ಸುದ್ದಿ

ವೆಹಿಕಲ್ ಬಿಟ್ಟು ಇನ್ಮುಂದೆ ವಾಕಿಂಗ್ ಸ್ಟಾರ್ಟ್ ಮಾಡಿ ಈ ಆ್ಯಪ್‌ಗಳೇ ನಿಮ್ಮಗೆ ದುಡ್ಡು ಕೊಡುತ್ತದೆ,.!

88

ನಾವು ಪ್ರತಿದಿನ ನಡೆಯುತ್ತೇವೆ. ಆದರೆ, ಹೀಗೆ ಸುಮ್ಮನೆ ನಡೆಯೋಕೆ ಯಾರಾದ್ರೂ ದುಡ್ಡು ಕೊಡ್ತಾರಾ? ನಾವು ಕೊಡ್ತೀವಿ ಅಂತಿದಾವೆ ಈ ವಾಕಿಂಗ್ ಆ್ಯಪ್‌ಗಳು. ಮತ್ತೇಕೆ ತಡ? ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ, ವಾಕ್ ಮಾಡೋಕೆ ಶುರು ಹಚ್ಕೊಳ್ಳಿ… ಹಣ ಮತ್ತು ಆರೋಗ್ಯ ಎರಡೂ ಗಳಿಸಿ. ವ್ಯಾಯಾಮ, ವಾಕಿಂಗ್, ರನ್ನಿಂಗ್- ಯಾವುದೇ ಆಗಲಿ, ನಮ್ಮ ಆರೋಗ್ಯಕ್ಕಾಗಿ, ಖುಷಿಗಾಗಿ ಮಾಡುತ್ತೇವೆ ಅಲ್ಲವೇ? ಆದರೆ, ಅದಕ್ಕೂ ಯಾರಾದರೂ ಹಣ ಕೊಡ್ತಾರೆ ಅಂದ್ರೆ? ಡಬಲ್ ಖುಷಿ ಆಗ್ದೇ ಇರುತ್ತಾ?

ಇದಕ್ಕಾಗಿ ನೀವು ಹೆಚ್ಚೇನು ಕಷ್ಟ ಪಡಬೇಕಾಗಿಲ್ಲ. ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡ್ರೆ ಸಾಕು. ಹಾಗಂತ ಹಣ ಮಾಡೋಕಂತಾನೇ ವಾಕ್ ಮಾಡ್ಬೇಡಿ, ಏಕೆಂದರೆ ಇದು ನಿಮ್ಮ ಪಾಕೆಟ್ ಮನಿಯಾಗುತ್ತದೆಯೇ ಹೊರತು ಸ್ಯಾಲರಿಯಲ್ಲ. ಈ ಆ್ಯಪ್‌ಗಳ ನಡುವೆ ಹಲವು ಒಂದೇ ತರ ಇದ್ದರೂ ರಿವಾರ್ಡ್ ಪಾಯಿಂಟ್ಸ್ ಕೊಡುವುದರಲ್ಲಿ, ಪೇಮೆಂಟ್ ವಿಧಾನಗಳಲ್ಲಿ ವ್ಯತ್ಯಾಸವಿದೆ. ಇಷ್ಟಕ್ಕೂ ನೀವು ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ಏನಾಗುತ್ತಂದ್ರೆ, ನಿಮಗೂ ವಾಕಿಂಗ್‌ಗೆ ಮೂಡ್ ಬರುತ್ತದೆ, ರಿವಾರ್ಡ್‌ನಿಂದಾಗಿ ನಿಮ್ಮ ಗೆಳೆಯರನ್ನೂ ಫಿಟ್ನೆಸ್ ಕಡೆ ಸೆಳೆಯುತ್ತೀರಿ ಅಲ್ಲದೆ, ಸುಮ್ಮನೇ ದಿನಾ ಮಾಡುವ ಕೆಲಸಕ್ಕೇ ಯಾರೋ ದುಡ್ಡು ಕೊಡ್ತಾರಂದ್ರೆ ಖುಷೀನೇ ತಾನೇ? ಅವೆಲ್ಲ ಏನು, ಯಾವ ಅಪ್ಲಿಕೇಶನ್‌ಗಳಿವು ಎಂದು ನೋಡಿ ಬರೋಣ.

