ ಇದು ಮಾರ್ಗದರ್ಶಿ ಯಾಗ ಬಹುದು. ಅಮೂಲ್ಯವೆನಿಸುವ ಯಾವುದೇ ವಸ್ತು ಸುಲಭವಾಗಿ ದಕ್ಕುವುದಿಲ್ಲ. ಹಣವೂ ಅಷ್ಟೇ ! ಯಾರೇ ಆಗಲಿ, ಎಷ್ಟೇ ಹಣವಂತರಿರಲಿ, ಬಾಯಲ್ಲಿ ಬೆಳ್ಳಿ ಚಮಚವನ್ನಿರಿಸಿಕೊಂಡು ಹುಟ್ಟಿರುವುದಿಲ್ಲ.
ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ…
Cuba is a small country that is located in the Caribbean Sea that is a part of the North American continent. It is an island country that consists of numerous archipelagos.