1. ಸ್ವೆಟ್‌ಕಾಯ್ನ್ :ಇದು ವಾಕ್ ಮಾಡಲು ದುಡ್ಡು ನೀಡುವ ಆ್ಯಪ್‌ಗಳಲ್ಲಿ ಬಹಳ ಜನಪ್ರಿಯವಾದುದು. ಇದು ಫೋನ್‌ನಲ್ಲಿ ರನ್ ಮೋಡ್‌ನಲ್ಲಿದ್ದರೆ ಸಾಕು, ನೀವು ದಿನದಲ್ಲಿ ಎಷ್ಟು ಹೆಜ್ಜೆ ನಡೆದಿರು ಎಂಬುದನ್ನಿದು ಲೆಕ್ಕ ಹಾಕುತ್ತಿರುತ್ತದೆ. ಓಡಿದರೆ ಬಹಳ ಬೇಗ ಹೆಚ್ಚು ಸ್ವೆಟ್‌ಕಾಯಿನ್ಸ್ ಪಡೆಯಬಹುದು. ಈ ಕರೆನ್ಸಿಯನ್ನುರಿವಾರ್ಡ್ ಅಥವಾ ಕ್ಯಾಶ್ ಆಗಿ ಪಡೆದುಕೊಳ್ಳಬಹುದು. ಗಿಫ್ಟ್ ಕಾರ್ಡ್ ಆಯ್ಕೆ ಕಡಿಮೆ ಇದೆ. ಆದರೆ, 20,000 ಸ್ವೆಟ್‌ಕಾಯಿನ್ಸ್ ಒಟ್ಟು ಮಾಡಿದರೆ ಪೇಪಲ್ ಮೂಲಕ 1 ಸಾವಿರ ಡಾಲರ್ ಹಣವನ್ನು ಪಡೆಯಬಹುದು. ನೆನಪಿರಲಿ, ಇದು ನೀವು ಮನೆಯೊಳಗೆ ನಡೆದ ಹೆಜ್ಜೆಗೆಲ್ಲ ಲೆಕ್ಕ ಕೊಡೋಲ್ಲ. ಏನಿದ್ದರೂ ಹೊರಾಂಗಣದಲ್ಲೇ ನಡೆಯಬೇಕು. ಫೋನ್‌ನ ಜಿಪಿಎಸ್ ಬಳಸಿಕೊಳ್ಳುತ್ತದೆ. ಈ ಅಪ್ಲಿಕೇಶನ್ ಬಳಸಿ ನಿಮ್ಮ ದೈನಂದಿನ ಖರ್ಚಷ್ಟನ್ನಾದರೂ ವರ್ಷದಲ್ಲಿ ಪಡೆಯಬಹುದು.

2. ಲೈಫ್ ಕಾಯಿನ್ : ಇದು ಕೂಡಾ ಸ್ವೆಟ್‌ಕಾಯಿನ್‌ನಂತೆಯೇ ಕೆಲಸ ಮಾಡುತ್ತದೆ. ಇಲ್ಲಿ ಕೂಡಾ ಲೈಫ್‌ಕಾಯಿನ್ ಬದಲಾಗಿ ಕರೆನ್ಸಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ಇದನ್ನು ಗಿಫ್ಟ್ ಕಾರ್ಡ್, ಕ್ರೀಡಾ ವಸ್ತುಗಳು, ಆ್ಯಪಲ್ ಐಫೋನ್ ಎಕ್ಸ್, ಆ್ಯಪಲ್ ಏರ್‌ಪಾಡ್ಸ್, ಆ್ಯಪಲ್ ವಾಚ್, ಹಾಗೂ ಅಮೇಜಾನ್, ಪೇಪಲ್‌ನಲ್ಲಿ ಬ್ಯಾಲೆನ್ಸ್ ಆಗಿ ಬದಲಾಯಿಸಿಕೊಳ್ಳಬಹುದು. ಇದರ ಅಂಬಾಸಿಡರ್ ಪ್ರೋಗ್ರಾಂನ ಸದಸ್ಯರಾದರೆ ಮತ್ತಷ್ಟು ಹಣವನ್ನು ಗಳಿಸಬಹುದು. 

3. ಅಚೀವ್‌ಮೆಂಟ್ :ವಾಕಿಂಗ್, ಸ್ವಿಮ್ಮಿಂಗ್,. ಬೈಕಿಂಗ್ ಅಥವಾ ಸುಮ್ಮನೆ ಆಟವಾಡುವುದಕ್ಕೆ ಈ ಆ್ಯಪ್ ನಿಮಗೆ ಹಣ ನೀಡುತ್ತದೆ. ರಿಜಿಸ್ಟರ್ ಮಾಡಿದ್ದಕ್ಕೆ 6 ಪಾಯಿಂಟ್ಸ್, ಅಲ್ಲದೆ, ಪ್ರತಿದಿನ ನಿಮ್ಮ ಫುಡ್ ಇಂಟೇಕ್, ನಿದ್ರಾ ಸೈಕಲ್, ತೂಕಇಳಿಕೆ, ಸಾಧನೆಗಳನ್ನು ಸೋಷ್ಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದಕ್ಕೂ ಪಾಯಿಂಟ್ಸ್ ನೀಡುತ್ತದೆ. ಪ್ರತಿದಿನ ನಿಮ್ಮ ಚಟುವಟಿಕೆಗಳನ್ನು ಈ ಆ್ಯಪ್‌ನಲ್ಲಿ ಹಾಕುವುದಕ್ಕೆ ಗರಿಷ್ಠ 80 ಪಾಯಿಂಟ್ಸ್ ಹಾಗೂ ನಡಿಗೆಗೆ ಮತ್ತಷ್ಟು ಪಾಯಿಂಟ್ಸ್ ಸಿಗುತ್ತದೆ. 10000 ಪಾಯಿಂಟ್ಸ್‌ಗೆ 10 ಡಾಲರ್ ನೀಡಲಾಗುತ್ತದೆ. 

4. ಸ್ಟೆಪ್‌ಬೆಟ್ : ಇದೂ ಕೂಡಾ ವಾಕಿಂಗ್‌ಗೆ ಹಣ ನೀಡುವ ಪಾಪುಲರ್ ಆ್ಯಪ್. ನಿಮ್ಮ ವರ್ಕೌಟ್ ರೂಟಿನ್‌ನಿಂದ ಹಣ ಗಳಿಸಬೇಕೆಂದರೆ ಇದು ನಿಮಗೆ ಪರ್ಫೆಕ್ಟ್ ಆ್ಯಪ್. ಇದರಲ್ಲಿ ನೀವು ಗುರಿ ಸಾಧಿಸಿ ಹಣ ಪಡೆಯಲೂ ಅವಕಾಶವಿದೆ, ಗುರಿ ಸಾಧಿಸದೆ ಹೋದರೆ ಹಣ ಕಳೆದುಕೊಳ್ಳಲೂಬೇಕಾಗುತ್ತದೆ. ಪ್ರೊಫೈಲ್ ಸೆಟ್ ಮಾಡಿದ ಕೂಡಲೇ ಆ್ಯಪ್ ನಿಮ್ಮ ಫಿಟ್ನೆಸ್ ಲೆವೆಲ್ ಅಳೆಯುತ್ತದೆ. ಪ್ರತಿ ವಾರ ಹಣ ಗೆಲ್ಲಲು ಒಂದಿಷ್ಟು ಗುರಿಗಳನ್ನು ನೀಡುತ್ತದೆ. ಸುಮಾರು 40 ಡಾಲರ್ ಹಣ ನೀವಿಲ್ಲಿ ಬೆಟ್ ಕಟ್ಟಬೇಕು. ಗುರಿ ಸಾಧಿಸದೆ ಹೋದರೆ ಇಷ್ಟನ್ನು ಕಳೆದುಕೊಳ್ಳಬೇಕಾಗುತ್ತದಲ್ಲ ಎಂಬ ಭಯಕ್ಕೇ ವರ್ಕೌಟ್ ಮಾಡೇಮಾಡುತ್ತೀರಿ.

5.ಹೈಜಿ : ಹೈಜಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ಹತ್ತಿರದ ಮೆಡಿಕಲ್ ಸ್ಟೋರ್ ಅಥವಾ ದೊಡ್ಡ ಆಹಾರ ಮಳಿಗೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು. ಆ ಮೂಲಕ ನಿಮ್ಮ ತೂಕ, ಬಿಪಿ, ಪಲ್ಸ್, ಹೆಜ್ಜೆಗಳು, ಬಿಎಂಐ, ಜಿಮ್ ಚೆಕ್ ಇನ್, ಬಾಡಿ ಫ್ಯಾಟ್ ಎಲ್ಲವನ್ನೂ ಹೈಜಿಗೆ ಅಪ್ಡೇಟ್ ಮಾಡಿ ಟ್ರ್ಯಾಕ್ ಮಾಡಬಹುದು. ಇಲ್ಲಿ ಕೂಡಾ ನಡೆಯಲು, ಟಾಸ್ಕ್ ಕಂಪ್ಲೀಟ್ ಮಾಡಲುಪಾಯಿಂಟ್ಸ್ ಸಿಗುತ್ತವೆ. ಅವನ್ನು ಹಣವಾಗಿ ರಿಡೀಮ್ ಮಾಡಿಕೊಳ್ಳಬಹುದು. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮ್ಮ ಫೋನ್ ಒರ್ಜಿನಲ್ ಹೌದೋ? ಅಲ್ಲವೋ? ಎಂದು ತಿಳಿಯುವುದು ಹೇಗೆ ಗೊತ್ತಾ..?ಇದನ್ನು ಓದಿ …

    ಆನ್‌ಲೈನ್‌ ಮಾರುಕಟ್ಟೆ ಇಂದಿನ ದಿನದಲ್ಲಿ ಮೊಬೈಲ್ ಫೋನ್‌ಗಳ ಮಾರಾಟವನ್ನು ಹೆಚ್ಚು ಮಾಡುತ್ತಿದೆ. ವಿವಿಧ ಆಫರ್‌ಗಳು, ಹೊಸ ಫೋನ್ ಲಾಂಚ್ ಗಳು ಸೇರಿದಂತೆ ಎಕ್ಸ್‌ಕ್ಲೂಸಿವ್ ಸೇಲ್‌ಗಳು ಸೇರಿದಂತೆ ಅನೇಕ ಆಫರ್ ಗಳು ಲಭ್ಯವಿದೆ.

  • ಜ್ಯೋತಿಷ್ಯ

    ಆಂಜನೇಯ ಸ್ವಾಮಿಯ ಕೃಪೆಯಿಂದ ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(9 ಫೆಬ್ರವರಿ, 2019) ಯಾವುದೇ ದೀರ್ಘಕಾಲೀನ ಹೂಡಿಕೆಗಳನ್ನು ತಪ್ಪಿಸಿ ಮತ್ತು ನಿಮ್ಮ ಸ್ನೇಹಿತರ ಜೊತೆಕೆಲವು ಆಹ್ಲಾದಕರ ಕ್ಷಣಗಳನ್ನು…

  • ಕ್ರೀಡೆ

    ಈ ಭಾರಿಯ ಐಪಿಎಲ್ ವಿದೇಶದಲ್ಲೋ? ಅಥವಾ ಭಾರತದಲ್ಲೋ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

    ಈ ಬಾರಿಯ ಐಪಿಎಲ್ ಕ್ರಿಕೆಟ್ ಸರಣಿ ವಿದೇಶದಲ್ಲಿ ನಡೆಯುತ್ತದೆ ಎಂಬ ಸುದ್ಧಿ ಎಲ್ಲೆಡೆ ಹರಡಿತ್ತು. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಸಿಸಿಐ ಈ ಬಾರಿಯ ಐಪಿಎಲ್ ಎಲ್ಲಿ ನಡೆಯುತ್ತದೆ ಎಂಬುದನ್ನು ಸ್ಪಷ್ಟ ಪಡಿಸಿದೆ. ಭಾರತದಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ವಿದೇಶದಲ್ಲಿ ಐಪಿಎಲ್ ನಡೆಯಲಿದೆ ಎನ್ನಲಾಗಿತ್ತು. 2009 ದಿಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆ ಇದ್ದ ಕಾರಣ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆಸಲಾಗಿತ್ತು. ಈ ಬಾರಿಯೂ ಸಹ ವಿದೇಶದಲ್ಲಿ ಸರಣಿ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.ಆದರೆ ಈ…

  • corona

    ಕೋಲಾರ ಜಿಲ್ಲೆ ಯಲ್ಲಿ ವಾರದೊಳಗೆ 78ಸಾವಿರ ಮಕ್ಕಳಿಗೆ ಉಚಿತ ಲಸಿಕೆ

    ಜಿಲ್ಲೆಯಾದ್ಯಂತ 15ರಿಂದ18ವರ್ಷದ 78,357 ಮಕ್ಕಳಿದ್ದು ಒಂದು ವಾರದೊಳಗೆ ಉಚಿತ ಲಸಿಕೆ ಹಾಕುವ ಮೂಲಕ ಅಭಿಯಾನ ಪೂರ್ಣ ಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಗದೀಶ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಜ.3ರಿಂದ 15ರಿಂದ18 ವರ್ಷದೊಳಗಿನ ಮಕ್ಕಳಿಗೆ ಉಚಿತ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಮೊದಲ ದಿನ 2600ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು. ಕೋಲಾರ ಜಿಲ್ಲೆ ಯಲ್ಲಿ 15ರಿಂದ18 ವರ್ಷದ ಮಕ್ಕಳ ಸಂಖ್ಯೆ ಕೋಲಾರ:- 23,381 ಬಂಗಾರಪೇಟೆ:-10,662 ಕೆಜಿಎಫ್:- 11,231 ಮಾಲೂರು:- 11,743…

    Loading

  • nation, National, News Paper

    ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಭಾರತದ ಟಾಪ್ 5 ರಾಜ್ಯಗಳು ಇಲ್ಲಿವೆ.

    “ಓದುವುದಕ್ಕಿಂತ ದೊಡ್ಡ ಸಂತೋಷವಿಲ್ಲ, ಸ್ನೇಹಿತರಿಗಿಂತ ದೊಡ್ಡವರಲ್ಲ ..” ಎಂದು ಪ್ರಧಾನಿ ನರೇಂದ್ರ ಹೇಳಿದರು. 50 ವರ್ಷಗಳಿಗಿಂತ ಹೆಚ್ಚು ಕಾಲ ಅಂತರರಾಷ್ಟ್ರೀಯ ಸಾಕ್ಷರತಾ ದಿನವು ಎಲ್ಲರಿಗೂ ಸಾಕ್ಷರತೆಯ ಮಹತ್ವದ ಬಗ್ಗೆ ನೆನಪಿಸುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ವಿಶ್ವದ ಮಿಲಿಯನ್ ಜನರಲ್ಲಿ ಸುಮಾರು 733 ಮಿಲಿಯನ್ ಜನರಿಗೆ ಓದಲು ಮತ್ತು ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಯುನೆಸ್ಕೋ ಹೇಳಿದೆ. ನಾವು .. ಸಾಕ್ಷರತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಾಗ, ಸುಧಾರಣೆಯನ್ನು ತೋರಿಸಿದ ಭಾರತೀಯ ರಾಜ್ಯಗಳ ನೋಟ ಇಲ್ಲಿದೆ. ಜನಗಣತಿ…

  • ಸುದ್ದಿ

    ಕಿಚ್ಚನ ನಳಪಾಕ ಸೌಟು ಹಿಡಿದು ಮೊಟ್ಟೆ ದೋಸೆ ಮಾಡಿದ ಸುದೀಪ್…!

    ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಚಿತ್ರೀಕರಣದ ವೇಳೆ ಶೂಟಿಂಗ್ ಸೆಟ್ಟಿನಲ್ಲಿ ಕಿಚ್ಚ ಸುದೀಪ್ ರುಚಿ ರುಚಿ ಮೊಟ್ಟೆ ದೋಸೆ ಮಾಡಿದ್ದ ವಿಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಚಿತ್ರೀಕರಣದ ನೆನಪನ್ನು ಮೆಲುಕು ಹಾಕಿದ್ದಾರೆ. ಹೌದು, ಸೈರಾ ನರಸಿಂಹ ರೆಡ್ಡಿ ಚಿತ್ರ ಕನ್ನಡ ಸೇರಿದಂತೆ ಹಲವು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅ. 2 ಅಂದರೆ ನಾಳೆಯೇ ಚಿತ್ರ ತೆರೆಯಮೇಲೆ ಸಖತ್ ಸದ್ದು ಮಾಡಲಿದೆ. ಈ ನಡುವೆ ಸುದೀಪ್ ಚಿತ್ರೀಕರಣ ವೇಳೆ ಚಿತ್ರ ತಂಡದ ಜೊತೆ ಕಳೆದ ಸಿಹಿ ನೆನೆಪಿನ ವಿಡಿಯೋವನ್ನು…